Tag: IPL

  • ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

    ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

    ನವದೆಹಲಿ: 2020ರ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕನಾಗುವ ಸಾಧ್ಯತೆಯಿದೆ.

    ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡದ ಆಡಳಿತ ಮಂಡಳಿ, ಕಳೆದ ಆವೃತ್ತಿಯಲ್ಲಿ ಆರಂಭಿಕನಾಗಿ ಉತ್ತಮವಾಗಿ ಬ್ಯಾಟ್ ಬೀಸಿದ ಕೆ.ಎಲ್ ರಾಹುಲ್ ಅವರಿಗೆ ನಾಯಕ ಸ್ಥಾನವನ್ನು ನೀಡಲು ತೀರ್ಮಾನ ಮಾಡಿದೆ. ಕಳೆದ ವರ್ಷ ಪಂಜಾಬ್ ತಂಡದ ನಾಯಕನಾಗಿದ್ದ ಅಶ್ವಿನ್ ದೆಹಲಿ ತಂಡಕ್ಕೆ ಹೋಗಲಿದ್ದಾರೆ ಎಂದು ವರದಿಯಾಗಿದೆ.

    ದೆಹಲಿ ತಂಡ, ನಾಯಕ ಶ್ರೇಯಸ್ ಅಯ್ಯರ್, ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ಮಾರ್ಗದರ್ಶಕ ಸೌರವ್ ಗಂಗೂಲಿಯವರ ನೇತೃತ್ವದಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಆದರೆ ದೆಹಲಿ ತಂಡದಲ್ಲಿ ಅನುಭವಿ ಸ್ಪಿನ್ನರ್‍ ಗಳ ಕೊರತೆ ಇದ್ದು, ಆರ್ ಅಶ್ವಿನ್ ಅವರಿಗೆ ಅ ಸ್ಥಾನ ನೀಡಲು ದೆಹಲಿ ಕ್ಯಾಪಿಟಲ್ ತಂಡದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.

    ಈಗ ಸದ್ಯ ದೆಹಲಿ ತಂಡದಲ್ಲಿ 36 ವರ್ಷದ ಸ್ಪಿನ್ನರ್ ಅಮಿತ್ ಮಿಶ್ರಾ ಇದ್ದು, ಅವರಿಂದ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕಂಡು ಬಂದಿಲ್ಲ. ಅದ್ದರಿಂದ ಭಾರತ ತಂಡದಲ್ಲಿ ಹೆಚ್ಚು ಅನುಭವ ಇರುವ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ತೀರ್ಮಾನವನ್ನು ದೆಹಲಿ ಕ್ಯಾಪಿಟಲ್ ಮಾಡಿದೆ. ಈ ಮೂಲಕ ಬೌಲಿಂಗ್ ವಿಭಾಗವನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

    ಕಳೆದ ಎರಡು ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ ಅಶ್ವಿನ್ ಅವರು, ತಂಡವನ್ನು ಫ್ಲೇ ಆಫ್ ಹಂತಕ್ಕೆ ಕರೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಬದಲಾವಣೆಯ ಯೋಜನೆ ಮಾಡಿರುವ ಪಂಜಾಬ್ ತಂಡ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡಿರುವ ಯುವ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್‍ಗೆ ಅ ಸ್ಥಾನವನ್ನು ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ.

    ಅಶ್ವಿನ್ ಐಪಿಎಲ್‍ನಲ್ಲಿ ಒಟ್ಟು 139 ಪಂದ್ಯಗಳನ್ನು ಆಡಿ 26.48 ಸರಾಸರಿಯಲ್ಲಿ 125 ವಿಕೆಟ್ ಪಡೆದಿದ್ದಾರೆ. 2018 ರಲ್ಲಿ ಚೆನ್ನೈ ತಂಡ ಇವರನ್ನು ಕೈಬಿಟ್ಟ ಮೇಲೆ ಪಂಜಾಬ್ 7.6 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಖರೀದಿ ಮಾಡಿ ನಾಯಕ ಸ್ಥಾನ ನೀಡಿತ್ತು. ಆದರೆ ತಂಡವನ್ನು ಮುನ್ನಡೆಸುವಲ್ಲಿ ವಿಫಲರಾದ ಅಶ್ವಿನ್ ಕೆಳದ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಕಿತ್ತು ಕೇವಲ 42 ರನ್ ಗಳಿಸಿದ್ದರು. ಈ ಮೂಲಕ ಪಂಜಾಬ್ ತಂಡ ಅಂಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿತ್ತು.

  • ಕಿಂಗ್ಸ್ ಇಲೆವೆನ್ ಪಂಜಾಬ್‍ನಿಂದ ಅಶ್ವಿನ್ ಔಟ್?- ಯಾರಾಗ್ತಾರೆ ಕಿಂಗ್ಸ್ ಕ್ಯಾಪ್ಟನ್?

    ಕಿಂಗ್ಸ್ ಇಲೆವೆನ್ ಪಂಜಾಬ್‍ನಿಂದ ಅಶ್ವಿನ್ ಔಟ್?- ಯಾರಾಗ್ತಾರೆ ಕಿಂಗ್ಸ್ ಕ್ಯಾಪ್ಟನ್?

    ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿರುವ ಆರ್.ಅಶ್ವಿನ್ ಅವರನ್ನು ತಂಡದಿಂದ ಕೈಬಿಡಲು ತಂಡದ ಮ್ಯಾನೇಜ್‍ಮೆಂಟ್ ನಿರ್ಧರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬಾಲಿವುಡ್ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕಳೆದ ಎರಡು ಟೂರ್ನಿಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಕಳೆದ 2 ಟೂರ್ನಿಗಳಲ್ಲಿ ಅಶ್ವಿನ್ ನಾಯಕತ್ವದಲ್ಲಿ ಮುನ್ನಡೆದಿದ್ದ ತಂಡ 6 ಮತ್ತು 5ನೇ ಕ್ರಮಾಂಕದಲ್ಲಿ ತನ್ನ ಜರ್ನಿಯನ್ನು ಅಂತ್ಯಗೊಳಿಸಿತ್ತು. ಕಿಂಗ್ಸ್ ಇಲೆವೆನ್ ಪರ 28 ಪಂದ್ಯಗಳನ್ನು ಆಡಿರುವ ಅಶ್ವಿನ್, 25 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಐಪಿಎಲ್‍ನಲ್ಲಿ 139 ಪಂದ್ಯಗಳನ್ನು ಆಡಿರುವ ಅಶ್ವಿನ್ 125 ವಿಕೆಟ್ ಪಡೆದಿದ್ದಾರೆ. 2018 ರಲ್ಲಿ ತಂಡ 7.8 ಕೋಟಿ ರೂ.ಗಳನ್ನು ನೀಡಿ ಅಶ್ವಿನ್ ರನ್ನು ಖರೀದಿ ಮಾಡಿತ್ತು.

    ಮುಂದಿನ ಟೂರ್ನಿಯಲ್ಲಿ ಅಶ್ವಿನ್ ಅವರನ್ನು ಬೇರೆ ತಂಡಕ್ಕೆ ಬಿಟ್ಟುಕೊಡಲು ತೀರ್ಮಾನಿಸಲಾಗಿದ್ದು, ಈ ಕುರಿತ ನಿರ್ಧಾರ ಶೀಘ್ರವೇ ಪ್ರಕಟ ಮಾಡಲಾಗುತ್ತದೆ ಎನ್ನಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡ ಅಶ್ವಿನ್ ರನ್ನು ಖರೀದಿ ಮಾಡಲು ಚಿಂತನೆ ನಡೆಸಿದೆಯಂತೆ. ಸದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮ್ಯಾನೇಜ್‍ಮೆಂಟ್ ಸದ್ಯ ಅಶ್ವಿನ್‍ರ ಸ್ಥಾನದಲ್ಲಿ ಕನ್ನಡಿಗ ಕೆಎಲ್ ರಾಹುಲ್‍ರನ್ನು ನಾಯಕರಾಗಿ ಆಯ್ಕೆ ಮಾಡುವ ಚಿಂತನೆಯಲ್ಲಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇತ್ತ ತಂಡದ ಕೋಚ್ ಬದಲಾವಣೆಯನ್ನು ಮಾಡಲಾಗುತ್ತಿದೆ. ಈ ಸ್ಥಾನದಲ್ಲಿ ಜಾರ್ಜ್ ಬೈಲಿ ಮತ್ತು ಡ್ಯಾರೆನ್ ಲೆಹ್ಮನ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ.

    ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಟೂರ್ನಿಯ ಮೊದಲ ಪಂದ್ಯದಿಂದಲೂ ಅಶ್ವಿನ್ ಅವಕಾಶವನ್ನು ಪಡೆದಿರಲಿಲ್ಲ. ತಂಡದಿಂದ ಅನುಭವಿ ಅಶ್ವಿನ್ ಹಾಗೂ ರೋಹಿತ್ ಶರ್ಮಾರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಹಲವು ವಿಮರ್ಶೆಗಳು ಕೂಡ ಎದುರಾಗಿತ್ತು. ಅಲ್ಲದೇ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ತಂಡದ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲೇ ಕಿಂಗ್ಸ್ ಇಲೆವೆನ್ ತಂಡ ನಾಯಕತವ ಕಳೆದುಕೊಳ್ಳುವ ಸುದ್ದಿ ಹೊರಬಿದ್ದಿದೆ.

  • ವಿಶ್ವಕಪ್ ಗೆದ್ದ ಇಂಗ್ಲೆಂಡ್ ಟೀಮ್ ಕೋಚ್‍ಗೆ ಸನ್‍ರೈಸರ್ಸ್ ಬಂಪರ್ ಆಫರ್

    ವಿಶ್ವಕಪ್ ಗೆದ್ದ ಇಂಗ್ಲೆಂಡ್ ಟೀಮ್ ಕೋಚ್‍ಗೆ ಸನ್‍ರೈಸರ್ಸ್ ಬಂಪರ್ ಆಫರ್

    ಹೈದರಾಬಾದ್: 2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕೋಚ್ ಟ್ರೆವರ್ ಬೇಲಿಸ್ ಅವರನ್ನು ಹೈದರಾಬಾದ್ ಸನ್‍ರೈಸರ್ಸ್ ತಂಡ ಕೋಚ್ ಆಗಿ ನೇಮಿಸಿದೆ.

    ಕಳೆದ ಬಾರಿಯ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಟಾಮ್ ಮೂಡಿ ತಂಡದ ಕೋಚ್ ಜವಾಬ್ದಾಯಿಂದ ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ತಂಡದ ಆಡಳಿತ ಮಂಡಳಿ ಈ ಸ್ಥಾನದಲ್ಲಿ ಬೇಲಿಸ್ ಅವರನ್ನು ನೇಮಕ ಮಾಡಿದೆ. ಸದ್ಯ ಬೇಲಿಸ್ ಇಂಗ್ಲೆಂಡ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಅವಧಿ ಮುಗಿದ ಬಳಿಕ ಹೈದರಾಬಾದ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

