Tag: india

  • ಶೀಘ್ರವೇ ಚಲಾವಣೆಗೆ ಬರಲಿದೆ 100 ರೂ. ಹೊಸ ನೋಟು

    ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಬಳಿಕ 1 ಸಾವಿರ ಮುಖಬೆಲೆಯ ನೋಟನ್ನು ಚಲಾವಣೆ ಮಾಡಲು ಸಿದ್ಧತೆ ನಡೆಸುತ್ತಿರುವ ಆರ್‍ಬಿಐ ಈಗ 100 ರೂ. ಮುಖಬೆಲೆಯ ಹೊಸ ನೋಟುಗಳನ್ನೂ ಬಿಡುಗಡೆ ಮಾಡಲು ಮುಂದಾಗುತ್ತಿದೆ.

    ಈಗ ಇರುವ ಮಹಾತ್ಮಗಾಂಧಿ ಸರಣಿಯ 2005ರ ನೋಟುಗಳ ವಿನ್ಯಾಸದಲ್ಲೇ ಹೊಸ ನೋಟುಗಳು ಇರಲಿದ್ದು, ನೋಟಿನ ಹಿಂಭಾಗದಲ್ಲಿ ಮುದ್ರಣ ವರ್ಷ 2017 ಎಂದು ಮುದ್ರಣವಾಗಲಿದೆ. ನೋಟಿನ ನಂಬರ್‍ನಲ್ಲಿ ಇಂಗ್ಲಿಷಿನ ‘ಆರ್’ ಅಕ್ಷರ ಇರಲಿದ್ದು, ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯೊಂದಿಗೆ ಬರಲಿದೆ.

    ಹಳೆ ನೋಟಿನ ಕತೆ ಏನು?
    ಹೊಸ ನೋಟು ಚಲಾವಣೆ ಬಂದಾಗ ಹಳೆ ನೋಟು ನಿಷೇಧವಾಗುತ್ತಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಈ ಪ್ರಶ್ನೆಗೆ ಆರ್‍ಬಿಐ ಉತ್ತರ ನೀಡಿದ್ದು ಹಳೆ ನೋಟುಗಳು ಈಗ ಇರುವಂತೆ ಚಲಾವಣೆಯಲ್ಲಿ ಮುಂದುವರಿಯಲಿದೆ. ಇವುಗಳ ಜೊತೆಗೆ ಹೊಸ ನೋಟುಗಳು ಚಲಾವಣೆಯಾಗಲಿದೆ ಎಂದು ತಿಳಿಸಿದೆ.

  • ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

    ಬೆಂಗಳೂರು: ಎಚ್-1 ಬಿ ವೀಸಾ ನೀಡಿ ಭಾರತೀಯ ಕಂಪೆನಿಗಳು ವಿದೇಶಕ್ಕೆ ಉದ್ಯೋಗಿಗಳನ್ನು ಕಳಹಿಸುವ ಬದಲು ಅವರಿಗೆ ಸ್ವದೇಶದಲ್ಲೇ ಉದ್ಯೋಗ ನೀಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ನಾರಾಯಣ ಮೂರ್ತಿ ಹೇಳಿದ್ದಾರೆ.

    ವಾಹಿನಿಯೊಂದರೆ ಜೊತೆ ಮಾತನಾಡಿದ ಅವರು, ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ಅಮೆರಿಕದಲ್ಲಿ ಅಮೆರಿಕ ಜನತೆಗೆ, ಕೆನಡಾದಲ್ಲಿ ಕೆನಡಾದ ಪ್ರಜೆಗಳಿಗೆ, ಇಂಗ್ಲೆಂಡಿನಲ್ಲಿ ಇಂಗ್ಲೆಂಡ್ ಮಂದಿಗೆ ಅವಕಾಶ ನೀಡಬೇಕು ಆಗ ಮಾತ್ರ ನಾವು ಅಂತಾರಾಷ್ಟ್ರೀಯ ಕಂಪೆನಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ರೀತಿ ಮಾಡಿದಾಗ ನಾವು ಬಹು ಸಂಸ್ಕೃತಿಯ ಕಂಪೆನಿಯಾಗುತ್ತೇವೆ ಎಂದು ಎಂದು ತಿಳಿಸಿದರು.

    ಕಾಲೇಜಿನ ಹಂತದಲ್ಲೇ ಉದ್ಯೋಗಿಗಳನ್ನು ನೇಮಕ ಮಾಡಿ ಅವರಿಗೆ ಸೂಕ್ತ ತರಬೇತಿ ನೀಡಬೇಕು. ಈ ಮೂಲಕ ಸ್ಥಳೀಯರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಬೇಕು ಎಂದು ನಾರಾಯಣ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ. ಎಚ್-1ಬಿ ವೀಸಾದ ಕಾನೂನು ತಿದ್ದುಪಡಿ ಮಾಡಲು ‘ಹೈ ಸ್ಕಿಲ್ಡ್ ಇಂಟಿಗ್ರಿಟಿ ಆಂಡ್ ಫೇರ್‍ನೆಸ್ ಮಸೂದೆ 2017’ ಅಮೆರಿಕದ ಸಂಸತ್ತಿನಲ್ಲಿ ಮಂಡನೆಯಾಗಿದೆ. ಪ್ರಸ್ತಾವಿತ ಮಸೂದೆಯಲ್ಲಿ ಎಚ್-1ಬಿ ವೀಸಾ ಪಡೆಯಲು ಉದ್ಯೋಗಿಗಳಿಗೆ ಕನಿಷ್ಠ 1.30 ಲಕ್ಷ ಡಾಲರ್ ಸಂಬಳ ನೀಡಬೇಕೆಂಬ ಅಂಶವಿದೆ.

