Tag: iraq

  • ಬಾಗ್ದಾದ್ ವಿಮಾನ ನಿಲ್ದಾಣದ ಬಳಿ 3 ರಾಕೆಟ್‍ಗಳ ದಾಳಿ

    ಬಾಗ್ದಾದ್: ಬಾಗ್ದಾದ್‍ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಾಗೂ ಸೇನಾ ನೆಲೆಯ ಬಳಿ 3 ರಾಕೆಟ್‍ಗಳು ದಾಳಿ ನಡೆಸಿರುವುದಾಗಿ ಇರಾಕಿನ ಅಧಿಕಾರಿಗಳು ತಿಳಿಸಿದ್ದಾರೆ.

    ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ಶುಕ್ರವಾರ ನಡೆದ ರಾಕೆಟ್ ದಾಳಿಯಿಂದಾಗಿ ಕೆಲವು ವಾಣಿಜ್ಯ ವಿಮಾನಗಳಿಗೆ ಹಾನಿಯಾಗಿದೆ. ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.

    ಇರಾಕ್‍ನಲ್ಲಿ ಪತ್ರಿಕಾ ಮಾಹಿತಿಗೆ ಅಧಿಕಾರವಿಲ್ಲದಿರುವ ಕಾರಣ ಇಬ್ಬರು ಅನಾಮಧೇಯ ಭದ್ರತಾ ಅಧಿಕಾರಿಗಳು ಶುಕ್ರವಾರ ಮುಂಜಾನೆ ವಿಮಾನ ನಿಲ್ದಾಣ ಹಾಗೂ ಮಿಲಿಟರಿ ಪ್ರದೇಶಗಳ ನಡುವೆ ರಾಕೆಟ್‍ಗಳು ದಾಳಿ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪಬ್‌ಜಿ ವ್ಯಸನ – ತಾಯಿ, ಒಡಹುಟ್ಟಿದವರನ್ನೇ ಗುಂಡಿಕ್ಕಿ ಕೊಂದ ಬಾಲಕ!

    ವಿಮಾನ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಒಂದು ವಿಮಾನಕ್ಕೆ ರಾಕೆಟ್ ದಾಳಿಯಿಂದಾಗಿ ಹಾನಿಯಾಗಿದೆ. ಆದರೂ ಯಾವುದೇ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: 74 ವರ್ಷಗಳ ನಂತ್ರ ಸೋದರನ ಭೇಟಿಗೆ ಬಂದ ಭಾರತೀಯನಿಗೆ ಪಾಕಿಸ್ತಾನ ವೀಸಾ!

    ಇರಾನಿ ಜನರಲ್ ಖಾಸಿಮ್ ಸೊಲೈಮಾನಿ ಹಾಗೂ ಇರಾಕಿ ಮಿಲಿಟರಿ ಕಮಾಂಡರ್ ಅಬು ಮಹದಿ ಅವರ ಹತ್ಯೆಯ ಬಳಿಕ ವರ್ಷದ ಪ್ರಾರಂಭದಿಂದಲೂ ಇರಾಕ್‍ನಲ್ಲಿ ಅಮೆರಿಕದ ಉಪಸ್ಥಿತಿಯನ್ನು ರಾಕೆಟ್ ಹಾಗೂ ಡ್ರೋನ್ ದಾಳಿಗಳು ಗುರಿಯಾಗಿಸಿಕೊಂಡಿವೆ. ಇರಾಕ್‍ನಲ್ಲಿರುವ ಇರಾನ್ ಪರ ಶಿಯಾ ಬಣಗಳು ಸೊಲೈಮಾನಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿವೆ. ದೇಶದಿಂದ ಅಮೆರಿಕ ಪಡೆಗಳ ಸಂಪೂರ್ಣ ನಿರ್ಗಮನದವರೆಗೂ ಈ ರೀತಿಯ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಅಮೆರಿಕ ರಾಯಭಾರಿ ಕಚೇರಿ ಬಳಿ ರಾಕೆಟ್ ದಾಳಿ

    ಅಮೆರಿಕ ರಾಯಭಾರಿ ಕಚೇರಿ ಬಳಿ ರಾಕೆಟ್ ದಾಳಿ

    ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ಐದು ರಾಕೆಟ್ ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಇಬ್ಬರು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

    ದಾಳಿಯ ಹೊಣೆಯನ್ನು ಇದುವರೆಗೂ ಯಾರು ಹೊತ್ತುಕೊಂಡಿಲ್ಲ. ಓರ್ವ ಭದ್ರತಾ ಸಿಬ್ಬಂದಿ ಹೇಳುವಂತೆ ರಾಯಭಾರಿ ಕಚೇರಿಯ ಕಾಂಪೌಂಡ್ ಬಳಿ ಮೂರು ಕತ್ಯೂಶ ರಾಕೆಟ್ ನಿಂದ ದಾಳಿಯಾಗಿದೆ ಎಂದಿದ್ದಾರೆ. ಆದ್ರೆ ಮತ್ತೋರ್ವ ಸಿಬ್ಬಂದಿ ಐದು ರಾಕೆಟ್ ಎಂಬ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಪ್ರಾಣಾಪಾಯ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    ಇದಕ್ಕೂ ಮುನ್ನ ಜನವರಿ 20ರಂದು ಬಾಗ್ದಾದ್ ನ ಗ್ರೀನ್ ಝೋನ್ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆದಿತ್ತು. ಜನವರಿ ಮೂರರಂದು ಅಮೆರಿಕ ಡ್ರೋನ್ ದಾಳಿಯ ಮೂಲಕ ಇರಾನ್ ಸೇನೆಯ ಕಮಾಂಡರ್ ಜನರಲ್ ಖಾಸೀಂ ಸುಲೈಮಾನ್ ನನ್ನು ಹೊಡೆದುರಳಿಸಿತ್ತು. ಅಂದಿನಿಂದ ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ಏರ್ಪಟ್ಟಿದೆ.

  • ಇರಾನ್, ಅಮೆರಿಕ ಸಂಘರ್ಷ- ಬಾಗ್ದಾದ್ ಮೇಲೆ ಮತ್ತೆ 2 ಕ್ಷಿಪಣಿ ದಾಳಿ

    ಇರಾನ್, ಅಮೆರಿಕ ಸಂಘರ್ಷ- ಬಾಗ್ದಾದ್ ಮೇಲೆ ಮತ್ತೆ 2 ಕ್ಷಿಪಣಿ ದಾಳಿ

    ಬಾಗ್ದಾದ್: ಇರಾಕ್‍ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್‍ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಮತ್ತೆ ಇರಾಕ್ ಮೇಲೆ 2 ಕ್ಷಿಪಣಿ ದಾಳಿ ನಡೆದಿದೆ.

    ಇರಾಕ್ ರಾಜಧಾನಿ ಬಾಗ್ದಾದ್‍ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ 2 ಕ್ಷಿಪಣಿ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಇರಾನ್ ಕ್ಷಿಪಣಿ ದಾಳಿ ನಡೆದ ಕೇವಲ 24 ಗಂಟೆಗಳ ಒಳಗೆ ಮತ್ತೆರಡು ಕ್ಷಿಪಣಿಗಳ ದಾಳಿಯಿಂದ ಇರಾಕ್‍ನಲ್ಲಿ ಭಯಯ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ಇರಾನ್ ಮೇಲೆ‌ ಯುದ್ಧವಿಲ್ಲ, ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡಲ್ಲ: ಟ್ರಂಪ್

    ಬಾಗ್ದಾದ್‍ನ ಹಸಿರು ವಲಯವನ್ನು ಇರಾಕ್‍ನ ಸುರಕ್ಷಿತ ಸ್ಥಳವಾಗಿದ್ದು, ಇಲ್ಲಿ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ದೇಶಗಳ ರಾಯಭಾರ ಕಚೇರಿಗಳಿವೆ. ಹೀಗಾಗಿ ಇದೇ ಪ್ರದೇಶವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‍ಗೆ ಎಚ್ಚರಿಕೆ ನೀಡಿದ ಬೆನ್ನೆಲ್ಲೇ ಈ ದಾಳಿ ನಡೆದಿದ್ದು, ದಾಳಿಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ತೈಲ ಬೆಲೆ ಏರಿಕೆ ಎಚ್ಚರಿಕೆ!

