Tag: International

  • ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾರತದಿಂದ ಸ್ಪರ್ಧಿಸಿದ್ದ ಕರ್ನಾಟಕದ ರಾಮು ರನ್ನರ್ ಅಪ್

    ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾರತದಿಂದ ಸ್ಪರ್ಧಿಸಿದ್ದ ಕರ್ನಾಟಕದ ರಾಮು ರನ್ನರ್ ಅಪ್

    ಬೆಂಗಳೂರು: ವಿಯೇಟ್ನಾಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆ For pan continental international 2022ನಲ್ಲಿ ಭಾರತದಿಂದ ಸ್ಪರ್ಧಿಸಿದ್ದ ರಾಮು ರನ್ನರ್ ಆಗಿ ಹೊರಹೊಮ್ಮಿದ್ದಾರೆ.

    ರಾಮು ಭಾರತದಿಂದ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಾಳು ಆಗಿದ್ದರು. ಒಟ್ಟು 14 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು. ಇವರು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ರನ್ನರ್ ಅಪ್(ದ್ವಿತೀಯ) ಆಗಿದ್ದಾರೆ.

    ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಫಿಲಿಪ್ಪೀನ್ಸ್‌ ಪಡೆದರೆ, ದ್ವಿತೀಯ ಸ್ಥಾನವನ್ನು ಭಾರತ ಅಲಂಕರಿಸಿದೆ. ಭಾರತದಿಂದ ಪ್ರತಿನಿಧಿಸಿದ್ದ ರಾಮು ಪಬ್ಲಿಕ್ ಟಿವಿಯಲ್ಲಿ ಕ್ಯಾಮೆರಾಮನ್ ಆಗಿ ಉದ್ಯೋಗದಲ್ಲಿದ್ದಾರೆ. ಇದನ್ನೂ ಓದಿ: ತಾಯಿ ಗರ್ಭದಷ್ಟೇ ಭೂಗರ್ಭಕ್ಕೆ ಮಹತ್ವವಿದೆ- ಮಣ್ಣು ಉಳಿಸಿ ಅಭಿಯಾನಕ್ಕೆ ಬೊಮ್ಮಾಯಿ ಚಾಲನೆ

  • ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡಿದ ಶ್ವಾನಕ್ಕೆ ಐಸಿಸಿ ಪುರಸ್ಕಾರ..!

    ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡಿದ ಶ್ವಾನಕ್ಕೆ ಐಸಿಸಿ ಪುರಸ್ಕಾರ..!

    ದುಬೈ: ಕ್ರಿಕೆಟ್ ಅಂಗಳದಲ್ಲಿ ಆಟಗಾರರ ವಿಶೇಷ ಸಾಧನೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪುರಸ್ಕಾರ ನೀಡುವುದು ನೋಡಿದ್ದೇವೆ. ಇದೀಗ ಐಸಿಸಿ ಕ್ರಿಕೆಟ್ ಆಟದ ವೇಳೆ ಫೀಲ್ಡಿಂಗ್ ಮಾಡಿದ ಶ್ವಾನವೊಂದಕ್ಕೆ ವಿಶೇಷವಾಗಿ ಡಾಗ್ ಆಫ್ ದಿ ಮಂತ್ ಎಂಬ ಬಿರುದು ಕೊಟ್ಟಿದೆ.

