Tag: india

  • ಐಟಿ  ರಿಟರ್ನ್ಸ್ ಸಲ್ಲಿಕೆಗೆ ಅವಧಿ ವಿಸ್ತರಣೆ: ಆಗಸ್ಟ್ 5 ಡೆಡ್‍ಲೈನ್

    ಐಟಿ ರಿಟರ್ನ್ಸ್ ಸಲ್ಲಿಕೆಗೆ ಅವಧಿ ವಿಸ್ತರಣೆ: ಆಗಸ್ಟ್ 5 ಡೆಡ್‍ಲೈನ್

    ನವದೆಹಲಿ: ಕೊನೆಯ ಕ್ಷಣದಲ್ಲಿ ಆದಾಯ ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್)  ಸಲ್ಲಿಸಲು ಸಮಸ್ಯೆ ಎದುರಿಸುತ್ತಿದ್ದ ಮಂದಿಗೆ ಗುಡ್ ನ್ಯೂಸ್.

    ಐ.ಟಿ ರಿಟರ್ನ್ಸ್ ವಿವರ ಸಲ್ಲಿಕೆಯ ಅವಧಿಯನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಐ.ಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು.

    ಐ.ಟಿ ರಿಟರ್ನ್ಸ್  ಸಲ್ಲಿಕೆ ವೇಳೆ ಕೊನೆ ಕ್ಷಣದಲ್ಲಿ ಹಲವು ಮಂದಿಗೆ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಡೆಡ್‍ಲೈನ್ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೇ ಐಟಿ ರಿಟರ್ನ್ಸ್ ಪ್ರಕ್ರಿಯೆ ಪೂರ್ಣಗೊಳ್ಳಲು ಆಗಸ್ಟ್ 31ರ ಒಳಗಡೆ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಯಾಗಬೇಕು ಎಂದು ತಿಳಿಸಿದೆ.

  • ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 LTE ಫೋನ್‍ಗಳ ಪಟ್ಟಿ ಇಲ್ಲಿದೆ

    ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 LTE ಫೋನ್‍ಗಳ ಪಟ್ಟಿ ಇಲ್ಲಿದೆ

    ನವದೆಹಲಿ: ಎರಡನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಎಲ್‍ಟಿಇಗೆ ಸಪೋರ್ಟ್ ಮಾಡುವ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಚೀನಾದ ಕ್ಸಿಯೋಮಿ ಕಂಪೆನಿಯ ರೆಡ್‍ಮೀ ನೋಟ್ 4 ಫೋನ್ ಅತಿ ಹೆಚ್ಚು ಮಾರಾಟವಾಗಿದೆ ಎಂದು ವರದಿ ತಿಳಿಸಿದೆ.

    ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಬಗ್ಗೆ ಕೌಂಟರ್ ಪಾಯಿಂಟ್ ಸಂಸ್ಥೆ ಅಧ್ಯಯನ ನಡೆಸಿ ವರದಿ ನೀಡಿದ್ದು, ಅತಿಹೆಚ್ಚು ಮಾರಾಟವಾದ ಫೋನ್ ಗಳ ಪೈಕಿ ರೆಡ್‍ಮೀ ನೋಟ್ 4 ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರೆ, ರೆಡ್‍ಮೀ 4 ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸ್ಯಾಮ್ ಸಂಗ್ ಗೆಲಾಕ್ಸಿ ಜೆ2, ಒಪ್ಪೋ ಎ37, ಸ್ಯಾಮ್‍ಸಂಗ್ ಗೆಲಾಕ್ಸಿ ಜೆ7 ಅನುಕ್ರಮವಾಗಿ ನಂತರದ ಸ್ಥಾನವನ್ನು ಗಳಿಸಿದೆ.

    ಭಾರತದಲ್ಲಿ ಎಲ್‍ಟಿಇ ಟೆಕ್ನಾಲಜಿ ಸಪೋರ್ಟ್ ಮಾಡುವ ಫೋನ್ ಗಳ ಸಂಖ್ಯೆ 15 ಕೋಟಿ ದಾಟಿದೆ. ಚೀನಾ, ಅಮೆರಿಕದ ಬಳಿಕ ಭಾರತದಲ್ಲಿ ಹೆಚ್ಚು ಎಲ್‍ಟಿಇ ಸಪೋರ್ಟ್ ಮಾಡುವ ಫೋನ್ ಗಳು ಮಾರಾಟವಾಗುತ್ತಿದ್ದು, ಮುಂದಿನ ವರ್ಷ ಭಾರತ ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ಹೇಳಿದೆ.

    15 ರಿಂದ 20 ಸಾವಿರ ರೂ. ಒಳಗಿನ ಫೋನ್‍ಗಳು ಹೆಚ್ಚು ಭಾರತದಲ್ಲಿ ಮಾರಾಟವಾಗುತ್ತಿದೆ. ಸ್ಮಾರ್ಟ್ ಫೋನ್ ಗಳ ಮಾರುಕಟ್ಟೆ ಪಾಲಿನಲ್ಲಿ ಎಂದಿನಂತೆ ಸ್ಯಾಮ್ ಸಂಗ್ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಕ್ಸಿಯೋಮಿ, ಒಪ್ಪೋ, ವಿವೊ ಮತ್ತು ಜಿಯೊನಿ ದೇಶದದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ ಫೋನ್ ಬ್ರಾಂಡ್ ಕಂಪೆನಿಗಳು ಎಂದು ಕೌಂಟರ್‍ಪಾಯಿಂಟ್ ತನ್ನ ವರದಿಯಲ್ಲಿ ಹೇಳಿದೆ.

    ಟಾಪ್ 5 ಸ್ಮಾರ್ಟ್ ಫೋನ್ ಕಂಪೆನಿಗಳು: ಸ್ಯಾಮ್‍ಸಂಗ್(ಶೇ.24.1) ಮೊದಲ ಸ್ಥಾನದಲ್ಲಿದ್ದರೆ, ಕ್ಸಿಯೋಮಿ(ಶೇ.15.5) ಎರಡನೇ ಸ್ಥಾನಗಳಿಸಿದೆ. ನಂತರದ ಸ್ಥಾನಗಳನ್ನು ಅನುಕ್ರಮವಾಗಿ ವಿವೊ(ಶೇ.12.7) ಒಪ್ಪೋ(ಶೇ.9.6), ಲೆನೆವೊ(ಶೇ.6.8) ಪಡೆದುಕೊಂಡಿದೆ. ಇತರೇ(ಶೇ.31.3) ಪಾಲನ್ನು ಪಡೆದುಕೊಂಡಿದೆ.

