Tag: india

  • 2017ರ ಮಿಸ್ ಟೀನ್ ಯೂನಿವರ್ಸ್ ಪಟ್ಟ ಮುಡಿಗೇರಿಸಿಕೊಂಡ ನೊಯ್ಡಾದ ಸೃಷ್ಟಿ

    2017ರ ಮಿಸ್ ಟೀನ್ ಯೂನಿವರ್ಸ್ ಪಟ್ಟ ಮುಡಿಗೇರಿಸಿಕೊಂಡ ನೊಯ್ಡಾದ ಸೃಷ್ಟಿ

    – ಅತ್ಯುತ್ತಮ ರಾಷ್ಟ್ರೀಯ ಉಡುಗೆಗೂ ಅವಾರ್ಡ್

    ನವದೆಹಲಿ: ಮಂಗಳವಾರದಂದು ನೋಯ್ಡಾದ ನಿವಾಸಿ ಸೃಷ್ಟಿ ಕೌರ್ 2017ನೇ ಸಾಲಿನ ಮಿಸ್ ಟೀನ್ ಯೂನಿವರ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

    ಮಧ್ಯ ಅಮೆರಿಕ ದೇಶವಾದ ನಿಕಾರಾಗುವಾದ ಮನಾಗುವಾದಲ್ಲಿ ಈ ಸೌಂದರ್ಯ ಸ್ಪರ್ಧೆ ನಡೆದಿದ್ದು, ಸೃಷ್ಟಿ ವಿಶ್ವದಾದ್ಯಂತ ವಿವಿಧ ದೇಶಗಳಿಂದ ಬಂದಿದ್ದ 25 ಸ್ಪರ್ಧಿಗಳನ್ನ ಹಿಂದಿಕ್ಕಿ ಕಿರೀಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಮೆಕ್ಸಿಕೋದ ಆ್ಯರಿ ಟ್ರಾವಾ ಹಾಗೂ ಕೆನಡಾದ ಸಮಂತಾ ಪೆರ್ರಿ ಇದ್ರು.

    ಇದರ ಜೊತೆಗೆ ಸೃಷ್ಟಿ ಅತ್ಯುತ್ತಮ ರಾಷ್ಟ್ರೀಯ ಉಡುಗೆಗೂ ಅವಾರ್ಡ್ ಪಡೆದಿದ್ದಾರೆ. ಭಾರತದ ರಾಷ್ಟ್ರಪಕ್ಷಿ ನವಿಲನ್ನು ಸೃಷ್ಟಿ ತಮ್ಮ ಉಡುಗೆಯಲ್ಲಿ ಪ್ರದರ್ಶಿಸಿದ್ದರು. ಸೃಷ್ಟಿ ನೋಯ್ಡಾದ ಲೋಟಸ್ ವ್ಯಾಲಿ ಇಂಟರ್ ನ್ಯಾಷನಲ್‍ನಲ್ಲಿ ಓದಿದ್ದು, ಸದ್ಯಕ್ಕೆ ಲಂಡನ್ ಸ್ಕೂನ್ ಆಫ್ ಫ್ಯಾಷನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಇದೇ ವರ್ಷದ ಆರಂಭದಲ್ಲಿ ಸೃಷ್ಟಿ 29 ಸ್ಪರ್ಧಿಗಳನ್ನ ಹಿಂದಿಕ್ಕಿ ಮಿಸ್ ಟೀನ್ ಟಿಯಾರಾ ಇಂಟರ್‍ನ್ಯಾಷನಲ್ ಪಟ್ಟವನ್ನ ತನ್ನದಾಗಿಸಿಕೊಂಡಿದ್ದರು. ಈ ಸೌಂದರ್ಯ ಸ್ಪರ್ಧೆಯನ್ನ 6 ವರ್ಷಗಳ ಹಿಂದೆ ಪ್ರಾರಂಭಿಸಲಾಗಿದ್ದು 15 ರಿಂದ 19 ವರ್ಷ ವಯಸ್ಸಿನವರಿಗಾಗಿ ಮಿಸ್ ಯೂನಿವರ್ಸ್ ಸಂಸ್ಥೆ ಈ ಸ್ಪರ್ಧೆಯನ್ನ ಆಯೋಜಿಸುತ್ತದೆ.

     

  • ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆಯಲಿದೆ ಬಾಹುಬಲಿ

    ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆಯಲಿದೆ ಬಾಹುಬಲಿ

    ಹೈದರಾಬಾದ್: ರಾಜಮೌಳಿ ನಿರ್ದೇಶನದ ಬಾಹುಬಲಿ2 ಮತ್ತೊಂದು ಹೊಸ ದಾಖಲೆ ಬರೆಯಲಿದೆ. ವಿಶ್ವದೆಲ್ಲೆಡೆ ಒಂದೇ ಬಾರಿಗೆ 9 ಸಾವಿರ ಸ್ಕ್ರೀನ್ ಗಳಲ್ಲಿ ಏಪ್ರಿಲ್ 28ರಂದು ಬಾಹುಬಲಿ ರಿಲೀಸ್ ಆಗಲಿದ್ದು ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿರುವ ಫಿಲ್ಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ದೇಶದಲ್ಲಿ ಸಾಧಾರಣವಾಗಿ ಬಾಲಿವುಡ್ ಸಿನಿಮಾಗಳು 5 ಸಾವಿರ ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾಗುತ್ತದೆ. ಆಂಧ್ರ, ಕರ್ನಾಟಕ, ತಮಿಳುನಾಡು, ಕೇರಳಗಳ ಒಟ್ಟು 3 ಸಾವಿರಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಆಯಾ ಭಾಷೆಯಲ್ಲಿ ಶುಕ್ರವಾರ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿರುತ್ತದೆ. ಆದರೆ ಈ ಶುಕ್ರವಾರ ದೊಡ್ಡ ಬಜೆಟ್‍ನ ಚಿತ್ರಗಳು ಬಿಡುಗಡೆಯಾಗದೇ ಇರುವುದರಿಂದ ದೇಶದ ಬಹುತೇಕ ಥಿಯೇಟರ್‍ಗಳಲ್ಲಿ ಬಾಹುಬಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ಮೂಲಗಳು ಮಾಹಿತಿ ನೀಡಿವೆ.

    ಸತ್ಯರಾಜ್ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಕಾರಣ ಬಾಹುಬಲಿ ಕರ್ನಾಟಕದಲ್ಲಿ ಬಿಡುಗಡೆಗೆ ದೊಡ್ಡ ಅಡ್ಡಿಯಾಗಿತ್ತು. ಆದರೆ ಸತ್ಯರಾಜ್ ವಿಷಾದ ವ್ಯಕ್ತಪಡಿಸಿದ್ದ ಕಾರಣ ಕನ್ನಡ ಸಂಘಟನೆಗಳು ಬಾಹುಬಲಿ ಬಿಡುಗಡೆಗೆ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದು ದೊಡ್ಡ ಅಡ್ಡಿ ನಿವಾರಣೆಯಾಗಿದೆ. ಈ ಎಲ್ಲ ಕಾರಣದಿಂದಾಗಿ ಬಾಹುಬಲಿ 2 ಬಾಕ್ಸ್ ಆಫೀಸ್ ನಲ್ಲಿ 1 ಸಾವಿರ ಕೋಟಿ ರೂ. ಗಿಂತಲೂ ಅಧಿಕ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.

