Tag: IPL

  • ದೆಹಲಿ ತಂಡದ ಕ್ರಿಕೆಟ್ ಕಿಟ್ ಕಳವು – ಬೆಂಗಳೂರಿನಲ್ಲಿ ಇಬ್ಬರ ಬಂಧನ

    ದೆಹಲಿ ತಂಡದ ಕ್ರಿಕೆಟ್ ಕಿಟ್ ಕಳವು – ಬೆಂಗಳೂರಿನಲ್ಲಿ ಇಬ್ಬರ ಬಂಧನ

    ಬೆಂಗಳೂರು: ಹದಿನಾರನೇ ಆವೃತ್ತಿಯ ಐಪಿಎಲ್ (IPL) ಟೂರ್ನಿಯ ಐದು ಪಂದ್ಯಗಳನ್ನು ಸೋತು ಕಂಗಾಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals), ಕಿಟ್ ಕೂಡ ಕಳೆದುಕೊಂಡು ಆಘಾತಕ್ಕೀಡಾಗಿತ್ತು. ಅದರಲ್ಲೂ ತಂಡದ ಎಲ್ಲಾ ಆಟಗಾರರಿಗೆ ಹೊಸ ಕಿಟ್‍ನೊಂದಿಗೆ ಏ.20ರ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ತನ್ನ ಮೊದಲ ಗೆಲುವನ್ನು ಸಂಭ್ರಮಿಸಿತ್ತು. ಆದರೆ ಇದೀಗ ಡೆಲ್ಲಿ ತಂಡ ಸಂಭ್ರಮ ದುಪ್ಪಟ್ಟಾಗಿದೆ. ಕಳುವಾಗಿದ್ದ ಬ್ಯಾಟ್‍ಗಳು ಮತ್ತು ಕಿಟ್‍ಗಳನ್ನು ಪತ್ತೆ ಮಾಡುವಲ್ಲಿ ಕಬ್ಬನ್ ಪಾರ್ಕ್ ಪೊಲೀಸರು (Cubbon Park Police) ಯಶಸ್ವಿಯಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

    ಕಿಟ್ ಪತ್ತೆಯಾದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ (David Warner) ಅಧಿಕೃತ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಕಳ್ಳರನ್ನು ಪತ್ತೆ ಮಾಡಲಾಗಿದೆ, ಕೆಲ ವಸ್ತುಗಳು ಇನ್ನು ಲಭ್ಯವಾಗಿಲ್ಲ, ಪೊಲೀಸರಿಗೆ ಧನ್ಯವಾದಗಳು ಎಂದು ವಾರ್ನರ್ ತಮ್ಮ ಇನ್‍ಸ್ಟಾ ವಾಲ್ ಮೇಲೆ ಶುಕ್ರವಾರ ಪ್ರಕಟಿಸಿದ್ದರು. ಇದನ್ನೂ ಓದಿ: ಜಡೇಜಾ ಜಾದು, ಕಾನ್ವೆ ಕಿಕ್‌ – ತವರಿನಲ್ಲಿ ತಿಣುಕಾಡಿ ಗೆದ್ದ ಚೆನ್ನೈ; ಹೈದರಾಬಾದ್‌ ವಿರುದ್ಧ 7 ವಿಕೆಟ್‌ಗಳ ಜಯ

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಏ.15 ರಂದು ನಡೆದ ಪಂದ್ಯದಲ್ಲಿ 23 ರನ್‍ಗಳ ಸೋಲುಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ಮನೆಯಂಗಣಕ್ಕೆ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಡೆಲ್ಲಿ ತಂಡದ 17 ಕಿಟ್‍ಗಳು ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಪ್ರತಿ ಕಿಟ್ ಕನಿಷ್ಠ 1 ಲಕ್ಷ ರೂ. ಬೆಲೆ ಬಾಳುತ್ತವೆ ಎಂದು ಅಂದಾಜಿಸಲಾಗಿತ್ತು. ಅದರಲ್ಲೂ ವಿದೇಶಿ ಆಟಗಾರರು ಬಳಕೆ ಮಾಡುವ ಬ್ಯಾಟ್‍ಗಳು ಒಂದು ಕನಿಷ್ಠ 1 ಲಕ್ಷ ರೂ. ಮೌಲ್ಯದ್ದು ಎಂದು ಹೇಳಲಾಗಿತ್ತು.

    ಇದೀಗ ಪೊಲೀಸರ ಚುರುಕು ಕಾರ್ಯಾಚರಣೆಯಿಂದಾಗಿ ಕಳುವಾಗಿದ್ದ ಕಿಟ್‍ಗಳು ಪತ್ತೆಯಾಗಿವೆ. ಒಟ್ಟಾರೆ 17 ಬ್ಯಾಟ್‍ಗಳು, ಜೊತೆಗೆ ಗ್ಲೌಸ್, ಹೆಲ್ಮೆಟ್ ಸೇರಿ ಹಲವು ವಸ್ತುಗಳು ಪತ್ತೆ ಮಾಡುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೂ ಕೆಲ ಸಾಮಗ್ರಿಗಳು ಕಾಣಿಸುತ್ತಿಲ್ಲ ಎಂದು ಡೇವಿಡ್ ವಾರ್ನರ್ ಬರೆದುಕೊಂಡಿದ್ದಾರೆ.

    ಹಳೆಯ ಕಿಟ್ ಕಳುವಾಗಿ, ಹೊಸ ಕಿಟ್‍ನೊಂದಿಗೆ ಅಂಗಳಕ್ಕಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಓವರ್‍ವರೆಗೂ ಪ್ರಯತ್ನ ನಡೆಸಿ 4 ವಿಕೆಟ್‍ಗಳ ಜಯ ದಕ್ಕಿಸಿಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮುಂದಿನ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಎದುರು ಏ.24 ರಂದು ಪೈಪೋಟಿ ನಡೆಸಲಿದೆ.

    ಕಿಟ್‍ಗಳು ಕಳುವಾಗಿರುವ ವಿಚಾರ ಒಂದು ದಿನದ ಬಳಿಕ ಗಮನಕ್ಕೆ ಬಂದಿದೆ. ನಾಯಕ ಡೇವಿಡ್ ವಾರ್ನರ್ ಮತ್ತು ಸ್ಟಾರ್ ಬ್ಯಾಟರ್ ಮಿಚೆಲ್ ಸ್ಟಾರ್ಕ್ ತಲಾ 2 ಬ್ಯಾಟ್ ಕಳೆದುಕೊಂಡರೆ ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಮೂರು ಬ್ಯಾಟ್ ಕಳೆದುಕೊಂಡಿದ್ದರು. ಯುವ ಬ್ಯಾಟ್ಸ್‍ಮನ್ ಯಶ್ ಧುಲ್ 5 ಬ್ಯಾಟ್‍ಗಳನ್ನು ಕಳೆದುಕೊಂಡಿದ್ದರು ಎಂದು ಈ ಮೊದಲು ವರದಿಯಾಗಿತ್ತು. ಆಟಗಾರರ ಸರಕು ಸಾಗಾಟದ ಒಪ್ಪಂದವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿತ್ತು. ಹೀಗಾಗಿ ಆಟಗಾರರು ಕಿಟ್‍ಗಳ ಬಗ್ಗೆ ವೈಯಕ್ತಿಕವಾಗಿ ಗಮನ ಕೊಡುವುದಿಲ್ಲ. ಸರಕು ನಿರ್ವಹಣೆಯ ಸಂಸ್ಥೆಯು ಒಂದು ದಿನ ತಡವಾಗಿ ಕಳ್ಳತನದ ಸಂಗತಿಯನ್ನು ಡೆಲ್ಲಿ ಫ್ರಾಂಚೈಸಿಗೆ ತಿಳಿಸಿತ್ತು.

