Tag: IPL

  • ಕೊಹ್ಲಿ ಮೇಲಿನ ಸಿಟ್ಟಿಗೆ ರೂಮ್ ಬಾಗಿಲು ಮುರಿದ ಅಂಪೈರ್

    ಕೊಹ್ಲಿ ಮೇಲಿನ ಸಿಟ್ಟಿಗೆ ರೂಮ್ ಬಾಗಿಲು ಮುರಿದ ಅಂಪೈರ್

    ಬೆಂಗಳೂರು: 2019ರ ಐಪಿಎಲ್ ಟೂರ್ನಿಯಲ್ಲಿ ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂಪೈರ್ ನಿಗೆಲ್ ಲಾಂಗ್ ಕೊಹ್ಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಸಿಟ್ಟಿನಲ್ಲಿ ಪಂದ್ಯದ ಬಳಿಕ ಕೊಠಡಿಗೆ ತೆರಳಿ ರೂಮ್ ಬಾಗಿಲಿಗೆ ಒದ್ದು ಹಾನಿ ಮಾಡಿದ್ದಾರೆ. ಈ ಕುರಿತಂತೆ ಸದ್ಯ ಅವರು ಬಿಸಿಸಿಐ ವಿಚಾರಣೆ ಎದುರಿಸುವ ಸಾಧ್ಯತೆ ಇದೆ.

    50 ವರ್ಷದ ಇಂಗ್ಲೆಂಡ್‍ಗೆ ಸೇರಿರುವ ನಿಗೆಲ್ ಲಾಂಗ್ ಪಂದ್ಯದ ವೇಳೆ ಕೊಹ್ಲಿರೊಂದಿಗೆ ವಾಗ್ವಾದ ಕೂಡ ನಡೆಸಿದ್ದರು. ಆ ಬಳಿಕ ಇನ್ನಿಂಗ್ಸ್ ಬ್ರೇಕ್ ಪಡೆದ ವೇಳೆ ಘಟನೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ.

    ನಡೆದಿದ್ದೇನು?
    ಹೈದರಾಬಾದ್ ವಿರುದ್ಧದ ಪಂದ್ಯದ 20ನೇ ಓವರನ್ನ ಉಮೇಶ್ ಯಾದವ್ ಬೌಲ್ ಮಾಡಿದ್ದರು. ಈ ವೇಳೆ ಓವರಿನ ಉಮೇಶ್ ಎಸೆದ ಗುಡ್ ಬಾಲ್ ಆಗಿದ್ದರೂ ಕೂಡ ಅಂಪೈರ್ ಲೈನ್ ನೋಬಾಲ್ ಎಂದು ತೀರ್ಪು ನೀಡಿದ್ದರು. ಆ ಬಳಿಕ ರಿವ್ಯೂನಲ್ಲಿ ಅಂಪೈರ್ ನಿರ್ಧಾರ ತಪ್ಪಾಗಿರುವುದು ಕಂಡು ಬಂತು. ಈ ಹಂತದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಬಳಿ ಪ್ರಶ್ನಿಸಿದ್ದರು. ಈ ವೇಳೆ ಅಂಪೈರ್ ನಿಗೆಲ್ ಹಾಗೂ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು.

    ಸದ್ಯ ಘಟನೆ ಕುರಿತಂತೆ ಕೆಎಸ್‍ಸಿಎ ಕಾರ್ಯದರ್ಶಿಗಳಾದ ಆರ್ ಸುಧಾಕರ್ ರಾವ್ ಅವರ ಅಂಪೈರ್ ವಿರುದ್ಧ ಕ್ರಮಕ್ಕೆ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಆಟಗಾರತು ತಪ್ಪು ಮಾಡಿದ ಮೇಲೆ ಕ್ರಮಕೈಗೊಳ್ಳುವಂತೆಯೇ ಅಂಪೈರ್ ವಿರುದ್ಧ ಕೂಡ ಕ್ರಮ ಕೈಗೊಂಡು 5 ಸಾವಿರ ರೂ. ದಂಡ ಪಾವತಿಸಲು ಆದೇಶಿಸುವಂತೆ ಬಿಸಿಸಿಐಗೆ ಕೋರಿದ್ದಾರೆ.

    ನಿಗೆಲ್ ಅವರು ಇದುವರೆಗೂ 56 ಟೆಸ್ಟ್, 123 ಏಕದಿನ ಹಾಗೂ 32 ಟಿ20 ಅಂತರಾಷ್ಟ್ರಿಯ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

