Tag: india

  • ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್

    ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ವೀವ್ ಸ್ಮಿತ್ ಭರ್ಜರಿ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾ ಭಾರೀ ಮೊತ್ತವನ್ನು ಪೇರಿಸುವ ಸೂಚನೆ ನೀಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಆಸ್ಟ್ರೇಲಿಯಾ ಮೊದಲ ದಿನದ ಆಟಕ್ಕೆ4 ವಿಕೆಟ್ ನಷ್ಟಕ್ಕೆ  90 ಓವರ್‍ಗಳಲ್ಲಿ 299 ರನ್ ಗಳಿಸಿದೆ.

    ಸ್ಮಿತ್ ಅಜೇಯ 117 ರನ್(244 ಎಸೆತ, 13 ಬೌಂಡರಿ) ಗ್ಲೇನ್ ಮ್ಯಾಕ್ಸ್ ವೆಲ್ ಅಜೇಯ 82 ರನ್( 147 ಎಸೆತ, 5 ಬೌಂಡರಿ, 2 ಸಿಕ್ಸರ್)ಗಳಿಂದಾಗಿ ಆಸ್ಟ್ರೇಲಿಯಾ ರನ್ 300ರ ಗಡಿಯ ಹತ್ತಿರ ಬಂದು ನಿಂತಿದೆ.

    227 ಎಸೆತದಲ್ಲಿ ಸ್ಮಿತ್ ತಮ್ಮ ಟೆಸ್ಟ್ ಬಾಳ್ವೆಯ 19ನೇ ಶತಕವನ್ನು ಹೊಡೆದರು. ಮ್ಯಾಟ್ ರೇನ್‍ಷಾ 44 ರನ್(69 ಎಸೆತ, 7 ಬೌಂಡರಿ), ಡೇವಿಡ್ ವಾರ್ನರ್ 19 , ಮಾರ್ಷ್ 2, ಹ್ಯಾಂಡ್ಸ್ ಕಾಂಬ್ ಕಾಂಬ್ 19 ರನ್‍ಗಳಿಸಿ ಔಟಾದರು.

    ಭಾರತದ ಪರವಾಗಿ ಉಮೇಶ್ ಯಾದವ್ 2, ಆರ್ ಅಶ್ವಿನ್ ಮತ್ತು ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು. 140 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸ್ಮಿತ್ ಮತ್ತು ಮ್ಯಾಕ್ಸ್‍ವೆಲ್ 47.4 ಓವರ್‍ಗಳಲ್ಲಿ ಮುರಿಯದ 5ನೇ ವಿಕೆಟ್‍ಗೆ 159 ರನ್‍ಗಳ ಜೊತೆಯಾಟವಾಡಿದ ಕಾರಣ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ವಿಕೆಟ್ ಉಳಿಸಿಕೊಂಡು ಮೇಲುಗೈ ಸಾಧಿಸಿದೆ.

    ಬೈ 4, ಲೆಗ್‍ಬೈ 11, ನೋಬಾಲ್ 1 ರನ್ ನೀಡುವ ಮೂಲಕ ಇತರೇ ರೂಪದಲ್ಲಿ ಭಾರತ 16 ರನ್‍ಗಳನ್ನು ನೀಡಿದೆ.

  • ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!

    ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!

    ಇಸ್ಲಾಮಾಬಾದ್: ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿರೋದಕ್ಕೆ ಪಾಕಿಸ್ತಾನದ 11ರ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಕೋರಿದ್ದಾಳೆ.

    ಪಾಕಿಸ್ತಾನದ 11ರ ಹರೆಯದ ಅಖೀದತ್ ನವೀದ್ ಎಂಬಾಕೆ ಪತ್ರದ ಮೂಲಕ ಪ್ರಧಾನಿಗೆ ವಿಶ್ ಮಾಡಿದ್ದಾಳೆ. ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಶಾಂತಿಯ ಅಗತ್ಯವಿದ್ದು, ಮೋದಿ ಅವರಿಂದ ಈ ಕೆಲಸ ಶೀಘ್ರವಾಗಿ ಆಗುತ್ತದೆ ಎಂದು ಹೇಳಿದ್ದಾಳೆ.

    ಪತ್ರದಲ್ಲೇನಿದೆ?: `ಜನರ ಮನಸ್ಸನ್ನು ಗೆಲ್ಲುವುದು ಅದ್ಭುತವಾದ ಕೆಲಸ ಎಂದು ನನ್ನ ತಂದೆ ಹೇಳುತ್ತಿದ್ದರು. ಅಂತೆಯೇ ನೀವು ಈಗಾಗಲೇ ಭಾರತೀಯರ ಮನ ಗೆದ್ದಿದ್ದೀರಿ. ಹೀಗಾಗಿ ನೀವು ಉತ್ತರಪ್ರದೇಶದಲ್ಲಿ ಭರ್ಜರಿ ಜಯ ಗಳಿಸಿದ್ದೀರಿ. ಅಂತೆಯೇ ಮತ್ತಷ್ಟು ಭಾರತೀಯರು ಹಾಗೂ ಪಾಕಿಸ್ತಾನ ಜನತೆಯ ಹೃದಯಗಳನ್ನು ಗೆಲ್ಲಬೇಕಾದರೆ, ಉಭಯ ರಾಷ್ಟ್ರಗಳ ನಡುವೆ ಸ್ನೇಹ ಮತ್ತು ಶಾಂತಿಯನ್ನು ಕಾಪಾಡಬೇಕು. ಈ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯ ಸೇತುವೆಯನ್ನು ನಿರ್ಮಾಣ ಮಾಡಿ. ನಾವು ಬುಲೆಟ್‍ಗಳನ್ನು ಖರೀದಿ ಮಾಡುವ ಬದಲಾಗಿ ಪುಸ್ತಕಗಳನ್ನು ಖರೀದಿ ಮಾಡಲು ನಿರ್ಧರಿಸೋಣ. ಪಿಸ್ತೂಲ್‍ಗಳನ್ನು ಖರೀದಿ ಮಾಡೋ ಬದಲು ಬಡವರಿಗಾಗಿ ಔಷಧಿಗಳನ್ನು ಖರೀದಿ ಮಾಡೋಣವೆಂದು ನಿರ್ಧಾರ ಕೈಗೊಳ್ಳೋಣ ಅಂತಾ ಅಖೀದತ್ ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾಳೆ.

