Tag: india

  • ಜಿಎಸ್‍ಟಿ ಎಫೆಕ್ಟ್: ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆ

    ಜಿಎಸ್‍ಟಿ ಎಫೆಕ್ಟ್: ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆ

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ್ದೆ ತಡ ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆಯಾಗಿದೆ.

    ಕಳೆದ 6 ವರ್ಷದಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, 14.2 ಕೆಜಿ ತೂಕದ ಸಿಲಿಂಡರ್ ಬೆಲೆ 32 ರೂ. ಏರಿಕೆಯಾಗಿದೆ. ದೆಹಲಿಯಲ್ಲಿ ಜಿಎಸ್‍ಟಿ ಜಾರಿಯಾಗುವುದಕ್ಕೂ ಮೊದಲು ಸಬ್ಸಿಡಿ ಸಹಿತ ಪ್ರತಿ ಸಿಲಿಂಡರ್ ಬೆಲೆ 446.65 ರೂ. ಇದ್ದರೆ, ಈಗ ಈ ಬೆಲೆ 477.46 ರೂ.ಗೆ ತಲುಪಿದೆ.

    ಕೋಲ್ಕತ್ತಾದಲ್ಲಿ 480.32 ರೂ. ಇದ್ದರೆ, ಚೆನ್ನೈನಲ್ಲಿ 465.56 ರೂ. ಇದೆ. ಸಬ್ಸಿಡಿ ರಹಿತ ಎಲ್‍ಪಿಜಿ ಬೆಲೆ ದೆಹಲಿಯಲ್ಲಿ 564 ರೂ. ಇದೆ.

    ಇಂಡಿಯನ್ ಆಯಿಲ್ ವೆಬ್‍ಸೈಟ್ ಪ್ರಕಾರ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 477 ರೂ. ಇದ್ದರೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 561 ರೂ. ಇರಲಿದೆ. 5 ಕೆಜಿ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 177.50 ರೂ. ಇದ್ದರೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 209.50 ರೂ. ಇರಲಿದೆ.

    ಜೂನ್ 2011ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಎಲ್‍ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆ ಕಂಡಿತ್ತು.

    ಏರಿದ್ದು ಯಾಕೆ?
    ಜಿಎಸ್‍ಟಿಯಲ್ಲಿ ಎಲ್‍ಪಿಜಿ ಶೇ.5ರ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಿದ್ದು,  ಈ ಹಿಂದೆ ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಸಿರು ಇಂಧನಕ್ಕೆ ತೆರಿಗೆ ವಿಧಿಸುತ್ತಿರಲಿಲ್ಲ. ಶೇ.2ರಿಂದ ಶೇ. 4ರಷ್ಟು ವ್ಯಾಟ್ ಶುಲ್ಕ ಮಾತ್ರ ವಿಧಿಸಲಾಗುತಿತ್ತು. ಜಿಎಸ್‍ಟಿ ಜಾರಿ ನಂತರ ಇಂಧನಕ್ಕೆ ತೆರಿಗೆ ವಿಧಿಸದ ರಾಜ್ಯಗಳಲ್ಲಿ ಎಲ್‍ಪಿಜಿ ಬೆಲೆ ಏರಿಕೆಯಾಗಿದೆ.

    ಇಷ್ಟೇ ಅಲ್ಲದೇ ಜೂನ್ ನಿಂದ ಸಬ್ಸಿಡಿ ಮೊತ್ತ ಕಡಿಮೆಯಾಗಿದೆ. ಜೂನ್‍ವರೆಗೆ ಪ್ರತಿ ಸಿಲಿಂಡರ್‍ಗೆ 119.85 ರೂ. ಸಬ್ಸಿಡಿ ಸಿಗುತಿತ್ತು. ಆದರೆ ಹೊಸ ಅಧಿಸೂಚನೆಯಂತೆ ಈಗ 107 ರೂ. ಹಣ ಸಬ್ಸಿಡಿಯಾಗಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ.

    1 ವರ್ಷದಲ್ಲಿ ಒಂದು ಕುಟುಂಬಕ್ಕೆ 14.2 ಕೆಜಿ ತೂಕದ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಕೇಂದ್ರ ಸರ್ಕಾರ ನೀಡುತ್ತಿದೆ.

     

  • ಬೀದರ್‍ನಲ್ಲಿ ಕೊಹ್ಲಿ ವಿರುದ್ಧ ಕೇಂದ್ರ ಸಚಿವ ರಾಮದಾಸ್ ಅಠವಾಲೆ ಕಿಡಿ

    ಬೀದರ್‍ನಲ್ಲಿ ಕೊಹ್ಲಿ ವಿರುದ್ಧ ಕೇಂದ್ರ ಸಚಿವ ರಾಮದಾಸ್ ಅಠವಾಲೆ ಕಿಡಿ

    ಬೀದರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದು ಅವಮಾನವಾಗಿದೆ. ಈ ಬಗ್ಗೆ ತಖೆಯಾಗಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವ ರಾಮದಾಸ್ ಅಠವಾಲೆ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.

    ಬೀದರ್‍ನ ವಸತಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, ಹೀನಾಯವಾಗಿ ಪಾಕಿಸ್ತಾನದ ವಿರುದ್ಧ ಸೋತಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು. ಟೀಂ ಇಂಡಿಯಾವನ್ನು ಬದಲಾವಣೆ ಮಾಡಬೇಕು. ಈ ಪಂದ್ಯದ ಬಗ್ಗೆ ತನಿಖೆಯಾಗಬೇಕು. ಕ್ರಿಕೆಟ್ ಮತ್ತು ಕ್ರೀಡೆಯಲ್ಲಿ ದಲಿತರಿಗೆ ಶೇ.25 ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದ್ರು.

    ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು: ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟ ಪಾಕ್

    ಬಳಿಕ ಹೋ ರಕ್ಷಣೆ ಬಗ್ಗೆ ಮಾತನಾಡಿದ ಸಚಿವರು, ಇಂದು ಗೋ ರಕ್ಷಣೆ ಹೆಸರಿನಲ್ಲಿ ಗೂಂಡಾಗಿರಿ ನಡೆಯುತ್ತಿದ್ದು, ಕಾನೂನು ಕ್ರಮ ಕೈಗೆತ್ತಿಕೊಳ್ಳಬೇಕು. ಗೋ ರಕ್ಷಣೆ ಹೆಸರಿನಲ್ಲಿ ದಲಿತ ಹಾಗೂ ಮುಸ್ಲಿಮರ ಕೊಲೆಯಾಗುತ್ತಿದ್ದು, ಮೋದಿ ಸರ್ಕಾರವನ್ನು ಕೆಡಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ರಾಮದಾಸ್ ಅಠವಾಲೆ ನಕಲಿ ಗೋ ರಕ್ಷಕರ ವಿರುದ್ಧ ಕಿಡಿಕಾರಿದರು.

  • ಗಂಗೂಲಿ ದಾಖಲೆ ಬ್ರೇಕ್ ಮಾಡಿ ಡ್ರೆಸ್ಸಿಂಗ್ ರೂಂನಲ್ಲಿ ಮೌನಕ್ಕೆ ಶರಣಾದ ಧೋನಿ: ವಿಡಿಯೋ ನೋಡಿ

    ಗಂಗೂಲಿ ದಾಖಲೆ ಬ್ರೇಕ್ ಮಾಡಿ ಡ್ರೆಸ್ಸಿಂಗ್ ರೂಂನಲ್ಲಿ ಮೌನಕ್ಕೆ ಶರಣಾದ ಧೋನಿ: ವಿಡಿಯೋ ನೋಡಿ

    ಆಂಟಿಗುವಾ: ಭಾರತದ ವಿರುದ್ಧದ ನಾಲ್ಕನೇಯ ಏಕದಿನ ಪಂದ್ಯವನ್ನು ವೆಸ್ಟ್ ಇಂಡೀಸ್ 11 ರನ್ ಗಳಿಂದ ಗೆದ್ದಿದ್ದು, ಈ ಪಂದ್ಯದಲ್ಲಿ ಧೋನಿ ಡ್ರೆಸ್ಸಿಂಗ್ ರೂಂನಲ್ಲಿ ಬೇಸರದಲ್ಲಿ ಕುಳಿತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹೌದು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಸುಲಭ ಸವಾಲನ್ನು ಬೆನ್ನಟ್ಟಿದ್ದ ಭಾರತ 49.4 ಓವರ್ ಗಳಲ್ಲಿ 178 ರನ್ ಗಳಿಗೆ ಆಲೌಟ್ ಆಯ್ತು.

    ಈ ಪಂದ್ಯದಲ್ಲಿ ಧೋನಿ 54 ರನ್ ಹೊಡೆದಿದ್ದರು. ಧೋನಿ ಇಷ್ಟು ರನ್ ಹೊಡೆಯಲು 114 ಎಸೆತಗಳನ್ನು ಎದುರಿಸಿದ್ದರು. ಈ ಇನ್ನಿಂಗ್ಸ್ ನಲ್ಲಿ ಧೋನಿ ಒಂದೇ ಬೌಂಡರಿ ಹೊಡೆದಿದ್ದರು.

    ಪಂದ್ಯ ಸೋತ ಬಳಿಕ ಟೀಂ ಇಂಡಿಯಾ ಆಟಗಾರರು ವೆಸ್ಟ್ ಇಂಡೀಸ್ ತಂಡವನ್ನು ಅಭಿನಂದಿಸುತ್ತಿದ್ದರೆ, ಧೋನಿ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತಲ್ಲಿಯೇ ಇದ್ದರು. ಈ ವೇಳೆ ಆಟಗಾರರೊಬ್ಬರು ಕೈ ಕುಲುಕಿದಾಗಲೂ ಧೋನಿ ಮನಸ್ಸಿಲ್ಲದ ಮನಸ್ಸನಿಂದ ಶೇಕ್ ಹ್ಯಾಂಡ್ ಮಾಡಿದ್ದರು.

    ಗಂಗೂಲಿ ದಾಖಲೆ ಬ್ರೇಕ್: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಈ ಹಿಂದೆ 2005ರಲ್ಲಿ ಶ್ರೀಲಂಕಾ ವಿರುದ್ಧ  104 ಎಸೆತಗಳಲ್ಲಿ ಅರ್ಧಶತಕ ಹೊಡೆದಿದ್ದರು. ಇಲ್ಲಿಯವರೆಗೆ ಅತಿ ಹೆಚ್ಚು ಎಸೆತಗಳನ್ನು ಎದುರಿಸಿ 50 ರನ್ ಹೊಡೆದ ಟೀಂ ಇಂಡಿಯಾದ ಆಟಗಾರ ಎನ್ನುವ ದಾಖಲೆ ಸೌರವ್ ಗಂಗೂಲಿ ಹೆಸರಿನಲ್ಲಿತ್ತು. ಈಗ ಧೋನಿ 108 ಎಸೆತಗಳಲ್ಲಿ 50 ರನ್ ಹೊಡೆಯುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

    ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ ಎರಡನೇ ಪಂದ್ಯವನ್ನು ಭಾರತ 105 ರನ್ ಗಳಿಂದ ಗೆದ್ದುಕೊಂಡಿತ್ತು. ಮೂರನೇ ಪಂದ್ಯವನ್ನು ಭಾರತ 93 ರನ್ ಗಳಿಂದ ಗೆದ್ದುಕೊಂಡಿತ್ತು. ನಾಲ್ಕನೇಯ ಪಂದ್ಯವನ್ನು ವಿಂಡೀಸ್ ಗೆದ್ದುಕೊಂಡಿದ್ದು, ಕೊನೆಯ ಪಂದ್ಯ ಜುಲೈ 6ರಂದು ನಡೆಯಲಿದೆ.

    https://twitter.com/CricGif17/status/881625413927133185

     

  • ಮಹಿಳಾ ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ 95 ರನ್‍ಗಳ ಭರ್ಜರಿ ಜಯ

    ಮಹಿಳಾ ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ 95 ರನ್‍ಗಳ ಭರ್ಜರಿ ಜಯ

    ಡರ್ಬಿ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 95 ರನ್‍ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆರಂಭಿಸಿದ ಭಾರತ 50 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ 38.1 ಓವರ್‍ಗಳಲ್ಲಿ 74 ರನ್ ಗಳಿಸಿ ಆಲೌಟ್ ಆಯ್ತು.

