Tag: industry

  • ಬಾಲಿವುಡ್ ತೊರೆದ ದಂಗಲ್ ಬೆಡಗಿ

    ಬಾಲಿವುಡ್ ತೊರೆದ ದಂಗಲ್ ಬೆಡಗಿ

    ಮುಂಬೈ: ಬಾಲಿವುಡ್ ದಂಗಲ್ ಬೆಡಗಿ ಝೈರಾ ವಾಸಿಂ ಚಿತ್ರರಂಗ ತೊರೆಯುವುದಾಗಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಝೈರಾ ಎರಡೇ ಚಿತ್ರದ ಮೂಲಕ ಬಾಲಿವುಡ್‍ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಝೈರಾ ಮಿ. ಪರ್ಫೆಕ್ಟ್ ಎಂದೇ ಖ್ಯಾತರಾಗಿರುವ ನಟ ಅಮೀರ್ ಖಾನ್ ಜೊತೆ ದಂಗಲ್ ಹಾಗೂ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ನಟಿಸಿದ್ದರು. ಈ ಎರಡು ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿತ್ತು. ಈಗ ಝೈರಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬಾಲಿವುಡ್ ತೊರೆಯುವುದಾಗಿ ಪೋಸ್ಟ್ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    5 ವರ್ಷದ ಮೊದಲು ನಾನು ಒಂದು ನಿರ್ಧಾರ ಮಾಡಿದೆ. ಆ ನಿರ್ಧಾರ ನನ್ನ ಜೀವನವನ್ನೇ ಬದಲಾಯಿಸಿದೆ. ನಾನು ಬಾಲಿವುಡ್‍ಗೆ ಹೆಜ್ಜೆ ಇಟ್ಟಾಗ ನನಗೆ ಪಾಪುಲ್ಯಾರಿಟಿಯ ರಸ್ತೆಯನ್ನು ತೆರೆಯಿತು. ನಿಧಾನವಾಗಿ ನಾನು ಯುವ ಜನತೆಗೆ ರೋಲ್ ಮಾಡಲ್ ಆಗಿ ಕಾಣಲಾರಂಭಿಸಿದೆ. ಬಾಲಿವುಡ್‍ಗೆ ಬಂದು 5 ವರ್ಷ ಆಗಿದೆ. ಆದರೆ ನನ್ನ ಕೆಲಸದಲ್ಲಿ ನನಗೆ ಖುಷಿಯಿಲ್ಲ ಎಂದು ಹೇಳಲು ಇಷ್ಟಪಡುತ್ತೇನೆ. ನಾನು ಇಲ್ಲಿ ಫಿಟ್ ಆಗಿದ್ದೇನೆ ಆದ್ರೆ ನಾನು ಇಲ್ಲಿಯವಳಲ್ಲ. ನಟಿ ಆಗುವ ಕಾರಣದಿಂದ ನಾನು ನನ್ನ ಇಸ್ಲಾಂ ಧರ್ಮದಿಂದ ದೂರವಾಗುತ್ತಿದ್ದೇನೆ. ಹಾಗಾಗಿ ನಾನು ಚಿತ್ರರಂಗದಿಂದ ನನ್ನ ಸಂಬಂಧವನ್ನು ಮುರಿಯುತ್ತಿದ್ದೇನೆ. ನಾನು ಯೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

    ಝೈರಾ ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಝೈರಾ ಮಹಿಳಾ ಪೈಲ್ವಾನ್ ಗೀತಾ ಪೋಗಾಟ್‍ನ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರ 2016ರಲ್ಲಿ ಬಿಡುಗಡೆ ಆಗಿತ್ತು.

     

    View this post on Instagram

     

    A post shared by Zaira Wasim (@zairawasim_) on

  • ಜಿಂದಾಲ್ ದಂಗಲ್- ಕಿಕ್ ಬ್ಯಾಕ್ ಆರೋಪ ತಳ್ಳಿ ಹಾಕಿದ ಸಚಿವ ತುಕಾರಾಂ

    ಜಿಂದಾಲ್ ದಂಗಲ್- ಕಿಕ್ ಬ್ಯಾಕ್ ಆರೋಪ ತಳ್ಳಿ ಹಾಕಿದ ಸಚಿವ ತುಕಾರಾಂ

    ಕೊಪ್ಪಳ: ಜಿಂದಾಲ್ ಕಾರ್ಖಾನೆಗೆ ಜಮೀನು ನೀಡುವ ವಿಚಾರದಲ್ಲಿ ಸರ್ಕಾರ ಕಿಕ್ ಬ್ಯಾಕ್ ಪಡೆದಿದೆ ಎಂಬ ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಆರೋಪ ಸುಳ್ಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ ಹೇಳಿದ್ದಾರೆ.

    ಜಿಲ್ಲೆಯ ಕುಷ್ಟಗಿಯಲ್ಲಿ ಮಾತನಾಡಿದ ತುಕಾರಾಂ, ನಮ್ಮ ಸರ್ಕಾರ ಕಿಕ್ ಬ್ಯಾಕ್ ಪಡೆಯುವಂತಹ ಯಾವುದೇ ಕೆಲಸವನ್ನು ಮಾಡಿಲ್ಲ. ಯಾರ ಬಾಯಿಯಲ್ಲಿ ಏನ್ ಮಾಡಿರುತ್ತಾರೋ ಅದನ್ನು ನುಡಿಸುತ್ತೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ತಿರುಗೇಟು ನೀಡಿದರು.

