Tag: IPL

  • ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಗೆಲುವಿನ ಹತ್ತಿರ ತಂದ ವಾಟ್ಸನ್ ನೋವಿನ ಕಥೆ ಬಿಚ್ಚಿಟ್ಟ ಭಜ್ಜಿ!

    ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಗೆಲುವಿನ ಹತ್ತಿರ ತಂದ ವಾಟ್ಸನ್ ನೋವಿನ ಕಥೆ ಬಿಚ್ಚಿಟ್ಟ ಭಜ್ಜಿ!

    ಬೆಂಗಳೂರು: ಮುಂಬೈ ವಿರುದ್ಧ ಐಪಿಎಲ್ ಫೈನಲ್ ಪಂದ್ಯದ ವೇಳೆ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದ ವಾಟ್ಸನ್ ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಬ್ಯಾಟ್ ಮಾಡಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇನ್‍ಸ್ಟಾ ಗ್ರಾಮ್ ನಲ್ಲಿ ವಾಟ್ಸನ್ ಬ್ಯಾಟ್ ಬೀಸುತ್ತಿರುವ ಫೋಟೋ ಹಾಕಿ, ವಾಟ್ಸನ್ ಅವರ ಮೊಣಕಾಲಿನಲ್ಲಿ ರಕ್ತ ಬರುತ್ತಿರುವುದನ್ನು ನೀವು ಗಮನಿಸಿದ್ದೀರಾ? ಆಟ ಮುಗಿದ ಬಳಿಕ 6 ಸ್ಟಿಚ್ ಗಳನ್ನು ಹಾಕಲಾಗಿದೆ. ಡೈವ್ ಮಾಡುವಾಗ ಕಾಲಿಗೆ ಪೆಟ್ಟಾಗಿದ್ದು, ಈ ವಿಚಾರವನ್ನು ಯಾರಿಗೂ ಹೇಳದೇ ಆಟವಾಡಿ ಪಂದ್ಯವನ್ನು ಗೆಲುವಿನ ಸಮೀಪ ತಂದಿದ್ದರು. ಇದು ನಮ್ಮ ಶೇನ್ ವಾಟ್ಸನ್ ಎಂದು ಬರೆದು ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಭಜ್ಜಿ 5 ಸ್ಟಾರ್ ನೀಡಿ ವಾಟ್ಸನ್ ಆಟವನ್ನು ಹೊಗಳಿದ್ದಾರೆ.

    ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಗೊಂಡಾಗ ಯಾರಿಂದಲೂ ಸ್ಪಷ್ಟನೆ ಸಿಗದ ಕಾರಣ ಇದು ನಕಲಿ ಫೋಟೋ, ಫೋಟೋ ಶಾಪ್ ಮಾಡಲಾಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈಗ ಹರ್ಭಜನ್ ಅವರೇ ಸ್ಪಷ್ಟನೆ ನೀಡಿದ ಬಳಿಕ ಎದ್ದಿದ್ದ ಎಲ್ಲ ಅಂತೆ ಕಂತೆಗಳ ಸುದ್ದಿಗೆ ತೆರೆ ಬಿದ್ದಿದೆ.

    150 ರನ್ ಗಳ ಸವಾಲು ಪಡೆದ ಚೆನ್ನೈ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದ ವಾಟ್ಸನ್ ತಂಡದ ಮೊತ್ತ  146 ರನ್ ಆಗಿದ್ದಾಗ ಪಂದ್ಯದ ಕೊನೆ ಓವರಿನ 4ನೇ ಎಸೆತದಲ್ಲಿ ಎರಡು ರನ್ ಕದಿಯಲು ಹೋಗಿ ರನೌಟ್ ಆಗಿದ್ದರು.

    ಮಾಲಿಂಗ ಎಸೆದ 16ನೇ ಓವರ್ ವಾಟ್ಸನ್ ಹ್ಯಾಟ್ರಿಕ್ ಫೋರ್ ಹೊಡೆದಿದ್ದರೆ, ನಂತರ ಕೃನಾಲ್ ಪಾಂಡ್ಯ ಎಸೆದ ಓವರಿನಲ್ಲಿ ವಾಟ್ಸನ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದರು. ಅಂತಿಮವಾಗಿ 80 ರನ್(59 ಎಸೆತ, 8 ಬೌಂಡರಿ, 4 ಸಿಕ್ಸರ್) ಸಿಡಿಸಿ ವಾಟ್ಸನ್ ಔಟ್ ಆದರು.

    ವಾಟ್ಸನ್ ಕ್ರೀಸಿನಲ್ಲಿ ಇರುವವರೆಗೂ ಚೆನ್ನೈ ತಂಡ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಕೊನೆಯ ಓವರಿನಲ್ಲಿ 9 ರನ್ ಗಳಿಸುವ ಒತ್ತಡದಲ್ಲಿದ್ದಾಗ ವಾಟ್ಸನ್ ಕಾಲು ನೋವಿನ ನಡುವೆಯೂ 2 ರನ್ ಕದಿಯಲು ಮುಂದಾದಾಗ ರನೌಟ್ ಆಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.