    ಟೀ ಇಂಡಿಯಾದ ಮಾರಕ ಬೌಲಿಂಗ್ ಗೆ ತತ್ತರಿಸಿದ ಪಾಕಿಸ್ತಾನ ಪರವಾಗಿ ಆರಂಭಿಕ ಆಟಗಾರ್ತಿ ನಹಿದಾ ಖಾನ್ 23 ರನ್ ಮತ್ತು  ಕೊನೆಯಲ್ಲಿ  ಸನಾ ಮಿರ್ 29 ರನ್ ಗಳಿಸಿ  ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ, ಉಳಿದವರು ಬೇಗನೆ ಔಟಾದರು.

     ಭಾರದ ಪರವಾಗಿ ಪೂನಂ ರಾವುತ್ 47 ರನ್, ದೀಪ್ತಿ ಶರ್ಮಾ 28 ರನ್, ಸುಷ್ಮಾ ವರ್ಮಾ 33 ರನ್ ಬಾರಿಸಿದರು. ಬೌಲಿಂಗ್ ನಲ್ಲಿ  ಏಕ್ತಾ ಬಿಷ್ತ್ 5 ವಿಕೆಟ್ ಪಡೆದು ಮಿಂಚಿದರು.

    ಆಡಿರುವ ಮೂರು ಪಂದ್ಯಗಳನ್ನು ಮಿಥಾಲಿ ರಾಜ್ ಪಡೆ ಗೆದ್ದುಕೊಂಡಿದೆ. ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯವನ್ನು 35 ರನ್ ಗಳಿಂದ ಗೆದ್ದಿದ್ದರೆ, ವಿಂಡೀಸ್ ವಿರುದ್ಧದ ಎರಡನೇ ಪಂದ್ಯವನ್ನು 7 ವಿಕೆಟ್‍ಗಳಿಂದ ಜಯಗಳಿಸಿತ್ತು.

     

  • ಇಸ್ರೇಲ್‍ಗೆ ಭೇಟಿ ನೀಡ್ತಿರೋ ಮೊದಲ ಭಾರತೀಯ ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಸ್ವಾಗತ ಕೋರಿದ ಇಸ್ರೇಲಿ ಪ್ರಜೆಗಳು

    ಇಸ್ರೇಲ್‍ಗೆ ಭೇಟಿ ನೀಡ್ತಿರೋ ಮೊದಲ ಭಾರತೀಯ ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಸ್ವಾಗತ ಕೋರಿದ ಇಸ್ರೇಲಿ ಪ್ರಜೆಗಳು

     

    ನವದೆಹಲಿ: ಪ್ರಧಾನಿ ಮೋದಿಯ ಐತಿಹಾಸಿಕ ಇಸ್ರೇಲ್ ಭೇಟಿಯ ಹಿನ್ನೆಲೆಯಲ್ಲಿ ಇಲ್ಲಿನ ಪ್ರಜೆಗಳು ಮೋದಿಗೆ ಹಿಂದಿಯಲ್ಲಿ ನಮಸ್ತೆ ಮೋದಿಜೀ ಎಂದು ಸ್ವಾಗತ ಕೋರಿದ್ದಾರೆ. ಇದರ ವಿಡಿಯೋವನ್ನ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದೆ.

    ಜುಲೈ 4ರಿಂದ ಆರಂಭವಾಗಿ 3 ದಿನಗಳ ಭೇಟಿಗೆ ಮೋದಿ ಇಸ್ರೇಲ್‍ಗೆ ತೆರಳಲಿದ್ದಾರೆ. ಈ ಮೂಲಕ ಮೋದಿ ಇಸ್ರೇಲ್‍ಗೆ ಭೇಟಿ ನೀಡುತ್ತಿರೋ ಮೊದಲ ಭಾರತೀಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಬುಧವಾರ ಸಂಜೆ ವಿದೇಶಾಂಗ ಸಚಿವಾಲಯ ಮೋದಿ ಭೇಟಿಯನ್ನು ಅಧಿಕೃತವಾಗಿ ಘೊಷಿಸಿದೆ. ಜೆರುಸಲೆಂನಲ್ಲಿನ ಇಸ್ರೇಲ್ ಪ್ರಜೆಗಳು ಮೋದಿ ಅವರಿಗೆ ಸ್ವಾಗತ ಕೋರಿರುವ ವಿಡಿಯೋವನ್ನ ಬುಧವಾರ ರಾತ್ರಿ ಇಸ್ರೇಲ್ ರಾಯಭಾರ ಕಚೇರಿ ಹಂಚಿಕೊಂಡಿದೆ.

    ಮಹಿಳೆಯೊಬ್ಬರು ತಮ್ಮ ಎರಡೂ ಕೈಗಳನ್ನ ಜೋಡಿಸಿ, ನಮಸ್ತೇ ಮೋದಿಜೀ, ಇಸ್ರೇಲ್ ಮೆ ಆಪ್ ಕಾ ಸ್ವಾಗತ್ ಹೈ (ಇಸ್ರೇಲ್‍ಗೆ ನಿಮಗೆ ಸ್ವಾಗತ) ಎಂದು ಹೇಳಿದ್ದಾರೆ.

    ಮತ್ತೊಬ್ಬರು “ಭಾರತ್ ಔರ್ ಇಸ್ರೇಲ್ ಕೆ ಸಂಬಂಧೋ ಮೆ ವೃದ್ಧಿ ಹೋ ಔರ್ ಮಜ್‍ಬೂತ್ ಬನೆ (ಭಾರತ ಹಾಗು ಇಸ್ರೇಲ್ ನಡುವಿನ ಬಾಂಧವ್ಯ ವೃದ್ಧಿಸಲಿ ಹಾಗೂ ಗಟ್ಟಿಯಾಗಲಿ ಎಂದು ಆಶಿಸುತ್ತೇನೆ) ಎಂದಿದ್ದಾರೆ.