    ಪ್ರಸ್ತುತ ಈಗ ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್(40.69 ಲಕ್ಷ ರೂ.) ಇದೆ. 1989ರ ಜಾರಿಗೆ ಬಂದಿದ್ದ ಈ ವೀಸಾ ನಿಯಮದಲ್ಲಿ ಇದೂವರೆಗೆ ಯಾವುದೇ ಬದಲಾವಣೆ ಆಗಿರಲಿಲ್ಲ. ಆದರೆ ಈಗ ಈ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಡಬಲ್ ಆಗಿದೆ. ಮಸೂದೆ ಮಂಡನೆಯಾಗುತ್ತಿದ್ದಂತೆ, ಟಿಸಿಎಸ್, ವಿಪ್ರೋ, ಎಚ್‍ಸಿಎಲ್ ಕಂಪೆನಿಗಳ ಶೇರುಗಳು ದಿಢೀರ್ ಕುಸಿದಿತ್ತು.

     

  • 8 ರನ್‍ಗಳಿಗೆ 8 ವಿಕೆಟ್ ಪತನ: ಇದು ಚಹಲ್ ಕಮಾಲ್- ಭಾರತಕ್ಕೆ ಸರಣಿ

    ಬೆಂಗಳೂರು: ಯಜುವೇಂದ್ರ ಚಹಲ್ ಅವರ ಮಾರಕ ಬೌಲಿಂಗ್‍ನಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 75 ರನ್‍ಗಳ ಭರ್ಜರಿ ಜಯ ಸಾಧಿಸಿದೆ. ಟೆಸ್ಟ್, ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದ ಭಾರತ ಈಗ ಟಿ20 ಸರಣಿಯನ್ನು ಗೆದ್ದುಕೊಂಡಿದೆ.

    ಗೆಲ್ಲಲು 203 ರನ್‍ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್ 13.3 ಓವರ್ ಗಳಲ್ಲಿ 119 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಚಹಲ್ ಸ್ಪಿನ್ ದಾಳಿಗೆ ತತ್ತರಿಸಿದ ಆಂಗ್ಲರು 8 ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಳ್ಳುವ ಮೂಲಕ 16.3 ಓವರ್‍ಗಳಲ್ಲಿ 127 ರನ್ ಗಳಿಗೆ ಆಲೌಟ್ ಆಯ್ತು.

    ಚಹಲ್ ಕಮಾಲ್: ಬಿಲ್ಲಿಂಗ್ಸ್, ಮಾರ್ಗನ್ ರನ್ನು ಔಟ್ ಮಾಡಿದ ಚಹಲ್ ರೂಟ್ ಅವರನ್ನು ಎಲ್‍ಬಿ ಬಲೆಗೆ ಕೆಡವಿದರು. ಇಲ್ಲಿಂದ ಆಂಗ್ಲರ ಪತನ ಆರಂಭವಾಯಿತು. ನಂತರ ಬಂದ ಬಟ್ಲರ್ ಕೊಹ್ಲಿ ಗೆ ಕ್ಯಾಚ್ ನೀಡಿ ಹೊರ ನಡೆದರು. ಚಹಲ್ ಎಸೆತವನ್ನು ಸಿಕ್ಸರ್‍ಗೆ ಬೆನ್ ಸ್ಟೋಕ್ ಅಟ್ಟಿದ್ದರೂ ಸುರೇಶ್ ರೈನಾ ಬೌಂಡರಿ ಗೆರೆಯ ಬಳಿ ಹಿಡಿದ ಅತ್ಯುತ್ತಮ ಕ್ಯಾಚ್‍ಗೆ ಔಟಾದರು. ಇದಾದ ಬಳಿಕ ಮೊಯಿನ್ ಅಲಿ ಕೊಹ್ಲಿ ಕ್ಯಾಚ್ ನೀಡಿದರೆ ಕ್ರಿಸ್ ಜೊರ್ಡನ್ ಅವರನ್ನು ಧೋನಿ ಸ್ಟಂಪ್ ಔಟ್ ಮಾಡಿದರು. ಅಂತಿಮವಾಗಿ 4 ಓವರ್ ಕೋಟಾ ಮುಗಿದಾಗ ಚಹಲ್ 25 ರನ್ ನೀಡಿ 6 ವಿಕೆಟ್ ಪಡೆದಿದ್ದರು.

    ಇಂಗ್ಲೆಂಡ್ ಪರ ಜೇಸನ್ ರೋ 32 ರನ್, ಜೋ ರೂಟ್ 42 ರನ್, ನಾಯಕ ಇಯಾನ್ ಮಾರ್ಗನ್ 40 ರನ್ ಹೊಡೆದರು. ಬುಮ್ರಾ ಮೂರು ವಿಕೆಟ್ ಪಡೆದರೆ ಅಮಿತ್ ಮಿಶ್ರಾ 1 ವಿಕೆಟ್ ಪಡೆದರು

    ವಿಕೆಟ್ ಪತನಗೊಂಡಿದ್ದು ಹೀಗೆ:
    1-8, 2-55, 3-119, 4-119, 5-119, 6-123, 7-127, 8-127, 9-127, 10-127

    ಸಿಕ್ಸರ್, ಬೌಂಡರಿ ಅಬ್ಬರ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಬ್ ಏರ್ ಸೌಲಭ್ಯ ಅಳವಡಿಕೆಯಾದ ನಡೆದ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮನ್‍ಗಳು ರನ್ ಸುರಿಮಳೆಗೈದಿದ್ದರು. ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಸುರೇಶ್ ರೈನಾ, ಧೋನಿ ಅರ್ಧಶತಕ, ಕೊನೆಯಲ್ಲಿ ಯುವರಾಜ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು.

