Tag: india

  • 10 ವರ್ಷದ ಹಿಂದೆ ಈ ದಿನ ಟಿ-20 ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು ಟೀಂ ಇಂಡಿಯಾ

    10 ವರ್ಷದ ಹಿಂದೆ ಈ ದಿನ ಟಿ-20 ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು ಟೀಂ ಇಂಡಿಯಾ

    ಬೆಂಗಳೂರು: ಪ್ರತೀ ವರ್ಷ ಸೆಪ್ಟೆಂಬರ್ 24 ಬಂತೆಂದರೆ ಭಾರತೀಯರಲ್ಲಿ ಎಲ್ಲಿಲ್ಲದ ಸಂತಸ. ಕಾರಣ 2007ರ ಐಸಿಸಿ ಟಿ20 ಫೈನಲ್ ಪಂದ್ಯ ಗೆದ್ದು ವಿಶ್ವಕಪ್ ಎತ್ತಿಹಿಡಿದು ಇಂದಿಗೆ 10 ವರ್ಷಗಳಾಗಿದೆ. ಹಾಗಾಗಿ ಭಾರತೀಯರಿಗೆ ಮೊದಲ ಟಿ20 ವಿಶ್ವಕಪ್ ಗೆದ್ದ ದಿನವಾದ್ದರಿಂದ ಯಾವೊಬ್ಬ ಕ್ರಿಕೆಟ್ ಅಭಿಮಾನಿಯೂ ಸೆ.24ನ್ನು ನೆನೆಯದೇ ಇರಲಾರ.

    ಹೌದು. ದಕ್ಷಿಣ ಆಫ್ರಿಕಾ ಜೊಹಾನ್ಸ್ ಬರ್ಗ್‍ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾಗಿದ್ದವು. ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಗೆದ್ದು ಬೀಗಿ ಇತಿಹಾಸ ಸೃಷ್ಟಿ ಮಾಡಿತ್ತು. ಈ ಮೂಲಕ ಮೊದಲ ಟಿ-20 ಟೂರ್ನಿಯಲ್ಲಿ ವಿಶ್ವಕಪ್ ಜಯಿಸಿದ ಹೆಗ್ಗಳಿಕಿಗೆ ಧೋನಿ ಪಾತ್ರರಾದರು.

    ಫೈನಲ್‍ನಲ್ಲಿ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಪಂದ್ಯವನ್ನು ನೋಡಲು ಈಡೀ ವಿಶ್ವವೇ ಕಾತುರದಿಂದ ನೋಡುತ್ತಿತ್ತು. ಅಲ್ಲದೇ ಮೈದಾನದಲ್ಲಿ ಎರಡು ದೇಶದ ಅಭಿಮಾನಿಗಳು ಕಿಕ್ಕಿರಿದು ನೋಡುತ್ತಿದ್ದರು.

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಆರಂಭಿಕ ಬ್ಯಾಟ್ಸ್‍ಮನ್‍ಗಳನ್ನಾಗಿ ಗೌತಮ್ ಗಂಭೀರ್ ಮತ್ತು ಯೂಸುಫ್ ಪಠಾಣ್ ಕಣಕ್ಕಿಳಿದು ಕೆಲ ಕಾಲ ಪಾಕ್ ಬೌಲರ್‍ಗಳಿಗೆ ಬೆವರಿಳಿಸಿದರು. ಯೂಸುಫ್ ಮೊಹಮ್ಮದ್ ಆಸಿಫ್ ಎಸೆದ ಬೌಲಿಂಗ್‍ನಲ್ಲಿ ಶೊಯಬ್ ಮಲ್ಲಿಕ್‍ಗೆ ಕ್ಯಾಚ್ ನೀಡಿ 15(12 ಎಸೆತ)ರನ್‍ಗಳಿಗೆ ಔಟಾದರು. ನಂತರ ರಾಬಿನ್ ಉತ್ತಪ್ಪ 8 ರನ್‍ಗಳಿಸಿ ಹೊರ ನಡೆದರು. ರೋಹಿತ್ ಶರ್ಮಾ 30(22) ರನ್ ಬಾರಿಸಿದರೆ, ಗೌತಮ್ ಗಂಭೀರ್ 75 ರನ್( 54 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿದ ಪರಿಣಾಮ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157ರನ್ ಪೇರಿಸಿತ್ತು.

    ಗುರಿ ಬೆನ್ನತ್ತಿದ ಪಾಕಿಸ್ತಾನ ಆಟಗಾರರು ಮೊದಲಿಗೆ ಮೊಹಮ್ಮದ್ ಹಫೀಸ್ ವಿಕೆಟ್ ಕಳೆದುಕೊಂಡಿತು. ನಂತರ ಇಮ್ರಾನ್ ನಜೀರ್ ಭಾರತದ ಬೌಲರ್‍ಗಳ ಮೇಲೆ ಹಿಡಿತ ಸಾಧಿಸಿ ಬ್ಯಾಟ್ ಮಾಡಿ 33(28 ಎಸೆತ) ರನ್ ಬಾರಿಸಿದರು. ಯೂನಿಸ್ ಖಾನ್ 24(27 ಎಸೆತ)ರನ್ ಬಾರಿಸಿ ಪೆವಿಲಿಯನ್‍ಗೆ ನಡೆದರು. ನಂತರ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಕಣಕ್ಕಿಳಿದು ಭಾರತಕ್ಕೆ ತಲೆ ನೋವಾಗಿ ಪರಿಣಮಿಸಿದರು. ಅತ್ತ ಮಿಸ್ಬಾ ನಿಧಾನಗತಿ ಆಟವಾಡಿ ರನ್ ಏರಿಸುವತ್ತ ಮುನ್ನಡೆಯುತ್ತಿದ್ದರೆ, ಇತ್ತ ಬ್ಯಾಟ್ಸ್ ಮನ್ ಗಳು ಒಬ್ಬೊಬ್ಬರೇ ಪೆವಿಲಿಯನ್ ಹಾದಿ ಹಿಡಿಯುತ್ತಿದ್ದರು.