    ಇದಲ್ಲದೆ ರಾಯಭಾರ ಕಚೇರಿಯ ನವದೆಹಲಿ ಸಿಬ್ಬಂದಿ ಕೂಡ ಒಟ್ಟಾಗಿ ಹಿಂದಿಯಲ್ಲಿ ಆಪ್ ಕೀ ಯಾತ್ರಾ ಶುಭ್ ಹೋ (ನಿಮ್ಮ ಪ್ರಯಾಣ ಸುಖಕರವಾಗಿರಲಿ) ಎಂದು ಕೋರಿದ್ದಾರೆ. ಭಾರತದ ಇಸ್ರೇಲ್ ರಾಯಭಾರಿ ಡೇನಿಯಲ್ ಕಾರ್ಮನ್ ಕೂಡ ವಿಡಿಯೋದ ಕೊನೆಯಲ್ಲಿ ಹಿಂದಿ ಹಾಗೂ ಹಿಬ್ರೀವ್ ಭಾಷೆಯಲ್ಲಿ ಸ್ವಾಗತ ಕೋರಿದ್ದಾರೆ.

    ಈ ವಿಡಿಯೋವನ್ನ ಈಗಾಗಲೇ 5,700ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು 3,600ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಮೋದಿ ಕೂಡ ಗುರುವಾರ ಬೆಳಿಗ್ಗೆ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ ಬಹುತ್ ಬಹುತ್ ಧನ್ಯವಾದ್ ಎಂದಿದ್ದಾರೆ.

    ಇಸ್ರೇಲ್ ಪ್ರಜೆಗಳ ಈ ಕಾರ್ಯವನ್ನು ಭಾರತೀಯರು ಕೂಡ ಶ್ಲಾಘಿಸಿದ್ದಾರೆ.

    https://twitter.com/Dayweekaa/status/880265480291971072?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fnamaste-modi-ji-ahead-of-visit-israelis-welcome-pm-narendra-modi-in-hindi-1718456

  • ಬಾಹ್ಯಾಕಾಶದಲ್ಲಿ ಮುಂದುವರಿದ ಇಸ್ರೋ ಪರಾಕ್ರಮ: ಜಿಸ್ಯಾಟ್-17 ಉಪಗ್ರಹ ಉಡಾವಣೆ ಯಶಸ್ವಿ

    ಬಾಹ್ಯಾಕಾಶದಲ್ಲಿ ಮುಂದುವರಿದ ಇಸ್ರೋ ಪರಾಕ್ರಮ: ಜಿಸ್ಯಾಟ್-17 ಉಪಗ್ರಹ ಉಡಾವಣೆ ಯಶಸ್ವಿ

    ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪರಾಕ್ರಮ ಮುಂದುವರಿದಿದ್ದು, ಹವಾಮಾನ ದತ್ತಾಂಶ, ಉಪಗ್ರಹ ಆಧರಿತ ಶೋಧ ಸೇವೆಗೆ ಬಳಕೆಯಾಗುವ ಜಿಸ್ಯಾಟ್-17 ಉಡಾವಣೆ ಯಶಸ್ವಿಯಾಗಿದೆ.

    ಫ್ರೆಂಚ್ ಗಯಾನದ ಕೌರೌ ಉಡಾವಣಾ ಕೇಂದ್ರದಿಂದ ಭಾರತೀಯ ಕಾಲಮಾನ ನಸುಕಿನ ಜಾವ 2.30ರ ವೇಳೆಗೆ 3,477 ಕೆ.ಜಿ ತೂಕದ ಜಿಸ್ಯಾಟ್-17 ಉಪಗ್ರಹವನ್ನು ಹೊತ್ತಕೊಂಡು ಏರಿಯಾನ್ 5 ರಾಕೆಟ್ ನಭಕ್ಕೆ ಹಾರಿತ್ತು.

    ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ.

    ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋ ಉಡಾವಣೆ ಮಾಡಿದ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜೂನ್ 5ರಂದು ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಮೂಲಕ ಜಿಸ್ಯಾಟ್ -19 ಉಪಗ್ರಹಗಳು ಕಕ್ಷೆಗೆ ಸೇರಿದ್ದರೆ, ಜೂನ್ 23 ರಂದು ಪಿಎಸ್‍ಎಲ್‍ವಿ ಸಿ38 ರಾಕೆಟ್ ಮೂಲಕ ಕಾರ್ಟೋಸ್ಯಾಟ್ 2 ಉಪಗ್ರಹ ಕಕ್ಷೆ ಸೇರಿತ್ತು.

    ವಿದೇಶದಿಂದ ಉಪಗ್ರಹ ಉಡಾವಣೆ ಮಾಡಿದ್ದು ಯಾಕೆ?
    ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಉಡಾವಣೆ ಯಶಸ್ವಿಯಾಗುವುದಕ್ಕೂ ಮೊದಲು ಇಸ್ರೋ ತೂಕದ ಉಪಗ್ರಹಗಳ ಉಡಾವಣೆಗಾಗಿ ವಿದೇಶಿ ಸಂಸ್ಥೆಗಳನ್ನು ಅವಲಂಬಿಸಿತ್ತು. ಈ ಕಾರಣಕ್ಕೆ ಮೊದಲೇ ಒಪ್ಪಂದವಾಗಿದ್ದ ಹಿನ್ನೆಲೆಯಲ್ಲಿ ಇಸ್ರೋ 3,477 ಕೆ.ಜಿ ತೂಕದ ಉಪಗ್ರಹವನ್ನು ಫ್ರೆಂಚ್ ಗಯಾನ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಿದೆ.

