Tag: indian air force

  • ಮಿರಾಜ್ ವಿಮಾನವನ್ನೇ ಬಳಸಿದ್ದು ಯಾಕೆ? ಅಂಥ ವಿಶೇಷತೆ ಅದರಲ್ಲಿ ಏನಿದೆ?

    ಮಿರಾಜ್ ವಿಮಾನವನ್ನೇ ಬಳಸಿದ್ದು ಯಾಕೆ? ಅಂಥ ವಿಶೇಷತೆ ಅದರಲ್ಲಿ ಏನಿದೆ?

    ಬೆಂಗಳೂರು: ಇಂದು ಭಾರತೀಯ ವಾಯು ಪಡೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರ ಒಳಗಡೆ ನುಗ್ಗಿ ಉಗ್ರ ತರಬೇತಿ ಕ್ಯಾಂಪ್‍ಗಳ ಮೇಲೆ ದಾಳಿ ಮಾಡಿ ಪುಲ್ವಾಮ ಉಗ್ರರು ದಾಳಿಗೆ ಪ್ರತ್ಯುತ್ತರ ನೀಡಿದೆ. ಈ ದಾಳಿಯಲ್ಲಿ ಕೇಂದ್ರ ಬಿಂದುವಾಗಿದ್ದು ಮಿರಾಜ್ ಯುದ್ಧವಿಮಾನ. ಈ ವಿಮಾನದ ಮೂಲಕ ಬಾಂಬ್ ದಾಳಿ ನಡೆಸಿ ಜೈಷ್ ಸಂಘಟನೆಯ ಮೂರು ಪ್ರಮುಖ ಕೇಂದ್ರಗಳನ್ನು ಧ್ವಂಸ ಮಾಡಿದೆ.

    ಮಿರಾಜ್-2000 ಯಾಕೆ ಬಳಸಲಾಯ್ತು?
    ಮಿರಾಜ್-2000 ಜೆಟ್ ಹಾರಾಡುವಾಗ ಅದರಿಂದ ಹೊರಬರುವ ಇಂಧನದ ಹೊಗೆ ಕಡಿಮೆ ಇರುತ್ತದೆ. ಆದರಿಂದ ನೆಲದ ಮೇಲಿರುವ ಸೈನ್ಯಕ್ಕೆ ಇದನ್ನ ಪತ್ತೆ ಮಾಡಲು ಕಷ್ಟವಾಗುತ್ತೆ. ಅದರ ಡೆಲ್ಟಾ ಪ್ಲಾನ್ ಅತೀ ಕಡಿಮೆ ಹೊಗೆಯನ್ನು ಹೊರಹಾಕುತ್ತದೆ. ಈ ವಿಶೇಷತೆ ಇರುವುದರಿಂದಲೇ ಮಿರಾಜ್-2000 ಜೆಟ್ ಅನ್ನು ಭಾರತೀಯ ಸೇನೆ ಉಗ್ರರನ್ನು ಮಟ್ಟ ಹಾಕಲು ಬಳಸಿಕೊಂಡಿದೆ. ಈ ವಿಮಾನ ಪ್ರತಿ ಗಂಟೆಗೆ 900 ಕಿ.ಮೀ ವೇಗದಲ್ಲಿ ಹಾರಾಟ ನಡೆಸುವ ಸಾಮಥ್ರ್ಯವನ್ನು ಹೊಂದಿದೆ. ಮಿರಾಜ್ ಹೆಚ್ಚು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ಸಾಮಥ್ರ್ಯವಿದೆ. ಈ ಕಾರಣಕ್ಕಾಗಿಯೇ ಮಿರಾಜ್-2000 ಭಾರತೀಯ ವಾಯ ಸೇನೆಯಲ್ಲಿರುವ ಅತ್ಯತ್ತಮ ಬಲಿಷ್ಠವಾದ ಯುದ್ಧವಿಮಾನವಾಗಿದೆ.

    ಮಿರಾಜ್-2000 ಎಂದರೇನು?
    ಫ್ರಾನ್ಸಿನ ಡಸಾಲ್ಟ್ ಕಂಪನಿ ನಿರ್ಮಿಸಿದ ಮಿರಾಜ್ 2000 ಬಹು-ಕಾರ್ಯ ನಿರ್ವಹಿಸುವ ಯುದ್ಧ ಫೈಟರ್ ಜೆಟ್. ಇದು 1984ರಿಂದ ಫ್ರೆಂಚ್ ವಾಯುಪಡೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತವಾಗಿ ಈ ವಿಶೇಷ ಜೆಟ್ ಭಾರತ, ಈಜಿಪ್ಟ್, ಗ್ರೀಸ್, ಪೆರು, ಕತಾರ್, ತೈವಾನ್ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್ ಭದ್ರತಾ ಪಡೆಯ ಭಾಗವಾಗಿದೆ.

    ಇತಿಹಾಸವೇನು?
    ಏಕ ವ್ಯಕ್ತಿ ಅಥವಾ ಇಬ್ಬರು ಪೈಲಟ್‍ಗಳು ಕೂರುವ ಸಾಮಥ್ರ್ಯ ಹೊಂದಿರುವ ಮಿರಾಜ್ ವಿಮಾನವನ್ನು ಮೊದಲ ಬಾರಿಗೆ 1984ರಲ್ಲಿ ಸೇರ್ಪಡೆಯಾಯಿತು. ಬಳಿಕ ಈ ಯುದ್ಧ ವಿಮಾನದಲ್ಲಿ ಇನ್ನೆರಡು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಮಿರಾಜ್ 2000ಎನ್ ಹಾಗೂ ಮಿರಾಜ್ 2000ಡಿ ಯುದ್ಧ ವಿಮಾನವನ್ನು ತಯಾರಿಸಲಾಯಿತು. ಮಿರಾಜ್ 2000ಎನ್ ಅತ್ಯಂತ ವೇಗ ಹೊಂದಿರುವ ಹಾಗೂ ಎಲ್ಲಾ ಹವಾಮಾನದಲ್ಲೂ ಕಾರ್ಯ ನಿರ್ವಹಿಸುತ್ತದೆ. ಅಟೋಮ್ಯಟಿಕ್ ಆಗಿ ಲೇಸರ್ ಬಾಂಬ್ ಗಳನ್ನು ಟಾರ್ಗೆಟ್ ಸ್ಥಳಕ್ಕೆ ಹಾಕುವ ಸಾಮರ್ಥ್ಯ ಈ ವಿಮಾನಕ್ಕಿದೆ.