    ಕೊನೆಯ ಓವರ್‍ನಲ್ಲಿ ಸಿಕ್ತು ಜಯ:
    ಕೊನೆಯ ಓವರ್‍ನಲ್ಲಿ ಧೋನಿ ಜೋಗಿಂದರ್ ಶರ್ಮಾ ಕೈಗೆ ಚೆಂಡಿಟ್ಟು ಬೌಲ್ ಮಾಡುವಂತೆ ಹೇಳಿದರು. ಪಾಕಿಸ್ತಾನಕ್ಕೆ ಕೊನೆಯ ಓವರ್‍ನಲ್ಲಿ 13 ರನ್ ಬೇಕಿತ್ತು. ಬೌಲಿಂಗ್ ದಾಳಿಗಿಳಿದ ಜೋಗಿಂದರ್‍ಗೆ ಮಿಸ್ಬಾ ಮೊದಲ ಬಾಲ್ ವೈಡ್ ಎಸೆದರು. ನಂತರದ ಬಾಲ್ ಮಿಸ್ಬಾ ಸಿಕ್ಸ್ ಬಾರಿಸಿ ರನ್ ಅಂತರ ಕಡಿಮೆ ಮಾಡಿದರು. 19.2ನೇ ಬಾಲ್‍ನಲ್ಲಿ ಮಿಸ್ಬಾ ರಿವರ್ಸ್ ಬ್ಯಾಟ್ ಮಾಡಲು ಹೋಗಿ ಹಿಂದೆ ಇದ್ದ ಶ್ರೀಶಾಂತ್‍ಗೆ ಕ್ಯಾಚ್ ನೀಡಿ ಔಟಾದರು.

    ಇದರಿಂದ ಪಾಕಿಸ್ತಾನ 152ರನ್‍ಗೆ ಆಲೌಟ್ ಆಗಿ ಭಾರತಕ್ಕೆ 5 ರನ್‍ಗಳ ಜಯ ಸಾಧಿಸಿ 2007 ವಿಶ್ವಕಪ್ ಎತ್ತಿ ಹಿಡಿಯಿತು. ಅಲ್ಲದೇ ಭಾರತದ ಪರ ಆರ್.ಪಿ.ಸಿಂಗ್ ಹಾಗೂ ಇರ್ಫಾನ್ ಪಠಾಣ್ ತಲಾ 3, ಜೋಗಿಂದರ್ ಶರ್ಮಾಗೆ 2, ಶ್ರೀಶಾಂತ್ 1 ವಿಕೆಟ್ ಪಡೆದು ಮಿಂಚಿದ್ದರು.  ಅದರಲ್ಲೂ ಫೈನಲ್ ಪಂದ್ಯ ಗೆಲ್ಲಲು ಕಾರಣರಾದ ಜೋಗಿಂದರ್ ಶರ್ಮಾ ಆ ಪಂದ್ಯದ ಹೀರೋ ಆಗಿ ಹೊರ ಹೊಮ್ಮಿದರು.

    https://www.youtube.com/watch?v=GY9fHrJf19I

    ಹೊಸ ನಾಯಕರಾಗಿ ಟಿ20 ವಿಶ್ವಕಪ್ ತಂದುಕೊಟ್ಟಿದ್ದ ಧೋನಿ ಅಂದಿನಿಂದ ಇಲ್ಲಿಯವರೆಗೂ ಲಕ್ಕಿ ಕ್ಯಾಪ್ಟನ್ ಎಂದೇ ಹೆಸರುವಾಸಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್‍ನಲ್ಲಿ ನಂ.1 ಸ್ಥಾನಕ್ಕೇರಿಸಿ, 2011ರ ವಿಶ್ವಕಪ್‍ನ್ನೂ ಸಹ ತಂದು ಕೊಟ್ಟರು. ಜೊತೆಗೆ 2013ರ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಭಾರತಕ್ಕೆ ಕೊಡುಗೆಯಾಗಿ ನೀಡಿದರು.

    https://www.youtube.com/watch?v=fXCxMWOdkBM

  • ಭಾರತವನ್ನು ಟೀಕಿಸಲು ಹೋಗಿ  ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕಿಸ್ತಾನ!

    ಭಾರತವನ್ನು ಟೀಕಿಸಲು ಹೋಗಿ ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕಿಸ್ತಾನ!

    ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿರುದ್ಧ ಆರೋಪಗಳನ್ನು ಮಾಡಲು ಹೋಗಿ ತನ್ನ ಮಾನವನ್ನೇ ಹರಾಜು ಹಾಕಿ ನಗೆಪಾಟಲಿಗೆ ಪಾಕಿಸ್ತಾನ ಗುರಿಯಾಗಿದೆ.

    ವಿಶ್ವ ಸಂಸ್ಥೆಯ 72ನೇ ಮಹಾ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ನೈಜ ಬಣ್ಣವನ್ನು ತೆರೆದಿಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತ ಭಯೋತ್ಪಾದನೆಯ ತವರು ನೆಲ ಎಂಬ ಆರೋಪವನ್ನು ಮಾಡಿತ್ತು. ಆದರೆ ಈ ಆರೋಪವನ್ನು ಮಾಡಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಮಾನ ವಿಶ್ವಸಂಸ್ಥೆಯಲ್ಲಿ ತನ್ನ ಅಧಿಕಾರಿಯ ಮೂಲಕ ಹರಾಜು ಆಗಿದೆ.

    ಪಾಕಿಸ್ತಾನ ಪ್ರತಿನಿಧಿ ಮಲೇಹಾ ಲೋಧಿ ಭಾರತದಲ್ಲಿ ಹೇಗೆ ಹಿಂಸಾಚಾರ ನಡೆಯುತ್ತಿದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಲು ಪೆಲೆಟ್ ಗನ್‍ನಿಂದ ಗಾಯಗೊಂಡಿದ್ದ ಯುವತಿ ಫೋಟೋವನ್ನು ಪ್ರದರ್ಶಿಸಿದ್ದರು. ಆದರೆ ಈ ಫೋಟೋ ಗಾಜಾ ಯುದ್ಧ ಸಂದರ್ಭದಲ್ಲಿನ ಫೋಟೋ ಎಂದು ಮಾಧ್ಯಮಗಳು ಪ್ರಕಟಿಸುವ ಮೂಲಕ ಪಾಕ್ ನೈಜ ಬಣ್ಣವನ್ನು ಬಯಲು ಮಾಡಿವೆ.

    ಗಾಜಾ ಯುದ್ಧದ ಸಂದರ್ಭದಲ್ಲಿ ದಾವಿ ಅಬು ಜೊಮ್(17) ಯುವತಿ ಗಾಯಗೊಂಡಿದ್ದಳು. ಈ ಫೋಟೋವನ್ನು ಪಾಕ್ ಅಧಿಕಾರಿ ಪ್ರದರ್ಶಿಸಿದ ಬಳಿಕ ವಿಶ್ವದಾದ್ಯಂತ ಪಾಕ್ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದೆ.

     

    ಮಲೇಹಾ ಲೋಧಿ ಹೇಳಿದ್ದು ಏನು?
    ಸುಷ್ಮಾ ಸ್ವರಾಜ್ ಅವರಿಗೆ ತಿರುಗೇಟು ನೀಡಿದ ಲೋಧಿ ಏಷ್ಯಾ ಖಂಡದಲ್ಲಿ ಭಾರತ ಭಯೋತ್ಪದನೆಯ ತವರು ನೆಲ ಎಂಬ ಆರೋಪವನ್ನು ಮಾಡಿದರು. ಭಾರತದ ವಿವಿಧ ಭಾಗಗಳಲ್ಲಿ ಭಯೋತ್ಪಾದನ ನೆಲೆಗಳಿವೆ ಎಂದಿದ್ದಾರೆ.