  • ಸೋತಿದ್ದಕ್ಕೆ ಕಣ್ಣೀರಿಟ್ಟು ಒದ್ದಾಡಿದ ಸಿಎಸ್‍ಕೆ ಅಭಿಮಾನಿ – ವಿಡಿಯೋ ನೋಡಿ

    ಸೋತಿದ್ದಕ್ಕೆ ಕಣ್ಣೀರಿಟ್ಟು ಒದ್ದಾಡಿದ ಸಿಎಸ್‍ಕೆ ಅಭಿಮಾನಿ – ವಿಡಿಯೋ ನೋಡಿ

    ಬೆಂಗಳೂರು: 2019 ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಮ್ಯಾಚ್ ಸೋತಿದ್ದಕ್ಕೆ ಮನೆಯಲ್ಲಿ ಕೂತು ಪಂದ್ಯ ನೋಡುತ್ತಿದ್ದ ಸಿಎಸ್‍ಕೆ ತಂಡದ ಅಭಿಮಾನಿಯೊಬ್ಬ ಕಣ್ಣೀರಿಟ್ಟು, ಕೆಳಗೆ ಬಿದ್ದು ಒದ್ದಾಡಿದ್ದಾನೆ.

    ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ವಿರುದ್ಧ ಸೋಲುತ್ತಿದ್ದಂತೆ ಮಮ್ಮಿ ಮಮ್ಮಿ ಅಂತಾ ಅಳುವ ಬಾಲಕ, ನಂತರ ಕೆಳಗೆ ಬಿದ್ದು ಒದ್ದಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾಲಕನ ಅಳುವಿನ ವಿಡಿಯೋ ವೈರಲ್ ಆಗಿದೆ.

    ಈ ವಿಡಿಯೋ ಬಗ್ಗೆ ಎಲ್ಲಿ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಇತ್ತೀಚೆಗೆ ತಮ್ಮ ತಂಡದ ಅಭಿಮಾನಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದ ಧೋನಿ, ನನಗೆ ‘ತಾಲಾ’ ಎಂಬ ಬಿರುದು ನೀಡಿದ್ದು ಅಪಾರ ಸಂತಸ ತಂದಿದೆ. ಅಭಿಮಾನಿಗಳು ನಾನು ಆಡುವಾಗ ತಾಲಾ ಎಂದೇ ಕರೆಯುತ್ತಾರೆ. ಟಿವಿ ಮೂಲಕ ಸಾಕಷ್ಟು ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸುತ್ತಾರೆ. ಅವರಿಂದ ನನಗೆ ಸಿಕ್ಕ ಗೌರವ ಇದಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

    https://www.youtube.com/watch?v=BLEeoj8hGJw

  • ನಿಜವಾಗಿ ಧೋನಿಯ ರನೌಟ್ ಆಗಿದ್ರಾ – ಪಂದ್ಯಕ್ಕೆ ತಿರುವು ಕೊಟ್ಟ 2 ನಿಮಿಷದ ವಿಡಿಯೋ ನೋಡಿ

    ನಿಜವಾಗಿ ಧೋನಿಯ ರನೌಟ್ ಆಗಿದ್ರಾ – ಪಂದ್ಯಕ್ಕೆ ತಿರುವು ಕೊಟ್ಟ 2 ನಿಮಿಷದ ವಿಡಿಯೋ ನೋಡಿ

    ಹೈದಾರಬಾದ್: ಮುಂಬೈ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಆಗದೇ ಇದ್ದರೆ ಚೆನ್ನೈ ಚಾಂಪಿಯನ್ ಆಗಿ ಹೊರ ಹೊಮ್ಮುತಿತ್ತಾ ಎನ್ನುವ ಚರ್ಚೆ ಈಗ ಜೋರಾಗಿದೆ.

    ಹೌದು. 12.3ನೇ ಓವರ್ ನಲ್ಲಿ ಚೆನ್ನೈ ತಂಡ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿ ಸುಭದ್ರವಾಗಿತ್ತು. ಹಾರ್ದಿಕ್ ಪಾಂಡ್ಯ ಎಸೆದ 13ನೇ ಓವರಿನ 4 ಎಸೆತವನ್ನು ವಾಟ್ಸನ್ ಎಡಗಡೆ ಹೊಡೆದು ಸಿಂಗಲ್ ರನ್ ಓಡಿದರು. ಈ ವೇಳೆ ಮಾಲಿಂಗ ಸರಿಯಾಗಿ ಪಾಂಡ್ಯ ಅವರ ಕೈಗೆ ಥ್ರೋ ಮಾಡದ ಕಾರಣ ಧೋನಿ ಮತ್ತೊಂದು ರನ್ ಗಾಗಿ ಓಡಿದರು.

    ಈ ಸಂದರ್ಭದಲ್ಲಿ ಬಾಲ್ ಮಿಡ್ ಆಫ್ ನಲ್ಲಿ ಫೀಲ್ಡ್ ಮಾಡುತ್ತಿದ್ದ ಇಶಾನ್ ಕಿಶನ್ ಕೈ ಸೇರಿತ್ತು. ಕೂಡಲೇ ಅವರು ನೇರವಾಗಿ ವಿಕೆಟ್‍ಗೆ ಥ್ರೋ ಮಾಡಿ ಬೇಲ್ಸ್ ಹಾರಿಸಿದರು. ಬಹಳ ಕಷ್ಟದ ತೀರ್ಮಾನ ಮೂರನೇ ಅಂಪೈರ್ ನಿಗೆಲ್ ಲಾಂಗ್ ಹಲವು ಕೋನಗಳಿಂದ ಪರಿಶೀಲಿಸಿ ಕೊನೆಗೆ 2 ರನ್ ಗಳಿಸಿದ್ದ ಧೋನಿ ಔಟ್ ಎಂದು ತೀರ್ಪು ನೀಡಿದರು.