    ಇನ್ನು ಮುಂದೆ ಅವಲಂಬನೆ ಅಗತ್ಯವಿಲ್ಲ:
    ಇಸ್ರೋ ಹೆಚ್ಚಾಗಿ ತನ್ನ ಉಪಗ್ರಹಗಳನ್ನು ಉಡಾವಣೆ ಮಾಡಲು ಪಿಎಸ್‍ಎಲ್‍ವಿ(ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್), ಮತ್ತು ಜಿಎಸ್‍ಎಲ್‍ವಿ(ಜಿಯೋಸಿಂಕ್ರೋನಾಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಬಳಕೆ ಮಾಡುತ್ತದೆ. ಪಿಎಸ್‍ಎಲ್‍ವಿ 1500 ಕೆಜಿ ತೂಕ ಸಾಮರ್ಥ್ಯದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ 4 ಸಾವಿರ ಕೆಜಿ ತೂಕದ ಉಪಗ್ರಹವನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. 640 ಟನ್ ತೂಕದ ಈ ರಾಕೆಟ್ ಪ್ರಯಾಣಿಕರಿಂದ ತುಂಬಿರುವ 5 ಜಂಬೋ ವಿಮಾನಗಳ ತೂಕಕ್ಕೆ ಸಮವಾಗಿದ್ದು, ಜೂನ್ 5ರಂದು ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಮೂಲಕ 3136 ಕೆಜಿ ತೂಕದ ಜಿಸ್ಯಾಟ್ -19 ಉಪಗ್ರಹಗಳು ಕಕ್ಷೆಗೆ ಸೇರಿತ್ತು.

    ಮೇ 5 ರಂದು ಜಿಎಸ್‍ಎಲ್‍ವಿ ಮಾರ್ಕ್ 2 ರಾಕೆಟ್‍ನೊಂದಿಗೆ 2,230 ಕೆಜಿ ತೂಕದ ದಕ್ಷಿಣ ಏಷ್ಯಾ ಉಪಗ್ರಹ ಜಿಸ್ಯಾಟ್ 9 ಉಡಾವಣೆಯನ್ನು ಇಸ್ರೋ ಮಾಡಿತ್ತು.

    ಇದನ್ನೂ ಓದಿ: ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!

  • ಕೇಂದ್ರ ಸರ್ಕಾರಿ ನೌಕರರಿಗೆ ಗಿಫ್ಟ್: ಯಾವ ಭತ್ಯೆ ಎಷ್ಟು ಹೆಚ್ಚಳ?

    ಕೇಂದ್ರ ಸರ್ಕಾರಿ ನೌಕರರಿಗೆ ಗಿಫ್ಟ್: ಯಾವ ಭತ್ಯೆ ಎಷ್ಟು ಹೆಚ್ಚಳ?

    ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಪ್ರಧಾನಿ ಮೋದಿ ಸರ್ಕಾರ ಬಿಗ್ ಗಿಫ್ಟ್ ಕೊಟ್ಟಿದೆ. 7ನೇ ವೇತನ ಆಯೋಗದ ಶಿಫಾರಸಿಗೆ ಒಪ್ಪಿಗೆ ಕೊಟ್ಟಿದೆ. ಕೇಂದ್ರದ ಈ ನಿರ್ಧಾರದಿಂದ 50 ಲಕ್ಷ ನೌಕರರಿಗೆ ಬಂಪರ್ ಹೊಡೆದಿದೆ.

    ಜುಲೈ 1ರಿಂದ 7ನೇ ಆಯೋಗದ ಶಿಫಾರಸಿನಂತೆ 34 ಲಕ್ಷ ಉದ್ಯೋಗಿಗಳಿಗೆ ಮತ್ತು ಸೈನ್ಯದಲ್ಲಿರುವ 14 ಲಕ್ಷ ಮಂದಿಗೆ ಭತ್ಯೆ ಸಿಗಲಿದೆ. ಸೈನಿಕರಿಗಾಗಿ ಸಿಯಾಚಿನ್ ಭತ್ಯೆ ಕೂಡ ಘೋಷಣೆ ಮಾಡಿದೆ. ಸಮಿತಿ ಶಿಫಾರಸಿನಂತೆ ಮನೆ ಬಾಡಿಗೆ, ಭತ್ಯೆ ಹೆಚ್ಚಳವಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಏರ್ ಇಂಡಿಯಾವನ್ನು ಖಾಸಗೀಕರಣರ ಮಾಡಲು ಒಪ್ಪಿಗೆ ನೀಡಿದೆ.

    ಎಷ್ಟು ಹೆಚ್ಚಳವಾಗಿದೆ?
    – 3 ಹಂತಗಳಲ್ಲಿ 5,400, 3,600, 1,800 ಮನೆ ಬಾಡಿಗೆ, ಭತ್ಯೆ ಹೆಚ್ಚಳ
    – ಪಿಂಚಣಿದಾರರ ಮಾಸಿಕ ವೈದ್ಯಕೀಯ ಭತ್ಯೆ 500 ರಿಂದ 1 ಸಾವಿರಕ್ಕೆ ಏರಿಕೆ
    – ನಿರಂತರ ಹಾಜರಾತಿ ಭತ್ಯೆ 4,500 ರಿಂದ 6,750 ರೂಗೆ ಏರಿಕೆ
    – ಮಾಸಿಕ ನರ್ಸಿಂಗ್ ಭತ್ಯೆ 4,800 ರಿಂದ 7,200ಕ್ಕೆ ಹೆಚ್ಚಳ
    – ಆಪರೇಷನ್ ಥಿಯೇಟರ್ ಭತ್ಯೆ 360 ರಿಂದ 540ಕ್ಕೆ ಏರಿಕೆ
    – ಹಾಸ್ಪಿಟಲ್ ಪೇಷೆಂಟ್ ಕೇರ್ ಭತ್ಯೆ 2,070 ರಿಂದ 4,100ಕ್ಕೆ ಏರಿಕೆ
    – ಸೈನಿಕರಿಗೆ ಸಿಯಾಚಿನ್ ಭತ್ಯೆ 14 ಸಾವಿರದಿಂದ 30 ಸಾವಿರಕ್ಕೆ ಏರಿಕೆ
    – ಸೇನಾಧಿಕಾರಿಗಳಿಗೆ 21 ಸಾವಿರದಿಂದ 42 ಸಾವಿರಕ್ಕೆ ಸಿಯಾಚಿನ್ ಭತ್ಯೆ ಹೆಚ್ಚಳ

    ಇದನ್ನೂ ಓದಿ: ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?

    ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

  • ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಬೆಂಗಳೂರು: ಜುಲೈ 1 ರಿಂದ ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ. ಕಡ್ಡಾಯಗೊಂಡ ಕಾರಣ ಹೀಗಾಗಿ ಬಹಳಷ್ಟು ಜನ ಹೇಗಪ್ಪಾ  ಆಧಾರ್ ಜೋಡಿಸುವುದು ಎನ್ನುವ ಗೊಂದಲದಲ್ಲಿದ್ದಾರೆ. ಆದರೆ ಈ ವಿಚಾರಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಕೇವಲ ಒಂದೇ ನಿಮಿಷದ ಒಳಗಡೆ ಆನ್‍ಲೈನ್ ಮೂಲಕ ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡಿಗೆ ಜೋಡಿಸಬಹುದು. ಹೇಗೆ ಜೋಡಣೆ ಮಾಡಬಹುದು ಎನ್ನುವ ಸರಳ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

    ಸ್ಟೆಪ್ 1: ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ https://www.incometaxindiaefiling.gov.in/   ಪೋರ್ಟಲ್ ಹೋಗಿ.

    ಸ್ಟೆಪ್ 2: ವೆಬ್‍ಸೈಟ್ ಓಪನ್ ಆಗುತ್ತಿದ್ದಂತೆ ಅದರ ಹೋಮ್ ಪೇಜ್‍ನ ಎಡಗಡೆ ಸರ್ವಿಸಸ್ ಎನ್ನುವ ವಿಭಾಗ ಇದೆ. ಇದರಲ್ಲಿ ಮೇಲುಗಡೆ ಲಿಂಕ್ ಆಧಾರ್ ಬ್ಲಿಂಕ್ ಆಗುತ್ತಿರುತ್ತದೆ. ಈ ಲಿಂಕ್  ಕ್ಲಿಕ್ ಮಾಡಿ.

    ಸ್ಟೆಪ್ 3: ಲಿಂಕ್ ಆಧಾರ್ ಕ್ಲಿಕ್ ಮಾಡಿದ ಕೂಡಲೇ ಒಂದು ಪ್ರತ್ಯೇಕ ಪೇಜ್ ಓಪನ್ ಆಗುತ್ತದೆ. ಇದರಲ್ಲಿ ನೀವು ಪಾನ್ ನಂಬರ್, ಆಧಾರ್ ನಂಬರ್, ಹೆಸರು ಟೈಪಿಸಬೇಕು. ಇದಾದ ಬಳಿಕ ಅಲ್ಲೇ ನೀಡಲಾಗಿರುವ ಕ್ಯಾಪ್ಚಾ ಕೋಡ್ ಟೈಪ್ ಮಾಡಬೇಕು. ಒಂದು ವೇಳೆ ಇಮೇಜ್ ಕ್ಯಾಪ್ಚಾ ಕೋಡ್ ನೋಡಲು ಸಾಧ್ಯವಿಲ್ಲದಿದ್ದರೆ ಒಟಿಪಿ(ಒನ್ ಟೈಮ್ ಪಾಸ್‍ವರ್ಡ್) ಆಯ್ಕೆಯೂ ಇದೆ. ಸೇರಿಸಬೇಕಾದ ಎಲ್ಲ ಮಾಹಿತಿಗಳನ್ನು ಟೈಪಿಸಿದ ಬಳಿಕ ಕೆಳಗಡೆ ಹಸಿರು ಬಾಕ್ಸ್ ನಲ್ಲಿರುವ ಲಿಂಕ್ ಆಧಾರ್ ಕ್ಲಿಕ್ ಮಾಡಬೇಕು. ನೀವು ಟೈಪಿಸಿದ ಆಧಾರ್ ಮಾಹಿತಿ ಮತ್ತು ಪಾನ್ ನಂಬರ್‍ಗಳು ಸರಿಯಾಗಿ ಇದ್ದರೆ ನಿಮ್ಮ ಈ ಜೋಡಣಾ ಪ್ರಕ್ರಿಯೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಸ್ಕ್ರೀನ್‍ನಲ್ಲಿ ಮರುಕ್ಷಣವೇ ಬರುತ್ತದೆ. ಒಂದು ವೇಳೆ ಈ ಸಂದೇಶ ಬಾರದೇ ಇದ್ದಲ್ಲಿ ನೀವು ತಪ್ಪು ಮಾಹಿತಿ ನಮೂದಿಸಿದ್ದೀರಿ ಎಂದು ತಿಳಿದುಕೊಳ್ಳಬಹುದು.

     

    ಮೊಬೈಲ್ ಎಸ್‍ಎಂಎಸ್ ಮೂಲಕ ಜೋಡಣೆ ಹೇಗೆ?
    ಆಧಾರ್ ಜೋಡಣೆಯನ್ನು ಮೊಬೈಲ್ ಮೂಲಕ ಮಾಡಲು ಸಾಧ್ಯವಿದೆ. ನಿಮ್ಮ ಮೊಬೈಲ್ ನಿಂದ 56768 ಅಥವಾ 56161 ಎಸ್‍ಎಂಎಸ್ ಕಳುಹಿಸಿ ಜೋಡಣೆ ಮಾಡಬಹುದು. ನಿಮ್ಮ ಸಂದೇಶ ಈ ಮಾದರಿಯಲ್ಲಿ ಇರಬೇಕು.

    UIDPAN<SPACE><12 digit Aadhaar><Space><10 digit PAN>

    ಉದಾಹರಣೆ: UIDPAN 234567890123 ABCDE1234F

    ಜೋಡಣೆ ಯಾಕೆ ಆಗಲ್ಲ?
    ಪಾನ್ ಕಾರ್ಡ್ ಗೆ ನೀಡಿದ ಮಾಹಿತಿ ಮತ್ತು ಆಧಾರ್ ಕಾರ್ಡ್ ಪಡೆಯುವ ವೇಳೆ ನೀಡಿದ ಮಾಹಿತಿ ಸರಿಯಾಗಿ ಇಲ್ಲದೇ ಇದ್ದರೆ ಈ ಜೋಡಣೆ ಪ್ರಕ್ರಿಯೆ ಯಶಸ್ವಿಯಾಗುವುದಿಲ್ಲ. ವಿಶೇಷವಾಗಿ ಹೆಸರು ತಪ್ಪಾಗಿ ಮುದ್ರಣವಾಗಿದ್ದರೆ, ಇನ್ಶಿಯಲ್ ಸರಿಯಾಗಿ ಹೊಂದಾಣಿಕೆ ಆಗದೇ ಇದ್ದರೆ ಪಾನ್ ಕಾರ್ಡಿಗೆ ಆಧಾರ್ ಜೋಡಣೆಯಾಗುವುದಿಲ್ಲ.