    ಸುಷ್ಮ ಸ್ವರಾಜ್ ಅವರು ಶನಿವಾರ ಪಾಕಿಸ್ತಾನದಲ್ಲಿ ನೆಲೆಯುರಿರುವ ಭಯೋತ್ಪಾದನ ಸಂಸ್ಥೆಗಳಾದ ಲಷ್ಕರ್ ಎ ತೋಯ್ಬಾ, ಜೈಷ್ ಎ ಮೊಹಮ್ಮದ್, ಹಿಜ್ಜುಲ್ ಮುಜಾಹಿದೀನ್, ಹಕ್ಕಾನಿಯಂತಹ ಹಲವು ಸಂಘಟನೆಗಳ ಕುರಿತು ವಿಸ್ತಾರವಾದ ಮಾಹಿತಿಯನ್ನು ನೀಡಿದ್ದರು.

    https://www.youtube.com/watch?v=lviT78WtYig

    ಈ ಕುರಿತು ಪ್ರತಿಕ್ರಿಯಿಸಿರುವ ಲೋಧಿ, ಅಂತರಾಷ್ಟ್ರೀಯ ಸಂಸ್ಥೆಗಳು ಭಾರತ ಹಾಗೂ ಪಾಕಿಸ್ತಾನದ ನಡುವೆ ಶಾಂತಿ ಹಾಗೂ ಸೌರ್ಹದತೆಯನ್ನು ಬಯಸಿದರೆ, ಭಾರತವು ಗಡಿಯಲ್ಲಿ ಉಂಟುಮಾಡುತ್ತಿರುವ ಪ್ರಚೋದನೆ ಹಾಗೂ ಅಕ್ರಮಾಣಕಾರಿ ಪ್ರವೃತ್ತಿಯನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು. ಅಲ್ಲದೇ ಭಾರತದ ನೆಲದಲ್ಲಿ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಪಾಕ್ ಆಕ್ರಮಿತ ಕಾಶ್ಮೀರದ ಬಾಲುಚಿಸ್ತಾನ ವಿಷಯದಲ್ಲಿ ಮಧ್ಯ ಪ್ರವೇಶಿಸುವ ಕುರಿತು ಸಹ ಪಾಕಿಸ್ತಾನದಿಂದ ಆಕ್ಷೇಪ ವ್ಯಕ್ತಪಡಿಸಿತು.

    ಯಾವುದೇ ಸಮಸ್ಯೆಯನ್ನು ಎರಡು ದೇಶಗಳು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳದಿದ್ದರೆ ಇದರ ವಿಚಾರಣೆಯನ್ನು ನಡೆಸುವ ಅಧಿಕಾರ ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಗಿದೆ. ಆದರೆ ಇಂತಹ ನಿಯಮಗಳು ಸಮಯಕ್ಕೆ ಸರಿಯಾಗಿ ಕೈಗೊಳ್ಳಲಾಗುತ್ತಿಲ್ಲ. ನ್ಯಾಯಲಯಕ್ಕೆ ಯಾವುದೇ ಅಂತಿಮ ದಿನವಿರುದಿಲ್ಲ. ಹಾಗೆಯೇ ಮಾನವಿಯತೆಯನ್ನು ಸಮಯದ ಅಧಾರವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಭಾರತವು ವಿಶ್ವ ಸಂಸ್ಥೆಯ ನಿರ್ಧಾರಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

    ಇದೇ ಸಂದರ್ಭದಲ್ಲಿ ಭಾರತದ ಆರೋಪಗಳನ್ನು ತಳ್ಳಿ ಹಾಕಿದ ಅವರು ವಿಶ್ವ ಸಂಸ್ಥೆಯೇ ಭಯೋತ್ಪಾದನೆಯ ವ್ಯಾಖ್ಯಾನವನ್ನು ನೀಡಬೇಕು ಎಂದು ಕೋರಿದರು. ಭಾರತವು ತನ್ನ ನೆರೆಯ ದೇಶಗಳ ಮೇಲೆ ದಾಳಿಯನ್ನು ಮಾಡಲು ಭಯೋತ್ಪಾದನೆಯನ್ನು ಮಾಡಲು ಪೋಷಣೆ ಮಾಡುತ್ತಿದೆ. ಪಾಕಿಸ್ತಾನದ ವಿವಿಧೆಡೆ ವಿದ್ವಾಂಸಕ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಭಾರತವು ಭಯೋತ್ಪಾದನೆಯ ತವರು ನೆಲ ಎಂಬ ಸ್ಪಷ್ಟವಾಗುತ್ತದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಎಂಬುವುದು ವಿಶ್ವ ದೊಡ್ಡ ಬುಟಾಟಿಕೆಯಾಗಿದೆ. ಫ್ಯಾಸಿಸ್ಟ್ ಸಿದ್ಧಾಂತವನ್ನು ಅನುಸರಿಸುವ ಮೂಲಕ ಭಾರತ ತನ್ನ ಅಡಳಿತವನ್ನು ನಡೆಸುತ್ತಿದೆ ಎಂದರು.

    ಪಾಕಿಸ್ತಾನದ ಸ್ಥಾಪಕ ಜಿನ್ನಾ ಅವರ ಕುರಿತ ಹೇಳಿಕೆಗಳನ್ನು ನಿರಾಕರಿಸಿದ ಲೋಧಿ, ಪಾಕಿಸ್ತಾನ ಜಮ್ಮು ಕಾಶ್ಮೀರ ವಿಚಾರವಾಗಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಮಾತುಕತೆಗೆ ಸಿದ್ಧ ಎಂದು ತಿಳಿಸಿದರು.

  • ಧೋನಿ ಇಂದು ಸ್ಪಿನ್ ಬೌಲಿಂಗ್ ಮಾಡ್ತಾರಾ?

    ಧೋನಿ ಇಂದು ಸ್ಪಿನ್ ಬೌಲಿಂಗ್ ಮಾಡ್ತಾರಾ?

    ಇಂದೋರ್: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿದೆ. ಭಾನುವಾರ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ನಡೆದ ನೆಟ್ ಪ್ರ್ಯಾಕ್ಟೀಸ್ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸ್ಪಿನ್ ಬೌಲ್ ಮಾಡಿದರು.