    ಬ್ಯಾಟ್ ಮೂಲಕ ಕ್ರೀಸ್ ಮುಟ್ಟುತ್ತಿದ್ದಾಗ ವಿಕೆಟಿನಲ್ಲಿರುವ ದೀಪ ಮೊಳಗಿದ ಹಿನ್ನೆಲೆಯಲ್ಲಿ ಈ ತೀರ್ಪಿನ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಧೋನಿ ಔಟ್ ಆಗದೇ ಇದ್ದರೂ ಮೂರನೇ ಅಂಪೈರ್ ತಪ್ಪು ನಿರ್ಧಾರ ಪ್ರಕಟಿಸಿದ್ದಾರೆ ಎಂದು ಧೋನಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

    https://twitter.com/Atheist_Krishna/status/1127818025128714241

    ವೀಕ್ಷಕ ವಿವರಣೆಗಾರರು ಟಿವಿ ರಿಪ್ಲೇ ಪ್ರಸಾರಗೊಂಡ ಆರಂಭದಲ್ಲಿ ಧೋನಿ ಸೇಫ್ ಎಂದೇ ಹೇಳಿದ್ದರು. ನಂತರ ಇದು ಬಹಳ ಕ್ಲಿಷ್ಟಕರ ಸನ್ನಿವೇಶ. ಇಡೀ ಫಲಿತಾಂಶವನ್ನು ಬದಲಾಯಿಸಬಲ್ಲ ತೀರ್ಪು ಇದಾಗಬಹುದು ಎಂದು ಊಹಿಸಿದ್ದರು. ಹೀಗಾಗಿ ಈ ತೀರ್ಪು ಪ್ರಕಟಿಸಲು ಅಂಪೈರ್ 2 ನಿಮಿಷ ತೆಗೆದುಕೊಂಡು ಅಂತಿಮವಾಗಿ ಔಟ್ ಎಂದು ಪ್ರಕಟಿಸಿದರು.

    ಒಂದು ವೇಳೆ ಧೋನಿ ಔಟಾಗದೇ ಇದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತಿತ್ತು. ಈ ಬಾರಿ ಧೋನಿ ಅದೃಷ್ಟ ಕೈ ಕೊಟ್ಟಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಕೆಲವರು ಅಂಪೈರ್ ಸಹಾಯದಿಂದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದೆ ಎಂದು ಬರೆದು ನಿಗೆಲ್ ಲಾಂಗ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

  • ಸಿಂಪಲ್ ಸುನಿಗೆ ನೀತಾ ಅಂಬಾನಿ ಸೀಕ್ರೆಟ್ ತಿಳಿಯಬೇಕಂತೆ

    ಸಿಂಪಲ್ ಸುನಿಗೆ ನೀತಾ ಅಂಬಾನಿ ಸೀಕ್ರೆಟ್ ತಿಳಿಯಬೇಕಂತೆ

    ಬೆಂಗಳೂರು: ಐಪಿಎಲ್ 12ನೇ ಆವೃತ್ತಿಗೆ ಭಾನುವಾರ ತೆರೆಬಿದ್ದಿದೆ. ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟು ಸಂಭ್ರಮದಲ್ಲಿ ಮುಳುಗಿದೆ. ಮುಂಬೈ ಇಂಡಿಯನ್ಸ್ ಗೆಲುವಿನ ಬಳಿಕ ಎಲ್ಲರೂ ತಂಡಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸಹ ತಮ್ಮ ಟ್ವಟ್ಟರ್ ನಲ್ಲಿ ಶುಭಾಶಯ ತಿಳಿಸಿ, ತಂಡದ ಒಡತಿ ನೀತಾ ಅಂಬಾನಿ ಪೂಜಿಸುವ ಆ ದೇವರ ಬಗ್ಗೆ ತಿಳಿಯಬೇಕೆಂಬ ಆಸೆಯನ್ನು ಹೊರಹಾಕಿದ್ದಾರೆ.

    ಇತ್ತೀಚೆಗೆ ಮುಂಬೈ ಇಂಡಿಯನ್ಸ್ ತಂಡದ ಒಡತಿ ನೀತಾ ಅಂಬಾನಿ ಸ್ಟೇಡಿಯಂನಲ್ಲಿ ದೇವರಲ್ಲಿ ಪ್ರಾರ್ಥಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವಿಡಿಯೋಗೆ ಹಲವರು ನೀತಾ ಅಂಬಾನಿ ಪೂಜಿಸುವ ದೇವರನ್ನು ನಾವು ಪ್ರಾರ್ಥನೆ ಮಾಡಿ ಶ್ರೀಮಂತರಾಗುತ್ತೇವೆ ಎಂದು ಟ್ರೋಲ್ ಮಾಡಿದ್ದರು. ಅದೇ ವಿಡಿಯೋಗೆ ಸಂಬಂಧಿಸಿದಂತೆ ಸಿಂಪಲ್ ಸುನಿ, ಟ್ವಿಟ್ಟರ್ ನಲ್ಲಿ ನಾಲ್ಕು ಬಾರಿ ಮುಂಬೈ ಇಂಡಿಯನ್ಸ್ ಗೆ ಶುಭಾಶಯಗಳು ಎಂದು ಬರೆದು, ನೀತಾ ಅಂಬಾನಿ ಪೂಜಿಸುವ ಆ ದೇವರ ಬಗ್ಗೆ ತಿಳಿಯಬೇಕೆಂಬ ಎಂದು ಬರೆದುಕೊಂಡಿದ್ದಾರೆ.