    ಕ್ರಿಕೆಟ್ ನಡೆಯುತ್ತಿರುವಾಗ ಅಭಿಮಾನಿಗಳು ಕ್ರಿಕೆಟ್ ಅಂಗಳಕ್ಕೆ ಲಗ್ಗೆ ಇಡುವುದನ್ನು ಸಾಕಷ್ಟು ಬಾರಿ ನೋಡಿದ್ದೇವೆ. ಅದರಂತೆ ಉತ್ತರ ಐರ್ಲೆಂಡಿನ ಮಗೇರಮೆಸಾನ್‍ನಲ್ಲಿರುವ ಬ್ರೆಡಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಬ್ರೆಡಿ ಮತ್ತು ಸಿಎಸ್‍ಎನ್‍ಐ ಮಹಿಳಾ ತಂಡಗಳ ನಡುವೆ ಆಲ್ ಐರ್ಲೆಂಡ್ ಟಿ20 ಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಅಬ್ಬಿ ಲೆಖಿ ಚೆಂಡನ್ನು ಆಫ್ ಸೈಡ್‍ಗೆ ಬಡಿದಟ್ಟಿದ್ದಾರೆ. ತಕ್ಷಣ ಫೀಲ್ಡರ್ ರನ್ ಔಟ್ ಮಾಡಲು ಚೆಂಡನ್ನು ವಿಕೆಟ್ ಕೀಪರ್ ಕೈಗೆ ಬಿಸಾಡಿದ್ದಾರೆ. ಕೀಪರ್ ರನ್ ಔಟ್ ಮಾಡುವ ಬರದಲ್ಲಿ ಚೆಂಡು ಮಿಸ್ ಆಗಿ ಮೈದಾನದ ಇನ್ನೊಂದು ಭಾಗಕ್ಕೆ ಹೋಗಿದೆ. ಇದನ್ನು ಕಂಡ ಸ್ಟೇಡಿಯಂನಲ್ಲಿದ್ದ ಶ್ವಾನವೊಂದು ಮೈದಾನಕ್ಕೆ ಓಡಿ ಬಂದು ಚೆಂಡನ್ನು ತನ್ನ ಬಾಯಿಯಿಂದ ಹಿಡಿದು ಮೈದಾನದಲ್ಲಿ ಸುತ್ತ ಓಡಲು ಪ್ರಾರಂಭಿಸಿತ್ತು. ಈ ವೇಳೆ ಫೀಲ್ಡರ್ ಗಳು ಮತ್ತು ಶ್ವಾನದ ಮಾಲೀಕನೂ ಅದನ್ನು ಹಿಡಿಯುವ ಪ್ರಯತ್ನ ಮಾಡಿದ್ದರು. ಕೊನೆಗೆ ಶ್ವಾನ ನಾನ್ ಸ್ಟ್ರೈಕರ್ ನಲ್ಲಿದ್ದ ಅಯೋಫೆ ಫಿಶರ್ ಅವರ ಬಳಿ ಬಂದು ಚೆಂಡನ್ನು ಕೈಗೆ ನೀಡಿ ನೋಡುಗರನ್ನು ಮನರಂಜಿಸಿತ್ತು.

    ಈ ಸ್ವಾರಸ್ಯಕರ ಘಟನೆಯನ್ನು ಕಂಡು ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದರೆ, ಶ್ವಾನ ಪ್ರಿಯರು ಖುಷಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ್ದ ಐಸಿಸಿ ಮೈದಾನಕ್ಕಿಳಿದು ಅದ್ಭುತವಾದ ಫೀಲ್ಡಿಂಗ್ ನಡೆಸಿದ ಶ್ವಾನಕ್ಕೆ ಐಸಿಸಿ ಡಾಗ್ ಆಫ್ ದಿ ಮಂತ್ ಪುರಸ್ಕಾರ ನೀಡಲಾಗುವುದು ಎಂದು ಟ್ವಿಟ್ಟರ್‍ ನಲ್ಲಿ ಹೇಳಿಕೊಂಡಿದೆ. ಇದನ್ನೂ ಓದಿ: ಎಬಿಡಿ ಸಿಡಿಲಬ್ಬರದ ಶತಕಕ್ಕೆ ಬೆಚ್ಚಿಬಿದ್ದ ಆರ್​ಸಿಬಿ ಬೌಲರ್ಸ್

    ಆಟಗಾರರೆ ಐಸಿಸಿ ಪ್ರಶಸ್ತಿಗಾಗಿ ಹಲವು ವರ್ಷ ಶ್ರಮ ಪಟ್ಟರೆ, ಈ ಶ್ವಾನ ಕೇವಲ ಒಂದು ಕ್ಷಣದಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು ಸೈ ಎನಿಸಿಕೊಂಡಿದೆ. ಇದನ್ನೂ ಓದಿ:ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಲಸಿತ್ ಮಾಲಿಂಗ ಗುಡ್ ಬೈ

     

  • ಅಂತರಾಷ್ಟ್ರೀಯ ವಿಮಾನಯಾನ ನಿರ್ಬಂಧ ಮೇ 31ರವರೆಗೆ ವಿಸ್ತರಣೆ

    ಅಂತರಾಷ್ಟ್ರೀಯ ವಿಮಾನಯಾನ ನಿರ್ಬಂಧ ಮೇ 31ರವರೆಗೆ ವಿಸ್ತರಣೆ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಸೋಂಕಿನ ನಿಯಂತ್ರಣಕ್ಕಾಗಿ ಅಂತರಾಷ್ಟ್ರೀಯ ವಿಮಾನಯಾನದ ನಿರ್ಬಂಧವನ್ನು ಮೇ 31ರ ವರೆಗೆ ವಿಸ್ತರಣೆ ಮಾಡಿರುವ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಆದೇಶ ಹೊರಡಿಸಿದೆ.

    ಸೋಂಕಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವ್ಯಾಕ್ಸಿನ್ ಮತ್ತು ಆಕ್ಸಿಜನ್ ಸಮಸ್ಯೆ ಕೂಡ ಕಂಡು ಬಂದಿದೆ. ಹಾಗಾಗಿ ಅಂತರಾಷ್ಟ್ರೀಯ ವಿಮಾನ ಹಾರಾಟದ ನಿರ್ಬಂಧವನ್ನು ಮೇ 31ರ ವರೆಗೂ ವಿಸ್ತರಣೆ ಮಾಡಲಾಗಿದ್ದು, ಈಗಾಗಲೇ ನಿಗದಿಯಾಗಿರುವ ವಿಮಾನಯಾನಕ್ಕೆ ಅವಕಾಶ ಕೊಡಬಹುದು ಎಂದು ಡಿಜಿಸಿಎ ಪತ್ರದ ಮೂಲಕ ಸ್ಪಷ್ಟ ಪಡಿಸಿದೆ.

    2020ರ ಜೂನ್ 26ರಂದು ಹೊರಡಿಸಿದ ಆದೇಶವನ್ನು 2021 ಮೇ 31ವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಇದರ ಪ್ರಕಾರ ಅಂತರಾಷ್ಟ್ರೀಯ ವಾಣಿಜ್ಯ ಮತ್ತು ಪ್ರಯಾಣಿಕ ವಿಮಾನ ಹಾರಾಟವನ್ನು ಭಾರತದಲ್ಲಿ ಮುಂದಿನ 2,359 ಗಂಟೆಗಳ ವರೆಗೆ ಅಂದರೆ 2021ರ ಮೇ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ನಿರ್ಬಂಧವು ಅಂತರಾಷ್ಟ್ರೀಯ ಕಾರ್ಗೊ ವಿಮಾನಗಳ ಕಾರ್ಯಚರಣೆಗಳ ಹಾಗೂ ನಿರ್ದಿಷ್ಟವಾಗಿ ಡಿಜಿಸಿಎ ಅನುಮತಿ ನೀಡಿರುವ ವಿಮಾನಗಳ ಹಾರಾಟಕ್ಕೆ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಿದೆ.

    ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿರುವುದರಿಂದಾಗಿ ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಧಿಸಲಾಗಿದ್ದು, ಇದು ವಿಶೇಷ ವಿಮಾನಯಾನವಾಗಿರುವ ವಂದೇ ಭಾರತ ಮಿಷನ್‍ಗು ಅನ್ವಯ ವಾಗುತ್ತಿದ್ದು, ಜುಲೈ ಬಳಿಕ ಏರ್ ಬಬಲ್ ಮೂಲಕ ವಂದೇ ಭಾರತ್ ಮಿಷನ್ ವಿಮಾನಯಾನ ಆರಂಭಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.

    ಭಾರತದಲ್ಲಿ ಈಗಾಗಲೇ ಪ್ರತಿನಿತ್ಯ 3.5ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣ ದೃಢವಾಗುತ್ತಿರುವುದರಿಂದಾಗಿ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

  • ಅಂತರ್ಜಾತಿ ವಿವಾಹ ಜೋಡಿಗಳ ರಕ್ಷಣೆಗೆ ಮುಂದಾದ ದೆಹಲಿ ಸರ್ಕಾರ

    ಅಂತರ್ಜಾತಿ ವಿವಾಹ ಜೋಡಿಗಳ ರಕ್ಷಣೆಗೆ ಮುಂದಾದ ದೆಹಲಿ ಸರ್ಕಾರ

     – ಜೋಡಿಗಳಿಗೆ ಸೇಫ್ ಹೌಸ್‍ನಲ್ಲಿ ರಕ್ಷಣೆ

    ನವದೆಹಲಿ: ಅಂತರ್ಜಾತಿ ವಿವಾಹವಾಗುವ ಮತ್ತು ವಿವಾಹವಾಗುವ ಯೋಜನೆಯನ್ನು ಹೊಂದಿರುವ ಜೋಡಿಗಳ ರಕ್ಷಣೆ, ಹಿತದೃಷ್ಟಿಯಿಂದ ದೆಹಲಿ ಸರ್ಕಾರ ಸುತ್ತೋಲೆಯನ್ನ ಹೊರಡಿಸಿದೆ.

    ಅಂತರ್ಜಾತಿ ಅಥವಾ ಅಂತರ್ ಧರ್ಮ ವಿವಾಹವಾದ ದಂಪತಿತಬ್ಬನ ಕಿರುಕುಳದಿಂದ ರಕ್ಷಿಸಲು ದೆಹಲಿ ಸರ್ಕಾರ ಈಗ ಸುತ್ತೋಲೆ ಹೊರಡಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಿಶೇಷ ವಲಯಗಳನ್ನು ಸ್ಥಾಪಿಸಲಾಗಿದೆ. ಈ ವಲಯಗಳ ಜವಾಬ್ದಾರಿಯನ್ನು ಪೊಲೀಸ್ ಉಪ ಆಯುಕ್ತರು ವಹಿಸಲಿದ್ದಾರೆ.

    ಅಂತರ್ಜಾತಿ ವಿವಾಹದ ದಂಪತಿಗಳು ತಮ್ಮ ಕುಟುಂಬಗಳಿಂದ ಅಥವಾ ಸ್ಥಳೀಯ ಸಮುದಾಯದಿಂದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ದಂಪತಿಗಳಿಗೆ ಸರ್ಕಾರ ಸುರಕ್ಷಿತ ಮನೆಯಲ್ಲಿ (ಸೇಫ್ ಹೌಸ್) ವಸತಿ ಕಲ್ಪಿಸಲಾಗುವುದು ಎಂದು ಎಸ್‍ಒಪಿ ಸೂಚಿಸುತ್ತದೆ. ದೆಹಲಿ ಮಹಿಳಾ ಆಯೋಗದ 181 ಟೋಲ್-ಫ್ರೀ ಮಹಿಳಾ ಸಹಾಯವಾಣಿ ಕರೆ ಮಾಡಿ ತಿಳಿಸಬಹುದಾಗಿದೆ. ದಂಪತಿಗಳಿಗೆ ನೆರವು ನೀಡವಲ್ಲಿ ಸಹಾಯವಾಣಿಯಾಗಿ ಕಾರ್ಯನಿರ್ವಹಿಸುತ್ತದೆ.

    ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ ಎಸ್‍ಒಪಿ ದೂರವಾಣಿ ಕರೆ ಮಾಡುವ ದಂಪತಿಯ ತೊಂದರೆ ಕರೆಗಳನ್ನು ನಿರ್ವಹಿಸಲು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ದಂಪತಿಗಳಿಂದ ಪಡೆದ ದೂರನ್ನು ಡಿಸಿಪಿ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ರವಾನಿಸುತ್ತಾರೆ. ದಂಪತಿಗಳಿಗೆ ಸುರಕ್ಷಿತ ಮನೆಯಲ್ಲಿ ಉಳಿಯುವುದನ್ನು ಎಸ್‍ಒಪಿ ಸೂಚಿಸುತ್ತದೆ. ದಂಪತಿಗೆ ಸಾಕಷ್ಟು ಭದ್ರತೆ ನೀಡಲಾಗುತ್ತದೆ. ಒಂದುವೇಳೆ ದಂಪತಿಗಳು ಸುರಕ್ಷಿತ ಮನೆಯಲ್ಲಿ ಉಳಿಯಲು ಬಯಸದಿದ್ದರೆ, ಬೆದರಿಕೆ ಗ್ರಹಿಕೆ ದೂರಿನ ಆಧಾರದ ಮೇಲೆ ಅವರಿಗೆ ವಿಶೇಷ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

  • ದಿಢೀರ್ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾ ದಿಗ್ಗಜ ಆಟಗಾರ

    ದಿಢೀರ್ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾ ದಿಗ್ಗಜ ಆಟಗಾರ

    ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರವಾಗಿ ಕಳೆದ ಮೂರು ದಿನಗಳ ಅವಧಿಯಲ್ಲಿ ಮತ್ತೊಬ್ಬ ದಿಗ್ಗಜ ಆಟಗಾರ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ. ಸೋಮವಾರ ಡೇಲ್ ಸ್ಟೇಯ್ನ್ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಆ ಬಳಿಕ ಅನುಭವಿ ಆಟಗಾರ ಹಾಶೀಮ್ ಆಮ್ಲಾ ವಿದಾಯ ಘೋಷಿಸಿದ್ದಾರೆ.