    ಈಗಾಗಲೇ ಕಳೆದ ಎರಡು ಪಂದ್ಯಗಳಲ್ಲಿ ಆಸೀಸ್ ತಂಡ ಭಾರತದ ಸ್ಪಿನ್ನರ್ ಗಳ ದಾಳಿ ಎದುರಿಸುವಲ್ಲಿ ವಿಫಲವಾಗಿತ್ತು. ಆದರಲ್ಲೂ 2ನೇ ಪಂದ್ಯದಲ್ಲಿ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು.

    ಹೋಳ್ಕರ್ ಕ್ರೀಡಾಂಗಣದಲ್ಲಿ ಅಭ್ಯಾಸದ ವೇಳೆ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಚಾಹಲ್ ಜೊತೆ ಧೋನಿ ಕೂಡಾ ಸ್ಪಿನ್ ಬೌಲಿಂಗ್ ಪ್ರ್ಯಾಕ್ಟೀಸ್ ಮಾಡಿದ್ದಾರೆ. ಆಫ್ ಸ್ಪಿನ್ ಹಾಗೂ ಲೆಗ್ ಸ್ಪಿನ್ ದಾಳಿ ನಡೆಸಿ ಧೋನಿ ಎಂಜಾಯ್ ಮಾಡಿದ್ದಾರೆ.

    ಇದರ ವೀಡಿಯೋವನ್ನು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತದ ಸ್ಪಿನ್ ದಾಳಿಗೆ ಸೇರ್ಪಡೆಯಾಗಿದ್ದು ಯಾರೆಂದು ನೋಡಿ ಎಂದು ಕ್ಯಾಪ್ಷನ್ ಕೊಟ್ಟಿದೆ. ಜೊತೆಗೆ ಇನ್ನೊಂದು ಟ್ವೀಟ್ ನಲ್ಲಿ ಧೋನಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಧೋನಿ ಸ್ಮೈಲ್ ಫೋಟೋ ಹಾಕಲಾಗಿದೆ.

    ಇಂದಿನ ಪಂದ್ಯವನ್ನು ಭಾರತ ಗೆದ್ದರೆ ಭಾರತ 5 ಮ್ಯಾಚ್ ಗಳ ಸರಣಿಯನ್ನು ಗೆದ್ದಂತಾಗುತ್ತದೆ. ಆದರೆ ಇಂದಿನ ಪಂದ್ಯದಲ್ಲಾದರೂ ಆಸೀಸ್ ತಂಡ ಸ್ಪಿನ್ನರ್ ಗಳನ್ನು ದಿಟ್ಟವಾಗಿ ಎದುರಿಸುತ್ತಾ ಎನ್ನುವುದೇ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಯಾಕೆಂದರೆ ಈ ಪಂದ್ಯವನ್ನೂ ಸೋತರೆ ಆಸೀಸ್ ಸರಣಿಯನ್ನು ಗೆಲ್ಲುವ ಆಸೆಯನ್ನು ಕೈ ಬಿಡಬೇಕಾಗುತ್ತದೆ.

  • ಟೀಂ ಇಂಡಿಯಾ ಭಾನುವಾರ ಗೆದ್ದರೆ ಬ್ಯಾಕ್ ಟು ಬ್ಯಾಕ್ ರೆಕಾರ್ಡ್!

    ಟೀಂ ಇಂಡಿಯಾ ಭಾನುವಾರ ಗೆದ್ದರೆ ಬ್ಯಾಕ್ ಟು ಬ್ಯಾಕ್ ರೆಕಾರ್ಡ್!

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯವನ್ನು ಟೀಂ ಇಂಡಿಯಾ ಭಾನುವಾರ ಗೆದ್ದರೆ ಭಾರತ ಮತ್ತೊಂದು ದಾಖಲೆಗೆ ಪಾತ್ರವಾಗಲಿದೆ. ನಾಳೆಯ ಪಂದ್ಯ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಇಲ್ಲಿ ಇದುವರೆಗೆ ಆಡಿದ 4 ಪಂದ್ಯವನ್ನೂ ಭಾರತವೇ ಗೆದ್ದಿದೆ. ಆಸೀಸ್ ವಿರುದ್ಧದ ಪಂದ್ಯವನ್ನೂ ಗೆದ್ದರೆ ಭಾರತ ಈ ಕ್ರೀಡಾಂಗಣದಲ್ಲಿ 5ನೇ ಪಂದ್ಯವನ್ನು ಗೆದ್ದಂತಾಗುತ್ತದೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದ ದಾಖಲೆಗೆ ಭಾರತ ಪಾತ್ರವಾಗಲಿದೆ. ಇದುವರೆಗೆ ಭಾರತ ಯಾವುದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದಿರುವ ದಾಖಲೆಗಳಿಲ್ಲ.

    ಶಾರ್ಜಾ, ಮೀರ್ ಪುರ, ದೆಹಲಿ ಹಾಗೂ ವಿಶಾಖಪಟ್ಟಣಂನಲ್ಲಿ ಭಾರತ ಸತತ 4 ಪಂದ್ಯಗಳನ್ನು ಗೆದ್ದಿದೆ. ಇದರ ಜೊತೆಗೆ ಟೀಂ ಇಂಡಿಯಾ ಸತತ 4 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದಂತಾಗುತ್ತದೆ. ಇದು ಕೂಡಾ ಭಾರತದ ಪಾಲಿಗೆ ದಾಖಲೆ ಎನಿಸಲಿದೆ.

    ರನ್ ಮೆಷಿನ್: ಇಂದೋರ್ ಕ್ರೀಡಾಂಗಣ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದ ಪಿಚ್. ಹಾಗಾಗಿ ಇಲ್ಲಿ ರನ್ ಮಳೆಯಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಕೆಲ ದಿನಗಳಿಂದ ಇಲ್ಲಿ ಮಳೆಯಾಗುತ್ತಿದ್ದು ಭಾನುವಾರವೂ ಮಳೆ ಬಂದರೆ ರನ್ ಮಳೆಯಾಗಲ್ಲ ಎಂದು ಪಿಚ್ ಕ್ಯುರೇಟರ್ ತಿಳಿಸಿದ್ದಾರೆ.

    ಟೀಂ ಇಂಡಿಯಾ ಕಳೆದ ಎರಡೂ ಪಂದ್ಯಗಳಲ್ಲಿ ಆಸೀಸ್ ವಿರುದ್ಧ ಉತ್ತಮ ಆಟವಾಡುತ್ತಿದೆ. 5 ಏಕದಿನ ಪಂದ್ಯಗಳಲ್ಲಿ ಭಾರತ 2-0 ಮುನ್ನಡೆಯಲ್ಲಿದೆ. ಭಾನುವಾರದ ಪಂದ್ಯವನ್ನೂ ಗೆದ್ದರೆ ಟೀಂ ಇಂಡಿಯಾ ಸರಣಿ ಕೈವಶ ಪಡಿಸಿಕೊಳ್ಳಲಿದೆ.

  • ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು ಹಾಕಿದ ಭಾರತದ ಈನಂ ಗಂಭೀರ್

    ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು ಹಾಕಿದ ಭಾರತದ ಈನಂ ಗಂಭೀರ್

    ನ್ಯೂಯಾರ್ಕ್: ಪಾಕಿಸ್ತಾನ ಈಗ ಟೆರರಿಸ್ತಾನವಾಗಿದ್ದು, ವಿಶ್ವಕ್ಕೆ ಭಯೋತ್ಪಾದನೆ ಅಲ್ಲಿಂದಲೇ ರಫ್ತಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾರತ ವಾಗ್ದಾಳಿ ನಡೆಸಿದೆ.

    ಗುರುವಾರ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಪಾಕ್ ಪ್ರಧಾನಿ ಶಾಹೀದ್ ಅಬ್ಬಾಸಿ, ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳಿಲ್ಲ. ಉಗ್ರ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ನಾವು ವಿಫಲರಾಗಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಕಾರ್ಯದರ್ಶಿಯಾಗಿರುವ ಈನಂ ಗಂಭೀರ್ ಪ್ರತಿಕ್ರಿಯಿಸಿ, ಉಗ್ರ ಹಫೀಸ್ ಸಯೀದ್ ಪಾಕಿಸ್ತಾನದಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದ್ದು ಮಾತ್ರವಲ್ಲೇ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಉಗ್ರರಿಗೆ ಪಾಕ್ ಎಷ್ಟು ಸುರಕ್ಷಿತ ದೇಶ ಎನ್ನುದ್ದಕ್ಕೆ ಇದೊಂದೆ ಉದಾಹರಣೆ ಸಾಕು ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಓಮರ್‍ಗೆ ಪಾಕಿಸ್ತಾನ ರಕ್ಷಣೆ ನೀಡಿದೆ. ಭಯೋತ್ಪಾದನೆ ಅಲ್ಲಿನ ಉದ್ಯಮವಾಗಿ ಈಗ ಪರಿವರ್ತನೆಯಾಗಿದೆ. ಪಾಕ್ ಮಿಲಿಟರಿ ಮತ್ತು ರಾಜಕೀಯ ನಾಯಕರ ಜೊತೆ ಉಗ್ರರು ಉತ್ತಮ ನಂಟನ್ನು ಹೊಂದಿದ್ದಾರೆ ಎಂದು ಗಂಭೀರ್ ಹೇಳುವ ಮೂಲಕ ಪಾಕಿಸ್ತಾನದ ಮಾನವನ್ನು ಹರಾಜು ಹಾಕಿದರು.

    ಕಾಶ್ಮೀರ ಸಮಸ್ಯೆಗೆ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕು. ಭಾರತದಿಂದ ಕದನ ವಿರಾಮ ಉಲ್ಲಂಘನೆ ಆಗುತ್ತಿದ್ದು, ಗಡಿಯ ಅಶಾಂತಿಗೆ ನಾವು ಕಾರಣರಲ್ಲ ಎಂದು ಪಾಕ್ ಪ್ರಧಾನಿ ಹೇಳಿದ್ದರು. ಇದಕ್ಕೆ ಈನಂ ಗಭೀರ್, ಉಗ್ರರನ್ನು ಕಳುಹಿಸಿ ಭಾರತ ಮೇಲೆ ದಾಳಿ ನಡೆಸುವ ನಿಮ್ಮ ತಂತ್ರ ಎಂದಿಗೂ ಸಫಲವಾಗುವುದಿಲ್ಲ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎನ್ನುವುನ್ನು ನೆನಪಿನಲ್ಲಿರಲಿ ಎಂದು ಹೇಳುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದರು.

  • ಕೊಹ್ಲಿ ಬ್ಯಾಟಿಂಗ್, ಕುಲದೀಪ್ ಬೌಲಿಂಗ್ ಕಮಾಲ್: ಕೋಲ್ಕತ್ತಾದಲ್ಲೂ ಮಲಗಿದ ಆಸೀಸ್

    ಕೊಹ್ಲಿ ಬ್ಯಾಟಿಂಗ್, ಕುಲದೀಪ್ ಬೌಲಿಂಗ್ ಕಮಾಲ್: ಕೋಲ್ಕತ್ತಾದಲ್ಲೂ ಮಲಗಿದ ಆಸೀಸ್

    ಕೋಲ್ಕತ್ತಾ: ಎರಡನೇ ಏಕದಿನ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನದಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 50 ರನ್‍ಗಳಿಂದ ಜಯಗಳಿಸಿದೆ. ಈ ಮೂಲಕ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

    ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕದಿಂದಾಗಿ ಭಾರತ 50 ಓವರ್ ಗಳಲ್ಲಿ 252 ರನ್ ಗಳಿಗೆ ಆಲೌಟ್ ಆಗಿತ್ತು. ಗೆಲ್ಲಲು 253 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 43.1 ಓವರ್ ಗಳಲ್ಲಿ 202 ರನ್ ಗಳಿಗೆ ಆಲೌಟ್ ಆಯ್ತು.

    ಹ್ಯಾಟ್ರಿಕ್ ಸಾಧನೆ: 33ನೇ ಓವರ್ ನಲ್ಲಿ ಮ್ಯಾಥ್ಯು ವೇಡ್, ಆಸ್ಟಿನ್ ಅಗರ್, ಪ್ಯಾಟ್ ಕಮಿನ್ಸ್ ಅವರು ಔಟ್ ಮಾಡುವ ಮೂಲಕ ಕುಲದೀಪ್ ಯಾದವ್ ಹ್ಯಾಟ್ರಿಕ್ ಸಂಪಾದಿಸಿದರು. ವೇಡ್ 2 ರನ್ ಗಳಿಸಿದ್ದಾಗ ಬಾಲ್ ಬ್ಯಾಟ್ ಗೆ ಸಿಕ್ಕಿ ಬೌಲ್ಡ್ ಆದರೆ, ಅಗರ್ ಎಲ್‍ಬಿ ಆದರು. ಪ್ಯಾಟ್ ಕಮಿನ್ಸ್ ಧೋನಿಗೆ ಕ್ಯಾಚ್ ನೀಡಿದರು.