    ಭಾನುವಾರ ನಡೆದ ಫೈನಲ್‍ನಲ್ಲಿ ಮುಂಬೈ ಚೆನ್ನೈ ತಂಡದ ವಿರುದ್ಧ 1 ರನ್‍ಗಳ ರೋಚಕ ಜಯವನ್ನು ಪಡೆದುಕೊಂಡಿತ್ತು. 150 ರನ್‍ಗಳ ಗುರಿ ಪಡೆದ ಚೆನ್ನೈ ತಂಡವನ್ನು 149 ರನ್‍ಗಳಿಗೆ ಕಟ್ಟಿ ಹಾಕಿ ನಾಲ್ಕನೇಯ ಬಾರಿ ಟ್ರೋಫಿಯನ್ನು ಗೆದ್ದುಕೊಂಡಿತು.

  • ಮುಂದಿನ ಐಪಿಎಲ್‍ನಲ್ಲಿ ಆಡ್ತೀರಾ – ಪ್ರಶ್ನೆಗೆ ಉತ್ತರ ಕೊಟ್ಟ ಧೋನಿ

    ಮುಂದಿನ ಐಪಿಎಲ್‍ನಲ್ಲಿ ಆಡ್ತೀರಾ – ಪ್ರಶ್ನೆಗೆ ಉತ್ತರ ಕೊಟ್ಟ ಧೋನಿ

    ಹೈದರಾಬಾದ್: ಐಪಿಎಲ್ ಯಶಸ್ವಿ ನಾಯಕ ಎಂಎಸ್ ಧೋನಿ ಮುಂದಿನ ವರ್ಷ ನಾಯಕನಾಗಿ ಚೆನ್ನೈ ತಂಡವನ್ನು ಮುನ್ನಡೆಸುತ್ತಾರಾ ಎನ್ನುವ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.

    ಪಂದ್ಯ ಮುಗಿದ ಬಳಿಕ ವೀಕ್ಷಕ ವಿವರಣೆಗಾರ ಸೈಮನ್ ಡೌಲ್ ಮುಂದಿನ ವರ್ಷ ಐಪಿಎಲ್ ಆಡುತ್ತೀರಾ ಎನ್ನುವ ಪ್ರಶ್ನೆಗೆ “ಹೌದು. ನಾನು ಆಶಾವಾದವನ್ನು ಇಟ್ಟುಕೊಂಡಿದ್ದೇನೆ” ಎಂದು ಉತ್ತರಿಸಿದ್ದಾರೆ.

    37 ವರ್ಷದ ಧೋನಿ ವಿಶ್ವಕಪ್ ಬಳಿಕ ಎಲ್ಲ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತರಾಗಲಿದ್ದಾರೆ. ಹೀಗಾಗಿ 2019ರ ಐಪಿಎಲ್‍ನಲ್ಲಿ ಧೋನಿ ಕೊನೆಯ ಬಾರಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಹೀಗಾಗಿ ಧೋನಿ ಅವರ ಜೊತೆಯೇ ಈ ಪ್ರಶ್ನೆಯನ್ನು ಕೇಳಲಾಗಿತು.

    ತಂಡವಾಗಿ ನಮಗೆ ಇದೊಂದು ಉತ್ತಮ ಅನುಭವ. ಫೈನಲ್ ವರೆಗೆ ನಾವು ತಲುಪಿದ್ದು ಹೇಗೆ ಎನ್ನುವ ಬಗ್ಗೆ ಒಂದು ಅವಲೋಕನ ಮಾಡಬೇಕು. ಐಪಿಎಲ್ ಬಳಿಕ ವಿಶ್ವಕಪ್‍ಗೆ ನಾವು ತಯಾರಾಗಬೇಕಿದೆ. ನನ್ನ ಮುಂದಿನ ಆದ್ಯತೆ ವಿಶ್ವಕಪ್ ಎಂದು ಈ ವೇಳೆ ಧೋನಿ ಹೇಳಿದರು.

    2014-15 ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಭಾರತ 2-0 ಅಂತರದಿಂದ ಟೆಸ್ಟ್ ಸರಣಿ ಸೋತಿತ್ತು. ಮೂರನೇ ಪಂದ್ಯ ಡ್ರಾಗೊಂಡ ಬಳಿಕ ಧೋನಿ ದಿಢೀರ್ ಆಗಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು.

  • ಬ್ಯಾಟ್ ಮೇಲಕ್ಕೆ ಎಸೆದು ವೈಡ್ ಗೆರೆಯಲ್ಲಿ ನಿಂತಿದ್ದಕ್ಕೆ ಪೋಲಾರ್ಡ್‌ಗೆ ದಂಡ!

    ಬ್ಯಾಟ್ ಮೇಲಕ್ಕೆ ಎಸೆದು ವೈಡ್ ಗೆರೆಯಲ್ಲಿ ನಿಂತಿದ್ದಕ್ಕೆ ಪೋಲಾರ್ಡ್‌ಗೆ ದಂಡ!

    ಹೈದರಾಬಾದ್: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕೀರಾನ್ ಪೋಲಾರ್ಡ್ ಆನ್ ಫೀಲ್ಡ್ ನಲ್ಲಿ ತೋರಿದ ವರ್ತನೆಗೆ ಪಂದ್ಯದ ರೆಫ್ರೀ ಪಂದ್ಯದ ಶೇ.25 ರಷ್ಟು ಶುಲ್ಕವನ್ನು ದಂಡ ವಿಧಿಸಿದ್ದಾರೆ.

    ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದ ಮುಂಬೈ ಇನ್ನಿಂಗ್ಸ್ ನ ಅಂತಿಮ ಓವರಿನಲ್ಲಿ ಘಟನೆ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾವೋ ಬೌಲ್ ಮಾಡಿದ್ದರು. ಈ ಹಂತದಲ್ಲಿ ಮೊದಲ 2 ಎಸೆತಗಳು ಡಾಟ್ ಆಗಿದ್ದು, ಆದರೆ 3ನೇ ಎಸೆತ ವೈಡ್ ಎಂದು ಭಾವಿಸಿ ಹೊಡೆಯದೇ ಬಿಟ್ಟಿದ್ದರು. ಆದರೆ ಅಂಪೈರ್ ವೈಡ್ ಘೋಷಿಸಿರಲಿಲ್ಲ. ಇದಕ್ಕೆ ಅಸಮಾಧಾನಗೊಂಡ ಪೋಲಾರ್ಡ್ ಬ್ಯಾಟನ್ನು ಮೇಲಕ್ಕೆ ಎಸೆದು ಸಿಟ್ಟು ಹೊರ ಹಾಕಿದ್ದರು.

    4ನೇ ಎಸೆತದ ವೇಳೆ ಪೋಲಾರ್ಡ್ ಆಫ್ ಸೈಡ್ ವೈಡ್ ಗೆರೆ ಬಳಿ ಬ್ಯಾಟ್ ಹಿಡಿದು ನಿಂತಿದ್ದರು. ಬ್ರಾವೋ ಬೌಲಿಂಗ್ ಮಾಡುವ ವೇಳೆ ಬ್ಯಾಟಿಂಗ್ ತಯಾರಾಗಿ ನಿಂತು ಕೊನೆ ಕ್ಷಣದಲ್ಲಿ ಕ್ರೀಸಿನಿಂದ ಹೊರ ನಡೆದಿದ್ದರು. ಈ ವರ್ತನೆಯನ್ನು ನೋಡಿದ ಇಬ್ಬರು ಅಂಪೈರ್ ಪೊಲಾರ್ಡ್ ಬಳಿ ಬಂದು ಮಾತುಕತೆ ನಡೆಸಿದ್ದರು.

    ಅಂಪೈರ್ ನಿರ್ಧಾರದ ವಿರುದ್ಧ ನಡೆದುಕೊಂಡ ಪರಿಣಾಮ ರೆಫ್ರಿ ಪಂದ್ಯದ ಶೇ.25 ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿದ್ದಾರೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಪೋಲಾರ್ಡ್ ಲೆವಲ್ 1 ನಿಯಮವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆದ್ದರಿಂದಲೇ ಈ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  • ಕೊನೆಯ ಎಸೆತದಲ್ಲಿ ಮುಂಬೈ ಐಪಿಎಲ್ ಚಾಂಪಿಯನ್!

    ಕೊನೆಯ ಎಸೆತದಲ್ಲಿ ಮುಂಬೈ ಐಪಿಎಲ್ ಚಾಂಪಿಯನ್!

    ಹೈದರಾಬಾದ್: ಕೊನೆಯ ಓವರಿನ ಕೊನೆಯ ಎಸೆತದಲ್ಲಿ ವೇಗದ ಬೌಲರ್ ಲಸಿತ್  ಮಾಲಿಂಗ ಶಾರ್ದೂಲ್ ಠಾಕೂರ್ ಅವರನ್ನು ಎಲ್‍ಬಿ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. 150 ರನ್‍ಗಳ ಗುರಿ ಪಡೆದ ಚೆನ್ನೈ ತಂಡವನ್ನು 149 ರನ್‍ಗಳಿಗೆ ಕಟ್ಟಿ ಹಾಕುವ ಮೂಲಕ ಮುಂಬೈ ತಂಡ 1 ರನ್‍ಗಳ ರೋಚಕ ಗೆಲುವನ್ನು ಪಡೆದುಕೊಂಡಿದೆ.

    150 ರನ್ ಗಳ ಗುರಿಯನ್ನು ಪಡೆದ ಚೆನ್ನೈ ತಂಡಕ್ಕೆ ಕೊನೆಯ ಓವರ್ ನಲ್ಲಿ 9 ರನ್ ಬೇಕಿತ್ತು. ಮಾಲಿಂಗ ಎಸೆದ ಮೊದಲ ಎರಡು ಎಸೆತದಲ್ಲಿ ಎರಡು ರನ್ ಮೂರನೇ ಎಸೆತದಲ್ಲಿ 2 ರನ್ ಬಂತು. ಕೊನೆಯ ಮೂರು ಎಸೆತದಲ್ಲಿ 5 ರನ್ ಗಳಿಸುವ ಒತ್ತಡದಲ್ಲಿದ್ದಾಗ ವಾಟ್ಸನ್ ಎರಡು ರನ್ ಕದಿಯಲು ಹೋಗಿ ರನೌಟ್ ಆದರು.