  • ರಜಿನಿಕಾಂತ್ ಭೇಟಿ ಆಗಬೇಕೆಂದ ಬ್ರಾವೋ

    ರಜಿನಿಕಾಂತ್ ಭೇಟಿ ಆಗಬೇಕೆಂದ ಬ್ರಾವೋ

    ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನು ಭೇಟಿಯಾಗಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಟಗಾರ ಬ್ರಾವೋ ಇಚ್ಛೆ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ ಹಲವು ಆವೃತ್ತಿಗಳಲ್ಲಿ ವೆಸ್ಟ್ ಇಂಡೀಸ್ ಆಟಗಾರ ಚೆನ್ನೈ ತಂಡದ ಪರ ಆಡುತ್ತಿದ್ದು, ಭಾರತವೆಂದರೆ ತಮಗೆ ಇಷ್ಟ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಅಲ್ಲದೇ ಇಲ್ಲಿನ ಸಂಸ್ಕೃತಿ, ಆಹಾರ ಹಾಗೂ ಜೀವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಒಮ್ಮೆಯಾದರೂ ನಟ ರಜಿನಿಕಾಂತ್ ಅವರನ್ನು ನಾನು ಭೇಟಿ ಮಾಡಬೇಕೆಂಬ ಇಚ್ಛೆ ಇದೆ. ಅವರ ಬಗ್ಗೆ ಸಾಕಷ್ಟು ಸಂಗತಿಗಳನ್ನು ಕೇಳಿದ್ದೇನೆ. ಆದರೆ ಅವರು ನಟಿಸಿರುವ ಸಿನಿಮಾ ನೋಡಲು ಅವಕಾಶ ಲಭಿಸಿಲ್ಲ. ಇಷ್ಟರಲ್ಲೇ ಅವರ ಸಿನಿಮಾಗಳನ್ನು ನೋಡುತ್ತೇನೆ ಎಂದು ಹೇಳಿದ್ದಾರೆ.

    ಸಂಗೀತ ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿರುವ ಬ್ರಾವೋ ಮಕ್ಕಳಿಗಾಗಿ ವಿಶೇಷ ಹಾಡೊಂದನ್ನು ಸಿದ್ಧಪಡಿಸಿದ್ದು, ನಮ್ಮ ತಂಡದ ಆಟಗಾರರ ಮಕ್ಕಳು ಈ ಹಾಡು ತಯಾರಿಸಲು ನನಗೆ ಪ್ರೇರಣೆ. ಹರ್ಭಜನ್ ಸಿಂಗ್ ಮಗಳು ನನ್ನನ್ನು ಚಾಂಪಿಯನ್ ಎಂದೇ ಕರೆಯುತ್ತಾಳೆ. ಈ ಹಾಡು ಬರೆಯಲು ಸಿಎಸ್‍ಕೆ ಅಭಿಮಾನಿ ಬಳಗ ನನಗೆ ಸಾಕಷ್ಟು ಸಹಾಯ ಮಾಡಿದೆ ಎಂದಿದ್ದಾರೆ. 2020ರ ಟೂರ್ನಿಯಲ್ಲಿ ಧೋನಿಗಾಗಿಯೇ ಹಾಡೊಂದನ್ನು ಸಿದ್ಧಪಡಿಸಲು ಈಗಾಗಲೇ ತಯಾರಿ ನಡೆಸಿದ್ದೇನೆ ಎಂದಿದ್ದಾರೆ.

  • ಹೆಟ್ಮೇಯರ್ ಹೊಡೆತಕ್ಕೆ ಗಾಳಿಯಲ್ಲಿ ಹಾರಿತು ಗುರ್‍ಕೀರತ್ ಬ್ಯಾಟ್- ವಿಡಿಯೋ ನೋಡಿ

    ಹೆಟ್ಮೇಯರ್ ಹೊಡೆತಕ್ಕೆ ಗಾಳಿಯಲ್ಲಿ ಹಾರಿತು ಗುರ್‍ಕೀರತ್ ಬ್ಯಾಟ್- ವಿಡಿಯೋ ನೋಡಿ

    ಬೆಂಗಳೂರು: ಶನಿವಾರ ಬೆಂಗಳೂರು ಮತ್ತು ಹೈದರಾಬ್ ನಡುವಿನ ಪಂದ್ಯದ ವೇಳೆ ಶಿಮ್ರೊನ್ ಹೆಟ್ಮೇಯರ್ ಹೊಡೆತಕ್ಕೆ ಗುರುಕೀರತ್ ಬ್ಯಾಟ್ ಮೇಲಕ್ಕೆ ಚಿಮ್ಮಿದ ಪ್ರಸಂಗ ನಡೆಯಿತು.

    ಆರ್ಸಿಬಿ 20 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡ ಬಳಿಕ ಹೆಟ್ಮೇಯರ್ ಮತ್ತು ಗುರುಕೀರತ್ ಕ್ರೀಸ್‍ನಲ್ಲಿ ನಿಧಾನವಾಗಿ ರನ್ ಪೇರಿಸುತ್ತಿದ್ದರು. ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರು ಮಾಡಿದ ನಾಲ್ಕನೇ ಓವರ್‍ನ ನಾಲ್ಕನೇ ಎಸೆತವನ್ನು ಶಿಮ್ರೋನ್ ಹೆಟ್ಮರ್ ಬಲವಾಗಿ ಹೊಡೆದಿದ್ದಾರೆ.