    ಒಂದು ಹಂತದಲ್ಲಿ 147 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ 148 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿತ್ತು. ಈ ಹಿಂದೆ ಭಾರತದ ಪರ ಏಕದಿನದಲ್ಲಿ ಚೇತನ್ ಶರ್ಮಾ ಮತ್ತು ಕಪಿಲ್ ದೇವ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

    ಭಾರತದ ಪರ ವಿರಾಟ್ ಕೊಹ್ಲಿ 92 ರನ್(107 ಎಸೆತ, 8 ಬೌಂಡರಿ) ಅಜಿಂಕ್ಯಾ ರೆಹಾನೆ 55 ರನ್(64 ಎಸೆತ, 7 ಬೌಂಡರಿ) ಹೊಡೆದರು. ಆಸೀಸ್ ಪರ ನಾಯಕ ಸ್ಟೀವ್ ಸ್ಮಿತ್ 59 ರನ್(76 ಎಸೆತ, 8 ಬೌಂಡರಿ) ಹೊಡೆದರೆ ಮಾರ್ಕಸ್ ಸ್ಟೊಯಿನೆಸ್ ಔಟಾಗದೇ 62 ರನ್(65 ಎಸೆತ, 6 ಬೌಂಡರಿ, 3 ಸಿಕ್ಸರ್) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

    ಕುಲದೀಪ್ ಯಾದವ್ ಮತ್ತು ಭುನವೇಶ್ವರ್ ಕುಮಾರ್ ತಲಾ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯಾ ಮತ್ತು ಚಹಲ್ ತಲಾ 2 ವಿಕೆಟ್ ಪಡೆದರು. ಆಸೀಸ್ ಪರ ಕೌಂಟರ್ ನೈಲ್ ಮತ್ತು ಕೇನ್ ರಿಚರ್ಡ್‍ಸನ್ ತಲಾ ಮೂರು ವಿಕೆಟ್ ಪಡೆದರೆ, ಕಮಿನ್ಸ್ ಮತ್ತು ಆಸ್ಟನ್ ಆಗರ್ ತಾಲ ಒಂದೊಂದು ವಿಕೆಟ್ ಪಡೆದರು.

    ಹ್ಯಾಟ್ರಿಕ್ ವಿಕೆಟ್ ಪಡೆದ ಪಂದ್ಯವನ್ನು ತಿರುಗಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಕುಲದೀಪ್ ಯಾದವ್ ವಿಶೇಷ ಗೌರವಕ್ಕೆ ಪಾತ್ರರಾದರೆ 92 ರನ್ ಸಿಡಿಸಿದ ಕೊಹ್ಲಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    ಇದನ್ನೂ ಓದಿ: 11ಕ್ಕೆ 3, 87ಕ್ಕೆ 5 ಕೊನೆಗೆ 7 ವಿಕೆಟ್ ನಷ್ಟಕ್ಕೆ 281 ರನ್: ಇದು ಧೋನಿ, ಪಾಂಡ್ಯಾ, ಭುವಿ ಬ್ಯಾಟಿಂಗ್ ಕರಾಮತ್ತು

    https://twitter.com/naveenarendran/status/910886428250333185

     

     

  • ಹ್ಯಾಟ್ರಿಕ್ ವಿಕೆಟ್ ಕಿತ್ತ ಕುಲದೀಪ್ ಯಾದವ್

    ಹ್ಯಾಟ್ರಿಕ್ ವಿಕೆಟ್ ಕಿತ್ತ ಕುಲದೀಪ್ ಯಾದವ್

    ಕೋಲ್ಕತ್ತಾ: ಆಸ್ಟ್ರೇಲಿಯಾದ ವಿರುದ್ಧದ ಎರಡನೇ ಏಕದಿನದ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದಾರೆ.

    33ನೇ ಓವರ್ ನಲ್ಲಿ ಮ್ಯಾಥ್ಯು ವೇಡ್, ಆಸ್ಟಿನ್ ಅಗರ್, ಪ್ಯಾಟ್ ಕಮಿನ್ಸ್ ಅವರು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಸಂಪಾದಿಸಿದರು. ವೇಡ್ 2 ರನ್ ಗಳಿಸಿದ್ದಾಗ ಬೌಲ್ಡ್ ಆದರೆ, ಅಗರ್ ಎಲ್‍ಬಿ ಆದರು. ಪ್ಯಾಟ್ ಕಮಿನ್ಸ್ ಧೋನಿಗೆ ಕ್ಯಾಚ್ ನೀಡಿದರು.

    ಒಂದು ಹಂತದಲ್ಲಿ 147 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ 148 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿತ್ತು.

    ಈ ಹಿಂದೆ ಭಾರತದ ಪರ ಏಕದಿನದಲ್ಲಿ ಚೇತನ್ ಶರ್ಮಾ ಮತ್ತು ಕಪಿಲ್ ದೇವ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

    ಮೊದಲ ಏಕದಿನ ಪಂದ್ಯದಲ್ಲಿ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಹ್ಯಾಟ್ರಿಕ್ ಸಿಕ್ಸ್ ಹೊಡೆದಿದ್ದರು. ಈಗ ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಂಪಾದಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಕುಲದೀಪ್ ಯಾದವ್ ಅವರನ್ನು ಹೊಗಳಿ ಕಮೆಂಟ್ ಮಾಡುತ್ತಿದ್ದಾರೆ.

     

    https://twitter.com/naveenarendran/status/910886428250333185

  • ಭಾರತ, ಜಪಾನ್ ನಡುವೆ ಸಂಭಾಷಣೆಗೆ ಧ್ವನಿಯಾದ ಕನ್ನಡಿಗ!

    ಭಾರತ, ಜಪಾನ್ ನಡುವೆ ಸಂಭಾಷಣೆಗೆ ಧ್ವನಿಯಾದ ಕನ್ನಡಿಗ!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತ ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈ ಬುಲೆಟ್ ರೈಲು ಯೋಜನೆ ಸೇರಿದಂತೆ ಎರಡು ದೇಶಗಳ ನಡುವೆ ನಡೆದ ಮಹತ್ವದ ಒಪ್ಪಂದಗಳಿಗೆ ಎರಡು ಭಾಷೆಗಳ ಸೇತುವೆಯಾಗಿ ಕೆಲಸ ಮಾಡಿದವರು ಕರ್ನಾಟಕದ ಮಣ್ಣಿನ ಮಗ ರಾಜೇಶ ನಾಯ್ಕ.

    ರಾಜೇಶ ನಾಯ್ಕ ಭಾರತದ ಸರ್ಕಾರದ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಡೀ ವಿದೇಶಾಂಗ ಇಲಾಖೆಯಲ್ಲಿಯೇ ಜಪಾನಿ ಭಾಷೆಯನ್ನು ಕಲಿತು ಸುಲಲಿತವಾಗಿ ಮಾತನಾಡಬಲ್ಲ ವಿಶಿಷ್ಟತೆಯನ್ನು ಹೊಂದಿದ್ದಾರೆ. ಇವರಿಗೆ ಬುಲೆಟ್ ರೈಲು ಯೋಜನೆ, ಜಪಾನ್ ಪ್ರಧಾನಿ ಶಿಂಬೊ ಅಬೆ ಅವರ ಬಗ್ಗೆ ಹೇಳಿ ಅವರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ನೀಡಿತ್ತು. ಇದಕ್ಕಾಗಿ ತಿಂಗಳುಗಟ್ಟಲೇ ಶ್ರಮವಹಿಸಿ ದುಡಿದು, ಮಹತ್ವದ ಕಾರ್ಯವನ್ನು ರಾಜೇಶ ನಾಯ್ಕ ಯಶಸ್ವಿಗೊಳಿಸಿದ್ದಾರೆ.