    ಪತ್ರದ ಕೊನೆಯಲ್ಲಿ ಶಾಂತಿ ಮತ್ತು ಸಂಘರ್ಷ ಯಾವುದು ಬೇಕು ಎಂಬ ಆಯ್ಕೆ ಎರಡೂ ರಾಷ್ಟ್ರಗಳ ಕೈಯಲ್ಲಿದೆ ಎಂದು ಹೇಳಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿಗೆ ಶುಭಾಶಯ ತಿಳಿಸಿದ್ದಾಳೆ.

     

  • ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ?

    ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ?

    ನವದೆಹಲಿ: ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಭಾರೀ ಇಳಿಕೆಯಾಗುವ ಸಾಧ್ಯತೆಯಿದೆ. ಭಾರತೀಯ ತೈಲ ಕಂಪೆನಿಗಳು ಮಾರ್ಚ್ 15ರಂದು ದರವನ್ನು ಪರಿಷ್ಕರಿಸಲಿದ್ದು, ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಅಂದಾಜು 2 ರೂ.ನಿಂದ 2.50 ರೂ.ರವರೆಗೆ ಇಳಿಕೆ ಆಗುವ ಸಾಧ್ಯತೆಯಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 56 ಡಾಲರ್‍ನಿಂದ(3,700 ರೂ.) 54 ಡಾಲರ್‍ಗೆ (3,570 ರೂ.) ಇಳಿಕೆಯಾಗಿದ ಹಿನ್ನೆಲೆಯಲ್ಲಿ ಭಾರತದಲ್ಲೂ ತೈಲಗಳ ದರ ಇಳಿಕೆಯಾಗುವ ಸಾಧ್ಯತೆಯಿದೆ.

    ಪ್ರತಿ 15 ದಿನಗಳಿಗೊಮ್ಮೆ ಭಾರತೀಯ ತೈಲ ಕಂಪೆನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವನ್ನು ನೋಡಿಕೊಂಡು ಬೆಲೆಯನ್ನು ಪರಿಷ್ಕರಿಸುತ್ತಿರುತ್ತವೆ. ಆದರೆ ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆಗೆ ಮುಂದಾಗಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗಿತ್ತು.

    ಜನವರಿ 15ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 42 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 1.03 ಪೈಸೆ ಏರಿಕೆಯಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.28 ರೂ. ಇದ್ದರೆ, ಡೀಸೆಲ್ ಬೆಲೆ 63.16 ರೂ. ಇದೆ.

  • ಸತ್ಯನಾರಾಯಣ ಪೂಜೆಗೆ ರಂಗೋಲಿ ಹಾಕಿದ್ದು ಯಾಕೆ ಎಂದು ಯುಎಸ್ ಮಹಿಳೆ ಕಿರಿಕ್!

    ಸತ್ಯನಾರಾಯಣ ಪೂಜೆಗೆ ರಂಗೋಲಿ ಹಾಕಿದ್ದು ಯಾಕೆ ಎಂದು ಯುಎಸ್ ಮಹಿಳೆ ಕಿರಿಕ್!

    – ನೀವೇನ್ಮಾಡ್ತಿದ್ದೀರೋ ಅದನ್ನ ಇಲ್ಲಿಗೇ ನಿಲ್ಲಿಸಿ ಎಂದು ಗಲಾಟೆ
    – ಭಾರತೀಯರ ಮೇಲೆ ಅಮೆರಿಕ ಮಹಿಳೆಯ ಆವಾಜ್

    ಆಶ್ವತ್ಥ್ ಸಂಪಾಜೆ
    ಬೆಂಗಳೂರು: ಭಾರತೀಯರ ಮೇಲೆ ಅಮೆರಿಕದಲ್ಲಿ ಜನಾಂಗೀಯ ನಿಂದನೆ ಹೊಸದೇನಲ್ಲ. ಈಗ ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಸತ್ಯನಾರಾಯಣ ಪೂಜೆಗೆ ರಂಗೋಲಿ ಹಾಕಿದ್ದು ಯಾಕೆ ಎಂದು ಅಮೆರಿಕದ ಮಹಿಳೆಯೊಬ್ಬಳು ಭಾರತೀಯರ ಮೇಲೆ ಆವಾಜ್ ಹಾಕಿದ್ದಾಳೆ.

    ಇಲಿನಾಯ್ಸ್ ಓಕ್‍ಬ್ರೂಕ್ ಎಂಬಲ್ಲಿ ಭಾರತೀಯರೊಬ್ಬರು ಮಾರ್ಚ್ 12ರಂದು ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು. ಈ ಪೂಜೆಗಾಗಿ ಮನೆಯ ಮುಂದೆ ದೊಡ್ಡ ರಂಗೋಲಿ ಹಾಕಿದ್ದರು. ಈ ರಂಗೋಲಿ ಹಾಕಿದ್ದನ್ನು ನೋಡಿ ಕಾರಿನಲ್ಲಿ ಬಂದ ಮಹಿಳೆ ಮನೆಯ ಬಾಗಿಲನ್ನು ಬಡಿದು ರಂಗೋಲಿ ಹಾಕಿದ್ದು ಯಾಕೆ ಎಂದು ಪ್ರಶ್ನಿಸಿದ್ದಾಳೆ. ಅಷ್ಟೇ ಅಲ್ಲದೇ ನೀವು ಇಲ್ಲಿ ಏನು ಮಾಡುತ್ತಿದ್ದೀರಿ ಅದನ್ನು ನಿಲ್ಲಿಸಿ ಎಂದು ಆವಾಜ್ ಹಾಕಿದ್ದಾಳೆ.