    ಈಗಾಗಲೇ ದೇಶದ ಹಲವು ಮಹಾನಗರಗಳ ಥಿಯೇಟರ್‍ಗಳಲ್ಲಿ ವಾರಾಂತ್ಯದ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದೆ. ಹೀಗಾಗಿ ಕಲೆಕ್ಷನ್ ಎಷ್ಟು ಮಾಡಲಿದೆ ಎನ್ನುವ ಕುತೂಹಲ ಜಾಸ್ತಿ ಆಗಿದೆ.

    ಅಮೆರಿಕದಲ್ಲಿ ಅತಿಹೆಚ್ಚು ಸಂಖ್ಯೆಯ ಸ್ಕ್ರೀನ್ ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಗೆ ಬಾಹುಬಲಿ ಪಾತ್ರವಾಗಿದ್ದು, ಮಾಹಿತಿಗಳ ಪ್ರಕಾರ ತಮಿಳು, ತೆಲುಗು, ಹಿಂದಿ ಸೇರಿ ಒಟ್ಟು 1,100 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ. ಕೆನಡಾ 80ಕ್ಕೂ ಹೆಚ್ಚು ಸ್ಥಳಗಳಲ್ಲಿ 150 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಲಿದೆ. ಐ ಮ್ಯಾಕ್ಸ್ ಮಾದರಿಯಲ್ಲೂ ಬಾಹುಬಲಿ ಬರುತ್ತಿದ್ದು, ಈ ಮಾದರಿಯ ಫಿಲ್ಮ್ ಗಳು 40-45 ಸ್ಥಳಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಮೆರಿಕ, ಕೆನಡದಲ್ಲಿ ವಿತರಣೆ ಹಕ್ಕು ಪಡೆದಿರುವ ಗ್ರೇಟ್ ಇಂಡಿಯಾ ಫಿಲ್ಮ್ ಸಂಸ್ಥೆ ತಿಳಿಸಿದೆ.

    ಹಿಂದಿ ಭಾಷೆಯಲ್ಲಿರುವ ಬಾಹುಬಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಫಿಜಿಯಲ್ಲಿ ಬಿಡುಗಡೆಯಾಗಲಿದೆ. ಮಲೇಷ್ಯಾದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ತಮಿಳು ಡಬ್ ಆವೃತ್ತಿ ಬಿಡುಗಡೆಯಾಗಲಿದೆ.

    2015 ಜುಲೈ 10 ರಂದು 4 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ‘ಬಾಹುಬಲಿ ದಿ ಬಿಗ್‍ನಿಂಗ್’ ಬಿಡುಗಡೆಯಾಗಿತ್ತು. 180 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣಗೊಂಡಿದ್ದ ಈ ಫಿಲ್ಮ್ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಈ ಮೂಲಕ ಬಾಲಿವುಡ್ ಹೊರತು ಪಡಿಸಿ ಅತಿಹೆಚ್ಚು ಹಣವನ್ನು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕಗೆ ಪಾತ್ರವಾಗಿದೆ.

    ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವೀಕ್ಷಣೆಯಾದ ಟ್ರೇಲರ್ ಎಂಬ ದಾಖಲೆಯನ್ನು ಬಾಹುಬಲಿ ಬರೆದಿದಿದೆ. ಬಿಡುಗೆಯಾದ 6 ಗಂಟೆಯಲ್ಲಿ 4 ಭಾಷೆಯಲ್ಲಿರುವ ಟ್ರೇಲರ್ 1 ಕೋಟಿ ವೀಕ್ಷಣೆ ಕಂಡರೆ, 24 ಗಂಟೆಯಲ್ಲಿ 2.5 ಕೋಟಿ ವ್ಯೂ ಕಂಡಿತ್ತು.

    ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು!

    ಇದನ್ನೂ ಓದಿ: ಬಾಹುಬಲಿ -2 ಹೇಗಿದೆ? ಯುಎಇ ಸೆನ್ಸಾರ್ ಸದಸ್ಯ ಹೇಳಿದ್ದು ಹೀಗೆ

  • `ಇಂಡಿಯಾ’ಳಿಗೆ `ಇಂಡಿಯಾ’ದಿಂದ ಹುಟ್ಟುಹಬ್ಬದ ಶುಭಕೋರಿದ ಮೋದಿ!

    `ಇಂಡಿಯಾ’ಳಿಗೆ `ಇಂಡಿಯಾ’ದಿಂದ ಹುಟ್ಟುಹಬ್ಬದ ಶುಭಕೋರಿದ ಮೋದಿ!

    ನವದೆಹಲಿ: ದಕ್ಷಿಣ ಆಫ್ರಿಕಾದ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರ ಮಗಳು ಇಂಡಿಯಾಳ ದ್ವಿತೀಯ ವರ್ಷದ ಹುಟ್ಟುಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

    ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ಮುಂಬೈ ಇಂಡಿಯನ್ಸ್ ಕೋಚಿಂಗ್ ಸಿಬ್ಬಂದಿಯ ಅವಿಭಾಜ್ಯ ಅಂಗವಾಗಿರೋ ರೋಡ್ಸ್ ಭಾರತದ ಆಚರಣೆ, ಸಂಸ್ಕೃತಿಗೆ ಮನಸೋತು ತಮ್ಮ ಮಗಳಿಗೆ ಇಂಡಿಯಾ ಅಂತಾ ಹೆಸರಿಟ್ಟಿದ್ದರು.

    ಭಾನುವಾರದಂದು ಮಗಳ ಹುಟ್ಟುಹಬ್ಬಕ್ಕೆ ಟ್ವಿಟ್ಟರ್‍ನಲ್ಲಿ ವಿಶ್ ಮಾಡಿದ ರೋಡ್ಸ್ ಮಗಳ ಜೊತೆಗಿನ ಒಂದು ಫೋಟೋ ಹಾಕಿ, `ಹ್ಯಾಪಿ ಬರ್ತ್‍ಡೇ ಬೇಬಿ ಇಂಡಿಯಾ’ ಎಂದು ಟ್ವೀಟ್ ಮಾಡಿದ್ದರು.

    ಆಶ್ಚರ್ಯವೆಂಬಂತೆ ಪ್ರಧಾನಿ ಮೋದಿ ಕೂಡ ಈ ಪೋಸ್ಟ್‍ಗೆ ಪ್ರತಿಕ್ರಿಯಿಸಿ, `ಇಂಡಿಯಾಳಿಗೆ ಇಂಡಿಯಾದಿಂದ ಹುಟ್ಟುಹಬ್ಬದ ಶುಭಾಶಯ’ ಅಂತಾ ಶುಭ ಕೋರಿದ್ದಾರೆ. ಪ್ರಧಾನಿ ಮೋದಿಯ ಟ್ವೀಟ್‍ಗೆ ಪ್ರತಿಕ್ರಿಯಿಸಿದ ರೋಡ್ಸ್, ಧನ್ಯವಾದಗಳು ಮೋದಿ ಜೀ. ಭಾರತದಲ್ಲಿ ಹುಟ್ಟಿದ ಇಂಡಿಯಾ ನಿಜಕ್ಕೂ ಧನ್ಯಳು ಎಂದಿದ್ದಾರೆ.

    ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ರೋಡ್ಸ್, ಭಾರತದಲ್ಲಿನ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಕ್ಕೆ ನಾನು ಮಸೋತಿದ್ದೇನೆ. ಭಾರತ ಒಂದು ಆಧ್ಯಾತ್ಮಿಕ ದೇಶ. ಇದೇ ವೇಳೆ ಮುಂದಾಲೋಚನೆಯುಳ್ಳ ರಾಷ್ಟ್ರವೂ ಹೌದು. ನಾವು ಪ್ರತಿದಿನ ಈ ದೇಶದ ಬಗ್ಗೆ ಹೊಸದನ್ನು ತಿಳಿದುಕೊಳ್ಳುತ್ತೇವೆ. ಮನುಷ್ಯರಾಗಿ ನಾವು ನಮ್ಮನ್ನು ಅರಿಯುವದನ್ನು ಇಷ್ಟಪಡುತ್ತೇವೆ. ಅದೇ ರೀತಿ ಮಗಳು ಇಂಡಿಯಾ ಕೂಡ ತನ್ನನ್ನು ತಾನು ಅರಿಯುತ್ತಾಳೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದರು.

    ಇಂಡಿಯಾ 2015ರ ಏಪ್ರಿಲ್ 23ರಂದು ಮುಂಬೈನ ಸಾಂತಕ್ರೂಸ್‍ನ ಸೂರ್ಯ ಮದರ್ ಅಂಡ್ ಚೈಲ್ಡ್ ಕೇರ್ ಆಸ್ಪತ್ರೆಯಲ್ಲಿ ಜನಿಸಿದ್ದಳು. ಭಾರದಲ್ಲಿ ಜನಿಸಿದ್ದರಿಂದ ಆಕೆಗೆ ಇಂಡಿಯಾ ಅಂತಾ ನಾಮಕರಣ ಮಾಡಲಾಗಿತ್ತು. 2016ರಲ್ಲಿ ಜಾಂಟಿ ರೋಡ್ಸ್ ತಮ್ಮ ಮಗಳಿಗಾಗಿ ಸಾಂತಕ್ರೂಸ್‍ನಲ್ಲಿರೋ ಪೇಜಾವರ ಮಠಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದರು.

  • 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

    2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

    ನವದೆಹಲಿ:2016-17ರ ಅವಧಿಯಲ್ಲಿ ದೇಶದಲ್ಲಿ ಮಾರುತಿ ಕಂಪೆನಿಯ ಕಾರುಗಳು ಅತಿ ಹೆಚ್ಚು ಮಾರಾಟವಾಗಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಅತಿಹೆಚ್ಚು ಮಾರಾಟದವಾದ ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿ ಕಂಪೆನಿಯ 7 ಕಾರುಗಳು ಸ್ಥಾನ ಪಡೆದುಕೊಂಡಿದೆ.

    ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) ತನ್ನ ವರದಿಯನ್ನು ಬಿಡುಗಡೆ ಮಾಡಿದೆ. 2015-16 ಅವಧಿಯಲ್ಲಿ ಮಾರಾಟವಾದ ಅತಿ ಹೆಚ್ಚು ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿಯ ಕಂಪೆನಿಯ 6 ಕಾರುಗಳು ಸ್ಥಾನ ಪಡೆದಿದ್ದರೆ ಈ ಬಾರಿ 7 ಕಾರುಗಳು ಸ್ಥಾನ ಪಡೆದುಕೊಂಡಿದೆ.

    2016-17ರಲ್ಲಿ ಭಾರತದಲ್ಲಿ ಒಟ್ಟು 30,46,727 ಕಾರುಗಳು ಮಾರಾಟವಾಗಿದೆ. ಈ ಹಿಂದಿನ ಅವಧಿಯಲ್ಲಿ 27,89,208 ಕಾರುಗಳು ಮಾರಾಟವಾಗಿದ್ದು, ಶೇ.9.23 ಪ್ರಗತಿ ದರ ಸಾಧಿಸಿದೆ.

    ಒಟ್ಟು ಮಾರಾಟವಾದ ಕಾರುಗಳು ಪೈಕಿ ಶೇ.35ರಷ್ಟು ಪಾಲನ್ನು ಮಾರುತಿ ಕಂಪೆನಿಯ ಕಾರುಗಳು ಪಡೆದುಕೊಂಡಿದ್ದು, ಟ್ಟು 14,43,641 ಕಾರುಗಳು ಮಾರಾಟವಾಗಿದೆ.

    ಯಾವ ಕಾರು ಎಷ್ಟು ಮಾರಾಟವಾಗಿದೆ?
    #1 ಮಾರುತಿ ಆಲ್ಟೋ


    ಮಾರ್ಚ್ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 2,41,635 ಅಲ್ಟೋ ಕಾರುಗಳು ಮಾರಾಟವಾಗಿದೆ. ಸತತ 13 ವರ್ಷಗಳಿಂದ ಈ ಪಟ್ಟಿಯಲ್ಲಿ ಅಲ್ಟೋ ನಂಬರ್ ಒನ್ ಸ್ಥಾನಗಳಿಸಿದರೂ ಈ ಹಿಂದಿನ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ.8.27 ಕುಸಿತ ಕಂಡಿದೆ. ಈ ಹಿಂದಿನ ಹಣಕಾಸು ಅವಧಿಯಲ್ಲಿ 2,63,422 ಕಾರುಗಳು ಮಾರಾಟಗೊಂಡಿತ್ತು.

    #2 ವ್ಯಾಗನ್ ಆರ್:


    ಎರಡನೇ ಸ್ಥಾನದಲ್ಲಿ ಮಾರುತಿಯ ವ್ಯಾಗನ್ ಆರ್ ಕಾರು ಇದ್ದು, 1,72,346 ಕಾರುಗಳು ಮಾರಾಟವಾಗಿವೆ. 2015-16ರಲ್ಲಿ 1,69,555 ವಾಗನ್ ಆರ್ ಮಾರಾಟ ಕಂಡಿತ್ತು.

    #3 ಸ್ವಿಫ್ಟ್ ಡಿಸೈರ್:


    ಕಳೆದ ವರ್ಷ 1,67,266ಕಾರುಗಳು ಮಾರಾಟವಾಗಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 1,95,939 ಸ್ವಿಫ್ಟ್ ಡಿಸೈರ್ ಮಾರಾಟವಾಗಿತ್ತು.

    #4 ಸ್ವಿಫ್ಟ್:


    1,66,885 ಸ್ವಿಫ್ಟ್ ಕಾರುಗಳು ಮಾರಾಟವಾಗಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 1,95,043 ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಪ್ 3 ಸ್ಥಾನವನ್ನು ಪಡೆದುಕೊಂಡಿತ್ತು.

    #5. ಗ್ರಾಂಡ್ ಐ10:


    ಹುಂಡೈ ಕಂಪೆನಿಯ ಐ10 5ನೇ ಸ್ಥಾನ ಪಡೆದುಕೊಂಡಿದೆ. ಹಣಕಾಸು ವರ್ಷದಲ್ಲಿ 1,46,228 ಕಾರುಗಳು ಮಾರಾಟವಾಗಿವೆ.

    #6 ಎಲೈಟ್ ಐ20:


    ಹುಂಡೈ ಎಲೈಟ್ ಐ20ಗೆ 6ನೇ ಸ್ಥಾನ ಸಿಕ್ಕಿದ್ದು, 1,26,304 ಕಾರುಗಳು ಮಾರಾಟ ಕಂಡಿದೆ.

    #7 ಬಲೆನೊ:


    ಮಾರುತಿ ಸುಜುಕಿ ಕಂಪೆನಿ ಬಲೆನೊ 1,20,804 ಕಾರುಗಳು ಮಾರಾಟವಾಗಿದೆ.

