Tag: IPL

  • ಶುಭಮನ್ ಗಿಲ್ ನೋಡಿ ಕೆಲ ಹುಡುಗರು ಅಸೂಯೆ ಪಡ್ತಾರೆ: ದಿನೇಶ್ ಕಾರ್ತಿಕ್

    ಶುಭಮನ್ ಗಿಲ್ ನೋಡಿ ಕೆಲ ಹುಡುಗರು ಅಸೂಯೆ ಪಡ್ತಾರೆ: ದಿನೇಶ್ ಕಾರ್ತಿಕ್

    ಕೋಲ್ಕತ್ತಾ: ಕೆಕೆಆರ್ ಹಾಗೂ ಟೀಂ ಇಂಡಿಯಾ ಅಂಡರ್ 19 ತಂಡದ ಆಟಗಾರನಾಗಿರುವ ಶುಭಮನ್ ಗಿಲ್ ಸುತ್ತ ಹುಡುಗಿಯರು ಕಾಣಿಸಿಕೊಂಡ ವೇಳೆ ಇತರೇ ಹುಡುಗರು ಅಸೂಯೆ ಪಡುತ್ತಾರೆ ಎಂದು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಕಾಲೆಳೆದಿದ್ದಾರೆ.

    ಐಪಿಎಲ್ ಚೊಚ್ಚಲ ಪಂದ್ಯಕ್ಕೆ ತಂಡದ ಪರ ಶುಭಮನ್ ಗಿಲ್ ಅವರಿಗೆ ದಿನೇಶ್ ಕಾರ್ತಿಕ್ ಸ್ವಾಗತ ಕೋರಿ ಮಾತನಾಡಿದರು. ಪಂದ್ಯಕ್ಕೂ ಮುನ್ನ ನಡೆದ ಮಾತುಕತೆಯಲ್ಲಿ ಇಬ್ಬರ ನಡುವೆ ಈ ಚರ್ಚೆ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಮೊದಲ ಪಂದ್ಯವಾಡಿದ ಗಿಲ್ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು.

    ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಗಿಲ್ ಆಕರ್ಷಕ ಅರ್ಧಶತಕ ಗಳಿಸಿದ್ದರು. ಕೇವಲ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈ ಮೂಲಕ ಅಂಡರ್ 19 ವಿಶ್ವಕಪ್ ನಲ್ಲಿ ತೋರಿದ ಪ್ರದರ್ಶನವನ್ನು ಐಪಿಎಲ್‍ನಲ್ಲೂ ಮುಂದುವರೆಸಿದರು.

  • ಐಪಿಎಲ್ ಟಿಕೆಟ್ ಸಿಗ್ತಿಲ್ವಾ? ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಯ್ತು ಸತ್ಯ

    ಐಪಿಎಲ್ ಟಿಕೆಟ್ ಸಿಗ್ತಿಲ್ವಾ? ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಯ್ತು ಸತ್ಯ

    ಬೆಂಗಳೂರು: ಅದೇನೋ ಈ ಬಾರಿ ಹೆಚ್ಚಿನ ಜನರು ಐಪಿಲ್ ಟಿಕೆಟ್ ಸಿಗುತ್ತಿಲ್ಲ ಅಂತಾ ಹೇಳುತ್ತಿದ್ದಾರೆ. ಐಪಿಎಲ್ ಟಿಕೆಟ್‍ಗಳ ಕೃತಕ ಅಭಾವ ಉಂಟಾಗಲು ಕಾರಣ ಏನು ಅನ್ನೋದನ್ನ ಬೆನ್ನತ್ತಿ ಹೋದ ಪಬ್ಲಿಕ್ ಟಿವಿಗೆ ಕಾಳಸಂತೆಯಲ್ಲಿ ಟಿಕೆಟ್ ಬಿಕರಿಯಾಗೋದು ತಿಳಿದುಬಂದಿದೆ.

    ಸಾಕಷ್ಟು ಜನರು ಸ್ಟೇಡಿಯಂಗೆ ಹೋಗಿ ಕ್ರಿಕೆಟ್ ಮ್ಯಾಚ್ ನೋಡಬೇಕೆಂದು ಇಷ್ಟಪಡ್ತಾರೆ. ಆದ್ರೆ ಕೌಂಟರ್ ತೆರೆದ ಕೆಲವೇ ಗಂಟೆಗಳಲ್ಲಿಯೇ ನೋ ಟಿಕೆಟ್ ಅಂತಾ ಬೋರ್ಡ್ ಹಾಕಲಾಗುತ್ತದೆ. ಇದರಿಂದ ಮಾರುದ್ದ ಕ್ಯೂನಲ್ಲಿ ನಿಂತ ಅಭಿಮಾನಿಗಳು ಟಿಕೆಟ್ ಸಿಗದೆ ನಿರಾಸೆಯಿಂದ ಹಿಂದಿರುಗುತ್ತಾರೆ.