    ಅತಿ ಹೆಚ್ಚು ಮಾರಾಟವಾದ ಟಾಪ್ 5 ಫೋನ್‍ಗಳು
    ರೆಡ್‍ಮೀ ನೋಟ್ 4:

    ಡ್ಯುಯಲ್ ಸಿಮ್(ಹೈ ಬ್ರಿಡ್ ಸಿಮ್ ಸ್ಲಾಟ್), 165 ಗ್ರಾಂ, 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಸ್ಕ್ರೀನ್(1080*1920 ಪಿಕ್ಸೆಲ್, 401 ಪಿಪಿಐ), ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ ಅಕ್ಟಾಕೋರ್ 2.0 GHz ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 13 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ ಲಿಪೋ 4100 ಎಂಎಎಚ್ ಬ್ಯಾಟರಿ.

    ಬೆಲೆ: 64 ಜಿಬಿ ಆಂತರಿಕ ಮೆಮೊರಿ + 4ಜಿಬಿ ರಾಮ್ – 13,500 ರೂ., 32 ಜಿಬಿ ಆಂತರಿಕ ಮೆಮೊರಿ+ 3ಜಿಬಿ ರಾಮ್ – 9,999 ರೂ.

    ರೆಡ್‍ಮೀ 4:

    ಡ್ಯುಯಲ್ ಸಿಮ್(ಹೈಬ್ರಿಡ್ ಸ್ಲಾಟ್), 5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720*1280 ಪಿಕ್ಸೆಲ್, 296 ಪಿಪಿಐ), ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, ಆಕ್ಟಾಕೋರ್ ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 13 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ 4100 ಎಂಎಎಚ್ ಬ್ಯಾಟರಿ.
    ಬೆಲೆ: 16 ಜಿಬಿ ಆಂತರಿಕ ಮೆಮೊರಿ + 2 ಜಿಬಿ ರಾಮ್ – 6,999 ರೂ., 32 ಜಿಬಿ ಆಂತರಿಕ ಮೆಮೊರಿ + 3 ಜಿಬಿ ರಾಮ್ – 8,999 ರೂ., 64 ಜಿಬಿ ಆಂತರಿಕ ಮೆಮೊರಿ + 4 ಜಿಬಿ ರಾಮ್ – 10,999 ರೂ.

    3. ಸ್ಯಾಮ್‍ಸಂಗ್ ಗೆಲಾಕ್ಸಿ ಜೆ2:

    ಡ್ಯುಯಲ್ ಸಿಮ್, 4.7 ಇಂಚಿನ ಸೂಪರ್ ಅಮೊಲೆಡ್ ಸ್ಕ್ರೀನ್(540*960 ಪಿಕ್ಸೆಲ್, 234 ಪಿಪಿಐ), ಆಂಡ್ರಾಯ್ಡ್ ಲಾಲಿಪಾಪ್ ಓಎಸ್, 1.3 GHz ಕ್ವಾಡ್ ಕೋರ್ ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣ ಸಾಮರ್ಥ್ಯ, 8ಜಿಬಿ ಆಂತರಿಕ ಮೆಮೊರಿ, 1 ಜಿಬಿ ರಾಮ್, 5 ಎಂಪಿ ಹಿಂದುಗಡೆ ಕ್ಯಾಮೆರಾ, 2 ಎಂಪಿ ಮುಂದುಗಡೆ ಕ್ಯಾಮೆರಾ, ಲಿಯಾನ್ 2000 ಎಂಎಎಚ್ ಬ್ಯಾಟರಿ.
    ಬೆಲೆ: 7,350 ರೂ.

    4. ಒಪ್ಪೋ ಎ37:


    ಡ್ಯುಯಲ್ ಸಿಮ್, 5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಟಿಟಿವ್ ಸ್ಕ್ರೀನ್(720*1280 ಪಿಕ್ಸೆಲ್, 294 ಪಿಪಿಐ), ಆಂಡ್ರಾಯ್ಡ್ 5.1 ಲಾಲಿಪಾಪ್ ಓಎಸ್, 1.2 GHz ಕ್ವಾಡ್ ಕೋರ್ ಕ್ವಾಲಕಂ ಸ್ನಾಪ್‍ಡ್ರಾಗನ್ ಪ್ರೊಸೆಸರ್, 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 8 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ತೆಗೆಯಲು ಅಸಾಧ್ಯವಾದ ಲಿಯಾನ್ 2630 ಎಂಎಎಚ್ ಬ್ಯಾಟರಿ
    ಬೆಲೆ: 9,990 ರೂ.

    5. ಗೆಲಾಕ್ಸಿ ಜೆ7:


    ಡ್ಯುಯಲ್ ಸಿಮ್, 5.5 ಇಂಚಿನ ಸೂಪರ್ ಅಮೊಲೆಡ್ ಸ್ಕ್ರೀನ್(720*1280 ಪಿಕ್ಸೆಲ್, 267 ಪಿಪಿಐ), ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, 1.5GHz ಅಕ್ಟಾ ಕೋರ್ ಪ್ರೊಸೆಸರ್, 256 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ , 16 ಜಿಬಿ ಆಂತರಿಕ ಮೆಮೊರಿ, 1.5 ಜಿಬಿ ರಾಮ್, 13 ಎಂಪಿ ಹಿಂದುಗಡೆ ಕ್ಯಾಮೆರಾ, 5 ಎಂಪಿ ಮುಂದುಗಡೆ ಕ್ಯಾಮೆರಾ, ತೆಗೆಯಲು ಸಾಧ್ಯವಿರುವ ಲಿಯಾನ್ 3300 ಎಂಎಎಚ್ ಬ್ಯಾಟರಿ.
    ಬೆಲೆ: 10,990 ರೂ.

     

  • ಮೊದಲ ಟೆಸ್ಟ್ ಪಂದ್ಯ ಗೆದ್ದು ಟೀಂ ಇಂಡಿಯಾ ದಾಖಲೆ!

    ಮೊದಲ ಟೆಸ್ಟ್ ಪಂದ್ಯ ಗೆದ್ದು ಟೀಂ ಇಂಡಿಯಾ ದಾಖಲೆ!

    ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 304 ರನ್ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದೆ. ಈ ಮೂಲಕ 3 ಟೆಸ್ಟ್ ಗಳ ಸರಣಿಯಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ.

    304 ರನ್ ಗಳ ಗೆಲುವು ವಿದೇಶದಲ್ಲಿ ಭಾರೀ ಅಂತರದ ಗೆಲುವು. ಈ ಹಿಂದೆ 1986ರಲ್ಲಿ ಲೀಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ 279 ರನ್ ಅಂತರದಲ್ಲಿ ಗೆದ್ದಿದ್ದೇ ಇದುವರೆಗಿನ ದಾಖಲೆಯಾಗಿತ್ತು.