    ಎರಡನೇ ಓವರ್‍ನ ಮೊದಲ ಎಸೆತದಲ್ಲಿ ನಾಯಕ ಕೊಹ್ಲಿ ಜೊರ್ಡನ್ ಬೌಲಿಂಗ್‍ನಲ್ಲಿ ರನೌಟ್ ಆದರು. ಆರಂಭದಲ್ಲಿ ಕುಸಿತ ಕಂಡರೂ ಎರಡನೇ ವಿಕೆಟ್‍ಗೆ ರಾಹುಲ್ ಮತ್ತು ರೈನಾ 6.1 ಓವರ್ನಲ್ಲಿ 61 ರನ್ ಕಲೆ ಹಾಕಿ ಭದ್ರವಾದ ಇನ್ನಿಂಗ್ಸ್ ಕಟ್ಟಿದರು.

    22 ರನ್(18 ಎಸೆತ, 2 ಬೌಂಡರಿ, 1ಸಿಕ್ಸರ್) ಗಳಿಸಿದ್ದ ರಾಹುಲ್ ಔಟಾದಾಗ ತಂಡದ ಮೊತ್ತ 65 ಆಗಿತ್ತು. ಧೋನಿ ಕ್ರೀಸ್‍ಗೆ ಬಂದ ಮೇಲೆ ಸಿಕ್ಸರ್, ಬೌಂಡರಿ ಸಿಡಿಯಲು ಆರಂಭವಾಯಿತು.

    ರೈನಾ ಮತ್ತು ಧೋನಿ 37 ಎಸೆತದಲ್ಲಿ 55 ರನ್ ಜೊತೆಯಾಟವಾಡಿದರು. 39 ಎಸೆತದಲ್ಲಿ ಅರ್ಧಶತಕ ಹೊಡೆದ ರೈನಾ ಅಂತಿಮವಾಗಿ 63 ರನ್(45 ಎಸೆತ, 2 ಬೌಂಡರಿ, 5 ಸಿಕ್ಸರ್) ಗಳಿಸಿದ್ದಾಗ ಮೊರ್ಗನ್‍ಗೆ ಕ್ಯಾಚ್ ನೀಡಿ ಹೊರ ನಡೆದರು.

    ಯುವರಾಜ್ ಬಂದ ಕೂಡಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮ ಜೊರ್ಡನ್ ಎಸೆದ 18ನೇ ಓವರ್ ನಲ್ಲಿ ಯುವರಾಜ್ ಮೂರು ಸಿಕ್ಸರ್ ಒಂದು ಬೌಂಡರಿ ಚಚ್ಚಿದರು. ಈ ಓವರ್ನಲ್ಲಿ ಧೋನಿ ಮತ್ತು ಯುವಿ 24 ರನ್ ಸೊರೆಗೈದರು. ಉತ್ತಮವಾಗಿ ಆಡುತ್ತಿದ್ದ ಯುವರಾಜ್ ಸಿಂಗ್ 27 ರನ್( 10 ಎಸೆತ, 1 ಬೌಂಡರಿ,1 ಸಿಕ್ಸರ್) ಗಳಿಸಿದ್ದಾಗ ಮಿಲ್ಸ್ ಎಸೆದ ಸ್ಲೋ ಬಾಲಿಗೆ ಕೀಪರ್ಗೆ ಕ್ಯಾಚ್ ನೀಡಿ ಹೊರ ನಡೆದರು. ಇವರಿಬ್ಬರು 28 ಎಸೆತದಲ್ಲಿ 57 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 170 ರನ್‍ಗಳ ಗಡಿ ದಾಟಿಸಿದರು.

    ಧೋನಿ 56 ರನ್(36 ಎಸೆತ,5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ, 11 ರನ್(4 ಎಸೆತ, 1 ಸಿಕ್ಸರ್) ಗಳಿಸಿದ್ದ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಕೊನೆಯ ಬಾಲ್‍ನಲ್ಲಿ ರನ್ ಔಟಾದರು. ಕೊನೆಯಲ್ಲಿ ರಿಶಬ್ ಪಂತ್ 6 ರನ್ ಗಳಿಸಿ ಔಟಾಗದೇ ಉಳಿದರು. 12 ಸಿಕ್ಸರ್, 11 ಬೌಂಡರಿ ಸಿಡಿದರೆ, ಇತರೇ ರೂಪದಲ್ಲಿ 15 ರನ್ ಟೀಂ ಇಂಡಿಯಾಗೆ ಬಂತು.

