Tag: Information and Broadcasting minister

  • ದೇಶದ ವಿರುದ್ಧ ಸಂಚು ನಡೆಸುವವರ ಮೇಲೆ ಕಠಿಣ ಕ್ರಮ: ಅನುರಾಗ್ ಠಾಕೂರ್

    ದೇಶದ ವಿರುದ್ಧ ಸಂಚು ನಡೆಸುವವರ ಮೇಲೆ ಕಠಿಣ ಕ್ರಮ: ಅನುರಾಗ್ ಠಾಕೂರ್

    ನವದೆಹಲಿ: ದೇಶದ ವಿರುದ್ಧ ಸಂಚು ನಡೆಸುವವರ ಮೇಲೆ ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಎಚ್ಚರಿಕೆ ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ದೇಶಗಳು ಇದನ್ನು ಅರಿತುಕೊಂಡಿರುವುದು ನನಗೆ ಬಹಳ ಸಂತೋಷವಾಗಿದೆ. ಯೂಟ್ಯೂಬ್ ಕೂಡ ಈ ರೀತಿ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಚಾನೆಲ್‍ಗಳನ್ನು ನಿರ್ಬಂಧಿಸಲು ಕ್ರಮ ಕೈಗೊಂಡಿದೆ ಎಂದರು.

    ಇನ್ನೂ ಮುಂದೆಯೂ ಈ ರೀತಿಯ ದೇಶದ್ರೋಹಿ ಚುಟುವಟಿಕೆ ನಡೆದರೆ, ದೇಶದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವುದು, ಸಮಾಜವನ್ನು ವಿಭಜಿಸುವಂತಹ ಯಾವುದೇ ಖಾತೆಗಳಿದ್ದರೂ ಅದನ್ನು ತಡೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ಗುಪ್ತಚರ ಏಜೆನ್ಸಿಗಳ ನಿಕಟ ಪ್ರಯತ್ನದಿಂದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಳೆದ ಡಿಸೆಂಬರ್‍ನಲ್ಲಿ ಭಾರತ ವಿರೋಧಿ ಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ 20 ಯುಟ್ಯೂಬ್ ಚಾನೆಲ್‍ಗಳು ಹಾಗೂ 2 ವೆಬ್‍ಸೈಟ್‍ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿತ್ತು. ಇದನ್ನೂ ಓದಿ: ಬಾಲಕಿಯನ್ನು ಎಳೆದೊಯ್ದು ಮನೆ ಮುಂದೆಯೇ ಅತ್ಯಾಚಾರ ಮಾಡ್ದ