    ಗೆಲ್ಲಲು 550 ರನ್ ಗಳ ಪ್ರಯಾಸಕರ ಟಾರ್ಗೆಟ್ ಪಡೆದುಕೊಂಡಿದ್ದ ಶ್ರೀಲಂಕಾ 76.5 ಓವರ್ ಗಳಲ್ಲಿ 245 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಶ್ರೀಲಂಕಾದ ಆರಂಭಿಕ ಆಟಗಾರ ಕರುಣರತ್ನೆ 97 ರನ್ ಗಳಿಸಿ ಶತಕ ವಂಚಿತರಾದರು. ಇನ್ನುಳಿದಂತೆ ಡಿಕ್ವೆಲ್ಲಾ 67, ಮೆಂಡಿಸ್ 36, ಪಿರೇರಾ 21, ತರಂಗ 10 ರನ್ ಗಳಿಸಿದರು. ಶ್ರೀಲಂಕಾದ ಇಬ್ಬರು ಆಟಗಾರರು ಗಾಯಗೊಂಡಿದ್ದರಿಂದ ಬ್ಯಾಟಿಂಗ್ ಗೆ ಇಳಿಯಲಿಲ್ಲ. ಹೀಗಾಗಿ ಶ್ರೀಲಂಕಾ 245 ರನ್ ಗಳಿಗೆ ಆಲೌಟ್ ಆಯಿತು.

    ಭಾರತ ಪರ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್ ಗಳಿಸಿದರೆ ಶಮಿ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಗಳಿಸಿದರು.

    ಇದಕ್ಕೂ ಮುನ್ನ ಇಂದು 4ನೇ ದಿನದಾಟ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ತಕ್ಷಣ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಈ ವೇಳೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಶಿಖರ್ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

  • ಟೀಂ ಇಂಡಿಯಾಗೆ 498 ರನ್ ಭರ್ಜರಿ ಮುನ್ನಡೆ: ಶತಕದತ್ತ ಕೊಹ್ಲಿ!

    ಟೀಂ ಇಂಡಿಯಾಗೆ 498 ರನ್ ಭರ್ಜರಿ ಮುನ್ನಡೆ: ಶತಕದತ್ತ ಕೊಹ್ಲಿ!

    ಗಾಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 3ನೇ ದಿನದಂತ್ಯಕ್ಕೆ 498 ರನ್ ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ದಿನದಾಟ ಮುಗಿದಾಗ ಭಾರತ 3 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ.

    ಶ್ರೀಲಂಕಾ ತಂಡ 291 ರನ್ ಗಳಿಗೆ ಆಲೌಟ್ ಆದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಾಲೋ ಆನ್ ಹೇರಲಿಲ್ಲ. 2ನೇ ಇನ್ನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 19 ರನ್ ಗಳಿಸಿ ಮೊದಲ ವಿಕೆಟ್ ಕಳೆದುಕೊಂಡಿತು. 4ನೇ ಓವರ್ ಕೊನೆಯ ಎಸೆತದಲ್ಲಿ ಶಿಖರ್ ಧವನ್ ಪಿರೇರಾಗೆ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ 14 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 14 ರನ್ ಗಳಿಸಿದ್ದರು. ನಂತರ ಬ್ಯಾಟಿಂಗ್ ಮಾಡಲು ಬಂದ ಚೇತೇಶ್ವರ್ ಪೂಜಾರ 15 ರನ್ ಗಳಿಸಿ ಔಟಾದರು.

    ಮಧ್ಯಾಹ್ನ ಟೀ ಬ್ರೇಕ್ ಗೂ ಮುನ್ನ ಸುರಿದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಆಟಕ್ಕೆ ಬ್ರೇಕ್ ಹಾಕಿತು. 3ನೇ ವಿಕೆಟ್ ಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಅಭಿನವ್ ಮುಕುಂದ್ ಉತ್ತಮ ಜೊತೆಯಾಟ ನೀಡಿದರು. ಆದರೆ 81 ರನ್ ಗಳಿಸಿದ್ದ ಅಭಿನವ್ ಮುಕುಂದ್ ಔಟಾದರು. 3ನೇ ದಿನದಾಟ ಅಂತ್ಯಗೊಂಡಾಗ ಕೊಹ್ಲಿ 76 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

    ಶ್ರೀಲಂಕಾ ಪರ ಪಿರೇರಾ, ಕುಮಾರ ಹಾಗೂ ಗುಣತಿಲಕ ತಲಾ 1 ವಿಕೆಟ್ ಗಳಿಸಿದರು.

    ಬೆಳಗ್ಗೇನಾಯ್ತು?: 3 ವಿಕೆಟ್ ನಷ್ಟಕ್ಕೆ 154 ರನ್ ನಿಂದ 3ನೇ ದಿನದಾಟ ಆರಂಭಿಸಿದ ಶ್ರೀಲಂಕಾ 291 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರವಾಗಿ ರವೀಂದ್ರ ಜಡೇಜಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು. ಉಮೇಶ್ ಯಾದವ್, ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

    ಟೀಂ ಇಂಡಿಯಾ ಪರವಾಗಿ ಮೊದಲ ಇನ್ನಿಂಗ್ಸ್ ನಲ್ಲಿ 2 ಶತಕಗಳು ದಾಖಲಾದರೆ, ಶ್ರೀಲಂಕಾದ ಮೊದಲ ಇನ್ನಿಂಗ್ಸ್ ನಲ್ಲಿ ಯಾವುದೇ ಶತಕ ದಾಖಲಾಗಲಿಲ್ಲ. ಆದರೆ ದಿಲ್ ರುವಾನ್ ಪಿರೇರಾ ಮಾತ್ರ 92 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಜೊತೆ ಏಂಜೆಲೋ ಮ್ಯಾಥ್ಯೂಸ್ 83 ರನ್ ಗಳಿಸಿ ಉತ್ತಮ ಜೊತೆಯಾಟ ನೀಡಿದರು. ಆದರೆ ಉಳಿದವರು ಯಾರೂ ಉತ್ತಮ ಸಾಥ್ ನೀಡದ ಹಿನ್ನೆಲೆಯಲ್ಲಿ ಶ್ರೀಲಂಕಾ 291 ರನ್ ಗಳಿಗೆ ಆಲೌಟಾಗಬೇಕಾಯಿತು.