    ಬಾಲ್ ತನ್ನತ್ತ ಬರುತ್ತದೆ ಎನ್ನುವುದು ಗೊತ್ತಾಗುತ್ತಿದ್ದಂತೆ ನಾನ್ ಸ್ಟ್ರೈಕರ್ ನಲ್ಲಿದ್ದ ಗುರುಕೀರತ್ ಅವರು ಬ್ಯಾಟ್ ಮೇಲಕ್ಕೆ ಎತ್ತಿ ತಪ್ಪಿಸಲು ಯತ್ನಿಸಿದರು. ಆದರೆ ಈ ಪ್ರಯತ್ನ ವಿಫಲವಾಗಿದ್ದು, ಬಾಲ್ ನೇರವಾಗಿ ಬ್ಯಾಟಿಗೆ ಬಡಿದಿದೆ. ಚೆಂಡು ಹೊಡೆದ ರಭಸಕ್ಕೆ ಅವರ ಬ್ಯಾಟ್ ಗಾಳಿಯಲ್ಲಿ ಮೇಲಕ್ಕೆ ಹಾರಿ ಬಿದ್ದಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದಾರಬಾದ್ ತಂಡ ನಾಯಕ ಕೆ. ವಿಲಿಯಮ್ಸನ್ ಹೊಡೆದ 70 ರನ್ (43 ಎಸೆತ, 5 ಬೌಂಡರಿ, 4 ಸಿಕ್ಸರ್) ಸಹಾಯದಿಂದ 174 ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಇದನ್ನು ಬೆನ್ನಟಿದ ಬೆಂಗಳೂರು ತಂಡ ಆರಂಭಿಕ 3 ವಿಕೆಟ್‍ಗಳನ್ನು ಬೇಗನೆ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಹೆಟ್ಮೇಯರ್ 75 ರನ್ (47 ಎಸೆತ, 4 ಬೌಂಡರಿ, 6 ಸಿಕ್ಸರ್) ಮತ್ತು ಗುರುಕೀರತ್ ಸಿಂಗ್ 65 ರನ್ (48 ಎಸೆತ, 8 ಬೌಂಡರಿ, 1 ಸಿಕ್ಸರ್) ಅವರು ನಾಲ್ಕನೇ ವಿಕೆಟ್‍ಗೆ 144 ರನ್ ಗಳ ಜೊತೆಯಾಟವಾಡಿದರು. ಈ ಮೂಲಕ ಬೆಂಗಳೂರು ತಂಡವನ್ನು 4 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಸೂಪರ್ ಬ್ಯಾಟಿಂಗ್ ಮಾಡಿದ ಶಿಮ್ರೊನ್ ಹೆಟ್ಮರ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

    ಈ ಪಂದ್ಯದಲ್ಲಿ ಹೈದರಾಬಾದ್ ಗೆದ್ದಿದ್ದರೆ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದಿತ್ತು. ಆದರೆ ಸೋತಿದ್ದರಿಂದ ಪ್ಲೇ ಆಫ್ ಪ್ರವೇಶದ ಕನಸು ಇಂದು ಕೋಲ್ಕತ್ತಾ ಮತ್ತು ಪಂಜಾಬ್ ಪಂದ್ಯದ ಫಲಿತಾಂಶದ ಮೇಲೆ ನಿಂತಿದೆ. ಈ ಪಂದ್ಯದಲ್ಲಿ 12 ಅಂಕಗಳಿಸಿರುವ ಕೋಲ್ಕತ್ತಾ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಪಂಜಾಬ್ ಗೆದ್ದರೆ ರನ್ ರೇಟ್ ಆಧಾರದಲ್ಲಿ ಹೈದರಾಬಾದ್ ಪ್ಲೇ ಆಫ್ ಪ್ರವೇಶಲಿದೆ.

  • ರಾಹುಲ್ ದ್ರಾವಿಡ್‍ರನ್ನ ಅವಾಚ್ಯ ಪದಗಳಿಂದ ನಿಂದಿಸಿದ್ದ ಶ್ರೀಶಾಂತ್: ಅಪ್ಟನ್

    ರಾಹುಲ್ ದ್ರಾವಿಡ್‍ರನ್ನ ಅವಾಚ್ಯ ಪದಗಳಿಂದ ನಿಂದಿಸಿದ್ದ ಶ್ರೀಶಾಂತ್: ಅಪ್ಟನ್

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಹಾಗೂ ತಮ್ಮನ್ನು ಸಾರ್ವಜನಿಕವಾಗಿ ಶ್ರೀಶಾಂತ್ ನಿಂದಿಸಿದ್ದರು ಎಂದು 2013ರಲ್ಲಿ ರಾಜಸ್ಥಾನ ರಾಯಲ್ಸ್ ಕೋಚ್ ಆಗಿದ್ದ ಪ್ಯಾಡಿ ಅಪ್ಟನ್ ಬಹಿರಂಗ ಪಡಿಸಿದ್ದಾರೆ.

    ಇತ್ತೀಚೆಗೆ ಕೋಚ್ ಪ್ಯಾಡಿ ಅಪ್ಟನ್ ಅವರ ‘ದ ಬೇರ್ ಫೋಟ್ ಕೋಚ್’ ಎಂಬ ಪುಸ್ತಕ ಬರೆದಿದ್ದು, ಈ ಪುಸ್ತಕದಲ್ಲಿ ಶ್ರೀಶಾಂತ್ ನಡವಳಿಕೆ ಕುರಿತು ಬರೆದುಕೊಂಡಿದ್ದಾರೆ.

    2013 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಹುಲ್ ದ್ರಾವಿಡ್ ನಾಯಕರಾಗಿ ಮುನ್ನಡೆಸುತ್ತಿದ್ದರು. ಪ್ಯಾಡಿ ಅಪ್ಟನ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಶ್ರೀತಾಂತ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಅವರ ಬಂಧನ ಆಗುವ ಮುನ್ನ ನಡೆದ ಪಂದ್ಯದಿಂದ ಅವರನ್ನು ಕೈಬಿಡಲಾಗಿತ್ತು. ಇದರಿಂದ ಕೋಪಗೊಂಡ ಶ್ರೀಶಾಂತ್ ತಂಡದ ನಾಯಕರಾಗಿದ್ದ ದ್ರಾವಿಡ್ ಹಾಗೂ ತಮ್ಮನ್ನು ನಿಂದಿಸಿದ್ದರು ಎಂದು ವಿವರಿಸಿದ್ದಾರೆ.