    ಈಕೆಯ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸಿದ ಮನೆಯ ಯಜಮಾನ ಬಾಗಿಲನ್ನು ಮುಚ್ಚಿ 911 ನಂಬರ್‍ಗೆ ಕರೆ ಮಾಡಿದ್ದಾರೆ. ಪೊಲೀಸರು ಬರುವವರೆಗೆ ಈಕೆ ಅವರ ಮನೆಯ ಹೊರಗಡೆ ಕಾರನ್ನು ಪಾರ್ಕ್ ಮಾಡಿದ್ದಾಳೆ. ಪೊಲೀಸರು ಬಂದು ವಿಚಾರಣೆ ನಡೆಸಿದ ಬಳಿಕ ಆಕೆ ಅಲ್ಲಿಂದ ತೆರಳಿದ್ದಾಳೆ.

    ಈ ಘಟನೆಯ ಬಗ್ಗೆ ಮೈಸೂರು ಮೂಲದ ಅಮೆರಿಕದಲ್ಲಿ ವೈದ್ಯರಾಗಿರುವ ಉಷಾ ಕೋಲ್ಪೆ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ, 25 ವರ್ಷ ನಾನು ಅಮೆರಿಕದಲ್ಲಿ ಇದ್ದೇನೆ. ಇದುವರೆಗೆ ನನಗೆ ಈ ರೀತಿಯ ಶಾಕಿಂಗ್ ಅನುಭವ ಆಗಿಲ್ಲ ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಷಾ ಕೋಲ್ಪೆ, ಪೊಲೀಸರು ಈಗ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ ಎನ್ನುವ ವಿಚಾರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ. ಉಷಾ ಅವರ ಈ ಫೇಸ್ ಬುಕ್  ಪೋಸ್ಟ್ ಗೆ ಬಹಳಷ್ಟು ಜನ ಕಮೆಂಟ್ ಹಾಕಿದ್ದು, ಪೊಲೀಸರು ಯಾಕೆ ಅವಳನ್ನು ಕೂಡಲೇ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಫೆ.22ರಂದು ಕ್ಯಾನ್ಸಾಸಾದ ಬಾರ್‍ನಲ್ಲಿ ಅಮೆರಿಕದ ನಿವೃತ್ತ ಯೋಧನೊಬ್ಬ, ದೇಶ ಬಿಟ್ಟು ತೊಲಗಿ ಎಂದು ಚೀರಾಡಿ ಟೆಕ್ಕಿ ಶ್ರೀನಿವಾಸ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಿದ್ದ. ಇದಾದ ನಂತರ ಮಾರ್ಚ್ 4ರಂದು ವ್ಯಾಪಾರಿ ಹರ್ಣೀಶ್ ಪಟೇಲ್ ಅವರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ.

  • ಬಿಜೆಪಿ ಅಭ್ಯರ್ಥಿಯೇ ರಾಷ್ಟ್ರಪತಿ ಆಗ್ತಾರಾ? ಎಷ್ಟು ಮತ ಬೇಕು? ಈಗ ಎಷ್ಟು ಮತ ಇದೆ?

    ಬಿಜೆಪಿ ಅಭ್ಯರ್ಥಿಯೇ ರಾಷ್ಟ್ರಪತಿ ಆಗ್ತಾರಾ? ಎಷ್ಟು ಮತ ಬೇಕು? ಈಗ ಎಷ್ಟು ಮತ ಇದೆ?

    ನವದೆಹಲಿ: ಉತ್ತರಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಗೆದ್ದಿರುವ ಬಿಜೆಪಿ ವಿಧಾನಸಭೆಯಲ್ಲಿ ಪಕ್ಷದ ಸ್ಥಾನಗಳನ್ನಷ್ಟೇ ಹೆಚ್ಚಿಕೊಂಡಿಲ್ಲ. ಬದಲಾಗಿ ಮುಂಬರುವ ರಾಷ್ಟ್ರಪತಿ ಚುನಾವಣೆಯ ಮೇಲೂ ಬಿಜೆಪಿಯ ಈ ಗೆಲುವು ಭಾರೀ ಪ್ರಭಾವ ಬೀರಲಿದೆ.

    ಉತ್ತರಪ್ರದೇಶದಲ್ಲಿ 325 ಸ್ಥಾನ, ಉತ್ತರಾಖಂಡ್‍ನಲ್ಲಿ 56 ಸ್ಥಾನ, ಮಣಿಪುರದಲ್ಲಿ 21, ಪಂಜಾಬ್‍ನಲ್ಲಿ 18 ಹಾಗೂ ಗೋವಾದಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‍ಡಿಎ ರಾಷ್ಟಪತಿ ಚುನಾವಣೆಗೆ ಹಾದಿ ಸುಗಮಗೊಳಿಸಿಕೊಂಡಿದೆ. ರಾಷ್ಟ್ರಪತಿ ಆಯ್ಕೆಗೆ ಮೋದಿ ಪಡೆ ಬಹುಮತದ ಸನಿಹದಲ್ಲಿ ಬಂದು ನಿಂತಿದೆ. ಜುಲೈಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವಧಿ ಅಂತ್ಯವಾಗುತ್ತಿರುವ ಹನ್ನೆಲೆಯಲ್ಲಿ ರಾಷ್ಟ್ರಪತಿ ಆಯ್ಕೆಯ ಲೆಕ್ಕಾಚಾರ ಗರಿಗೆದರಿದೆ.