    ನಂತರ ಎಚ್ಚೆತ್ತುಕೊಂಡ ಡೆಲ್ಲಿ ಫ್ರಾಂಚೈಸಿ ಪೊಲೀಸರಿಗೆ ದೂರು ನೀಡಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕಿಟ್ ಕಳುವಾಗಿರುವ ವಿಚಾರ ಮುಟ್ಟಿಸಿದ್ದರು. ಅಲ್ಲದೆ ಬೆಂಗಳೂರಿನಲ್ಲಿ ಕಿಟ್ ಕಳುವಾದ ಶಂಕೆಯಿಂದ ಇಲ್ಲಿನ ಪೊಲೀಸರಿಗೆ ತಂಡ ಮಾಹಿತಿ ರವಾನಿಸಿತ್ತು. ಇದರ ಫಲವಾಗಿ ಬಹುತೇಕ ವಸ್ತುಗಳನ್ನು ಮರಳಿ ಪಡೆಯಲು ಸಾಧ್ಯವಾಗಿದೆ.

    ಕೆಕೆಆರ್ (KKR) ವಿರುದ್ಧದ ಪಂದ್ಯದಲ್ಲಿ ಅನುಭವಿ ವೇಗಿ ಇಶಾಂತ್ ಶರ್ಮಾ 2 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು. 2021ರ ಬಳಿಕ ಐಪಿಎಲ್‍ಗೆ ಮರಳಿದ್ದ ಇಶಾಂತ್ ಮೊದಲ ಪಂದ್ಯದಲ್ಲೇ ತಮ್ಮ ಅನುಭವ ಪ್ರದರ್ಶಿಸಿ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ. ಪಂದ್ಯದಲ್ಲಿ ನಾಯಕ ಡೇವಿಡ್ ವಾರ್ನರ್ ಕೂಡ ಮನಮೋಹಕ ಅರ್ಧಶತಕ ಸಿಡಿಸಿ ಗೆಲುವಿಗೆ ಸಹಕರಿಸಿದ್ದರು. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?

  • ಮ್ಯಾಕ್ಸಿ, ಡುಪ್ಲೆಸಿಸ್‌ ಸ್ಫೋಟಕ ಫಿಫ್ಟಿ – ಹೋರಾಡಿ ಕೊನೆಗೆ ಸೋತ ಆರ್‌ಸಿಬಿ

    ಮ್ಯಾಕ್ಸಿ, ಡುಪ್ಲೆಸಿಸ್‌ ಸ್ಫೋಟಕ ಫಿಫ್ಟಿ – ಹೋರಾಡಿ ಕೊನೆಗೆ ಸೋತ ಆರ್‌ಸಿಬಿ

    ಬೆಂಗಳೂರು: ಮ್ಯಾಕ್ಸ್‌ವೆಲ್‌, ನಾಯಕ ಡುಪ್ಲೆಸಿಸ್‌ ಸ್ಫೋಟಕ ಅರ್ಧಶತಕದ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವಿರುದ್ಧ ತವರಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ಸೋತಿದೆ. ಕ್ಯಾಚ್‌ ಕೈ ಚೆಲ್ಲಿದ್ದರೂ ಕೊನೆಯಲ್ಲಿ ಬೌಲರ್‌ಗಳ ಉತ್ತಮ ಆಟದಿಂದ ಬೆಂಗಳೂರು ವಿರುದ್ಧ ಚೆನ್ನೈ 8 ರನ್‌ಗಳ ಜಯ ಸಾಧಿಸಿದೆ.

    ಗೆಲ್ಲಲು 227 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಮ್ಯಾಕ್ಸ್‌ವೆಲ್‌ (Maxwell) ಮತ್ತು ಡುಪ್ಲೆಸಿಸ್‌ (F du Plessis) ಆಟದಿಂದಾಗಿ ಜಯದತ್ತ ಬಂದಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಕಳೆದುಕೊಂಡಿದ್ದರಿಂದ ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 218 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಆರಂಭದಲ್ಲೇ ಕುಸಿತ:
    ಮೊದಲ ಓವರ್‌ನಲ್ಲಿ 6 ರನ್‌ ಗಳಿಸಿದ್ದ ಕೊಹ್ಲಿ (Kohli) ಔಟಾದರು. ಬ್ಯಾಟ್‌ಗೆ ಬಡಿದ ಚೆಂಡು ಕಾಲಿಗೆ ಸಿಕ್ಕಿ ವಿಕೆಟಿಗೆ ಬಡಿಯಿತು. ನಂತರ ಬಂದ ಮಹಿಪಾಲ್ ಲೋಮ್ರೋರ್ ಸೊನ್ನೆ ಸುತ್ತಿದರು.

    2 ಓವರ್‌ ಅಂತ್ಯಕ್ಕೆ 15 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್‌ಸಿಬಿಗೆ ನಾಯಕ ಡುಪ್ಲೆಸಿಸ್‌ ಮತ್ತು ಮ್ಯಾಕ್ಸ್‌ವೆಲ್‌ ಜೀವ ತುಂಬಿದರು. ಚೆನ್ನೈ ಬೌಲರ್‌ಗಳನ್ನು ಚೆಂಡಾಡಿದ ಇಬ್ಬರು ಮೂರನೇ ವಿಕೆಟಿಗೆ 61 ಎಸೆತಗಳಲ್ಲಿ 126 ರನ್‌ ಜೊತೆಯಾಟವಾಡಿದರು. ಮ್ಯಾಕ್ಸ್‌ವೆಲ್‌ 76 ರನ್‌ (36 ಎಸೆತ, 3 ಬೌಂಡರಿ, 8 ಸಿಕ್ಸರ್‌) ಡುಪ್ಲೆಸಿಸ್‌ 62 ರನ್‌(33 ಎಸೆತ, 5 ಬೌಂಡರಿ, 4 ಸಿಕ್ಸರ್)‌ ಹೊಡೆದು ಔಟಾದರು.