    ಸ್ಪಾಟ್ ಫಿಕ್ಸಿಂಗ್ ಆರೋಪದ ಅಡಿಯಲ್ಲಿ 2013ರ ಮೇ 16 ರಂದು ಶ್ರೀಶಾಂತ್ ಬಂಧನವಾಗಿತ್ತು. ಅದಕ್ಕೂ ಮುನ್ನ ಶ್ರೀಶಾಂತ್ ಅಸಭ್ಯ ವರ್ತನೆ ತೋರಿದ್ದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಪರಿಣಾಮ ಅವರಿಗೆ ತಂಡದಿಂದ ಕೈಬಿಟ್ಟಿರುವ ವಿಚಾರ ಶ್ರೀಶಾಂತ್‍ಗೆ ತಿಳಿಸಲಾಗಿತ್ತು. ಈ ವಿಚಾರಕ್ಕೆ ಅವರಿಗೆ ಕೋಪ ಬಂದಿತ್ತು. ತಂಡದ ಸಹ ಆಟಗಾರರ ಎದುರೇ ಅವಾಚ್ಯ ಪದ ಪ್ರಯೋಗ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಕೋಚ್ ಪ್ಯಾಡಿ ಅವರ ಬರಹದ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಪ್ಯಾಡಿ ಒಬ್ಬ ಸುಳ್ಳುಗಾರ, ನಾನು ಎಂದು ಸಹ ಆಟಗಾರರೊಂದಿಗೆ ಈ ರೀತಿ ವರ್ತಿಸಿಲ್ಲ ಎಂದು ಹೇಳಿದ್ದಾರೆ.

  • 2019ರ ಐಪಿಎಲ್ ಬಳಿಕ ಧೋನಿ ನಿವೃತ್ತಿ? ಕುತೂಹಲ ಮೂಡಿಸಿದ ರೈನಾ ಹೇಳಿಕೆ

    2019ರ ಐಪಿಎಲ್ ಬಳಿಕ ಧೋನಿ ನಿವೃತ್ತಿ? ಕುತೂಹಲ ಮೂಡಿಸಿದ ರೈನಾ ಹೇಳಿಕೆ

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಂಗಾಮಿ ನಾಯಕ ಸುರೇಶ್ ರೈನಾ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಪಂದ್ಯದ ಬಳಿಕ ಮಾತನಾಡಿದ ರೈನಾ, ತಂಡದ ನಾಯಕತ್ವದ ಕುರಿತ ಪ್ರಶ್ನೆಗೆ ನೀಡಿದ ಉತ್ತರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

    ಧೋನಿ ನಾಯಕತ್ವದ ಸಿಎಸ್‍ಕೆ ತಂಡ ಐಪಿಎಲ್ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನವನ್ನೇ ತೋರಿದೆ. ಆದರೆ ಧೋನಿ ಅವರ ಅನುಪಸ್ಥಿತಿಯಲ್ಲಿ ತಂಡ ಸೋಲುಂಡು ನಿರಾಸೆ ಮೂಡಿಸುತ್ತಿದೆ. ಈ ಬಾರಿ ಟೂರ್ನಿಯಲ್ಲಿ ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಸುರೇಶ್ ರೈನಾ ಮುನ್ನಡೆಸಿದ್ದರು. ಈ ಕುರಿತು ರೈನಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

    ಧೋನಿ ತಂಡಕ್ಕೆ ಕೇವಲ ನಾಯಕರಾಗಿ ಮಾತ್ರವಲ್ಲದೇ ಒಬ್ಬ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಅವರ ನಾಯಕತ್ವದ ಅನುಪಸ್ಥಿತಿಗಿಂತ ಬ್ಯಾಟ್ಸ್ ಆಗಿ ತಂಡಕ್ಕೆ ಗೈರಾಗುವುದು ಹೆಚ್ಚಿನ ಪ್ರಭಾವ ಉಂಟುಮಾಡುತ್ತದೆ ಎಂದರು. ಇದೇ ವೇಳೆ ಮುಂದಿನ ಅವಧಿಗಳಲ್ಲಿ ತಮಗೆ ತಂಡ ನಾಯಕತ್ವ ವಹಿಸುವ ಬಗ್ಗೆಯೂ ಸುಳಿವು ನೀಡಿದರು. ಹಲವು ವರ್ಷಗಳಿಂದ ತಂಡದ ನಾಯಕತ್ವವನ್ನು ಧೋನಿ ಉತ್ತಮವಾಗಿ ನಿರ್ವಹಿಸಿದ್ದಾರೆ. ಮುಂದಿನ ಅವಧಿಯಲ್ಲಿ ನೀವು ನನ್ನನ್ನು ಹೆಚ್ಚಾಗಿ ನೋಡುತ್ತೀರಿ. ಮತ್ತಷ್ಟು ಪರಿಪಕ್ವತೆ ಗಳಿಸುವ ಅಗತ್ಯ ನನಗಿದೆ. ಆದರೆ ಧೋನಿ ತಮಗೆ ಇಷ್ಟವಿರುಷ್ಟು ದಿನ ಐಪಿಎಲ್ ನಲ್ಲಿ ಮುಂದುವರಿಯಲಿದ್ದಾರೆ ಎಂದರು.

    ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಯಶಸ್ವಿ ತಂಡವಾಗಿ ಮುನ್ನುಗುತ್ತಿರುವ ಚೆನ್ನೈ ನಾಯಕತ್ವ ಕುರಿತು ರೈನಾ ಅವರ ಹೇಳಿಕೆ ಕುತೂಹಲ ಮೂಡಿಸಿದ್ದು, 36 ವರ್ಷದ ಧೋನಿ 2019 ಆವೃತ್ತಿ ಬಳಿಕ ನಿವೃತ್ತಿ ಘೋಷಣೆ ಮಾಡಲಿದ್ದರಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಐಪಿಎಲ್ ಬಳಿಕ ಆರಂಭವಾಗುವ ವಿಶ್ವಕಪ್ ಕ್ರಿಕೆಟ್ ಟೂರ್ನಿ ಬಳಿಕ ಧೋನಿ ನಿವೃತ್ತಿ ಹೇಳುತ್ತಾರೆ ಎಂಬ ಮಾತು ಕೇಳಿಬಂದಿದೆ.

  • ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧೋನಿಯಿಂದ ವಿಶೇಷ ಗಿಫ್ಟ್!

    ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧೋನಿಯಿಂದ ವಿಶೇಷ ಗಿಫ್ಟ್!

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರ ಮೇಲೆ ಅಭಿಮಾನಿಗಳು ವಿಶೇಷ ಅಭಿಮಾನ ಹೊಂದಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದ ಸಂಗತಿ. ಧೋನಿ ಕೂಡ ತಮ್ಮ ಅಭಿಮಾನಿಗಳಿಗೆ ಅಷ್ಟೇ ಗೌರವವನ್ನು ನೀಡುತ್ತಾರೆ. ಈ ಮಾತಿಗೆ ಪೂರಕ ಎಂಬಂತೆ ಡೆಲ್ಲಿ ಪಂದ್ಯದ ಬಳಿಕ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಧೋನಿ ವಿಶೇಷ ಗಿಫ್ಟ್ ನೀಡಿದ್ದಾರೆ.

    ಟೆನ್ನಿಸ್ ಬಾಲ್ ಗಳನ್ನು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಬೀಸುವ ಮೂಲಕ ಧೋನಿ ಅಷ್ಟು ಅಭಿಮಾನಿಗಳ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಸಿಎಸ್‍ಕೆ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ.

    ಪಂದ್ಯದ ವೇಳೆ ಧೋನಿ ಮೈದಾನ ಪ್ರವೇಶ ಮಾಡುತ್ತಿದಂತೆ ನೆರೆದಿದ್ದ ಅಭಿಮಾನಿಗಳ ಅವರ ಘೋಷಣೆ ಕೂಗಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಸ್ಟೇಡಿಯಂ ಮೇಲೆ ಕುಳಿತ್ತಿದ್ದ ಅಭಿಮಾನಿಗಳಿಗೂ ಟೆನ್ನಿಸ್ ರಾಕೆಟ್ ನಿಂದ ಚೆಂಡನ್ನು ಹೊಡೆದಿದ್ದರು. ಈ ವಿಡಿಯೋವನ್ನು ಸುಮಾರು 17 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

    ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಿಎಸ್‍ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಆಡಿರುವ 13 ಪಂದ್ಯಗಳಲ್ಲಿ ಸಿಎಸ್‍ಕೆ 9ರಲ್ಲಿ ಜಯ ಪಡೆದು 18 ಅಂಕಗಳಿಸಿದೆ. 8 ಪಂದ್ಯಗಳಲ್ಲಿ ಗೆಲುವು ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ 16 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ.

  • ಅಭಿಮಾನಿಗಳ ಜೊತೆ ಕಾಲ ಕಳೆದ ಆರ್‌ಸಿಬಿ ಆಟಗಾರರು

    ಅಭಿಮಾನಿಗಳ ಜೊತೆ ಕಾಲ ಕಳೆದ ಆರ್‌ಸಿಬಿ ಆಟಗಾರರು

    ಬೆಂಗಳೂರು: ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಗೆಲ್ಲಲಿ ಅಥವಾ ಸೋಲಲಿ. ಅಭಿಮಾನಿಗಳ ಕ್ರೇಜ್ ಮಾತ್ರ ಕಡಿಮೆ ಆಗುವುದಿಲ್ಲ. ಆರ್‌ಸಿಬಿ ತಂಡದ ಕ್ರಿಕೆಟರ್ಸ್ ತಮ್ಮ ತಂಡದ ಫ್ಯಾನ್ಸ್ ಗಳಿಗೆ ವಿಭಿನ್ನವಾಗಿ ಚಿಯರ್ ಮಾಡಿದ್ದಾರೆ.

    ನಗರದ ಖಾಸಗಿ ಮಾಲ್ ನಲ್ಲಿ ಕಿಂಗ್ ಫಿಶರ್ ಬೌಲ್ ಔಟ್ ಸೀಸನ್-6 ಎಂಬ ಹೆಸರಿನಲ್ಲಿ, ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರ್‌ಸಿಬಿ ತಂಡದ ಮೂವರು ಆಟಗಾರರಾದ ಪಾರ್ಥಿವ್ ಪಟೇಲ್, ಹೈನ್ರಿಚ್ ಕ್ಲಾಸೆನ್ ಮತ್ತು ನವದೀಪ ಸೈನಿ ಆಗಮಿಸಿದ್ದರು.