    ಇನ್ನೇನು ಗೇಮ್ ಸ್ಟಾರ್ಟ್ ಆಗೋಕೆ ಐದು ನಿಮಿಷ ಇದೆ ಅಂದಾಗ ಹೋದ್ರೆ ಸ್ಟೇಡಿಯಂ ಸುತ್ತಲಿನ ಅಂಗಡಿಗಳಲ್ಲಿ ಟಿಕೆಟ್ ಸಿಗುತ್ತದೆ. 800 ರೂಪಾಯಿಯ ಟಿಕೆಟ್‍ಗೆ ಮೂರರಿಂದ ಆರು ಸಾವಿರದ ತನಕ ಗಿರಾಕಿಗಳ ಮುಖ ನೋಡ್ಕೊಂಡ್ ಟೋಪಿ ಹಾಕ್ತಾರೆ. ಇವರ ಬಳಿ ಎಲ್ಲಾ ಮುಖಬೆಲೆಯ ಟಿಕೆಟ್‍ಗಳು ಸಿಗುತ್ತೆ, ಆದ್ರೆ ಮೂಲಬೆಲೆಗಿಂತ ನಾಲ್ಕೈದು ಪಟ್ಟು ಹೆಚ್ಚಿಗೆ ದುಡ್ಡು ಕೊಟ್ರೇನೇ ಸಿಗೋದು. ಅಂದಹಾಗೆ ಈ ಟಿಕೆಟ್‍ಗಳು ಸಿಗೋದು ಕಬ್ಬನ್ ಪಾರ್ಕ್ ನ ಮ್ಯೂಸಿಯಮ್ ಎದುರುಗಡೆ ಇರೊ ಫ್ರೂಟ್ ಸ್ಟಾಲ್‍ಗಳು ಮತ್ತು ಸುಲಭ ಶೌಚಾಲಯಗಳಲ್ಲಿ. ಅಲ್ಲದೇ ಮತ್ತೊಬ್ಬ ಯುವಕ ಅನಿಲ್ ಕುಂಬ್ಳೆ ಸರ್ಕಲ್‍ನಲ್ಲಿ ಟಿಕೆಟ್‍ಗಳ ವ್ಯಾಪಾರ ಮಾಡೋದು ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

    ಸ್ಟೇಡಿಯಂನವರ ಸಹಕಾರ ಇಲ್ದೇ ಇವರು ಟಿಕೆಟ್ ಮಾರೋಕೆ ಸಾಧ್ಯಾನಾ..? ಬಲ್ಕ್ ಆಗಿ ಟಿಕೆಟ್ ಕೊಟ್ಟು ಹೊರಗಡೆ ಮಾರಿಸಿ ಹಣ ಮಾಡ್ಕೊಳ್ತಿದ್ದಾರೆ? ಎಂಬ ಅನುಮಾನಗಳು ದಟ್ಟವಾಗಿವೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕಿದೆ.

    ಪಬ್ಲಿಕ್ ಟಿವಿ – ಗುರು ಎರಡು ಟಿಕೆಟ್ ಇದ್ಯಾ
    ಬ್ಲಾಕ್ ಟಿಕೆಟ್ ಸೆಲ್ಲರ್ – ನೋ.. ನೋ.. ಅಂತಾ ತಲೆ ಅಲ್ಲಾಡಿಸುತ್ತಾ
    ಪಬ್ಲಿಕ್ ಟಿವಿ – ಇಬ್ಬರೇ ಇರೋದು ನೋಡು ಗುರು..
    ಬ್ಲಾಕ್ ಟಿಕೆಟ್ ಸೆಲ್ಲರ್ – ಸ್ವಲ್ಪ ದೂರದಲ್ಲೇ ಕುಳಿತಿದ್ದ ವ್ಯಕ್ತಿಯ ಕಡೆ ಕೈ ತೋರಿಸಿ ಹೋಗು ಅಂತಾನೆ
    ಪಬ್ಲಿಕ್ ಟಿವಿ – ಗುರು ಟಿಕೆಟ್ ಬೇಕಾಗಿತ್ತು, ಇಬ್ಬರೇ ಇರೋದು.
    ಬ್ಲಾಕ್ ಟಿಕೆಟ್ ಸೆಲ್ಲರ್ – ಎಷ್ಟು ಕೊಡ್ತೀರಾ..?
    ಪಬ್ಲಿಕ್ ಟಿವಿ – 800 ರೂಪಾಯಿದು ಎರಡು ಬೇಕಾಗಿತ್ತು.
    ಬ್ಲಾಕ್ ಟಿಕೆಟ್ ಸೆಲ್ಲರ್ – 6000 ಕೊಡಿ
    ಪಬ್ಲಿಕ್ ಟಿವಿ – ಏ ಕಡಿಮೆ ಮಾಡ್ಕೊ ಗುರು, ಇಷ್ಟೊಂದ್ ಹೇಳಿದ್ರೆ ಹೆಂಗೆ
    ಬ್ಲಾಕ್ ಟಿಕೆಟ್ ಸೆಲ್ಲರ್ – 200 ರೂಪಾಯಿ ಕಡಿಮೆ ಕೊಡಿ
    ಪಬ್ಲಿಕ್ ಟಿವಿ – ಏ ನೀನ್ ಗುರು ಇಷ್ಟೊಂದ್ ಹೇಳ್ತಿಯಾ?
    ಬ್ಲಾಕ್ ಟಿಕೆಟ್ ಸೆಲ್ಲರ್ – 500 ಕಡಿಮೆ ಕೊಡಿ
    ಪಬ್ಲಿಕ್ ಟಿವಿ – 800 ರೂಪಾಯಿದು ಬಿಟ್ಟು ಯಾವುದು ಬೇಕು ನಿಮಗೆ
    ಬ್ಲಾಕ್ ಟಿಕೆಟ್ ಸೆಲ್ಲರ್ – ಯಾವುದು ಬೇಕು ನಿಮಗೆ
    ಬ್ಲಾಕ್ ಟಿಕೆಟ್ ಸೆಲ್ಲರ್ – 1700 ರೂಪಾಯಿದು 4000

  • ಚಿನ್ನಸ್ವಾಮಿ ಸ್ಟೇಡಿಯಂಗೆ ಐಪಿಎಲ್ ಮ್ಯಾಚ್ ನೋಡಲು ಹೋಗುವ ಮುನ್ನ ಎಚ್ಚರ!

