Tag: Insult

  • ಎಲೆಕ್ಷನ್‍ನಲ್ಲಿ ಅಧಿಕಾರಿಯ ಸಹೋದರ ಸಹಾಯ ಮಾಡಿಲ್ಲಂತ ಸೇಡು -ಎಇಇಗೆ ಪರಮೇಶ್ವರ್ ನಾಯ್ಕ್ ಅವಮಾನ

    ಎಲೆಕ್ಷನ್‍ನಲ್ಲಿ ಅಧಿಕಾರಿಯ ಸಹೋದರ ಸಹಾಯ ಮಾಡಿಲ್ಲಂತ ಸೇಡು -ಎಇಇಗೆ ಪರಮೇಶ್ವರ್ ನಾಯ್ಕ್ ಅವಮಾನ

    ಬಳ್ಳಾರಿ: ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಸಚಿವರೊಬ್ಬರು ಫೋನ್ ರಿಸೀವ್ ಮಾಡಲಿಲ್ಲ ಅಂತಾ ಡಿವೈಎಸ್ ಪಿ ಅನುಪಮಾ ಶೆಣೈರನ್ನ ಎತ್ತಂಗಡಿ ಮಾಡಿದ ಪ್ರಕರಣ ಇನ್ನೂ ರಾಜ್ಯದ ಜನರ ಮನಸ್ಸಿನಿಂದ ಮಾಸಿಲ್ಲ. ನಾನು ಡಿವೈಎಸ್ಪಿ ಎತ್ತಂಗಡಿ ಮಾಡೇ ಇಲ್ಲಾ ಅಂತಾ ವಾದಿಸಿ ಕೊನೆಗೆ ಸಿಕ್ಕಿಕೊಂಡಿದ್ದ ಮಾಜಿ ಮಂತ್ರಿಗಳು ಇದೀಗ ಮತ್ತೊಂದು ಕಿತಾಪತಿ ಮಾಡಿದ್ದಾರೆ.

    ಮಾಜಿ ಮಂತ್ರಿ ಮತ್ತು ಹಾಲಿ ಶಾಸಕ ಪಿಟಿ ಪರಮೇಶ್ವರ ನಾಯ್ಕ್, ಚುನಾವಣೆಯಲ್ಲಿ ಅಧಿಕಾರಿಯೊಬ್ಬರ ಸಹೋದರ ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಅಂತಾ ಜೆಸ್ಕಾ ಇಲಾಖೆಯ ಎಇಇ (ಅಸಿಸ್ಟೆಂಟ್ ಎಜ್ಯೂಕ್ಯೂಟಿವ್ ಎಂಜಿನಿಯರ್) ಗೆ ತುಂಬಿದ ಸಭೆಯಲ್ಲಿ ಎಲ್ಲರೆದುರೆಗೆ ಅವಮಾನ ಮಾಡಿ ಮನೆಗೆ ಕಳುಹಿಸಿದ್ದಾರೆ.

    ಹೂವಿನಹಡಗಲಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಜೆಸ್ಕಾ ಎಇಇ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ ಮಂತ್ರೋಂಡಿಯವರ ಸಹೋದರರೊಬ್ಬರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಓದು ಗಂಗಪ್ಪ ಪರ ಕೆಲಸ ಮಾಡಿದ್ದರು. ಇದನ್ನೆ ಅಸ್ತ್ರವಾಗಿ ಮಾಡಿಕೊಂಡ ಪರಮೇಶ್ವರ ನಾಯ್ಕ್ ಎಇಇ ಶ್ರೀನಿವಾಸರನ್ನ ನೀವೂ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿಲ್ಲವೆಂದು ತುಂಬಿದ ಸಭೆಯಲ್ಲಿ ಅವಮಾನ ಮಾಡಿದ್ದಾರೆ. ಅಲ್ಲದೇ ನೀವೂ ಇಲ್ಲಿಂದ ಹೋಗಿಬಿಡಿ ಇಲ್ಲದಿದ್ದರೇ ನಿಮ್ಮ ಮೇಲೆ ನಾನೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮಾಡುವೆ ಅಂತಾ ಧಮ್ಕಿ ಹಾಕಿದ್ದಾರೆ.