    ದಿನೇಶ್‌ ಕಾರ್ತಿಕ್‌ 28 ರನ್‌(14ಎಸೆತ, 3 ಬೌಂಡರಿ, 2 ಸಿಕ್ಸರ್‌), ಕೊನೆಯಲ್ಲಿ ಪ್ರಭುದೇಸಾಯಿ 19 ರನ್‌(11 ಎಸೆತ, 2 ಸಿಕ್ಸರ್‌) ಹೊಡೆದು ಔಟಾದರು. 16.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 191 ರನ್‌ಗಳಿಸಿದ್ದ ಬೆಂಗಳೂರು 27 ರನ್‌ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಳ್ಳುವ ಮೂಲಕ ಸೋಲನ್ನು ಒಪ್ಪಿಕೊಂಡಿತು.

    ಚೆನ್ನೈ ಸವಾಲಿನ ಮೊತ್ತ:
    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ 16 ರನ್‌ ಗಳಿಸುವಷ್ಟರಲ್ಲೇ ಋತುರಾಜ್‌ ಗಾಯಕ್‌ವಾಡ್‌ ವಿಕೆಟ್‌ ಕಳೆದುಕೊಂಡಿತ್ತು. ಎರಡನೇ ವಿಕೆಟಿಗೆ ಡೆವೊನ್‌ ಕಾನ್ವೇ ಮತ್ತು ಅಜಿಂಕ್ಯ ರಹಾನೆ 43 ಎಸೆತಗಳಲ್ಲಿ 74 ರನ್‌ ಜೊತೆಯಾಟವಾಡಿದರು. ರಹಾನೆ 37 ರನ್‌(20 ಎಸೆತ, 3 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು.

    3ನೇ ವಿಕೆಟಿಗೆ ಕಾನ್ವೇ ಮತ್ತು ಶಿವಂ ದುಬೆ 37 ಎಸೆತಗಳಲ್ಲಿ 80 ರನ್‌ ಚಚ್ಚಿದರು. ಶಿವಂ ದುಬೆ 52 ರನ್‌ (27 ಎಸೆತ, 2 ಬೌಂಡರಿ, 5 ಸಿಕ್ಸರ್)‌, ಕಾನ್ವೇ 83 ರನ್‌(45 ಎಸೆತ, 6 ಬೌಂಡರಿ, 6 ಸಿಕ್ಸರ್‌) ಹೊಡೆದು ಔಟಾದರು. ಅಂಬಾಟಿ ರಾಯಡು 14 ರನ್‌, ಮೊಯಿನ್‌ ಅಲಿ ಔಟಾಗದೇ 19 ರನ್‌( 9 ಎಸೆತ, 2 ಸಿಕ್ಸರ್)‌ ಹೊಡೆದ ಪರಿಣಾಮ ಚೆನ್ನೈ 6 ವಿಕೆಟ್‌ ನಷ್ಟಕ್ಕೆ 226 ರನ್‌ ಹೊಡೆಯಿತು.

    ರನ್‌ ಏರಿದ್ದು ಹೇಗೆ?
    50 ರನ್‌ – 36 ಎಸೆತ
    100 ರನ್‌ – 64 ಎಸೆತ
    150 ರನ್‌ – 87 ಎಸೆತ
    200 ರನ್‌ – 108 ಎಸೆತ
    226 ರನ್‌ – 120 ಎಸೆತ

  • ಕೊಹ್ಲಿಯನ್ನು ಕಂಡರೂ ನೋಡದ ಗಂಗೂಲಿ – ವೀಡಿಯೋ ವೈರಲ್

    ಕೊಹ್ಲಿಯನ್ನು ಕಂಡರೂ ನೋಡದ ಗಂಗೂಲಿ – ವೀಡಿಯೋ ವೈರಲ್

    ನವದೆಹಲಿ: ಟೀಂ ಇಂಡಿಯಾದ (Team India) ಇಬ್ಬರು ಮಾಜಿ ನಾಯಕರ ನಡುವಿನ ಶೀತಲ ಸಮರಕ್ಕೆ ಪುಷ್ಠಿ ನೀಡುವಂತಹ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಬೆಂಗಳೂರು (RCB) ಹಾಗೂ ಡೆಲ್ಲಿ (DC)  ನಡುವಿನ ಐಪಿಎಲ್ (IPL) ಪಂದ್ಯದ ವೇಳೆ ಕೊಹ್ಲಿಯ  (Virat Kohli) ಎದುರಲ್ಲೇ ಗಂಗೂಲಿ (Sourav Ganguly) ಹೋಗಿದ್ದಾರೆ. ಎದುರುಗಡೆ ಕೊಹ್ಲಿ ಕುಳಿತಿದ್ದರೂ ಬೇಕೆಂದೇ ಗಂಗೂಲಿ ಕೊಹ್ಲಿಯನ್ನು ನೋಡಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ʻಹಿಟ್‌ʼ ಮೇಯರ್‌, ಸಂಜು ಸೂಪರ್‌ ಸಿಕ್ಸರ್‌ – ರೋಚಕ ಪಂದ್ಯದಲ್ಲಿ ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ

    ಪಂದ್ಯ ಮುಗಿದ ಬಳಿಕ ಕೊಹ್ಲಿ ಎಲ್ಲಾ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡುತ್ತಿದ್ದರು ಈ ವೇಳೆ ಗಂಗೂಲಿ ಹತ್ತಿರ ಬಂದಾಗ ಪಾಂಟಿಂಗ್ ಜೊತೆ ಮಾತನಾಡಿದ ವೀಡಿಯೋ ಹರಿದಾಡುತ್ತಿದೆ.

    ಬಿಸಿಸಿಐ (BCCI) ಅಧ್ಯಕ್ಷರಾದ ಬಳಿಕ ಕೊಹ್ಲಿ ಮತ್ತು ಗಂಗೂಲಿ ಸಂಬಂಧ ಹಳಸಿತ್ತು. ಕೊಹ್ಲಿಯನ್ನು ನಾಯಕಪಟ್ಟದಿಂದ ಇಳಿಸಲು ಗಂಗೂಲಿಯೇ ಕಾರಣ ಎಂಬ ಸುದ್ದಿಗಳು ಹರಿದಾಡಿದ್ದವು.

    ನಾಯಕತ್ವ ಬದಲಾವಣೆ ವೇಳೆ ಯಾವುದೇ ಪೂರ್ವ ಮಾಹಿತಿ ನೀಡಿರಲಿಲ್ಲ. ನೇರವಾಗಿ ಏಕದಿನ ಪಂದ್ಯದ ನಾಯಕತ್ವದಿಂದ ಕೆಳಗಿಳಿಸಲಾಯಿತು ಎಂದು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕೊಹ್ಲಿ ಹೇಳಿದ್ದರು. ಇದನ್ನೂ ಓದಿ: IPL 2023: ಕೊನೆಗೂ ಐಪಿಎಲ್‌ಗೆ ಎಂಟ್ರಿಕೊಟ್ಟ ಸಚಿನ್‌ ತೆಂಡೂಲ್ಕರ್‌ ಪುತ್ರ

  • ಖೂಷ್ಬೂ ಸುಂದರ್ ಅತ್ತೆಯನ್ನು ಭೇಟಿಯಾದ ಧೋನಿ

    ಖೂಷ್ಬೂ ಸುಂದರ್ ಅತ್ತೆಯನ್ನು ಭೇಟಿಯಾದ ಧೋನಿ

    ಮುಂಬೈ: ಎಂಎಸ್ ಧೋನಿ (Dhoni) ಇತ್ತೀಚೆಗೆ ಬಿಜೆಪಿ (BJP) ನಾಯಕಿ ಖುಷ್ಬೂ ಸುಂದರ್ (Khushbu Sundar) ಅವರ ಅತ್ತೆಯವರನ್ನು ಭೇಟಿಯಾಗಿದ್ದಾರೆ.