    ಇರಾನ್ ಮತ್ತು ಅಮೆರಿಕದ ಮಧ್ಯೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಬುಧವಾರ ಟ್ರಂಪ್ ಪ್ರತಿಕ್ರಿಯೆ ನೀಡಿದ್ದರು. ಕಳೆದ ರಾತ್ರಿ ಇರಾಕ್ ನಲ್ಲಿರುವ ನಮ್ಮ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಯಾವುದೇ ಸೈನಿಕ ಹಾಗೂ ಅಧಿಕಾರಿಗಳಿಗೆ ತೊಂದರೆಯಾಗಿಲ್ಲ. ಯಾವುದೇ ಸಾವು, ನೋವುಗಳನ್ನು ಸಂಭವಿಸಿಲ್ಲ. ನಮ್ಮ ಎಲ್ಲಾ ಸೈನಿಕರು ಸುರಕ್ಷಿತರಾಗಿದ್ದಾರೆ. ಅಮೆರಿಕದ ಮಿಲಿಟರಿ ನೆಲೆಗಳಲ್ಲಿ ಕನಿಷ್ಠ ಹಾನಿಯಾಗಿದೆ ಎಂದು ತಿಳಿಸಿದ್ದರು.

    ಮೊದಲಿಗಿಂತಲೂ ಅಮೆರಿಕ ಸೈನ್ಯವೂ ಎಲ್ಲದಕ್ಕೂ ಸಿದ್ಧವಾಗಿದೆ. ಸುಧಾರಿತ ಕ್ಷಿಪಣಿಗಳನ್ನು ಹೊಂದಿದ್ದೇವೆ. ಆದರೆ ಅವುಗಳನ್ನು ನಾವು ಬಳಸಲು ಇಚ್ಛಿಸುವುದಿಲ್ಲ. ಯಾಕೆಂದರೆ ನಾವು ಶಾಂತಿಯನ್ನು ಬಯಸುತ್ತೇವೆ. ಇರಾನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಹಾಗೂ ವಿಶ್ವ ಶಾಂತಿಯನ್ನು ಕಾಪಾಡಲು ಇಚ್ಛಿಸುತ್ತೇವೆ ಎಂದು ಟ್ರಂಪ್ ಹೇಳಿದ್ದರು. ಇದನ್ನೂ ಓದಿ: ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ 

    ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಉಗ್ರರಿಗೆ ತರಬೇತಿ ನೀಡುತ್ತಿದ್ದ. ಅಷ್ಟೇ ಅಲ್ಲದೆ ಅಮೆರಿಕದ ಭದ್ರತೆಗೆ ಬೆದರಿಕೆ ಒಡ್ಡಿದ್ದ. ಇದರಿಂದಾಗಿ ಆತನನ್ನು ಹತ್ಯೆಗೈಯುವುದು ಅನಿವಾರ್ಯವಾಗಿತ್ತು ಎಂದು ಖಾಸಿಂ ಸೊಲೈಮನಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು.

    ಇಂಧನ ಹಾಗೂ ಅನಿಲ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ನಾವು ನಂಬರ್ 1. ಸ್ಥಾನದಲ್ಲಿದ್ದೇವೆ. ಹೀಗಾಗಿ ತೈಲ ವಿಚಾರದಲ್ಲಿ ಯಾವುದೇ ದೇಶದ ಮೇಲೆ ಅವಲಂಬಿಸಿಲ್ಲ ಎಂದಿದ್ದರು. ಇರಾನ್ ಉಗ್ರರ ತವರೂರು ಆಗಿದ್ದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಅವಧಿಯಲ್ಲಿ ಆಲ್ ಖೈದಾ ಉಗ್ರ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ. ಆರ್ಥಿಕವಾಗಿ ನಾವು ಪ್ರಬಲವಾಗಿದ್ದೇವೆ. ಸೇನೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದರು.

  • ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನಾ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ

    ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನಾ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ

    ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನೆ ಬೀಡು ಬಿಟ್ಟಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಇರಾನ್ ಎರಡು ರಾಕೆಟ್ ದಾಳಿ ನಡೆಸಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಅಮೆರಿಕದ ಸೈನಿಕರು ನೆಲೆಸಿರುವ ಬಾಗ್ದಾದ್‍ನ ಉತ್ತರದ ಬಾಲಾಡ್ ವಾಯುನೆಲೆಗೆ ಎರಡು ಕತ್ಯುಷಾ ರಾಕೆಟ್‍ಗಳು ಅಪ್ಪಳಿಸಿವೆ ಎಂದು ಭದ್ರತಾ ಮೂಲಗಳು ಹಾಗೂ ಇರಾಕಿ ಮಿಲಿಟರಿ ತಿಳಿಸಿದೆ. ಅಮೆರಿಕ ವಾಯುಪಡೆಯ ಶುಕ್ರವಾರ ನಡೆಸಿದ ದಾಳಿಗೆ ಇರಾನ್‍ನ ಸೇನಾ ಮುಖ್ಯಸ್ಥ ಜನರಲ್ ಖಾಸಿಂ ಸೊಲೇಮನಿ ಸಾವನ್ನಪ್ಪಿದ ಬಳಿಕ ಯುದ್ಧ ಭೀತಿ ಎದುರಾಗಿದೆ. ಇದೀಗ ಅಮೆರಿಕ ಸೇನೆ ತಂಗಿದ್ದ ಸ್ಥಳದಲ್ಲೇ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

    ಬಾಗ್ದಾದ್‍ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮತ್ತು ದೇಶಾದ್ಯಂತ ಬೀಡುಬಿಟ್ಟಿರುವ 5,200 ಅಮೆರಿಕದ ಸೈನಿಕರು ರಾಕೆಟ್ ದಾಳಿಯನ್ನು ಎದುರಿಸುತ್ತಿದ್ದಾರೆ. ಇರಾನ್‍ನ ಸೇನಾಧಿಕಾರಿಯನ್ನು ಬಾಗ್ದಾದ್‍ನಲ್ಲಿ ರಾಕೆಟ್ ದಾಳಿಯ ಮೂಲಕ ಕೊಂದ ಕೆಲವೇ ಗಂಟೆಗಳ ಬಳಿಕ ಅಮೆರಿಕ ಮತ್ತೆ ವಾಯುದಾಳಿ ನಡೆಸಿತ್ತು. ಶನಿವಾರ ಬೆಳಗ್ಗೆ ಇರಾಕ್‍ನ ಹಶೆಬ್ ಅಲ್ ಶಾಬಿ ಅರೆಸೇನಾ ಪಡೆಯ ವಾಹನಗಳ ಅಮೆರಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು ಆರು ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.

    ಅಮೆರಿಕ ಶುಕ್ರವಾರ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೈಮನಿಯನ್ನು ಹತ್ಯೆ ಮಾಡಲಾಗಿತ್ತು. ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ಏರ್‍ಪೋರ್ಟಿಗೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೈಮನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು.

    ಘಟನೆಯ ಕುರಿತು ಫ್ಲೋರಿಡಾದಲ್ಲಿ ಮಾತನಾಡಿದ್ದ ಟ್ರಂಪ್, ಇತ್ತೀಚೆಗೆ ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ದೇಶದ ಸೈನಿಕ ಸಾವನ್ನಪ್ಪಿದ್ದರು. ಅಲ್ಲದೇ ರಾಕೆಟ್ ದಾಳಿಯಲ್ಲಿ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬಾಗ್ದಾದ್‍ನ ನಮ್ಮ ವಿದೇಶಾಂಗ ಕಚೇರಿಯ ಮೇಲೆ ಸುಲೈಮನಿ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದರು.  ಜೊತೆಗೆ ಇರಾನ್ ಸೇನಾ ಮುಖ್ಯಸ್ಥ ಖಾಸೀಂ ಸುಲೈಮನಿಯನ್ನು ಅಮೆರಿಕ ಏರ್ ಸ್ಟ್ರೈಕ್ ನಡೆಸಿ ಕೊಂದಿರುವುದನ್ನು ಸಮರ್ಥಿಸಿಕೊಂಡಿದ್ದರು.