    ಕಮಾಂಡರ್ ಮುರಳಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಈ ವಿಮಾನದ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ನನ್ನ ಪೂರ್ತಿ ವೃತ್ತಿ ಜೀವನವನ್ನು ಮಿರಾಜ್-2000ನಲ್ಲಿ ಕಳೆದಿದ್ದೇನೆ. 1984ರಿಂದ ನಾನು ನಿವೃತ್ತಿಯಾಗುವವರೆಗೂ ಮಿರಾಜ್-2000 ಜೆಟ್ ಚಲಾಯಿಸಿದ್ದೇನೆ. 1999ರ ಜೂನ್‍ನಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ನಾವು ಮಿರಾಜ್-ಜೆಟ್ ಬಳಸಿಕೊಂಡಿದ್ದೇವು. ಮಿರಾಜ್-2000 ಅತ್ಯಾಂತ ಬಲಿಷ್ಠವಾದ ಯುದ್ಧ ವಿಮಾನ. ಇಂದು ಬೆಳಗ್ಗೆ ಪಾಕ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ದಾಳಿ ಮಾಡಿರುವುದು ಕೇವಲ ಲೇಸರ್ ಗೈಡೆಡ್ ಬಾಂಬ್ ಸ್ಟ್ರೈಕ್ಸ್ ಮಾತ್ರ ಮಾಡಿಲ್ಲ. ಮೊದಲು ಹೆರಾನ್(ಇಸ್ರೇಲ್ ನಿರ್ಮಿತ ಮಾನವ ರಹಿತ ಸರ್ವೇಕ್ಷಣಾ ವಾಹನ) ಬಿಟ್ಟು ಯಾವ ಸ್ಥಳವನ್ನು ಟಾರ್ಗೆಟ್‍ಗೆ ಮಾಡಬೇಕು ಅಂತ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಪ್ಲಾನ್ ಪ್ರಕಾರ ಇಂದು ಬೆಳಗ್ಗೆ ದೂರದಿಂದಲೇ ಟಾರ್ಗೆಟ್‍ಗೆ ಗುರಿ ಮಾಡಿ ಲೇಸರ್ ಗೈಡೆಡ್ ಬಾಂಬ್ ಹಾಕಿದ್ದೇವೆ ಎಂದು ತಿಳಿಸಿದರು.

    ಸಾಮಾನ್ಯವಾಗಿ ಲೇಸರ್ ಬಾಂಬ್‍ಗಳು ಸುಮಾರು 500 ಕೆಜಿಕ್ಕಿಂತ ಹೆಚ್ಚು ತೂಕವನ್ನು ಹೊಂದಿರುತ್ತದೆ. ಇದು ಕೆಳಗೆ ಬಿದ್ದರೇ ಆ ಸ್ಥಳದಲ್ಲಿ ಬೂದಿ ಬಿಟ್ಟರೇ ಬೇರೇನೂ ಉಳಿಯುವುದಿಲ್ಲ. ಈ ದಾಳಿ ವೇಳೆ ಏರ್‍ಬಾರ್ನ್ ಅರ್ಲಿ ವಾರ್ನಿಂಗ್(ಎಇಡಬ್ಲ್ಯೂ) ಏರ್‌ಕ್ರಾಫ್ಟ್‌ ಬಳಕೆ ಮಾಡಿದ್ದೇವೆ. ಮುಜಫರಾಬಾದ್ ಬಳಿ ಗಿಲ್ಗಿಟ್ ಇದೆ. ಅಲ್ಲಿ ಪಾಕಿಸ್ತಾನ ಸೈನ್ಯದ ಕಚೇರಿಗಳು ಇವೆ. ನಾವು ನಡೆಸುತ್ತಿರುವ ದಾಳಿ ಪಾಕಿಸ್ತಾನಕ್ಕೆ ತಿಳಿಯದೇ ಇರಲು ಎಇಡಬ್ಲ್ಯೂ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 7 ಶಕ್ತಿಗಳನ್ನು ಬಳಸಿ ಪಾಕ್ ಮೇಲೆ ಬಾಂಬ್ ದಾಳಿಗೈದ ಭಾರತ!

    7 ಶಕ್ತಿಗಳನ್ನು ಬಳಸಿ ಪಾಕ್ ಮೇಲೆ ಬಾಂಬ್ ದಾಳಿಗೈದ ಭಾರತ!

    ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತದ ವಾಯುಸೇನೆ ಪಾಕಿಸ್ತಾನದ ಉಗ್ರರ ತರಬೇತಿ ಶಿಬಿರದ ದಾಳಿ ನಡೆಸಿದೆ. ಇಂದು ಬೆಳಗಿನ ಜಾವ ಮೂರು ಶಿಬಿರಗಳ ಮೇಲೆ ದಾಳಿ ನಡೆಸಿದೆ. ಉರಿ ದಾಳಿ ನಡೆದ ಬಳಿಕ ಭಾರತ ಭೂಸೇನೆಯನ್ನು ನಡೆಸಿ ಸರ್ಜಿಕಲ್ ನಡೆಸಿದರೆ ಈ ಬಾರಿ ಭಾರತ ವಾಯುಸೇನೆಯನ್ನು ಬಳಸಿ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದೆ.