    #8 ಕ್ವಿಡ್:


    ರೆನಾಲ್ಟ್ ಕಂಪೆನಿಯ ಕ್ವಿಡ್ 8ನೇ ಸ್ಥಾನಗಳಿಸಿದ್ದು, 1,09,341 ಕಾರುಗಳು ಮಾರಾಟ ಕಂಡಿವೆ.

    #9 ವಿಟಾರಾ ಬ್ರೆಜಾ:


    ಮಾರುತಿ ಕಂಪೆನಿಯ ವಿಟಾರಾ ಬ್ರೆಜಾ 1,08,640 ಕಾರುಗಳನ್ನು ಮಾರಾಟ ಮಾಡುವ ಮೂಲಕ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದುಕೊಂಡಿದೆ.

    #10 ಸೆಲರಿಯೋ


    ಮಾರುತಿಯ ಸೆಲರಿಯೋ 2016-17ರ ಹಣಕಾಸು ವರ್ಷದಲ್ಲಿ ಒಟ್ಟು 97,361 ಮಾರಾಟ ಕಂಡಿದೆ.

  • ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ

    ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ

    ಮುಂಬೈ: ಬರೋಬ್ಬರಿ 500 ಕೆಜಿ ತೂಕ ಹೊಂದಿದ್ದ, ಜಗತ್ತಿನ ದಢೂತಿ ಮಹಿಳೆ ಎನಿಸಿಕೊಂಡಿದ್ದ ಈಜಿಪ್ಟ್ ಮೂಲದ ಎಮಾನ್ ಅಹ್ಮದ್(36) ಭಾರತಕ್ಕೆ ಬಂದು ಎರಡೇ ತಿಂಗಳಲ್ಲಿ ಸುಮಾರು 242 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

    ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಪ್ರಸಿದ್ಧ ಬಾರಿಯಾಟ್ರಿಕ್ ಸರ್ಜನ್ ಡಾ. ಮುಫಾಜಲ್ ಲಕ್ಡಾವಾಲಾ, ಎಮಾನ್ ಅವರಿಗೆ ಮಾರ್ಚ್ 7 ರಂದು ಶಸ್ತ್ರಚಿಕಿತ್ಸೆ ಮಾಡಿದ್ರು. ಎಮಾನ್‍ರ ಥೈರಾಡ್ ಮಟ್ಟ ಸಾಮಾನ್ಯವಗಿದ್ದು ಇನ್ಮುಂದೆ ಆಕೆ ಕುಳಿತುಕೊಳ್ಳಬಲ್ಲರು ಎಂದು ಹೇಳಿದ್ರು. ಆದ್ರೆ ಎಮಾನ್ ತನ್ನ 11ನೇ ವಯಸ್ಸಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅನಂತರ ಅವರ ಕಾಲುಗಳು ಬೆಳವಣಿಗೆ ಸ್ಥಗಿತವಾಗಿತ್ತು. ಎಮಾನ್ ದಢೂತಿ ದೇಹ ಹೊಂದಿದ್ದ ಕಾರಣ 25 ವರ್ಷಗಳವರೆಗೆ ಹಾಸಿಗೆ ಹಿಡಿದಿದ್ದಾಗ ಸಮಸ್ಯೆ ಮತ್ತಷ್ಟು ಉಲ್ಬಣವಾಗಿತ್ತು. ಹೀಗಾಗಿ ಎಮಾನ್ ಇನ್ನೆಂದೂ ನಡೆದಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಎಮಾನ್ ಅವರಿಗೆ ಸ್ಥೂಲಕಾಯದ ಚಿಕಿತ್ಸೆ ಮುಗಿದಿದ್ದು, ನರಕ್ಕೆ ಸಂಬಂಧಿಸಿದಂತೆ ಮುಂದಿನ ಚಿಕಿತ್ಸೆ ಶಿಘ್ರದಲ್ಲೇ ಶುರು ಮಾಡಲಾಗುತ್ತದೆ. ಎಮಾನ್ ಅವರ ಈಗಿನ ತೂಕದಲ್ಲಿ ಇನ್ನೂ 50 ಕೆಜಿ ಇಳಿಸಲು ವೈದ್ಯರು ಯೋಚಿಸಿದ್ದಾರೆ. ಆಗ ಎಮಾನ್ ತೂಕ ಸುಮಾರು 200 ಕೆಜಿ ಆಗಲಿದ್ದು ಸಿಟಿ ಸ್ಕ್ಯಾನ್‍ಗೆ ಆಕೆ ಒಳಗಾಗಬಹುದು. ಇದರಿಂದಾಗಿ ಈ ಹಿಂದೆ ಆಕೆ ತುತ್ತಾಗಿದ್ದ ಪಾರ್ಶ್ವವಾಯುವಿನ ಪರಿಣಮದ ಬಗ್ಗೆ ಪರೀಕ್ಷಿಸಲು ವೈದ್ಯರಿಗೆ ಸಹಾಯವಾಗಲಿದೆ.

    ಎಮಾನ್ ಅವರನ್ನ 4 ತಿಂಗಳ ಬಳಿಕ ಈಜಿಪ್ಟ್ ನ ಅಲೆಕ್ಸಾಂಡ್ರಿಯಾಗೆ ವಾಪಸ್ ಕಳಿಸಬೇಕಿತ್ತು. ಆದ್ರೆ ನರಸಂಬಂಧಿತ ಚಿಕಿತ್ಸೆ ಬಾಕಿ ಇರೋದ್ರಿಂದ ಆಕೆ ಇನ್ನೂ ಕೆಲ ಕಾಲ ಭಾರತದಲ್ಲೇ ಇರಬೇಕಿದೆ.

    ಎಮಾನ್ ಇಷ್ಟೊಂದು ದಢೂತಿಯಾಗಿಯಲು ಆಕೆಗಿದ್ದ ಅನುವಂಶಿಕ ಸಮಸ್ಯೆ ಕಾರಣ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿತ್ತು. ಹೋಮೋಝೈಗಸ್ ಮಿಸೆನ್ಸ್ ವೇರಿಯಂಟ್ ಎಂಬ ಜೀನ್ ಆಕೆಯ ಸ್ಥೂಲಕಾಯಕ್ಕೆ ಕಾರಣವಾಗಿತ್ತು. ನಮಗೆ ತಿಳಿದಂತೆ ಈ ರೀತಿಯ ಅನುವಂಶಿಕ ಕಾಯಿಲೆ ಇರೋದು ಎಮಾನ್‍ರಲ್ಲಿ ಮಾತ್ರ ಎಂದು ವೈದ್ಯರು ಹೇಳಿದ್ದರು.