    ಎಷ್ಟು ಮತ ಬೇಕು?
    ದೇಶದ ರಾಷ್ಟ್ರಪತಿಯನ್ನು 29 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಪುದುಚೆರಿ ಹಾಗೂ ರಾಜಧಾನಿ ದೆಹಲಿಯ ಎಲ್ಲಾ ಸಂಸದರು ಹಾಗೂ ಶಾಸಕರನ್ನೊಳಗೊಂಡ ಎಲೆಕ್ಟೋರಲ್ ಕಾಲೇಜ್ ಆಯ್ಕೆ ಮಾಡುತ್ತದೆ. ಎಲೆಕ್ಟೋರಲ್ ಕಾಲೇಜ್‍ನ ಒಟ್ಟು ಮತಗಳ ಸಂಖ್ಯೆ 10,98,882. ಇದರಲ್ಲಿ ರಾಷ್ಟಪತಿ ಆಯ್ಕೆಗೆ ಬೇಕಿರುವುದು 5,49,442 ಮತಗಳು.

    ಎನ್‍ಡಿಎ ಬಳಿ ಎಷ್ಟಿದೆ?
    ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. ಇವರ ಎಲ್ಲ ಮತಗಳು ಸೇರಿದರೆ 10,98,882 ಮತಗಳು ಆಗುತ್ತದೆ. ಹೀಗಾಗಿ ರಾಷ್ಟ್ರಪತಿ ಅಭ್ಯರ್ಥಿ ವಿಜಯಿ ಆಗಲು ಒಟ್ಟು ಮತದ ಅರ್ಧಭಾಗಕ್ಕಿಂತ ಹೆಚ್ಚು ಅಂದರೆ 5,49,442 ಮತಗಳ ಅವಶ್ಯಕತೆಯಿದೆ.

    ಉತ್ತರಪ್ರದೇಶದ ಗೆಲುವಿನಿಂದ ಎಲೆಕ್ಟೋರಲ್ ಕಾಲೇಜ್‍ನಲ್ಲಿ ರಾಜ್ಯದ ಬಿಜೆಪಿ ಮತಗಳ ಸಂಖ್ಯೆ 67,600ಕ್ಕೆ ಏರಿದೆ. ಹೀಗಾಗಿ ಸದ್ಯ ಎನ್‍ಡಿಎ ಬಳಿ ಒಟ್ಟು 5,24,920 ಮತಗಳಿವೆ. ರಾಷ್ಟ್ರಪತಿ ಆಯ್ಕೆಗೆ ಎನ್‍ಡಿಎಗೆ ಕೇವಲ 24,522 ಮತಗಳು ಕಡಿಮೆ ಬೀಳಲಿದೆ.

    ಒಂದು ವೇಳೆ ಬಿಜು ಜನತಾ ದಳ ಹಾಗೂ ಎಐಎಡಿಎಂಕೆ ಪಕ್ಷಗಳು ಬೆಂಬಲ ನೀಡಿದರೆ ಎನ್‍ಡಿಎ ಅಭ್ಯರ್ಥಿಯೇ ರಾಷ್ಟ್ರಪತಿಯಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾಗಲಿದೆ.

    ಇದನ್ನೂ ಓದಿ:ರಾಷ್ಟ್ರಪತಿ ರೇಸ್‍ನಲ್ಲಿ ಇನ್ಫಿ ನಾರಾಯಣಮೂರ್ತಿ!

  • ನಾವು 125 ಕೋಟಿ ಜನರನ್ನು ಜೊತೆಗೆ ಕರೆದುಕೊಂಡು ನವ ಭಾರತವನ್ನು ಮುಂದಕ್ಕೆ ಕರೆದೊಯ್ಯುತ್ತೇವೆ: ಮೋದಿ

    ನಾವು 125 ಕೋಟಿ ಜನರನ್ನು ಜೊತೆಗೆ ಕರೆದುಕೊಂಡು ನವ ಭಾರತವನ್ನು ಮುಂದಕ್ಕೆ ಕರೆದೊಯ್ಯುತ್ತೇವೆ: ಮೋದಿ

    ನವದೆಹಲಿ: ನಾವು 125 ಕೋಟಿ ಜನರನ್ನು ಜೊತೆಗೆ ಕರೆದುಕೊಂಡು ನವ ಭಾರತವನ್ನು ಮುಂದಕ್ಕೆ ಕರೆದೊಯ್ಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಳಿಕ ಭಾನುವಾರ ದೆಹಲಿಯಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಎಲ್ಲ ಪಕ್ಷಗಳು ಭಾರತದ ಅಭಿವೃದ್ಧಿಗೆ ಶ್ರಮಿಸಿದೆ. ಈ ವಿಚಾರವನ್ನು ನಾವು ಮರೆಯುವಂತಿಲ್ಲ. ನಾನು ಚುನಾವಣೆಯ ಬಗ್ಗೆ ಯೋಚನೆ ಮಾಡುವುದಿಲ್ಲ. 2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗುತ್ತದೆ. 2022 ಬರಲು ಇನ್ನೂ 5 ವರ್ಷಗಳಿದೆ. 75 ವರ್ಷದ ಸಂಭ್ರಮದ ವೇಳೆ ಭಾರತ ಯಾವೂದರಲ್ಲೂ ಹಿಂದೆ ಉಳಿಯುವುದಿಲ್ಲ ಎಂದು ತಿಳಿಸಿದರು.