    ತಮ್ಮ ವಿಶೇಷ ಬ್ಯಾಟಿಂಗ್ ಶೈಲಿ ಮತ್ತು ಏಕಾಗ್ರತೆ 36 ವರ್ಷದ ಅಮ್ಲಾ ಅವರಿಗೆ ಕ್ರಿಕೆಟ್‍ನಲ್ಲಿ ವಿಶೇಷ ಸ್ಥಾನಮಾನ ಲಭಿಸುವಂತೆ ಮಾಡಿತ್ತು. ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿರುವ ಅವರು ದೇಶಿಯ ಟೂರ್ನಿಗಳಲ್ಲಿ ಆಡುವುದಾಗಿ ಹೇಳಿದ್ದಾರೆ.

    ಇತ್ತೀಚೆಗೆ ಫಾರ್ಮ್ ಸಮಸ್ಯೆ ಎದುರಿಸಿದ್ದ ಆಮ್ಲಾ ಅಂತಿಮ 29 ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ 1 ಶತಕವನ್ನು ಗಳಿಸಿರಲಿಲ್ಲ. ಅಲ್ಲದೇ ವಿಶ್ವಕಪ್ ಕ್ರಿಕೆಟ್‍ನಲ್ಲೂ 7 ಇನ್ನಿಂಗ್ಸ್ ಗಳಿಂದ ಕೇವಲ 203 ರನ್ ಸಿಡಿಸಿದ್ದರು. ಇದುವರೆಗೂ 124 ಟೆಸ್ಟ್ ಆಡಿರುವ ಆಮ್ಲಾ 9,282 ರನ್ ಗಳಿಸಿದ್ದಾರೆ. ವಿಶೇಷ ಎಂದರೆ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಸಿಡಿಸಿದ ಏಕೈಕಾ ಆಟಗಾರರಾಗಿದ್ದಾರೆ. ಅಜೇಯ 311 ರನ್ ಅವರ ಟೆಸ್ಟ್ ಕ್ರಿಕೆಟ್‍ನ ಅಧಿಕ ಸ್ಕೋರ್. 181 ಏಕದಿನ ಪಂದ್ಯಗಳಿಂದ 8,113 ರನ್ ಗಳಿಸಿದ್ದು, ಇದರಲ್ಲಿ 27 ಶತಕ, 39 ಅರ್ಧ ಶತಕಗಳು ಸೇರಿದೆ. ಉಳಿದಂತೆ 44 ಟಿ20 ಪಂದ್ಯಗಳನ್ನು ಆಡಿದ್ದು, 8 ಅರ್ಧ ಶತಕ ಗಳಿಸಿ 1,277 ರನ್ ಗಳಿಸಿದ್ದಾರೆ.

    ಭಾರತದಲ್ಲಿ ನಡೆದ ಕ್ರಿಕೆಟ್ ಸರಣಿಗಳಲ್ಲಿ ಭಾಗವಹಿಸಿದ್ದ ಆಮ್ಲಾ 2004 ರಲ್ಲಿ ವಿಫಲವಾದರು 2008ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2010ರ ಸರಣಿಯಲ್ಲಿ ಆಡಿದ ಮೂರು ಇನ್ನಿಂಗ್ಸ್ ಗಳಲ್ಲಿ ಅಜೇಯ 253 ರನ್, 114 ರನ್, ಅಜೇಯ 123 ರನ್ ಗಳಿಸಿ ಸರಣಿಯನ್ನು ಸ್ಮರಣೀಯವಾಗಿಕೊಂಡಿದ್ದರು. ಅಲ್ಲದೇ 2015 ರಲ್ಲಿ ತಂಡದ ನಾಯಕತ್ವದೊಂದಿಗೆ ಆಗಮಿಸಿ ಸರಣಿಯನ್ನು 0-3 ಅಂತರದಲ್ಲಿ ಗೆದ್ದುಕೊಂಡಿದ್ದರು. ಅದರಲ್ಲೂ ದೆಹಲಿಯಲ್ಲಿ ನಡೆದಿದ್ದ, ಟೆಸ್ಟ್ ಪಂದ್ಯದಲ್ಲಿ ತಂಡದ ಗೆಲುವಿಗಾಗಿ 244 ಎಸೆತಗಳಲ್ಲಿ 25 ರನ್ ಗಳಿಸಿದ್ದರು ಮಾತ್ರ ಯಾರು ಮರೆಯಲು ಸಾಧ್ಯವಿಲ್ಲ. ಉಳಿದಂತೆ ಐಪಿಎಲ್ ನಲ್ಲೂ ಆಡಿದ್ದ ಆಮ್ಲಾ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಗಿದ್ದರು. ಉಳಿದಂತೆ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿಯೂ ಆಡಿದ್ದರು.