  • 36 ಸಾವಿರ ಡಿಗ್ರಿ ಕಾಲೇಜುಗಳಿದ್ರೂ ಒಬ್ಬ ಸಿವಿ ರಾಮನ್‍ರನ್ನು ಹುಟ್ಟು ಹಾಕಲು ಸಾಧ್ಯವಾಗಿಲ್ಲ: ಪ್ರಣಬ್ ಮುಖರ್ಜಿ ಬೇಸರ

    36 ಸಾವಿರ ಡಿಗ್ರಿ ಕಾಲೇಜುಗಳಿದ್ರೂ ಒಬ್ಬ ಸಿವಿ ರಾಮನ್‍ರನ್ನು ಹುಟ್ಟು ಹಾಕಲು ಸಾಧ್ಯವಾಗಿಲ್ಲ: ಪ್ರಣಬ್ ಮುಖರ್ಜಿ ಬೇಸರ

    ಬೆಂಗಳೂರು: ಭಾರತದಲ್ಲಿ 640 ವಿವಿಗಳಿವೆ, 36 ಸಾವಿರ ಡಿಗ್ರಿ ಕಾಲೇಜುಗಳಿವೆ. ಆದರೆ ಇಲ್ಲಿವರೆಗೂ ಒಬ್ಬ ಸಿವಿ ರಾಮನ್‍ರನ್ನು ಹುಟ್ಟುಹಾಕಲು ಸಾಧ್ಯವಾಗಿಲ್ಲ. ನೋಬೆಲ್ ಪ್ರಶಸ್ತಿ ಪಡೆಯುವ ವ್ಯಕ್ತಿಯನ್ನು ಹುಟ್ಟುಹಾಕಿಲ್ಲ ಅಂತಾ ದೇಶದ ವಿಶ್ವವಿದ್ಯಾಲಯಗಳ ಕಾರ್ಯದ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಸಾಕಷ್ಟು ವಿದ್ಯಾರ್ಥಿಗಳು ಬೇರೆ ದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗ್ತಾರೆ. ನಮ್ಮ ದೇಶದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗ್ತಾ ಇದ್ದಾರೆ ಅಂದ್ರೆ ನಮ್ಮಲ್ಲಿ ಉತ್ತಮ ಶಿಕ್ಷಣ, ಶಿಕ್ಷಕರು ಇಲ್ಲ ಅಂತ ಅಲ್ಲ. ಹೆಚ್ಚಿನ ಜ್ಞಾನಾರ್ಜನೆಗೆ ಹೋಗ್ತಾ ಇರೋದು. ನಮ್ಮಲ್ಲೂ ಸಾಕಷ್ಟು ಉತ್ತಮ ಶಿಕ್ಷಕರು ಇದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸಿ. ಜ್ಞಾನ ನಮ್ಮ ವ್ಯಕ್ತಿತ್ವ ಅಭಿವೃದ್ಧಿಯ ಭದ್ರ ಬುನಾದಿಯಾಗಿದೆ ಅಂದ್ರು.

    ನಮ್ಮ ಭಾರತದ ಐಐಟಿಗಳು ವಿಶ್ವದ ಯಾವುದೇ ಶಿಕ್ಷಣ ಸಂಸ್ಥೆಯೊಂದಿಗೆ ಸ್ಪರ್ಧಿಸುವಷ್ಟು ಗುಣಮಟ್ಟ ಹೊಂದಿವೆ. ಸರ್.ಸಿ.ವಿ.ರಾಮನ್, ಅಮರ್ತ್ಯ ಸೇನ್ ಅವರಂತಹ ನೋಬೆಲ್ ಪ್ರಶಸ್ತಿ ವಿಜೇತರೆಲ್ಲಾ ಅಧ್ಯಯನ ಮಾಡಿದ್ದು ಭಾರತೀಯ ವಿಶ್ವವಿದ್ಯಾಲಯಗಳಲ್ಲೇ. ಆದರೆ ಸ್ವಾತಂತ್ರ್ಯಾನಂತರ ಯಾವುದೇ ವಿವಿಯಿಂದ ನೋಬೆಲ್ ಪಡೆಯಲು ಅರ್ಹರಾದವರು ಬರಲೇ ಇಲ್ಲ. ಈಗ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅಂತಹಾ ಗುಣಮಟ್ಟದ ಶಿಕ್ಷಣ ಕೊಡಬೇಕು. ಇಡೀ ವಿಶ್ವದ ವಿದ್ಯಾರ್ಥಿಗಳನ್ನು ಭಾರತೀಯ ವಿವಿಗಳು ಆಕರ್ಷಿಸುವಂತೆ ಆಗಬೇಕು ಅಂತಾ ಹೇಳಿದ್ರು.

    ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಉನ್ನತ ಶಿಕ್ಷಣಕ್ಕಾಗಿ ವಿಶ್ವ ದರ್ಜೆಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸರ್ಕಾರದಿಂದ ಈ ಸ್ಕೂಲ್ ಆರಂಭಿಸಲಾಗುತ್ತದೆ. ಆರ್ಥಿಕ ವಿಷಯಗಳ ಅಧ್ಯಯನ ಮತ್ತು ತರಬೇತಿಯನ್ನು ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನೀಡಲಿದೆ. ವಿಶ್ವದರ್ಜೆಯ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನ ನೀಡಲಾಗುವುದು. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಕಂಡ ಶಿಕ್ಷಣ ಮತ್ತು ಆರ್ಥಿಕ ಸಮಾನತೆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಸ್ಕೂಲ್ ಹೆಜ್ಜೆ ಇಡಲಿದೆ ಅಂತಾ ಹೇಳಿದ್ರು.

    ಇದೇ ವೇಳೆ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡ ಸಿಎಂ, ಅನ್ನಭಾಗ್ಯ ಯೋಜನೆಯನ್ನು ರಾಷ್ಟ್ರೀಯ ಮಾಧ್ಯಮಗಳು ಇದು ಆರ್ಥಿಕ ಹೊರೆಯ ಯೋಜನೆ ಎಂದು ಹೇಳುತ್ತಿವೆ. ಈ ರೀತಿಯ ಟೀಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹಸಿವಿನ ತೀವ್ರತೆ ಗೊತ್ತಾಗದವರಿಗೆ ಇದು ಅರ್ಥವಾಗುವುದಿಲ್ಲ ಅಂದ್ರು.

  • ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ನವದೆಹಲಿ: ರಿಲಯನ್ಸ್ ಜಿಯೋ ಆಫರ್‍ಗಳಿಂದಾಗಿ 7 ವರ್ಷದಲ್ಲಿ ಮೊದಲ ಬಾರಿಗೆ 9 ಟೆಲಿಕಾಂ ಕಂಪೆನಿಗಳ ಆದಾಯ 2016-17ರಲ್ಲಿ 18.8 ಲಕ್ಷ ಕೋಟಿ ರೂ.ಗೆ ಕುಸಿತವಾಗಿದೆ ಎಂದು ಹೂಡಿಕೆ ಮಧ್ಯಸ್ಥಿಕೆ ಸಂಸ್ಥೆ ಸಿಎಲ್‍ಎಸ್‍ಎ ಅಂಕಿಅಂಶಗಳನ್ನು ಆಧಾರಿಸಿ ಲೈವ್‍ಮಿಂಟ್ ವರದಿ ಮಾಡಿದೆ.

    ಟೆಲಿಕಾಂ ಕಂಪೆನಿಗಳು 2015- 16ನೇ ಸಾಲಿನಲ್ಲಿ 19.3 ಲಕ್ಷ ಕೋಟಿ ರೂ. ಆದಾಯಗಳಿಸಿದ್ದರೆ, ಮುಂದಿನ ವರ್ಷಗಳಲ್ಲಿ ಈ ಆದಾಯ ಮತ್ತಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    2017-18ನೇ ಸಾಲಿನಲ್ಲಿ 1.84 ಲಕ್ಷ ಕೋಟಿ ರೂ. 2018-19ನೇ ಸಾಲಿನಲ್ಲಿ 18.7 ಲಕ್ಷ ಕೋಟಿ ರೂ. ಆದಾಯ ಬರಬಹುದೆಂದು ಈ ಹಿಂದೆ ಲೆಕ್ಕಾಚಾರ ಹಾಕಲಾಗಿತ್ತಾದರೂ ಅದೂ ಸಹ ಕಡಿಮೆಯಾಗಲಿದೆ ಎಂದು ವರದಿ ತಿಳಿಸಿದೆ.