    1. ಗ್ವಾಲಿಯರ್ ನಿಂದ ಹೊರಟ 12 ಮಿರಾಜ್-2000 ಯುದ್ಧ ವಿಮಾನಗಳು (Mirage 2000) -ಈ ವಿಮಾನಗಳು ಹಲವು ರೀತಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದ್ದು, ಡಸಾಲ್ಟ್ ಏವಿಯೇಷನ್ ಈ ಜೆಟ್ ನ್ನು ನಿರ್ಮಾಣ ಮಾಡಿದ್ದು, 1980ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿದೆ. ಪಂಜಾಬ್ ನ ಭಟಿಂಡಾದಲ್ಲಿ ಮಿರಾಜ್ ಯುದ್ಧ ವಿಮಾನದ ಮೂಲಕ ಮೊದಲು ವಾಯು ಸೇನೆ ಟ್ರಯಲ್ ನೋಡಿತ್ತು. ಬಳಿಕ ಮಿರಾಜ್ ಯುದ್ಧ ವಿಮಾನಗಳು ಆಗ್ರಾದಲ್ಲಿ ಇಂಧನ ತುಂಬಿಸಿಕೊಂಡಿದ್ದವು. ಮಿರಾಜ್-2000 ವಿಮಾನವು ಗ್ವಾಲಿಯಾರ್ ನಿಂದ ಟೇಕಾಫ್ ಆಗಿತ್ತು. ಈ ಯುದ್ಧ ವಿಮಾನಗಳು 1000 ಕೆ.ಜಿ ತೂಕದ 10 ಲೇಸರ್ ಗೈಡೆಡ್ ಬಾಂಬ್‍ಗಳಿಂದ ತುಂಬಿದ್ದವು.

    2. ಅಮೆರಿಕ ನಿರ್ಮಿತ ಲೇಸರ್ ಗೈಡೆಡ್ ಬಾಂಬ್ ಜಿಬಿಯು-12 (GBU-12 Paveway Laser Guided Bomb): ನಿರ್ಧಿಷ್ಟ ಗುರಿಯನ್ನು ತಲುಪಲು ಭಾರತ ಈ ಬಾಂಬ್ ಬಳಕೆ ಮಾಡಿದೆ. ಇದನ್ನೂ ಓದಿ: ಪಾಕ್‍ನ 3 ಉಗ್ರರ ಕೇಂದ್ರಗಳು ಉಡೀಸ್- ಭಾರತದ ಬಾಂಬ್ ದಾಳಿಯ ಪ್ಲಾನ್ ಹೀಗಿತ್ತು

    3. ಮಾಟ್ರಾ ಮ್ಯಾಜಿಕ್ ಕ್ಲೋಸ್ ಕಂಬ್ಯಾಟ್ ಮಿಸೈಲ್ (Matra Magic Close Combat Missile)- ಪಾಕ್ ವಾಯುಸೇನೆಯಿಂದ ಪ್ರತಿದಾಳಿಯಾದ್ರೆ ಅಪ್ಪಳಿಸಲು ಸಿದ್ಧವಾಗಿದ್ದ ಫ್ರಾನ್ಸ್ ನಿರ್ಮಿತ ಕ್ಷಿಪಣಿ ಇದನ್ನೂ ಓದಿ: ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    4. ಲೈಟ್‍ನಿಂಗ್ ಪಾಡ್ (Litening POD)- ನಿರ್ದಿಷ್ಟ ಗುರಿಗಳನ್ನು ಟಾರ್ಗೆಟ್ ಮಾಡಲು ಬಳಸುವ ತಂತ್ರಜ್ಞಾನ ಇದನ್ನೂ ಓದಿ:ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಸೇನೆ!

    5. ನೇತ್ರಾ (Netra Airborne Early Warning Jet)- ಡಿಆರ್ ಡಿಒ ನಿರ್ಮಿಸಿದ ನೇತ್ರಾ ವಿಮಾನವನ್ನು ಈ ಬಾರಿಯ ಕಾರ್ಯಾಚರಣೆಗೆ ಬಳಕೆ ಮಾಡಿದೆ. ದಾಳಿ ನಡೆಸುವ ವಿಮಾನಕ್ಕೆ ಎಲ್ಲಿ ದಾಳಿ ನಡೆಸಬೇಕು ಎನ್ನುವ ನಿಖರ ಮಾಹಿತಿಯನ್ನು ಈ ವಿಮಾನಲ್ಲಿರುವ ವ್ಯವಸ್ಥೆ ನೀಡುತ್ತದೆ. ರೇಡಾರ್ ಗಳನ್ನು ಸ್ಕ್ಯಾನ್ ಮಾಡಿ ಪ್ರತಿ ದಾಳಿ ಹೇಗೆ ನಡೆಸಬೇಕು ಎನ್ನುವ ಮಾಹಿತಿಯನ್ನು ನೇತ್ರಾ ನೀಡುತ್ತದೆ. ಇದನ್ನೂ ಓದಿ: ಭಾರತದ ಬಾಂಬ್ ದಾಳಿಗೆ ಜೈಷ್ ಉಗ್ರರ ಅತಿ ದೊಡ್ಡ ಕ್ಯಾಂಪ್ ಧ್ವಂಸ

    6. ಇಲ್ಯೂಷನ್ 78ಎಂ (Ilyushin-78 M) – ರಷ್ಯಾ ನಿರ್ಮಿತ ಈ ವಿಮಾನ ಇಂಧನ ಟ್ಯಾಂಕ್ ಆಗಿ ಬಳಕೆಯಾಗುತ್ತದೆ. ಕಾರ್ಯಾಚರಣೆ ಗುಪ್ತವಾಗಿ ನಡೆಯಲು ಆಗ್ರಾ ವಾಯುನೆಯಲ್ಲಿ ಇಂಧನ ತುಂಬಿಸಿದ್ದ ಇಲ್ಯೂಷನ್ ಮಿರಾಜ್ ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಇಂಧನವನ್ನು ತುಂಬಿಸಿತ್ತು.

    7. ಹೆರಾನ್ (Heron Drone) – ಫೆ. 16ರಿಂದ 20 ರವರೆಗೆ ಉಗ್ರರ ಕೇಂದ್ರ ಸ್ಥಳಗಳನ್ನು ಪತ್ತೆ ಹಚ್ಚಲು ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭೂಸೇನೆ ಮತ್ತು ವಾಯುಸೇನೆ 4 ದಿನ ವೈಮಾನಿಕ ಸಮೀಕ್ಷೆ ನಡೆಸಿತ್ತು. ಇಸ್ರೇಲ್ ನಿರ್ಮಿತ ಹೆರಾನ್ ಹೆಸರಿನ ಮಾನವರಹಿತ ವೈಮಾನಿಕ ಸರ್ವೇಕ್ಷಣಾ ವಾಹನ ಬಳಸಿ ಈ ಸರ್ವೆ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಟಾಕಿ ಸಿಡಿಸಿ, ಸಿಹಿ ಹಂಚಿ ರಾಜ್ಯದ ಜನತೆಯಿಂದ ಸಂಭ್ರಮವೋ ಸಂಭ್ರಮ