    ದೇಶದಲ್ಲಿ, ಒಂಬತ್ತರಿಂದ ತೊಂಬತ್ತು ವರ್ಷ ವಯಸ್ಸಿನವರೆಗಿನ ಎಲ್ಲರೂ ಧೋನಿಯನ್ನು ಮೆಚ್ಚುತ್ತಾರೆ. ಯಾಕೆಂದರೆ ಧೋನಿ ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯಸ್ಪರ್ಶಿಯಾಗಿದ್ದಾರೆ. ಆದರಲ್ಲೂ ಚೆನ್ನೈನಲ್ಲಿ (Chennai) ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ ಇನ್ನೂ ಹೆಚ್ಚಿನ ವಿಶೇಷ ಸ್ಥಾನಮಾನ ನೀಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ (CSK) ನಾಯಕತ್ವ ವಹಿಸಿದ್ದಾಗಿನಿಂದ ಧೋನಿ ಚೆನ್ನೈನೊಂದಿಗಿನ ಪ್ರೀತಿಯ ಸಂಬಂಧವು ಗಾಢವಾಗಿ ಬೆಳೆದಿದೆ.

    ಖುಷ್ಬೂ ಸುಂದರ್ ಅವರ ಅತ್ತೆಯನ್ನು ಭೇಟಿಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕಿ ಹಂಚಿಕೊಂಡಿದ್ದಾರೆ. ಅಲ್ಲದೆ ಹೀರೋಗಳನ್ನು ಸೃಷ್ಟಿಸಲಾಗುವುದಿಲ್ಲ, ಅವರು ಹುಟ್ಟುತ್ತಲೇ ಹೀರೋಗಳಾಗಿರುತ್ತಾರೆ. ಧೋನಿ ಅದನ್ನು ಸಾಬೀತು ಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. 88ರ ನನ್ನ ಅತ್ತೆಯನ್ನು ಭೇಟಿಯಾಗಿ ನೀವು ಅವರ ಜೀವನಕ್ಕೆ ಅನೇಕ ವರ್ಷಗಳ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಸೇರಿಸಿದ್ದೀರಿ. ಇದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾವ ತಂಡದ ಕೋಚ್ ಆಗ್ತೀರಿ – ಅಭಿಮಾನಿಯ ಪ್ರಶ್ನೆಗೆ ಜಾಣ್ಮೆಯ ಉತ್ತರ ಕೊಟ್ಟ ರವಿ ಶಾಸ್ತ್ರಿ

    ಈ ನಡುವೆ ಧೋನಿಯ ಕೊನೆಯ ಐಪಿಎಲ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಧೋನಿ ನಂತರ ಋತುರಾಜ್ ಗಾಯಕ್ವಾಡ್ ಸಿಎಸ್‍ಕೆ ನಾಯಕರಾಗಬಹುದು. ರವೀಂದ್ರ ಜಡೇಜಾ (Ravindra Jadeja) ಜೊತೆಗೆ ಬೆನ್ ಸ್ಟೋಕ್ಸ್ ಹೆಸರು ಪಟ್ಟಿಯಲ್ಲಿದೆ. ಇದನ್ನೂ ಓದಿ: ಕೊನೆಯವರೆಗೂ ಹೋರಾಡಿದ ರಿಂಕು – ಹೈದರಾಬಾದ್‌ಗೆ 23 ರನ್‌ಗಳ ಜಯ

  • ಧೋನಿಯ 9 ವರ್ಷದ ಹಿಂದಿನ ಟ್ವೀಟ್ ವೈರಲ್

    ಧೋನಿಯ 9 ವರ್ಷದ ಹಿಂದಿನ ಟ್ವೀಟ್ ವೈರಲ್

    ನವದೆಹಲಿ: ರಾಜಸ್ಥಾನದ (Rajasthan Royals) ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ನಾಯಕ ಧೋನಿಯ ಅಬ್ಬರದ ಬ್ಯಾಟಿಂಗ್ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಮೂರು ರನ್‍ಗಳ ಅಂತರದಲ್ಲಿ ಸೋಲು ಕಂಡಿತು. ಇದರ ಬೆನ್ನಲ್ಲೇ ಒಂಬತ್ತು ವರ್ಷಗಳ ಹಿಂದೆ ಧೋನಿ (MS Dhoni) ಪ್ರಕಟಿಸಿದ್ದ ಟ್ವೀಟ್ ವೃರಲ್ ಆಗುತ್ತಿದೆ.

    ಟ್ವೀಟ್‍ನಲ್ಲಿ ಧೋನಿ ಯಾವ ತಂಡ ಗೆದ್ದರೂ ಪರವಾಗಿಲ್ಲ. ನಾನಿಲ್ಲಿ ಮನರಂಜನೆಗಾಗಿ ಇದ್ದೇನೆ ಎಂದು ಬರೆದಿದ್ದರು. ಇದನ್ನೂ ಓದಿ: IPL 2023: ಕೊನೆಯವರೆಗೂ ಹೋರಾಡಿ ಸೋತ ಚೆನ್ನೈ – ರಾಜಸ್ಥಾನ್‌ ರಾಯಲ್ಸ್‌ಗೆ 3 ರನ್‌ಗಳ ರೋಚಕ ಜಯ

    ಕಳೆದ ಪಂದ್ಯಕ್ಕೂ ಈ ಟ್ವೀಟ್‍ಗೂ ಹೊಂದಿಕೊಳ್ಳುತ್ತದೆ. ಏಕೆಂದರೆ ಧೋನಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಿದ್ದರು.

    ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 175 ರನ್ ಹೊಡೆದಿತ್ತು. ನಂತರ ಬ್ಯಾಟ್ ಮಾಡಿದ ಚೆನ್ನೈಗೆ ಕೊನೆಯ 18 ಎಸೆತಗಳಲ್ಲಿ 54 ರನ್ ಬೇಕಿತ್ತು. ಧೋನಿ ಮತ್ತು ಜಡೇಜಾ (Jadeja) ಕ್ರೀಸ್‍ನಲ್ಲಿದ್ದರು. 18ನೇ ಓವರ್‍ನಲ್ಲಿ 14 ರನ್ ಬಂದಿದ್ದರೆ 19ನೇ ಓವರ್‌ನಲ್ಲಿ 19 ರನ್ ಬಂದಿತ್ತು. ಈ ಓವರ್‍ನಲ್ಲಿ ಜಡೇಜಾ 2 ಸಿಕ್ಸ್ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್ ನೀಡಿದರು.