    ಅಭಿವೃದ್ಧಿಯ ವಿಚಾರಗಳಿಗೆ  ಜನ ಮತ ಹಾಕುತ್ತಾರೆ ಎನ್ನುವುದು ಈ ಚುನಾವಣೆಯ ಫಲಿತಾಂಶ ಉತ್ತರ ನೀಡಿದೆ. ಈಗ ಅಭಿವೃದ್ಧಿಯ ಆಂದೋಲನ ಆರಂಭವಾಗಿದ್ದು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುತ್ತೇವೆ. ಸರ್ಕಾರಕ್ಕೆ ಭೇದ ಭಾವ ಮಾಡುವ ಯಾವುದೇ ಹಕ್ಕಿಲ್ಲ. ಸರ್ಕಾರ ಎಲ್ಲರಿಗೂ ಇರುವಂತದ್ದು ಎಂದರು.

    ಮತದಾರರಿಗೆ ಆಭಿನಂದನೆ: ನೀವು ಭರವಸೆ ಇಟ್ಟು ಬಿಜೆಪಿಗೆ ಮತ ನೀಡಿದ್ದೀರಿ. ಟಿವಿಯಲ್ಲಿ ಕಾಣಿಸದ, ಪತ್ರಿಕೆಯಲ್ಲಿ ಸುದ್ದಿ ಬರದೇ ಇರುವ ವ್ಯಕ್ತಿಗಳನ್ನೂ ನೀವು ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು. ಹೊಸದನ್ನು ಕಲಿಯುವುದಿದ್ದರೆ ಕಲಿಯುತ್ತೇವೆ. ಹೊಸ ಅವಕಾಶಗಳು ಸಿಕ್ಕಿದಾಗಲೆಲ್ಲಾ ನವ ಭಾರತ ನಿರ್ಮಾಣಕ್ಕೆ ಸಿಗುವ ಅವಕಾಶ ಕೈ ಬಿಡುವುದಿಲ್ಲ ಎಂದು ಹೇಳಿದರು.

    ಈ ಅಭೂತಪೂರ್ವ ಫಲಿತಾಂಶಕ್ಕೆ ಬರಲು ಕಾರಣರಾದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ತಂಡ ಮತ್ತು ಬಿಜೆಪಿಯ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

  • #IAmNewIndia ಹೊಸ ಭಾರತ ಕಟ್ಟಲು ಪ್ರತಿಜ್ಞೆ ಮಾಡಿ: ನಮೋ ಆಪ್ ಮೂಲಕ ಮೋದಿ ಮನವಿ

    #IAmNewIndia ಹೊಸ ಭಾರತ ಕಟ್ಟಲು ಪ್ರತಿಜ್ಞೆ ಮಾಡಿ: ನಮೋ ಆಪ್ ಮೂಲಕ ಮೋದಿ ಮನವಿ

    ನವದೆಹಲಿ: ಕಳೆದ ದೀಪಾವಳಿಗೆ ಸೈನಿಕರಿಗೆ ಸಂದೇಶ ಕಳುಹಿಸಿ ಎಂದು ದೇಶದ ಜನರಲ್ಲಿ ಕೇಳಿದ್ದ ಪ್ರಧಾನಿ ಮೋದಿ ಈ ಹೋಳಿಯ ಸಂಭ್ರಮದಲ್ಲಿ ಹೊಸ ಭಾರತದ ನಿರ್ಮಾಣಕ್ಕಾಗಿ ಪ್ರತಿಜ್ಞೆಯನ್ನು ಕೈಗೊಂಡು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

    ಈ ಸಂಬಂಧ ನಮೋ ಆಪ್ ಮೂಲಕ ದೇಶವ್ಯಾಪಿ ಪ್ರತಿಜ್ಞಾ ಆಂದೋಲನಕ್ಕೆ ಮೋದಿ ಚಾಲನೆ ನೀಡಿದ್ದಾರೆ. 2022ರ ಸ್ವಾತಂತ್ರ್ಯ ಸಂಭ್ರಮಕ್ಕೆ 75 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಾಟೇಲ್, ಅಂಬೇಡ್ಕರ್ ಕನಸನ್ನು ನನಸು ಮಾಡಿ ಹೊಸ ಭಾರತ ನಿರ್ಮಿಸಲು ಸಹಕಾರ ನೀಡಿ ಎಂದು ಮೋದಿ ವಿನಂತಿ ಮಾಡಿಕೊಂಡಿದ್ದಾರೆ.

    ಜನ ಏನು ಮಾಡಬೇಕು?
    ಆಪ್‍ನಲ್ಲಿ ದೇಶದ ಕೆಲವೊಂದು ಸಮಸ್ಯೆ/ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಟಗೆರಿಗಳನ್ನು ನೀಡಲಾಗಿದ್ದು, ಇವುಗಳಲ್ಲಿ ಒಂದು ಆಯ್ಕೆಯನ್ನು ಜನ ಆರಿಸಿಕೊಳ್ಳಬೇಕಾಗುತ್ತದೆ.