    ಪಟಾಕಿ ಸಿಡಿಸಿ, ಸಿಹಿ ಹಂಚಿ ರಾಜ್ಯದ ಜನತೆಯಿಂದ ಸಂಭ್ರಮವೋ ಸಂಭ್ರಮ

    ಬೆಂಗಳೂರು: ಪುಲ್ವಾಮ ಆತ್ಮಾಹುತಿ ದಾಳಿಗೆ ಪ್ರತಿಕಾರವಾಗಿ ಭಾರತ ಸೇನೆ ಇಂದು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಮೇಲೆ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿ 200ಕ್ಕೂ ಹೆಚ್ಚು ಉಗ್ರರನ್ನು ಉಡೀಸ್ ಮಾಡಿದೆ. ಈ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ವಿದ್ಯಾರ್ಥಿಗಳಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು.

    ಗಂಗಾವತಿಯ ಶ್ರೀ ರಾಘವೇಂದ್ರ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆ ಮುಖಾಂತರ ವಿಜಯದ ಘೊಷಣೆ ಕೂಗುತ್ತ ಸಾಗಿದ್ದಾರೆ. ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿ ಪಟಾಕಿ ಸಿಡಿಸಿ ಉಗ್ರರ ದಾಳಿಗೆ ಪ್ರತಿಕಾರ ತಿರೀಸಿಕೊಂಡಿದಕ್ಕೆ ಹರ್ಷೊದ್ಘಾರ ವ್ಯಕ್ತಪಡಿಸಿದ್ದಾರೆ. ಇನ್ನೂ ಸಾರ್ವಜನಿಕರಿಗೆ ಸಿಹಿ ಹಂಚಿ ಸಂತಸವನ್ನು ಹಂಚಿಕೊಂಡರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡನೇ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪಾಕಿಸ್ತಾನವನ್ನು ಬಗ್ಗು ಬಡೆದಿದ್ದಾರೆ. ಕೂಡಲೇ ಮೋದಿ ಯುದ್ಧ ಘೋಷಿಸಿ ಪಾಕಿಸ್ತಾನ ಉಗ್ರರ ತಾಣಗಳನ್ನು ಉಡೀಸ್ ಮಾಡಿ ತಕ್ಕ ಉತ್ತರ ನೀಡ ಬೇಕು ಎಂದಿದ್ದಾರೆ. ಎರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇತ್ತ ಬೆಳಗಾವಿ ಕಪಿಲೇಶ್ವರ ದೇವಸ್ಥಾನದ ಆಡಳಿತ ವತಿಯಿಂದ ಉಗ್ರರ ಮೇಲೆ ಭಾರತೀಯ ಸೈನ್ಯ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಸ್ಥಳೀಯ ಜನರು, ಆಟೋ ಚಾಲಕರು ದೇವಸ್ಥಾನದ ಮುಂಭಾಗದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಮೈಸೂರು ಪ್ರಜ್ಞಾವಂತ ನಾಗರೀಕ ವೇದಿಕೆಯವರು ಅವರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.

    ಮೈಸೂರಿನ ಅಗ್ರಹಾರ ವೃತ್ತದಲ್ಲಿ ತ್ರಿವಣ ಧ್ವಜ ಹಿಡಿದು ಯೋಧರ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ಮೋದಿ ಭಾವಚಿತ್ರ ಹಿಡಿದು ಪ್ರಜ್ಞಾವಂತ ಕಾರ್ಯಕರ್ತರು ಸಂಭ್ರಮಿಸಿದ್ದು, ಕಾಶ್ಮೀರ ನಮ್ಮದು ನಮ್ಮದು ಎಂದು ಘೋಷಣೆ ಕೂಗಿದ್ದಾರೆ. ಮಂಗಳೂರಿನ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಭಾರತೀಯ ಸೇನೆಗೆ ಶಕ್ತಿ ತುಂಬುವಂತೆ ದೇವರಲ್ಲಿ ಪ್ರಾರ್ಥಿನೆ ಮಾಡಿಕೊಂಡಿದ್ದು, ಉಗ್ರರ ಮೇಲಿನ ದಾಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

    ಹಿಂದೂ ಪರ ಸಂಘಟನೆಗಳು ಕೋಲಾರ ನಗರದ ಹೊಸ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ತ್ರಿವಣ ಧ್ವಜ ಹಿಡಿದು ದೇಶದ ಯೋಧರ ಪರ ಘೋಷಣೆ ಕೂಗಿದ್ದು, ಭಾರತ ಮಾತೆಗೆ ಹೂ ಹಾಕಿ, ಪಾಕಿಸ್ತಾನಕ್ಕೆ ಬಾಂಬ್ ಎಂದು ಘೋಷಣೆ ಕೂಗಿದ್ದಾರೆ.

    ಇನ್ನೂ ಉತ್ತರ ಕನ್ನಡದ ಶಿರಸಿಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪಟಾಕಿ ಸಿಡಿಸಿ, ತಮಟೆ ಬಾರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಉಗ್ರವಾದದ ವಿರುದ್ಧ ಭಾರತದ ದಿಟ್ಟ ಪ್ರತಿಕಾರಕ್ಕೆ ಶಿರಸಿ ನಗರದ ಪ್ರಮುಖ ಬೀದಿಗಳಲ್ಲಿ ವಿಜಯ ಮೆರವಣಿಗೆ ಮಾಡಿದ್ದಾರೆ.

    https://www.youtube.com/watch?v=zmcs1r70Pls

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    ನವದೆಹಲಿ: ಭಾರತದ ವಾಯ ಸೇನೆಯ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಭಾರತದ ಯುದ್ಧ ವಿಮಾನಗಳು ನಮ್ಮಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದೆ ಎಂದು ಪಾಕಿಸ್ತಾನದ ಮೇಜರ್ ಜನರಲ್ ಆಸೀಪ್ ಗಫೂರ್ ಟ್ವೀಟ್ ಮಾಡುವ ಮೂಲಕ ಮೊಂಡುತನ ಪ್ರದರ್ಶನ ಮಾಡಿದ್ದಾರೆ.