    ಕೊನೆಯ ಓವರ್‍ನಲ್ಲಿ 21 ರನ್ ಬೇಕಿತ್ತು. ಸಂದೀಪ್ ಶರ್ಮಾ ಎಸೆದ ಮೊದಲ ಎರಡು ಎಸೆತ ವೈಡ್ ಆಗಿತ್ತು. ಎರಡು ಮತ್ತು ಮೂರನೇ ಎಸೆತವನ್ನು ಧೋನಿ ಸಿಕ್ಸರ್‍ಗೆ ಅಟ್ಟಿದ ಹಿನ್ನೆಲೆಯಲ್ಲಿ ಕೊನೆಯ ಮೂರು ಎಸೆತಗಳಲ್ಲಿ 7 ರನ್ ಬೇಕಿತ್ತು. ನಂತರದ ಮೂರು ಎಸೆತಗಳಲ್ಲಿ ಸಿಂಗಲ್ ರನ್ ಬಂದ ಹಿನ್ನೆಲೆಯಲ್ಲಿ ಚೆನ್ನೈ ತಂಡ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಧೋನಿ ಸಿಕ್ಸ್‌ – ಜಿಯೋ ಸಿನಿಮಾದಲ್ಲಿ ದಾಖಲೆ ಫಿಕ್ಸ್‌

  • ಧೋನಿ ಸಿಕ್ಸ್‌ – ಜಿಯೋ ಸಿನಿಮಾದಲ್ಲಿ ದಾಖಲೆ ಫಿಕ್ಸ್‌

    ಧೋನಿ ಸಿಕ್ಸ್‌ – ಜಿಯೋ ಸಿನಿಮಾದಲ್ಲಿ ದಾಖಲೆ ಫಿಕ್ಸ್‌

    ಚೆನ್ನೈ: ರಾಜಸ್ಥಾನ ರಾಯಲ್ಸ್‌ (Rajasthan Royals) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಮಧ್ಯೆ ನಡೆದ ಐಪಿಎಲ್‌ (IPL) ಪಂದ್ಯ ಜಿಯೋ ಸಿನಿಮಾ (Jio Cinema) ಆಪ್‌ನಲ್ಲಿ ದಾಖಲೆ ಬರೆದಿದೆ.

    ನಾಯಕ ಧೋನಿ (MS Dhoni) ಮತ್ತು ರವೀಂದ್ರ ಜಡೇಜಾ (Ravindra Jadeja) ಅವರು 20ನೇ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದರು. ಈ ವೇಳೆ ಜಿಯೋ ಸಿನಿಮಾದಲ್ಲಿ 2.2 ಕೋಟಿ ಮಂದಿ ವೀಕ್ಷಣೆ ಮಾಡುತ್ತಿದ್ದರು. ಇದು ಈವರೆಗೆ ಜಿಯೋ ಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಐಪಿಎಲ್‌ ಪಂದ್ಯವಾಗಿದೆ.

    ಈ ಹಿಂದೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್‌ ಮಾಡುತ್ತಿದ್ದಾಗ 1.7 ಕೋಟಿ ಮಂದಿ ಜಿಯೋ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದರು. ಇದು ಮೂರನೇ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯವಾಗಿದೆ. ಈ ಪಂದ್ಯದಲ್ಲಿ 20ನೇ ಓವರ್‌ನಲ್ಲಿ ಕ್ರೀಸ್‌ಗೆ ಆಗಮಿಸಿದ ಧೋನಿ 3 ಎಸೆತದಲ್ಲಿ 2 ಸಿಕ್ಸರ್‌ ಸಿಡಿಸಿ ಔಟಾಗಿದ್ದರು.

    ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯಗಳು
    1. ಚೆನ್ನೈ ಸೂಪರ್‌ ಕಿಂಗ್ಸ್‌ Vs ರಾಜಸ್ಥಾನ ರಾಯಲ್ಸ್‌ – 2.2 ಕೋಟಿ
    2. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು Vs ಲಕ್ನೋ ಸೂಪರ್‌ ಜೈಂಟ್ಸ್‌ – 1.8 ಕೋಟಿ
    3. ಮುಂಬೈ ಇಂಡಿಯನ್ಸ್‌ Vs ಡೆಲ್ಲಿ ಕ್ಯಾಪಿಟಲ್ಸ್‌ – 1.7 ಕೋಟಿ
    4. ಚೆನ್ನೈ ಸೂಪರ್‌ ಕಿಂಗ್ಸ್‌ Vs ಲಕ್ನೋ ಸೂಪರ್‌ ಜೈಂಟ್ಸ್‌ – 1.7 ಕೋಟಿ
    5. ಚೆನ್ನೈ ಸೂಪರ್‌ ಕಿಂಗ್ಸ್‌ Vs ಗುಜರಾತ್‌ ಟೈಟಾನ್ಸ್‌ – 1.6 ಕೋಟಿ  ಇದನ್ನೂ ಓದಿ: ಮ್ಯಾಜಿಕ್‌ ಮಹಿಗೆ 200ರ ಸಂಭ್ರಮ – ಕೊನೆಯ IPLನಲ್ಲಿ ವಿಶೇಷ ಸಾಧನೆ ಮಾಡಿದ ಧೋನಿ!

    ಇಷ್ಟೊಂದು ವೀಕ್ಷಣೆ ಯಾಕಾಯ್ತು?
    ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 8 ವಿಕೆಟ್‌ ನಷ್ಟಕ್ಕೆ 175 ರನ್‌ ಹೊಡೆದಿತ್ತು. ನಂತರ ಬ್ಯಾಟ್‌ ಮಾಡಿದ ಚೆನ್ನೈಗೆ ಕೊನೆಯ 18 ಎಸೆತಗಳಲ್ಲಿ 54 ರನ್‌ ಬೇಕಿತ್ತು. ಧೋನಿ ಮತ್ತು ಜಡೇಜಾ ಕ್ರೀಸ್‌ನಲ್ಲಿದ್ದರು. 18ನೇ ಓವರ್‌ನಲ್ಲಿ 14 ರನ್‌ ಬಂದಿದ್ದರೆ 19ನೇ ಓವರ್‌ನಲ್ಲಿ 19 ರನ್‌ ಬಂದಿತ್ತು. ಈ ಓವರ್‌ನಲ್ಲಿ ಜಡೇಜಾ 2 ಸಿಕ್ಸ್‌ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್‌ ನೀಡಿದರು.

    ಕೊನೆಯ ಓವರ್‌ನಲ್ಲಿ 21 ರನ್‌ ಬೇಕಿತ್ತು. ಸಂದೀಪ್‌ ಶರ್ಮಾ ಎಸೆದ ಮೊದಲ ಎರಡು ಎಸೆತ ವೈಡ್‌ ಆಗಿತ್ತು. ಎರಡು ಮತ್ತು ಮೂರನೇ ಎಸೆತವನ್ನು ಧೋನಿ ಸಿಕ್ಸರ್‌ಗೆ ಅಟ್ಟಿದ ಹಿನ್ನೆಲೆಯಲ್ಲಿ ಕೊನೆಯ ಮೂರು ಎಸೆತಗಳಲ್ಲಿ 7 ರನ್‌ ಬೇಕಿತ್ತು. ನಂತರದ ಮೂರು ಎಸೆತಗಳಲ್ಲಿ ಸಿಂಗಲ್‌ ರನ್‌ ಬಂದ ಹಿನ್ನೆಲೆಯಲ್ಲಿ ಚೆನ್ನೈ ತಂಡ ಅಂತಿಮವಾಗಿ 6 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತು.