    ಭಾರತದ ರನ್ ಏರಿದ್ದು ಹೀಗೆ:
    50 ರನ್ – 5.5 ಓವರ್
    100 ರನ್ – 12.1 ಓವರ್
    150 ರನ್ – 16.5 ಓವರ್
    200 ರನ್ – 19.5 ಓವರ್
    202 ರನ್ – 20 ಓವರ್

    ಕಾನ್ಪುರದಲ್ಲಿ ನಡೆದ ಮೊದಲ ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್‍ನಿಂದ ಗೆದ್ದಿದ್ದರೆ, ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ ಜಸ್‍ಪ್ರೀತ್ ಬುಮ್ರಾ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ 5ರನ್‍ಗಳ ರೋಚಕ ಜಯವನ್ನು ಸಾಧಿಸಿತ್ತು.

    ಯಜುವೇಂದ್ರ ಚಹಲ್ ಪಂದ್ಯಶ್ರೇಷ್ಠ ಮತ್ತು ಸರಣಿಯಲ್ಲಿ 8 ವಿಕೆಟ್ ಕಿತ್ತ ಹಿನ್ನೆಲೆಯಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

  • ಚಿನ್ನಸ್ವಾಮಿಯಲ್ಲಿ ಸಿಕ್ಸರ್, ಬೌಂಡರಿ ಸುರಿಮಳೆ

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಬ್ ಏರ್ ಸೌಲಭ್ಯ ಅಳವಡಿಕೆಯಾದ ನಡೆದ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ ಬ್ಯಾಟ್ಸ್ ಮನ್‍ಗಳು ರನ್ ಸುರಿಮಳೆಗೈದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಮೂರನೇಯ ಟಿ 20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಸುರೇಶ್ ರೈನಾ, ಧೋನಿ ಅರ್ಧಶತಕ, ಕೊನೆಯಲ್ಲಿ ಯುವರಾಜ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದೆ.

    ಎರಡನೇ ಓವರ್‍ನ ಮೊದಲ ಎಸೆತದಲ್ಲಿ ನಾಯಕ ಕೊಹ್ಲಿ ಜೊರ್ಡನ್ ಬೌಲಿಂಗ್‍ನಲ್ಲಿ ರನೌಟ್ ಆದರು. ಆರಂಭದಲ್ಲಿ ಕುಸಿತ ಕಂಡರೂ ಎರಡನೇ ವಿಕೆಟ್‍ಗೆ ರಾಹುಲ್ ಮತ್ತು ರೈನಾ 6.1 ಓವರ್‍ನಲ್ಲಿ 61 ರನ್ ಕಲೆ ಹಾಕಿ ಭದ್ರವಾದ ಇನ್ನಿಂಗ್ಸ್ ಕಟ್ಟಿದರು.

    22 ರನ್(18 ಎಸೆತ, 2 ಬೌಂಡರಿ, 1ಸಿಕ್ಸರ್) ಗಳಿಸಿದ್ದ ರಾಹುಲ್ ಔಟಾದಾಗ ತಂಡದ ಮೊತ್ತ 65 ಆಗಿತ್ತು. ಧೋನಿ ಕ್ರೀಸ್‍ಗೆ ಬಂದ ಮೇಲೆ ಸಿಕ್ಸರ್, ಬೌಂಡರಿ ಸಿಡಿಯಲು ಆರಂಭವಾಯಿತು.

    ರೈನಾ ಮತ್ತು ಧೋನಿ 37 ಎಸೆತದಲ್ಲಿ 55 ರನ್ ಜೊತೆಯಾಟವಾಡಿದರು. 39 ಎಸೆತದಲ್ಲಿ ಅರ್ಧಶತಕ ಹೊಡೆದ ರೈನಾ ಅಂತಿಮವಾಗಿ 63 ರನ್(45 ಎಸೆತ, 2 ಬೌಂಡರಿ, 5 ಸಿಕ್ಸರ್) ಗಳಿಸಿದ್ದಾಗ ಮೊರ್ಗನ್‍ಗೆ ಕ್ಯಾಚ್ ನೀಡಿ ಹೊರ ನಡೆದರು.

    ಯುವರಾಜ್ ಬಂದ ಕೂಡಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮ ಜೊರ್ಡನ್ ಎಸೆದ 18ನೇ ಓವರ್ ನಲ್ಲಿ ಯುವರಾಜ್ ಮೂರು ಸಿಕ್ಸರ್ ಒಂದು ಬೌಂಡರಿ ಚಚ್ಚಿದರು. ಈ ಓವರ್‍ನಲ್ಲಿ ಧೋನಿ ಮತ್ತು ಯುವಿ 24 ರನ್ ಸೊರೆಗೈದರು. ಉತ್ತಮವಾಗಿ ಆಡುತ್ತಿದ್ದ ಯುವರಾಜ್ ಸಿಂಗ್ 27 ರನ್( 10 ಎಸೆತ, 1 ಬೌಂಡರಿ,1 ಸಿಕ್ಸರ್) ಗಳಿಸಿದ್ದಾಗ ಮಿಲ್ಸ್ ಎಸೆದ ಸ್ಲೋ ಬಾಲಿಗೆ ಕೀಪರ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಇವರಿಬ್ಬರು 28 ಎಸೆತದಲ್ಲಿ 57 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 170 ರನ್‍ಗಳ ಗಡಿ ದಾಟಿಸಿದರು.

    ಧೋನಿ 56 ರನ್(36 ಎಸೆತ,5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ, 11 ರನ್(4 ಎಸೆತ, 1 ಸಿಕ್ಸರ್) ಗಳಿಸಿದ್ದ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಕೊನೆಯ ಬಾಲ್‍ನಲ್ಲಿ ರನ್ ಔಟಾದರು. ಕೊನೆಯಲ್ಲಿ ರಿಶಬ್ ಪಂತ್ 6 ರನ್ ಗಳಿಸಿ ಔಟಾಗದೇ ಉಳಿದರು.