    ಯಾವೆಲ್ಲ ವಿಭಾಗಗಳಿವೆ?
    – ಭಾರತದ ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸುತ್ತೇನೆ
    – ಕ್ಯಾಶ್‍ಲೆಸ್ ವ್ಯವಹಾರ ಹೆಚ್ಚಿಸಲು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ
    – ಸ್ವಚ್ಛ ಭಾರತಕ್ಕಾಗಿ ನಾನು ಕೆಲಸ ಮಾಡುತ್ತೇನೆ
    – ಡ್ರಗ್ಸ್ ಮುಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸುತ್ತೇನೆ
    – ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಅಭಿವೃದ್ಧಿಗೆ ನಾನು ಬೆಂಬಲ ನೀಡುತ್ತೇನೆ
    – ಪ್ರಕೃತಿ ಮತ್ತು ಪಾಕೃತಿಕ ಸಂಪನ್ಮೂಲಗಳ ರಕ್ಷಣೆಗೆ ನಾನು ಕಟಿಬದ್ಧನಾಗಿದ್ದೇನೆ
    – ಭಾರತದ ಶಕ್ತಿ, ಏಕತೆ ಮತ್ತು ಸದ್ಭಾವನೆಗಾಗಿ ನಾನು ನಿಲ್ಲುತ್ತೇನೆ
    – ನಾನು ಉದ್ಯೋಗವನ್ನು ಬೇಡದೇ ಉದ್ಯೋಗ ನೀಡುವ ವ್ಯಕ್ತಿಯಾಗುತ್ತೇನೆ

    ಈ ಮೇಲೆ ತಿಳಿಸಿದ ಆಯ್ಕೆಯಲ್ಲಿ ಒಂದನ್ನು ಆರಿಸಿಕೊಂಡು ಪ್ರತಿಜ್ಞೆ ಮಾಡಬೇಕು. ಈ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ನೀವು ನಿಮ್ಮ ಪ್ರತಿಜ್ಞೆಯನ್ನು ಫೇಸ್‍ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ಶೇರ್ ಮಾಡಲು ಸಾಧ್ಯವಿದೆ. ನರೇಂದ್ರ ಮೋದಿ ಆಪ್‍ನ್ನು ನೀವು ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಆಪಲ್ ಐಟ್ಯೂನ್ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಬಹುದು.

  • 11 ರನ್‍ಗಳಿಗೆ 6 ವಿಕೆಟ್ ಪತನ: ಭಾರತಕ್ಕೆ 75 ರನ್ ಗಳ ಜಯ

    11 ರನ್‍ಗಳಿಗೆ 6 ವಿಕೆಟ್ ಪತನ: ಭಾರತಕ್ಕೆ 75 ರನ್ ಗಳ ಜಯ

    ಬೆಂಗಳೂರು: ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಭಾರತ 5 ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

    ಗೆಲ್ಲಲು 188 ರನ್‍ಗಳ ಸುಲಭದ ಸವಾಲನ್ನು ಸ್ವೀಕರಿಸಿದ ಆಸ್ಟ್ರೇಲಿಯಾ ಆರಂಭದಿಂದ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 35.4 ಓವರ್‍ಗಳಲ್ಲಿ 112 ರನ್‍ಗಳಿಗೆ ಆಲೌಟ್ ಆಯ್ತು. ಸ್ಪಿನ್ನರ್ ಆರ್ ಅಶ್ವಿನ್ 6 ವಿಕೆಟ್‍ಗಳನ್ನು ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.

    ಒಂದು ಹಂತದಲ್ಲಿ 4 ವಿಕೆಟ್ ಕಳೆದುಕೊಂಡು 101 ರನ್‍ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ 11 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡ ಕಾರಣ ಸೋಲನ್ನು ಅನುಭವಿಸಿದೆ.

    213 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ನಾಲ್ಕನೇಯ ದಿನದಾಟವನ್ನು ಆರಂಭಿಸಿದ ಭಾರತ ಇಂದು 6 ವಿಕೆಟ್‍ಗಳ ಸಹಾಯದಿಂದ 61 ರನ್‍ಗಳಿಸಿ 97.1 ಓವರ್‍ಗಳಲ್ಲಿ 274 ರನ್‍ಗಳಿಗೆ ಆಲೌಟ್ ಆಯ್ತು.

    ಸೋಮವಾರ 79 ರನ್‍ಗಳಿದ್ದ ಚೇತೇಶ್ವರ ಪೂಜಾರ ಇಂದು 92 ರನ್(211 ಎಸೆತ, 7 ಬೌಂಡರಿ), 40 ರನ್‍ಗಳಿಸಿದ್ದ ಅಜಿಕ್ಯಾ ರೆಹಾನೆ 52 ರನ್(134 ಎಸೆತ, 4 ಬೌಂಡರಿ) ಗಳಿಸಿ ಔಟಾದರು. ಬೌಲರ್‍ಗಳು ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ ಭಾರತ 274 ರನ್‍ಗಳಿಗೆ ಆಲೌಟ್ ಆಯ್ತು.

    ಆಸ್ಟ್ರೇಲಿಯಾದ ಪರವಾಗಿ ನಾಯಕ ಸ್ವೀವ್ ಸ್ಮಿತ್ 28 ರನ್, ಪೀಟರ್ ಹ್ಯಾಂಡ್ಸ್ ಕಾಂಬ್ 24 ರನ್‍ಗಳಿಸಿದರು. ಅಶ್ವಿನ್ 6 ವಿಕೆಟ್ ಪಡೆದರೆ ಉಮೇಶ್ ಯಾದವ್ 2 ವಿಕೆಟ್ ಪಡೆದರು. ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

    ಮೊದಲ ಇನ್ನಿಂಗ್ಸ್ ನಲ್ಲಿ 91 ರನ್, ಎರಡನೇ ಇನ್ನಿಂಗ್ಸ್ ನಲ್ಲಿ 51 ರನ್ ಬಾರಿಸಿದ ಕೆಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಪುಣೆಯಲ್ಲಿ ನಡೆದ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿಂದ ಗೆದ್ದು ಕೊಂಡಿತ್ತು. ಮೂರನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಮಾರ್ಚ್ 16ರಿಂದ ಆರಂಭವಾಗಲಿದೆ.