    ಈ ಹಿಂದೆ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಐಪಿಎಲ್‌ ಲಭ್ಯವಿರಲಿಲ್ಲ. ಆದರೆ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಐಪಿಎಲ್‌ ವೀಕ್ಷಣೆ ಮಾಡಲು ಅವಕಾಶವಿರುವುದರಿಂದ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ.

    ಏಪ್ರಿಲ್‌ 17 ರಂದು ಬೆಂಗಳೂರು ಮತ್ತು ಚೆನ್ನೈ ನಡುವಿನ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಎಷ್ಟು ವೀಕ್ಷಣೆಯಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.

  • ಸಿಕ್ಸರ್‌, ಬೌಂಡರಿಗಳಿಂದಲೇ 50 ರನ್‌ – ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಧಶತಕ ಅರ್ಪಿಸಿದ ಪೂರನ್‌

    ಸಿಕ್ಸರ್‌, ಬೌಂಡರಿಗಳಿಂದಲೇ 50 ರನ್‌ – ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಧಶತಕ ಅರ್ಪಿಸಿದ ಪೂರನ್‌

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಲಕ್ನೋ ಸೂಪರ್‌ ಜೈಂಟ್ಸ್‌ (LSG)1 ರನ್‌ಗಳ ರೋಚಕ ಗೆಲುವಿಗೆ ಕಾರಣರಾದ ನಿಕೂಲಸ್‌ ಪೂರನ್‌ (Nicholas Pooran) ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ಮತ್ತು ಮಗುವಿಗೆ ಅರ್ಪಿಸಿದ್ದಾರೆ.

    ಪಂದ್ಯ ಮುಗಿದ ಬಳಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂರನ್‌, ಸ್ಟೊಯ್ನಿಸ್‌ ಮತ್ತು ಕೆಎಲ್ ರಾಹುಲ್‌ (KL Rahul) ಉತ್ತಮ ಜೊತೆಯಾಟ ನೀಡಿದರು. ಕೊನೆಯ 4 ಓವರ್‌ಗಳಲ್ಲಿ 50 ರನ್‌ ಚೇಸ್‌ ಮಾಡಬಹುದಿತ್ತು. ಆದರೆ ನಾನು ಆರಂಭದಿಂದಲೂ ಹೊಡೆಯಲು ಯತ್ನಿಸಿದೆ. ಎರಡನೇ ಎಸೆತದಲ್ಲಿ ನಾನು ಸಿಕ್ಸ್‌ (Six) ಹೊಡೆದೆ. ಕೊನೆಯವರೆಗೆ ಇದ್ದು ತಂಡವನ್ನು ಗೆಲ್ಲಿಸಬೇಕು ಎಂದು ಪ್ರಯತ್ನಿಸಿದ್ದೆ. ಆದರೆ ಇದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

    ಐಪಿಎಲ್‌ ದಾಖಲೆ:
    ಬೆಂಗಳೂರು (Bengaluru) ವಿರುದ್ಧದ ಪಂದ್ಯದಲ್ಲಿ ಪೂರನ್‌ 15 ಎಸೆತಗಳಲ್ಲಿ 50 ರನ್‌ ಹೊಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ವರ್ಷದ ಐಪಿಎಲ್‌ ಆವೃತ್ತಿಯಲ್ಲಿ ದಾಖಲಾದ ವೇಗದ ಅರ್ಧಶತಕ ಎಂಬ ಹೆಗ್ಗಳಿಕೆಗೆ ಪೂರನ್‌ ಪಾತ್ರರಾಗಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ಎರಡನೇ ವೇಗದ ಅರ್ಧಶತಕ ಹೊಡೆದ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಪೂರನ್‌ ಈಗ ಸೇರ್ಪಡೆಯಾಗಿದ್ದಾರೆ.

    ಈ ಹಿಂದೆ ಕೆಎಲ್‌ ರಾಹುಲ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ 14 ಎಸೆತಗಳಲ್ಲಿ 50 ರನ್‌ ಹೊಡೆದಿದ್ದರು. ಯೂಸೂಫ್‌ ಪಠಾಣ್‌, ಸುನಿಲ್‌ ನರೈನ್‌ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

    ಆರಂಭದಿಂದಲೇ ಸ್ಫೋಟಕ ಆಟ:
    213 ರನ್‌ಗಳ ಗುರಿಯನ್ನು ಪಡೆದ ಲಕ್ನೋ 23 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. 10.4 ಓವರ್‌ಗಳಲ್ಲಿ 99 ರನ್‌ ಆದಾಗ ಸ್ಟೊಯ್ನಿಸ್‌ ಔಟಾದಾಗ ಪಂದ್ಯ ಆರ್‌ಸಿಬಿ ಕಡೆ ವಾಲಿತ್ತು. ಬೆಂಗಳೂರು ಕಡೆ ವಾಲಿದ ಪಂದ್ಯವನ್ನು ಬ್ಯಾಟ್‌ ಮೂಲಕ ಲಕ್ನೋ ಕಡೆಗೆ ಪೂರನ್‌ ವಾಲಿಸಿದರು. ಎರಡನೇ ಎಸೆತದಲ್ಲಿ ಸಿಕ್ಸ್‌ ಹೊಡೆದು ಅಬ್ಬರಿಸಿದ್ದ ಪೂರನ್‌ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಅಂತಿಮವಾಗಿ 62 ರನ್‌ (19 ಎಸೆತ, 4 ಬೌಂಡರಿ, 7 ಸಿಕ್ಸ್‌) ಹೊಡೆದು ಔಟಾದರು. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ 115 ಮೀಟರ್‌ ಸಿಕ್ಸ್‌ – ಡುಪ್ಲೆಸಿಸ್‌ ಈಗ ಸಿಕ್ಸರ್‌ ವೀರ ಅಂದ್ರು ಫ್ಯಾನ್ಸ್‌

    19 ಎಸೆತಗಳ ಪೈಕಿ 3 ಎಸೆತಗಳಲ್ಲಿ (0,6,0,0,4,6,6,1,6,1,4,6,4,1,6,4,1,6,W) ಮಾತ್ರ ಪೂರನ್‌ ರನ್‌ ಹೊಡೆದಿರಲಿಲ್ಲ. ಸಿಕ್ಸ್‌ ಮತ್ತು ಬೌಂಡರಿ ಮೂಲಕವೇ ಪೂರನ್‌ 58 ರನ್‌ ಚಚ್ಚಿದ್ದರು.