    ಚಿನ್ನಸ್ವಾಮಿ ಸ್ಟೇಡಿಯಂಗೆ ಐಪಿಎಲ್ ಮ್ಯಾಚ್ ನೋಡಲು ಹೋಗುವ ಮುನ್ನ ಎಚ್ಚರ!

    ಬೆಂಗಳೂರು: ಐಪಿಎಲ್ ಪ್ರಿಯರಿಗೆ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಕಾಟ ಶುರುವಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಬಂದ ಪ್ರೇಕ್ಷಕರ 15 ಬೈಕ್‍ಗಳನ್ನು ಕಳ್ಳರು ಕದ್ದು ಎಸ್ಕೇಪ್ ಆಗಿರೋ ಘಟನೆ ಕಬ್ಬನ್ ಪಾರ್ಕ್ ನಲ್ಲಿ ನಡೆದಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಳೆದ 3 ಪಂದ್ಯಗಳ ವೇಳೆ ಈ ಘಟನೆ ನಡೆದಿದ್ದು, ಅಭಿಮಾನಿಗಳು ಕಬ್ಬನ್ ಪಾರ್ಕ್ ನಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಆರ್‌ಸಿಬಿ ಹಾಗೂ ಚೆನ್ನೈ ಮ್ಯಾಚ್ ನೋಡಲು ಹೋಗಿದ್ದರು.

    ಈ ವೇಳೆ ಬೈಕ್ ಕಳ್ಳರು ಕಬ್ಬನ್ ಪಾರ್ಕ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಕಳೆದ 3 ಪಂದ್ಯಾವಳಿಗಳು ಸೇರಿ ಕಳ್ಳರು ಒಟ್ಟು 15 ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಐಪಿಎಲ್ ನ್ನೇ ಬಂಡವಾಳ ಮಾಡಿಕೊಂಡ ಖರ್ತನಾಕ್ ಕಳ್ಳರು ಬೈಕ್ ಗಳನ್ನೇ ಕಳ್ಳತನ ಮಾಡುತ್ತಿದ್ದಾರೆ.

    ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆರ್‌ಸಿಬಿ ತಂಡದಿಂದ ಡ್ರಾಪ್ ಆದ ಸತ್ಯ ಬಿಚ್ಚಿಟ್ಟ ಕ್ರಿಸ್ ಗೇಲ್

    ಆರ್‌ಸಿಬಿ ತಂಡದಿಂದ ಡ್ರಾಪ್ ಆದ ಸತ್ಯ ಬಿಚ್ಚಿಟ್ಟ ಕ್ರಿಸ್ ಗೇಲ್

    ಮೊಹಾಲಿ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಆಯ್ಕೆಗಾರರು ಐಪಿಎಲ್ 11 ನೇ ಆವೃತ್ತಿಗೆ ತನ್ನನ್ನು ಉಳಿಸಿಕೊಳ್ಳುವ ಬಗ್ಗೆ ಮೊದಲು ಮಾಹಿತಿ ನೀಡಿದ್ದರು. ಆದ್ರೆ ಬಳಿಕ ಅವರು ತನ್ನನ್ನು ಸಂಪರ್ಕಿಸಲಿಲ್ಲ. ಇದರಿಂದ ತನಗೆ ನಿರಾಸೆ ಅನುಭವ ಉಂಟಾಗಿತ್ತು ಎಂದು ಕಿಂಗ್ಸ್ ಇಲೆವೆನ್ ತಂಡ ಹಾಗೂ ಕೆರೆಬಿಯನ್ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹೇಳಿದ್ದಾರೆ.

    ಈ ಕುರಿತು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಮೊದಲು ಆರ್‌ಸಿಬಿ ತಂಡದ ಆಯ್ಕೆ ಸಮಿತಿ ತನ್ನನ್ನು ಉಳಿಸಿಕೊಳ್ಳುವುದಾಗಿ ಮಾಹಿತಿ ನೀಡಿತ್ತು. ಆದರೆ ಬಳಿಕ ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಆದರೆ ಈ ಕುರಿತು ಯಾರನ್ನು ಹೊಣೆ ಮಾಡಲು ಸಾಧ್ಯವಿಲ್ಲ. ತಾನು ಈ ಹಿಂದಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ಇದಕ್ಕೆ ಸಾಕ್ಷಿ ಎಂಬಂತೆ 21 ಶತಕ ಹಾಗೂ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದೇನೆ ಎಂದರು.

    ಸೆಹ್ವಾಗ್ ಅಚ್ಚರಿ ಆಯ್ಕೆ: ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ವೇಳೆ ತನ್ನನ್ನು ಎರಡು ಬಾರಿಯೂ ಆಯ್ಕೆ ಮಾಡಿರಲಿಲ್ಲ. ಆದರೆ ಮೂರನೇ ಬಾರಿ ಸೆಹ್ವಾಗ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಅವಕಾಶ ನೀಡಿದ್ದರು. ಇದು ತನಗೆ ಅಚ್ಚರಿ ಮೂಡಿಸಿತ್ತು. ಈ ಮೊದಲು ತಾನು ಟೂರ್ನಿಗೆ ಅಗತ್ಯವಿಲ್ಲ `ಇಟ್ಸ್ ಫೈನ್’ ಎಂದು ಸಮಾಧಾನಗೊಂಡಿದ್ದೆ ಎಂದು ಹೇಳಿದರು.