    ಭಾರತದ ವಾಯುಸೇನೆಯ ವಿಮಾನಗಳು ಗಡಿ (ಎಲ್‍ಓಸಿ)ಯನ್ನು ಉಲ್ಲಂಘಿಸಿದ್ದವು, ಕೂಡಲೇ ನಾವು ದಾಳಿ ಮಾಡುತ್ತಿದ್ದಂತೆ ಮರಳಿ ಹೋಗಿವೆ. ಭಾರತದ ಯುದ್ಧ ವಿಮಾನಗಳು ಮುಜಾಫರಬಾದ್ ಬಳಿ ಒಳನುಸಳಲು ಪ್ರಯತ್ನ ನಡೆಸಿದ್ದವು. ಪಾಕಿಸ್ತಾನದ ಪ್ರತಿ ದಾಳಿಗೆ ಹೆದರಿದ ಕೂಡಲೇ ತಪ್ಪಿಸಿಕೊಳ್ಳುವ ಗಡಿಬಿಡಿಯಲ್ಲಿ ಬಾಲಕೋಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ಹಾಕಿ ಹೋಗಿವೆ ಎಂದು ತಮ್ಮ ಎಂದಿನ ವಿತ್ತಂಡವಾದವನ್ನು ಮುಂದಿಟ್ಟಿದ್ದಾರೆ. ಗಫೂರ್ ಬೆಳಗ್ಗೆ 5.12ಕ್ಕೆ ಟ್ವೀಟ್ ಮಾಡಿದ ಬಳಿಕ ಸರಣಿ ಟ್ವೀಟ್ ಮಾಡಿದ್ದಾರೆ.

    ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲೆನಲ್ಲ. ಉರಿ ದಾಳಿ ನಡೆದ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಏನು ಆಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೇ ವಿದೇಶಿ ಮಾಧ್ಯಮಗಳನ್ನು ಕರೆಸಿ ಭಾರತದ ಯಾವುದೇ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಬಳಿಕ ವಿದೇಶಿ ಮಾಧ್ಯಮಗಳೇ ಪಾಕಿಸ್ತಾನ ಸುಳ್ಳು ಹೇಳಿದೆ. ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹೊಡೆದು ಉರುಳಿಸಿವೆ ಎಂದು ವರದಿ ಮಾಡಿತ್ತು. ಆದರೆ ಈ ಬಾರಿ ದಾಳಿಯನ್ನು ಒಪ್ಪಿಕೊಂಡಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿಸಿದೆ.

    ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್‍ಗಾಗಿ ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಬಳಸಿಕೊಳ್ಳಲಾಗಿದೆ. ಉಗ್ರರ ಶಿಬಿರದ ಮೇಲೆ 100 ಕೆಜಿಯ 10 ಬಾಂಬ್ ಸಿಡಿಸಲಾಗಿದ್ದು, ಉಗ್ರರ ತಾಣದ 500 ಮೀ. ವ್ಯಾಪ್ತಿ ಧ್ವಂಸಗೊಂಡಿದೆ ಎನ್ನಲಾಗುತ್ತಿದ್ದು, ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಪುಲ್ವಾಮಾ ದಾಳಿಯ 12 ನೇ ದಿನಕ್ಕೆ ಭಾರತೀಯ ಪ್ರತಿಕಾರ ತೀರಿಸಿರುವುದು ಸ್ಪಷ್ಟವಾಗಿದೆ.

    ಬಾಂಬ್ ದಾಳಿಯ ವೇಳೆ ಮಿರಾಜ್ ಗೆ ಸುಖೋಯ್ ಯುದ್ಧ ವಿಮಾನ ಕೂಡ ಬೆಂಗಾವಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿರಾಜ್-2000, ಏಕಕಾಲಕ್ಕೆ 1000 ಕೆ.ಜಿ ಲೇಸರ್ ಗೈಡೆಡೆ ಬಾಂಬ್ ಹಾಕಬಹುದಾದ ಸಾಮರ್ಥ್ಯ  ಹೊಂದಿದೆ. ಹೀಗಾಗಿ ಈ ವಿಮಾನಕ್ಕೆ ಭಾರತೀಯ ವಾಯು ಸೇನೆ `ವಜ್ರ’ ಎಂದು ಹೆಸರಿಟ್ಟಿದೆ. ಸದ್ಯ ದೇಶದ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    https://www.youtube.com/watch?v=Y3sC0vgwSyg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತನಗೊಂಡು ಹೊತ್ತಿ ಉರಿದ ವಾಯುಸೇನಾ ವಿಮಾನ -ವಿಡಿಯೋ ನೋಡಿ

    ಪತನಗೊಂಡು ಹೊತ್ತಿ ಉರಿದ ವಾಯುಸೇನಾ ವಿಮಾನ -ವಿಡಿಯೋ ನೋಡಿ

    ಜೈಪುರ್: ಭಾರತೀಯ ವಾಯುಪಡೆಗೆ ಸೇರಿದ ಮಿಗ್ ಫೈಟರ್ ವಿಮಾನವೊಂದು ರಾಜಸ್ಥಾನದ ಜೋಧಪುರದ ಬಾಂದ್ ಸಮೀಪದ ದೆವ್ಲಿಯಾ ಗ್ರಾಮದ ಬಳಿ ಪತನಗೊಂಡಿದೆ.

    ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಈ ಅವಘಡ ಸಂಭವಿಸುತ್ತಿದ್ದಂತೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಪೈಲಟ್ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ರಕ್ಷಣಾ ವಕ್ತಾರ ಕರ್ನಲ್ ಸೊಂಬಿತ್ ಘೋಷ್ ಹೇಳಿದ್ದಾರೆ.

    ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುತ್ತಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ವಾಯುಸೇನೆಯ ಅಧಿಕಾರಿಗಳು ಧಾವಿಸಿದ್ದಾರೆ. ಪೈಲಟ್ ನನ್ನು ಏರ್ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಯಾಗಿದೆ.

