Tag: india

  • 2019ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಡೊನಾಲ್ಡ್ ಟ್ರಂಪ್ ಮುಖ್ಯ ಅತಿಥಿ?

    2019ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಡೊನಾಲ್ಡ್ ಟ್ರಂಪ್ ಮುಖ್ಯ ಅತಿಥಿ?

    ನವದೆಹಲಿ: ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಸರ್ಕಾರ ಆಹ್ವಾನ ನೀಡಿದೆ ಎಂದು ತಿಳಿದು ಬಂದಿದೆ.

    ಈ ಸಂಬಂಧ ಕಳೆದ ಏಪ್ರಿಲ್ ನಲ್ಲೇ ಭಾರತ ಅಮೆರಿಕ ಅಧ್ಯಕ್ಷರ ಶ್ವೇತಭವನಕ್ಕೆ ಆಹ್ವಾನವನ್ನು ಕಳುಹಿಸಿದೆ. ಇದಕ್ಕೆ ಶ್ವೇತಭವನದ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಭಾರತದ ಆಹ್ವಾನವನ್ನು ಒಪ್ಪಿಕೊಂಡರೆ ಬರಾಕ್ ಒಬಾಮ ನಂತರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳುತ್ತಿರುವ ಎರಡನೆಯ ಅಮೆರಿಕದ ಅಧ್ಯಕ್ಷ ಎಂಬ ಗೌರವಕ್ಕೆ ಟ್ರಂಪ್ ಪಾತ್ರರಾಗಲಿದ್ದಾರೆ. 2015ರಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡಿದ್ದರು.

    ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ರಾಯಭಾರಿಯಾದ ನಿಕ್ಕಿ ಹ್ಯಾಲೆ ಇರಾನ್ ವಿರುದ್ಧದ ಹೋರಾಟದಲ್ಲಿ ಸಹಕರಿಸುವಂತೆ ಭಾರತವನ್ನು ಕೇಳಿಕೊಂಡಿತ್ತು. ಅಲ್ಲದೇ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವೆ ಇರುವ ಬಿಕ್ಕಟ್ಟಿನಿಂದಾಗಿ, ಇರಾನ್ ನಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲಗಳನ್ನು ನಿಲ್ಲಿಸುವಂತೆ ತಿಳಿಸಿದ್ದರು.

    ಇದಲ್ಲದೆ ಕೆಲ ದಿನಗಳ ಹಿಂದೆ ಭಾರತದ ವಸ್ತುಗಳ ಮೇಲೆ ಅಮೆರಿಕ ಅಮದು ಸುಂಕವನ್ನು ಹೆಚ್ಚಿಸಿದ್ದಕ್ಕೆ ಭಾರತವೂ ಅಮೆರಿಕದ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿತ್ತು. ಎರಡು ದೇಶಗಳ ನಡುವೆ ವ್ಯಾಪಾರ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಭಾರತ ಡೊನಾಲ್ಡ್ ಟ್ರಂಪ್ ಅವರನ್ನು ಗಣರಾಜ್ಯೋತ್ಸವ ಪರೇಡ್ ಗೆ ಆಹ್ವಾನಿಸಿರುವುದು ಕುತೂಹಲ ಕೆರಳಿಸಿದೆ.

  • ಭಾರತಕ್ಕೆ ಬರಲಿದ್ದಾರೆ ಹೈಪರ್‌ಲೂಪ್‌ ಜನಕ ಎಲಾನ್ ಮಸ್ಕ್!

    ಭಾರತಕ್ಕೆ ಬರಲಿದ್ದಾರೆ ಹೈಪರ್‌ಲೂಪ್‌ ಜನಕ ಎಲಾನ್ ಮಸ್ಕ್!

    ನವದೆಹಲಿ: ಹೈಪರ್‌ಲೂಪ್‌ ಜನಕ ಹಾಗೂ ಸ್ಪೇಸ್-ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ರವರು ಭಾರತಕ್ಕೆ ಬರುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.

    ಎಲಾನ್ ಮಸ್ಕ್ ರವರು ಗುರುವಾರ ಚೀನಾ ಪ್ರವಾಸದಲ್ಲಿನ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ವೇಳೆ ಭಾರತೀಯರು ನೀವು ಯಾವಾಗ ಭಾರತಕ್ಕೆ ಬರುವಿರಿ ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್ 2018ರೊಳಗೆ ಭಾರತಕ್ಕೆ ಭೇಟಿ ನೀಡುವ ಕುರಿತು ಮಾಹಿತಿ ನೀಡಿದ್ದಾರೆ.

    ಎಲಾನ್ ಮಸ್ಕ್ ರವರು ಮೂಲತಃ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದವರಾಗಿದ್ದು, ಸದ್ಯ ಅಮೆರಿಕದ ಲಾಸ್ ಎಂಜಲೀಸ್‍ನಲ್ಲಿ ನೆಲೆಸಿದ್ದಾರೆ. ಇವರು ಟೆಸ್ಲಾ ಇಲೆಕ್ಟ್ರಿಕ್ ಕಾರು ಹಾಗೂ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಸ್ಪೇಸ್ ಎಕ್ಸ್ ನ ಸಂಸ್ಥಾಪಕರಾಗಿದ್ದಾರೆ.