    ಕಪ್ ಗೆಲ್ಲಬೇಕು: ಈ ಬಾರಿಯ ಟೂರ್ನಿಯಲ್ಲಿ ತಾನು ಕೇವಲ ಒಂದು ಉದ್ದೇಶ ಹೊಂದಿದ್ದೇನೆ. ಅದು ಪಂಜಾಬ್ ಕಪ್ ಗೆಲ್ಲುವಂತೆ ಮಾಡುವುದು. ತಂಡದ ಮಾಲೀಕರಾದ ಪ್ರೀತಿ ಜಿಂಟಾ ಅವರಿಗೆ ಕಪ್ ಗೆದ್ದು ನೀಡುತ್ತೇವೆ. ಇದಾದ ಬಳಿಕ 2019 ರ ವಿಶ್ವಕಪ್ ಅನ್ನು ತನ್ನ ದೇಶಕ್ಕೆ ಗೆಲ್ಲಿಸಿಕೊಡ ಬೇಕಿದೆ. ಆದ್ರೆ ವಿಶ್ವಕಪ್ ಗೆ ಆಯ್ಕೆಯಾಗಲು ಸಾಕಷ್ಟು ಹೋರಾಟ ನಡೆಸಬೇಕಾಯಿತು ಎಂದು ಹೇಳಿದರು.

    ಕಳೆದ 10 ಐಪಿಎಲ್ ಟೂರ್ನಿಗಳಲ್ಲಿ ಗೇಲ್ 6 ಶತಕಗಳನ್ನು ಒಳಗೊಂಡಂತೆ 3,878 ರನ್ ಗಳಿಸಿದ್ದಾರೆ. 11 ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿರುವ ಗೇಲ್ ಈಗಾಗಲೇ ಹೈದರಾಬಾದ್ ವಿರುದ್ಧ ಸ್ಫೋಟಕ ಶತಕ (106 ರನ್) ಸಿಡಿಸಿದ್ದು, ಇದುವರೆಗೂ ಆಡಿರುವ ಪಂದ್ಯಗಳಲ್ಲಿ 161.53 ಸ್ಟ್ರೈಕ್ ರೇಟ್ ನಲ್ಲಿ 252 ರನ್ ಸಿಡಿಸಿದ್ದಾರೆ.

  • ಸೋಲಿನ ಬಳಿಕ ಆರ್‌ಸಿಬಿ  ಆಟಗಾರರ ವಿರುದ್ಧ ಕೊಹ್ಲಿ ಗರಂ

    ಸೋಲಿನ ಬಳಿಕ ಆರ್‌ಸಿಬಿ ಆಟಗಾರರ ವಿರುದ್ಧ ಕೊಹ್ಲಿ ಗರಂ

    ಬೆಂಗಳೂರು: ಐಪಿಎಲ್ 11ನೇ ಆವೃತ್ತಿಯಲ್ಲಿ ಆರ್‌ಸಿಬಿ ಆಟಗಾರರ ಸೋಲಿನ ಸರಣಿ ಮುಂದುವರೆದಿದ್ದು, ಕೆಕೆಆರ್ ವಿರುದ್ಧ ಭಾನುವಾರ ನಡೆದ ಪಂದ್ಯವನ್ನು ಕೈಚೆಲ್ಲಿದ್ದ ಬಳಿಕ ತಂಡದ ಆಟಗಾರರ ವಿರುದ್ಧ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಂದ್ಯದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕೊಹ್ಲಿ, ಇದೇ ರೀತಿ ಮುಂದಿನ ಪಂದ್ಯಗಳಲ್ಲಿ ತಂಡದ ಆಟಗಾರರು ಕಳಪೆ ಫೀಲ್ಡಿಂಗ್ ಪ್ರದರ್ಶನ ಮುಂದುವರೆಸಿದರೆ ಗೆಲುವು ಪಡೆಯಲು ಸಾಧ್ಯವಿಲ್ಲ. ನಾವು ಗೆಲುವಿಗಾಗಿ ಮತ್ತಷ್ಟು ಶ್ರಮವಹಿಸಬೇಕಿದೆ ಎಂದು ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಯಾವುದೇ ಆಟಗಾರನ್ನು ನಾನು ಗುರಿ ಮಾಡುವುದಿಲ್ಲ. ಈ ಆವೃತ್ತಿಯಲ್ಲಿ ಮುಂದಿನ ಹಂತಕ್ಕೆ ಆಯ್ಕೆ ಆಗಬೇಕಾದರೆ ಇನ್ನುಳಿದ 7 ಪಂದ್ಯದಲ್ಲಿ 6 ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಅದ್ದರಿಂದ ಪ್ರತಿಯೊಂದು ಪಂದ್ಯವು ತಂಡಕ್ಕೆ ಸೆಮಿಫೈನಲ್ ಪಂದ್ಯ ಎಂದು ಭಾವಿಸಬೇಕಿದೆ ಎಂದರು. ಇದನ್ನು ಓದಿ: ರನ್ನಿಂಗ್ ಡೈವ್ ಮಾಡಿ ಕ್ಯಾಚ್ ಪಡೆದ ಕೊಹ್ಲಿ – ಅನುಷ್ಕಾ ಕೊಟ್ಟ ರಿಯಾಕ್ಷನ್ ಹೀಗಿದೆ!

    ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿದ್ದ ಕ್ರಿಸ್ ಲಿನ್ 52 ಎಸೆಗಳಲ್ಲಿ 62 ರನ್ ಸಿಡಿಸಿದ್ದರು. ಆದರೆ ಪಂದ್ಯದ ಆರಂಭದ ನಾಲ್ಕನೇ ಓವರ್ ವೇಳೆ 7 ರನ್ ಗಳಿಸಿದ್ದ ಲಿನ್ ಬಿರುಸಿನ ಹೊಡೆತಕ್ಕೆ ಕೈ ಹಾಕಿ ಕವರ್ ಫೀಲ್ಡ್ ನಲ್ಲಿದ್ದ ಆರ್‌ಸಿಬಿ ಯುವ ಆಟಗಾರ ಮುರುಗನ್ ಅಶ್ವಿನ್ ಗೆ ಕ್ಯಾಚ್ ನೀಡಿದ್ದರು. ಸುಲಭವಾಗಿದ್ದ ಈ ಕ್ಯಾಚನ್ನು ಅಶ್ವಿನ್ ಪಡೆಯದೇ ಕೈಚೆಲ್ಲಿದ್ದರು. ಈ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಈ ಹಿಂದೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲೂ ಆರ್‌ಸಿಬಿ ಬೌಲರ್ ಉಮೇಶ್ ಯಾದವ್ ರಾಯುಡು ಕ್ಯಾಚ್ ಪಡೆಯಲು ವಿಫಲರಾಗಿ ತಂಡ ಸೋಲುಂಡುವಂತೆ ಮಾಡಿದ್ದರು. ಈ ಪಂದ್ಯದಲ್ಲಿ ರಾಯುಡು 53 ಎಸೆತಗಳಲ್ಲಿ 82 ರನ್ ಗಳಿಸಿ ಮಿಂಚಿದ್ದರು. ಇದನ್ನು ಓದಿ: 8.90 ಸೆಕೆಂಡ್‍ಗೆ 3 ರನ್ ಓಡಿ ಮಂದೀಪ್ ಸಿಂಗ್‍ಗೆ ಕೊಹ್ಲಿ ಚಾಲೆಂಜ್!

    https://twitter.com/gnitin4450/status/989201701235179521?

     

  • 8.90 ಸೆಕೆಂಡ್‍ಗೆ 3 ರನ್ ಓಡಿ ಮಂದೀಪ್ ಸಿಂಗ್‍ಗೆ ಕೊಹ್ಲಿ ಚಾಲೆಂಜ್!

    8.90 ಸೆಕೆಂಡ್‍ಗೆ 3 ರನ್ ಓಡಿ ಮಂದೀಪ್ ಸಿಂಗ್‍ಗೆ ಕೊಹ್ಲಿ ಚಾಲೆಂಜ್!

    ಬೆಂಗಳೂರು: ತನ್ನ ವೇಗವನ್ನು ಮೀರಿಸುವಂತೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮದೇ ತಂಡದ ಆಟಗಾರ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿದ್ದಾರೆ.

    ವಿರಾಟ್ ಕೊಹ್ಲಿ ಸದಾ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಆಟದಿಂದಲೇ ಗುರುತಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ತಂಡದ ಆಟಗಾರರಿಗೂ ಇದೇ ರೀತಿ ತಮ್ಮ ಈ ಆಕ್ರಮಣಕಾರಿ ಪ್ರವೃತ್ತಿಯನ್ನು ಹುರಿದುಂಬಿಸುತ್ತಾರೆ. ಸದ್ಯ ಕೊಹ್ಲಿ ತಮ್ಮ ತಂಡದ ಯುವ ಆಟಗಾರ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೊಹ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೇವಲ 8.90 ಸೆಕೆಂಡ್ ನಲ್ಲಿ 3 ರನ್ ಓಡಿದ್ದಾರೆ. ಮೊದಲ ರನ್ 3.9 ಸೆಕೆಂಡ್, 2ನೇ ರನ್ 2.39 ಸೆಕೆಂಡ್ ಹಾಗೂ ಮೂರನೇ ರನ್ 2.61 ಸೆಕೆಂಡ್ ನಲ್ಲಿ ಓಡಿ ಪೂರ್ಣಗೊಳಿಸಿದ್ದಾರೆ. ಈ ವಿಡಿಯೋ ಮೂಲಕ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿರುವ ಕೊಹ್ಲಿ, ನೀವು ನನಗಿಂತಲೂ ವೇಗವಾಗಿ ಓಡುತ್ತಿರಾ? ಇಲ್ಲಿ ನನ್ನ ವೇಗದ 3 ರನ್ ಗಳ ವಿಡಿಯೋ ನೀಡಿದ್ದೇನೆ. ಪ್ಯಾಡ್ ಧರಿಸಿ ನಿಮ್ಮ ವೇಗದ 3 ರನ್ ವಿಡಿಯೋ ಕಳುಹಿಸಿ. ನೀವು ನನ್ನ 8.90 ಸೆಕೆಂಡ್ ವೇಗವನ್ನು ಮೀರಿಸುತ್ತೀರಾ ನೋಡೋಣ ಎಂದು ಬರೆದುಕೊಂಡಿದ್ದಾರೆ.