    ಇಲ್ಲಿಯವರೆಗೆ ಚೆನ್ನೈ ಪರ ಇದ್ದ ಪಂದ್ಯ ಮುಂಬೈ ಕಡೆ ವಾಲಿತು. ಕೊನೆಯ ಎರಡು ಎಸೆತದಲ್ಲಿ 4 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ ಕ್ರೀಸ್‍ನಲ್ಲಿ ಶಾರ್ದೂಲ್ ಠಾಕೂರ್ 5ನೇ ಎಸೆತದಲ್ಲಿ ಎರಡು ರನ್ ಗಳಿಸಿದರು. ಈಗ ಪಂದ್ಯ ಟೈ ಆಗಿ ಸೂಪರ್ ಓವರಿಗೆ ಹೋಗುತ್ತಾ ಎನ್ನುವ ವಿಶ್ಲೇಷಣೆ ಕೇಳಿಬಂತು. ಎರಡು ತಂಡಗಳ ಅಭಿಮಾನಿಗಳ ಪ್ರಾರ್ಥನೆ ಜೋರಾಗಿತ್ತು. ಆದರೆ ಕೊನೆಯ ಎಸೆತವನ್ನು ವಿಕೆಟ್‍ಗೆ ಹಾಕುವ ಮೂಲಕ ಮಾಲಿಂಗ ಶಾರ್ದೂಲ್ ಠಾಕೂರ್ ಅವರನ್ನು ಎಲ್‍ಬಿ ಬಲೆಗೆ ಬೀಳಿಸಿದರು. ಈ ಮೂಲಕ ಮುಂಬೈ ಫೈನಲ್ ಸೇರಿದಂತೆ ಈ ಐಪಿಎಲ್‍ನಲ್ಲಿ ನಾಲ್ಕನೇಯ ಬಾರಿ ಚೆನ್ನೈ ತಂಡವನ್ನು ಸೋಲಿಸಿತು.

    16ನೇ ಓವರ್ ನಲ್ಲಿ ಬ್ರಾವೋ ಸಿಕ್ಸರ್ ಸಿಡಿಸಿದರೆ ವಾಟ್ಸನ್ ಹ್ಯಾಟ್ರಿಕ್ ಫೋರ್ ಹೊಡೆದಿದ್ದರು. ಮಾಲಿಂಗ ಎಸೆದ ಈ ಓವರ್‍ನಲ್ಲಿ ಚೆನ್ನೈ ತಂಡ 20 ರನ್ ಗಳಿಸಿತ್ತು. ನಂತರ ಕೃನಾಲ್ ಪಾಂಡ್ಯ ಎಸೆದ ಓವರಿನಲ್ಲಿ ವಾಟ್ಸನ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದರು. 19ನೇ ಓವರ್ ನಲ್ಲಿ ಬೂಮ್ರಾ ರನ್ ನಿಯಂತ್ರಿಸಿದರು. ಈ ಓವರ್ ನಲ್ಲಿ ಬ್ರಾವೋರನ್ನು ಔಟ್ ಮಾಡುವುದರ ಜೊತೆಗೆ 9 ರನ್ ನೀಡಿದರು. 4 ಓವರ್ ಗಳಲ್ಲಿ ಬುಮ್ರಾ 14 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಮುಂಬೈ ಗೆಲುವಿಗೆ ಸಹಕಾರಿಯಾದರು. 19ನೇ ಓವರ್ ನಲ್ಲಿ ಕೀಪರ್ ಕ್ವಿಂಟನ್ ಡಿ ಕಾಕ್ ಕೈಗೆ ಬಾಲ್ ಸಿಗದ ಕಾರಣ ಬೈ ರೂಪದಲ್ಲಿ 4 ರನ್ ಚೆನ್ನೈ ತಂಡಕ್ಕೆ ಸಿಕ್ಕಿತ್ತು.

    ಆರಂಭಿಕನಾಗಿ ಬಂದು ಕೊನೆಯ ಓವರ್ ನಲ್ಲಿ ಔಟಾದ ವಾಟ್ಸನ್ 80 ರನ್(59 ಎಸೆತ, 8 ಬೌಂಡರಿ, 4 ಸಿಕ್ಸರ್) ಹೊಡೆದು ರನೌಟ್ ಆದರೆ ಡು ಪ್ಲೆಸಿಸ್ 26 ರನ್ ಹೊಡೆದು ಔಟಾದರು. ಧೋನಿ ಅನಗತ್ಯ ಎರಡು ರನ್ ಕದಿಯಲು ಹೋಗಿ ರನೌಟ್ ಆಗಿದ್ದು ಚೆನ್ನೈ ತಂಡಕ್ಕೆ ಮುಳುವಾಯಿತು. ಅಂತಿಮವಾಗಿ ಚೆನ್ನೈ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು.

    ಸಾಧಾರಣ ಮೊತ್ತ:
    ಮುಂಬೈ ತಂಡದ ಆರಂಭ ಉತ್ತಮವಾಗಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‍ಮನ್‍ಗಳು ಬಿರುಸಿನ ಆಟಕ್ಕೆ ಮುಂದಾಗದ ಕಾರಣ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಮುಂಬೈ ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಕ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್‍ಗೆ 4.5 ಓವರ್ ಗಳಲ್ಲಿ 45 ರನ್ ಹೊಡೆದಿದ್ದರು. 3 ಎಸೆತಗಳ ಅಂತರದಲ್ಲಿ ಇವರಿಬ್ಬರು ಔಟಾದ ಕಾರಣ ರನ್ ವೇಗಕ್ಕೆ ಕಡಿವಾಣ ಬಿತ್ತು.