    ಡಿಸೆಂಬರ್‍ನಲ್ಲಿ ಮುಕ್ತಾಯವಾದ ತ್ರೈಮಾಸಿಕ ಅವಧಿಯಲ್ಲಿ 9 ದೂರಸಂಪರ್ಕ ಕಂಪೆನಿಗಳ ಆದಾಯ ಶೇ. 1.1ರಷ್ಟು ಕುಸಿತವಾಗಿತ್ತು. ಇದು ಕಳೆದ 6 ತ್ರೈಮಾಸಿಕಗಳಲ್ಲೇ ದಾಖಲಾಗಿರುವ ಕಡಿಮೆ ಲಾಭದ ಪ್ರಮಾಣ ಎಂದು ಕೇರ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

    ಡಿಸೆಂಬರ್‍ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಏರ್‍ಟೆಲ್ ಆದಾಯದಲ್ಲಿ ಶೇ. 10.4ರ ಕುಸಿತವಾಗಿದ್ದರೆ, ಐಡಿಯಾದ ಆದಾಯದಲ್ಲಿ ಶೇ. 10.8ರಷ್ಟು ಇಳಿಕೆಯಾಗಿತ್ತು ಎಂದು ಕೇರ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

    ಮೆಸೇಜ್, ಕರೆ, ಆಪ್ ಗಳನ್ನು ಉಚಿತವಾಗಿ ನೀಡಿ, ಡೇಟಾಗೆ ಮಾತ್ರ ಜಿಯೋ ದರ ನಿಗದಿ ಪಡಿಸಿದ ಕಾರಣ ಟೆಲಿಕಾಂ ಕಂಪೆನಿಗಳ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಜಿಯೋಗೆ ಸ್ಪರ್ಧೆ ನೀಡಲು ಫೆಬ್ರವರಿಯಲ್ಲಿ ಏರ್‍ಟೆಲ್ ನಾರ್ವೆಯ ಟೆಲಿನಾರ್ ಕಂಪೆನಿಯ ಭಾರತದ ಘಟಕವನ್ನು ಖರೀದಿಸಿತ್ತು. ಮಾರ್ಚ್‍ನಲ್ಲಿ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಂ ಸಂಸ್ಥೆ ವೊಡಾಫೋನ್ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಘೋಷಿಸಿತ್ತು. ಐಡಿಯಾ ಹಾಗೂ ವೊಡಾಫೋನ್  ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ಹೊರಹೊಮ್ಮಲಿದೆ.

    ಸೆಪ್ಟೆಂಬರ್‍ನಲ್ಲಿ ಆರಂಭಗೊಂಡಿದ್ದ ಜಿಯೋ ಆರಂಭದಲ್ಲಿ ಡಿಸೆಂಬರ್ ವರೆಗೆ ಗ್ರಾಹಕರಿಗೆ ವೆಲಕಂ ಆಫರ್ ನೀಡಿತ್ತು. ಇದಾದ ಬಳಿಕ ಮಾರ್ಚ್ 31ರವರೆಗೆ ಹ್ಯಾಪಿ ನ್ಯೂ ಇಯರ್ ಪ್ಲಾನ್ ಬಿಡುಗಡೆ ಮಾಡಿತ್ತು. ಇದಾದ ಬಳಿಕ 99 ರೂ. ನೀಡಿ ಪ್ರೈಮ್ ಸದಸ್ಯರಾದವರಿಗೆ ಸಮ್ಮರ್ ಸರ್‍ಪ್ರೈಸ್ ಆಫರನ್ನು ಪ್ರಕಟಿಸಿ ಬಳಿಕ ಟ್ರಾಯ್ ನಿರ್ದೇಶನ ಮೇಲೆ ಈ ಆಫರ್‍ಗಳನ್ನು ಜಿಯೋ ಹಿಂದಕ್ಕೆ ಪಡೆದುಕೊಂಡಿದೆ. ಇದಾದ ಬಳಿಕ ಏಪ್ರಿಲ್ 11 ರಂದು ಧನ್ ಧನ ಧನ್ ಹೆಸರಿನಲ್ಲಿ ಮೂರು ತಿಂಗಳು ವ್ಯಾಲಿಡಿಟಿ ಹೊಂದಿರುವ ಹೊಸ ಆಫರ್‍ಗಳನ್ನು ಪರಿಚಯಿಸಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಪ್ರಸ್ತುತ ಜಿಯೋಗೆ 10 ಕೋಟಿ ಗ್ರಾಹಕರಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಗ್ರಾಹಕರನ್ನು ಸಂಪಾದಿಸುವ ಮೂಲಕ ಜಿಯೋ ವಿಶ್ವದಾಖಲೆ ನಿರ್ಮಿಸಿದೆ.

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

    ಇದನ್ನೂ ಓದಿ: ಜಿಯೋದಿಂದ ಈಗ ಧನ್ ಧನಾ ಧನ್ ಹೊಸ ಆಫರ್

  • ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ಈ ಫೋನಿನ ಬೆಲೆ 7 ಸಾವಿರ ರೂ. ದಿಢೀರ್ ಇಳಿಕೆ

    ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ಈ ಫೋನಿನ ಬೆಲೆ 7 ಸಾವಿರ ರೂ. ದಿಢೀರ್ ಇಳಿಕೆ

    ಮುಂಬೈ: ಬಿಡುಗಡೆಯಾದ 1 ತಿಂಗಳಿನಲ್ಲಿ ಎಚ್‍ಟಿಸಿ ಕಂಪೆನಿಯ ದುಬಾರಿ ಬೆಲೆಯ ಅಲ್ಟ್ರಾ ಯು ಫೋನಿನ ಬೆಲೆ 7 ಸಾವಿರ ರೂ. ಕಡಿಮೆಯಾಗಿದೆ. ಎಚ್‍ಟಿಸಿ ಯು ಆಲ್ಟ್ರಾ ಫೋನ್ ಈ ಹಿಂದೆ 59,990 ರೂ. ಬೆಲೆಯಲ್ಲಿ ಮಾರ್ಚ್‍ನಲ್ಲಿ ಬಿಡುಗಡೆಯಾಗಿತ್ತು. ಈಗ ಈ ಫೋನನ್ನು 52,990 ರೂ. ನೀಡಿ ಖರೀದಿಸಬಹುದು.

    ಎಚ್‍ಟಿಟಿ ಡಿಸೈರ್ 10 ಪ್ರೋ ಬಿಡುಗಡೆಯಾದಾಗ 26,490 ರೂ. ನಿಗದಿಯಾಗಿತ್ತು. ಆದರೆ ಈಗ ಈ ಫೋನ್ 23,990 ರೂ.ಗೆ ಲಭ್ಯವಿದೆ. ಎರಡೂ ಫೋನ್‍ಗಳು ಎಚ್‍ಟಿಸಿ ಇಂಡಿಯಾ ಸ್ಟೋರ್‍ನಲ್ಲಿ ಲಭ್ಯವಿದ್ದು, ಒಂದು ತಿಂಗಳು ಮಟ್ಟಿಗೆ ದರವನ್ನು ಕಡಿತಗೊಳಿಸಲಾಗಿದೆ ಎಂದು ಎಚ್‍ಟಿಸಿ ತಿಳಿಸಿದೆ.