    ಪೂರನ್‌ ಮತ್ತು ಆಯುಷ್ ಬದೋನಿ 6ನೇ ವಿಕೆಟಿಗೆ ಕೇವಲ 35 ಎಸೆತಗಳಲ್ಲಿ 84 ರನ್‌ ಬಾರಿಸಿದ್ದರು. ಈ ಪೈಕಿ ಪೂರನ್‌ 17 ಎಸೆತಗಳಲ್ಲಿ 56 ರನ್‌ ಹೊಡೆದಿದ್ದರು. ಪೂರನ್‌ ಕ್ರೀಸ್‌ಗೆ ಬರುವಾಗ ಲಕ್ನೋ ತಂಡದ ಗೆಲುವಿಗೆ 56 ಎಸೆತಗಳಲ್ಲಿ 114 ರನ್‌ ಬೇಕಿತ್ತು. ಪೂರನ್‌ ಔಟಾದಾಗ ಗೆಲುವಿಗೆ 18 ಎಸೆತಗಳಲ್ಲಿ 24 ರನ್‌ಗಳ ಅಗತ್ಯವಿತ್ತು.

    ಮೊದಲ 6 ಓವರ್‌ ಪವರ್‌ ಪ್ಲೇನಲ್ಲಿ ಲಕ್ನೋ ತಂಡ 3 ವಿಕೆಟ್‌ ಕಳೆದುಕೊಂಡು 38 ರನ್‌ ಗಳಿಸಿತ್ತು. ಆದರೆ 8ನೇ ಓವರ್‌ನಿಂದ 16ನೇ ಓವರ್‌ ಅಂದರೆ 9 ಓವರ್‌ಗಳಲ್ಲಿ ಬರೋಬ್ಬರಿ 125 ರನ್‌ ಚಚ್ಚಿದ ಪರಿಣಾಮ ಲಕ್ನೋ ತಂಡ 1 ರನ್‌ಗಳ ರೋಚಕ ಜಯ ಸಾಧಿಸಿದೆ.

  • ದೀಪಕ್ ಚಹರ್ ಮುಂದಿನ ನಾಲ್ಕೈದು ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇಲ್ಲ: ಸುರೇಶ್ ರೈನಾ

    ದೀಪಕ್ ಚಹರ್ ಮುಂದಿನ ನಾಲ್ಕೈದು ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇಲ್ಲ: ಸುರೇಶ್ ರೈನಾ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಬೌಲರ್ ದೀಪಕ್ ಚಹರ್ (Deepak Chahar) ಮುಂದಿನ ನಾಲ್ಕೈದು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.

    ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಶನಿವಾರದ ಪಂದ್ಯದ ವೇಳೆ ದೀಪಕ್ ಚಹರ್ ಅವರು ಮಂಡಿಯ ಗಾಯದಿಂದ ಬಳಲಿದ್ದಾರೆ. ಈ ಸಮಸ್ಯೆಯಿಂದಾಗಿ ಐಪಿಎಲ್‍ನ 4 ರಿಂದ 5 ಪಂದ್ಯಗಳಲ್ಲಿ ಚಹರ್ ಹೊರಗುಳಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್‌ – 10 ವರ್ಷದ ಹಿಂದೆ ʼಸರ್‌ ಜಡೇಜಾʼ ಎಂದಿದ್ದ ಧೋನಿ ಟ್ವೀಟ್‌ ವೈರಲ್‌

    ಪಂದ್ಯದ ಕಾಮೆಂಟರಿ ವೇಳೆ ಸಿಎಸ್‍ಕೆ ಮಾಜಿ ಆಟಗಾರ ಸುರೇಶ್ ರೈನಾ (Suresh Raina), ಮಂಡಿಯ ಗಾಯದಿಂದ ಚಹರ್ ಬಳಲುತ್ತಿರುವಂತೆ ತೋರುತ್ತದೆ. ಮುಂದಿನ ಪಂದ್ಯಗಳಿಗೆ ಚೆನ್ನೈನಿಂದ ದೂರ ಪ್ರಯಾಣಿಸಬೇಕಿರುವುದರಿಂದ ಕೆಲವು ಪಂದ್ಯಗಳಲ್ಲಿ ಅವರು ಆಡುವ ನಿರೀಕ್ಷೆಯಿಲ್ಲ ಎಂದಿದ್ದಾರೆ.

    ಚಹರ್ ಅವರನ್ನು ಮೊದಲ ಓವರ್‌ಗೆ ಸೀಮಿತಗೊಳಿಸಲಾಯಿತು. ನಮ್ಮ ತಂಡದ ಮಗಲಾ (Magala), ಪಿಟ್ರೋರಿಯಸ್ ಹಾಗೂ ತುಷಾರ್ ದೇಶಪಾಂಡೆ ಅತ್ಯುತ್ತಮ ಬಾಲಿಂಗ್ ಪ್ರದರ್ಶನ ಮಾಡಿದ್ದಾರೆ ಎಂದು ಧೋನಿ (MS Dhoni) ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಹರ್ ದೀರ್ಘಕಾಲದ ಗಾಯದ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆದ ಐಪಿಎಲ್‍ನಲ್ಲಿ ಬೆನ್ನು ನೋವಿನಿಂದ ಬಳಲಿದ್ದ ಅವರು ಸಂಪೂರ್ಣವಾಗಿ ಹೊರಗುಳಿದಿದ್ದರು. ಇದನ್ನೂ ಓದಿ: IPl 2023: ರಂಗೇರಿಸಿದ ರಹಾನೆ ಬ್ಯಾಟಿಂಗ್‌, ಜಡೇಜಾ ಸ್ಪಿನ್‌ ಜಾದು- ಚೆನ್ನೈಗೆ 7 ವಿಕೆಟ್‌ಗಳ ಭರ್ಜರಿ ಜಯ

  • IPL 2023: ಆರ್‌ಸಿಬಿ ಗಾಯಾಳುಗಳ ಬದಲಿಗೆ ಕಣಕ್ಕಿಳಿಯಲಿದ್ದಾರೆ ಪಾರ್ನೆಲ್, ವೈಶಾಕ್ ವಿಜಯ್

    IPL 2023: ಆರ್‌ಸಿಬಿ ಗಾಯಾಳುಗಳ ಬದಲಿಗೆ ಕಣಕ್ಕಿಳಿಯಲಿದ್ದಾರೆ ಪಾರ್ನೆಲ್, ವೈಶಾಕ್ ವಿಜಯ್

    ನವದೆಹಲಿ: ಆರ್‌ಸಿಬಿ ತಂಡದ ರೀಸ್ ಟೋಪ್ಲಿ ಹಾಗೂ ರಜತ್ ಪಾಟಿದಾರ್ (Rajat Patidar) ಬದಲಿಗೆ ವೇಯ್ನ್ ಪಾರ್ನೆಲ್ (Wayne Parnell) ಮತ್ತು ವೈಶಾಕ್ ವಿಜಯ್ ಕುಮಾರ್ (Vyshak Vijay Kumar) ಆಡಲಿದ್ದಾರೆ.