     12 ಸಿಕ್ಸರ್, 11 ಬೌಂಡರಿ ಸಿಡಿದರೆ, ಇತರೇ ರೂಪದಲ್ಲಿ 15 ರನ್ ಟೀಂ ಇಂಡಿಯಾಗೆ ಬಂತು.

    ಭಾರತದ ರನ್ ಏರಿದ್ದು ಹೀಗೆ:
    50 ರನ್ – 5.5 ಓವರ್
    100 ರನ್ – 12.1 ಓವರ್
    150 ರನ್ – 16.5 ಓವರ್
    200 ರನ್ – 19.5 ಓವರ್
    202 ರನ್ – 20 ಓವರ್

  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಭಾರತ-ಇಂಗ್ಲೆಂಡ್ ಟಿ20 ಫೈನಲ್

    – ಭಾರತ ಗೆದ್ರೆ ಕೊಹ್ಲಿ ಟಿ-20ಗೂ ಸಾಮ್ರಾಟ್

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಇಂಡೋ-ಇಂಗ್ಲೆಂಡ್ ಟಿ-20 ಸರಣಿಯ ಅಂತಿಮ ಹಣಾಹಣಿ ನಡೆಯಲಿದೆ. 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿರೋದ್ರಿಂದ ಜಿದ್ದಾಜಿದ್ದಿನ ಹೋರಾಟ ನಡೆಯೋದಂತೂ ಸತ್ಯ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಜಯಿಸಿದ ಕೊಹ್ಲಿ ಮೂರೂ ಪ್ರಕಾರದ ಪಂದ್ಯಗಳಿಗೆ ನಾಯಕರಾದ ಮೇಲೆ ಏಕದಿನ ಸರಣಿಯನ್ನೂ ಬಾಚಿಕೊಂಡು ಈಗ ಟಿ-20 ಮೇಲೂ ಕಣ್ಣಿಟ್ಟಿದ್ದಾರೆ. ಟೀಂ ಇಂಡಿಯಾ ಗೆದ್ರೆ ಆಂಗ್ಲರ ಭಾರತ ಪ್ರವಾಸ `ಹೋದ ಪುಟ್ಟಾ ಬಂದ ಪುಟ್ಟ’ ಎಂಬಂತಾಗುತ್ತೆ. ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

    ಆರ್‍ಸಿಬಿ ನಾಯಕರಾಗಿರೋ ಹಾಗೂ ಟಿ-20 ನಾಯಕರಾಗಿ ಆಯ್ಕೆಯಾದ ಬಳಿಕ ವಿರಾಟ್ ಕೊಹ್ಲಿಗೆ ಬೆಂಗಳೂರಿನಲ್ಲಿ ಇದೇ ಮೊದಲ ಪಂದ್ಯವಾಗಿದೆ. ಹೀಗಾಗಿ ನೆಚ್ಚಿನ ನಾಯಕನ ಆಟದ ಜೊತೆಗೆ ಟೀಂ ಇಂಡಿಯಾದ ಆಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • ಬಜೆಟ್ 2017: ಜನರ ನಿರೀಕ್ಷೆಗಳೇನು?

    ನೋಟ್ ಬ್ಯಾನ್ ಮಾಡಿದ ಬಳಿಕ ಮೋದಿ ಸರ್ಕಾರದ ಬಜೆಟ್ ಮೇಲೆ ಜನರಿಗೆ ಭಾರೀ ನಿರೀಕ್ಷೆ ಇದೆ. ಹಾಗಾದ್ರೆ ಮೋದಿ ಡ್ರೀಮ್ ಬಜೆಟ್‍ನಲ್ಲಿ ಅರುಣ್ ಜೇಟ್ಲಿ ಅವರಿಂದ ಜನರ ನಿರೀಕ್ಷೆಗಳೇನಿರಬಹುದು ಎಂಬುದರ ವಿವರ ಇಲ್ಲಿದೆ.

    ಜಿಎಸ್‍ಟಿ ಬಜೆಟ್
    – ಒಂದೇ ರಾಷ್ಟ್ರ, ಒಂದೇ ತೆರಿಗೆಗೆ ಬಜೆಟ್‍ನಲ್ಲಿ ಮೊದಲ ಒತ್ತು
    – ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ ಮಸೂದೆ ಜಾರಿ
    – ಬಜೆಟ್‍ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟ ನಕಾಶೆ ಸಿದ್ಧ
    – ಕೇಂದ್ರ ಸರ್ಕಾರ-ರಾಜ್ಯ ಸರ್ಕಾರಗಳ ನಡುವೆ ತೆರಿಗೆಗಳ ಹಂಚಿಕೆ
    – ಜಿಎಸ್‍ಟಿ ಜಾರಿಯಿಂದ ರಾಜ್ಯಗಳಿಗಾಗುವ ನಷ್ಟ ಭರಿಸಲು ಸಂಪನ್ಮೂಲ ಕ್ರೋಢೀಕರಣ