    ಈ ಎರಡು ಫೋನ್‍ಗಳು ಹೈ ಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್ ಹೊಂದಿದ್ದು, ಎರಡು ಸಿಮ್ ಕಾರ್ಡ್ ಆಥವಾ ಒಂದು ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ಗಳನ್ನು ಹಾಕಬಹುದಾಗಿದೆ.

    ಇದನ್ನೂ ಓದಿ: ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

    ಎಚ್‍ಟಿಸಿ ಆಲ್ಟ್ರಾ ಯು ಗುಣವೈಶಿಷ್ಟ್ಯಗಳು
    ಬಾಡಿ ಮತ್ತು ಡಿಸ್ಲ್ಪೇ:
    ಹೈಬ್ರಿಡ್ ಡ್ಯುಯಲ್ ಸಿಮ್, 162.4*79.8*8 ಮಿಮಿ ಗಾತ್ರ, 170 ಗ್ರಾಂ ತೂಕ, 5.7 ಇಂಚಿನ ಸೂಪರ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(1440*2560 ಪಿಕ್ಸೆಲ್, 513 ಪಿಪಿಐ) ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ ನೂಗಟ್ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ ಕ್ವಾಡ್‍ಕೋರ್ ಪ್ರೊಸೆಸರ್, ಎರಡನೇ ಸಿಮ್‍ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೊರಿ ವಿಸ್ತರಣೆ, 64 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರಾಮ್

    ಇದನ್ನೂ ಓದಿ: 2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

    ಕ್ಯಾಮೆರಾ, ಬ್ಯಾಟರಿ:
    ಹಿಂದುಗಡೆ 12 ಎಂಪಿ ಆಲ್ಟ್ರಾಪಿಕ್ಸೆಲ್ ಕ್ಯಾಮೆರಾ, ಮುಂದುಗಡೆ, 16 ಎಂಪಿ ಕ್ಯಾಮೆರಾ, 3000 ಎಂಎಎಚ್ ಬ್ಯಾಟರಿ

    ಎಚ್‍ಟಿಸಿ ಡಿಸೈರ್ 10 ಪ್ರೋ ಗುಣವೈಶಿಷ್ಟ್ಯಗಳು
    ಬಾಡಿ ಮತ್ತು ಡಿಸ್ಪ್ಲೇ:
    ಡ್ಯುಯಲ್ ಹೈ ಬ್ರಿಡ್ ಸಿಮ್, 156.5*76*7.9 ಮಿ.ಮೀ ಗಾತ್ರ, 165 ಗ್ರಾಂ ತೂಕ, 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಟಿವ್ ಟಚ್‍ಸ್ಕ್ರೀನ್(1080*1920 ಪಿಕ್ಸೆಲ್, 400 ಪಿಪಿಐ), ಕಾರ್ನಿಂಗ್ ಗೊರಿಲ್ಲ ಗ್ಲಾಸ್

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ ಮಾರ್ಶ್‍ಮೆಲೋ 6. ಓಎಸ್, ಮೀಡಿಯಾಟೆಕ್ ಆಕ್ಟೋ ಕೋರ್ ಪ್ರೊಸೆಸರ್, ಮಾಲಿ ಗ್ರಾಫಿಕ್ಸ್ ಪ್ರೊಸೆಸರ್, 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣ ಸಾಮಥ್ರ್ಯ, 64 ಜಿಬಿ ಆಂತರಿಕ, ಮೆಮೊರಿ, 4ಜಿಬಿ ರಾಮ್,

    ಕ್ಯಾಮೆರಾ, ಬ್ಯಾಟರಿ:
    ಹಿಂದುಗಡೆ 20 ಎಂಪಿ, ಮುಂದುಗಡೆ 13 ಎಂಪಿ ಕ್ಯಾಮೆರಾ, 3000 ಎಂಎಎಚ್ ಬ್ಯಾಟರಿ

    ಇದನ್ನೂ ಓದಿ:ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

  • ಭಾರತದ ನಿವೃತ್ತ ನೌಕಾ ಸೇನೆಯ ಅಧಿಕಾರಿಗೆ ಪಾಕ್‍ನಲ್ಲಿ ಗಲ್ಲು ಶಿಕ್ಷೆ

    ಭಾರತದ ನಿವೃತ್ತ ನೌಕಾ ಸೇನೆಯ ಅಧಿಕಾರಿಗೆ ಪಾಕ್‍ನಲ್ಲಿ ಗಲ್ಲು ಶಿಕ್ಷೆ

    ನವದೆಹಲಿ: ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.

    ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿದೆ.

    ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಕೂಲಭೂಷಣ್ ಯಾದವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು.

    ಇದನ್ನೂ ಓದಿ: 13 ವರ್ಷದ ಹಿಂದೆ ಸೆಹ್ವಾಗ್ ಮುಲ್ತಾನ್ ಸುಲ್ತಾನ್ ಆದ ಕಥೆ ಓದಿ

  • ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

    ಭಾರತದಲ್ಲಿ ಸ್ಯಾಮ್‍ಸಂಗ್ ಸೋಲಿಸಿ ಅಗ್ರಪಟ್ಟಕ್ಕೆ ಏರಿದ ಕ್ಸಿಯೋಮಿ: ಯಾವ ಕಂಪೆನಿಗೆ ಎಷ್ಟನೇ ಸ್ಥಾನ?

    ಬೋಸ್ಟನ್: ಇದೆ ಮೊದಲ ಬಾರಿಗೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾದ ಕ್ಸಿಯೋಮಿ ಕಂಪೆನಿ ನಂಬರ್ ಒನ್ ಬ್ರಾಂಡ್ ಪಟ್ಟಕ್ಕೆ ಏರಿದೆ. ಗ್ರಾಹಕರು ಇಷ್ಟಪಡುವ ಸ್ಮಾರ್ಟ್ ಫೋನ್‍ ಬ್ರಾಂಡ್ ಕಂಪೆನಿಗಳ ಪಟ್ಟಿಯಲ್ಲಿ ಕ್ಸಿಯೋಮಿ ಸ್ಯಾಮ್‍ಸಂಗ್ ಕಂಪೆನಿಯನ್ನು ಸೋಲಿಸಿ ಮೊದಲ ಸ್ಥಾನವನ್ನುಗಳಿಸಿದೆ.

    ಅಮೆರಿಕದ ಸ್ಟ್ರಾಟೆಜಿ ಅನಾಲಿಟಿಕ್ಸ್ ಅಧ್ಯಯನ ನಡೆಸಿ ಭಾರತದ ಟಾಪ್ ಬ್ರಾಂಡ್ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶೇ.26 ರಷ್ಟು ಜನ ಕ್ಸಿಯೋಮಿಯನ್ನು ಇಷ್ಟಪಟ್ಟಿದ್ದರೆ, ಶೇ.12ರಷ್ಟು ಜನ ಸ್ಯಾಮ್‍ಸಂಗ್ ಫೋನ್ ಇಷ್ಟಪಟ್ಟಿದ್ದಾರೆ.