    2016 ಐಪಿಎಲ್ ಟೂರ್ನಿಯಲ್ಲಿ ಗೆಲುವು ಪಡೆದಿದ್ದ ಹೈದರಾಬಾದ್ ತಂಡ ಮೂಡಿ ಮಾರ್ಗದರ್ಶನದಲ್ಲಿ ಮುನ್ನಡೆದಿತ್ತು. ಇತ್ತ ಆಸ್ಟ್ರೇಲಿಯಾ ಮೂಲದ ಟ್ರೆವರ್ ಬೇಲಿಸ್ ಅವರನ್ನು ಕೋಚ್ ಆಗಿ ಪಡೆದುಕೊಳ್ಳಲು ಕೋಲ್ಕತ್ತಾ ತಂಡ ಕೂಡ ಅಂತಿಮ ಕ್ಷಣದವರೆಗೂ ಪ್ರಯತ್ನ ನಡೆಸಿತ್ತು. ಆದರೆ ಅಂತಿಮವಾಗಿ ಭಾರೀ ಮೊತ್ತ ನೀಡಿ ಹೈದರಾಬಾದ್ ತಂಡ ಪಡೆದುಕೊಳ್ಳಲು ಯಶಸ್ವಿಯಾಗಿದೆ.

    ಕೋಚ್ ಆಗಿ ಉತ್ತಮ ರೆಕಾರ್ಡ್ ಹೊಂದಿರುವ ಟ್ರೆವರ್ ಬೇಲಿಸ್, ಕೋಲ್ಕತ್ತಾ ತಂಡ 2 ಬಾರಿ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆದ್ದ ಸಂದರ್ಭದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಸಿಡ್ನಿ ಸಿಕ್ಸರ್ ತಂಡ ಬಿಗ್‍ಬ್ಯಾಷ್ ಲೀಗ್ ನಲ್ಲಿ ಗೆಲುವು ಪಡೆಯಲು ಕಾರಣರಾಗಿದ್ದರು. ಸದ್ಯ ಇಂಗ್ಲೆಂಡ್ ವಿಶ್ವಕಪ್ ಗೆದ್ದ ತಂಡದ ಕೋಚ್ ಆಗಿದ್ದಾರೆ. ಇತ್ತ ಹೈದರಾಬಾದ್ ತಂಡದ ಕೋಚ್ ಆಗಿದ್ದ ಟಾಮ್ ಮೂಡಿ ಕೂಡ ಐಪಿಎಲ್ ನಲ್ಲಿ ಉತ್ತಮ ದಾಖಲೆ ಹೊಂದಿದ್ದು, ಇವರ ಮಾರ್ಗದರ್ಶನದಲ್ಲಿ ಹೈದರಾಬಾದ್ ತಂಡ ಒಮ್ಮೆ ಕಪ್ ಗೆಲುವು ಪಡೆದಿದ್ದರೆ, 5 ಬಾರಿ ಪ್ಲೇ ಆಫ್ ಪ್ರವೇಶ ಮಾಡಿತ್ತು. ಈ ಬಾರಿಯ ಟೂರ್ನಿಯಲ್ಲಿ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಸೋಲುಂಡ ಕಾರಣ ಕ್ರೀಡಾಂಣದಲ್ಲೇ ಅತ್ತಿದ್ದರು.

  • ವಿಶ್ವಕಪ್‍ನಿಂದ ದಕ್ಷಿಣ ಆಫ್ರಿಕಾ ಔಟ್ – ಐಪಿಎಲ್‍ನತ್ತ ಬೊಟ್ಟು ಮಾಡಿದ ಡುಪ್ಲೆಸಿಸ್

    ವಿಶ್ವಕಪ್‍ನಿಂದ ದಕ್ಷಿಣ ಆಫ್ರಿಕಾ ಔಟ್ – ಐಪಿಎಲ್‍ನತ್ತ ಬೊಟ್ಟು ಮಾಡಿದ ಡುಪ್ಲೆಸಿಸ್

    ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್‍ನಿಂದಲೇ ತಂಡ ವಿಶ್ವಕಪ್‍ನಲ್ಲಿ ಹಿನ್ನಡೆ ಅನುಭವಿಸಲು ಕಾರಣ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಡುಪ್ಲೆಸಿಸ್ ಅಭಿಪ್ರಾಯ ಪಟ್ಟಿದ್ದಾರೆ.

    ದಕ್ಷಿಣ ಆಫ್ರಿಕಾ ಟೀಂ ಮ್ಯಾನೇಜ್‍ಮೆಂಟ್ ತಂಡದ ಕೆಲ ಆಟಗಾರರಿಗೆ ಶ್ರೀಮಂತ ಲೀಗ್ ಆಡಲು ಅನುಮತಿ ನೀಡಬಾರದಿತ್ತು ಎಂದು ಫ್ಲಾಫ್ ಡುಪ್ಲೆಸಿಸ್ ಹೇಳಿದ್ದಾರೆ.

    ಭಾನುವಾರ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 49 ರನ್ ಗಳ ಅಂತರದಿಂದ ಸೋಲುಂಡಿತ್ತು. ಪಂದ್ಯದ ಬಳಿಕ ಮಾತನಾಡಿದ ಡುಪ್ಲೆಸಿಸ್, ತಂಡದ ಸೋಲಿನ ಬಗ್ಗೆ ಸರಿಯಾದ ಉತ್ತರ ನೀಡಲಾಗುತ್ತಿಲ್ಲ. ವಿಶ್ವಕಪ್ ದೃಷ್ಟಿಯಿಂದ ನಾವು ಐಪಿಎಲ್ ಆಡಬಾರದಿತ್ತು. ಕನಿಷ್ಠ ತಂಡದ ಪ್ರಮುಖ ವೇಗಿಯಾಗಿದ್ದ ರಬಾಡರನ್ನು ಐಪಿಎಲ್‍ನಿಂದ ದೂರ ಉಳಿಸಿಕೊಳ್ಳಬೇಕಿತ್ತು ಎಂದಿದ್ದಾರೆ.