    ಮೂರು ವಾಯುಸೇನಾ ವಿಮಾನಗಳು ಪ್ರತಿನಿತ್ಯದ ಅಭ್ಯಾಸದಂತೆ ಇಂದು ಅಭ್ಯಾಸ ನಡೆಸುತ್ತಿದ್ದಾಗ ಮಿಗ್ ವಿಮಾನ ಪತನಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪತನಗೊಂಡ ವಿಮಾನ ಜೋಧಪುರ ವಾಯುನೆಲೆಯಿಂದ ಟೇಕ್ ಆಫ್ ಆಗಿತ್ತು.

    ಜೋಧಪುರದ ಡೆಪ್ಯೂಟಿ ಕಮಿಷನರ್ ಅಮಂದೀಪ್ ಸಿಂಗ್ ಪ್ರತಿಕ್ರಿಯಿಸಿ, ಈ ಅಪಘಾತದಿಂದ ಯಾವುದೇ ಪ್ರಾಣಾಹಾನಿ ಆಗಿಲ್ಲ. ಈ ಕುರಿತು ತನಿಖೆ ಆರಂಭಿಸಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

    https://twitter.com/Rahulsi16973840/status/1036866113299132417

  • ವಾಯುಸೇನೆ ವಿಮಾನ ಪತನ – ಪೈಲಟ್ ನಾಪತ್ತೆ

    ವಾಯುಸೇನೆ ವಿಮಾನ ಪತನ – ಪೈಲಟ್ ನಾಪತ್ತೆ

    ನವದೆಹಲಿ: ಭಾರತೀಯ ವಾಯುಸೇನೆಯ ಮಿಗ್-25 ವಿಮಾನ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜಟ್ಟಿಯಾನ್ ಪ್ರದೇಶದಲ್ಲಿ ಪತನವಾಗಿದೆ.

    ಜಟ್ಟಿಯಾನ್ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಪತನಗೊಂಡ ವಿಮಾನದ ಬಿಡಿಭಾಗಗಳು ಪತ್ತೆಯಾಗಿದ್ದು, ಘಟನೆ ಮಾಹಿತಿ ಪಡೆದ ಬಳಿಕ ವಿಪತ್ತು ನಿರ್ವಹಣಾ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದೆ. ಇಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಘಟನೆ ಸಂಭವಿಸಿದ್ದು, ವಿಮಾನ ಪತನಗೊಳ್ಳಲು ಕಾರಣ ತಿಳಿದುಬಂದಿಲ್ಲ. ಅಲ್ಲದೇ ವಿಮಾನದ ಪೈಲಟ್ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಿಮಾನ ಪತನವಾಗುವ ಮುನ್ನ ಬೆಂಕಿ ಕಾಣಿಸಿಕೊಂಡಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಕಳೆದ ಎರಡು ತಿಂಗಳ ಅವಧಿಯಲ್ಲಿ ವಾಯುಪಡೆಯ ವಿಮಾನ ಪತನಗೊಳ್ಳುವ ಎರಡನೇ ಘಟನೆ ಇದಾಗಿದೆ. ಸದ್ಯ ಪತನಗೊಂಡಿರುವ ಮಿಗ್-21 ಈ ವಿಮಾನವನ್ನು ರಷ್ಯಾ ನಿರ್ಮಾಣ ಮಾಡಿದ್ದು, ಈ ಮಾದರಿಯ ವಿಮಾನಗಳು ಸದ್ಯ ಭಾರತೀಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೆಯ ವಿಮಾನ ಎಂದು ವರದಿಯಾಗಿದೆ.

    ಕಳೆದ 2 ತಿಂಗಳ ಹಿಂದೆ ಕುಚ್ ನಲ್ಲಿ ನಡೆದ ಜಗ್ವಾರ್ ವಿಮಾನ ಪತನದಲ್ಲಿ ವಾಯುಪಡೆಯ ಹಿರಿಯ ಅಧಿಕಾರಿ ಮರಣ ಹೊಂದಿದ್ದರು. 2017 ಮಾರ್ಚ್ ನಲ್ಲಿ ರಾಜಸ್ಥಾನ ಬಾರ್ಮರ್ ಪ್ರದೇಶದಲ್ಲಿ ವಾಯುಪಡೆಯ ವಿಮಾನ ಪತನವಾಗಿತ್ತು. ಈ ವೇಳೆ ವಿಮಾನದಲ್ಲಿದ್ದ ಇಬ್ಬರು ಪೈಲಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದರು.

  • ಕೇದಾರನಾಥ್ ದೇವಾಲಯದ ಬಳಿ ವಾಯು ಸೇನಾ ಹೆಲಿಕಾಪ್ಟರ್ ಪತನ

    ಕೇದಾರನಾಥ್ ದೇವಾಲಯದ ಬಳಿ ವಾಯು ಸೇನಾ ಹೆಲಿಕಾಪ್ಟರ್ ಪತನ

    ನವದೆಹಲಿ: ಕೇದಾರನಾಥ್ ದೇವಾಲಯದ ಬಳಿಯ ಹೆಲಿಪ್ಯಾಡ್ ನಲ್ಲಿ ಭಾರತೀಯ ವಾಯು ಸೇನಾ ಸರಕು ಹೆಲಿಕಾಪ್ಟರ್ ಅಪಘಾತಕ್ಕೊಳಗಾಗಿದ್ದು, ಕಾಪ್ಟರ್ ನಲ್ಲಿದ್ದ ಆರು ಸಿಬ್ಬಂದಿ ಗಾಯಗೊಂಡಿದ್ದಾರೆ.

    ಸೇನಾ ಪರಿಕರಗಳನ್ನು ಹೊತ್ತ ಸಾಗಿದ್ದ ಎಂಐ-17 ಹೆಸರಿನ ಸೇನಾ ಸರಕು ಹೆಲಿಕಾಪ್ಟರ್ ಕೇದಾರನಾಥ್ ದೇವಾಲಯದ ಬಳಿಯ ಹೆಲಿಪ್ಯಾಡ್‍ನಲ್ಲಿ ಇಳಿಯುವ ವೇಳೆ ಘಟನೆ ಸಂಭವಿಸಿದೆ. ಕಾಪ್ಟರ್ ಲ್ಯಾಡಿಂಗ್ ವೇಳೆ ಕಬ್ಬಿಣದ ವಸ್ತುವಿಗೆ ತಾಗಿದ ಕಾರಣ ಹೆಲಿಕಾಪ್ಟರ್ ಪತನಗೊಂಡಿದೆ.