    – ಜಿಎಸ್‍ಟಿ ಜಾರಿಯಾಗಬಹುದಾದ ಹಿನ್ನೆಲೆಯಲ್ಲಿ ಸೇವಾ ತೆರಿಗೆ ಹೆಚ್ಚಳ
    – ಶೇಕಡಾ 16-18ರ ನಡುವೆ ಸೇವಾ ತೆರಿಗೆ ವಿಧಿಸುವ ಸಾಧ್ಯತೆ
    – ಹೋಟೆಲ್, ಮನರಂಜನೆ, ಔಟಿಂಗ್ ದುಬಾರಿಯಾಗುವುದು ನಿಶ್ಚಿತ
    – ಸಿಗರೇಟ್, ಸ್ಪೋಟ್ರ್ಸ್ ಯುಟಿಲಿಟಿ ವಾಹನಗಳು ಮತ್ತಷ್ಟು ದುಬಾರಿ

    – ಆಹಾರ ಪದಾರ್ಥಗಳಿಗೆ ಜಿಎಸ್‍ಟಿಯಿಂದ ವಿನಾಯಿತಿ
    – ಚಿನ್ನದ ಮೇಲಿನ ಕಸ್ಟಂ ಸುಂಕ ಇಳಿಕೆ ಸಾಧ್ಯತೆ

    ಆದಾಯ ತೆರಿಗೆ
    – ವಿನಾಯಿತಿ ಮಿತಿಯನ್ನು ಕನಿಷ್ಠ 4 ಲಕ್ಷಕ್ಕೆ ಏರಿಸಬೇಕು
    – ಪ್ರಸ್ತುತ 2.50 ಲಕ್ಷ ರೂ. ವಿನಾಯಿತಿ ಇದೆ
    – ಗೃಹ ಸಾಲಗಳಿಗೆ ಪಾವತಿಸುವ ಬಡ್ಡಿ ವಿನಾಯಿತಿ ಮಿತಿಯನ್ನು 1.50 ಲಕ್ಷದಿಂದ 3 ಲಕ್ಷಕ್ಕೆ ಏರಿಸಬೇಕು
    – ಸೆಕ್ಷನ್80 ಸಿ ಅಡಿ 1.5 ಲಕ್ಷದವರೆಗೆ ಇರುವ ತೆರಿಗೆ ಕಡಿತ ಮಿತಿಯನ್ನು ಕನಿಷ್ಠ 3 ಲಕ್ಷಕ್ಕೆ ಹೆಚ್ಚಿಸುವುದು

    – ಎನ್‍ಪಿಎಸ್ [ನ್ಯಾಷನಲ್ ಪೆನ್ಷನ್ ಸ್ಕೀಮ್]ಗೆ ತೆರಿಗೆ ವಿನಾಯಿತಿ
    – ಈಗ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಿಂಪಡೆದ ಹಣಕ್ಕೆ ಶೇ.60 ತೆರಿಗೆ ಇದೆ
    – ಪಿಎಫ್‍ಗೆ ಹೋಲಿಸಿದರೆ ಇದು ದುಬಾರಿ
    – ಜೊತೆಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು
    – ಕಾರ್ಪೋರೇಟ್ ತೆರಿಗೆ ಇಳಿಕೆ ಸಾಧ್ಯತೆ

    ಗೃಹ
    – ಮನೆ ಬಾಡಿಗೆ, ವೈದ್ಯಕೀಯ ಸೇವೆ ಇತ್ಯಾದಿ ಅಂಶಗಳು ಹಿಂದೆ ನಿಗದಿಯಾಗಿದ್ದು ಇವುಗಳ ಮಿತಿಯನ್ನು ಹೆಚ್ಚಿಸಬೇಕು
    – ಎಚ್‍ಆರ್‍ಎ ಮಿತಿ ಕಳೆದ ಬಜೆಟ್‍ನಲ್ಲಿ 24 ಸಾವಿರದಿಂದ 60 ಸಾವಿರಕ್ಕೆ ಏರಿಸಲಾಗಿತ್ತು. ಈ ಮಿತಿಯನ್ನು ಮತ್ತಷ್ಟು ಏರಿಸಬೇಕು
    – ಪ್ರಧಾನಮಂತ್ರಿ ಬಡವರ ಕಲ್ಯಾಣ ಯೋಜನೆಯಡಿ ವಸತಿ ಯೋಜನೆಗೆ ಒತ್ತು
    – 9 ಲಕ್ಷ ರೂಪಾಯಿವರೆಗಿನ ಗೃಹ ಸಾಲಕ್ಕೆ ಶೇಕಡಾ 3ರಷ್ಟು ಬಡ್ಡಿ ವಿನಾಯಿತಿ
    – 12 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇಕಡಾ 4ರಷ್ಟು ಬಡ್ಡಿ ವಿನಾಯಿತಿ