    ಜಿಂದಾಲ್‍ಗೆ ಏನು ಭೂಮಿ ಕೊಡಲಾಗಿದೆ ಅದು ಲೀಗಲ್ ಆಗಿದೆ. ನಾವೆಲ್ಲ ದೇಶ ಕಟ್ಟಬೇಕಾಗಿದ್ದು, ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕೊಡಬೇಕಾಗಿದೆ. ಗ್ಲೋಬಲ್ ಇನ್‍ವೆಸ್ಟ್ಮೆಂಟ್ ಮಾಡುವ ಮೂಲಕ ಇಂಡಸ್ಟ್ರಿಗಳನ್ನು ಬೆಳೆಸುವುದು ಸರ್ಕಾರದ ಉದ್ದೇಶವಾಗಿದ್ದು, ಕೈಗಾರಿಕೆಗಳು ದೇಶದ ಆಸ್ತಿ, ಅವುಗಳಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತೆ ಎಂದರು.

    ಜಿಂದಾಲ್ ಕಂಪನಿಗೆ 2016ರಲ್ಲಿಯೇ ಭೂಮಿ ನೀಡಲು ಲೀಸ್ ಕಮಿಟಿಯಲ್ಲಿ ನಿರ್ಣಯ ಮಾಡಿ ನೀಡಲಾಗಿತ್ತು. 2006ರಲ್ಲಿ 5 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆ ಇತ್ತು, 2010 ರಲ್ಲಿ 10 ಮಿಲಿಯನ್ ಟನ್, 2011ರಲ್ಲಿ 15 ಮಿಲಿಯನ್ ಟನ್ ಇತ್ತು, ಸದ್ಯ 20 ಮಿಲಿಯನ್ ಟನ್ ಅಗತ್ಯ ಇದೆ. ಸ್ಟೀಲ್ ಉತ್ಪಾದನೆಯಿಂದ ಇತರೆ ಉತ್ಪನ್ನಗಳು ಉತ್ಪತ್ತಿಯಾಗುತ್ತಿವೆ. ಸಿಮೆಂಟ್, ಪೇಂಟ್, ಪವರ್ ಹಾಗೂ ಡಾಂಬರ್ ಉತ್ಪಾದನೆ ಆಗುತ್ತಿದ್ದು ಅವುಗಳ ಪ್ಲಾಂಟ್‍ಗಳನ್ನು ನಿರ್ಮಿಸಲಾಗಿದೆ. ಇದೊಂದು ನೈಸರ್ಗಿಕ ಸಂಪನ್ಮೂಲವಾಗಿದ್ದು, ಬಳಕೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಮುಸುನಾಯಕನ ಹಳ್ಳಿ ಹಾಗೂ ಯರಬನಳ್ಳಿ ಗ್ರಾಮಗಳಲ್ಲಿ ಪ್ಲಾಂಟ್ ಆಗಿದೆ. ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲಾಗುತ್ತಿದ್ದು. ಸರೋಜಿನಿ ಮಹಿಷಿ ವರದಿ ಪ್ರಕಾರ ಪಾಲೋ ಮಾಡಲಾಗುತ್ತಿದೆ ಎಂದರು.

    ಇನ್ನು ಬ್ರಾಹ್ಮಿಣಿ ಮತ್ತು ಮಿತ್ತಲ್‍ಗೆ ಬಿಜೆಪಿ ಸರ್ಕಾರದಲ್ಲಿ ಭೂಮಿ ಕೊಡಲಾಗಿದ್ದು, 6100 ಎಕರೆ ಉತ್ತಮ್ ಗಾಲ್ವಾ ಕೊಟ್ಟು ಇಂಡಸ್ಟ್ರಿ ಯಾರಿಗೂ ಸಿಗದಂಗೆ ಮಾಡಿದ್ದಾರೆ ಅದು ಸಿಬಿಐಗೆ ಸಿಲುಕಿದೆ. ಇದರ ಬಗ್ಗೆ ಬಿಜೆಪಿ ಅವರು ಯಾರು ಮಾತನಾಡುವುದಿಲ್ಲ. ಬಿಜೆಪಿಯವರು ಯಾವುದೇ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಮಾಡುತ್ತಿದೆ ಅದಕ್ಕಾಗಿ ಹತಾಶರಾಗಿದ್ದಾರೆ ಎಂದು ಟೀಕಿಸಿದರು.

    ಈಗಾಗಲೇ ನಮ್ಮ ಸರ್ಕಾರದಲ್ಲೇ ಕೆಲವರು ಇದಕ್ಕೆ ವಿರೋಧ ಹೇಳಿಕೆ ನೀಡಿದ್ದರು. ಅವರಿಗೂ ಮನವರಿಕೆ ಮಾಡಲಾಗಿದ್ದು, ಇದು ದೇಶದ ಯುವಕರ ಹಾಗೂ ರೈತರ ಅಭಿವೃದ್ಧಿಗಾಗಿ ಮಾಡುತ್ತಿರುವ ಕೆಲಸ ಎಂದು ಈ ತುಕಾರಾಂ ವಿಶ್ವಾಸ ವ್ಯಕ್ತಪಡಿಸಿದರು.

  • ತಿಳಿದು ತಿಳಿದು ನಾಟಕ ಮಾಡೋದನ್ನು ಬಿಡಿ –  ಶೆಟ್ಟರ್‌ಗೆ  ಎಂಬಿಪಿ ಟಾಂಗ್

    ತಿಳಿದು ತಿಳಿದು ನಾಟಕ ಮಾಡೋದನ್ನು ಬಿಡಿ – ಶೆಟ್ಟರ್‌ಗೆ ಎಂಬಿಪಿ ಟಾಂಗ್

    ವಿಜಯಪುರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ನಾಟಕ ಮಾಡುವುದನ್ನು ಬಿಡಬೇಕು ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಟಾಂಗ್ ನೀಡಿದ್ದಾರೆ.