    ಈ ಕಾರ್ಯಕ್ರಮದಲ್ಲಿ ಮೂವರು ಆಟಗಾರರು 25 ಅದೃಷ್ಟಶಾಲಿ ಅಭಿಮಾನಿಗಳು ಬೌಲಿಂಗ್ ಹಾಕಿದ್ದರು. ಅಭಿಮಾನಿಗಳ ಬೌಲಿಂಗ್‍ಗೆ ಕ್ರಿಕೆಟರ್ಸ್ ಗಳು ಬ್ಯಾಟ್ ಬೀಸಿದರು. ಅಲ್ಲದೆ ಕ್ರಿಕೆಟರ್ಸ್ ಅಭಿಮಾನಿಗಳ ಜೊತೆ ಸಮಯ ಕಳೆದಿದ್ದಾರೆ. ಈ ವೇಳೆ ಅಭಿಮಾನಿಗಳ ಆರ್‌ಸಿಬಿ, ಆರ್‌ಸಿಬಿ ಎಂಬ ಕೇಕೆ ಮುಗಿಲು ಮುಟ್ಟಿತ್ತು.

  • ಚೆನ್ನೈ, ರಾಜಸ್ಥಾನದ ಬಳಿಕ ಐಪಿಎಲ್‍ನಿಂದ ಪಂಜಾಬ್ ತಂಡ ಅಮಾನತು?

    ಚೆನ್ನೈ, ರಾಜಸ್ಥಾನದ ಬಳಿಕ ಐಪಿಎಲ್‍ನಿಂದ ಪಂಜಾಬ್ ತಂಡ ಅಮಾನತು?

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಬಳಿಕ ಈಗ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಐಪಿಎಲ್‍ನಿಂದ ಅಮಾನತುಗೊಳ್ಳುವ ಸಾಧ್ಯತೆಯಿದೆ.

    ಪಂಜಾಬ್ ತಂಡದ ಮಾಲೀಕರಾಗಿರುವ ನೆಸ್ ವಾಡಿಯಾ ಜಪಾನ್ ನಲ್ಲಿ ಮಾದಕ ಪದಾರ್ಥಗಳೊಂದಿಗೆ ಸಿಕ್ಕಿಬಿದ್ದು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಸಿಸಿಐ ನೆಸ್ ವಾಡಿಯಾ ಮೇಲಿರುವ ಆರೋಪ ಸಾಬೀತಾದರೆ ಪಂಜಾಬ್ ತಂಡವನ್ನು ನಿಷೇಧಿಸುವ ಸಾಧ್ಯತೆಯಿದೆ.

    ಐಪಿಎಲ್ ಫ್ರಾಂಚೈಸಿ ಮಾಲೀಕರು ಆನ್‍ಫೀಲ್ಡ್ ಮತ್ತು ಆಫ್ ಫೀಲ್ಡ್ ನಿಯಮಗಳನ್ನು ಮೀರುವಂತಿಲ್ಲ. ಒಂದು ವೇಳೆ ಈ ನಿಯಮಗಳನ್ನು ಮೀರಿ ಆರೋಪ ಸಾಬೀತಾಗಿ ದೋಷಿ ಎಂದಾದರೆ ಆ ತಂಡವನ್ನು ಅಮಾನತಿನಲ್ಲಿಡಲು ಬಿಸಿಸಿಐಗೆ ಅಧಿಕಾರವಿದೆ.

    ಈ ಪ್ರಕರಣದ ವಿಚಾರಣೆಗೆ ಬಿಸಿಸಿಐ ಒಂದು ಸಮಿತಿಯನ್ನು ನೇಮಿಸಲಿದ್ದು, ಈ ಸಮಿತಿ  ಒಂಬುಡ್ಸ್‌ಮನ್‌ ಅವರಿಗೆ ವರದಿ ಸಲ್ಲಿಸಲಿದೆ. ಹೀಗಾಗಿ ಈ ಪ್ರಕರಣದಲ್ಲಿ ಬಿಸಿಸಿಐ ನಡೆ ಏನು ಎನ್ನುವ ಕುತೂಹಲ ಹೆಚ್ಚಾಗಿದೆ.

    ಈ ಹಿಂದೆ ಐಪಿಎಲ್ ಮಾಲೀಕರ ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಾಗ ಲೋಧಾ ಸಮಿತಿ ತನಿಖೆ ನಡೆಸಿತ್ತು. ಇದಾದ ಬಳಿಕ ಚೆನ್ನೈ ಮತ್ತು ರಾಜಸ್ಥಾನ ರಾಯಲ್ಸ್ ತಂಡ 2 ವರ್ಷ ನಿಷೇಧ ಶಿಕ್ಷೆ ಅನುಭವಿಸಿತ್ತು.