  • ದೆಹಲಿ ದಾಳಿಗೆ ನೆರವು ನೀಡಿದ್ದ ಸುಲೈಮನಿಯನ್ನು ಹತ್ಯೆ ಮಾಡಿದ್ದೇವೆ – ಡೊನಾಲ್ಡ್ ಟ್ರಂಪ್

    ದೆಹಲಿ ದಾಳಿಗೆ ನೆರವು ನೀಡಿದ್ದ ಸುಲೈಮನಿಯನ್ನು ಹತ್ಯೆ ಮಾಡಿದ್ದೇವೆ – ಡೊನಾಲ್ಡ್ ಟ್ರಂಪ್

    – ಲಂಡನ್, ದೆಹಲಿಯಲ್ಲಿ ಸುಲೈಮನಿಯಿಂದ ದಾಳಿ
    – ಯುದ್ಧ ನಿಲ್ಲಿಸಲು ಅಮೆರಿಕದಿಂದ ಏರ್ ಸ್ಟ್ರೈಕ್
    – ಕೃತ್ಯವನ್ನು ಸಮರ್ಥಿಸಿಕೊಂಡ ಡೊನಾಲ್ಡ್ ಟ್ರಂಪ್

    ಲಾಸ್ ಏಂಜಲೀಸ್: ಇರಾನ್ ಸೇನಾ ಮುಖ್ಯಸ್ಥ ಖಾಸೀಂ ಸುಲೈಮನಿಯನ್ನು ಅಮೆರಿಕ ಏರ್ ಸ್ಟ್ರೈಕ್ ನಡೆಸಿ ಕೊಂದಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದು, ಹತ್ಯೆಯಾದ ಖಾಸೀಂ ಸುಲೈಮನಿ, ಲಂಡನ್ ಸೇರಿದಂತೆ ಭಾರತದ ನವದೆಹಲಿಯಲ್ಲಿ ಭಯೋತ್ಪಾದನ ದಾಳಿ ನಡೆಸಲು ನೆರವು ನೀಡಿದ್ದ ಎಂದು ಹೇಳಿದ್ದಾರೆ.

    ಅಮೆರಿಕ ಶುಕ್ರವಾರ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೈಮನಿಯನ್ನು ಹತ್ಯೆ ಮಾಡಲಾಗಿತ್ತು. ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ಏರ್‍ಪೋರ್ಟಿಗೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೈಮನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು.

    ಘಟನೆಯ ಕುರಿತು ಫ್ಲೋರಿಡಾದಲ್ಲಿ ಮಾತನಾಡಿದ್ದ ಟ್ರಂಪ್, ಇತ್ತೀಚೆಗೆ ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ದೇಶದ ಸೈನಿಕ ಸಾವನ್ನಪ್ಪಿದ್ದರು. ಅಲ್ಲದೇ ರಾಕೆಟ್ ದಾಳಿಯಲ್ಲಿ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬಾಗ್ದಾದ್‍ನ ನಮ್ಮ ವಿದೇಶಾಂಗ ಕಚೇರಿಯ ಮೇಲೆ ಸುಲೈಮನಿ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ.

    ಸುಲೈಮನಿನ ಕ್ರೂರ ಮನಸ್ಸಿನ ಕಾರಣ ಅಮಾಯಕ ಜನರು ಸಾವನ್ನಪ್ಪಿದ್ದಾರೆ. ಲಂಡನ್ ಸೇರಿದಂತೆ ಭಾರತದ ದೆಹಲಿವರೆಗೂ ಭಯೋತ್ಪಾದಕ ದಾಳಿಗಳಿಗೆ ಸುಲೈಮನಿ ನೆರವು ನೀಡಿದ್ದಾನೆ. ಇಂದು ನಾವು ಸುಲೈಮನಿ ದೌರ್ಜನ್ಯಗಳಿಂದ ಉಂಟಾದ ಸಂತ್ರಸ್ತರನ್ನು ಗೌರವದಿಂದ ನೆನಪಿಸಿಕೊಳ್ಳಬೇಕಿದೆ. ಸುಲೈಮನಿ ಭಯೋತ್ಪಾದನೆಯ ಆಳ್ವಿಕೆ ಅಂತ್ಯವಾಗಿದೆ ಎಂದು ತಿಳಿಸಿದ್ದಾರೆ.

    ಕಳೆದ 20 ವರ್ಷದಗಳಿಂದ ಸುಲೇಮನಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಭಯೋತ್ಪಾದನ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಎಂದು ಟ್ರಂಪ್ ಆರೋಪ ಮಾಡಿದ್ದು, ಅಮೆರಿಕ ಸೇನಾಪಡೆ ಇಂತಹ ದಾಳಿ ಬಹಳ ಹಿಂದೆಯೇ ನಡೆಸಬೇಕಿತ್ತು. ಇದರಿಂದ ಸಾವಿರಾರು ಜನರ ಜೀವವನ್ನು ರಕ್ಷಿಸಬಹುದಿತ್ತು. ಇತ್ತೀಚೆಗಷ್ಟೇ ಸುಲೇಮನಿ ಇರಾನ್ ನಲ್ಲಿ ಕ್ರೂರ ಪ್ರತಿಭಟನೆಗಳನ್ನು ನಡೆಸಲು ಕಾರಣನಾಗಿದ್ದ. ಈ ಪ್ರತಿಭಟನೆಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯನ್ನು ಕ್ರೂರವಾಗಿ ಹಿಂಸಿಸಿ ಕೊಲೆ ಮಾಡಿದ್ದಾನೆ. ಆದರೆ ಸುಲೇಮನಿ ಹತ್ಯೆಯೂ ಯುದ್ಧಕ್ಕೆ ದಾರಿ ಮಾಡಿಕೊಡುವುದಿಲ್ಲ. ಯುದ್ಧವನ್ನು ನಿಲ್ಲಿಸಲು ನಾವು ದಾಳಿಯನ್ನು ನಡೆಸಿದ್ದೇವೆ. ಇರಾನಿನ ಜನರ ಬಗ್ಗೆ ನನಗೆ ಅಪಾರ ಗೌರವಿದ್ದು, ಅವರು ವೈಭವದ ಪರಂಪರೆ ಹಾಗೂ ಸಾಮಥ್ರ್ಯವನ್ನು ಹೊಂದಿದ್ದಾರೆ. ಅಮೆರಿಕ ಅಲ್ಲಿನ ಆಡಳಿತ ಬದಲಾವಣೆಯನ್ನು ಬಯಸುವುದಿಲ್ಲ ಎಂದು ದಾಳಿಗೆ ತಮ್ಮ ಸಮರ್ಥನೆಗಳನ್ನು ಟ್ರಂಪ್ ಬಲವಾಗಿ ಮುಂದಿಟ್ಟಿದ್ದಾರೆ.

    ಅಮೆರಿಕದ ಈ ದಾಳಿಯಿಂದ ವಿಶ್ವದಲ್ಲಿ 3ನೇ ಮಹಾಸಮರದ ಕಾರ್ಮೋಡ ಆವರಿಸಿದೆ. ಅಮೆರಿಕದ ದಾಳಿಯನ್ನು ಇರಾನ್ ಉಗ್ರವಾಗಿ ಖಂಡಿಸಿ, ನಿಮ್ಮ ದುಸ್ಸಾಹಸಗಳಿಗೆ ತಕ್ಕ ಬೆಲೆ ತೆರಲಿದ್ದೀರಿ. ಕಟು ಪ್ರತೀಕಾರ ನಿಮಗೆ ಕಾದಿದೆ ಎಂದು ಎಚ್ಚರಿಕೆಯನ್ನು ರವಾನಿಸಿದೆ. ಇದರ ಬೆನ್ನಲ್ಲೇ ಇರಾನ್, ಇರಾಕ್‍ನಲ್ಲಿ ಪ್ರಕ್ಷುಬ್ಧ ವಾತಾವರಣದಿಂದ ಅಮೆರಿಕ ತನ್ನ ಪ್ರಜೆಗಳಿಗೆ ವಾಪಸ್ ಬರುವಂತೆ ಸೂಚನೆ ನೀಡಿದೆ. ಇರಾಕ್‍ನಲ್ಲಿರುವ ತನ್ನ ಸೇನಾಪಡೆಗಳಿಗೂ ಎಚ್ಚರಿಕೆ ವಹಿಸಲು ಸೂಚಿಸಿದೆ.

    ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ವಿಶ್ವ ರಾಷ್ಟ್ರಗಳ ಮೇಲೆ ಬೀರುವ ಸಾಧ್ಯತೆ ಹೆಚ್ಚಿದೆ. ಇರಾನ್-ಇರಾಕ್‍ನಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಭಾರತದಲ್ಲೂ ತೈಲ ದರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಇದರ ಪರಿಣಾಮ ಎಂಬಾಂತೆ ನಿನ್ನೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಒಂದೇ ದಿನ 760 ರೂ. ಏರಿಕೆಯಾಗಿತ್ತು. ಪರಿಣಾಮ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 41,130 ರೂ. ಗಾಡಿ ದಾಟ್ಟಿತ್ತು.

    2012ರ ದೆಹಲಿಯಲ್ಲಿ ದಾಳಿ:
    ನವದೆಹಲಿಯ ಪ್ರಧಾನಮಂತ್ರಿಗಳ ನಿವಾಸ ಬಳಿ ಕಾರಿನಲ್ಲಿ ಸ್ಫೋಟ ನಡೆಸಲಾಗಿತ್ತು. ಈ ಕಾರು ಇಸ್ರೇಲ್ ರಾಯಭಾರಿ ಕಚೇರಿಗೆ ಸೇರಿದಾಗಿತ್ತು. ಘಟನೆಯಲ್ಲಿ ಇಸ್ರೇಲ್‍ನ ರಾಯಭಾರಿ ಕಚೇರಿಯ ಅಧಿಕಾರಿಯ ಪತ್ನಿ ಸೇರಿದಂತೆ ಇಬ್ಬರು ಭಾರತೀಯರು ಗಾಯಗೊಂಡಿದ್ದರು. ಇಸ್ರೇಲ್ ಅಧಿಕಾರಿಗಳಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಮೇಟಾರು ಸೈಕಲ್‍ನಲ್ಲಿ ಸ್ಫೋಟಕ ಇರಿಸಿ ದಾಳಿ ನಡೆಸಲಾಗಿತ್ತು. ಈ ವೇಳೆ ಭಾರತದ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದ ಅಮೆರಿಕ ದಾಳಿಯ ಹಿಂದೆ ಇರಾನ್ ಪಾತ್ರವಿರುವ ಬಗ್ಗೆ ತಿಳಿಸಿತ್ತು. ದೆಹಲಿಯ ದಾಳಿಯ ದಿನವೇ ಜಾರ್ಜಿಯಾದಲ್ಲಿ ನಡೆದ ದಾಳಿಯಲ್ಲಿ ಇಸ್ರೇಲ್ ಅಧಿಕಾರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಮರುದಿನ ಥೈಲ್ಯಾಂಡ್‍ನಲ್ಲಿ ನಡೆದ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದರು. ಈ ವೇಳೆ ಪೊಲೀಸರು ಇಬ್ಬರು ಇರಾನ್ ಪ್ರಜೆಗಳನ್ನು ಬಂಧಿಸಿತ್ತು. 2013ರಲ್ಲಿ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿತ್ತು.

    ಇಸ್ರೇಲ್ ಉಪ ಪ್ರಧಾನಿ ಅಂದು ಸುಲೈಮನಿ ದೆಹಲಿಯ ದಾಳಿ ಹಿಂದಿನ ಪ್ರಮುಖ ವ್ಯಕ್ತಿ ಎಂದು ತಿಳಿಸಿದ್ದರು. ಅಲ್ಲದೇ ಥೈಲ್ಯಾಂಡ್, ಜಾರ್ಜಿಯಾ ಹಾಗೂ ದೆಹಲಿಯಲ್ಲಿ ನಡೆದ ಸ್ಫೋಟಕಗಳು ಒಂದೇ ಮಾದರಿಯಾದ್ದು ಎಂದು ತನಿಖೆಯ ವೇಳೆ ಬಯಲಾಗಿತ್ತು. ಅಂದು ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿದ್ದ ಯದ್ಧದ ಹಿನ್ನೆಲೆಯಲ್ಲಿ ಸುಲೈಮನ್ ದೆಹಲಿಯಲ್ಲಿ ದಾಳಿ ನಡೆಸುವ ಸಂಚು ರೂಪಿಸಿದ್ದ. ಇರಾನ್‍ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕುಡ್ಸ್ ಫೋರ್ಸ್ ಮೇಲೆ ಸುಲೈಮನ್ ನಿಯಂತ್ರಣ ಹೊಂದಿದ್ದ. ಈ ಪಡೆ ಇರಾನ್ ಸೇರಿದಂತೆ ವಿಶ್ವದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದನ ದಾಳಿ ನಡೆಸುವುದು ಸೇರಿದಂತೆ, ಇತರೆ ಸಂಘಟನೆಗಳಿಗೆ ನೆರವು ನೀಡುತ್ತಿತ್ತು. ಇಸ್ರೇಲ್ ಈ ಸಂಘಟನೆಯ ಪ್ರಮುಖ ಟಾರ್ಗೆಟ್ ಆಗಿತ್ತು.

  • ಅತ್ಯಾಚಾರ ಸಂತ್ರಸ್ತೆಯ ಖಡಕ್ ಪ್ರಶ್ನೆಗೆ ತಲೆ ತಗ್ಗಿಸಿ ನಿಂತ ಐಸಿಸ್ ರೇಪಿಸ್ಟ್

    ಅತ್ಯಾಚಾರ ಸಂತ್ರಸ್ತೆಯ ಖಡಕ್ ಪ್ರಶ್ನೆಗೆ ತಲೆ ತಗ್ಗಿಸಿ ನಿಂತ ಐಸಿಸ್ ರೇಪಿಸ್ಟ್

    ಬಾಗ್ದಾದ್: ಐಸಿಸ್ ಒತ್ತೆಯಾಳಾಗಿದ್ದ ಸಂತ್ರಸ್ತೆ ಮಾಧ್ಯಮವೊಂದರ ಸಂದರ್ಶನದಲ್ಲಿ ಐಸಿಸ್ ರೇಪಿಸ್ಟ್ ಹುಮಾನ್‍ಗೆ ಖಡಕ್ ಪ್ರಶ್ನೆ ಮಾಡಿದ್ದು, ಆಕೆಯ ಪ್ರಶ್ನೆಗೆ ಉತ್ತರಿಸಲಾಗದೆ ಉಗ್ರ ತಲೆತಗ್ಗಿಸಿ ನಿಂತಿದ್ದ ಘಟನೆ ಇರಾಕ್‍ನಲ್ಲಿ ನಡೆದಿದೆ.

    ನಿಮಗೇನಾದರೂ ಭಾವೆನಗಳು ಇದೆಯಾ? ನೈತಿಕತೆ ಅನ್ನೋದು ಇದೆಯಾ ಎಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಪ್ರಶ್ನಿಸಿದಾಗ ಉತ್ತರಿಸಲಾಗದೇ ಐಸಿಸ್ ರೇಪಿಸ್ಟ್ ಹುಮಾನ್ ತಲೆ ತಗ್ಗಿಸಿ ನಿಂತಿದ್ದನು. ಇರಾಕ್‍ನಲ್ಲಿ ಐಸಿಸ್ ಒತ್ತೆಯಾಳಾಗಿದ್ದ ಸಂತ್ರಸ್ತೆ ಅಶ್ವಾಖ್ ಹಾಜೀ ಹಮೀದ್ ತನ್ನನ್ನು ಅತ್ಯಾಚಾರಗೈದ ಹುಮಾನ್ ಮುಂದೆ ನಿಂತು ಖಡಕ್ ಪ್ರಶ್ನೆ ಮಾಡಿದ್ದಾಳೆ.