    ಜಿಂದಾಲ್ ಜಮೀನು ಮಾರಾಟ ಪ್ರಕರಣದಲ್ಲಿ ಮೈತ್ರಿ ಸರ್ಕಾರವನ್ನು ಜಗದೀಶ್ ಶೆಟ್ಟರ್ ಡೀಲ್ ಸರ್ಕಾರ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್ ಅವರು ತಿಳಿದು ತಿಳಿದು ನಾಟಕ ಮಾಡುವುದನ್ನು ಶೆಟ್ಟರ್ ಬಿಡಬೇಕು ಎಂದು ಹೇಳಿದ್ದಾರೆ.

    ಒಂದು ಎಕರೆಗೆ 1.20 ಲಕ್ಷ ಕಡಿಮೆ ನೀಡುವ ಪ್ರಶ್ನೆ ಬರುವುದಿಲ್ಲ. ಹಿಂದಿನ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ಜಿಂದಾಲ್ ಅವರು ಕಟ್ಟಿದ್ದಾರೆ. ಜಗದೀಶ್ ಶೆಟ್ಟರ್ ಈ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು. ತಿಳಿದು ತಿಳಿದು ನಾಟಕ ಮಾಡಬಾರದು. ನಮ್ಮ ರಾಜ್ಯದ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ನಾವು ಈ ನಿರ್ಧಾರ ಮಾಡಿದ್ದೇವೆ. ಈ ವಿಚಾರದಲ್ಲಿ ಬೇಜವಾಬ್ದಾರಿಯುತವಾಗಿ ಮಾತನಾಡಬಾರದು ಎಂದು ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡರು.

    ಪೊಲೀಸರ ವೇತನವನ್ನು ಶೇ.30 ಏರಿಕೆ ಮಾಡುವಂತೆ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸ್ಸು ವರದಿ ಜಾರಿ ವಿಚಾರದ ಬಗ್ಗೆ ಕೇಳಿದಾಗ, ಜೂನ್ 10 ಸಂಜೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆಯನ್ನು ನಿಗದಿ ಮಾಡಲಾಗಿದೆ. ಔರಾದ್ಕರ್ ವರದಿ ಬಗ್ಗೆ ಸಮಗ್ರ ಚರ್ಚೆ ಮಾಡಲಾಗುವುದು.

    ಇದೇ ಸಭೆಯಲ್ಲಿ ಪೊಲೀಸ್ ಇಲಾಖೆಯ ರಜೆ ಕಡಿತ ಆಗಿರುವ ಬಗ್ಗೆ ಚರ್ಚೆ ಮಾಡಲಾಗುವುದು ಯಾವ ಪೊಲೀಸರು ಆತಂಕ ಪಡಬಾರದು. ಪೊಲೀಸ್ ಇಲಾಖೆಯ ಬಗ್ಗೆ ಹೆಮ್ಮೆ ಪಡುವ ಗೃಹ ಸಚಿವ ನಾನು. ಪೊಲೀಸರು ಬಹಳ ಕಷ್ಟದಿಂದ ದುಡಿಯುತ್ತಾರೆ. ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪೊಲೀಸರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

  • ಕೆರೆಗಳಿಗೆ ಪುನಶ್ಚೇತನ, ಇಟ್ಟಿಗೆ ಕೈಗಾರಿಕೆಗೂ ಬಂತು ಮರುಜೀವ- ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದ ಜಿಲ್ಲಾಡಳಿತ

    ಕೆರೆಗಳಿಗೆ ಪುನಶ್ಚೇತನ, ಇಟ್ಟಿಗೆ ಕೈಗಾರಿಕೆಗೂ ಬಂತು ಮರುಜೀವ- ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದ ಜಿಲ್ಲಾಡಳಿತ

    ಕೋಲಾರ: ಸರಿಯಾದ ನಿರ್ವಹಣೆ ಇಲ್ಲದೆ ತಮ್ಮ ಸ್ವರೂಪವನ್ನೇ ಕಳೆದುಕೊಂಡಿದ್ದ ಜಿಲ್ಲೆಯ ಜೀವ ಜಲದ ಮೂಲ ಕೆರೆಗಳಿಗೆ ಅದೃಷ್ಟ ಕುಲಾಯಿಸಿದ್ದು, ಕೆರೆಗಳ ಜೀವ ತುಂಬಲು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್ ಮಾಡಿದೆ. ಇಟ್ಟಿಗೆ ಕೈಗಾರಿಕೆಗೂ ಜೀವ ನೀಡಿ ಕೆರೆಗಳ ಪುನಶ್ಚೇತನ ಮಾಡುವ ಹೊಸ ಯೋಜನೆ ಕೈಗೆತ್ತಿಕೊಂಡಿದೆ.

    ಕಳೆದ ಹತ್ತಾರು ವರ್ಷಗಳಿಂದ ಕೆರೆಯಲ್ಲಿ ನೀರಿಲ್ಲ. ಜಾಲಿ ಮರಗಳು ಬೆಳೆದು ಸ್ವರೂಪವನ್ನೇ ಕಳೆದುಕೊಂಡಿತ್ತು. ಇದನ್ನ ಸರಿಪಡಿಸಲು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 600ಕ್ಕೂ ಹೆಚ್ಚು ಇಟ್ಟಿಗೆ ಕಾರ್ಖಾನೆಗಳಿವೆ. ಆದ್ರೆ ಕೆರೆಯಲ್ಲಿ ಮಣ್ಣು ತೆಗೆಯಲು ಅನುಮತಿ ಇಲ್ಲದೆ ಕಾರ್ಖಾನೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಮಾಡಿದ ಹೊಸ ಕಾನೂನಿನಡಿ, ಇಟ್ಟಿಗೆ ಕಾರ್ಖಾನೆ ಮಾಲೀಕರು ಅನುಮತಿ ಪಡೆದು ಕೆರೆಯಲ್ಲಿ ಮಣ್ಣು ತೆಗೆಯಲು ಮುಂದಾಗಿದ್ದಾರೆ. 1 ಮೆಟ್ರಿಕ್ ಟನ್ ಮಣ್ಣಿಗೆ 60 ರೂಪಾಯಿಯಂತೆ ಪಾವತಿ ಮಾಡಿ ಮಣ್ಣು ತೆಗೆದುಕೊಳ್ಳಬಹುದಾಗಿದೆ. ಇದರಿಂದ ಜಿಲ್ಲೆಯ ಕೆರೆಗಳಿಗೆ ಮರುಜೀವ ಬಂದಂತಾಗಿದ್ದು, ಸರ್ಕಾರಕ್ಕೂ ಇಂತಿಷ್ಟು ಆದಾಯ ಹಾಗೂ ಮುಚ್ಚುವ ಪರಿಸ್ಥಿತಿಯಲ್ಲಿದ್ದ ಇಟ್ಟಿಗೆ ಕಾರ್ಖಾನೆಗಳಿಗೂ ಹೊಸ ಜೀವ ಬಂದಂತಾಗಿದೆ.