    ಏನಿದು ಪ್ರಕರಣ?
    ಕಳೆದ ಮಾರ್ಚ್‍ನಲ್ಲಿ ನೆಸ್ ವಾಡಿಯಾ ಪ್ರವಾಸಕ್ಕೆಂದು ಜಪಾನ್‍ಗೆ ತೆರಳಿದ್ದ ವೇಳೆ ತಮ್ಮ ಬಳಿ 25 ಗ್ರಾಂ ಗಾಂಜಾ ಇಟ್ಟುಕೊಂಡಿದ್ದರು. ನ್ಯೂ ಚಿಟೋಸ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಶ್ವಾನಗಳು ಅವರ ಬಳಿಯಿದ್ದ ಗಾಂಜಾವನ್ನು ಪತ್ತೆ ಹಚ್ಚಿತ್ತು. ನಂತರ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು.

    ವಿಚಾರಣೆಯ ಸಂದರ್ಭದಲ್ಲಿ ನಾನು ಸ್ವಂತ ಬಳಕೆಗಾಗಿ ಗಾಂಜಾವನ್ನು ಇಟ್ಟುಕೊಂಡಿದ್ದೆ ಎಂದು ನೆಸ್ ತಿಳಿಸಿದ್ದರು. ಈ ಹೇಳಿಕೆಯನ್ನು ಪುರಸ್ಕರಿಸಿದ ಕೋರ್ಟ್ ನೆಸ್‍ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ ನಿಯಮಗಳ ಅನ್ವಯ ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿತ್ತು. ಹೀಗಾಗಿ ಅವರು ಜೈಲು ಶಿಕ್ಷೆಯಿಂದ ಪಾರಾಗಿ ಭಾರತಕ್ಕೆ ಮರಳಿದ್ದರು.

    ಜಪಾನಿನಲ್ಲಿ ಡ್ರಗ್ಸ್ ಕುರಿತಂತೆ ಕಠಿಣ ಕಾನೂನು ಜಾರಿಯಾಗಿದ್ದು, ದೋಷಿಯಾದರೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಮೊದಲ ಬಾರಿಗೆ ಸಿಕ್ಕಿಬಿದ್ದರೆ ಶಿಕ್ಷೆಯನ್ನು ಅಮಾನತಿನಲ್ಲಿ ಇಡಬಹುದಾಗಿದೆ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ ಶಿಕ್ಷೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತದೆ.

  • ಗಾಯದ ಸಮಸ್ಯೆ ಬಗ್ಗೆ ಧೋನಿ ಪ್ರತಿಕ್ರಿಯೆ

    ಗಾಯದ ಸಮಸ್ಯೆ ಬಗ್ಗೆ ಧೋನಿ ಪ್ರತಿಕ್ರಿಯೆ

    ಚೆನ್ನೈ: ಹಲವು ಸಮಯದಿಂದ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವಕಪ್‍ಗೆ ಹೆಚ್ಚಿನ ಜಾಗೃತಿ ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ತಾವು ಫಿಟ್ ಆಗಿದ್ದರೂ ಕೂಡ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ. ವಿಶ್ವಕಪ್‍ಗೆ ಕೆಲ ದಿನಗಳಷ್ಟೇ ಬಾಕಿ ಇರುವುದರಿಂದ ಈ ತಯಾರಿ ಬಹುಮುಖ್ಯ. ಒಂದೊಮ್ಮೆ ಸಮಸ್ಯೆ ಉಂಟಾದರೆ ಖಂಡಿತವಾಗಿಯೂ ಕೂಡ ವಿರಾಮ ತೆಗೆದುಕೊಳ್ಳುತ್ತೇನೆ ಎಂದು ಹೈದರಾಬಾದ್ ಪಂದ್ಯದ ಬಳಿಕ ಮಾತನಾಡಿದ ಧೋನಿ ಹೇಳಿದ್ದಾರೆ.

    ಇತ್ತೀಚೆಗೆ ಧೋನಿ ಚೆನ್ನೈ ತಂಡದ ಪರ ಒಂದು ಪಂದ್ಯದಲ್ಲಿ ಅಲಭ್ಯರಾಗಿದ್ದರು. 2010ರ ಬಳಿಕ ಚೆನ್ನೈ ತಂಡದ ಪರ ಧೋನಿ ಮೊದಲ ಬಾರಿಗೆ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ ಎಂಬುವುದು ಇಲ್ಲಿ ಗಮನಾರ್ಹವಾಗಿತ್ತು. ಹೈದರಾಬಾದ್ ವಿರುದ್ಧ ಆಡಿದ್ದ ಈ ಪಂದ್ಯದಲ್ಲಿ ತಂಡವನ್ನು ರೈನಾ ಮುನ್ನಡೆಸಿದ್ದರು. ಆದರೆ ಪಂದ್ಯದಲ್ಲಿ ಸಿಎಸ್‍ಕೆ 6 ವಿಕೆಟ್‍ಗಳ ಅಂತರದಿಂದ ಸೋಲುಂಡಿತ್ತು.