    ವಿಶ್ವ ಕ್ರಿಕೆಟ್‍ನ ಶ್ರೇಷ್ಠ ಬ್ಯಾಟ್ಸ್ ಮನ್‍ಗಳಾದ ವಿರಾಟ್ ಮತ್ತು ಎಬಿ ಡಿವಿಲಿಯರ್ಸ್ ರಂತಹ ಆಟಗಾರರನ್ನು ಆರ್‌ಸಿಬಿ ಹೊಂದಿದ್ದರೂ ಈ ಬಾರಿಯ ಐಪಿಎಲ್ ನಲ್ಲಿ ತಂಡ ಕೇವಲ 2 ಗೆಲುವುಗಳನ್ನು ಮಾತ್ರ ಪಡೆದುಕೊಂಡಿದೆ. ಆದ್ರೆ, ವಯಕ್ತಿಕವಾಗಿ ಆರ್‌ಸಿಬಿ  ನಾಯಕ ತಂಡದ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂಬುವುದು ಅವರು ಮಾಡಿರುವ ಟ್ವೀಟ್ ನಿಂದ ಬಹಿರಂಗಗೊಂಡಿದೆ.  ಇದನ್ನು ಓದಿ: ಲಗಾನ್ ಫಿಲ್ಮ್ ಆಟಗಾರನಾದ ಮಂದೀಪ್: ಒಂದು ಫೋಟೋಗೆ ಸಿಕ್ತು ಭರ್ಜರಿ ಲೈಕ್ಸ್

  • ರನ್ನಿಂಗ್ ಡೈವ್ ಮಾಡಿ ಕ್ಯಾಚ್ ಪಡೆದ ಕೊಹ್ಲಿ – ಅನುಷ್ಕಾ ಕೊಟ್ಟ ರಿಯಾಕ್ಷನ್ ಹೀಗಿದೆ!

    ರನ್ನಿಂಗ್ ಡೈವ್ ಮಾಡಿ ಕ್ಯಾಚ್ ಪಡೆದ ಕೊಹ್ಲಿ – ಅನುಷ್ಕಾ ಕೊಟ್ಟ ರಿಯಾಕ್ಷನ್ ಹೀಗಿದೆ!

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ, ಕೆಕೆಆರ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಓಡಿ ಬಂದು ಡೈವ್ ಮಾಡಿ ಕ್ಯಾಚ್ ಪಡೆದುಕೊಂಡಿದ್ದನ್ನು ನೋಡಿ ಪತ್ನಿ ಅನುಷ್ಕಾ ಶರ್ಮಾ ಆಶ್ಚರ್ಯಗೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆರ್‌ಸಿಬಿ ನೀಡಿದ 175 ರನ್ ಗಳ ಗುರಿ ಬೆನ್ನತ್ತಿದ್ದ ಕೆಕೆಆರ್ ತಂಡದ ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಂದ್ಯ 19ನೇ ಓವರ್ ನಲ್ಲಿ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ (10 ಎಸೆತ, 23 ರನ್) ಭಾರೀ ಹೊಡೆತಕ್ಕೆ ಕೈ ಹಾಕಿದರು. ಈ ವೇಳೆ ಬೌಂಡರಿ ಬಳಿ ಇದ್ದ ಕೊಹ್ಲಿ ರನ್ನಿಂಗ್ ಡೈವ್ ಮಾಡುವ ಮೂಲಕ ಕ್ಯಾಚ್ ಪಡೆದರು.  ಆರ್‌ಸಿಬಿ ಪರ ಬೆಂಬಲಿಸಲು ಆಗಮಿಸಿದ್ದ ಅನುಷ್ಕಾ ಶರ್ಮಾ, ಕೊಹ್ಲಿ ಪಡೆದ ಕ್ಯಾಚ್ ನೋಡಿ ಅಚ್ಚರಿ ವ್ಯಕ್ತಪಡಿಸಿದರು.

    ಕೊಹ್ಲಿ ಈ ವೇಳೆ ಉತ್ತಮ ಕ್ಯಾಚ್ ಪಡೆದರೂ ಸಹ ಯಾವುದೇ ಸಂಭ್ರಮ ವ್ಯಕ್ತಪಡಿಸಲಿಲ್ಲ. ಕೊಹ್ಲಿ ಪಂದ್ಯದಲ್ಲಿ 33ನೇ ಅರ್ಧಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರೂ ಬೌಲಿಂಗ್ ವೈಫಲ್ಯದಿಂದಾಗಿ ಆರ್‌ಸಿಬಿ ಸೋಲುಂಡಿತು.

    ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿದ ಕ್ರಿಸ್ ಲಿನ್ ಔಟಾಗದೇ 62 ರನ್ ಸಿಡಿಸಿದರು. ಉಳಿದಂತೆ ರಾಬಿನ್ ಉತ್ತಪ್ಪ (21 ಎಸೆತ 36 ರನ್), ನರೈನ್ (19 ಎಸೆತ 27 ರನ್) ಬಿರುಸಿನ ಆಟ ಪ್ರದರ್ಶಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಆವೃತ್ತಿಯಲ್ಲಿ ಇದುವರೆಗೂ 7 ಪಂದ್ಯಗಳನ್ನು ಆಡಿರುವ ಆರ್ ಸಿಬಿ 2 ರಲ್ಲಿ ಮಾತ್ರ ಜಯಗಳಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ.

  • ವಯೋವೃದ್ಧನ ವೇಷ ಧರಿಸಿ ಕ್ರಿಕೆಟ್ ಆಡಿದ ಬ್ರೆಟ್ ಲೀ

    ವಯೋವೃದ್ಧನ ವೇಷ ಧರಿಸಿ ಕ್ರಿಕೆಟ್ ಆಡಿದ ಬ್ರೆಟ್ ಲೀ

    ಮುಂಬೈ: ಆರ್‌ಸಿಬಿ  ಸ್ಫೋಟಕ ಆಟಗಾರ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಆಟೋ ಹತ್ತಿ ಬೆಂಗಳೂರು ರೌಂಡ್ ಹೊಡೆದ ಘಟನೆ ಎಲ್ಲರಿಗೂ ತಿಳಿದಿದೆ. ಆದರೆ ಆಸೀಸ್ ಮಾಜಿ ಆಟಗಾರ ಬ್ರೆಟ್ ಲೀ ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟು ವೃದ್ಧನ ವೇಷ ಧರಿಸಿ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿ ಸುದ್ದಿಯಾಗಿದ್ದಾರೆ.