     

  • ನೀವು ನಮ್ಮ ಪ್ರಧಾನಿ ಆಗಿದ್ರೆ ಚೆನ್ನಾಗಿರ್ತಿತ್ತು: ಸುಷ್ಮಾ ಸ್ವರಾಜ್‍ಗೆ ಪಾಕ್ ಮಹಿಳೆ ಟ್ವೀಟ್

    ನೀವು ನಮ್ಮ ಪ್ರಧಾನಿ ಆಗಿದ್ರೆ ಚೆನ್ನಾಗಿರ್ತಿತ್ತು: ಸುಷ್ಮಾ ಸ್ವರಾಜ್‍ಗೆ ಪಾಕ್ ಮಹಿಳೆ ಟ್ವೀಟ್

    ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿ ಸಹಾಯ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸಾಕಷ್ಟು ಜನರ ಪ್ರೀತಿ ಗಳಿಸಿದ್ದಾರೆ. ಇದೀಗ ಆ ಸಾಲಿಗೆ ಪಾಕಿಸ್ತಾನದ ಮಹಿಳೆಯೊಬ್ಬರು ಸೇರಿಕೊಂಡಿದ್ದಾರೆ. ನೀವು ನಮ್ಮ ಪ್ರಧಾನ ಮಂತ್ರಿಯಾಗಿದ್ದರೆ ಚೆನ್ನಾಗಿರ್ತಿತ್ತು ಅಂತ ಆ ಮಹಿಳೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ.

    ನಿಮ್ಮ ಮೇಲೆ ಅಗಾಧವಾದ ಪ್ರೀತಿ ಹಾಗೂ ಗೌರವವಿದೆ. ನೀವು ನಮ್ಮ ಪ್ರಧಾನ ಮಂತ್ರಿ ಆಗಬೇಕಿತ್ತು. ಈ ದೇಶ ಬದಲಾಗುತ್ತಿತ್ತು ಅಂತ ಹಿಜಾಬ್ ಅಸಿಫ್ ಎಂಬವರು ಟ್ವೀಟ್ ಮಾಡಿದ್ದಾರೆ.

    ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಿದ್ದ ಪಾಕಿಸ್ತಾನದ ಪ್ರಜೆಯೊಬ್ಬರ ಪರವಾಗಿ ಅಸಿಫ್ ಅವರು ಸುಷ್ಮಾ ಸ್ವರಾಜ್ ಅವರ ಸಹಾಯ ಕೋರಿದ್ದರು. ಇದಕ್ಕೆ ಕೂಡಲೇ ಸುಷ್ಮಾ ಸ್ವರಾಜ್ ಸ್ಪಂದಿಸಿದ್ರು. ನಂತರ ಅರ್ಜಿದಾರರ ಸಂಪರ್ಕದಲ್ಲಿದ್ದೇವೆ. ಮುಂದಿನದನ್ನು ನೋಡಿಕೊಳ್ತೀವಿ ಎಂದು ಇಸ್ಲಾಮಾಬಾದ್‍ನ ಭಾರತೀಯ ಹೈ ಕಮಿಷನ್ ಟ್ವೀಟ್ ಮಾಡಿದೆ.

    ಇದಕ್ಕೆ ಧನ್ಯವಾದ ತಿಳಿಸಿದ ಹಿಜಾಬ್ ಅಸಿಫ್, ನಿಮ್ಮನ್ನ ಏನೆಂದು ಕರೆಯಲಿ? ಸೂಪರ್‍ವುಮನ್? ದೇವರು ಎನ್ನಲೇ? ನಿಮ್ಮ ಉದಾರತೆಯನ್ನು ವರ್ಣಿಸಲು ಪದಗಳೇ ಇಲ್ಲ. ನಿಮ್ಮ ಬಗ್ಗೆ ಪ್ರೀತಿ ಇದೆ. ಕಣ್ಣಿರಿನೊಂದಿಗೆ ನಿಮ್ಮನ್ನು ಹೊಗಳುವುದನ್ನ ನಿಲ್ಲಿಸಲಾಗ್ತಿಲ್ಲ ಅಂತ ಟ್ವೀಟ್ ಮಾಡಿದ್ದರು. ಇದಕ್ಕೆ ಆನಂದ್ ಸಿಂಗ್ ಎಂಬ ವ್ಯಕ್ತಿಯೊಬ್ಬರು ಅಭಿನಂದನೆ, ನಿಮಗೆ ವೀಸಾ ಸಿಗುತ್ತದೆ. ಆದ್ರೆ ಪಾಕಿಸ್ತಾನದ ಪ್ರಧಾನಿಯಾಗಿ ಸುಷ್ಮಾ ಮೇಡಂ ಅವರನ್ನ ಕಳಿಸಲು ಸಾಧ್ಯವಿಲ್ಲ. ಕ್ಷಮಿಸಿ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಹಿಜಾಬ್ ಉತ್ತರಿಸಿ, ಪಾಕಿಸ್ತಾನಿಗಳಿಗೆ ಅವರನ್ನು ಪಡೆಯುವ ಅರ್ಹತೆ ಇಲ್ಲ ಎಂದಿದ್ದಾರೆ.

    https://twitter.com/Hijaab_asif/status/890623277663760385?ref_src=twsrc%5Etfw&ref_url=http%3A%2F%2Fwww.ndtv.com%2Findia-news%2Fwish-you-were-our-pm-pak-woman-tweets-sushma-swaraj-after-visa-help-1730156

    https://twitter.com/Hijaab_asif/status/890620465886052353?ref_src=twsrc%5Etfw&ref_url=http%3A%2F%2Fwww.ndtv.com%2Findia-news%2Fwish-you-were-our-pm-pak-woman-tweets-sushma-swaraj-after-visa-help-1730156

    https://twitter.com/Hijaab_asif/status/890619024605827072?ref_src=twsrc%5Etfw&ref_url=http%3A%2F%2Fwww.ndtv.com%2Findia-news%2Fwish-you-were-our-pm-pak-woman-tweets-sushma-swaraj-after-visa-help-1730156

    ವೈದ್ಯಕೀಯ ಚಿಕಿತ್ಸೆಗಾಗಿ ಸಾಕಷ್ಟು ಜನ ಪಾಕಿಸ್ತಾನದಿಂದ ಭಾರತಕ್ಕೆ ಬರ್ತಾರೆ. ತಿಂಗಳಿಗೆ ಸುಮಾರು 500 ರೋಗಿಗಳು ಪಾಕಿಸ್ತಾನದಿಂದ ಬರ್ತಾರೆ ಅಂತ ಕೆಲವು ಆಸ್ಪತ್ರೆಗಳು ಹೇಳಿವೆ. ಆದ್ರೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ಬೇಹುಗಾರಿಕೆ ಆರೋಪದ ಮೇಲೆ ಗಲ್ಲು ಶಿಕ್ಷೆ ಆದೇಶ ನೀಡಿದ ನಂತರ ಮೆಡಿಕಲ್ ವೀಸಾ ಪ್ರಕ್ರಿಯೆ ನಿಧಾನವಾಗಿದೆ.