    ರಾಜೇಶ್ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಇವರು ವಕೀಲ ಎನ್.ಡಿ.ನಾಯ್ಕ ಐಸೂರು ಮತ್ತು ಲಕ್ಷ್ಮೀ ನಾಯ್ಕ ದಂಪತಿಯ ನಾಲ್ಕನೇ ಪುತ್ರ. 10 ನೇ ತರಗತಿ ಓದುತ್ತಿದ್ದಾಗಲೇ ಐಎಎಸ್ ಆಗಬೇಕು ಎಂದು ಕನಸು ಕಂಡಿದ್ದರು.

    ಮೊದಲು ಕೆಎಎಸ್ ಪರೀಕ್ಷೆಯನ್ನು ಬರೆದು ಅದರಲ್ಲಿ 7ನೇ ರ‍್ಯಾಂಕ್‌ ಪಡೆದು ಉತ್ತೀರ್ಣರಾಗಿದ್ದ ರಾಜೇಶ್ ಅವರು ಕೆಲವು ದಿನಗಳ ಕಾಲ ಉಡುಪಿ ಜಿಲ್ಲೆಯ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ತಮ್ಮ ಕನಸಿನತ್ತಾ ಸಾಗಲು ಉತ್ಸುಕತೆಯಿಂದ ದೆಹಲಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 2009 ರಲ್ಲಿ ಸಿಎಸ್‍ಇ ಬ್ಯಾಚ್‍ನಲ್ಲಿ 260 ನೇ ರ್ಯಾಂಕ್ ಪಡೆದು ವಿದೇಶಾಂಗ ಇಲಾಖೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

     

     

     

  • ಜಾಗತಿಕ ಸಮುದಾಯದ ಒತ್ತಡಕ್ಕೆ ಭಯಪಡಲ್ಲ: ಆಂಗ್ ಸಾನ್ ಸೂಕಿ

    ಜಾಗತಿಕ ಸಮುದಾಯದ ಒತ್ತಡಕ್ಕೆ ಭಯಪಡಲ್ಲ: ಆಂಗ್ ಸಾನ್ ಸೂಕಿ

    ನೇಪಿಡಾ: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆ ಆಗುತ್ತಿರುವ ರೋಹಿಂಗ್ಯಾ ಮುಸ್ಲಿಮರ ಸಂಘರ್ಷದಲ್ಲಿ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಹೇಳಿದ್ದಾರೆ.

    ಮ್ಯಾನ್ಮಾರ್ ವಿದೇಶಾಂಗ ಸಚಿವೆ ಆಗಿರುವ ಆಂಗ್ ಸಾನ್ ಸೂಕಿ, ತಮ್ಮ ದೇಶದಲ್ಲಿ ನಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮ್ ಸಂಘರ್ಷದ ಕುರಿತು ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಮೌನವನ್ನು ಮುರಿದಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಟೀಕೆಗಳನ್ನು ಎದುರಿಸುತ್ತಿರುವ ಮ್ಯಾನ್ಮಾರ್, ದೇಶದ ಕಾನೂನು ಸುವ್ಯವಸ್ಥೆಯ ರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡುತ್ತದೆಯೇ ಹೊರತು ಜಾಗತಿಕ ಸಮುದಾಯದ ಒತ್ತಡಕ್ಕೆ ಭಯ ಪಡುವುದಿಲ್ಲ. ಇಲ್ಲಿನ ವಸ್ತು ಸ್ಥಿತಿಯನ್ನು ಕಣ್ಣಾರೆ ಕಂಡಾಗ ಮಾತ್ರ ಪರಿಸ್ಥಿತಿಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ದೇಶದಲ್ಲಿ ಹಲವು ತಿಂಗಳುಗಳ ಕಾಲ ಶಾಂತಿ ಹಾಗೂ ಸುವ್ಯವಸ್ಥೆ ಸ್ಥಾಪನೆಯಾಗಿತ್ತು. ಆದರೆ ಆಗಸ್ಟ್ 25 ರಂದು 30 ಪೊಲೀಸ್ ಔಟ್‍ಪೋಸ್ಟ್ ಮೇಲೆ ಮುಸ್ಲಿಂ ಶಸ್ತ್ರಸಜ್ಜಿತ ಗುಂಪುಗಳು ದಾಳಿಯನ್ನು ನಡೆಸುವ ಮೂಲಕ ಅಶಾಂತಿಯನ್ನು ಸೃಷ್ಟಿಸಿತ್ತು. ಈ ದಾಳಿಯನ್ನು ನಡೆಸಿದ ಅರ್ಕನ್ ರೋಹಿಂಗ್ಯಾ ಮುಸ್ಲಿಮ್ ಸಂಘಟನೆಯನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಲಾಗಿದೆ ಎಂದರು.

    ಮಾಧ್ಯಮಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅಪಪ್ರಚಾರವನ್ನು ಮಾಡುತ್ತಿವೆ. ಬೇರೆ ಯಾವ ಭಾಗದಲ್ಲಿಯೂ ನಡೆಯದ ಘಟನೆಗಳು ಇಲ್ಲಿ ಮಾತ್ರ ಏಕೆ ನಡೆಯುತ್ತಿವೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. 70 ವರ್ಷಗಳ ಅಂತಾರಾಷ್ಟ್ರೀಯ ಸಂಘರ್ಷದ ನಂತರ ಮ್ಯಾನ್ಮಾರ್ ನಲ್ಲಿ ಶಾಂತಿ ನೆಲೆಸಿದೆ. ಹಲವು ಮುಸ್ಲಿಮ್ ಕುಟುಂಬಗಳು ಇಂದಿಗೂ ಮ್ಯಾನ್ಯಾರ್ ಹಳ್ಳಿಗಳಲ್ಲಿ ಉಳಿದುಕೊಂಡಿವೆ ಎಂದು ಮಾಹಿತಿ ನೀಡಿದರು.