    ಹೀಗಾಗಿ ಶಾಸಕರ ಸೇಡಿನ ರಾಜಕಾರಣಕ್ಕೆ ಮನನೊಂದ ಜೆಸ್ಕಾನ ಎಇಇ ಶ್ರೀನಿವಾಸರು ದೀರ್ಘ ರಜೆ ಹಾಕಿ ಮನೆಗೆ ಹೋಗಿದ್ದಾರೆ. ಅಲ್ಲದೇ ಈ ಅವಕಾಶವನ್ನೆ ಬಳಸಿಕೊಂಡ ಪರಮೇಶ್ವರ ನಾಯ್ಕ್ ಅದೇ ಜೆಸ್ಕಾಗೆ ತಮ್ಮ ಆಪ್ತರಾದ ಹಡಗಲಿ ಮೂಲದ ಮೋಟ್ಲಾ ನಾಯ್ಕ್ ಅವರನ್ನು ಪೋಸ್ಟಿಂಗ್ ಸಹ ಮಾಡಿಸಿಕೊಂಡು ಬಂದಿದ್ದಾರೆ. ತಮ್ಮ ವಿರುದ್ಧ ಕೆಲಸ ಮಾಡಿದವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿರುವ ಪರಮೇಶ್ವರ ನಾಯ್ಕ್ ರ ವರ್ತನೆಯಿಂದ ಮತ್ತೊಬ್ಬ ಪ್ರಾಮಾಣಿಕ ಅಧಿಕಾರಿ ಮನನೊಂದು ಮನೆಗೆ ಹೋಗಿದ್ದಾರೆ.

    ಅಷ್ಟೇ ಅಲ್ಲದೇ ತಮ್ಮಗಾದ ಅವಮಾನವನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಈಗಾಗಲೇ ಹಲವಾರು ಅಧಿಕಾರಿಗಳಿಗೆ ಕಿರುಕುಳ ನೀಡಿರುವ ಪರಮೇಶ್ವರ ನಾಯ್ಕ್ ಇದೀಗ ಸಿಎಂ ಕುಮಾರಸ್ವಾಮಿಯವರ ಇಲಾಖೆಯ ಅಧಿಕಾರಿಗೆ ಅವಮಾನ ಮಾಡಿ ಮನೆಗೆ ಕಳುಹಿಸಿರುವುದರಿಂದ ಸಿಎಂ ಕುಮಾರಸ್ವಾಮಿ ತಮ್ಮ ಇಲಾಖೆಯ ಅಧಿಕಾರಿಗಾದ ಅವಮಾನಕ್ಕೆ ನ್ಯಾಯ ಕೊಡಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

  • ಮಾಲ್ ನಲ್ಲಿ ಸಾರ್ವಜನಿಕ ಅವಮಾನ- ಬಾಲಕಿ ಆತ್ಮಹತ್ಯೆ

    ಮಾಲ್ ನಲ್ಲಿ ಸಾರ್ವಜನಿಕ ಅವಮಾನ- ಬಾಲಕಿ ಆತ್ಮಹತ್ಯೆ

    ಅಗರ್ತಲಾ: ಶಾಪಿಂಗ್ ಮಾಡಲು ಮಾಲ್‍ಗೆ ಹೋಗಿದ್ದ ವೇಳೆ ಅಲ್ಲಿನ ಸಿಬ್ಬಂದಿ ನೀಡಿದ ಕಿರುಕುಳದಿಂದ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ತ್ರಿಪುರಾ ಬರ್ಕತಲ್‍ನಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಬಾಲಕಿಯು ಅಕ್ಸಿಲಿಯಮ್ ಮಹಿಳಾ ಪ್ರೌಢ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದಳು. ಸಿಬ್ಬಂದಿ ಆಕೆಯನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದು, ಅವಮಾನ ಮಾಡಿದ್ದರಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