    696 ಎಕರೆ ವಿಸ್ತೀರ್ಣ ಹೊಂದಿರುವ ಕೋಲಾರಮ್ಮ ಕೆರೆಯ ಹೂಳು ತೆಗೆದು, ಕೆ.ಸಿ.ವ್ಯಾಲಿ ಯೋಜನೆ ನೀರು ತುಂಬಿಸುವುದು ಜಿಲ್ಲಾಡಳಿತದ ಮಾಸ್ಟರ್ ಪ್ಲಾನ್ ಆಗಿದೆ. ಜೊತೆಗೆ ಜಿಲ್ಲೆಯ ಕೆರೆಗಳನ್ನ ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಮಾತ್ರವಲ್ಲದೆ ಕೋಲಾರ ನಗರಕ್ಕೆ ಹೊಂದಿಕೊಂಡಂತಿರುವ ಕೆರೆಯನ್ನು ಒಳ್ಳೆಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸಣ್ಣ ನೀರಾವರಿ ಇಲಾಖೆ 12 ಕೋಟಿ ರೂಪಾಯಿ ವೆಚ್ಚದ ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ಇಟ್ಟಿಗೆ ಕಾರ್ಖಾನೆ ಮಾಲೀಕ ರಾಜಪ್ಪ ಹೇಳಿದ್ದಾರೆ.

    ಒಟ್ಟಿನಲ್ಲಿ ಜಿಲ್ಲಾಡಳಿತದ ಈ ಯೋಜನೆಯಿಂದ ಸಾರ್ವಜನಿಕರಿಗೂ ಫುಲ್ ಖುಷಿಯಾಗಿದೆ. ಅಕ್ರಮವಾಗಿ ಕೆರೆಗಳಲ್ಲಿ ಮಣ್ಣು ತೆಗೆದು ಸೀಜ್ ಆಗುತ್ತಿದ್ದ ಲಾರಿಗಳು, ಇಟ್ಟಿಗೆ ಕಾರ್ಖಾನೆ ಮಾಲೀಕರಿಗೂ ದೊಡ್ಡ ರಿಲೀಫ್ ಸಿಕ್ಕಿದೆ. ಕೆರೆಗಳ ಹೂಳೆತ್ತಲು ಸರ್ಕಾರದ ನೆರವಿಗಾಗಿ ಕಾದು ಕೂರುವ ಕೆರೆಗೆ ಮರು ಜೀವ ಸಿಕ್ಕಂತಾಗಿರುವುದು ಮತ್ತೊಂದು ಸಂತೋಷದ ವಿಷಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಮ್ನೆ ನಿಂತ್ಕೊಳ್ಳಿ, ನಿಮ್ಮ ಸರದಿ ಬಂದಾಗ ಮಾತಾಡಿ- ರೈತ ಮುಖಂಡನಿಗೆ ಶಾಸಕ ಆವಾಜ್!

    ಸುಮ್ನೆ ನಿಂತ್ಕೊಳ್ಳಿ, ನಿಮ್ಮ ಸರದಿ ಬಂದಾಗ ಮಾತಾಡಿ- ರೈತ ಮುಖಂಡನಿಗೆ ಶಾಸಕ ಆವಾಜ್!

    ಮಂಡ್ಯ: ಸುಮ್ನೆ ನಿಂತುಕೊಳ್ಳಿ.. ನಿಮ್ಮ ಸರದಿ ಬಂದಾಗ ಮಾತಾನಾಡಿ ಅಂತ ಶಾಸಕರೊಬ್ಬರು ರೈತ ಮುಖಂಡನಿಗೆ ಆವಾಜ್ ಹಾಕಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸುವ ಸಂಬಂಧ ಎಂಎಲ್‍ಎ ಮತ್ತು ರೈತ ಮುಖಂಡನ ಜೊತೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ರೈತ ಮುಖಂಡ ರಮೇಶ್ ಅವರು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಇದರಿಂದ ಗರಂ ಆದ ಶಾಸಕರು, ನಾನೀಗ ಬೇರೆಯವರ ಸಮಸ್ಯೆ ಕೇಳುತ್ತಿದ್ದೇನೆ. ನಿಂತುಕೊಳ್ಳಿ ಸುಮ್ನೆ. ಏನು ನಡವಳಿಕೆ ನಿಮ್ಮದು… ಏಯ್ ನಿಲ್ಲಿಸ್ರಿ ನೀವು… ನಿಲ್ಸಪ್ಪ ಆಯ್ತು. ನೆಕ್ಸ್ಟ್ ನಿಮ್ಮ ಸರದಿ ಬಂದಾಗ ಮಾತನಾಡಿ ಎಂದು ಜೋರು ಧ್ವನಿಯಲ್ಲಿ ಗದರಿದ್ದಾರೆ.