    ಆಧಾರ್ ಕಡ್ಡಾಯ ಮಾಡಿದ್ದು ಯಾಕೆ?
    ಬಹಳಷ್ಟು ಜನ ತೆರಿಗೆಯನ್ನು ವಂಚಿಸಲು ಬೇರೆ ಬೇರೆ ಪಾನ್ ಕಾರ್ಡ್ ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ತೆರಿಗೆಯನ್ನು ವಂಚನೆ ಮಾಡುವ ಕುಳಗಳನ್ನು ನಿಯಂತ್ರಿಸಲು ಪಾನ್ ಕಾರ್ಡಿಗೆ ಆಧಾರ್ ಜೋಡಣೆ ಸಂಬಂಧ ಆದಾಯ ತೆರಿಗೆ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಜುಲೈ 1 ರಿಂದ ಜಾರಿಗೆ ಬರುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಇದನ್ನೂ ಓದಿ: ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?

     

  • ಹಸ್ತಲಾಘವ, ಅಪ್ಪುಗೆ, ಆತ್ಮೀಯತೆ- ನೀವು ನಿದ್ದೆಯಲ್ಲಿದ್ದಾಗ ಮೋದಿ ಟ್ರಂಪ್ ಭೇಟಿ ವೇಳೆ ನಡೆದಿದ್ದೇನು?

    ಹಸ್ತಲಾಘವ, ಅಪ್ಪುಗೆ, ಆತ್ಮೀಯತೆ- ನೀವು ನಿದ್ದೆಯಲ್ಲಿದ್ದಾಗ ಮೋದಿ ಟ್ರಂಪ್ ಭೇಟಿ ವೇಳೆ ನಡೆದಿದ್ದೇನು?

    ವಾಷಿಂಗ್ಟನ್: ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರದಂದು ವೈಟ್ ಹೌಸ್‍ನಲ್ಲಿ ಭೇಟಿ ಮಾಡಿದ್ರು. ಅವರು ವೈಟ್‍ಹೌಸ್‍ನಲ್ಲಿ ಭೇಟಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದ್ರೂ ಇಬ್ಬರ ನಡುವೆ ಇದ್ದ ಆತ್ಮೀಯತೆಯ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗ್ತಿದೆ.

    ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲೆಂಡ್ಸ್ ದೇಶಗಳ ಪ್ರವಾಸದ ಭಾಗವಾಗಿ ಮೋದಿ ಟ್ರಂಪ್ ಅವರನ್ನ ವೈಟ್‍ಹೌಸ್‍ನಲ್ಲಿ ಭೇಟಿ ಮಾಡಿದ್ರು. ಟ್ರಂಪ್ ಹಾಗೂ ಅಮೆರಿಕದ ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್ ಮೋದಿಯವರನ್ನ ಸ್ವಾಗತಿಸಿ ವೈಟ್‍ಹೌಸ್‍ಗೆ ಬರಮಾಡಿಕೊಂಡ್ರು.

    ಮೋದಿ ಮೆಲಾನಿಯಾ ಟ್ರಂಪ್‍ಗೆ ಕಾಶ್ಮೀರಿ ಶಾಲ್, ಕಾಂಗ್ರಾ ಕಣಿವೆಯ ಟೀ, ಜೇನುತುಪ್ಪ, ಹಾಗೂ ಬೆಳ್ಳಿಯ ಬ್ರೇಸ್‍ಲೆಟ್ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಟ್ರಂಪ್ ಅವರಿಗಾಗಿ ಪಂಜಾಬ್‍ನ ಹೊಶಿಯಾರ್‍ಪುರ್‍ನ ವಿಶೇಷತೆಯಾದ ಸುಂದರವಾದ ಕೆತ್ತನೆಯುಳ್ಳ ಮರದ ಪೆಟ್ಟಿಗೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದರೊಂದಿಗೆ ಅಬ್ರಹಂ ಲಿಂಕನ್ ಅವರ ಸ್ಮರಣೆಗಾಗಿ 1965ರಲ್ಲಿ ವಿತರಿಸಲಾಗಿದ್ದ ಪೋಸ್ಟಲ್ ಸ್ಟ್ಯಾಂಪ್ ಕೂಡ ಉಡುಗೊರೆಯಾಗಿ ನೀಡಿದ್ದಾರೆ.

    ನಂತರ ಮೋದಿ ಹಾಗೂ ಟ್ರಂಪ್ ಉನ್ನತ ಮಟ್ಟದ ಮಾತುಕತೆಗಾಗಿ ಕ್ಯಾಬಿನೆಟ್ ರೂಮಿಗೆ ಹೋಗಿ ಚರ್ಚೆ ನಡೆಸಿದ್ರು. ಈ ವೇಳೆ ಟ್ರಂಪ್ ಅಮೆರಿಕದಿಂದ ಭಾರತ ಸೇನಾ ಸಲಕರಣೆಗಳನ್ನ ಕೊಳ್ಳುತ್ತಿರುವುದಕ್ಕೆ ಧನ್ಯವಾದ ತಿಳಿಸಿದ್ರು. ಇತ್ತೀಚೆಗೆ ಟಾಟಾ ಹಾಗೂ ಲಾಕ್‍ಹೀಡ್ ಮಾಟಿರ್ನ್ ನಡುವೆ ಭಾರತದಲ್ಲಿ ಎಫ್-16 ಫೈಟರ್ ಜೆಟ್‍ಗಳ ಉತ್ಪಾದನೆಗೆ ಒಪ್ಪಂದವಾಗಿತ್ತು.