    ನನ್ನ ಮಗಳು ಯಾವುತ್ತೂ ಕಳ್ಳತನ ಮಾಡಿದವಳಲ್ಲ. ನನ್ನ ಅನುಮತಿ ಇಲ್ಲದೇ ಯಾವತ್ತೂ ಆಕೆ ನನ್ನ ಪರ್ಸ್ ಮುಟ್ಟುತ್ತಿರಲಿಲ್ಲ, ಅಲ್ಲದೇ ನೆರೆಹೊರೆಯವರಿಂದ ಏನನ್ನು ಪಡೆಯುತ್ತಿರಲಿಲ್ಲ. ಮಾಲ್ ಸಿಬ್ಬಂದಿ ಆಕೆಯ ಮೇಳೆ ಸುಳ್ಳು ಆರೋಪ ಹೊರಿಸಿದ್ದಾರೆ. ಸಾರ್ವಜನಿಕವಾಗಿ ಅಪಮಾನಕ್ಕೆ ಒಳದಾಗ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ತಾಯಿ ಒತ್ತಾಯಿಸಿದ್ದಾರೆ.

    ನಡೆದಿದ್ದು ಏನು:
    ಮೇ 24ರಂದು ಬಾಲಕಿ ತನ್ನ ಇಬ್ಬರು ಗೆಳತಿಯರೊಂದಿಗೆ ಶಾಪಿಂಗ್ ಮಾಡಲು ಮಾಲ್‍ಗೆ ಹೋಗಿದ್ದಾಳೆ. ಆಕೆಯನ್ನು ಮಾಲ್ ಸಿಬ್ಬಂದಿಯೊಬ್ಬ ಫೋನ್ ಕಳ್ಳತನದ ಆರೋಪದ ಮೇಲೆ ವಶಕ್ಕೆ ಪಡೆದು 4 ಸಾವಿರ ರೂ. ನೀಡಿ ಬಿಡಿಸಿಕೊಂಡು ಹೋಗುವಂತೆ ಹೇಳಿದ್ದಾನೆ. ವಿಚಾರ ತಿಳಿದು ಆಘಾತಕ್ಕೆ ಒಳಗಾದ ಅವರು ತಕ್ಷಣವೇ ಹೋಗಿ ಬಿಡಿಸಿಕೊಂಡು ಬಂದಿದ್ದಾರೆ. ಇದರಿಂದ ಮನನೊಂದು ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪೊಲೀಸರು ಅಸ್ವಾಭಾವಿಕ ಸಾವು ಎಂದು ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಸದ್ಯ ಇಂಡಿಜಿನಸ್ ಪೀಪಲ್ಸ್ ಆಫ್ ತ್ರಿಪುರ (ಐಪಿಎಫ್‍ಟಿ) ಹಾಗೂ ನ್ಯಾಷನಲ್ ಸ್ಟುಡೆಂಟ್ ಯುನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ಮೌನ ಪ್ರತಿಭಟನೆಗೆ ಕರೆ ನೀಡಿದ್ದವು. ಆದರೆ ಪೊಲೀಸರು ಪ್ರತಿಭಟನೆಯನ್ನು ಮಾಡದಂತೆ ಸೂಚಿಸಿದ್ದಾರೆ.

    ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಬಹಿರಂಗ ಪಡಿಸಬೇಕು. ಬಾಲಕಿಯ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಐಪಿಎಫ್‍ಟಿ ಸದಸ್ಯರು ಮಾಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

    ಮಾಲ್ ಹಾಗೂ ಬಾಲಕಿ ಓದುತ್ತಿದ್ದ ಶಾಲೆಯವರು ಆತ್ಮಹತ್ಯೆ ಮಾಡಿಕೊಂಡ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ವರದಿಯಾಗಿದೆ.