    ಜಾಧವ್ ಅವರನ್ನ ಸಂಪರ್ಕಿಸಲು ಕೋರಿ ಭಾರತ ಮಾಡಿದ್ದ ಮನವಿಗಳಿಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಪಾಕಿಸ್ತಾನ ವಿದೇಶಾಂಗ ಇಲಾಖೆಯ ಸಲಹೆಗಾರ ಸರ್ತಾಜ್ ಅಜೀಜ್ ಅವರ ವಿರುದ್ಧ ಗರಂ ಆಗಿದ್ದರು. ನಂತರ ಭಾರತಕ್ಕೆ ಬರಲು ಪಾಕಿಸ್ತಾನದ ಪ್ರಜೆಗಳಿಗೆ ಮೆಡಿಕಲ್ ವೀಸಾ ಬೇಕಿದ್ದಲ್ಲಿ ಅವರ ವಿದೇಶಾಂಗ ಇಲಾಖೆಯಿಂದ ಪತ್ರ ಇರಬೇಕು ಎಂದು ಟ್ವೀಟ್ ಮಾಡಿದ್ದರು.

    ಇದೇ ತಿಂಗಳ ಆರಂಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಒಸಾಮಾ ಅಲಿ ಎಂಬ ವ್ಯಕ್ತಿ ಲಿವರ್ ಟ್ಯೂಮರ್ ಚಿಕಿತ್ಸೆಗಾಗಿ ದೆಹಲಿಗೆ ಬರಲು ವೀಸಾ ಬೇಕಿತ್ತು. ಅಜೀಜ್ ಅವರು ವೀಸಾಗಾಗಿ ಭಾರತೀಯ ಹೈ ಕಮಿಷನ್‍ಗೆ ಪತ್ರ ಬರೆಯಲು ನಿರಾಕರಿಸಿದ್ರು ಎಂದು ಒಸಾಮಾ ಅಲಿ ಹೇಳಿದ್ದರು. ಆಗ ಸುಷ್ಮಾ ಸ್ವರಾಜ್ ಸ್ಪಂದಿಸಿ, ಅಲಿ ಅವರು ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಯಾಗಿರೋದ್ರಿಂದ ಇದು ಭಾರತದ ಭಾಗವೇ ಆಗಿದ್ದು, ಪಾಕಿಸ್ತಾನದಿಂದ ಪತ್ರ ಬೇಕಿಲ್ಲ ಎಂದು ಟ್ವೀಟ್ ಮಾಡಿದ್ದರು.

    ಅಲ್ಲದೆ ಹಿಜಾಬ್ ಅಸಿಫ್ ಅವರ ಸಮಸ್ಯೆ ಬಗ್ಗೆ ಪರಿಶೀಲಿಸಲು ಭಾರತೀಯ ಅಧಿಕಾರಿಗಳಿಗೆ ಹೇಳುವ ಮುನ್ನ ಸುಷ್ಮಾ ಸ್ವರಾಜ್ ಅಜೀಜ್ ಅವರ ವಿರುದ್ಧ ಟ್ವಿಟ್ಟರ್‍ನಲ್ಲಿ ಕಿಡಿ ಕಾರಿದ್ದರು. ಇಂತಹ ಗಂಭೀರ ಪ್ರಕರಣದಲ್ಲೂ ನಿಮಗೆ ಪತ್ರ ಕೊಡಲು ಅಜೀಜ್ ನಿರಾಕರಿಸಿದ್ರಾ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

    https://twitter.com/Hijaab_asif/status/890615371182559232?ref_src=twsrc%5Etfw&ref_url=http%3A%2F%2Ftimesofindia.indiatimes.com%2Findia%2Fsushma-swaraj-takes-dig-at-sartaj-aziz-pakistani-woman-joins-in%2Farticleshow%2F59802609.cms

    https://twitter.com/Hijaab_asif/status/890611822327353345?ref_src=twsrc%5Etfw&ref_url=http%3A%2F%2Ftimesofindia.indiatimes.com%2Findia%2Fsushma-swaraj-takes-dig-at-sartaj-aziz-pakistani-woman-joins-in%2Farticleshow%2F59802609.cms

    https://twitter.com/Hijaab_asif/status/890612594037358592?ref_src=twsrc%5Etfw&ref_url=http%3A%2F%2Ftimesofindia.indiatimes.com%2Findia%2Fsushma-swaraj-takes-dig-at-sartaj-aziz-pakistani-woman-joins-in%2Farticleshow%2F59802609.cms

    https://twitter.com/Hijaab_asif/status/890611166266839044?ref_src=twsrc%5Etfw&ref_url=http%3A%2F%2Ftimesofindia.indiatimes.com%2Findia%2Fsushma-swaraj-takes-dig-at-sartaj-aziz-pakistani-woman-joins-in%2Farticleshow%2F59802609.cms

  • ಶ್ರೀಲಂಕಾ 154/5, ಟೀಂ ಇಂಡಿಯಾ 600ಕ್ಕೆ ಆಲೌಟ್

    ಶ್ರೀಲಂಕಾ 154/5, ಟೀಂ ಇಂಡಿಯಾ 600ಕ್ಕೆ ಆಲೌಟ್

    ಗಾಲೆ:  ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಭಾರತದ ಮೊದಲ ಇನ್ನಿಂಗ್ಸನ್ನು 600 ರನ್ ಗೆ ನಿಲ್ಲಿಸಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ದಿನದಾಟ ಅಂತ್ಯಗೊಂಡಾಗ 5 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. ಆಂಜೆಲೋ ಮ್ಯಾಥ್ಯೂಸ್ 54 ಹಾಗೂ ದಿಲ್ ರುವಾನ್ ಪಿರೇರಾ 6 ರನ್ ಗಳಿಸಿ ಅಜೇಯಾರಿ ಉಳಿದಿದ್ದಾರೆ.

    ಮೊದಲ ದಿನದಾಟ ಕೊನೆಯಾಗುವಾಗ ಭಾರತ ನಿನ್ನೆ 3 ವಿಕೆಟ್ ಕಳೆದುಕೊಂಡು 399 ರನ್ ಗಳಿಸಿತ್ತು. ಇಂದು ಮತ್ತೆ ಬ್ಯಾಟಿಂಗ್ ಆರಂಭಿಸಿದ ಇಂಡಿಯಾ 133.1 ಓವರ್ ನಲ್ಲಿ 600 ರನ್ ಗೆ ಆಲೌಟ್ ಆಯಿತು.