    ಕ್ಯಾಶ್‍ಲೆಸ್‍ಗೆ ಉತ್ತೇಜನ
    – ನಗದು ರಹಿತ ಅರ್ಥವ್ಯವಸ್ಥೆಗೆ ಅರುಣ್ ಜೇಟ್ಲಿ ಬಜೆಟ್‍ನಲ್ಲಿ ಪ್ರಮುಖ ಆದ್ಯತೆ
    – ಕಾರ್ಡ್ ಪೇಮೆಂಟ್, ಟೋಲ್ ಪಾವತಿಗೆ ಡಿಸ್ಕೌಂಟ್
    – ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರದ ಬೆಲೆ ಕಡಿಮೆಯಾಗಬೇಕು (ಈಗ ಒಂದು ಯಂತ್ರದ ಬೆಲೆ 8 ಸಾವಿರ ರೂ. ಇದೆ)
    – ಡಿಜಿಟಲ್ ವ್ಯಾಲೆಟ್ ಬಳಕೆಗೆ ವಿಶೇಷ ವಿಮೆ ಸೌಲಭ್ಯ
    – ಬ್ಯಾಂಕ್‍ನಿಂದ 50 ಸಾವಿರ ರೂಪಾಯಿಗಿಂತ ಹೆಚ್ಚು ಡ್ರಾ ಮಾಡಿದರೆ ತೆರಿಗೆ
    – ದೊಡ್ಡ ಮೊತ್ತದ ವ್ಯವಹಾರಗಳಲ್ಲಿ ನಗದು ಚಲಾವಣೆ ಮೇಲೆ ಸಂಪೂರ್ಣ ನಿರ್ಬಂಧ
    – ಸ್ಮಾರ್ಟ್‍ಫೋನ್ ಖರೀದಿಗೆ ಸಣ್ಣ ವ್ಯಾಪಾರಸ್ಥರಿಗೆ 1 ಸಾವಿರ ರೂಪಾಯಿ ಸಬ್ಸಿಡಿ
    – ಸರ್ಕಾರಿ ಸಂಸ್ಥೆಗಳಿಗೆ ಡಿಜಿಟಲ್ ಮೂಲಕವಷ್ಟೇ ಪಾವತಿಗೆ ಅವಕಾಶ
    – ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಸಮಿತಿ ಶಿಫಾರಸ್ಸಿಗೆ ಬಜೆಟ್‍ನಲ್ಲಿ ಸ್ಥಾನ

    ಆಧಾರ್/ಪ್ಯಾನ್ ಕಾರ್ಡ್
    – 50 ಸಾವಿರ ರೂಪಾಯಿಗಿಂತ ಮೇಲ್ಪಟ್ಟ ಖರೀದಿಗೆ ಪ್ಯಾನ್ ಕಡ್ಡಾಯ
    – ಈಗಿರುವ 2 ಲಕ್ಷ ರೂಪಾಯಿ ಮಿತಿ 50 ಸಾವಿರಕ್ಕೆ ಇಳಿಕೆ
    – ಪ್ಯಾನ್ ಅಥವಾ ಆಧಾರ್ ಕಾರ್ಡ್ ದಾಖಲೆ ನೀಡಿದರಷ್ಟೇ ಖರೀದಿಗೆ ಅವಕಾಶ
    – ಚಿನ್ನ ಖರೀದಿಗೂ ಪ್ಯಾನ್, ಆಧಾರ್ ಕಡ್ಡಾಯಗೊಳಿಸಲಿರುವ ಕೇಂದ್ರ ಸರ್ಕಾರ
    – ರೈಲ್ವೆಯಲ್ಲಿ ರಿಯಾಯಿತಿ ದರದಲ್ಲಿ ಟಿಕೆಟ್‍ಗೆ ಆಧಾರ್ ಕಾರ್ಡ್ ಕಡ್ಡಾಯ

    ಕೃಷಿ/ ರೈತ
    – ಬರದಿಂದ ಕಂಗೆಟ್ಟ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ
    – ನೀರಾವರಿ ವ್ಯವಸ್ಥೆಗೆ ಹೆಚ್ಚಿನ ಹಣ ಒದಗಿಸಬೇಕು
    – ಸಾಲ ಪಾವತಿ ಮಾಡಲು ಅವಧಿ ವಿಸ್ತರಣೆ
    – ಕಡಿಮೆ ಬೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ
    – ಕೃಷಿ ಕ್ಷೇತ್ರಕ್ಕೆ ಅರುಣ ಆಯ್ಯವ್ಯಯದಲ್ಲಿ ಬಂಪರ್
    – ಸಾಲ ವಿತರಣೆ ಗುರಿ 9 ಲಕ್ಷ ಕೋಟಿ ರೂ. ನಿಂದ 10 ಲಕ್ಷ ಕೋಟಿ ರೂ.ಗೆ ಹೆಚ್ಚಳ
    – ಬೆಳೆ ವಿಮೆ ಯೋಜನೆಗೆ 10 ಸಾವಿರ ಕೋಟಿ ರೂಪಾಯಿ ನಿಧಿ

    ರಿಯಲ್ಟಿ ಕ್ಷೇತ್ರ
    – ರಿಯಾಲ್ಟಿ ಕ್ಷೇತ್ರಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕು
    – ಸ್ಥಾನ ನೀಡದೇ ಇದ್ದ ಕಾರಣ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದ್ದಾರೆ
    – ಮನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತಿಲ್ಲ
    – ಅಗ್ಗದ ದರದಲ್ಲಿ ಗೃಹ ನಿರ್ಮಾಣಕ್ಕೆ ತೆರಿಗೆ ವಿನಾಯಿತಿ ಘೋಷಣೆ ಸಾಧ್ಯತೆ

    ಎಫ್‍ಎಂಸಿಜಿ
    – ನೋಟ್ ನಿಷೇಧದಿಂದಾಗಿ ಎಫ್‍ಎಂಸಿಜಿಗೆ ಹೊಡೆತ ಬಿದ್ದಿದೆ
    – ಎಫ್‍ಎಂಸಿಜಿ ಕ್ಷೇತ್ರ ತೆರಿಗೆ ಮಿತಿಯನ್ನು ಹೆಚ್ಚಿಸಬೇಕು