    ಕಾಕ್ 29 ರನ್(17 ಎಸೆತ, 4 ಸಿಕ್ಸರ್) ರೋಹಿತ್ ಶರ್ಮಾ 15 ರನ್, ಇಶಾನ್ ಕೃಷ್ಣನ್ 23 ರನ್ ಹೊಡೆದರು. ಕೊನೆಯಲ್ಲಿ ಕೀರನ್ ಪೊಲಾರ್ಡ್ ಔಟಾಗದೇ 41 ರನ್(25 ಎಸೆತ, 3 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ ಹಾರ್ದಿಕ್ ಪಾಂಡ್ಯ 16 ರನ್(10 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

    ದೀಪಕ್ ಚಹರ್ ಒಂದು ಮೇಡನ್ ಓವರ್ 26 ರನ್ ನೀಡಿ 3 ವಿಕೆಟ್ ಪಡೆದರೆ, ಇಮ್ರಾನ್ ತಾಹೀರ್ 23 ರನ್ ರನ್ ನೀಡಿ 2 ವಿಕೆಟ್ ಕಿತ್ತರು. ಶಾರ್ದೂಲ್ ಠಾಕೂರ್ 37 ರನ್ ನೀಡಿ 2 ವಿಕೆಟ್ ಪಡೆದರು.

  • ಆನ್‌ಫೀಲ್ಡ್‌ನಲ್ಲಿ ರೈನಾ ನಡೆಗೆ ನೆಟ್ಟಿಗರ ಮೆಚ್ಚುಗೆ

    ಆನ್‌ಫೀಲ್ಡ್‌ನಲ್ಲಿ ರೈನಾ ನಡೆಗೆ ನೆಟ್ಟಿಗರ ಮೆಚ್ಚುಗೆ

    ಹೈದರಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ರಿಷಬ್ ಪಂತ್ ಶೂ ಲೇಸ್ ಕಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಟೂರ್ನಿಯಲ್ಲಿ ಡೆಲ್ಲಿ ತಂಡದ ಪರ ಉತ್ತಮ ಪ್ರದರ್ಶನ ತೋರಿದ ರಿಷಬ್ ಎದುರಾಳಿಗಳಿಗೆ ತಮ್ಮ ಬ್ಯಾಟಿಂಗ್‍ನಿಂದ ಕಾಡಿದ್ದರು. ಚೆನ್ನೈ ವಿರುದ್ಧದ ನಿರ್ಣಯಕ ಪಂದ್ಯದಲ್ಲೂ ಕೂಡ ರಿಷಬ್ ಏಕಾಂಗಿ ಹೋರಾಟ ನಡೆಸಿದ್ದರು. ಈ ಹಂತದಲ್ಲಿ ರಿಷಬ್‍ರ ಶೂ ಲೇಸ್ ಕಳಚಿಕೊಂಡಿತ್ತು. ಇದನ್ನು ಕಂಡ ರೈನಾ ಪಂತ್ ಬಳಿ ಬಂದು ಶೂ ಲೇಸ್ ಕಟ್ಟಿದ್ದರು.

    ಈ ವಿಡಿಯೋವನ್ನು ಐಪಿಎಲ್ ಟ್ಟಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದ್ದು, ಕ್ರೀಡಾಸ್ಫೂರ್ತಿಯನ್ನು ಮೆರೆದ ರೈನಾ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಪಂದ್ಯದಲ್ಲೂ ಕ್ರಿಸ್‍ಗೆ ಬರುತ್ತಿದ್ದ ರೈನಾರನ್ನು ಅಡ್ಡಪಡಿಸಿ ಪಂತ್ ಕಾಲೆಳೆದಿದ್ದರು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಇಬ್ಬರ ಆಟಗಾರರ ನಡುವೆ ಇರುವ ಬಾಂಧವ್ಯವನ್ನು ಮೆಚ್ಚಿ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

    ಇತ್ತ ಪಂದ್ಯದಲ್ಲಿ ಡೆಲ್ಲಿ ಸೋಲು ಕಂಡರೂ ಕೂಡ ಟೂರ್ನಿಯಲ್ಲಿ ಯುವ ಆಟಗಾರ ರಿಷಬ್ ಪಂತ್‍ರ ಬ್ಯಾಟಿಂಗ್ ಕುರಿತು ಹಲವು ಹಿರಿಯ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿರಿಯ ಆಟಗಾರ ಸಂಜಯ್ ಮಂಜ್ರೇಕರ್ ಅವರು ಪಂತ್‍ರ ಗುಣಗಾನ ಮಾಡಿದ್ದು, ಪ್ರಸಕ್ತ ತಲೆಮಾರಿನ ಸೆಹ್ವಾಗ್ ಎಂದಿದ್ದಾರೆ. ಇತ್ತ ಸೆಹ್ವಾಗ್ ಕೂಡ ಪಂತ್‍ರನ್ನು ಹೊಗಳಿದ್ದು, ‘ಗೇಮ್ ಚೇಂಜಿಂಗ್’ ಆಟಗಾರ ಎಂದು ಕರೆದಿದ್ದಾರೆ.

    https://twitter.com/Rastogi3Sapna/status/1126901981488996353

  • ಕ್ರೀಡಾಂಗಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಎಸ್‌ಆರ್‌ಎಚ್ ಕೋಚ್ -ವಿಡಿಯೋ

    ಕ್ರೀಡಾಂಗಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಎಸ್‌ಆರ್‌ಎಚ್ ಕೋಚ್ -ವಿಡಿಯೋ