    ಯಾರು ಎಷ್ಟು ರನ್? ಟೀಂ ಇಂಡಿಯಾ ಪರವಾಗಿ ಶಿಖರ್ ಧವನ್ ಹಾಗೂ ಚೇತೇಶ್ವರ್ ಪೂಜಾರ ಶತಕ ಬಾರಿಸಿದರು. ಶಿಖರ್ ಧವನ್ 168 ಎಸೆತಗಳಲ್ಲಿ 31 ಬೌಂಡರಿಗಳ ನೆರವಿನಿಂದ 190 ರನ್ ಗಳಿಸಿದರೆ, ಪೂಜಾರ 265 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 153 ರನ್ ಗಳಿಸಿದರು. ಅಜಿಂಕ್ಯಾ ರಹಾನೆ 57, ಹಾರ್ದಿಕ್ ಪಾಂಡ್ಯಾ 50 ರನ್ ಗಳಿಸಿದರು. ಪಾಂಡ್ಯಾ 49 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಅರ್ಧ ಶತಕ ದಾಖಲಿಸಿದರು.

    ಅಭಿನವ್ ಮುಕುಂದ್ 12, ಕೊಹ್ಲಿ 3, ಅಶ್ವಿನ್ 47, ವೃದ್ಧಿಮಾನ್ ಸಾಹ 16, ರವೀಂದ್ರ ಜಡೇಜಾ 15, ಮೊಹಮ್ಮದ್ ಶಮಿ 30, ಉಮೇಶ್ ಯಾದವ್ 11 ರನ್ ಗಳಿಸಿದರು. ಶಮಿ 30 ರನ್ ಗಳಲ್ಲಿ 3 ಸಿಕ್ಸರ್ ಕೂಡಾ ಸೇರಿತ್ತು.

    ಶ್ರೀಲಂಕಾ ಪರವಾಗಿ ನುವಾನ್ ಪ್ರದೀಪ್ 6 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. ಲಹಿರು ಕುಮಾರ 3 ಹಾಗೂ ಹೀರತ್ 1 ವಿಕೆಟ್ ಗಳಿಸಿದರು.

    ಭಾರತದ 600 ರನ್ ಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಉಮೇಶ್ ಯಾದವ್ ಆಘಾತ ನೀಡಿದರು. ದಿಮುತ್ ಕರುಣರತ್ನೆ 2 ರನ್ ಗಳಿಸಿ ಔಟಾದರು. ಬಳಿಕ ಬ್ಯಾಟಿಂಗ್ ಗೆ ಆಗಮಿಸಿದ ಗುಣತಿಲಕ ಹಾಗೂ ಆರಂಭಿಕ ಆಟಗಾರ ಉಪುಲ್ ತರಂಗ ಉತ್ತಮ ಆಟವಾಡಿದರು. 15 ನೇ ಓವರ್ ನಲ್ಲಿ ಮತ್ತೆ ಬೌಲಿಂಗ್ ಗೆ ಇಳಿದ ಮೊಹಮ್ಮದ್ ಶಮಿ ಒಂದೇ ಓವರ್ ನಲ್ಲಿ 2 ವಿಕೆಟ್ ಕಬಳಿಸಿದರು. ಉತ್ತಮವಾಗಿ ಆಟವಾಡುತ್ತಿದ್ದ ಉಪುಲ್ ತರಂಗ 64 ರನ್ ಗಳಿಸಿ ರನೌಟ್ ಆದರು.

    ಟೀಂ ಇಂಡಿಯಾ ಪರವಾಗಿ ಮೊಹಮ್ಮದ್ ಶಮಿ 2, ಉಮೇಶ್ ಯಾದವ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಗಳಿಸಿದರು.

    https://twitter.com/OfficialSLC/status/890180271567282176

    https://twitter.com/OfficialSLC/status/890489078960898048

  • ಇಂದು 18ನೇ ಕಾರ್ಗಿಲ್ ವಿಜಯ್ ದಿವಸ್

    ಇಂದು 18ನೇ ಕಾರ್ಗಿಲ್ ವಿಜಯ್ ದಿವಸ್

    ನವದೆಹಲಿ: ಇವತ್ತು ಜುಲೈ 26. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯಪತಾಕೆ ಹಾರಿಸಿದ ದಿನ.

    ಭಾರತೀಯ ಸೇನೆ ಇಂದು 18ನೇ ಕಾರ್ಗಿಲ್ ವಿಜಯ ದಿವಸ್ ಆಚರಿಸ್ತಿದೆ. 1999ರ ಜುಲೈ 26ರಂದು 60 ದಿನಗಳ ಕಾರ್ಗಿಲ್ ಕದನ ಅಂತ್ಯವಾಗಿತ್ತು.

    ಹೀಗಾಗಿ ಭಾರತೀಯ ಸೇನೆ ಈ ದಿನವನ್ನು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಗೌರವ ಸಲ್ಲಿಸುವ ಮೂಲಕ ಆಚರಿಸುತ್ತಿದೆ.

  • 14ನೇ ರಾಷ್ಟ್ರಪತಿಯಾಗಿ  ಪ್ರಮಾಣವಚನ ಸ್ವೀಕರಿಸಿದ ರಾಮನಾಥ್ ಕೋವಿಂದ್

    14ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ರಾಮನಾಥ್ ಕೋವಿಂದ್

    ನವದೆಹಲಿ: 14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಶ್ವರನ ಹೆಸರಿನಲ್ಲಿ ಸಂವಿಧಾನ ಬದ್ಧವಾಗಿ, ನಿಷ್ಪಕ್ಷಪಾತವಾಗಿ ಅಧಿಕಾರವನ್ನು ನಿರ್ವಹಣೆ ಮಾಡುತ್ತೇನೆ ಎಂದು ಕೋವಿಂದ್ ಪ್ರಮಾಣ ವಚನ ಸ್ವೀಕರಿಸಿದರು.

    ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಜೊತೆ ಸೆಂಟ್ರಲ್ ಭವನಕ್ಕೆ ಆಗಮಿಸಿದ ಕೋವಿಂದ್ ಅವರಿಗೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜಿಎಸ್. ಖೇಹರ್ ಪ್ರಮಾಣವಚನ ಬೋಧಿಸಿದರು.

    ಪ್ರಮಾಣವಚನ ಸ್ವೀಕಾರದ ಬಳಿಕ ಸಂಸತ್ ಆವರಣದ ಹೊರಗೆ ರಕ್ಷಣಾ ಸಿಬ್ಬಂದಿ 21 ಸುತ್ತು ಕುಶಾಲು ತೋಪು ಸಿಡಿಸಿ ಮೂಲಕ ನೂತನ ರಾಷ್ಟ್ರಪತಿಗಳಿಗೆ ಗೌರವ ಸಲ್ಲಿಕೆ ಮಾಡಿದರು.