    ಗಾಯದ ಸಮಸ್ಯೆಯಿಂದಲೇ ಧೋನಿ ಮುನ್ನೆಚ್ಚರಿಕೆ ವಹಿಸಿ ಪಂದ್ಯದಿಂದ ದೂರ ಉಳಿದಿದ್ದರು. ಈ ವೇಳೆ ಅಭಿಮಾನಿಗಳಲ್ಲಿ ಧೋನಿ ಅವರ ಬಗ್ಗೆ ಸಾಕಷ್ಟು ಆತಂಕ ಎದುರಾಗಿತ್ತು. ವಿಶ್ವಕಪ್ ಸಂದರ್ಭದಲ್ಲಿ ಧೋನಿ ಗಾಯದ ಸಮಸ್ಯೆಗೆ ಸಿಲುಕಿದರೆ ತಂಡಕ್ಕೆ ನಷ್ಟವಾಗುತ್ತದೆ ಎಂಬುವುದು ಹಲವು ಅಭಿಮಾನಿಗಳ ಅಭಿಪ್ರಾಯವಾಗಿದೆ. ಅದ್ದರಿಂದಲೇ ಮತ್ತೆ ಸಮಸ್ಯೆ ಉಲ್ಬಣಿಸಬಹುದು ಎಂಬ ಚರ್ಚೆ ಹೆಚ್ಚು ಕೇಳಿ ಬಂದಿತ್ತು.

  • ಐಪಿಎಲ್ ಫೈನಲ್ ಹೈದರಾಬಾದ್‍ಗೆ ಶಿಫ್ಟ್ ಬೆನ್ನಲ್ಲೇ ಕ್ರೀಡಾಂಗಣಕ್ಕೆ ಹಾನಿ

    ಐಪಿಎಲ್ ಫೈನಲ್ ಹೈದರಾಬಾದ್‍ಗೆ ಶಿಫ್ಟ್ ಬೆನ್ನಲ್ಲೇ ಕ್ರೀಡಾಂಗಣಕ್ಕೆ ಹಾನಿ

    ಹೈದರಾಬಾದ್: ಐಪಿಎಲ್ 2019ನೇ ಆವೃತ್ತಿಯ ಫೈನಲ್ ಪಂದ್ಯವನ್ನು ಆಯೋಜಿಸಲು ಅವಕಾಶ ಪಡೆದ ಬೆನ್ನಲ್ಲೇ ಆಂಧ್ರಪ್ರದೇಶ್ ಕ್ರಿಕೆಟ್ ಸಂಸ್ಥೆಗೆ ಕಹಿ ಅನುಭವ ಆಗಿದ್ದು, ರಭಸದಿಂದ ಬೀಸಿದ ಗಾಳಿಯಿಂದಾಗಿ ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಹಾನಿಯಾಗಿದೆ.

    ಹೈದರಾಬಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಮವಾರ ಸಂಜೆ ಬೀಸಿದ ಗಾಳಿಯಿಂದ ಕ್ರೀಡಾಂಗಣದಲ್ಲಿ ನೆರಳಿನ ವ್ಯವಸ್ಥೆಗೆ ಹಾಕಿದ್ದ ಶೀಟ್‍ಗಳು ಹಾರಿ ಹೋಗಿದೆ. ಸದ್ಯ ಕ್ರೀಡಾಂಗಣದ ಅಧಿಕಾರಿಗಳಿಗೆ 2 ಸಮಸ್ಯೆಗಳು ಎದುರಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆ ಮುಂದುವರಿಯುವ ಸೂಚನೆ ಸಿಕ್ಕಿದ್ದರಿಂದ ಕ್ರೀಡಾಂಗಣದಲ್ಲಿ ಮತ್ತೆ ಹಾನಿಯಾಗದಂತೆ ತಡೆಯುವುದು ಹಾಗೂ ಹಾನಿಯಾಗಿರುವುದನ್ನು ನಿಗದಿತ ಅವಧಿಯ ಒಳಗಡೆ ಸರಿಪಡಿಸುವ ಕಾರ್ಯ ನಡೆಸಬೇಕಿದೆ.

    ಇತ್ತ ಏಪ್ರಿಲ್ 29 ರಂದು ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ನಡುವಿನ ಪಂದ್ಯ ನಡೆಯಲಿದ್ದು, ಮೇ 12 ರಂದು ಫೈನಲ್ ಪಂದ್ಯ ನಡೆಯಲಿದೆ. ಪರಿಣಾಮ ಕ್ರೀಡಾಂಗಣದ ಅಧಿಕಾರಿಗಳಿಗೆ ಪುನರ್ ವ್ಯವಸ್ತೆ ಕಲ್ಪಿಸಲು ಕಡಿಮೆ ಅವಧಿ ಸಿಕ್ಕಿದೆ.

    ಸೋಮವಾರ ಬಿಸಿಸಿಐ ಫೈನಲ್ ಪಂದ್ಯವನ್ನು ಚೆನ್ನೈ ಬದಲಾಗಿ ಹೈದರಾಬಾದ್‍ಗೆ ಶಿಫ್ಟ್ ಮಾಡಿತ್ತು. ಚಿದಂಬರಂ ಸ್ಟೇಡಿಯಂನಲ್ಲಿರುವ ಮೂರು ಕಡೆ ಪ್ರೇಕ್ಷಕರ ಸ್ಟ್ಯಾಂಡ್ ಗಳಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ತಮಿಳುನಾಡು ಕ್ರಿಕೆಟ್ ಸಂಸ್ಥೆ ವಿಫಲವಾಗಿತ್ತು. ಪರಿಣಾಮ ಬಿಸಿಸಿಐ ಅನಿವಾರ್ಯವಾಗಿ ಈ ಬಾರಿ ಫೈನಲ್ ಪಂದ್ಯವನ್ನು ಹೈದರಾಬಾದಿಗೆ ಶಿಫ್ಟ್ ಮಾಡಿತ್ತು.