    ಘಟನಾ ಸ್ಥಳಕ್ಕೆ ತಕ್ಷಣವೇ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ತೆರಳಿ ಆರು ಮಂದಿ ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ. ಹೆಲಿಕಾಪ್ಟರ್ ನ ಹಿಂಭಾಗದಲ್ಲಿ ಅಳವಡಿಸಿದ್ದ ರಷ್ಯಾ ನಿರ್ಮಿತ ತಿರುಗುವ ಚಕ್ರ ಹೊರ ಬಂದಿದ ಕಾರಣ ಘಟನೆ ನಡೆದಿದೆ ಎಂದು ಭಾರತೀಯ ವಾಯು ಸೇನೆ ಸ್ಪಷ್ಟಪಡಿಸಿದೆ.

    ಕಳೆದ ವರ್ಷ ಅರುಣಾಚಲ ಪ್ರದೇಶದಲ್ಲಿ ಎಂಐ-17 ಹೆಲಿಕಾಪ್ಟರ್ ಪತನಗೊಂಡ ದುರಂತದಲ್ಲಿ 7 ಮಂದಿ ಸಾವಿಗೀಡಾಗಿದ್ದರು. ಈ ಘಟನೆ ಮಸುವ ಮುನ್ನವೇ ಮತ್ತೊಂದು ಅವಘಡ ನಡೆದಿದ್ದು ಸಿಬ್ಬಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

  • ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿ ಭಾರತೀಯ ವಾಯು ಪಡೆಯ ಮಹಿಳಾ ಅಧಿಕಾರಿಯಿಂದ ಇತಿಹಾಸ ಸೃಷ್ಟಿ!

    ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿ ಭಾರತೀಯ ವಾಯು ಪಡೆಯ ಮಹಿಳಾ ಅಧಿಕಾರಿಯಿಂದ ಇತಿಹಾಸ ಸೃಷ್ಟಿ!

    ನವದೆಹಲಿ: ಭಾರತೀಯ ವಾಯು ಪಡೆಯ ಮಹಿಳಾ ಅಧಿಕಾರಿ ಅವನಿ ಚತುರ್ವೇದಿ ಸೋಮವಾರದಂದು ಇತಿಹಾಸ ಸೃಷ್ಟಿಸಿದ್ದಾರೆ. ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸುವ ಮೂಲಕ ಈವರೆಗೆ ಭಾರತದಲ್ಲಿ ಪುರುಷರಿಗೆ ಮಾತ್ರ ತೆರೆದುಕೊಂಡಿದ್ದ ಸಾಮ್ರಾಜ್ಯಕ್ಕೆ ಅವನಿ ಕಾಲಿಟ್ಟಿದ್ದಾರೆ.

    ಅವನಿ ಚತುರ್ವೇದಿ ಗುಜರಾತ್‍ನ ಜಮ್‍ನಗರ್‍ನಿಂದ ಎಮ್‍ಐಜಿ-21 ಬೈಸನ್ ವಿಮಾನವೇರಿ ಹಾರಾಟ ಶುರು ಮಾಡಿದ್ರು. ರಷ್ಯಾ ನಿರ್ಮಿತ ಸೂಪರ್ ಸೋನಿಕ್ ಯುದ್ಧವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಯಶ್ವಿಯಾಗಿ ಹಾರಾಟ ನಡೆಸಿದ್ರು. ಈ ಮೂಲಕ ಅವನಿ, ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡ್ರು.

    ಅವನಿ ಚತುರ್ವೇದಿ ಮೂಲತಃ ಮಧ್ಯಪ್ರದೇಶದ ರೇವಾ ಜಿಲ್ಲೆಯವರು. ಅವನಿ ಕುಟುಂಬದಲ್ಲಿ ಸೇನೆಗೆ ಸೇರ್ಪಡೆಯಾಗಿರುವುದು ಅವರೇ ಮೊದಲೇನಲ್ಲ. ಅವನಿ ಅವರ ಸಹೋದರ ಸೈನಿಕರಾಗಿದ್ದು, ಅವರಿಂದಲೇ ಸ್ಫೂರ್ತಿ ಪಡೆದಿದ್ದಾರೆ. ಅವನಿ ಹುಟ್ಟಿದ್ದು 1993ರ ಅಕ್ಟೋಬರ್ 24ರಂದು. 24 ವರ್ಷ ವಯಸ್ಸಿನ ಅವನಿಗೆ ಚೆಸ್, ಟೇಬಲ್ ಟೆನ್ನಿಸ್ ಹಾಗೂ ಚಿತ್ರಕಲೆಯಲ್ಲೂ ಪರಿಣಿತಿ ಇದೆ.

    ಅವನಿ ತಮ್ಮ ಶಾಲಾ ವಿದ್ಯಾಭ್ಯಾಸವನ್ನ ಡಿಯೋಲ್ಯಾಂಡ್‍ನಲ್ಲಿ ಮುಗಿಸಿದ್ರು. ನಂತರ 2014ರಲ್ಲಿ ಬನಸ್ತಲಿ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಪದವಿ ಪೂರೈಸಿದ್ರು. ಭಾರತೀಯ ವಾಯು ಪಡೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಹೈದರಾಬಾದ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದರು.

     

     

    2016ರ ಜೂನ್ 18ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾಡ್ರಾನ್‍ಗೆ ಸೇರ್ಪಡೆಯಾದ ಮೂವರು ಮಹಿಳೆಯರಲ್ಲಿ ಅವನಿ ಕೂಡ ಒಬ್ಬರಾಗಿದ್ದರು. ಇವರೊಂದಿಗೆ ಮೋಹನಾ ಸಿಂಗ್ ಹಾಗೂ ಭಾವನಾ ಕಾಂತ್ ಸೇರ್ಪಡೆಯಾಗಿದ್ದರು.

    43 ಪುರುಷರ ಜೊತೆಯಲ್ಲಿ ಈ ಮೂವರು ಮಹಿಳೆಯರು ತರಬೇತಿ ಪಡೆದಿದ್ದು, ಇವರಿಗೆ ಮದುವೆ ಹಾಗೂ ಗರ್ಭಧಾರಣೆಯನ್ನ ಮುಂದೂಡುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಮೋಹನಾ ಸಿಂಗ್ ಹಾಗೂ ಭಾವನಾ ಕಾಂತ್ ಕೂಡ ತರಬೇತಿ ಪೂರೈಸಿದ್ದು, ಶೀಘ್ರದಲ್ಲೇ ಅವರೂ ಕೂಡ ಯುದ್ಧವಿಮಾನ ಹಾರಾಟ ನಡೆಸಲಿದ್ದಾರೆ.