    ತಮ್ಮ ಭಾಷಣದಲ್ಲಿ ಕೋವಿಂದ್, ರಾಷ್ಟ್ರಪತಿಯಂತಹ ಹುದ್ದೆಯನ್ನು ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ. ರಾಜೇಂದ್ರ ಸಿಂಗ್ ಬಾಬು ಅವರಿಂದ ಹಿಡಿದು ಪ್ರಣಬ್ ಮುಖರ್ಜಿಯಂತದ ದೊಡ್ಡ ನಾಯಕರು ಈ ಹುದ್ದೆಯನ್ನು ಏರಿದ್ದಾರೆ. 125 ಕೋಟಿ ಜನರ ಪ್ರತಿನಿಧಿಯಾಗಿರುವ ನನಗೆ ಈ ಹುದ್ದೆಯ ಮಹತ್ವ ತಿಳಿದಿದೆ ಎಂದು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಕೇಂದ್ರ ಸಚಿವರು, ರಾಜ್ಯಪಾಲರು, ರಾಯಭಾರಿಗಳು, ಸಂಸದರು ಮತ್ತು ಹಿರಿಯ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಉಪಸ್ಥಿತರಿದ್ದರು.

     

     

  • 38 ಸಾವಿರ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಯೋದಿಂದ ಗುಡ್‍ನ್ಯೂಸ್!

    38 ಸಾವಿರ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಯೋದಿಂದ ಗುಡ್‍ನ್ಯೂಸ್!

    ಮುಂಬೈ: ಎಲ್‍ಟಿಇ ಫೀಚರ್ ಫೋನ್ ಬಿಡುಗಡೆ ಮಾಡಿದ ಬಳಿಕ ಜಿಯೋ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಈಗ ದೇಶದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ ನೆಟ್ ನೀಡಲು ಮುಂದಾಗಿದೆ.

    ಹೌದು. ಉಚಿತ ವೈಫೈ ನೀಡುವ ಸಲುವಾಗಿ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಜಿಯೋ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

    ಮೂಲಗಳ ಪ್ರಕಾರ ಸಚಿವಾಲಯ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೂ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಈ ರೀತಿಯ ಪ್ರಸ್ತಾವನೆಗಳನ್ನು ಪಾರದರ್ಶಕವಾಗಿ ಟೆಂಡರ್ ಕರೆದು ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

    ದೇಶದ 38 ಸಾವಿರ ಕಾಲೇಜುಗಳಿಗೆ (ಟೆಕ್ನಿಕಲ್ ಮತ್ತು ಟೆಕ್ನಿಕಲ್ ಹೊರತಾದ) ವೈಫೈ ನೀಡುವ ಪ್ರಸ್ತಾವನೆಯನ್ನು ಜಿಯೋ ಕಳೆದ ತಿಂಗಳು ನೀಡಿದೆ. ಆನ್‍ಲೈನ್ ಮೂಲಕ ಮಾಹಿತಿಗಳನ್ನು ಹಂಚಲು ಕೇಂದ್ರ ಸರ್ಕಾರ ಎಲ್ಲ ಕಾಲೇಜುಗಳಿಗೆ ವೈಫೈ ನೀಡಲು ಮುಂದಾಗುತ್ತಿದೆ. ಆದರೆ ಈ ರೀತಿಯ ಪ್ರಸ್ತಾವನೆ ಇದೆ ಮೊದಲ ಬಾರಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಈ ಯೋಜನೆಗೆ ಸಂಬಂಧಿಸಿದಂತೆ ಜಿಯೋ ಯಾವುದೇ ಹಣವನ್ನು ಪಡೆದುಕೊಳ್ಳುವುದಿಲ್ಲ. ಆದರೆ ಬೇರೆ ಕಂಪೆನಿಗಳಿಗೆ ಅವಕಾಶ ನೀಡದೇ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಪಾರದರ್ಶಕವಾಗಿ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದರು.

    ಜಿಯೋ ಉಚಿತ ವೈಫೈ ನೀಡುವ ಸಂಬಂಧವಾಗಿ ಕಳೆದ ತಿಂಗಳು ಪವರ್ ಪಾಯಿಂಟ್ ಮೂಲಕ ವಿವರಣೆ ನೀಡಿದೆ. ಈ ವಿಚಾರದ ಬಗ್ಗೆ ಮಾಧ್ಯಮಗಳು ಜಿಯೋ ಪ್ರತಿನಿಧಿಗಳನ್ನು ಸಂಪರ್ಕಿಸಿದ್ದು, ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

    ಮಾನವ ಸಂಪನ್ಮೂಲ ಸಚಿವಾಲಯ ಕೇಂದ್ರಿಯ ವಿವಿಗಳಿಗೆ ಉಚಿತ ವೈಫೈ ನೀಡಲು ಪ್ರಸ್ತಾವನೆ ಸಲ್ಲಿಸಿದ್ದು ಈ ಯೋಜನೆ ಈ ವರ್ಷವೇ ಪೂರ್ಣವಾಗುವ ಸಾಧ್ಯತೆಯಿದೆ. ಸಚಿವ ಪ್ರಕಾಶ್ ಜಾವ್ಡೇಕರ್ ಕೆಲ ದಿನಗಳ ಹಿಂದೆ ಆಗಸ್ಟ್ 31ರ ಒಳಗಡೆ ದೇಶದ 38 ವಿವಿಗಳಿಗೆ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ್ದರು.

    ಆರಂಭದಲ್ಲಿ  ವೈಫೈ ಸಿಗೋ ವಿವಿಗಳು
    ದೆಹಲಿ, ವಿಶ್ವವಿದ್ಯಾಲಯ
    ಬನರಾಸ್, ಹಿಂದೂ ವಿಶ್ವವಿದ್ಯಾಲಯ
    ಆಲಿಗಢ, ಮುಸ್ಲಿಂ ವಿಶ್ವವಿದ್ಯಾಲಯ
    ಜಮಿಯಾ ಮಿಲಿಯಾ ಇಸ್ಲಾಮಿಯಾ , ವಿಶ್ವವಿದ್ಯಾಲಯ
    ಕೇಂದ್ರಿಯ ವಿಶ್ವವಿದ್ಯಾಲಯ, ಹಿಮಾಚಲಪ್ರದೇಶ
    ಕೇಂದ್ರಿಯ ವಿಶ್ವವಿದ್ಯಾಲಯ, ದಕ್ಷಿಣ ಬಿಹಾರ
    ಕೇಂದ್ರಿಯ ವಿಶ್ವವಿದ್ಯಾಲಯ, ಜಮ್ಮು