  • ಉರ್ದು ಶಾಲೆಯಲ್ಲಿ ಕಾಲಿನಿಂದ ತುಳಿದು ರಾಷ್ಟ್ರ ಧ್ವಜಕ್ಕೆ  ಅವಮಾನ

    ಉರ್ದು ಶಾಲೆಯಲ್ಲಿ ಕಾಲಿನಿಂದ ತುಳಿದು ರಾಷ್ಟ್ರ ಧ್ವಜಕ್ಕೆ ಅವಮಾನ

    ಬೆಂಗಳೂರು: ಗಣರಾಜ್ಯೋತ್ಸವದ ಆಚರಣೆ ನಂತರ ರಾಷ್ಟ್ರ ಧ್ವಜವನ್ನು ಕಾಲಿನಿಂದ ತುಳಿದು ಅವಮಾನ ಮಾಡಿರುವ ಘಟನೆ ನಗರದ ವರ್ತೂರು ಸರ್ಕಾರಿ ಉರ್ದು ಶಾಲೆಯಲ್ಲಿ ನಡೆದಿದೆ.

    69 ನೇ ಗಣರಾಜ್ಯೋತ್ಸವ ಅಂಗವಾಗಿ ಇಂದು ಮುಂಜಾನೆ ಶಾಲೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಲಾಗಿತ್ತು. ಸಂಜೆ 5:30 ಸಮಯದಲ್ಲಿ ಧ್ವಜವನ್ನು ಕೆಳಗಿಳಿಸುವ ಸಂದರ್ಭದಲ್ಲಿ ಸೈಯದ್  ರಾಷ್ಟ್ರ ಧ್ವಜವನ್ನು ನೆಲದ ಮೇಲಿಟ್ಟು ಕಾಲಿನಿಂದ ತುಳಿದು ಬಿಚ್ಚುವ ಮೂಲಕ ಅಪಮಾನ ಮಾಡಿದ್ದಾನೆ ಎಂಬ ಅರೋಪ ಕೇಳಿ ಬಂದಿದೆ.

    ಆಗಿದ್ದು ಏನು?
    ರಾಷ್ಟ್ರಧ್ವಜವನ್ನು ಇಳಿಸದೇ ನೇರವಾಗಿ ಕಂಬವನ್ನೆ ತೆಗೆದು ಕೊಠಡಿಗೆ ನೆಲದಲ್ಲಿ ಎಳೆದುಕೊಂಡು ಹೋಗಿದ್ದಾನೆ. ರಾಷ್ಟ್ರಧ್ವಜವನ್ನು ನೆಲಕ್ಕೆ ಎಳೆದುಕೊಂಡು ಹೋಗುವುದನ್ನು ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ನೋಡಿದ್ದಾರೆ. ಕೂಡಲೇ ಕಾರು ನಿಲ್ಲಿಸಿ ಮಹಿಳೆ ಶಾಲೆಗೆ ಹೋಗಿ ಸೈಯದ್ ನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೇ ಗಾಬರಿಗೊಂಡ ಆತ ರಾಷ್ಟ್ರಧ್ವಜವನ್ನು ಶಾಲೆಯ ಕೊಠಡಿಯ ಕುರ್ಚಿ ಮೇಲೆ ಇಟ್ಟು ಬಿಡಿಸಲು ಮುಂದಾಗಿದ್ದಾನೆ.

    ಮಹಿಳೆಯ ಪ್ರಶ್ನೆಗೆ ಉತ್ತರಿಸದೇ ಕೊನೆಗೆ ಕೊಠಡಿಗೆ ಬೀಗ ಹಾಕಿ ಹೊರಟು ಹೋಗಿದ್ದಾನೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ವರ್ತೂರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸೈಯದ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=rBjFxhYB2JU

     

  • ದೈವಕ್ಕೆ ಬೈಯ್ದಿದ್ದಕ್ಕೆ ಇಡೀ ಕುಟುಂಬಕ್ಕೆ ಅನಾರೋಗ್ಯ – ಕೊರಗಜ್ಜನಲ್ಲಿ ಯುವಕನಿಂದ ಕ್ಷಮೆಯಾಚನೆ