    ನಂತರ ಮೋದಿ ಟ್ರಂಪ್ ಜೋಡಿ ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದ್ರು. ವೈಟ್‍ಹೌಸ್‍ನಲ್ಲಿ ಭಾರತಕ್ಕೆ ನಿಜವಾದ ಸ್ನೇಹಿತನಿದ್ದಾನೆ ಎಂದು ಟ್ರಂಪ್ ಪುನರುಚ್ಛರಿಸಿದ್ರು. ಟ್ರಂಪ್ ಹೇಳಿಕೆಯ ಕೊನೆಯಲ್ಲಿ ಮೋದಿ ಟ್ರಂಪ್ ಅವರನ್ನ ತಬ್ಬಿಕೊಂಡು ಹಸ್ತಲಾಘವ ಮಾಡಿದ್ರು. ಸಾಮಾನ್ಯವಾಗಿ ಟ್ರಂಪ್ ವಿವಿಧ ದೇಶಗಳ ನಾಯಕರೊಂದಿಗೆ ಹಸ್ತಲಾಘವ ಮಾಡುವಾಗ ವಿಚಿತ್ರವಾಗಿ ಮಾಡುತ್ತಾರೆ ಎಂದು ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಮೋದಿ ತಬ್ಬಿಕೊಂಡಿದ್ದು ಒಂದು ಮಾಸ್ಟರ್‍ಸ್ಟ್ರೋಕ್ ಅಂತ ಮಾಧ್ಯಮಗಳು ವರದಿ ಮಾಡಿವೆ.

    ನಂತರ ಮೋದಿ ಮಾತನಾಡಿ ಭಯೋತ್ಪಾದನೆಯ ವಿರುದ್ಧದ ಹೋರಾಟವೇ ಮೊದಲ ಆದ್ಯತೆ ಅಂದ್ರು. ಕೊನೆಗೆ ಟ್ರಂಪ್ ಅವರಿಗೆ ಕುಟುಂಬದೊಂದಿಗೆ ಭಾರತಕ್ಕೆ ಭೇಟಿ ನೀಡಿ ಎಂದು ಆಹ್ವಾನಿಸಿದ್ರು.

    ಇನ್ನು ವೈಟ್‍ಹೌಸ್‍ನಲ್ಲಿ ಮೋದಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಈ ಮೂಲಕ ಮೋದಿ ವೈಟ್‍ಹೌಸ್‍ನಲ್ಲಿ ಟ್ರಂಪ್‍ರಿಂದ ಔತಣ ಕೂಟ ಪಡೆದ ಮೊದಲ ವಿದೇಶಿ ಗಣ್ಯರೆನಿಸಿಕೊಂಡ್ರು.

    ಇನ್ನು ಮೋದಿ ವೈಟ್‍ಹೌಸ್‍ನಿಂದ ಹೊರಡುವಾಗ ಮತ್ತೊಮ್ಮೆ ಟ್ರಂಪ್‍ರನ್ನ ತಬ್ಬಿಕೊಂಡ್ರು.

  • ವಿಂಡೀಸ್ ವಿರುದ್ಧದ ಎರಡನೇ ಏಕದಿನದಲ್ಲಿ ಯುವರಾಜ್ ಎಡವಟ್ಟು!

    ವಿಂಡೀಸ್ ವಿರುದ್ಧದ ಎರಡನೇ ಏಕದಿನದಲ್ಲಿ ಯುವರಾಜ್ ಎಡವಟ್ಟು!

    ಪೋರ್ಟ್ ಆಫ್ ಸ್ಪೈನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 105 ರನ್‍ಗಳಿಂದ ಜಯಿಸಿದ್ದರೂ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಎಡವಟ್ಟು ಮಾಡಿಕೊಂಡಿದ್ದಾರೆ.

    ನಾಲ್ಕನೇಯವರಾಗಿ ಕ್ರೀಸ್ ಗೆ ಆಗಮಿಸಿದ ಯುವರಾಜ್ ಸಿಂಗ್ ಈ ಪಂದ್ಯಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಧರಿಸಿದ್ದ ಜೆರ್ಸಿ ಧರಿಸಿ ಅಂಗಳಕ್ಕೆ ಇಳಿದಿದ್ದರು. ಹಾರ್ದಿಕ್ ಪಾಂಡ್ಯಾ ಔಟಾದ ಕೂಡಲೇ ಕ್ರೀಸ್ ಗೆ ಆಗಮಿಸಿದ ಯುವಿ 14 ರನ್(10 ಎಸೆತ, 1 ಬೌಂಡರಿ)ಸಿಡಿಸಿ 39ನೇ ಓವರ್‍ನಲ್ಲಿ ಔಟಾದರು.

    ಟೂರ್ನ್ ಮೆಂಟ್‍ಗಳಲ್ಲಿ ಟೂರ್ನಿಯ ಲೋಗೋ ಇರುವ ಜೆರ್ಸಿಯನ್ನು ಆಟಗಾರರು ಧರಿಸಬೇಕು ಎನ್ನುವ ನಿಯಮವಿದ್ದರೆ, ಎರಡು ದೇಶಗಳ ಮಧ್ಯೆ ನಡೆಯುವ ಪಂದ್ಯಗಳಲ್ಲಿ ಕ್ರಿಕೆಟ್ ಮಂಡಳಿ ಆಟಗಾರರಿಗೆ ನೀಡಿದ ಜೆರ್ಸಿಗಳನ್ನು ಧರಿಸಬೇಕು. ಹೀಗಾಗಿ ಪಂದ್ಯದಲ್ಲಿ ಯುವಿ ಚಾಂಪಿಯನ್ಸ್ ಟ್ರೋಫಿ ಜೆರ್ಸಿಯನ್ನು ಧರಿಸಿ ಕಣಕ್ಕೆ ಇಳಿದಿದ್ದನ್ನು ನೋಡಿ ಟ್ವಿಟ್ಟರ್‍ನಲ್ಲಿ ಜನ ಪ್ರಶ್ನೆ ಮಾಡುತ್ತಿದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 43 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ವಿಂಡೀಸ್ 43 ಓವರ್ ಗಳಲ್ಲಿ 6ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು.

    5 ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯವನ್ನು ಭಾರತ ಜಯಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ

     

    https://twitter.com/CricketHuddle/status/879256198310240257