  • ಮೂರನೇ ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದ ಹಿಮಾ ದಾಸ್

    ಮೂರನೇ ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದ ಹಿಮಾ ದಾಸ್

    ನವದೆಹಲಿ: ಭಾರತದ ಯುವ ಓಟಗಾರ್ತಿ ಹಿಮಾ ದಾಸ್ ಎರಡು ವಾರಗಳಲ್ಲಿ ಮೂರು ಅಂತಾರಾಷ್ಟ್ರೀಯ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತವೇ ಹೆಮ್ಮೆ ಪಡುವ ಕೆಲಸ ಮಾಡಿದ್ದಾಳೆ.

    ಶನಿವಾರ ಕ್ಲಾಡ್ನೊದಲ್ಲಿ ನಡೆದ ಕ್ಲಾಡ್ನೊ ಸ್ಮಾರಕ ಅಥ್ಲೆಟಿಕ್ಸ್ ಸ್ಪರ್ಧೆಯ ಮಹಿಳಾ ವಿಭಾಗದ 200 ಮೀಟರ್ ಓಟದಲ್ಲಿ 23.43 ಸೆಕೆಂಡ್‍ಗಲ್ಲಿ ಓಡಿ ಅಗ್ರ ಸ್ಥಾನ ಗಳಿಸಿದ ಹಿಮಾ ದಾಸ್ ಪ್ರಸಕ್ತ ಸಾಲಿನ ತನ್ನ ಮೂರನೇ ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಎರಡೇ ವಾರದಲ್ಲಿ ಮೂರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

    ಈ ಹಿಂದೆ ಅಂದರೆ ಜುಲೈ 8 ರಂದು ಪೋಲೆಂಡಿನಲ್ಲಿ ನಡೆದ ಕುಂತೊ ಅಥ್ಲೆಟಿಕ್ಸ್ ಕೂಟದಲ್ಲಿನ ಮಹಿಳೆಯರ 200 ಮೀ. ಓಟದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ಬಂಗಾರದ ಪದಕವನ್ನು ಗೆದ್ದುಕೊಂಡಿದ್ದರು. ಈ ಕ್ರೀಡಾಕೂಟದಲ್ಲಿ ಹಿಮಾ ದಾಸ್ ಅವರು 23.97 ಸೆಕೆಂಡ್‍ಗಳಲ್ಲಿ ತನ್ನ ಗುರಿಮುಟ್ಟಿ ಚಿನ್ನ ಗೆದ್ದರೆ, ಭಾರತದ ಮತ್ತೊಬ್ಬ ಓಟಗಾರ್ತಿ ವಿಕೆ ವಿಸ್ಮಯಾ 24.06 ಸೆಕೆಂಡ್‍ನಲ್ಲಿ ಓಡಿ ಬೆಳ್ಳಿ ತಮ್ಮದಾಗಿಸಿಕೊಂಡಿದ್ದರು.

    ಕುಂತೊ ಅಥ್ಲೆಟಿಕ್ಸ್ ಕೂಟಕ್ಕೂ ಮುಂಚೆ ಜುಲೈ 2 ರಂದು ಪೋಲೆಂಡಿನಲ್ಲೇ ನಡೆದ ಪೊನ್ಝಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಪಾಲ್ಗೊಂಡಿದ್ದ ಹಿಮಾ ದಾಸ್ 23.65 ಸೆಕೆಂಡ್‍ಗಳಲ್ಲಿ ರೇಸ್ ಪೂರೈಸಿ ಚಿನ್ನದ ಪದಕ ಗೆದ್ದಿದ್ದರು. ಬೆನ್ನು ನೋವಿನ ಸಮಸ್ಯೆ ಇದ್ದರೂ ಅದನ್ನು ಲೆಕ್ಕಿಸದ 19 ವರ್ಷದ ಹಿಮಾ ದಾಸ್ ಪ್ರಸಕ್ತ ಸಾಲಿನಲ್ಲಿ ಮೂರು ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದಿದ್ದಾರೆ.

    ರಾಷ್ಟ್ರೀಯ ದಾಖಲೆಯ ವೀರ ಮುಹಮ್ಮದ್ ಅನಾಸ್ ಇದೇ ಕುಂತೊ ಅಥ್ಲೆಟಿಕ್ಸ್ ಕ್ರೀಡಾಕೂಟದ ಪುರುಷರ 200 ಮೀ. ಓಟದಲ್ಲಿ 21.18 ಸೆಕೆಂಡ್‍ಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದಿದ್ದರು. ಎಂ.ಜಿ ಬಬೀರ್ 400 ಮೀ. ಹರ್ಡಲ್ಸ್ ನಲ್ಲಿ 50.21 ಸೆಕೆಂಡ್‍ಗಳ ಸಾಧನೆಯೊಂದಿಗೆ ಬಂಗಾರದ ಸಾಧನೆ ಮಾಡಿದ್ದಾರೆ. ಇದೇ ರೇಸ್‍ನಲ್ಲಿ ಜಿತಿನ್ ಪಾಲ್ 3ನೇ (52.26 ಸೆ.) ಸ್ಥಾನ ಪಡೆದುಕೊಂಡಿದ್ದರು.