    ಹೈದರಾಬಾದ್: ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದ ಸನ್ ರೈಸರ್ಸ್ ಹೈದರಬಾದ್ ತಂಡ ಡೆಲ್ಲಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿತ್ತು. ಪಂದ್ಯದಲ್ಲಿ ತಂಡದ ಸೋಲುತ್ತಿದಂತೆ ತಂಡದ ಕೋಚ್ ಟಾಮ್ ಮೂಡಿ ಕ್ರೀಡಾಂಗಣದಲ್ಲೇ ದುಃಖದಿಂದ ಅತ್ತಿದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳನ್ನು ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಬಳಗ ರಿಷಬ್ ಪಂತ್, ಪೃಥ್ವಿ ಶಾರ ಅಬ್ಬರ ಬ್ಯಾಟಿಂಗ್ ನಿಂದ 2 ವಿಕೆಟ್ ಅಂತರದಲ್ಲಿ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯಲ್ಲಿ ತಮ್ಮ ಮುಂದಿನ ಜರ್ನಿಯನ್ನು ಜೀವಂತವಾಗಿರಿಸಿ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಿತು.

    2016ರ ಟೈಟಲ್ ಗೆದ್ದಿದ್ದ ಸನ್ ರೈಸರ್ಸ್ ಹೈದರಬಾದ್ ತಂಡ 2ನೇ ಬಾರಿಗೆ ಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದು, 2017ರಲ್ಲೂ ಪ್ಲೇ ಆಪ್ ಹಂತದಲ್ಲಿ ಚೆನ್ನೈ ವಿರುದ್ಧ ಸೋತು ತಂಡ ಟೂರ್ನಿಯಿಂದ ನಿರ್ಗಮಿಸಿತ್ತು. ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಡೆಲ್ಲಿ ಆಟಗಾರರು ಕ್ರೀಡಾಂಗಣದಲ್ಲಿ ಸಂತಸದಿಂದ ಸಂಭ್ರಮಿಸುತ್ತಿದ್ದರೆ, ಇತ್ತ ಡಗೌಟ್ ನಲ್ಲಿ ಕುಳಿತ್ತಿದ್ದ ಟಾಮ್ ಮೂಡಿ ಮಾತ್ರ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದರು.

  • ಧೋನಿಯನ್ನ ಹಾಡಿಹೊಗಳಿದ ಹಾರ್ದಿಕ್ ಪಾಂಡ್ಯ

    ಧೋನಿಯನ್ನ ಹಾಡಿಹೊಗಳಿದ ಹಾರ್ದಿಕ್ ಪಾಂಡ್ಯ

    ಚೆನ್ನೈ: 2019 ಐಪಿಎಲ್ ಟೂರ್ನಿಯ ಆರಂಭದಲ್ಲೇ ಧೋನಿ ಶೈಲಿಯಲ್ಲಿ ಸಿಕ್ಸರ್ ಸಿಡಿಸಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ, ಎಂಎಸ್‍ಡಿಯನ್ನ ಹಾಡಿ ಹೊಗಳಿದ್ದಾರೆ.

    ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ತಂಡ ಚೆನ್ನೈ ವಿರುದ್ಧ ಗೆದ್ದು 5ನೇ ಬಾರಿಗೆ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದೆ. ಇದೇ ಸಂದರ್ಭದಲ್ಲಿ ಧೋನಿ ಅವರೊಂದಿಗಿನ ಫೋಟೋ ಟ್ವೀಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ಧೋನಿ ತಮಗೆ ಪ್ರೇರಣೆ, ಸ್ನೇಹಿತ, ಸಹೋದರ ಹಾಗೂ ತಮ್ಮ ಲೆಜೆಂಡ್ ಎಂದು ಕರೆದಿದ್ದಾರೆ.

    ಹಾರ್ದಿಕ್ ಅವರ ಈ ಟ್ವೀಟ್‍ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ಪಂದ್ಯದ ವೇಳೆ ಧೋನಿ ಬ್ಯಾಟಿಂಗ್‍ಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮಾಸ್ ಎಂಟ್ರಿ ನೀಡಿದ್ದಾರೆ. ‘ತಾಲಾ’ ಎಂಬ ಘೋಷಣೆಯನ್ನ ಎದ್ದು ಕೂಗುತ್ತಾ ಧೋನಿಗೆ ಸ್ವಾಗತ ಕೋರಿದ್ದರು.

    ಟೂರ್ನಿಯಲ್ಲಿ ಚೆನ್ನೈ ಇದುವರೆಗೂ ಪ್ಲೇ ಆಫ್ ಹಂತ ತಲುಪದೇ ಹೊರಬಿದ್ದಿಲ್ಲ. ಮುಂಬೈ ವಿರುದ್ಧದ ಪಂದ್ಯದ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧೋನಿ, ಪಂದ್ಯದಲ್ಲಿ ಯಾವುದೋ ಒಂದು ತಂಡ ಗೆಲುವು ಸಾಧಿಸಲೇಬೇಕಾಗುತ್ತದೆ. ಈ ಪಂದ್ಯದಲ್ಲಿ ನಮ್ಮ ತಂಡ ಆಟಗಾರರು ಉತ್ತಮ ಬ್ಯಾಟಿಂಗ್ ನಡೆಸಲು ವಿಫಲರಾಗಿದ್ದೇ ಸೋಲಿಗೆ ಕಾರಣವಾಗಿದ್ದು, ನಮಗೆ ಮತ್ತೊಂದು ಅವಕಾಶವಿದೆ ಎಂದಿದ್ದಾರೆ.