    ಸದ್ಯ ಐಪಿಎಲ್ ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಬ್ರೆಟ್ ಲೀ ಮುಂಬೈ ಶಿವಾಜಿ ಪಾರ್ಕ್ ತೆರಳಿ ಅಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಆಟವಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮದ ಭಾಗವಾಗಿ ಬ್ರೆಟ್ ಲೀ ಅಲ್ಲಿಗೆ ತೆರಳಿದ್ದರು ಎಂದು ವರದಿಯಾಗಿದೆ.

    ಮುಂಬೈನ ಶಿವಾಜಿ ಪಾರ್ಕ್ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರು ಅಭ್ಯಾಸ ನಡೆಸುತ್ತಿದ್ದ ಕಾರಣ ಹೆಚ್ಚು ಫೇಮಸ್. ಅದ್ದರಿಂದಲೇ ಇದೇ ಸ್ಥಳವನ್ನು ಬ್ರೆಟ್ ಲೀ ಆಯ್ಕೆ ಮಾಡಿ ಆಟವಾಡಲು ತೆರಳಿದ್ದರು.

    ವಯೋವೃದ್ಧರ ಹಾಗೇ ವೇಷಧರಿಸಿದ್ದ ಬ್ರೆಟ್ ಲೀ ನೇರವಾಗಿ ಮೈದಾನಕ್ಕೆ ಆಗಮಿಸಿ ಕ್ರಿಕೆಟ್ ಆಡುತ್ತಿದ್ದ ಹುಡುಗರಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಸಲಹೆ ಪಡೆದು ಆಟವಾಡಿದ್ದಾರೆ. ಬಳಿಕ ಭರ್ಜರಿ ಸಿಕ್ಸರ್ ಹಾಗೂ ಬೌಲಿಂಗ್ ಮಾಡಿ ಎಲ್ಲರನ್ನೂ ಅಚ್ಚರಿಗೆ ಗುರಿಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಅಲ್ಲಿನ ಹುಡುಗರು ಕುತೂಹಲದಿಂದ ಅವರ ಬಗ್ಗೆ ಪ್ರಶ್ನಿಸಿದ್ದು ಈ ವೇಳೆ ಬ್ರೆಟ್ ಲೀ ತಮ್ಮ ವೇಷ ತೆಗೆದು ಎಲ್ಲರನ್ನು ಅಚ್ಚರಿಗೆ ಗುರಿಮಾಡಿದ್ದಾರೆ. ಈ ವೇಳೆ ಅಲ್ಲಿನ ಹುಡುಗರೊಂದಿಗೆ ಸೆಲ್ಫಿಗೆ ಪೋಸ್ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ವಿಡಿಯೋವನ್ನು ಖಾಸಗಿ ವಾಹಿನಿ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.

  • ಧೋನಿ ಮುಡಿಗೆ ಮತ್ತೊಂದು ದಾಖಲೆಯ ಗರಿಮೆ

    ಧೋನಿ ಮುಡಿಗೆ ಮತ್ತೊಂದು ದಾಖಲೆಯ ಗರಿಮೆ

    ಪುಣೆ: ಇಲ್ಲಿನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ ಎಂಎಸ್ ಧೋನಿ ಐಪಿಎಲ್ ನಲ್ಲಿ 150 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಡೆದಿದ್ದಾರೆ.

    ಟೀಂ ಇಂಡಿಯಾವನ್ನು ಹಲವು ಟೂರ್ನಿಗಳಲ್ಲಿ ಮುನ್ನಡೆಸಿ ಭಾರತಕ್ಕೆ 2 ವಿಶ್ವಕಪ್ ತಂದುಕೊಟ್ಟು ಅಭಿಮಾನಿಗಳ ಮನಸ್ಸು ಗೆದ್ದಿರುವ ಧೋನಿ ಐಪಿಎಲ್ ನಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡು ಬಾರಿ ಕಪ್ ತನ್ನದಾಗಿಸಿಕೊಂಡಿದೆ. ಅಲ್ಲದೇ 4 ಬಾರಿ ಫೈನಲ್ ವರೆಗೂ ಮುನ್ನಡೆಸಿದ ದಾಖಲೆ ಧೋನಿ ಹೆಸರಿನಲ್ಲಿದೆ.

    ಕಳೆದ 10 ಐಪಿಎಲ್ ಆವೃತ್ತಿಯಲ್ಲಿ 8 ಬಾರಿ ಚೆನ್ನೈ ಹಾಗೂ ಎರಡು ಆವೃತ್ತಿಗಳಲ್ಲಿ ಪುಣೆ ತಂಡವನ್ನು ಮುನ್ನಡೆಸಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿಯೂ ಧೋನಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದು, 11 ನೇ ಆವೃತ್ತಿಯಲ್ಲಿ ಇದುವರೆಗೂ ಆಡಿರುವ 7 ಪಂದ್ಯಗಳನ್ನು ಆಡಿರುವ ಚೆನ್ನೈ 5 ಪಂದ್ಯಗಳಲ್ಲಿ ಗೆಲುವು ಪಡೆದು 10 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಮತ್ತೊಮ್ಮೆ ಕಪ್ ಗೆಲ್ಲುವ ಫೆವರೇಟ್ ತಂಡ ಎನಿಸಿಕೊಂಡಿದೆ.