    ಆಟಗಾರರು ವಿಶ್ರಾಂತಿ ಇಲ್ಲದೇ ನಿರಂತರವಾಗಿ ಟೂರ್ನಿಗಳಲ್ಲಿ ಆಡಿದರೆ ಇಂತಹ ಫಲಿತಾಂಶವೇ ಎದುರಾಗುತ್ತದೆ. ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆ ಎದುರಿಸಿದ್ದು ಕೂಡ ಸೋಲಿಗೆ ಕಾರಣವಾಗಿದೆ. ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ನಮ್ಮ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದಿದ್ದಾರೆ.

    ಇತ್ತ ರಬಾಡ 6 ಪಂದ್ಯಗಳಿಂದ 6 ವಿಕೆಟ್ ಗಳನ್ನು ಮಾತ್ರವೇ ಪಡೆದಿದ್ದರು. ಬಹುಮುಖ್ಯ ಟೂರ್ನಿಯಲ್ಲೇ ರಬಾಡ ಮಿಂಚಲು ವಿಫಲವಾಗಿದ್ದು ದಕ್ಷಿಣ ಅಫ್ರಿಕಾ ತಂಡದ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡಿತ್ತು. ಆದರೆ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರಬಾಡ 12 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದರು. ಆದರೆ ಟೂರ್ನಿಯಲ್ಲಿ ಗಾಯಗೊಂಡಿದ್ದ ರಬಾಡ ಸರಿಯಾದ ವಿಶ್ರಾಂತಿ ಪಡೆಯದೆ ವಿಶ್ವಕಪ್‍ನಲ್ಲಿ ಭಾಗವಹಿಸಿದ್ದರು. ಅಲ್ಲದೇ ತಂಡದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಕೂಡ ಐಪಿಎಲ್‍ನಲ್ಲೇ ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದರು.

    ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಸೋಲುವ ಮೂಲಕ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದರೆ, ಇತ್ತ ಪಾಕ್ ಸೆಮಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ. ಇದುವರೆಗೂ 6 ಪಂದ್ಯಗಳನ್ನು ಆಡಿರುವ ಪಾಕಿಸ್ತಾನ 5 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ.

  • ಎಬಿಡಿ ದೇಶದ ಬದಲು ಹಣವನ್ನ ಆಯ್ಕೆ ಮಾಡಿಕೊಂಡಿದ್ದಾರೆ: ಶೋಯೆಬ್ ಅಖ್ತರ್

    ಎಬಿಡಿ ದೇಶದ ಬದಲು ಹಣವನ್ನ ಆಯ್ಕೆ ಮಾಡಿಕೊಂಡಿದ್ದಾರೆ: ಶೋಯೆಬ್ ಅಖ್ತರ್

    ಇಸ್ಲಾಮಾಬಾದ್: ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ದೇಶವನ್ನು ಆಯ್ಕೆ ಮಾಡಿಕೊಳ್ಳದೆ ಹಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ. ಅಖ್ತರ್ ಅವರು ಮಾತನಾಡಿರುವ ವಿಡಿಯೋ ಯೂಟ್ಯೂಬ್‍ನಲ್ಲಿ ಆಪ್‍ಲೋಡ್ ಮಾಡಲಾಗಿದೆ.

    ಮೊದಲಿಗೆ ಎಬಿ ಡಿವಿಯರ್ಸ್ ಅವರ ಮೇಲೆ ಐಪಿಎಲ್ ಹಾಗೂ ಪಿಎಸ್‍ಎಲ್ ಟೂರ್ನಿಗಳ ಒಪ್ಪಂದವನ್ನು ಮುರಿದುಕೊಳ್ಳಲು ಒತ್ತಡ ಹಾಕಲಾಗಿತ್ತು. ಇದರಿಂದ ಪಾರಾಗಲು ನಿರ್ಧರಿಸಿದ್ದ ಎಬಿಡಿ ವಿಶ್ವಕಪ್ ಮುನ್ನವೇ ನಿವೃತ್ತಿ ಘೋಷಣೆ ಮಾಡಿದ್ದರು ಎಂದು ಅಖ್ತರ್ ಹೇಳಿದ್ದಾರೆ.

    ಕೆಲದಿನಗಳ ಹಿಂದೆಯಷ್ಟೇ ಟೀಂ ಇಂಡಿಯಾ ವಿರುದ್ಧ ಸೋಲುಂಡಿದ್ದ ದಕ್ಷಿಣ ಆಫ್ರಿಕಾ ವಿಶ್ವಕಪ್ ಟೂರ್ನಿಯಲ್ಲಿ ಸತತ 3ನೇ ಸೋಲು ಕಂಡಿತ್ತು. ಇದೇ ವೇಳೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಎಬಿಡಿ ಕೊನೆಯ ಪ್ರಯತ್ನ ನಡೆಸಿದ್ದರು ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಖ್ತರ್, ಎಬಿಡಿಗೆ ದೇಶಕ್ಕಿಂತ ಹಣವೇ ಮುಖ್ಯವಾಗಿತ್ತು ಎಂದಿದ್ದಾರೆ.