  • ವಿಜಯಪುರದ ಉಸ್ತುವಾರಿ ಸಚಿವರ ಎದುರಲ್ಲೇ ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ!

    ವಿಜಯಪುರದ ಉಸ್ತುವಾರಿ ಸಚಿವರ ಎದುರಲ್ಲೇ ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ!

    ವಿಜಯಪುರ: ವಿದೇಶದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದರೂ ತೋಟಗಾರಿಕ ಸಚಿವ ಎಂ.ಸಿ ಮನಗೂಳಿ ಸುಮ್ಮನೆ ಕುಳಿತ್ತಿದ್ದಕ್ಕೆ ಟೀಕೆ ವ್ಯಕ್ತವಾಗಿದೆ.

    ತೋಟಗಾರಿಕಾ ಬೆಳೆಗಳ ಅಧ್ಯಯನಕ್ಕಾಗಿ ಮನಗೂಳಿ ಅವರು ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ವಿದೇಶಿ ಅಧಿಕಾರಿಗಳ ಜೊತೆಗೆ ಚರ್ಚೆ ಸಂದರ್ಭದಲ್ಲಿ ಟೇಬಲ್ ಮೇಲೆ ತ್ರಿವರ್ಣ ಧ್ವಜವನ್ನು ತಲೆ ಕೆಳಗಾಗಿ ಇಡಲಾಗಿತ್ತು.

    ಚರ್ಚೆ ನಡೆಸುತ್ತಿದ್ದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಡವಟ್ಟಾಗಿದ್ದರೆ ಧ್ವಜವನ್ನು ಸರಿಪಡಿಸಬಹುದಾಗಿತ್ತು. ಆದರೆ ಕರ್ನಾಟಕದ ಅಧಿಕಾರಿಗಳು ಮತ್ತು ಸಚಿವರು ಯಾಕೆ ಗಮನ ನೀಡಿಲ್ಲ ಎಂದು ಜನರು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಶ್ವಕಪ್‍ನಿಂದ ಇಟಲಿ ಔಟ್: ಅಂತಾರಾಷ್ಟ್ರೀಯ ಫುಟ್‍ಬಾಲ್‍ಗೆ ಬಫನ್ ಕಣ್ಣೀರ ವಿದಾಯ

    ವಿಶ್ವಕಪ್‍ನಿಂದ ಇಟಲಿ ಔಟ್: ಅಂತಾರಾಷ್ಟ್ರೀಯ ಫುಟ್‍ಬಾಲ್‍ಗೆ ಬಫನ್ ಕಣ್ಣೀರ ವಿದಾಯ

    ಮಿಲಾನ್: ನಾಲ್ಕು ಬಾರಿಯ ವಿಶ್ವಕಪ್ ಚಾಂಪಿಯನ್ ಇಟಲಿ, 2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಲು ವಿಫಲವಾಗಿದೆ.

    ಸ್ಯಾನ್ ಸಿರೋ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದ 70 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಎರಡನೇ ಹಂತದ ಪ್ಲೇ ಆಫ್ ಪಂದ್ಯದಲ್ಲಿ ಇಟಲಿ, ಸ್ವೀಡನ್ ವಿರುದ್ಧ ಗೋಲು ರಹಿತ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿತು.

    ಮೂರು ದಿನಗಳ ಹಿಂದೆ ಸ್ಟಾಕ್‍ಹಾಲ್ಮ್ ನಲ್ಲಿ ನಡೆದಿದ್ದ ಮೊದಲ ಲೆಗ್‍ನ ಹಣಾಹಣಿಯನ್ನು ಸ್ವೀಡನ್ 1-0 ಅಂತರದಲ್ಲಿ ಗೆದ್ದುಕೊಂಡಿತ್ತು. ಹೀಗಾಗಿ 1-0 ಗೋಲಿನ ಸರಾಸರಿಯೊಂದಿಗೆ ಸ್ವೀಡನ್ ವಿಶ್ವಕಪ್‍ಗೆ ಅರ್ಹತೆ ಪಡೆದರೆ, 1958ರ ಬಳಿಕ ಇದೇ ಮೊದಲ ಬಾರಿಗೆ ಇಟಲಿ, ವಿಶ್ವಕಪ್‍ನ ಅರ್ಹತಾ ಸುತ್ತಿನಲ್ಲೇ ತನ್ನ ಅಭಿಯಾನ ಕೊನೆಗೊಳಿಸಿದೆ.