    ಪಾರ್ನೆಲ್ ಇದುವರೆಗೆ 56 ಟಿ20 ಗಳಲ್ಲಿ ದಕ್ಷಿಣ ಆಫ್ರಿಕಾವನ್ನು (South Africa) ಪ್ರತಿನಿಧಿಸಿದ್ದರು. 6 ಟೆಸ್ಟ್‌ಗಳು 73 ಏಕದಿನ (ODI) ಪಂದ್ಯವಾಡಿರುವ ಪಾರ್ನೆಲ್ ಟಿ20ಯಲ್ಲಿ 59 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಟೋಪ್ಲಿ ಏ.2ರಂದು ನಡೆದ ಆರಂಭಿಕ ಐಪಿಎಲ್‌ (IPL) ಪಂದ್ಯದ ಫಿಲ್ಡಿಂಗ್ ವೇಳೆ ಭುಜ (Shoulder) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಶಾಕ್ ವಿಜಯ್‍ಕುಮಾರ್ ಹಿಮ್ಮಡಿ ಗಾಯಕ್ಕೊಳಗಾಗಿ ಆರಂಭಿಕ ಪಂದ್ಯದಿಂದಲೂ ಹೊರಗುಳಿದಿದ್ದರು.

    ಭುಜದ ಗಾಯದ ನಡುವೆಯೂ ಟೋಪ್ಲಿ ಕೆಕೆಆರ್ ವಿರುದ್ಧ ಆಡಲು ಕೋಲ್ಕತ್ತಾ (Kolkata) ಪ್ರಯಾಣಿಸಿದ್ದರು. ಆಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಲ್‍ರೌಂಡರ್ ಡೇವಿಡ್ ವಿಲ್ಲಿಯವರನ್ನು ಕಣಕ್ಕಿಳಿಸಿ ಯುಕೆಗೆ ಮರಳಿದ್ದಾರೆ.

    ಪಾಟಿದಾರ್ 2021-22ರ ಸಾಲಿನ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆರು ಪಂದ್ಯಗಳಲ್ಲಿ ಎರಡು ಶತಕಗಳು ಮತ್ತು ಐದು ಅರ್ಧ ಶತಕಗಳಿಸಿದ್ದರು. ಕಳೆದ ಬೇಸಿಗೆಯಲ್ಲಿ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನ ಗಳಿಸಿದ್ದರು.

    ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಎರಡನೇ ಮ್ಯಾಚ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 81 ರನ್‍ಗಳ ಸೋಲು ಕಂಡಿತ್ತು. ಇದನ್ನೂ ಓದಿ: IPL 2023: ಶಾರ್ದೂಲ್‌ ಬೆಂಕಿ ಬ್ಯಾಟಿಂಗ್‌, ವರುಣ್ ಮಿಂಚಿನ ಬೌಲಿಂಗ್‌ – RCBಗೆ ಹೀನಾಯ ಸೋಲು

  • ಸುದರ್ಶನ್‌ ಫಿಫ್ಟಿ, ಮಿಲ್ಲರ್‌ ಸ್ಫೋಟಕ ಆಟ – ಗುಜರಾತ್‌ಗೆ ಸತತ ಎರಡನೇ ಜಯ

    ಸುದರ್ಶನ್‌ ಫಿಫ್ಟಿ, ಮಿಲ್ಲರ್‌ ಸ್ಫೋಟಕ ಆಟ – ಗುಜರಾತ್‌ಗೆ ಸತತ ಎರಡನೇ ಜಯ

    ನವದೆಹಲಿ: ಸಾಯ್‌ ಸುದರ್ಶನ್‌ (Sai Sudharsan) ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ (David Miller) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧಗುಜರಾತ್‌ ಟೈಟಾನ್ಸ್‌ (Gujarat Titans) 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 8 ವಿಕೆಟ್‌ ನಷ್ಟಕ್ಕೆ 162 ರನ್‌ ಹೊಡೆಯಿತು. ನಂತರ ಬ್ಯಾಟಿಂಗ್‌ ಮಾಡಿದ ಗುಜರಾತ್‌ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ಅಂತಿಮವಾಗಿ 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 163 ರನ್‌ ಹೊಡೆದು ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.

    54 ರನ್‌ ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದಾಗ ಸಾಯ್‌ ಸುದರ್ಶನ್‌ ಮತ್ತು ವಿಜಯ್‌ ಶಂಕರ್‌ (Vijay Shankar) ತಂಡಕ್ಕೆ ನೆರವಾದರು. ಇಬ್ಬರು 44 ಎಸೆತಗಳಲ್ಲಿ 53 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ವಿಜಯ್‌ ಶಂಕರ್‌ 29 ರನ್‌(23 ಎಸೆತ, 3 ಬೌಂಡರಿ) ಹೊಡೆದು ಔಟಾದರು. ಇದನ್ನೂ ಓದಿ: ಜಿಯೋ ಸಿನಿಮಾದಲ್ಲಿ ದಾಖಲೆ ಬರೆದ ಧೋನಿಯ ಅವಳಿ ಸಿಕ್ಸರ್

    ಮುರಿಯದ ಐದನೇ ವಿಕೆಟ್‌ಗೆ ಸುದರ್ಶನ್‌ ಮತ್ತು ಡೇವಿಡ್‌ ಮಿಲ್ಲರ್‌ 29 ಎಸೆತಗಳಲ್ಲಿ 56 ರನ್‌ ಚಚ್ಚುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಸುದರ್ಶನ್‌ ಔಟಾಗದೇ 62 ರನ್(‌ 48 ಎಸೆತ, 4 ಬೌಂಡರಿ, 2 ಸಿಕ್ಸರ್‌) ಡೇವಿಡ್‌ ಮಿಲ್ಲರ್‌ ಔಟಾಗದೇ 31 ರನ್‌(16 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದರು.

    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 8.3 ಓವರ್‌ಗಳಲ್ಲಿ 67 ರನ್‌ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಡೇವಿಡ್‌ ವಾರ್ನರ್‌ 37 ರನ್‌(32 ಎಸೆತ, 7 ಔಂಡರಿ), ಸರ್ಫರಾಜ್‌ ಖಾನ್‌ 30 ರನ್‌( 34 ಎಸೆತ), ಅಕ್ಷರ್‌ ಪಟೇಲ್‌ 36 ರನ್‌(22 ಎಸೆತ, 2 ಬೌಂಡರಿ, 3 ಸಿಕ್ಸರ್‌) ಅಭಿಷೇಕ್‌ ಪೂರೆಲ್‌ 20 ರನ್‌(11 ಎಸೆತ, 2 ಸಿಕ್ಸರ್‌) ಹೊಡೆದ ಪರಿಣಾಮ ಅಂತಿಮವಾಗಿ ಡೆಲ್ಲಿ ತಂಡ 162 ರನ್‌ ಗಳಿಸಿತು.

    ಮೊಹಮ್ಮದ್‌ ಶಮಿ ಮತ್ತು ರಶೀದ್‌ ಖಾನ್‌ ತಲಾ ಮೂರು ವಿಕೆಟ್‌ ಪಡೆದರೆ ಅಲ್ಜಾರಿ ಜೋಸೆಫ್‌ 2 ವಿಕೆಟ್‌ ಪಡೆದರು.