    ದೈವಕ್ಕೆ ಬೈಯ್ದಿದ್ದಕ್ಕೆ ಇಡೀ ಕುಟುಂಬಕ್ಕೆ ಅನಾರೋಗ್ಯ – ಕೊರಗಜ್ಜನಲ್ಲಿ ಯುವಕನಿಂದ ಕ್ಷಮೆಯಾಚನೆ

    ಮಂಗಳೂರು: ಅದು ತುಳುನಾಡಿನ ಕಾರಣಿಕದ ಪ್ರಭಾವಿ ದೈವ. ಬೇಡಿದ ಇಷ್ಟಾರ್ಥಗಳನ್ನು ಪೂರೈಸುವ ದೇವರು ಎಂದೇ ಹೆಸರುವಾಸಿ. ಇಂಥಾ ಶಕ್ತಿ ಭೂತ ದೇವರಿಗೆ ಆ ಯುವಕ ಫೇಸ್ ಬುಕ್ ನಲ್ಲಿ ಬಾಯಿಗೆ ಬಂದಂತೆ ನಿಂದಿಸಿದ್ದ. ಈಗ ನೋಡಿದರೆ ನಿಂದಿಸಿದವನೇ ಬಂದು ದೇವರಲ್ಲಿ ಕ್ಷಮೆ ಕೋರಿದ್ದಾನೆ.

    ಹೀಗೆ ಉದ್ದಂಡ ನಮಸ್ಕಾರ ಹಾಕ್ತಿರೋ ಈತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಮನೋಜ್ ಪಂಡಿತ್. ಮಂಗಳೂರಿನ ಪದವಿನಂಗಡಿಯ ಬಂಗೇರ ಎಂಬವರು ಆರಾಧಿಸೋ ಕೊರಗಜ್ಜನ ಗುಡಿಯ ಮುಂದೆ ಹೀಗೆ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸುತ್ತಿರುವುದಕ್ಕೆ ಕಾರಣ ಆತ ಮಾಡಿದ್ದ ಪ್ರಮಾದ. ಎರಡು ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ಈತ ತುಳುನಾಡಿನ ಕೊರಗಜ್ಜನ ಬಗ್ಗೆ ಅವಮಾನಕರವಾಗಿ ಟೀಕಿಸಿದ್ದ. ಯಾವಾಗ ಈತನ ತಾಯಿಗೆ ಮತ್ತು ಇವನಿಗೂ ಅನಾರೋಗ್ಯ ಶುರುವಾಯಿತೋ ದೇವರಿಗೆ ಬಂದು ನಮಸ್ಕಾರ ಹಾಕಿ ತಪ್ಪಿಗೆ ಕ್ಷಮೆ ಯಾಚಿಸಿದ್ದಾನೆ.

    ತುಳುನಾಡಿನ ಕೊರಗಜ್ಜನ ಬಗ್ಗೆ, ದೈವಾರಾಧನೆಯ ಬಗ್ಗೆಯೇ ತುಚ್ಛವಾಗಿ ನಿಂದನೆ ಮಾಡಿದ್ದ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಕೆಲವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಮಂಗಳೂರಿನ ಹಿಂದು ಹಿತರಕ್ಷಣಾ ಸಮಿತಿ ಎನ್ನುವ ಸಂಘಟನೆ ಮನೋಜ್ ವಿರುದ್ಧ ಬಂದರು ಠಾಣೆಯಲ್ಲಿ ದೂರು ಕೂಡ ದಾಖಲಿಸಿತ್ತು. ಆದ್ರೆ ಆತ ಯಾವುದಕ್ಕೂ ಕ್ಯಾರೇ ಎನ್ನದೇ ಸುಮ್ಮನಿದ್ದ. ಯಾವಾಗ ಮನೆಯವರೆಲ್ಲಾ ಅನಾರೋಗ್ಯಕ್ಕೆ ತುತ್ತಾದರೋ ಆಗ ಮನೋಜ್ ಪಂಡಿತ್ ಮನಸ್ಸು ಬದಲಾಯಿಸಿ ಹಿಂದು ಸಂಘಟನೆಯವರನ್ನು ಸಂಪರ್ಕಿಸಿದ್ದಾನೆ. ಬೇರೆ ಯಾರಿಗೂ ತಿಳಿಯದಂತೆ ಮಂಗಳೂರಿಗೆ ಆಗಮಿಸಿ ಕೊರಗಜ್ಜನಿಗೆ ಅಡ್ಡ ಬಿದ್ದು ತಪ್ಪೊಪ್ಪಿಕೊಂಡಿದ್ದಾನೆ.