    ಹಣ ಇಂದು ಅಥವಾ ನಾಳೆ ಬರುತ್ತದೆ. ಆದರೆ ಎಬಿಡಿ ಇದನ್ನು ತಿಳಿದು ದೇಶದ ತಂಡಕ್ಕೆ ತಮ್ಮ ಅಗತ್ಯತೇ ಮನಗಂಡು ನಿರ್ಧಾರ ಕೈಗೊಳ್ಳಬೇಕಿತ್ತು. ವಿಶ್ವಕಪ್‍ಗೆ 1 ವರ್ಷ ಮುಂಚಿತವಾಗಿ ಎಬಿಡಿ ನಿವೃತ್ತಿ ಘೋಷಿಸಿದ್ದರು ಕೂಡ ದಕ್ಷಿಣ ಆಫ್ರಿಕಾ ತಂಡ ಫಾರ್ಮ್‍ನಲ್ಲಿ ಇರಲಿಲ್ಲ. ದೇಶ ವಿಚಾರ ಬಂದಾಗ ಹಣಕ್ಕೆ ಪ್ರಾಮುಖ್ಯತೆ ನೀಡಬಾರದಿತ್ತು. ವಿಶ್ವಕಪ್‍ಗೆ ಮತ್ತೆ ಎಬಿಡಿ ಅವರನ್ನ ಆಯ್ಕೆ ಮಾಡದೆ ಉತ್ತಮ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.

  • ಭಾರತದ ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ – ಸುರೇಶ್ ರೈನಾ

    ಭಾರತದ ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ – ಸುರೇಶ್ ರೈನಾ

    ನವದೆಹಲಿ: ಈ ಬಾರಿಯ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಭಾರತದ ತಂಡದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ ಎಂದು ಟೀಂ ಇಂಡಿಯಾದ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.

    ಐಪಿಎಲ್ 12 ಅವೃತ್ತಿಯಲ್ಲಿ ಉತ್ತಮ ಫಾರ್ಮ್‍ನಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರು ಇದೇ ಆಟವನ್ನು ವಿಶ್ವಕಪ್‍ನಲ್ಲಿ ತೋರಿದರೆ ಅದು ಭಾರತ ತಂಡಕ್ಕೆ ವರದಾನವಾಗಲಿದೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

    ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ರೈನಾ, ಮೇ 30 ರಿಂದ ಇಂಗ್ಲೆಂಡ್‍ನಲ್ಲಿ ಆರಂಭ ಆಗಲಿರುವ ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಪ್ರಮುಖ ಆಟಗಾರನಾಗುತ್ತಾರೆ ಎಂದು ನನಗೆ ನಂಬಿಕೆ ಇದೆ. ಹಾರ್ದಿಕ್ ಪಾಂಡ್ಯ ತನೊಬ್ಬ ಉತ್ತಮ ಆಲ್ ರೌಂಡರ್ ಎಂದು ಐಪಿಎಲ್‍ನಲ್ಲಿ ಸಾಬೀತು ಮಾಡಿದ್ದಾರೆ. ಇದೇ ರೀತಿಯಲ್ಲಿ ಆಟವಾಡಿದರೆ ಈ ಬಾರಿಯ ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಕೀ ಪ್ಲೇಯರ್ ಆಗುತ್ತಾರೆ ಎಂದು ಹೇಳಿದ್ದಾರೆ.

    ಐಪಿಎಲ್‍ನಲ್ಲಿ ಇದ್ದ ಲಯದಲ್ಲೇ ವಿಶ್ವಕಪ್‍ನಲ್ಲಿ ಬ್ಯಾಟ್ ಬೀಸಿದರೆ ಪಾಂಡ್ಯ ಭಾರತ ತಂಡದ ಗೇಮ್ ಚೇಂಜರ್ ಆಗಲಿದ್ದಾರೆ. ಫೀಲ್ಡಿಂಗ್‍ನಲ್ಲಿ ಮತ್ತು ಬ್ಯಾಟಿಂಗ್‍ನಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ ಮತ್ತು ಯಾವುದೇ ಸಮಯದಲ್ಲದರೂ ಬಂದ ಬ್ಯಾಟ್ ಬೀಸುವ ಸಾಮರ್ಥ್ಯ ವನ್ನು ಹೊಂದಿದ್ದಾರೆ. ತಂಡಕ್ಕೆ ಬೌಲರ್‍ಗಳ ಸಮಸ್ಯೆಯಾದಾಗ ನಿರ್ಣಾಯಕ ಓವರಗಳನ್ನು ಬೌಲ್ ಮಾಡಲು ಪಾಂಡ್ಯ ಸೂಕ್ತವಾದ ಬೌಲರ್. ಈ ಎಲ್ಲಾ ವಿಭಾಗದಲ್ಲೂ ಉತ್ತಮ ಆಟವಾಡುವ ಪಾಂಡ್ಯ ಭಾರತ ತಂಡಕ್ಕೆ ವರದಾನವಾಗಲಿದ್ದಾರೆ ಎಂದು ಹೇಳಿದ್ದಾರೆ.

    ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಮ್ಯಾಚ್ ವಿನ್ನಿಂಗ್ ಆಟವಾಡಿದ ಹಾರ್ದಿಕ್ ಪಾಂಡ್ಯ ಆಡಿದ 15 ಪಂದ್ಯಗಳಲ್ಲಿ 190 ಭರ್ಜರಿ ಸ್ಟ್ರೈಕ್ ರೇಟ್‍ನೊಂದಿಗೆ 402 ರನ್ ಸಿಡಿಸಿದ್ದರು ಇದರಲ್ಲಿ 38 ಬೌಡಂರಿ ಮತ್ತು 29 ಸಿಕ್ಸರ್ ಹೊಡೆದಿದ್ದರು. ಬೌಲಿಂಗ್‍ನಲ್ಲೂ ಮಿಂಚಿದ್ದ ಈ 25 ವರ್ಷದ ಆಲ್ ರೌಂಡರ್ 16 ಪಂದ್ಯಗಳಲ್ಲಿ 14 ವಿಕೆಟ್ ಸಾಧನೆ ಮಾಡಿದ್ದರು.