    ಅವನಿ ಚತುರ್ವೇದಿ ಎಮ್‍ಐಜಿ-21 ಬೈಸನ್ ಗೂ ಮೊದಲು ಏಕಾಂಗಿಯಾಗಿ ಪೈಲಾಟಸ್ ಪಿಸಿ-7 ಟರ್ಬೊಪ್ರಾಪ್ಸ್, ಕಿರಣ್ ಹಾಗೂ ಹಾವ್ಕ್ ವಿಮಾನಗಳ ಹಾರಾಟ ನಡೆಸಿದ್ದರು. ಚತುರ್ವೇದಿ ಅವರು ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿರುವುದು ಭಾರತವದ ಕಿರೀಟಕ್ಕೆ ಮತ್ತೊಂದು ಗರಿ ತಂದುಕೊಟ್ಟಂತಾಗಿದೆ. ಬ್ರಿಟನ್, ಅಮೆರಿಕ, ಇಸ್ರೇಲ್ ಹಾಗು ಪಾಕಿಸ್ತಾನದಲ್ಲಿ ಈಗಾಗಲೇ ಮಹಿಳೆಯರು ಯುದ್ಧವಿಮಾನ ಹಾರಾಟ ನಡೆಸುತ್ತಿದ್ದು, ಇದೀಗ ಆ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿದೆ.

     

  • ಪ್ರವಾಹದಿಂದ ಪಾರಾಗಲು ವಿದ್ಯುತ್ ಕಂಬವೇರಿದ್ದ ವ್ಯಕ್ತಿ- ಭಾರತೀಯ ವಾಯುಪಡೆ ಹೇಗೆ ಕಾಪಾಡಿತು ನೋಡಿ

    ಪ್ರವಾಹದಿಂದ ಪಾರಾಗಲು ವಿದ್ಯುತ್ ಕಂಬವೇರಿದ್ದ ವ್ಯಕ್ತಿ- ಭಾರತೀಯ ವಾಯುಪಡೆ ಹೇಗೆ ಕಾಪಾಡಿತು ನೋಡಿ

     

    ಅಹಮದಾಬಾದ್: ಪ್ರವಾಹ ಪೀಡಿತ ಗುಜರಾತ್‍ನಲ್ಲಿ ರಕ್ಷಣಾ ಕಾರ್ಯಚರಣೆ ವೇಳೆ ಭಾರತೀಯ ವಾಯು ಪಡೆಯು ವಿದ್ಯುತ್ ಕಂಬವೇರಿದ್ದ ವ್ಯಕ್ತಿಯೊಬ್ಬರನ್ನ ರಕ್ಷಿಸಿದೆ.

    ಕಂಬವೇರಿದ್ದ ವ್ಯಕ್ತಿಯನ್ನ ಹೆಲಿಕಾಪ್ಟರ್ ಮೂಲಕ ಮೇಲೆತ್ತಲಾಗಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ವ್ಯಕ್ತಿಯು ಪ್ರವಾಹದ ನೀರಿನಿಂದ ಪಾರಾಗಲು ವಿದ್ಯುತ್ ಕಂಬವೇರಿದ್ದರು. ವಾಯು ಪಡೆ ಸಿಬ್ಬಂದಿ ಹಗ್ಗವನ್ನ ಕೆಳಗೆ ಬಿಟ್ಟಿದ್ದು, ಆ ವ್ಯಕ್ತಿ ಅದನ್ನ ಹಿಡಿದುಕೊಂಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಆ ವ್ಯಕ್ತಿಯನ್ನ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.

    ಗುಜರಾತ್‍ನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಬನಸ್‍ಕಾಂತಾ ಜಿಲ್ಲೆಯಲ್ಲೇ 29 ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಅಲ್ಲದೆ ಗುಜರಾತ್‍ನಾದ್ಯಂತ ಮಳೆಯಿಂದ 123 ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಂಗಳವಾರದಂದು ಹೇಳಿದ್ದಾರೆ.

    ಗುಜರಾತ್‍ನಲ್ಲಿ ಮಳೆಯಿಂದ ಬನಸ್‍ಕಾಂತಾ ಹಾಗೂ ಪಟನ್ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ.

    ಕಳೆದ ಎರಡು ದಿನಗಳಲ್ಲಿ ಉತ್ತರ ಗುಜರಾತ್‍ನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ವಾಯು ಪಡೆ, ಸೇನಾ ಪಡೆ, ಬಿಎಸ್‍ಎಫ್ ಹಾಗೂ ಜಿಲ್ಲಾಡಳಿತ ಸುಮಾರು 1930 ಜನರನ್ನ ರಕ್ಷಿಸಿವೆ. ಕಳೆದ ಒಂದು ವಾರದಲ್ಲಿ 53 ಸಾವಿರಕ್ಕೂ ಹೆಚ್ಚಿನ ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಕಂದಾಯ ಸಚಿವ ಭೂಪೆಂದರ್ ಸಿನ್ಹ್ ಹೇಳಿದ್ದಾರೆ.

    ಬನಸ್‍ಕಾಂತಾ ಹಾಗೂ ಪಟನ್ ಜಿಲ್ಲೆಗಳಲ್ಲಿ ಮುಳುಗಡೆಯಾದ ಹಳ್ಳಿಗಳಲ್ಲಿ ಜನರನ್ನ ಏರ್‍ಲಿಫ್ಟ್ ಮಾಡಲು ಹಾಗೂ ಆಹಾರ ಪೊಟ್ಟಣಗಳನ್ನ ಪೂರೈಸಲು ವಾಯುಪಡೆ 16 ಹೆಲಿಕಾಪ್ಟರ್‍ಗಳನ್ನ ಸೇವೆಗೆ ಬಳಸಿಕೊಳ್ತಿದೆ.

    https://www.youtube.com/watch?v=nhj9WbHkjjI