    ಅಧ್ಯಯನದಲ್ಲಿ ಕ್ಯಾಮೆರಾ ಗುಣಮಟ್ಟ, ಮೆಗಾಪಿಕ್ಸೆಲ್, ಸ್ಕ್ರೀನ್ ಗಾತ್ರಗಳನ್ನು ಆಧಾರಿಸಿ ಈ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

    ಭಾರತದಲ್ಲಿ ಶೇ.6 ರಷ್ಟು ಜನ ಮಾತ್ರ 35 ಸಾವಿರ ರೂ. ಗಿಂತಲೂ ಹೆಚ್ಚಿನ ಸ್ಮಾರ್ಟ್ ಫೋನನ್ನು ಖರೀದಿಸುತ್ತಾರೆ. ಸ್ಮಾರ್ಟ್ ಫೋನ್ ಖರೀದಿ ಮಾಡುವ ಜನಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನ 10 ಸಾವಿರ ಮತ್ತು 20 ಸಾವಿರ ರೂ. ಒಳಗಿನ ಫೋನ್‍ಗಳನ್ನು ಖರೀದಿ ಮಾಡುತ್ತಾರೆ ಎಂದು ಅಧ್ಯಯನ ತಿಳಿಸಿದೆ.

    ಸ್ಟ್ರಾಟೆಜಿ ಅನಾಲಿಸ್ಟ್ ಸಂಸ್ಥೆಯ ಉಪಾಧ್ಯಕ್ಷ ಡೇವಿಡ್ ಕೇರ್ ಪ್ರತಿಕ್ರಿಯಿಸಿ, ಭಾರತದಲ್ಲಿ ನೋಕಿಯಾ ಫೋನ್‍ಗಳು ಮಾರುಕಟ್ಟೆಗೆ ಬಿಡುಗಡೆಯಾದರೆ ಆಂಡ್ರಾಯ್ಡ್ ಬ್ರಾಂಡ್‍ಗಳ ನಡುವೆ ಮತ್ತಷ್ಟು ಪೈಪೋಟಿ ಆಗಲಿದೆ ಎಂದಿದ್ದಾರೆ.

    ಸ್ಟ್ರಾಟೆಜಿ ಅನಾಲಿಸ್ಟ್ ಸಂಸ್ಥೆಯ ಹಿರಿಯ ಅನಾಲಿಸ್ಟ್ ರಾಜೀವ್ ನಾಯರ್ ಪ್ರತಿಕ್ರಿಯಿಸಿ, ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ 2016ರ ನಾಲ್ಕನೇಯ ತ್ರೈಮಾಸಿಕದಲ್ಲಿ ಕ್ಸಿಯೋಮಿ ಟಾಪ್ 3 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಅವಧಿಯಲ್ಲಿ ಕ್ಸಿಯೋಮಿ ಶೇ.10 ರಷ್ಟು ಮಾರುಕಟ್ಟೆ ಪಾಲನ್ನು ಗಳಿಸಿದೆ ಎಂದು ತಿಳಿಸಿದ್ದಾರೆ.

    ಯಾವುದಕ್ಕೆ ಎಷ್ಟನೇ ಸ್ಥಾನ?:
    ಲೆನೊವೊ ಶೇ.6, ಮೊಟರೊಲಾ ಶೇ.7,ಮೈಕ್ರೋಮ್ಯಾಕ್ಸ್ ಶೇ.2, ಆಪಲ್ ಶೇ.12, ಒನ್ ಪ್ಲಸ್ ಶೇ.6 ರಷ್ಟು ಜನ ಇಷ್ಟಪಡುತ್ತಾರೆ ಎಂದು ಸ್ಟ್ರಟೆಜಿ ಅನಾಲಿಸ್ಟ್ ತಿಳಿಸಿದೆ.

    ಕ್ಸಿಯೋಮಿ ಭಾರತದ ಮಾರುಕಟ್ಟೆಗೆ 2014ರಲ್ಲಿ ಪ್ರವೇಶಿಸಿದ್ದು, ಹೊಸ ಫೋನ್ ಬಿಡುಗಡೆಯಾದ ಸಂದರ್ಭದಲ್ಲಿ ಯಾವುದಾದರು ಒಂದು ಆನ್‍ಲೈನ್ ಶಾಪಿಂಗ್ ತಾಣದ ಜೊತೆ ಒಪ್ಪಂದ ಮಾಡಿಕೊಂಡು ಫ್ಲಾಶ್ ಸೇಲ್ ನಲ್ಲಿ ಆ ಫೋನ್‍ಗಳನ್ನು ಮಾರಾಟ ಮಾಡುವ ಮಾರುಕಟ್ಟೆ ತಂತ್ರವನ್ನು ಅನುಸರಿಕೊಂಡು ಬಂದಿದೆ.

    20 ಸಾವಿರ ರೂ. ಒಳಗಿನ ಫೋನ್‍ಗಳನ್ನು ಹೆಚ್ಚಾಗಿ ಕ್ಸಿಯೋಮಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಕಾರಣಕ್ಕಾಗಿ ಕ್ಸಿಯೋಮಿ ಈಗ ದೇಶದ ನಂಬರ್ ಒನ್ ಗ್ರಾಹಕರು ಇಷ್ಟಪಟ್ಟುವ ಸ್ಮಾರ್ಟ್ ಫೋನ್ ಬ್ರಾಂಡ್ ಕಂಪೆನಿಯಾಗಿದೆ.

    ಇದನ್ನೂ ಓದಿ: 2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

    ಮೂರನೇ ಸ್ಥಾನದಲ್ಲಿ ಕ್ಸಿಯೋಮಿ: 2016 ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿನ ದೇಶದ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಕೌಂಟರ್‍ಪಾಯಿಂಟ್ ಸಂಸ್ಥೆ ಅಧ್ಯಯನ ನಡೆಸಿ ಟಾಪ್ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಶೇ.24 ಪಾಲುಗಳನ್ನು ಪಡೆಯುವ ಮೂಲಕ ಸ್ಯಾಮ್‍ಸಂಗ್ ಮೊದಲ ಸ್ಥಾನದಲ್ಲಿದ್ದರೆ, ಶೇ.10ರಷ್ಟು ಪಾಲುಗಳನ್ನು ಪಡೆಯುವ ಮೂಲಕ ವಿವೊ ಎರಡನೇ ಸ್ಥಾನದಲ್ಲಿತ್ತು. ಕ್ಸಿಯೋಮಿ ಮತ್ತು ಲೆನೊವೊ ಶೇ.9 ರಷ್ಟು ಪಾಲನ್ನು ಪಡೆದಿದ್ದರೆ, ಒಪ್ಪೋ ಶೇ.8ರಷ್ಟು ಪಾಲನ್ನು ಪಡೆದಿತ್ತು.

    2016ರಲ್ಲಿ ಮೈಲಿಗಲ್ಲು: ಕ್ಸಿಯೋಮಿ 2016ರ ಮಾರ್ಚ್ ನಲ್ಲಿ ರೆಡ್‍ಮೀ ನೋಟ್ 3 ಬಿಡುಗಡೆ ಮಾಡಿತ್ತು. ಬಿಡುಗಡೆಯಾದ 5 ತಿಂಗಳಿನಲ್ಲಿ 17 ಲಕ್ಷ ಫೋನ್‍ಗಳನ್ನು ಮಾರಾಟ ಮಾಡಿದ್ದರೆ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಒಟ್ಟು 23 ಲಕ್ಷ ಫೋನ್‍ಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲನ್ನು ಬರೆದಿತ್ತು. ಈ ಮೂಲಕ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಾರಾಟವಾದ ಫೋನ್ ಎಂಬ ಹೆಗ್ಗಳಿಕೆಗೆ ಕ್ಸಿಯೋಮಿ ರೆಡ್ ಮೀ ನೋಟ್ 3 ಪಾತ್ರವಾಗಿತ್ತು.

    ಇದನ್ನೂ ಓದಿ:ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?