     

  • ಒಳ ಉಡುಪಿನಲ್ಲಿ 4 ಕೆಜಿ ಚಿನ್ನ ಸಾಗಿಸ್ತಿದ್ದ ಮಹಿಳೆಯರು ಮುಂಬೈನಲ್ಲಿ ಅರೆಸ್ಟ್

    ಒಳ ಉಡುಪಿನಲ್ಲಿ 4 ಕೆಜಿ ಚಿನ್ನ ಸಾಗಿಸ್ತಿದ್ದ ಮಹಿಳೆಯರು ಮುಂಬೈನಲ್ಲಿ ಅರೆಸ್ಟ್

    ಮುಂಬೈ: ತಮ್ಮ ಒಳ ಉಡುಪಿನಲ್ಲಿ 4 ಕೆ.ಜಿ ಯಷ್ಟು ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಭಾರತೀಯ ಮೂಲದ ಮಹಿಳೆಯರಿಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಮಲೇಷಿಯಾದ ಸಂತಾಲೆತ್ಮಿ ಸುಮಮಾನಂ(41) ಹಾಗೂ ಸಿಂಗಾಪುರದ ಮ್ಯಾಗಿಸ್ವೇರಿ ಜೈರಾಮ್ನ(59) ಬಂಧಿತ ಮಹಿಳೆಯರು.

    ಶನಿವಾರ ಈ ಮಹಿಳೆಯರಿಬ್ಬರು ಜೆಟ್ ಏರ್ ವೇಸ್ ಫ್ಲೈಟ್ 9ಢ 009 ಮೂಲಕ 3 ಗಂಟೆ ಸುಮಾರಿಗೆ ಮುಂಬೈ ಏರ್‍ಪೋರ್ಟ್ ಗೆ ಬಂದಿಳಿದಿದ್ದಾರೆ. ಈ ವೇಳೆ ಅಧಿಕಾರಿಗಳು ತಪಾಸಣೆ ಮಾಡಿದಾಗ ಮಹಿಳೆಯರು ತಮ್ಮ ಸೊಂಟ, ಕೈ ಅಡಿ ಹಾಗೂ ಒಳ ಉಡುಪಿನಲ್ಲಿ ಸುಮಾರು 1.2 ಕೋಟಿ ರೂ. ಮೌಲ್ಯದ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಓರ್ವ ಮಹಿಳೆ ತಾನು ಶಾಪಿಂಗ್ ಮುಗಿಸಿ ಬಂದಿದ್ದು, ನಾಳೆ ಸಿಂಗಾಪುರಕ್ಕೆ ತೆರಳಲಿದ್ದೇನೆ ಅಂತ ಅಧಿಕಾರಿಗಳ ಜೊತೆ ಹೇಳಿದ್ದಾಳೆ. ಆದ್ರೆ ಆಕೆಯ ಹೇಳಿಕೆಯಿಂದ ಅಧಿಕಾರಿಗಳಲ್ಲಿ ಸಂಶಯ ವ್ಯಕ್ತವಾಗಿದೆ. ಒಟ್ಟಾರೆ ಇಬ್ಬರು ಮಹಿಳೆಯರಿಂದ ಅಧಿಕಾರಿಗಳು ತಲಾ 2 ಕೆಜಿ ಚಿನ್ನದ ಸರವನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಈ ಚಿನ್ನವನ್ನು ಸ್ವೀಕರಿಸಲು ವ್ಯಕ್ತಿಯೊಬ್ಬರು ಹೊರಗಡೆ ನಿಂತಿರುವುದಾಗಿ ಮಹಿಳೆಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಈ ವಿಚಾರ ತಿಳಿದು ಅಧಿಕಾರಿಗಳು ವಿಮಾನ ನಿಲ್ದಾಣದ ಹೊರಗಡೆ ನಿಂತಿದ್ದ ವ್ಯಕ್ತಿಯನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ವೇಳೆ `ತಾನು ಸಿಂಗಾಪುರ ಮೂಲದ ವ್ಯಕ್ತಿಯಿಂದ ನಾನು ಚಿನ್ನ ಖರೀದಿಸುತ್ತಿದ್ದೆ. ಆದ್ರೆ ಆತ ಯಾರ ಬಳಿ ಕಳುಹಿಸುತ್ತಿದ್ದಾನೆ ಅಂತ ನನಗೆ ಗೊತ್ತಿಲ್ಲ. ಆತ ಚಿನ್ನ ಕಳುಹಿಸುತ್ತಿರೋ ವ್ಯಕ್ತಿಯ ಫೋಟೋಗಳನ್ನು ನನಗೆ ಮೊಬೈಲ್ ನಲ್ಲಿ ಕಳುಹಿಸುತ್ತಿದ್ದ. ಹೀಗಾಗಿ ನಾನು ಅವರ ಕೈಯಿಂದ ತೆಗೆದುಕೊಳ್ಳಲೆಂದು ಬಂದಿದ್ದೆ. ಆದ್ರೆ ಇದರಲ್ಲಿ ನನ್ನ ತಪ್ಪಿಲ್ಲ ಅಂತ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.

    ಬಂಧಿತ ಇಬ್ಬರು ಮಹಿಳೆಯರು ಬಹಳ ಬುದ್ಧಿವಂತಿಕೆಯಿಂದ ಚಿನ್ನದ ಸರ ಹಾಗೂ ಕಡಗಗಳನ್ನು ಸಾಗಾಟ ಮಾಡುತ್ತಿದ್ದರು. ಸದ್ಯ ಈ ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಂತ ಕಸ್ಟಮ್ಸ್ ಉಪ ಕಮಿಷನರ್ ಎಐಯು ಪ್ರದ್ನ್ಯಾ ಶೀಲ್ ಜುಮ್ಮೆ ಹೇಳಿದ್ದಾರೆ.

    ಇನ್ನು ಚಿನ್ನವನ್ನು ಕಳುಹಿಸಿದ ವ್ಯಕ್ತಿ ಈ ಇಬ್ಬರು ಮಹಿಳೆಯರಿಗೆ ಉಳಿದುಕೊಳ್ಳಲೆಂದು ವಿಮಾನ ನಿಲ್ದಾಣದ ಪಕ್ಕದಲ್ಲಿರೋ ಹೊಟೇಲಿನಲ್ಲಿ ರೂಮ್ ಕೂಡ ಬುಕ್ ಮಾಡಿದ್ದನು ಎನ್ನಲಾಗಿದೆ.