    ಸಂಕ್ಷಿಪ್ತ ಸ್ಕೋರ್
    ಭಾರತ 189& 274
    ಆಸ್ಟ್ರೇಲಿಯಾ 276 & 112

     

  • ಭಾರತಕ್ಕೆ ಬಂದ 3 ವಾರದಲ್ಲಿ 120 ಕೆಜಿ ತೂಕ ಇಳಿಸಿಕೊಂಡ ವಿಶ್ವದ ದಢೂತಿ ಮಹಿಳೆ

    ಭಾರತಕ್ಕೆ ಬಂದ 3 ವಾರದಲ್ಲಿ 120 ಕೆಜಿ ತೂಕ ಇಳಿಸಿಕೊಂಡ ವಿಶ್ವದ ದಢೂತಿ ಮಹಿಳೆ

    ಮುಂಬೈ: ಚಿಕಿತ್ಸೆಗಾಗಿ ಭಾರತಕ್ಕೆ ಬಂದಿರೋ ವಿಶ್ವದ ದಢೂತಿ ಮಹಿಳೆ ಇಮಾನ್ ಅಹ್ಮದ್ ಕೇವಲ ಮೂರು ವಾರಗಳಲ್ಲಿ ಬರೋಬ್ಬರಿ 120 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

    498 ಕೆಜಿ ತೂಕವಿದ್ದ ಈಜಿಪ್ಟ್ ನ ಇಮಾನ್ ಈ ಮೂಲಕ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಾವಾಗಿಯೇ ಎದ್ದು ಕೂರಲು ಶಕ್ತರಾಗಿದ್ದಾರೆ. ಇಮಾನ್ ತಮ್ಮ ಕಾಲಿನ ಮೇಲೆ ನಿಲ್ಲುವುದಷ್ಟೆ ಬಾಕಿ ಉಳಿದಿದ್ದು ಸರ್ಜರಿಗೆ ತಯಾರಿ ನಡೆಸಲಾಗಿದೆ.

    ವೈದ್ಯರು 25 ದಿನಗಳಲ್ಲಿ 50 ಕೆಜಿ ತೂಕ ಇಳಿಸುವ ಉದ್ದೇಶ ಹೊಂದಿದ್ದರು. ಅಂದ್ರೆ ಪ್ರತಿದಿನ ಇಮಾನ್ ಅವರು 2ಕೆಜಿ ತೂಕ ಇಳಿಸಿಕೊಳ್ಳಬೇಕಿತ್ತು. ಆದ್ರೆ ಆಶ್ಚರ್ಯವೆಂಬಂತೆ ಕಡಿಮೆ ಅವಧಿಯಲ್ಲೇ ಇಮಾನ್ ಉದ್ದೇಶಿಸಿದ್ದಕ್ಕಿಂತ ಎರಡು ಪಟ್ಟು ತೂಕ ಇಳಿಸಿಕೊಂಡಿದ್ದಾರೆ.

    ಈವರೆಗೆ ಇಮಾನ್ ಅವರು ಕೇವಲ ದ್ರವ ರೂಪದ ಆಹಾರ ಸೇವಿಸಿ ಹಾಗೂ ನಿಯಮಿತವಾದ ಫಿಸಿಯೋಥೆರಪಿಯಿಂದ ದೇಹದಲ್ಲಿದ್ದ ಹೆಚ್ಚುವರಿ ನೀರಿನಂಶವನ್ನ ಇಳಿಸಿಕೊಂಡಿದ್ದಾರೆ. ಈಗ ಅವರು ಬಾರಿಯಾಟ್ರಿಕ್ ಸರ್ಜರಿಗೆ ಒಳಗಾಗಲು ಸಿದ್ಧರಾಗಿದ್ದಾರೆ ಎಂದು ಇಮಾನ್‍ಗೆ ಚಿಕಿತ್ಸೆ ನೀಡುತ್ತಿರುವ ಡಾ. ಮುಫಾಜಲ್ ಲಕ್ಡಾವಾಲಾ ಹೇಳಿದ್ದಾರೆ. ಈವರೆಗೆ ಔಷಧಿ ನೀಡುವ ಮೂಲಕ ಅವರ ತೂಕವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆಯಾಗುವಂತೆ ಮಾಡಿದ್ದೇವೆ. ಇನ್ನುಳಿದಂತೆ ಸರ್ಜರಿ ಮೂಲಕವೇ ತೂಕ ಇಳಿಸಬೇಕು ಎಂದು ಅವರು ಹೇಳಿದ್ದಾರೆ.

    ಇಮಾನ್ ಅವರಿಗೆ ಮೊದಲು ಸ್ಲೀವ್ ಬಾರಿಯಾಟ್ರಿಕ್ ಸರ್ಜರಿ ಮಾಡಲಾಗುತ್ತದೆ. ನಂತರ ಮುಂದಿನ ಪ್ರಕ್ರಿಯೆವರೆಗೆ ಅವರನ್ನು ಅಲೆಕ್ಸಾಂಡ್ರಿಯಾಗೆ ಕಳಿಸಿ ಅಬ್‍ಸರ್ವೇಷನ್‍ನಲ್ಲಿ ಇರಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ಆಸ್ಪತ್ರೆಯವರು ಇಮಾನ್ ಚಿಕಿತ್ಸೆಗಾಗಿ ಸುಮಾರು 60 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ.

  • ಭಾರತ-ಪಾಕ್ ಗಡಿಯಲ್ಲಿ ಅತ್ಯಂತ ಎತ್ತರದ ತ್ರಿವರ್ಣಧ್ವಜ ಹಾರಿಸಿದ ಭಾರತ- ಪಾಕ್‍ಗೆ ಈಗ ಭಯವೇನು ಗೊತ್ತಾ?