  • ಶ್ರೇಷ್ಠ ಕೀಪರ್ ವಿಶ್ವಕಪ್‍ಗೆ ಆಯ್ಕೆಯಾದರೆ  ಪ್ರಶ್ನೆ ಮಾಡೋದು ಯಾಕೆ – ಧೋನಿ ಪರ ಶೇನ್ ವಾರ್ನ್ ಬ್ಯಾಟಿಂಗ್

    ಶ್ರೇಷ್ಠ ಕೀಪರ್ ವಿಶ್ವಕಪ್‍ಗೆ ಆಯ್ಕೆಯಾದರೆ ಪ್ರಶ್ನೆ ಮಾಡೋದು ಯಾಕೆ – ಧೋನಿ ಪರ ಶೇನ್ ವಾರ್ನ್ ಬ್ಯಾಟಿಂಗ್

    ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ಒಬ್ಬ ಭಯಂಕರ ಆಟಗಾರ, ಅವರು ತನಗೆ ಬೇಕಾದಾಗ ನಿವೃತ್ತಿ ಹೊಂದುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.

    ಧೋನಿ ಅವರು ಉತ್ತಮ ಆಟಗಾರ. ಆದರೆ ಜನರು ಯಾವಾಗಲೂ ಯಾಕೆ ಅವರ ನಿವೃತ್ತಿಯ ಬಗ್ಗೆ ಮಾತನಾಡುತ್ತಾರೆ? ಭಾರತದ ಕ್ರಿಕೆಟ್ ತಂಡಕ್ಕೆ ಧೋನಿ ಅವರ ಕೊಡುಗೆ ಬಹಳ ಇದೆ. ಈ ರೀತಿ ಇರುವಾಗ ಅವರ ನಿವೃತ್ತಿಯ ಬಗ್ಗೆ ಮಾತನಾಡುವುದು ತಪ್ಪು ಎಂದು ತಿಳಿಸಿದರು.

    ಧೋನಿ ಅವರು ಒಬ್ಬ ಒಳ್ಳೆಯ ಬ್ಯಾಟ್ಸ್‍ಮ್ಯಾನ್ ಮತ್ತು ಚಾಣಾಕ್ಷ ವಿಕೆಟ್ ಕೀಪರ್ ಇಂತಹ ಆಟಗಾರ ವಿಶ್ವಕಪ್ ತಂಡಕ್ಕೆ ಆಯ್ಕೆಯಾದರೆ ಕೆಲವರು ಪ್ರಶ್ನೆ ಮಾಡುತ್ತಾರೆ ಎಂದರೆ ನನಗೆ ನಂಬಲು ಆಗುತ್ತಿಲ್ಲ. ಅವರು ಈ ವಿಶ್ವಕಪ್ ಮುಗಿದ ನಂತರ ಇಲ್ಲವೇ ಇನ್ನೂ 5 ವರ್ಷ ಕಳೆದ ನಂತರವೋ ನಿವೃತ್ತಿ ಪಡೆಯಬಹುದು. ಈ ನಿವೃತ್ತಿ ವಿಷಯದ ಬಗ್ಗೆ ಧೋನಿಗೆ ಚೆನ್ನಾಗಿ ಗೊತ್ತು. ಯಾವ ಸಮಯದಲ್ಲಿ ನಿವೃತ್ತಿ ಹೊಂದಬೇಕು ಎಂದು ಗೊತ್ತಿರುವ ಏಕೈಕ ಆಟಗಾರ ಎಂದರೆ ಆದು ಧೋನಿ ಎಂದು ಶೇನ್ ವಾರ್ನ್ ಹೇಳಿದ್ದಾರೆ.

    2018ರ ನಂತರ 9 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 81.75ರ ಸರಾಸರಿಯಲ್ಲಿ ಭರ್ಜರಿ 327 ರನ್ ಹೊಡೆದಿದ್ದಾರೆ. ಐಪಿಎಲ್ 12 ರ ಅವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದ ಧೋನಿ ಅವರು ಆಡಿದ 15 ಪಂದ್ಯಗಳಲ್ಲಿ 12 ಇನ್ನಿಂಗ್ಸ್‍ಗಳಲ್ಲಿ 83.20ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಧೋನಿ 134.62ರ ಸ್ಟ್ರೈಕ್ ರೇಟ್‍ನಲ್ಲಿ 416 ರನ್ ಸಿಡಿಸಿ ಉತ್ತಮ ಲಯದಲ್ಲಿದ್ದಾರೆ.

    ಪ್ರಸಕ್ತ ಸಂದರ್ಭದಲ್ಲಿ ವಿಶ್ವದ ನಂಬರ್ ಒನ್ ವಿಕೆಟ್ ಕೀಪರ್ ಆಗಿರುವ ಧೋನಿ ಅವರು ವಿಶ್ವಕಪ್ ಟೂರ್ನಿಯಲ್ಲಿ ಭಾರತದ ತಂಡದಲ್ಲಿ ಇರುವುದು ನಮಗೆ ವರದಾನವಾಗಲಿದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

  • ಊರುಗೋಲು ಹಿಡ್ಕೊಂಡು ಹೋಟೆಲಿಗೆ ಬಂದು ಟೀಂ ಇಂಡಿಯಾಗೆ ಶುಭಾಶಯ ಹೇಳಿದ ಶಾರ್ದೂಲ್

    ಊರುಗೋಲು ಹಿಡ್ಕೊಂಡು ಹೋಟೆಲಿಗೆ ಬಂದು ಟೀಂ ಇಂಡಿಯಾಗೆ ಶುಭಾಶಯ ಹೇಳಿದ ಶಾರ್ದೂಲ್

    ನವದೆಹಲಿ: ಕಾಲಿಗೆ ಗಾಯವಾಗಿ ಲಂಡನ್‍ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ಬೌಲರ್ ಶಾರ್ದೂಲ್ ಠಾಕೂರ್ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಹೋಗಿ ಟೀಂ ಇಂಡಿಯಾಗೆ ಶುಭಾಶಯ ಹೇಳಿದ್ದಾರೆ.