    ಕಳೆದ ಕೆಲ ದಿನಗಳ ಹಿಂದೆ ನಡೆದ ಪಂದ್ಯದಲ್ಲೂ ಧೋನಿ ಭರ್ಜರಿ ಆಟ ಪ್ರದರ್ಶಿಸಿ ತಾವು ಬೆಸ್ಟ್ ಫಿನಿಷರ್ ಎಂದು ಸಾಬೀತು ಪಡಿಸಿದ್ದರು. ಅಲ್ಲದೇ ಟಿ20 ಯಲ್ಲಿ 5 ಸಾವಿರ ರನ್ ಪೂರೈಸಿದ ನಾಯಕ ಎಂಬ ದಾಖಲೆ ಬರೆದಿದ್ದರು.

  • 25 ಪುಸ್ತಕಗಳನ್ನು ಬರೆದ 8ನೇ ತರಗತಿ ವಿದ್ಯಾರ್ಥಿ!

    25 ಪುಸ್ತಕಗಳನ್ನು ಬರೆದ 8ನೇ ತರಗತಿ ವಿದ್ಯಾರ್ಥಿ!

    ಬೆಂಗಳೂರು: ಮಕ್ಕಳು ಬೆಳೆಯುತ್ತ ಹಲವು ವಿಷಯಗಳಲ್ಲಿ ಆಸಕ್ತಿ ಮೂಡಿಸಿಕೊಳ್ಳುತ್ತಾರೆ. ಬಹುತೇಕರು ಆಟ, ಪಾಠದಲ್ಲೇ ಮಗ್ನರಾಗುತ್ತಾರೆ. ಇನ್ನು ಆಟದ ವಿಷಯಕ್ಕೆ ಬಂದರೆ ಬರೀ ಆಟ ಆಡೋದಷ್ಟೇ ಮಕ್ಕಳ ಆಸಕ್ತಿಯಾಗಿರುತ್ತೆ. ಆದರೆ ಇಲ್ಲೊಬ್ಬ ಪೋರ 8ನೇ ತರಗತಿಗೆ 25 ಪುಸ್ತಕಗಳನ್ನ ಸ್ವತಃ ಬರೆದಿದ್ದಾನೆ.

    ಅಂತಃಕರಣ ಎಂಬ 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಇಂದು ತಾನು ಬರೆದ 25ನೇ ಪುಸ್ತಕವನ್ನು ಬಿಡುಗಡೆ ಮಾಡಿದ್ದಾನೆ. ಈತನನ್ನು 2015 ರಲ್ಲೇ ಪಬ್ಲಿಕ್ ಟಿವಿ ಗುರುತಿಸಿ ಪಬ್ಲಿಕ್ ಹೀರೋ ಮಾಡಿತ್ತು. ಕ್ರೀಡೆಯ ವಿಚಾರದಲ್ಲಿ ಆಸಕ್ತಿ ಮೂಡಿಸಿಕೊಂಡು ಅದರ ಬಗ್ಗೆ ಪುಸ್ತಕಗಳನ್ನು ಬರೆಯಲು ಶುರು ಮಾಡಿ ಇಂದು ಐಪಿಎಲ್ ಕುರಿತ ತನ್ನ ವಿಮರ್ಶೆ ಜೊತೆಗೆ ತನ್ನ ಡ್ರೀಮ್ ಟೀಮ್ ಬಗ್ಗೆ ಸಹ ವಿವರಿಸಿದ್ದಾನೆ. ಪಬ್ಲಿಕ್ ಹೀರೋ ಆದ ನಂತರದ ದಿನಗಳಲ್ಲಿ ನನಗೆ ಮತ್ತಷ್ಟು ಪುಸ್ತಕಗಳನ್ನ ಬರೆಯಲು ಪ್ರೇರಣೆಯಾಯ್ತು ಎಂದು ಆತ ಹೇಳಿದ್ದಾನೆ.

    ಐಪಿಎಲ್ ಬಗೆಗಿನ ಪುಸ್ತಕ ಬಿಡುಗಡೆಗೆ ಹಿರಿಯ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಆಗಮಿಸಿದ್ದರು. ಬಿಡುಗಡೆ ನಂತರ ಮಾತನಾಡಿದ ಗಣೇಶ್, ಅಂತಃಕರಣ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಬೆಳಸಿಕೊಂಡು ವಿಮರ್ಶೆ ಮಾಡುತ್ತ ಪುಸ್ತಕ ಬರೆದಿರೋದು ನಿಜಕ್ಕೂ ಸೂಪರ್ ಎಂದು ಶ್ಲಾಘಿಸಿದ್ರು.

    ಒಟ್ಟಾರೆ ಆಟ ಪಾಠದಲ್ಲಿ ಮುಂದಿರುವ ಅಂತಕಃರಣ 24 ಪುಸ್ತಕಗಳನ್ನ ಕನ್ನಡದಲ್ಲಿ ಬರೆದು, ಇಂಗ್ಲಿಷ್‍ನಲ್ಲಿ ಪುಸ್ತಕ ಬರೆಯುವ ಈ ಐಪಿಎಲ್ ಬಗೆಗಿನ ಪುಸ್ತಕದಿಂದ ಈಡೇರಿಸಿಕೊಂಡಿದ್ದಾನೆ. ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಅಂತಃಕರಣ ಮತ್ತಷ್ಟೂ ಪುಸ್ತಕಗಳನ್ನ ಬರೆಯಲಿ ಎನ್ನುವುದು ಎಲ್ಲರ ಆಶಯವಾಗಿದೆ.