    ಇಟಲಿಯ ಸ್ಟಾರ್ ಆಟಗಾರರಾದ ಚೆಲಿನಿ, ಆ್ಯಂಡ್ರಿಯಾ ಬರ್ಝಗಿ ಹಾಗೂ ಜೇಕಬ್ ಜಾನ್ಸನ್ ಪಂದ್ಯದ ಮೊದಲಾರ್ದದಲ್ಲಿಯೇ ಹಳದಿ ಕಾರ್ಡ್ ಪಡೆದಿದ್ದರಿಂದ ಇಟಲಿ ತನ್ನ ಆಕ್ರಮಣಕಾರಿ ಆಟದ ಶೈಲಿಯಿಂದ ಹಿಂದೆ ಸರಿಯಿತು. ಇದರಿಂದಾಗಿ ಸ್ವೀಡನ್‍ನ ರಕ್ಷಣಾ ವಿಭಾಗವನ್ನು ದಾಟಲು ಇಟಲಿಗೆ ಸಾಧ್ಯವಾಗಲಿಲ್ಲ.

    2006ರ ಬಳಿಕ ಸ್ವೀಡನ್ ವಿಶ್ವಕಪ್‍ಗೆ ಅರ್ಹತೆ ಪಡೆಯುತ್ತಿದೆ. ವಿಶೇಷವೆಂದರೆ 2006ರಲ್ಲಿ ಇಟಲಿ ವಿಶ್ವಕಪ್ ಚಾಂಪಿಯನ್ ಆಗಿತ್ತು. ವಿಶ್ವಕಪ್‍ನಿಂದ ಇಟಲಿ ಹೊರನಡೆದಿರುವುದು ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟುಮಾಡಿದೆ.

    ಇದಕ್ಕೂ ಮೊದಲು ಬಲಿಷ್ಠ ತಂಡಗಳಾದ ನೆದಲ್ರ್ಯಾಂಡ್, ದಕ್ಷಿಣ ಅಮೆರಿಕ ಚಾಂಪಿಯನ್ ಚಿಲಿ ಹಾಗೂ ಅಮೆರಿಕ ತಂಡಗಳು 2018ರ ವಿಶ್ವಕಪ್ ಅರ್ಹತಾ ಸುತ್ತಿನಲ್ಲೆ ಹೊರನಡೆದಿದ್ದವು.

    ಕಳೆದ 7 ಟೂರ್ನಿಗಳಲ್ಲಿ ಈ ನಾಲ್ಕು ತಂಡಗಳು ಅಂತಿಮ 8ರ ಘಟ್ಟದ ಹೋರಾಟದಲ್ಲಿ ಭಾಗಿಯಾಗಿದ್ದವು. ಈ ಸೋಲಿನೊಂದಿಗೆ ಇಟಲಿ ಪರ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ಹಾಗೂ ವಿಶ್ವ ಫುಟ್ಬಾಲ್‍ನಲ್ಲಿ ಗೋಡೆಯೆಂದೇ ಖ್ಯಾತಿವೆತ್ತ ಗಿಯಾನ್ಲುಗಿ ಬಫನ್ ತನ್ನ ವರ್ಣರಂಜಿತ ಅಂತರಾಷ್ಟ್ರೀಯ ಫುಟ್‍ಬಾಲ್ ವೃತ್ತಿ ಜೀವನಕ್ಕೆ ಕಣ್ಣೀರ ವಿದಾಯ ಹೇಳಿದ್ದಾರೆ.

    ಸ್ವೀಡನ್ ವಿರುದ್ಧದ ಪಂದ್ಯದ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ಬಫನ್, ವಿಶ್ವಕಪ್‍ಗೆ ಅರ್ಹತೆ ಪಡೆಯದೆ, ಸೋಲಿನೊಂದಿಗೆ ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿರುವುದು ನನಗೆ ನಾಚಿಕೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಇಟಲಿ ಪರ ಸುದೀರ್ಘ 20 ವರ್ಷಗಳಲ್ಲಿ 175 ಪಂದ್ಯಗಳನ್ನು ಆಡಿರುವ ಬಫನ್, 2006ರಲ್ಲಿ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.