    ರೈತ ಮುಖಂಡನ ಪ್ರಶ್ನೆಯೇನು?:
    ಸೋಮವಾರ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಜನ ಸಂಪರ್ಕ ಸಭೆ ನಡೆಸುತ್ತಿದ್ದರು. ಈ ವೇಳೆ ರೈತ ಮುಖಂಡ ರಮೇಶ್ ಅವರು ಶಾಸಕರನ್ನು ಕುರಿತು, ಪಾಂಡವಪುರ ವ್ಯಾಪ್ತಿಯಲ್ಲಿರುವ ಪಿಎಸ್‍ಎಸ್‍ಕೆ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಂಬಿಕೊಂಡು ರೈತರು ಕಬ್ಬು ಬೆಳೆಯುತ್ತಿದ್ದಾರೆ. ಆದರೆ ಕಾರ್ಖಾನೆ ನಿಂತು ಹೋಗಿದ್ದು ಅದರ ಆರಂಭಕ್ಕೆ ಶಾಸಕರಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

    ಅಲ್ಲದೇ ಕಾರ್ಖಾನೆ ಹಣ ನಷ್ಟ ಮಾಡಿದವರ ಆಸ್ತಿ ಮಾರಾಟ ಮಾಡಿ ವಸೂಲಿ ಮಾಡಿ. ನಿಮಗೆ ತಾಲೂಕಲ್ಲಿ ಜವಾಬ್ದಾರಿ ಕೊಟ್ಟಿದ್ದೇವೆ. ಕಾರ್ಖಾನೆ ಉಳಿಸಿ ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ರೈತನ ಮಾತಿಗೆ ಮಣಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಕಾರ್ಖಾನೆ ಆರಂಭದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೈಗಾರಿಕೆಗಾಗಿ ಭೂಮಿ ಪಡೆದು ಬಹು ಅಂತಸ್ತಿನ ಶಾಲೆ ನಿರ್ಮಾಣ- ಸಚಿವ ಎಚ್‍ಡಿ ರೇವಣ್ಣ ಆಪ್ತನಿಂದ ದೋಖಾ

    ಕೈಗಾರಿಕೆಗಾಗಿ ಭೂಮಿ ಪಡೆದು ಬಹು ಅಂತಸ್ತಿನ ಶಾಲೆ ನಿರ್ಮಾಣ- ಸಚಿವ ಎಚ್‍ಡಿ ರೇವಣ್ಣ ಆಪ್ತನಿಂದ ದೋಖಾ

    ಬೆಂಗಳೂರು: ಸಚಿವ ಎಚ್ ಡಿ ರೇವಣ್ಣ ಆಪ್ತರೊಬ್ಬರು ಕೆಐಎಡಿಬಿ ಮೂಲಕ ಕೈಗಾರಿಕೆಗಾಗಿ ಭೂಮಿ ಪಡೆದು ಬಹು ಅಂತಸ್ತಿನ ಕಟ್ಟಡವನ್ನು ಕಟ್ಟಿರೋ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

    ಹೌದು. ಸಚಿವರ ಆಪ್ತ ಮಂಜೇ ಗೌಡ ಎಂಬವರು ಸುಮಾರು ಎರಡು ಎಕರೆಯಷ್ಟು ಜಮೀನನ್ನ ಕೈಗಾರಿಕೆಗೆ ಅಂತ ಪಡೆದು ಬೃಹತ್ ಸ್ಕೂಲ್ ಕಟ್ಟಿ ಇದೀಗ ಪೇಚಿಗೆ ಸಿಲುಕಿದ್ದಾರೆ.

    ಏನಿದು ಪ್ರಕರಣ?:
    ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ವಿದ್ಯಾಸೌಧ ಪಬ್ಲಿಕ್ ಸ್ಕೂಲ್ ಜಾಗದಲ್ಲಿ ಕಾಂಕ್ರೀಕ್ ಪ್ರಾಡಕ್ಟ್‍ನ ಕೈಗಾರಿಕೆ ನಿರ್ಮಾಣವಾಗ ಬೇಕಿತ್ತು. ಯಾಕಂದ್ರೆ 1992 ರಲ್ಲಿ ಕೆಐಎಡಿಬಿ ಕೈಗಾರಿಕೆ ನಿರ್ಮಾಣಕ್ಕೆ ಅಂತ ರವಿಶಂಕರ್ ಗೌಡ ಅವರಿಗೆ ಜಮೀನು ಮಂಜೂರು ಮಾಡಿತ್ತು. ಆದ್ರೆ ರವಿಶಂಕರ್ ಗೌಡ ಯಾವುದೇ ಕೈಗಾರಿಕೆ ನಿರ್ಮಿಸದೇ 2004 ರಲ್ಲಿ ಇದೇ ಜಮೀನನ್ನ ರೇವಣ್ಣ ಆಪ್ತ ಮಂಜೇಗೌಡರಿಗೆ ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ.

    ಮಂಜೇಗೌಡ ಕೂಡ ಕೈಗಾರಿಗೆ ನಡೆಸುವ ಬದಲು ಸ್ಕೂಲ್ ಕಟ್ಟಿದ್ರು. ಸುತ್ತಮುತ್ತ ಕೈಗಾರಿಕೆ ಪ್ರದೇಶವಾಗಿರೋದ್ರಿಂದ ಮಕ್ಕಳ ಜೀವಕ್ಕೆ ಅಪಾಯವಿದೆ. ಮಕ್ಕಳ ಹಕ್ಕನ್ನ ರಕ್ಷಿಸಿ ಎಂದು ಮಕ್ಕಳ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ದೂರು ನೀಡಿದ್ರು. ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಸ್ಥಳ ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ. ಕೈಗಾರಿಕೆ ಮಾಡಬೇಕಾದ ಜಾಗದಲ್ಲಿ ಶಾಲೆ ಹೇಗೆ ಕಟ್ಟಿದ್ದೀರಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ.

    1,300 ಮಕ್ಕಳ ಜೀವದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಕ್ಕಳ ಹಕ್ಕು ಆಯೋಗ, ಇತ್ತ ಬಿಬಿಎಂಪಿ, ಬಿಡಿಎ, ಶಿಕ್ಷಣ ಇಲಾಖೆಗೆ ನೊಟೀಸ್ ನೀಡಿದೆ. ಈ ಶಾಲೆಯ ಮಾಲೀಕ ಡಾ. ಮಂಜೇಗೌಡ ಮೂಲತಃ ಹಾಸನದವರಾಗಿದ್ದಾರೆ. ಪಿಡಬ್ಲುಡಿ ಎಂಜಿನಿಯರ್ ಆಗಿರುವ ಇವರು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಲಮಂಡಳಿ ಬೋರ್ಡ್ ಮೆಂಬರ್ ಕೂಡ ಆಗಿದ್ರು. ಇದೆಲ್ಲಾ ಪ್ರಭಾವ ಬಳಸಿಯೇ ಇಷ್ಟೆಲ್ಲಾ ಅಕ್ರಮ ನಡೆಸಿದ್ದಾರೆಂದು ಆರ್‍ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಆರೋಪ ಮಾಡಿದ್ದಾರೆ.

  • ಕಾರ್ಖಾನೆಯಲ್ಲಿ ಅಗ್ನಿ ಅವಘಡ- ಲಕ್ಷಾಂತರ ರೂ. ಮೌಲ್ಯದ ಚಾದರ್, ಬೆಡ್ ಶೀಟ್ ಭಸ್ಮ

    ಕಾರ್ಖಾನೆಯಲ್ಲಿ ಅಗ್ನಿ ಅವಘಡ- ಲಕ್ಷಾಂತರ ರೂ. ಮೌಲ್ಯದ ಚಾದರ್, ಬೆಡ್ ಶೀಟ್ ಭಸ್ಮ

    ಬಾಗಲಕೋಟೆ: ಚಾದರ್ ಹಾಗೂ ಬೆಡ್‍ಶೀಟ್ ತಯಾರಿಕಾ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್‍ ನಿಂದ ಅಗ್ನಿ ಅವಘಡ ಸಂಭವಿಸಿರುವ ಘಟನೆ ಬಾಗಲಕೋಟೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ತಡರಾತ್ರಿ ನಡೆದಿದೆ.

    ನೆಹರ್ ದಿನ್ ಹಾಜಿ ಅಲೀಮುದ್ದಿನ್ ಎಂಬವರಿಗೆ ಸೇರಿದ ಕಾರ್ಖಾನೆ ಇದಾಗಿದೆ. ಹೂಲಿಮನಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಚಾದರ್, ಬೆಡ್ ಶೀಟ್ ಭಸ್ಮವಾಗಿದೆ. ಸ್ಥಳಕ್ಕೆ ಕೆರೂರು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ.

    ಕೆರೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ನಿಮಗೆ ತೋಚಿದಂತೆ ಬರೆದುಕೊಳ್ಳಿ: ದೇಶಪಾಂಡೆ ಗರಂ

    ನಿಮಗೆ ತೋಚಿದಂತೆ ಬರೆದುಕೊಳ್ಳಿ: ದೇಶಪಾಂಡೆ ಗರಂ

    ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುವ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಬೃಹತ್ ಕೈಗಾರಿಕಾ ಸಚಿವ ಆರ್. ವಿ ದೇಶಪಾಂಡೆ ಗರಂ ಆಗಿ ನಿಮಗೆ ತೋಚಿದಂತೆ ಬರೆದುಕೊಳ್ಳಿ ಎಂದು ಉತ್ತರಿಸಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಾನು ಈಗಾಗಲೇ ಪ್ರಶ್ನೆ ಕೇಳಿದ್ದೇನೆ. ಪದೇ ಪದೇ ಈ ವಿಚಾರವನ್ನು ಹೈಲೈಟ್ ಮಾಡುವುದು ಸರಿಯಲ್ಲ. ನಾನೂ ಹಿಂದೆ ಪಕ್ಷ ಬಿಟ್ಟು ಬಂದವನೇ. ಕಾಲವೇ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದರು.

    ಮೋದಿಯವರು ಈಗ ನನಗೆ ಪರಿಚಯ ಆಗಿರಬಹುದು. ಆದರೆ ಸಿದ್ದರಾಮಯ್ಯ 30 ವರ್ಷದಿಂದ ಪರಿಚಯ. ಹೀಗಾಗಿ ನೀವು ನಿಮಗೆ ಹೇಗೆ ಬೇಕೋ ಹಾಗೇ ಬರೆದುಕೊಳ್ಳಿ ಸಿಡಿಮಿಡಿಗೊಂಡು ಉತ್ತರಿಸಿದರು.

    ಸರಬರಾಜುದಾರರ ಅಭಿವೃದ್ಧಿ ಹಾಗು ಹೂಡಿಕೆದಾರರ ಶೃಂಗಸಭೆ ಯಶಸ್ವಿಯಾಗಿದ್ದು, 20,499 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳು ಬಂದಿವೆ. 86,750 ಉದ್ಯೋಗ ಸೃಷ್ಟಿಯಾಗಲಿದೆ. ಕೆಐಎಡಿಬಿ ಯಲ್ಲಿ 11 ಸೇವೆಗಳನ್ನು ಸಕಾಲ ಅಡಿ ತರಲಾಗಿದ್ದು, ಉದ್ಯಮಕ್ಕೆ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಇನ್ನೂ ಚೆಕ್ ಪೋಸ್ಟ್ ಅಸ್ತಿತ್ವದಲ್ಲಿದ್ದು ಅಲ್ಲಿ ವಸೂಲಿ ನಡೆಯುತ್ತಿದೆ ಎನ್ನುವ ಆರೋಪಕ್ಕೆ ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್  ಯಾವುದೂ ಇಲ್ಲ ಎಂದು ದೇಶಪಾಂಡೆ ಸ್ಪಷ್ಟನೆ ನೀಡಿದರು. (ಚಿನ್ನದ್ದೋ, ಬ್ರಿಟಾನಿಯಾ ಬಿಸ್ಕಟ್ಟೋ ಯಾವುದರ ಬಗ್ಗೆ ನನಗೆ ಗೊತ್ತಿಲ್ಲ: ಆರ್.ವಿ.ದೇಶಪಾಂಡೆ)