    ಅಟೋಮೊಬೈಲ್
    – ನೋಟ್ ಬ್ಯಾನ್ ಬಳಿಕ ಭಾರೀ ಹೊಡೆತ ಬಿದ್ದಿದೆ
    – ಎಸ್‍ಯುವಿ ಖರೀದಿ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಬೇಕು
    – ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾರು ದರ ದುಬಾರಿ ಸಾಧ್ಯತೆ

    ಸ್ಟಾರ್ಟ್ ಅಪ್ ಕಂಪೆನಿ
    – ಕನಿಷ್ಠ 5 ವರ್ಷ ತೆರಿಗೆ ವಿನಾಯಿತಿ ಘೋಷಿಸಬೇಕು
    – ಈಗ ಮೊದಲ 3 ವರ್ಷ ಲಾಭಕ್ಕೆ ತೆರಿಗೆ ವಿನಾಯಿತಿ ಇದೆ

    ವಿದ್ಯಾರ್ಥಿಗಳು
    – ಉನ್ನತ ಶಿಕ್ಷಣದ ಶುಲ್ಕ ಕಡಿಮೆಯಾಗಬೇಕು (ಎಂಬಿಬಿಎಸ್, ಐಐಟಿ ಇತ್ಯಾದಿ)
    – ಗ್ಯಾಜೆಟ್‍ಗಳ ಬೆಲೆ ಕಡಿಮೆ ಆಗಬೇಕು
    – ಸ್ಕಾಲರ್‍ಶಿಪ್ ಹಣ ಜಾಸ್ತಿ ಮಾಡಬೇಕು

    ಮಹಿಳೆಯರು
    – ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಬೇಕು
    – ಎಲ್‍ಪಿಜಿ ಬೆಲೆ ಇಳಿಕೆಯಾಗಬೇಕು
    – ಚಿನ್ನದ ಮೇಲಿನ ಹೂಡಿಕೆಗೆ ಹೆಚ್ಚಿನ ಬಡ್ಡಿ ನೀಡಬೇಕು

    ರೈಲು
    – ರೈಲು ಖಾಸಗೀಕರಣಕ್ಕೆ ಈ ಬಾರಿ ಪ್ರಮುಖ ಒತ್ತು
    – ಖಾಸಗಿ ವಲಯದ ಜೊತೆ ಸೇರಿ ಹಳಿ, ಸ್ಟೇಷನ್‍ಗಳ ಅಭಿವೃದ್ಧಿ
    – ಹಳಿಗಳ ಮೇಲೆ ಓಡಲಿದೆ ಖಾಸಗಿ ಕಂಪನಿಗಳ ರೈಲು
    – ವಿಮಾನಯಾನ ಮಾದರಿಯಲ್ಲೇ ಖಾಸಗಿ ರೈಲು ಓಡಾಟಕ್ಕೆ ಅನುಮತಿ
    – ಇಂಟರ್ ಸಿಟಿ ರೈಲು ಸೇವೆಯನ್ನು ಆರಂಭಿಸಬೇಕು
    – ಹೆಚ್ಚು ಪ್ರಯಾಣಿಕರು ಸಂಚರಿಸುವ ಕಡೆ ಹಳಿ ಡಬ್ಲಿಂಗ್
    – ನಗರ ಅಲ್ಲದೇ ಇತರ ರೈಲ್ವೇ ನಿಲ್ದಾಣಗಳಲ್ಲೂ ವೈಫೈ ವ್ಯವಸ್ಥೆ
    – ದೇಶದ ಎಲ್ಲ ಜಿಲ್ಲೆಗಳಲ್ಲಿ ರೈಲು ಸಂಚರಿಸಬೇಕು (ಸದ್ಯ ಕೊಡಗಿಗೆ ರೈಲಿಲ್ಲ)
    – ಸಬ್ಸಿಡಿ ದರದಲ್ಲಿ ಟಿಕೆಟ್ ಸೌಲಭ್ಯ ಬಹುತೇಕ ಕೊನೆ

    ಪೆಟ್ರೋಲ್/ಡೀಸೆಲ್/ ಗ್ಯಾಸ್
    – ಅರುಣ್ ಜೇಟ್ಲಿ ಬಜೆಟ್‍ಗೆ ಕಚ್ಚಾತೈಲ ದರ ಏರಿಕೆ ಗ್ರಹಣ
    – ಬ್ಯಾರೆಲ್‍ಗೆ 55 ರಿಂದ 60 ಡಾಲರ್‍ನಷ್ಟು ದರವಿದ್ದರೆ 26 ಸಾವಿರ ಕೋಟಿ ರೂ.
    – ಬ್ಯಾರೆಲ್‍ಗೆ 65 ಡಾಲರ್‍ಗಿಂತ ಹೆಚ್ಚಾದರೆ ಗ್ರಾಹಕರಿಗೆ ಇನ್ನಷ್ಟು ಹೊರೆ ನಿಶ್ಚಿತ
    – ದೇಶೀಯ ಕಚ್ಚಾತೈಲ ಉದ್ಯಮಕ್ಕೆ ಸೆಸ್ ಕಡಿತ ಸೇರಿದಂತೆ ತೆರಿಗೆ ರಿಯಾಯಿತಿ
    – ಶೇಕಡಾ 20ರಷ್ಟು ಮೌಲ್ಯ ವರ್ಧಿತ ತೆರಿಗೆ ಇಳಿಕೆ

    ಖಾಸಗೀಕರಣ
    – ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