    ಮಾನವ ಹಕ್ಕುಗಳ ರಕ್ಷಣೆಗಾಗಿ ದೇಶದ ಎಲ್ಲ ಗಡಿ ಪ್ರದೇಶಗಳನ್ನು ಒಳಗೊಂಡಂತೆ ಪ್ರತ್ಯೇಕ ಸಮಿತಿಯೊಂದನ್ನು ನಮ್ಮ ಸರ್ಕಾರವು ರಚಿಸಿದೆ. ನಮ್ಮ ದೇಶದಲ್ಲಿ ನಾವು ಶಾಂತಿ ನೆಲೆಸುವುದನ್ನು ಬಯಸುತ್ತೇವೆ. ಅಲ್ಲದೆ ಎಲ್ಲಾ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸಹ ಖಂಡಿಸುತ್ತೇವೆ ಎಂದರು.

    ದೇಶವನ್ನು ತೊರೆದಿರುವ 4 ಲಕ್ಷ ರೋಹಿಂಗ್ಯಾ ಮುಸ್ಲಿಮರು ಮತ್ತೆ ಮ್ಯಾನ್ಯಾರ್ ಗೆ ಬರಲು ಬಯಸಿದರೆ ವಾಪಸ್ ಕರೆತರಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ರೋಹಿಂಗ್ಯಾ ಮುಸ್ಲಿಮರಲ್ಲಿ ಸಾಮರಸ್ಯವನ್ನು ತಂದು ದೇಶದಲ್ಲಿ ಮತ್ತೆ ಶಾಂತಿಯನ್ನು ಸ್ಥಾಪಿಸಲು ನಾವು ಮುಂದಾಗುತ್ತೇವೆ. ಈ ರೀತಿಯ ಸಂಘರ್ಷ ನಡೆಯಲು ಕಾರಣ ಏನೆಂಬುದನ್ನು ತಿಳಿಯಲು ನಾವು ರೋಹಿಂಗ್ಯಾರ ಜೊತೆ ಮಾತುಕತೆ ನಡೆಸುತ್ತೇವೆ ಎಂದರು.

    ಮ್ಯಾನ್ಯಾರ್ ಸೇನೆ ರೋಹಿಂಗ್ಯಾ ಮುಸ್ಲಿಮರು ನೆಲೆಸಿರುವ ಗ್ರಾಮಗಳಿಗೆ ತೆರಳಿ ಅವರಿಗೆ ಹಿಂಸೆ ನೀಡಿದ್ದು ಅಲ್ಲದೇ ಅವರನ್ನು ಅಲ್ಲಿಂದ ಓಡಿಸಿದ್ದಾರೆ ಎಂದು ವಿಶ್ವಸಂಸ್ಥೆ ಆರೋಪಿಸಿತ್ತು.

    ಇದನ್ನೂ ಓದಿ: ರೋಹಿಂಗ್ಯಾ ಮುಸ್ಲಿಮರಿಂದ ದೇಶದ ಭದ್ರತೆಗೆ ಅಪಾಯ- ಭಾರತ ಸರ್ಕಾರ

  • ಇಂಗ್ಲೆಂಡ್‍ನಲ್ಲಿ ನಕಲಿ ಮಾಡೋಕೆ ಸಾಧ್ಯವೇ ಇಲ್ಲದ ನೋಟು ಬಿಡುಗಡೆ!

    ಇಂಗ್ಲೆಂಡ್‍ನಲ್ಲಿ ನಕಲಿ ಮಾಡೋಕೆ ಸಾಧ್ಯವೇ ಇಲ್ಲದ ನೋಟು ಬಿಡುಗಡೆ!

    ಲಂಡನ್: ಪ್ರಪಂಚದಲ್ಲಿ ಏನೇ ವಸ್ತುಗಳು ಬಂದ್ರೂ ನಕಲಿ ಆಗಿಬಿಡುತ್ತವೆ. ನಮ್ಮ ದೇಶದಲ್ಲಿ ಈ ಖೋಟಾ ನೋಟುಗಳೇ ದೊಡ್ಡ ಸಮಸ್ಯೆಯಾಗಿದೆ. ಆದರೆ ಬ್ರಿಟನ್‍ನಲ್ಲಿ ಜಗತ್ತಿನಲ್ಲೇ ನಕಲಿ ಮಾಡಲು ಸಾಧ್ಯವೇ ಇಲ್ಲದ ನೋಟನ್ನು ಹೊರ ತರಲಾಗಿದೆ.

    19ನೇ ಶತಮಾನದ ಕಾದಂಬರಿಗಾರ್ತಿ ಜೇನ್ ಆಸ್ಟಿನ್ ಮುಖದೊಂದಿಗೆ ಪ್ರಿಂಟ್ ಆಗಿರುವ 10 ಹಾಗೂ 5 ಪೌಂಡ್ ಮೌಲ್ಯದ ಹೊಸ ನೋಟ್‍ನ್ನು ಹೊರ ತರಲಾಗಿದೆ.

    ಏನಿದರ ವಿಶೇಷತೆ?
    ಪಾಲಿಮರ್‍ನಿಂದ ಮಾಡಿರುವ ವಿಶೇಷ ನೋಟು ಇದಾಗಿದ್ದು ಪೇಪರ್‍ಗಿಂತ 2.5 ಪಟ್ಟು ಹೆಚ್ಚು ಬಾಳಿಕೆಗೆ ಯೋಗ್ಯವಾಗಿದೆ. ಎಡಬದಿಯ ಮೇಲ್ಭಾಗದಲ್ಲಿ ದೃಷ್ಟಿಹೀನರಿಗೆ ವಿಶೇಷ ಸ್ಪರ್ಶ ಇದರಲ್ಲಿದ್ದು ರಾಜಕಿರೀಟ ಮತ್ತು 10 ಎಂಬ ಎರಡು ಹಾಲೋಗ್ರಾಮ್ ಇದೆ. ಅಷ್ಟೇ ಅಲ್ಲದೇ ನೋಟನ್ನು ಓರೆ ಹಿಡಿದರೆ ಪೌಂಡ್ಸ್ ಎಂದು ಬದಲಾಗುತ್ತದೆ.

    2ನೇ ರಾಣಿ ಎಲಿಜಬೆತ್ ಪಾರದರ್ಶಕ ಭಾವಚಿತ್ರ (ಮುಂಭಾಗದಲ್ಲಿ ಬಂಗಾರ, ಹಿಂಭಾಗದಲ್ಲಿ ಬೆಳ್ಳಿ ಲೇಪಿತ) ಇದೆ. ರಾಣಿ ಚಿತ್ರದ ಕೆಳಗೆ ಮೈಕ್ರೋಸ್ಕೋಪ್‍ನಿಂದ ನೋಡಿದರೆ ಅಕ್ಷರ ಮತ್ತು ಸಂಖ್ಯೆ ಕಾಣುತ್ತದೆ. ಈ ನೋಟು ಓರೆ ಮಾಡಿದರೆ ಹಕ್ಕಿಗರಿ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ.