Tag: Indirammana Lake

  • 4 ವರ್ಷಗಳ ಬಳಿಕ ಧಾರವಾಡದ ಇಂದಿರಮ್ಮನ ಕೆರೆ ಭರ್ತಿ – 1,500 ಕ್ಯುಸೆಕ್ ನೀರು ಹೊರಕ್ಕೆ

    4 ವರ್ಷಗಳ ಬಳಿಕ ಧಾರವಾಡದ ಇಂದಿರಮ್ಮನ ಕೆರೆ ಭರ್ತಿ – 1,500 ಕ್ಯುಸೆಕ್ ನೀರು ಹೊರಕ್ಕೆ

    ಧಾರವಾಡ: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Rain) ಧಾರವಾಡ (Dharwad) ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ (Indiramma Lake) ಸಂಪೂರ್ಣ ಭರ್ತಿಯಾಗಿದೆ.

    ಕಳೆದ ನಾಲ್ಕು ವರ್ಷಗಳಿಂದ ಈ ಇಂದಿರಮ್ಮನ ಕೆರೆ ಭರ್ತಿಯಾಗಿರಲಿಲ್ಲ. ಆದರೆ, ಕಳೆದ 10-15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಂದಿರಮ್ಮನ ಕೆರೆ ಭರ್ತಿಯಾಗಿದ್ದು, ಹೆಚ್ಚಿನ ನೀರು ಹೊರ ಹೋಗುತ್ತಿದೆ. ಇದನ್ನೂ ಓದಿ: ಪಿವಿ ಸಿಂಧು ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟ ಮೆಗಾಸ್ಟಾರ್ ಫ್ಯಾಮಿಲಿ

    ಬೆಳಗಾವಿ ಜಿಲ್ಲೆಯ ಖಾನಾಪುರ ಹಾಗೂ ಧಾರವಾಡ ಜಿಲ್ಲೆಯ ಗಡಿ ಭಾಗದಲ್ಲಿ ಅತಿಯಾದ ಮಳೆಯಾಗುತ್ತಿರುವುದರಿಂದ ಕೆರೆ ಸಂಪೂರ್ಣ ಭರ್ತಿಯಾಗಿದೆ. ಕೆರೆ ತುಂಬಿ ತಡೆಗೋಡೆ ದಾಟಿ ನೀರು ಹೊರಗಡೆ ಹೋಗುತ್ತಿದ್ದು, ಈ ನೀರು ಅಳ್ನಾವರ ಡವಗಿ ನಾಲಾಕ್ಕೆ ಹೋಗಿ ಸೇರಲಿದೆ. ಇದನ್ನೂ ಓದಿ: Landslide In Karnataka: ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ತಪ್ಪಿದ ಭಾರೀ ಅನಾಹುತ

    ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಈ ಕೆರೆ ಇದ್ದು, ಇದೀಗ ಈ ಕೆರೆ ಭರ್ತಿಯಾಗಿದೆ. ಸದ್ಯ ಕೆರೆ ತುಂಬಿದ್ದನ್ನು ನೋಡಲು ನೂರಾರು ಜನರು ಕೆರೆ ಬಳಿ ಬರುತ್ತಿದ್ದು, ಪೊಲೀಸ್ ಭದ್ರತೆಯನ್ನು ಕೂಡ ನಿಯೋಜಿಸಲಾಗಿದೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಪಾದಯಾತ್ರೆ ರಾಜಕೀಯ ನಾಟಕ: ಸಲೀಂ ಅಹಮದ್

  • ಭರ್ತಿಯಾಗಿ ಕೋಡಿ ಹರಿದ ಇಂದಿರಮ್ಮನ ಕೆರೆ

    ಭರ್ತಿಯಾಗಿ ಕೋಡಿ ಹರಿದ ಇಂದಿರಮ್ಮನ ಕೆರೆ

    ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಅಳ್ನಾವರ ಪಟ್ಟಣದ ಇಂದಿರಮ್ಮನ ಕೆರೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

    ಅಳ್ನಾವರ ತಾಲೂಕಿನ ಹುಲ್ಲಿಕೆರೆ ಗ್ರಾಮದ ಬಳಿ ಇರುವ ಈ ಕೆರೆ ಕೋಡಿ ತುಂಬಿ ಹರಿದಿದೆ. ಇದರಿಂದ ಅಳ್ನಾವರ ಪಟ್ಟಣದ ಜನರಿಗೆ ಸ್ಥಳೀಯ ಅಧಿಕಾರಿಗಳು ಅಲರ್ಟ್ ಮಾಡಿದ್ದಾರೆ. ಕೆರೆಯ ತಡೆಗೋಡೆ ಏನಾದರೂ ಒಡೆದರೆ ಜನರಿಗೆ ಬೇರೆ ಕಡೆ ಸ್ಥಳಾಂತರ ಮಾಡಲು ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ.

    ಅಗ್ನಿಶಾಮಕ ದಳ, ಪಟ್ಟಣ ಪಂಚಾಯ್ತಿ ಹಾಗೂ ಪೊಲೀಸ್ ಇಲಾಖೆ ಈಗಾಗಲೇ ಜನರಿಗೆ ಸ್ಥಳಾಂತರ ಮಾಡಲು ಆರು ಪರಿಹಾರ ಕೇಂದ್ರಗಳನ್ನ ಕೂಡ ಮಾಡಲಾಗಿದೆ. ಸ್ಥಳೀಯ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಇಂದ್ರಮ್ಮನ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾಡಳಿತದ ಆದೇಶದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

    ಜನರಿಗೆ ಏನಾದರೂ ತೊಂದರೆಯಾದರೆ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಲು ಅಧಿಕಾರಿಗಳು ತಿಳಿಸಿದ್ದಾರೆ.