    ಐಪಿಎಲ್ 12 ಅವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಅಡಿದ ಶಾರ್ದೂಲ್ ಠಾಕೂರ್ ಅವರು ಬೌಲಿಂಗ್ ಮಾಡುವ ಸಮಯದಲ್ಲಿ ಬಲಗಾಲಿಗೆ ಪೆಟ್ಟು ಬಿದ್ದಿತ್ತು. ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಲಂಡನ್‍ನ ಕಾರ್ಡಿಫ್ ಹೋಗಿದ್ದರು.

    ಈ ನಡುವೆ ಊರುಗೋಲು ಸಹಾಯದಿಂದಲೇ ಭಾರತ ತಂಡದ ಆಟಗಾರರು ಇರುವ ಹೋಟೆಲಿಗೆ ತೆರಳಿದ ಶಾರ್ದೂಲ್ ಠಾಕೂರ್ ಟೀಂ ಇಂಡಿಯಾದ ಎಲ್ಲಾ ಆಟಗಾರರನ್ನು ಭೇಟಿಯಾಗಿ ವಿಶ್ವಕಪ್ ಗೆದ್ದು ತರುವಂತೆ ಶುಭಾಶಯ ತಿಳಿಸಿ ಬಂದಿದ್ದಾರೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರನ್ನು ಭೇಟಿಯಾಗಿ ಕೆಲ ಸಮಯ ಸಮಲೋಚನೆ ನಡೆಸಿದರು. ಈ ಸಮಯದಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ ಅವರು ಶಾರ್ದೂಲ್ ಠಾಕೂರ್ ಅವರ ಅರೋಗ್ಯದ ಬಗ್ಗೆ ವಿಚಾರಿಸಿ ಲಂಡನ್‍ನಿನಲ್ಲೇ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ.

    https://www.instagram.com/p/Bx7E1xoA6BL/?utm_source=ig_embed

    ಗಾಯದ ಸಮಸ್ಯೆ ನಡುವೆಯೂ ನಮ್ಮನ್ನು ನೋಡಲು ಬಂದ ಶಾರ್ದುಲ್ ಠಾಕೂರ್ ಅವರು ಬೇಗ ಗುಣವಾಗಲಿ ಎಂದು ಟೀಂ ಇಂಡಿಯಾ ಆಟಗಾರರು ದೇವರಲ್ಲಿ ಕೇಳಿಕೊಂಡಿದ್ದಾರೆ.

    2019ರ ವಿಶ್ವಕಪ್ ಟೂರ್ನಿ ಮೇ 30ಕ್ಕೆ ಅರಂಭವಾಗಲಿದ್ದು, ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲೇ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡ ಭಾರತ ಮುಂದಿನ ಅಭ್ಯಾಸ ಪಂದ್ಯವನ್ನು ಮೇ 28ಕ್ಕೆ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಜೂನ್ 6 ರಂದು ಲೀಗ್ ಹಂತದ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.

  • ಆರ್‌ಸಿಬಿಗೆ ಡೆಲ್ಲಿ ತಂಡದಿಂದ ಕನ್ನಡದಲ್ಲಿ ಸೆಲ್ಯೂಟ್

    ಆರ್‌ಸಿಬಿಗೆ ಡೆಲ್ಲಿ ತಂಡದಿಂದ ಕನ್ನಡದಲ್ಲಿ ಸೆಲ್ಯೂಟ್

    ಬೆಂಗಳೂರು: ಐಪಿಎಲ್ 2019ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಪ್ಲೇ ಆಫ್‍ಗೆ ಅರ್ಹತೆ ಪಡೆಯದೇ ಇದ್ದರೂ ಅಭಿಮಾನಿಗಳು ತಂಡಕ್ಕೆ ಬೆಂಬಲ ನೀಡಿದ್ದರು. ಈಗ ದೆಹಲಿ ಕ್ಯಾಪಿಟಲ್ಸ್ ತಂಡ ಕನ್ನಡದಲ್ಲೇ ಟ್ವೀಟ್ ಮಾಡಿ ಆರ್‌ಸಿಬಿಗೆ ಸೆಲ್ಯೂಟ್ ಮಾಡಿದೆ.

    ಈ ಬಾರಿ ಐಪಿಎಲ್‍ನಲ್ಲಿ ದೆಹಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ತಲುಪಿತು. ಬಳಿಕ ಎಲಿಮಿನೇಟರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರ ನಡೆದಿತ್ತು.

    ಈಗ ಡೆಲ್ಲಿ ತಂಡದ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿಯ ಫೋಟೋ ಹಾಕಿ ಆರ್‌ಸಿಬಿ ತಂಡದ ಬಗ್ಗೆ ಕನ್ನಡದಲ್ಲಿ ಟ್ವೀಟ್ ಮಾಡಿದೆ. “ಈ ಸೀಸನ್‍ನಲ್ಲಿ, ಮೈದಾನದಲ್ಲಿ ನೀವು ನಮ್ಮೆದುರು ತೋರಿಸಿದ ಕೆಚ್ಚೆದೆಯ ಆಟಕ್ಕೆ ಮತ್ತು ದಿಟ್ಟ ಹೋರಾಟಕ್ಕೆ ಒಂದು ಸೆಲ್ಯೂಟ್ ಎಂದು ಕನ್ನಡದಲ್ಲಿ ಬರೆದಿದ್ದಾರೆ. ಅಲ್ಲದೆ 2 ಪಂದ್ಯ, ಲೆಕ್ಕವಿಲ್ಲದಷ್ಟು ನೆನಪುಗಳು. ಆರ್‌ಸಿಬಿ ತಂಡ ನಮ್ಮ ವಿರುದ್ಧ ಬೋಲ್ಡ್ ಹಾಗೂ ಚಾಲೆಂಜಿಂಗ್ ಪಂದ್ಯ ಆಡಿದೆ” ಎಂದು ಟ್ವೀಟ್ ಮಾಡಿದೆ.