    ಜಿಎಸ್ ಟಿ ಯಿಂದ ರಾಜ್ಯದ ಕೈಗಾರಿಕಾಗಳಿಗೆ ತೊಂದರೆಯಾಗಿದೆ ಅದರಲ್ಲೂ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಿದೆ ಎಂದರು.

    ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸೇರ್ಪಡೆಯಾಗಲಿರುವ ಕಾಂಗ್ರೆಸ್ ಶಾಸಕರ ಪಟ್ಟಿಯೊಂದು ಹರಿದಾಡುತ್ತಿದ್ದು, ಈ ಪಟ್ಟಿಯಲ್ಲಿ ದೇಶಪಾಂಡೆ ಹೆಸರಿದೆ. ಹೀಗಾಗಿ ಈ ಹಿಂದೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ದೇಶಪಾಂಡೆ ಅವರು ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿರುವ ಸಿದ್ಧಾಂತ ಮತ್ತು ಜನಪರ ಯೋಜನೆಗಳು ಬೇರೆ ಯಾವ ಪಕ್ಷದಲ್ಲಿ ಇಲ್ಲ ಎಂದು ಉತ್ತರಿಸಿ ಸ್ಪಷ್ಟನೆ ನೀಡಿದರು.

  • ನಗರದ ದುಬಾಸಿಪಾಳ್ಯ ಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮ

    ನಗರದ ದುಬಾಸಿಪಾಳ್ಯ ಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮ

    ಬೆಂಗಳೂರು: ನಗರದ ಉಳ್ಳಾಲ ವಾರ್ಡ್‍ನ ದುಬಾಸಿಪಾಳ್ಯ ಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮವಾಗಿದೆ.

    ಕೆರೆಗೆ ಸುತ್ತಲಿನ ಕಾರ್ಖಾನೆಗಳಿಂದ ವಿಷ ತ್ಯಾಜ್ಯ ರಾಸಾಯನಿಕಗಳನ್ನು ಸೇರಿಸಲಾಗುತ್ತಿದೆ. ಹೀಗಾಗಿ ಕೆರೆಯಲ್ಲಿ ಕಳೆದ 15 ದಿನಗಳಿಂದ ಮೀನುಗಳು ಇತರೆ ಜಲಚರಗಳ ಸಾವಿಗೆ ಕಾರಣವಾಗಿದೆ. ಕೆರೆಯಲ್ಲಿ ನೀರಿನಿಂದ ದುರ್ಗಂಧ ಬರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.

    ಈ ಬಗ್ಗೆ ಜನಪ್ರತಿನಿಧಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕೆರೆ ಒಂದು ಕಾಲದಲ್ಲಿ ಶುದ್ಧವಾಗಿದ್ದು ಕೆರೆ ನೀರನ್ನ ಕುಡಿಯಲು ಬಳಸಲಾಗುತಿತ್ತು. ಅಭಿವೃದ್ಧಿ ಹೆಸರಲ್ಲಿ ಕೆರೆ ಸುತ್ತಮುತ್ತ ಕಾರ್ಖಾನೆಗಳು ಯಥೇಚ್ಚವಾಗಿ ತಲೆ ಎತ್ತಿ ಕೆರೆಯನ್ನ ಈ ದುಸ್ಥಿತಿಗೆ ತಂದಿದೆ ಎಂದು ಸ್ಥಳೀಯರು ನೋವನ್ನು ವ್ಯಕ್ತಪಡಿಸುತ್ತಾರೆ.

  • ನಿಮ್ಮನ್ನು ಜೈಲಿಗೆ ಕಳುಹಿಸಿದ್ರೆ ಹೇಗೆ? ಎನ್‍ಜಿಟಿ ಮುಂದೆ ಮಂಡಿಯೂರಿದ ಬಿಬಿಎಂಪಿ

    ನಿಮ್ಮನ್ನು ಜೈಲಿಗೆ ಕಳುಹಿಸಿದ್ರೆ ಹೇಗೆ? ಎನ್‍ಜಿಟಿ ಮುಂದೆ ಮಂಡಿಯೂರಿದ ಬಿಬಿಎಂಪಿ

    – ಬೆಳ್ಳಂದೂರು ಕೆರೆ ಸುರಕ್ಷತೆಗೆ ಖಡಕ್ ಸೂಚನೆ

    ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿದ್ದ ಬೆಳ್ಳಂದೂರು ಕೆರೆ ಸಮಸ್ಯೆ ಸಂಬಂಧ ಬಿಬಿಎಂಪಿ ಮತ್ತು ಬಿಡಿಎಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಚಳಿಜ್ವರ ಬಿಡಿಸಿದೆ.

    ಬೆಳ್ಳಂದೂರು ಕೆರೆಯ ಸುತ್ತಲಿನ ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳನ್ನ ತಕ್ಷಣವೇ ಮುಚ್ಚಿ ಅಂತ ಟ್ರಿಬ್ಯೂನಲ್ ಮಧ್ಯಂತರ ಆದೇಶ ನೀಡಿದೆ. ಕೆರೆಗೆ ಬೆಂಕಿಬಿದ್ದ ಪ್ರಕರಣ ಸಂಬಂಧ ಇವತ್ತು ಹಾಜರಾದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮತ್ತು ಅಧಿಕಾರಿಗಳಿಗೆ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ತರಾಟೆಗೆ ತೆಗೆದುಕೊಂಡರು.