    ತಾನು 14 ವಯಸ್ಸಿನಲ್ಲಿದ್ದಾಗ ನನ್ನ ಮೇಲೆ ನೀನು ಅತ್ಯಾಚಾರಗೈದೆ. ಆಗ ನನ್ನಲ್ಲಿ ಏನು ಕಂಡು ನೀನು ವಿಕೃತಿ ಮೆರೆದೆ. ನನ್ನ ಜೀವನವನ್ನೇ ನೀನು ಹಾಳು ಮಾಡಿದೆ. ನನ್ನ ಕನಸ್ಸನ್ನು ದರೋಡೆಮಾಡಿ ಕತ್ತಲ ಕೂಪಕ್ಕೆ ತಳ್ಳಿದೆ. ನಿನಗೇನಾದ್ರೂ ಭಾವನೆಗಳು ಇದೆಯಾ? ನೈತಿಕತೆ ಅನ್ನೋದು ಇದೆಯಾ ಎಂದು ಪ್ರಶ್ನಿಸಿ ಕಣ್ಣಿರಿಟ್ಟಿದ್ದಾಳೆ.

    ಅಶ್ವಾಖ್ 14 ವರ್ಷದವಳಾಗಿದ್ದಾಗ ಆಕೆಯನ್ನು ಐಸಿಸ್ ಉಗ್ರರು ಕುಟುಂಬದಿಂದ ದೂರಮಾಡಿ 100 ಡಾಲರ್‍ಗೆ ಆಕೆಯನ್ನು ಮಾರಾಟ ಮಾಡಿ ಒತ್ತೆಯಾಳಾಗಿ ಇರಿಸಿದ್ದರು. ಕೆಲ ವರ್ಷದ ಬಳಿಕ 2015ರಲ್ಲಿ ಅಶ್ವಾಖ್ ತಪ್ಪಿಸಿಕೊಂಡು ಜರ್ಮನಿಗೆ ಹೋಗಿದ್ದಳು. ಇದೀಗ ಮತ್ತೆ ಇರಾಕ್‍ಗೆ ವಾಪಸ್ ಆಗಿದ್ದು, ಸಂದರ್ಶವೊಂದರಲ್ಲಿ ಐಸಿಸ್ ರೇಪಿಸ್ಟ್ ಹುಮಾನ್ ಮುಂದೆ ನಿಂತು ಖಡಕ್ ಪ್ರಶ್ನೆ ಕೇಳಿದ್ದಾಳೆ. ಸಂತ್ರಸ್ತೆಯ ಪ್ರಶ್ನೆಗಳಿಗೆ ಐಸಿಸ್ ಉಗ್ರ ತತ್ತರಿಸಿದ್ದು, ತಲೆ ತಗ್ಗಿಸಿ ನಿಂತಿದ್ದನು. ಕೊನೆಗೆ ಅಶ್ವಾಖ್ ಭಾವುಕಳಾಗಿ ಪ್ರಜ್ಞೆ ತಪ್ಪಿ ಬೀಳುವ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದೆ.

    ಇರಾಕಿ ರಾಷ್ಟ್ರೀಯ ಗುಪ್ತಚರ ಸೇವೆ ಈ ಸಂದರ್ಶವನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ಸಂತ್ರಸ್ತೆ ಅಬು ಹುಮಾನ್ ಮುಂದೆ ನಿಂತು, ನನಗೆ ಹೀಗೇಕೆ ಮಾಡಿದಿರಿ? ನಾನು ಯಾಜಿದಿ (ಕುರ್ದಿಷ್) ಅನ್ನೋ ಕಾರಣಕ್ಕಾ? ನಾನು 14 ವರ್ಷದವಳಿದ್ದಾಗ ರೇಪ್ ಮಾಡಿದ್ರಿ, ನಿಮಗೇನಾದರೂ ಭಾವನೆಗಳಿವೆಯಾ? ನಿಮಗೇನಾದರೂ ನೈತಿಕತೆ ಇದೆಯಾ? ನನಗಾಗ 14 ವರ್ಷ ನಿಮ್ಮ ಮಗಳು, ಮಗ, ತಂಗಿಯಷ್ಟು ವಯಸ್ಸು. ನೀವು ನನ್ನ ಬಾಳನ್ನು ಹಾಳು ಮಾಡಿದಿರಿ. ನನ್ನ ಕನಸುಗಳನ್ನ ದರೋಡೆ ಮಾಡಿದ್ದೀರಿ. ನಿಮ್ಮಿಂದ ನಾನು ಹಿಂದೊಮ್ಮೆ ಐಸಿಸ್ ತೆಕ್ಕೆಯಲ್ಲಿದ್ದೆ. ನಾನು ಪಟ್ಟ ನೋವು, ಹಿಂಸೆ, ಒಂಟಿತನ ಈಗ ನೀನು ಜೈಲಿನಲ್ಲಿ ಇರುವಾಗ ಅರ್ಥ ಆಗ್ತಿದೆ ಅಲ್ವಾ? ನಿಮಗೆ ಭಾವನೆಗಳು ಇದ್ದಿದ್ದರೆ ನನ್ನನ್ನು ರೇಪ್ ಮಾಡುತ್ತಿರಲಿಲ್ಲ. ಆಗ ನನ್ನ ವಯಸ್ಸು ನಿನ್ನ ಮಗನಷ್ಟು, ಮಗಳಷ್ಟು ಇತ್ತು ಎಂದು ಪ್ರಶ್ನೆಯ ಮೇಲೆ ಪ್ರಶ್ನೆ ಮಾಡಿದ್ದಾಳೆ. ಆಕೆಯ ಪ್ರಶ್ನೆಗಳ ಸುರಿಮಳೆಗೆ ಉಗ್ರ ತತ್ತರಿಸಿ ಒಂದೇ ಒಂದು ಮಾತು ಆಡದೆ ತಲೆ ತಗ್ಗಿಸಿ ನಿಂತಿದ್ದನು. ಕೊನೆಗೆ ತಾನು ಪಟ್ಟ ಕಷ್ಟಗಳನ್ನು ಹೇಳುತ್ತಾ ಕಣ್ಣೀರಿಡುತ್ತಾ ಪ್ರಜ್ಞೆ ತಪ್ಪಿ ಬಿದ್ದಿರುವುದು ವಿಡಿಯೋದಲ್ಲಿ ರೆರ್ಕಾಡ್ ಆಗಿದೆ.

    ಐಸಿಸ್ ಉಗ್ರರು ನಮ್ಮನ್ನು ಎಳೆದುಕೊಂಡು ಹೋಗಿದ್ದಾಗ ನಮ್ಮನ್ನು ಜೀವಂತ ಬಿಡುತ್ತಾರೋ, ಹತ್ಯೆಗೈಯ್ಯುತ್ತಾರೋ ಎನ್ನುವ ಬಗ್ಗೆ ನಮಗೆ ಅರಿವಿರಲಿಲ್ಲ. ನಾನೊಬ್ಬಳೆ ಅಲ್ಲ, ನನ್ನ ಜೊತೆ ಇನ್ನೂ 300ರಿಂದ 400 ಮಂದಿ 9 ವರ್ಷಕ್ಕೆ ಮೇಲ್ಪಟ್ಟ ಮಕ್ಕಳು, ಯುವತಿಯರು ಹಾಗೂ ಮಹಿಳೆಯರನ್ನು ಉಗ್ರರು ಎಳೆದುಕೊಂಡು ಹೋಗಿದ್ದರು. ಮೊದಲು ಎಲ್ಲರನ್ನು ಒಟ್ಟಿಗೆ ಇಟ್ಟಿದ್ದರು. ಆದರೆ ಬಳಿಕ ಎಲ್ಲರನ್ನೂ ಹಣಕ್ಕೆ ಮಾರಾಟ ಮಾಡಿ, ಒತ್ತೆಯಾಳುಗಳಾಗಿ ಇರಿಸಿದ್ದರು ಎಂದು ಹೇಳಿದ್ದಾಳೆ.