    ದೆಹಲಿ ಕ್ಯಾಪಿಟಲ್ಸ್ ಮಾಡಿದ ಈ ಟ್ವೀಟ್‍ಗೆ ಕನ್ನಡಿಗರು ರೀ-ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಮುಂದಿನ ಐಪಿಎಲ್ ಸೀಸನ್‍ಗೆ ದೆಹಲಿ ತಂಡಕ್ಕೆ ಶುಭ ಕೋರಿದೆ. ಈ ಟ್ವೀಟ್‍ಗೆ ಇದುವರೆಗೂ 400ಕ್ಕೂ ಹೆಚ್ಚು ರೀ-ಟ್ವೀಟ್ ಹಾಗೂ 2,000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

    ಆರ್‌ಸಿಬಿ 14 ಪಂದ್ಯದಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 8 ಪಂದ್ಯದಲ್ಲಿ ಸೋಲು ಕಂಡಿತ್ತು. ಆರ್‌ಸಿಬಿ 11 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ದೆಹಲಿ ತಂಡ 14 ಪಂದ್ಯದಲ್ಲಿ 9 ಪಂದ್ಯಗಳನ್ನು ಗೆದ್ದು, 5 ಪಂದ್ಯದಲ್ಲಿ ಸೋತಿತ್ತು.

  • ಮನೆಯಲ್ಲಿ ಐಪಿಎಲ್ ಟ್ರೋಫಿ ಇಟ್ಟು ನೀತಾ ಅಂಬಾನಿ ಭಜನೆ – ವಿಡಿಯೋ ವೈರಲ್

    ಮನೆಯಲ್ಲಿ ಐಪಿಎಲ್ ಟ್ರೋಫಿ ಇಟ್ಟು ನೀತಾ ಅಂಬಾನಿ ಭಜನೆ – ವಿಡಿಯೋ ವೈರಲ್

    ಮುಂಬೈ: ಐಪಿಎಲ್ ಫೈನಲ್ ಪಂದ್ಯದ ಕೊನೆಯ ಓವರಿನಲ್ಲಿ  ತಂಡ ಗೆಲ್ಲುವಂತೆ ಪ್ರಾರ್ಥನೆ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಟ್ರೋಫಿಯನ್ನು ಮನೆಯಲ್ಲಿ ಇಟ್ಟು ಭಜನೆ ಮಾಡಿದ್ದಾರೆ.

    ಹೌದು. ನಾಲ್ಕನೇಯ ಬಾರಿ ಟ್ರೋಫಿ ಗೆದ್ದು ಆಟಗಾರರ ಜೊತೆ ರಾತ್ರಿ ಸಂಭ್ರಮಾಚರಣೆ ನಡೆಸಿದ ಬಳಿಕ ಮಾಲಕಿ ನೀತಾ ಅಂಬಾನಿ ಟ್ರೋಫಿಯನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

     

    View this post on Instagram

     

    Blessed #nitaambani ????????????

    A post shared by Viral Bhayani (@viralbhayani) on

    ‘ಅಂಟಿಲಿಯಾ’ ನಿವಾಸದಲ್ಲಿರುವ ಪೂಜಾ ಕೊಠಡಿಗೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿ ಕೃಷ್ಣನ ಮುಂದೆ ಇರಿಸಿ ಭಜನೆ ಮಾಡಿದ್ದಾರೆ. “ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ” ಶ್ಲೋಕವನ್ನು ನೀತಾ ಅಂಬಾನಿ ಪಠಿಸಿದ್ದು ವಿಡಿಯೋ ಈಗ ವೈರಲ್ ಆಗಿದೆ.

    ಮಿನಿ ದೇವಾಲಯದ ರೂಪದಲ್ಲಿ ಈ ಪೂಜಾ ಕೊಠಡಿಯನ್ನು ನಿರ್ಮಾಣ ಮಾಡಲಾಗಿದ್ದು, ಬಹಳ ಸಂಭ್ರಮದಿಂದ ನೀತಾ ಅಂಬಾನಿ ಕಪ್ ಅನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ತಂಡದ ಎಲ್ಲ ಸದಸ್ಯರಿಗೆ ನೀತಾ ಅಂಬಾನಿ ತಮ್ಮ ನಿವಾಸದಲ್ಲಿ ಪಾರ್ಟಿ ನೀಡಿ ಅಭಿನಂದಿಸಿದ್ದಾರೆ.

    ಪ್ರತಿ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ಬೆಂಬಲಿಸುವ ಟೀ ಶರ್ಟ್ ಧರಿಸಿ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಿದ್ದ ನೀತಾ ಅಂಬಾನಿ ಫೈನಲ್ ಪಂದ್ಯದ ಕೊನೆಯ ಓವರಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದ ದೃಶ್ಯ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಕೊನೆಯ ಎಸೆತವನ್ನು ನಾನು ನೋಡಿಲ್ಲ. ಈ ವೇಳೆ ಸ್ಟೇಡಿಯಂನಲ್ಲಿರುವ ಪ್ರೇಕ್ಷಕರು ತಂಡವನ್ನು ಹೇಗೆ ಹುರಿದುಂಬಿಸುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಿದ್ದೆ ಎಂದು ಉತ್ತರ ನೀಡಿದ್ದರು.