    ನ್ಯಾಯಪೀಠದ ಸುತ್ತೋಲೆ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದು ಹೇಳ್ತೀರಾ? ನ್ಯಾಯಾಂಗಕ್ಕೆ ಬೆಲೆ ಕೊಡದ ನಿಮ್ಮನ್ನ ನ್ಯಾಯಾಂಗ ನಿಂದನೆಯಡಿ ಜೈಲಿಗೆ ಕಳುಹಿಸಬಾರದೇಕೆ ಅಂತಾ ಪ್ರಶ್ನಿಸಿದ್ರು. ಜಡ್ಜ್ ಮಾತಿಗೆ ದಂಗಾದ ಅಧಿಕಾರಿಗಳು ಕ್ಷಮೆಯಾಚಿಸಿದ್ರು.

    ನಿನ್ನೆಯಷ್ಟೇ ಖಾಸಗಿ ಮಾಧ್ಯಮದಲ್ಲಿ ಬೆಳಂದೂರು ಕೆರೆಯ ಪರಿಸ್ಥಿತಿ ನೋಡಿದ್ದೇವೆ. 3 ಸಾವಿರಕ್ಕೂ ಅಧಿಕ ಕೆರೆಗಳಿಂದ ತಂಪಾಗಿದ್ದ ಬೆಂಗಳೂರು ನಗರ ಈಗ ನಿಮ್ಮಂತವರ ಬೇಜವಾಬ್ದಾರಿಯಿಂದ ಏರ್ ಕಂಡಿಷನರ್ ಬಳಸುವಂತಾಗಿದೆ ಅಂತ ಕಳವಳ ವ್ಯಕ್ತಪಡಿಸಿದ್ರು.

    ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ ಒಂದು ತಿಂಗಳ ಒಳಗೆ ಸ್ವಚ್ಛ ಮಾಡಬೇಕು ಅಂತಾ ಎಚ್ಚರಿಕೆ ನೀಡಿ ಮೇ 18ಕ್ಕೆ ವಿಚಾರಣೆ ಮುಂದೂಡಿದ್ರು.

    ಎನ್‍ಜಿಟಿ ಮಧ್ಯಂತರ ಆದೇಶದಲ್ಲೇನಿದೆ..?
    * ಬಿಬಿಎಂಪಿ, ಬಿಡಿಎ, ಬಿಡಬ್ಲ್ಯುಎಸ್‍ಎಸ್‍ಬಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಪ್ರಾಧಿಕಾರ ಕೆರೆ ಸ್ವಚ್ಚತಾ ಹೊಣೆ ಹೊರಬೇಕು
    * ಈ ಎಲ್ಲಾ ಇಲಾಖೆಯ ಒಬ್ಬೂಬ್ಬ ಹೆಚ್ಚುವರಿ ಕಾರ್ಯದರ್ಶಿಗಳಿರುವ ಸಮಿತಿ ರಚಿಸಬೇಕು (ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸಮಿತಿ ಅಧ್ಯಕ್ಷ)
    * ಈ ಸಮಿತಿ ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಪ್ರದೇಶದ ಪರಿಶೀಲನೆ ನಡೆಸಬೇಕು
    * ಇಂದಿನಿಂದ ಒಂದು ತಿಂಗಳ ಸಮಯದಲ್ಲಿ ಮಾಲಿನ್ಯ ತಡೆಗಟ್ಟಿ ಕೆರೆ ಸ್ವಚ್ಛ ಮಾಡಬೇಕು
    * ಆರು ತಿಂಗಳ ಅವಧಿಯಲ್ಲಿ ಸಂಪೂರ್ಣ ಕೆರೆ ಅಭಿವೃದ್ಧಿಯಾಗಬೇಕು

    * ಯಾವುದೇ ಟೆಂಡರ್ ನೀಡದೆ ಖುದ್ದು ಅಧಿಕಾರಿಗಳ ನೇತೃತ್ವದಲ್ಲಿ ಕೆಲಸ ನಡೆಯಬೇಕು (ಕೊಳಚೆ ನೀರನ್ನ ಬೇರ್ಪಡಿಸಿ ಶುದ್ಧನೀರನ್ನ ವಿವಿಧ ಕೆಲಸಗಳಿಗೆ ಬಳಕೆ ಮಾಡಬಹುದು)
    * ಅರ್ಪಾಟ್‍ಮೆಂಟ್, ಕಾರ್ಖಾನೆ ತಾಜ್ಯ, ನೀರು ರಾಜಕಾಲುವೆ ಮೂಲಕ ಹರಿಯದಂತೆ ಕ್ರಮ ವಹಿಸಬೇಕು
    * ಹೆಚ್ಚು ಮಾಲಿನ್ಯಕಾರಕ ಕಾರ್ಖಾನೆಗಳಿದ್ರೆ ಬೀಗ ಹಾಕಿ, ಅಪಾರ್ಟ್‍ಮೆಂಟ್ ನೀರಿನ ಮಾರ್ಗ ಬದಲಿಸಲು ಎಚ್ಚರಿಸಿ
    * ನಿಯಮ ಪಾಲಿಸದಿದ್ದರೆ 5 ಲಕ್ಷ ರೂ. ದಂಡ ಹಾಕಿ
    * ಮೇ 18ರ ವಿಚಾರಣೆಗೆ ಬರುವಾಗ ಅದುವರೆಗೂ ತೆಗೆದುಕೊಂಡ ಕ್ರಮದ ಸಂಪೂರ್ಣ ವರದಿ ಸಲ್ಲಿಸಬೇಕು.