    ನಾನು ಅಬು ಹುಮಾನ್ ಕೈಯಲ್ಲಿ ಸಿಕ್ಕಿಬಿದ್ದೆ. ನನ್ನನ್ನು ಎಳೆದುಕೊಂಡು ಒತ್ತೆಯಾಳಾಗಿ ಉಗ್ರ ಮಧ್ಯೆ ಇರಿಸಿಕೊಂಡನು, ಪ್ರತಿದಿನ ಹುಮಾನ್ ಹಾಗೂ ಹಲವರು ನನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದರು. ಪ್ರತಿದಿನ ಹೊಡೆದು ಬಡಿದು ಹಿಂಸೆ ನೀಡುತ್ತಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    https://www.youtube.com/watch?v=4NPq4Gse5t0

  • ಉಗ್ರರಿಂದ ಹತ್ಯೆಗೊಳಗಾದ 38 ಭಾರತೀಯರ ಶವಗಳು ಹಸ್ತಾಂತರ

    ಉಗ್ರರಿಂದ ಹತ್ಯೆಗೊಳಗಾದ 38 ಭಾರತೀಯರ ಶವಗಳು ಹಸ್ತಾಂತರ

    ನವದೆಹಲಿ: ಯುದ್ಧಪೀಡಿತ ಇರಾಕ್‍ನ ಮೊಸೆಲ್‍ನಲ್ಲಿ ಐಎಸ್ ಉಗ್ರರಿಂದ ಹತ್ಯೆಗೊಳಗಾಗಿದ್ದ 38 ಭಾರತೀಯರ ಶವಗಳನ್ನು ತರಲು ಕೇಂದ್ರ ಸಚಿವ ವಿಕೆ ಸಿಂಗ್ ಇರಾಕ್‍ಗೆ ತೆರಳಿದ್ದಾರೆ. ಡಿಎನ್‍ಎ ಆಧಾರದಲ್ಲಿ ಶವ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು ಭಾರತಕ್ಕೆ ಇಂದು ತಡರಾತ್ರಿ ಪಾರ್ಥಿವ ಶರೀರಗಳು ಆಗಮಿಸುವ ಸಾಧ್ಯತೆ ಇದೆ.

    ಮೃತದೇಹಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಇರಾಕ್ ಗೆ ತೆರಳಿದ್ದಾರೆ. ಈ ಸಂಬಂಧ ಮೇಲ್ವಿಚಾರಣೆ ವಿ.ಕೆ.ಸಿಂಗ್ ನೇತೃತ್ವದಲ್ಲಿ ನಡೆಯಲಿದೆ. ಭಾರತಕ್ಕೆ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಅಂತಾ ಹೇಳಲಾಗಿದೆ. ಇತ್ತೀಚೆಗೆ ಕುಟುಂಬಸ್ಥರನ್ನು ಭೇಟಿಯಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೃತದೇಹಗಳನ್ನು ಒಂದು ವಾರದಲ್ಲಿ ತರಲಾಗುವುದು ಅಂತಾ ಭರವಸೆಯನ್ನು ನೀಡಿದ್ದರು. ಇದನ್ನೂ ಓದಿ: ಇರಾಕ್‍ನಲ್ಲಿ ಐಸಿಸ್‍ನಿಂದ ಹತ್ಯೆಯಾಗಿದ್ದ 39 ಭಾರತೀಯರ ಮೃತ ದೇಹ ಪತ್ತೆ ಮಾಡಿದ್ದು ಹೇಗೆ? 

    ಕಳೆದ ವರ್ಷ ಜುಲೈನಲ್ಲಿ ಸದನಕ್ಕೆ ಮಾಹಿತಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೆ ಒಳಗಾಗಿರುವ 39 ಮಂದಿಯ ಖಚಿತ ಮಾಹಿತಿ ದೊರೆಯದ ಹೊರತು ಅವರು ಮೃತ ಪಟ್ಟಿದ್ದಾರೆ ಎಂದು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಮಾರ್ಚ್ ನಲ್ಲಿ ಖಚಿತ ಮಾಹಿತಿಯ ಮೇಲೆ 39 ಮಂದಿಯ ಹತ್ಯೆಯಾಗಿರುವುದನ್ನು ದೃಢಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಟ್ವೀಟನ್ನು ರಿಟ್ವೀಟ್ ಮಾಡಿದ್ರು ಸುಷ್ಮಾ ಸ್ವರಾಜ್!

    ಹತ್ಯೆಯಾದ ಭಾರತೀಯ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ತರಲಾಗುವುದು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇರಾಕ್ ಗೆ ತೆರಳಿ ಅಲ್ಲಿಂದ ಮೃತರ ಅವಶೇಷಗಳನ್ನು ಅಮೃತಸರ, ಪಾಟ್ನಾ ಹಾಗೂ ಕೋಲ್ಕತ್ತಾಗಳಿಗೆ ತರಲಿದ್ದಾರೆ ಎಂದು ಮಾಹಿತಿ ನೀಡಿದರು.

     

  • ಇರಾಕ್‍ನಲ್ಲಿ ಕಿಡ್ನಾಪ್ ಆಗಿದ್ದ 39 ಭಾರತೀಯರು ಐಸಿಸ್‍ನಿಂದ ಹತ್ಯೆ

    ಇರಾಕ್‍ನಲ್ಲಿ ಕಿಡ್ನಾಪ್ ಆಗಿದ್ದ 39 ಭಾರತೀಯರು ಐಸಿಸ್‍ನಿಂದ ಹತ್ಯೆ

    ನವದೆಹಲಿ: 2014 ರಲ್ಲಿ ಇರಾಕ್ ನಿಂದ ಐಸಿಸ್ ಅಪಹರಣ ಮಾಡಿದ್ದ 39 ಮಂದಿ ಭಾರತೀಯರನ್ನು ಐಸಿಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಪಹಣಕ್ಕೀಡಾಗಿದ್ದ 39 ಭಾರತೀಯರನ್ನು ಐಸಿಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮೊಸುಲ್ ನಿಂದ ಅಪಹರಣ ಮಾಡಿದವರ ಹತ್ಯೆ ಕುರಿತು ಖಚಿತ ಮಾಹಿತಿ ಪಡಿಸಿಕೊಳ್ಳಲು ಆಳವಾದ ರೇಡಾರ್ ಬಳಕೆ ಮಾಡಲಾಗಿದ್ದು, ಹತ್ಯೆಯಾದ ಭಾರತೀಯ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ ಎಲ್ಲರ ಮೃತದೇಹಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿತ್ತು. ಮೃತ ದೇಹಗಳನ್ನು ಗುರುತಿಸಲು ಡಿಎನ್‍ಎ ಪರೀಕ್ಷೆಗಾಗಿ ಬಾಗ್ದಾದ್ ಗೆ ಕಳುಹಿಸಲಾಗಿದೆ. ಸೋಮವಾರ ನಮಗೆ ಲಭಿಸಿದ ಮಾಹಿತಿ ಪ್ರಕಾರ 39 ಮೃತದೇಹಗಳಲ್ಲಿ 38 ಮಂದಿಯ ಡಿಎನ್‍ಎ ಸ್ಯಾಪಲ್ ಮ್ಯಾಚ್ ಆಗಿದೆ. 39ನೇ ಮೃತ ದೇಹದ ಡಿಎನ್‍ಎ ಶೇ. 70 ರಷ್ಟು ಮ್ಯಾಚ್ ಆಗಿದೆ ಎಂದರು.

    ಕಳೆದ ವರ್ಷ ಜುಲೈನಲ್ಲಿ ಸದನಕ್ಕೆ ಮಾಹಿತಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೆ ಒಳಗಾಗಿರುವ 39 ಮಂದಿಯ ಖಚಿತ ಮಾಹಿತಿ ದೊರೆಯದ ಹೊರತು ಅವರು ಮೃತ ಪಟ್ಟಿದ್ದಾರೆ ಎಂದು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಇಂದು ಖಚಿತ ಮಾಹಿತಿಯ ಮೇಲೆ 39 ಮಂದಿಯ ಹತ್ಯೆಯಾಗಿರುವುದನ್ನು ದೃಢಪಡಿಸಿದರು.