    ಭಾರತ-ಪಾಕ್ ಗಡಿಯಲ್ಲಿ ಅತ್ಯಂತ ಎತ್ತರದ ತ್ರಿವರ್ಣಧ್ವಜ ಹಾರಿಸಿದ ಭಾರತ- ಪಾಕ್‍ಗೆ ಈಗ ಭಯವೇನು ಗೊತ್ತಾ?

    ನವದೆಹಲಿ: ಭಾರತ ಪಾಕಿಸ್ತಾನ ಗಡಿಯಲ್ಲಿರುವ ಅಮೃತಸರ ಬಳಿಯ ಅಟ್ಟಾರಿಯಲ್ಲಿ ಭಾನುವಾರದಂದು ಭಾರತ ಅತ್ಯಂತ ಎತ್ತರದ ತ್ರಿವರ್ಣ ಧ್ವಜವನ್ನ ಹಾರಿಸಿದೆ.

    120 ಅಡಿ ಉದ್ದ, 80 ಅಡಿ ಅಗಲವಿರುವ ಧ್ವಜವನ್ನ 360 ಅಡಿ ಉದ್ದದ ಸ್ತಂಭದ ಮೇಲೆ ಹಾರಿಸಲಾಗಿದೆ. ಈ ಧ್ವಜ ಎಷ್ಟು ಎತ್ತರವಿದೆ ಎಂದರೆ ಇದನ್ನು ಸುಮಾರು 30 ಕಿ.ಮೀ ದೂರದಲ್ಲಿರುವ ಲಾಹೋರ್‍ನಲ್ಲಿರುವ ಪ್ರಸಿದ್ಧ ಅನಾರ್ಕಲಿ ಬಜಾರ್‍ನಿಂದಲೂ ಕಾಣಬಹುದಾಗಿದೆ. 100 ಕೆಜಿ ತೂಕವಿರುವ ಈ ಧ್ವಜವನ್ನ ಎತ್ತರದ ಪ್ರದೇಶದಲ್ಲಿ ಜೋರಾಗಿ ಬೀಸೋ ಗಾಳಿಯನ್ನು ತಡೆದುಕೊಳ್ಳಲು ಸಹಾಯವಾಗುವಂತೆ ಪ್ಯಾರಾಚೂಟ್ ಮೆಟೀರಿಯಲ್‍ನಿಂದ ಮಾಡಲಾಗಿದೆ.

    360 ಅಡಿ ಉದ್ದವಿರುವ ಸ್ತಂಭ 55 ಟನ್ ತೂಕವಿದ್ದು ದೆಹಲಿಯ ಕುತುಬ್ ಮಿನಾರ್‍ಗಿಂತ ಎತ್ತರವಿದೆ. ಧ್ವಜ ಸ್ತಂಭದ ಸುತ್ತ ಎಲ್‍ಇಡಿ ಫ್ಲಡ್ ಲೈಟ್‍ಗಳನ್ನ ಹಾಕಲಾಗಿದ್ದು, ರಾತ್ರಿ ಹೊತ್ತಿನಲ್ಲೂ ಮೈಲಿ ದೂರದಲ್ಲಿದ್ರೂ ಧ್ವಜ ಕಾಣುವಂತೆ ಮಾಡಲಾಗಿದೆ.

    ಈ ಯೋಜನೆಗೆ ಸುಮಾರು 4 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಅಮೃತಸರ ಇಂಪ್ರೂವ್‍ಮೆಂಟ್ ಟ್ರಸ್ಟ್ ಇದನ್ನು ಪೂರ್ಣಗೊಳಿಸಿದೆ. ಧ್ವಜದ ದೈನಂದಿನ ನಿರ್ವಹಣೆಯನ್ನು ಬಿಎಸ್‍ಎಫ್‍ನ ಆದೇಶದಂತೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಅತೀ ಎತ್ತರದ ಈ ತ್ರಿವರ್ಣ ಧ್ವಜ ಈಗ ಅಟ್ಟಾರಿ ವಾಗಾ ಗಡಿಯಲ್ಲಿ ಪ್ರತಿದಿನ ಸಂಜೆ ಬೀಟಿಂಗ್ ರಿಟ್ರೀಟ್ ವೀಕ್ಷಿಸಲು ಬರುವ ಸಾವಿರಾರು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

    ಪಾಕಿಸ್ತಾನದ ವಿರೋಧ: ಇದೇ ವೇಳೆ ಗಡಿ ಭಾಗದಲ್ಲಿ ಎತ್ತರದ ಧ್ವಜ ಅಳವಡಿಸಿರುವುದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದೆ. ಭಾರತ ಈ ಧ್ವಜವನ್ನು ಗಡಿ ಭಾಗದಲ್ಲಿ ಗೂಢಾಚಾರಿಕೆ ಮಾಡಲು ಬಳಸುತ್ತದೆ ಎಂದು ಪಾಕಿಸ್ತಾನ ಹೆದರಿದೆ.

    ಈ ಹೇಳಿಕೆಯನ್ನು ಭಾರತ ತಳ್ಳಿಹಾಕಿದ್ದು, ಧ್ವಜಸ್ತಂಭವನ್ನು ಝೀರೋ ಲೈನ್‍ಗಿಂತ 200 ಮೀಟರ್ ಒಳಗೆ ಅಳವಡಿಸಲಾಗಿದೆ. ಧ್ವಜ ನಿಂತಿರುವುದು ಭಾರತದ ಮಣ್ಣಿನಲ್ಲಿ. ದೇಶವೊಂದು ತನ್ನ ನೆಲದಲ್ಲಿ ಧ್ವಜ ಹಾರಿಸುವುದನ್ನು ಯಾವುದೇ ಕಾನೂನಾಗಲೀ ಅಥವಾ ಅಂತರಾಷ್ಟ್ರೀಯ ಕಟ್ಟುಪಾಡುಗಳಾಗಲೀ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.