    ಹತ್ಯೆಯಾದ ಭಾರತೀಯ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ತರಲಾಗುವುದು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇರಾಕ್ ಗೆ ತೆರಳಿ ಅಲ್ಲಿಂದ ಮೃತರ ಅವಶೇಷಗಳನ್ನು ಅಮೃತಸರ, ಪಾಟ್ನಾ ಹಾಗೂ ಕೋಲ್ಕತ್ತಾಗಳಿಗೆ ತರಲಿದ್ದಾರೆ ಎಂದು ಮಾಹಿತಿ ನೀಡಿದರು.

    ಇದೇ ವೇಳೆ ಐಸಿಸ್ ಉಗ್ರರಿಂದ ತಪ್ಪಿಸಿಕೊಂಡು ಬಂದ ಹರ್ಜಿತ್ ಮಾಸಿಹ್ ಕಥೆ ಸುಳ್ಳು. ಐಸಿಸಿ ಉಗ್ರರು ಭಾರತೀಯರ ಜೊತೆಗೆ 51 ಬಾಂಗ್ಲಾದೇಶಿ ಕಾರ್ಮಿಕರನ್ನು ಒತ್ತೆಯಾಗಿರಿಸಿಕೊಂಡಿದ್ದರು ಈ ವೇಳೆ ಬಾಂಗ್ಲಾದೇಶ ಒತ್ತೆಯಾಳುಗಳ ಜೊತೆ ಅಲ್ಲಿಂದ ವಾಪಸ್ ಹರ್ಜಿತ್ ಮಾಸಿಹ್ ಬಂದಿದ್ದರು ಎಂದು ಸುಷ್ಮಾ ಸ್ವರಾಜ್ ಸದನಕ್ಕೆ ಸ್ಪಷ್ಟಪಡಿಸಿದರು.

    ಅಪಹರಣ ಮಾಡಿ ಹತ್ಯೆ ಮಾಡಲಾಗಿರುವ 39 ಮಂದಿ ಭಾರತೀಯರು ಟರ್ಕಿ ಮೂಲಕ ನಿರ್ಮಾಣ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. 2014ರಲ್ಲಿ ಐಸಿಸ್ ನಿಂದ ಅಪಹರಣಕ್ಕೆ ಒಳಗಾದ ಸಂದರ್ಭದಲ್ಲಿ ಮೊಸೂಲ್ ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು. ಅಪಹರಣಕ್ಕೆ ಒಳಗಾದ ಭಾರತೀಯರ ಪೈಕಿ ಪಂಜಾಬ್ ರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

    ಮೃತ ದೇಹ ಪತ್ತೆ ಮಾಡಿದ್ದು ಹೇಗೆ?
    ಮೃತ ದೇಹಗಳ ಪತ್ತೆಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದ್ದು, ಅಳವಾದ ರಡಾರ್ ಬಳಕೆ ಮಾಡಿ ಸಾಮೂಹಿಕವಾಗಿ ಸಮಾಧಿ ಮಾಡಿದ್ದ ದೇಹಗಳನ್ನು ಪತ್ತೆ ಮಾಡಲಾಗಿತ್ತು. ಬಳಿಕ ಮೃತ ದೇಹದ ಬಳಿ ಪತ್ತೆಯಾದ ಗುರುತಿನ ಚೀಟಿ, ಇರಾನಿ ದೇಶಕ್ಕೆ ಸಂಬಂಧಿಸದ ಶೂ, ಸಿಖ್ ಪೇಟಾ ಹಾಗೂ ಮೃತ ದೇಹಗಳ ಅವಶೇಷಗಳಲ್ಲಿ ದೊರೆತ ಉದ್ದ ಕೂದಲುಗಳನ್ನು ಸಂಗ್ರಹಿಸಲಾಯಿತು.

    ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಭಾರತದಿಂದ ಕಾಣೆಯಾಗಿದ್ದ ವ್ಯಕ್ತಿಗಳ ಕುಟುಂಬ ಸದಸ್ಯರ ಡಿಎನ್‍ಎ ಸ್ಯಾಪಲ್ ಗಳನ್ನು ವಿದೇಶಾಂಗ ಇಲಾಖೆ ಇರಾಕ್ ಗೆ ಕಳುಹಿಸಿ ಕೊಡಲಾಗಿತ್ತು. ಬಾಗ್ದಾದ್ ನಲ್ಲಿ 39 ಮೃತ ದೇಹಗಳ ಡಿಎನ್‍ಎ ಪರೀಕ್ಷೆ ನಡೆಸಿ ಅವುಗಳನ್ನು ಕಾಣೆಯಾಗಿದ್ದ ಭಾರತೀಯ ಮಂದಿಯದ್ದೇ ಎಂದು ದೃಢಿಕರಿಸಲಾಯಿತು.

    ಈ ಕುರಿತು ಪ್ರತಿಕ್ರಿಯೇ ನೀಡಿರುವ ವಿಕೆ ಸಿಂಗ್ ಅವರು, ಕಾಣೆಯಾಗಿದ್ದ ಕುಟುಂಬ ಸದಸ್ಯರ ಡಿಎನ್‍ಎ ಸಂಗ್ರಹಿಸಿ ಅವುಗಳನ್ನು ಮೃತದೇಹಗಳ ಅವಶೇಷಗಳಿಗೆ ಹೋಲಿಕೆ ಮಾಡುವುದು ಬಹುದೊಡ್ಡ ಕಾರ್ಯವಾಗಿತ್ತು ಎಂದು ಹೇಳಿದ್ದಾರೆ.

  • 16 ಟರ್ಕಿ ಮಹಿಳೆಯರಿಗೆ ಗಲ್ಲು ಶಿಕ್ಷೆ ವಿಧಿಸಿದ ಇರಾಕ್ ಕೋರ್ಟ್

    16 ಟರ್ಕಿ ಮಹಿಳೆಯರಿಗೆ ಗಲ್ಲು ಶಿಕ್ಷೆ ವಿಧಿಸಿದ ಇರಾಕ್ ಕೋರ್ಟ್

    ಬಾಗ್ದಾದ್: ಐಸಿಸ್ ಸಂಘಟನೆ ಸೇರಿದ್ದಕ್ಕೆ ಇರಾಕ್ ನ್ಯಾಯಾಲಯವೊಂದು ಟರ್ಕಿ ದೇಶದ 16 ಮಹಿಳೆಯರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿ ಆದೇಶ ಪ್ರಕಟಿಸಿದೆ.

    ವಿದೇಶದಿಂದ ಬಂದ ಮಹಿಳೆಯರು ಐಸಿಸ್ ಸಂಘಟನೆಗೆ ಸೇರಿ ಬೆಂಬಲ ನೀಡುತ್ತಿರುವ ಕಾರಣದಿಂದ ಇರಾಕ್ ಸೇನೆ ಇಸ್ಲಾಮಿಕ್ ಸಂಘಟನೆ ಸೇರಿರುವ ವಿರುದ್ಧ ಕಾರ್ಯಾಚರಣೆ ನಡೆಸಿ ಬಂಧಿಸುತ್ತಿದೆ. ಕಳೆದ ಕೆಲ ದಿನಗಳಿಂದ ಸುಮಾರು 1,700 ಅಧಿಕ ವಿದೇಶಿ ಮಹಿಳೆಯರನ್ನು ಬಂಧಿಸಿರುವುದಾಗಿ ಇರಾಕ್ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮಹಿಳೆಯರಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಮುನ್ನ ಅವರ ಮೇಲಿನ ಆರೋಪಗಳ ಕುರಿತು ವಿಚಾರಣೆ ನಡೆಸಲಾಗಿದ್ದು, ಈ ಮಹಿಳೆಯರು ಐಸಿಸ್ ಸಂಘಟನೆ ಭಯಾನಕ ದಾಳಿ ನಡೆಸಲು ಬೆಂಬಲ ನೀಡಿದ್ದರು. ಪ್ರಕರಣಗಳಿಗೆ ಸಾಕ್ಷ್ಯಗಳು ಸಿಕ್ಕಿದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ ಎಂದು ಇರಾಕ್ ನ ಕೇಂದ್ರ ಕ್ರಿಮಿನಲ್ ಕೋರ್ಟ್ ನ್ಯಾಯಾಧೀಶ ಅಬ್ದುಲ್ ಸತ್ತರ್ ಅಲ್ ಬರ್ಕರ್ ಅವರ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    2014 ರಿಂದ ಇಸ್ಲಾಮಿಕ್ ಉಗ್ರರು ನಡೆಸುತ್ತಿರುವ ಭಯೋತ್ಪಾದನೆಗೆ ಹಲವು ಮಹಿಳೆಯರು ಬೆಂಬಲ ಸೂಚಿಸಿ ಇರಾಕ್ ಮತ್ತು ಸಿರಿಯಾಗೆ ಆಗಮಿಸಿದ್ದರು. ಕಳೆದ ಆಗಸ್ಟ್ ನಲ್ಲಿ ಇರಾಕ್ ಸೈನಿಕರು ಕುರ್ದಿಶ್ ಪೆಶ್ಮೆರ್ಗಾ ಸೇನೆ ಮೇಲೆ ದಾಳಿ ನಡೆಸಿದ ವೇಳೆ ಸುಮಾರು 1,700 ಕ್ಕೂ ಹೆಚ್ಚಿನ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಶರಣಾಗಿದ್ದರು.

    ಕಳೆದ ಒಂದು ಒಂದು ವಾರದ ಹಿಂದೆಯಷ್ಟೇ ಟರ್ಕಿಯ ಮಹಿಳೆಗೆ ಮರಣದಂಡನೆ ಹಾಗೂ ಇತರೇ ರಾಷ್ಟ್ರೀಯತೆ ಹೊಂದಿರುವ 10 ಮಹಿಳೆಯರಿಗೆ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿತ್ತು. ಕಳೆದ ವರ್ಷದ ಐಸಿಸ್‍ಗೆ ಸೇರ್ಪಡೆ ಮಾಡಿದ ಆರೋಪದ ಅಡಿ ರಷ್ಯಾ ಮಹಿಳೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

    ವಿದೇಶದಿಂದ ಇರಾಕ್ ಮತ್ತು ಸಿರಿಯಾ ಗೆ ಆಗಮಿಸುವ ಮಹಿಳೆಯರು ಸ್ವ ಇಚ್ಛೆಯಿಂದ ಐಸಿಸ್ ಸಂಘಟನೆಗೆ ಸೇರಿ ಉಗ್ರರನ್ನೇ ಮದುವೆಯಾಗುತ್ತಾರೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡಲು ಸಹಕಾರ ನೀಡುತ್ತಾರೆ.

  • ಪ್ರಬಲ ಭೂಕಂಪಕ್ಕೆ 140ಕ್ಕೂ ಹೆಚ್ಚು ಜನ ಬಲಿ – ಇರಾನ್, ಇರಾಕ್ ಗಡಿಯಲ್ಲಿ ಮಹಾ ದುರಂತ

    ಪ್ರಬಲ ಭೂಕಂಪಕ್ಕೆ 140ಕ್ಕೂ ಹೆಚ್ಚು ಜನ ಬಲಿ – ಇರಾನ್, ಇರಾಕ್ ಗಡಿಯಲ್ಲಿ ಮಹಾ ದುರಂತ

    ಇರಕ್/ಇರಾನ್: ಇರಾನ್-ಇರಾಕ್ ಗಡಿಭಾಗಗಳಲ್ಲಿ 7.3 ರಿಕ್ಟರ್ ಮಾಪಕದಲ್ಲಿ ಭೂಕಂಪ ಸಂಭವಿಸಿದ್ದು, 140 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಹಾಗೂ 860 ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಭೂಕಂಪನದ ಅನುಭವವಾಗುತ್ತಿದ್ದಂತೆಯೇ ಉತ್ತರ ಇರಾನ್ ನ ಸುಲಯೈಮನಿಯಾದ ಕಟ್ಟಡದಲ್ಲಿ ನೆಲೆಸಿದ್ದ ಜನರು ಆತಂಕಗೊಳಗಾಗಿ ಅಲ್ಲಿಂದ ಓಡಿ ಹೋಗಿದ್ದಾರೆ. ದರ್ಬಾದಿಖಾನ್ ನಗರದಲ್ಲಿ ಗಾಜಿನ ಗೋಡೆ ಹಾಗೂ ಕಾಂಕ್ರೀಟ್ ಸ್ಟ್ರಕ್ಷರ್ ಗಳು ಕುಸಿದು ಬಿದ್ದಿವೆ.

    ಭೂಕಂಪನ ಸಂಭವಿಸುವಾಗ 61 ಜನರು ಸಾವನ್ನಪ್ಪಿದ್ದು, 300 ಜನರಿಗೆ ಗಾಯವಾಗಿತ್ತು. ಇರಾಕ್ ನ ಬಾರ್ಡರ್ ನಲ್ಲಿ 6 ಜನ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಈ ಸಮಯದಲ್ಲಿ ತುರ್ತು ಪರಿಹಾರ ಶಿಬಿರಗಳನ್ನು ಆಯೋಜಿಸಿದ್ದೇವೆ ಎಂದು ಇರಾನ್ ನ ಉಪ ರಾಜ್ಯಪಾಲ ಮೋಜ್ತಬಾ ನಿಕೇರ್‍ದಾರ್ ಹೇಳಿದ್ದಾರೆ.

    ಸೌತ್‍ವೆಸ್ಟ್ ನ ಹಲಬ್ಜಾದಲ್ಲಿ ರಾತ್ರಿ ಸುಮಾರು 9.20 ಗಂಟೆಗೆ ಎಲ್ಲ ಜನರು ಮನೆಯಲ್ಲಿದ್ದಾಗ 30 ಕಿ.ಮೀನಷ್ಟು ಭೂಕಂಪಿಸಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ನಮ್ಮ ರಕ್ಷಣಾ ತಂಡವನ್ನು ಗ್ರಾಮಗಳಿಗೆ ಕಳಿಸಲು ಸಾಧ್ಯವಾಗುತ್ತಿಲ್ಲ ಎಂದು ತುರ್ತು ಸೇವೆಗಳ ಮುಖ್ಯಸ್ಥ ಪಿರ್ ಹೊಸ್ಸಿನ್ ಕೂಲಿವಂಡ್ ತಿಳಿಸಿದ್ದಾರೆ.

    ನಾರ್ತ್‍ವೆಸ್ಟ್ ನಲ್ಲಿ ಕೆರ್ಮನ್ಹಾಹ್ ಮತ್ತು ಅಜ್ಗೆಲೆಹ್ನಲ್ಲಿನ ಕಸ್-ಇ-ಶಿರಿನ್ ನಲ್ಲಿ ಸಾಕಷ್ಟು ಹಾನಿಯಾಗಿದ್ದು, 40 ಕಿ.ಮೀನಷ್ಟು ಭೂಕಂಪನ ಆಗಿದೆ ಎಂದು ಐಆರ್‍ಎನ್‍ಎ ತಿಳಿಸಿದೆ.

    ಇರಾಕ್ ನ ಭೂಕಂಪನದಿಂದ ಇರಾನ್ ನ 8 ಗ್ರಾಮಗಳಿಗೆ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಕೂಡ ನಡೀತಿದೆ. ಅಲ್ಲದೇ ಪಾಕಿಸ್ತಾನ, ಲೆಬೆನಾನ್, ಕುವೈಟ್, ಟರ್ಕಿ ದೇಶದಲ್ಲೂ ಕಂಪನದ ಅನುಭವವಾಗಿದೆ.

    https://twitter.com/CiaranOhReally/status/929786178341146624

    https://twitter.com/thestevennabil/status/929780876258394112

    https://twitter.com/sassysassyred/status/929833730558095360