    2017ರಲ್ಲಿ ತಮ್ಮ ಟೆಸ್ಲಾ ಸಂಸ್ಥೆಯ ಇಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಪರಿಚಯಿಸುವ ಕುರಿತು ಭಾರತ ಸರ್ಕಾರದೊಂದಿಗೆ ಮಾತನಾಡಿದ್ದರು. ಆದರೆ ಕೇಂದ್ರ ಸರ್ಕಾರದ ನಿಯಮ-ಷರತ್ತುಗಳ ಪ್ರಕ್ರಿಯೆ ವಿಳಂಬವಾದ ಕಾರಣ ಭಾರತದಲ್ಲಿ ಟೆಸ್ಲಾ ಕಾರುಗಳು ತಡವಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಈ ಹಿಂದೆ ತಿಳಿಸಿದ್ದರು. ಇದನ್ನೂ ಓದಿ: ಮುಂಬೈ ನಿಂದ ಪುಣೆಗೆ ಜಸ್ಟ್ 25 ನಿಮಿಷ ಸಾಕು- ಹೈಪರ್‍ಲೂಪ್ ಪಡೆಯುವಲ್ಲಿ ಭಾರತವೇ ಮೊದಲ ದೇಶವಾಗೋ ನಿರೀಕ್ಷೆ

    ಏನಿದು ಹೈಪರ್‌ಲೂಪ್‌?
    ಹೈಪರ್‌ಲೂಪ್‌ ಮುಂದಿನ ಪೀಳಿಗೆಯ ರೈಲ್ವೇ ವ್ಯವಸ್ಥೆಯಾಗಿದ್ದು, ಅಯಸ್ಕಾಂತಿಯ ಶಕ್ತಿಯಿಂದ ಸಂಚರಿಸುತ್ತದೆ. ಗಂಟೆಗೆ 1126 ಕಿ.ಮೀ ವೇಗ ಇರಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಕೊಳವೆಯಾಕಾರದ ಈ ವಾಹನ ಶಬ್ದದ ವೇಗದಲ್ಲಿ ಚಲಿಸಲಿದೆ ಎಂದು ವರದಿಯಾಗಿದೆ. ಪ್ರಸ್ತುತ ಭಾರತದಲ್ಲಿ ಅತ್ಯಂತ ವೇಗದ ರೈಲು ಟಾಲ್ಗೋ ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಆದ್ರೆ ಇದು ಇನ್ನೂ ಪರೀಕ್ಷಾರ್ಥ ಸಂಚಾರದಡಿ ಇದೆ.

    ಲಾಭ ಏನು?
    ಪ್ರಸ್ತಾವಿತ 149 ಕಿಮಿ ಇರೋ ಪುಣೆ-ಮುಂಬೈ ಮಾರ್ಗಕ್ಕೆ ಬರೋದಾದ್ರೆ ಇದು ಪುಣೆ, ನವೀಮುಂಬೈ ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಹಾಗೂ ಮುಂಬೈ ನಗರಗಳನ್ನ ಸಂಪರ್ಕಿಸಲಿದ್ದು, 25 ನಿಮಿಷ ಪ್ರಯಾಣ ಸಮಯ ಇರಲಿದೆ. ರಿಚರ್ಡ್ ಬ್ರಾನ್ಸನ್ ಅವರ ಪ್ರಕಾರ ಈ ವ್ಯವಸ್ಥೆಯಿಂದ 2.6 ಕೋಟಿ ಜನರಿಗೆ ನೆರವಾಗಲಿದ್ದು, 9 ಕೋಟಿ ಗಂಟೆಗೂ ಹೆಚ್ಚು ಪ್ರಯಾಣ ಸಮಯ ಉಳಿತಾಯವಾಗಲಿದೆ. ಮಾರ್ಗವು ಸಂಪುರ್ಣವಾಗಿ ವಿದ್ಯುತ್ ಶಕ್ತಿಯಿಂದ ಕೂಡಿರಲಿದ್ದು, ವರ್ಷಕ್ಕೆ 1.5 ಲಕ್ಷ ಟನ್‍ನಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನ ಕಡಿಮೆ ಮಾಡಲಿದೆ.

  • 43 ವರ್ಷಗಳ ಬಳಿಕ ವಿಶೇಷ ಸೂರ್ಯಗ್ರಹಣ – ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‍ನಲ್ಲಿ ಮಾತ್ರ ಗೋಚರ

    43 ವರ್ಷಗಳ ಬಳಿಕ ವಿಶೇಷ ಸೂರ್ಯಗ್ರಹಣ – ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‍ನಲ್ಲಿ ಮಾತ್ರ ಗೋಚರ

    ನವದೆಹಲಿ: ಸುಮಾರು 43 ವರ್ಷಗಳ ಬಳಿಕ ವಿಶೇಷ ಭಾಗಶಃ ಸೂರ್ಯ ಗ್ರಹಣ ಇಂದು ಸಂಭವಿಸ್ತಿದೆ.

    43 ವರ್ಷಗಳ ಬಳಿಕ ತಿಂಗಳ 13 ರಂದು ಮತ್ತು ಶುಕ್ರವಾರದ ದಿನವೇ ಸೂರ್ಯಗ್ರಹಣ ನಡೆಯುತ್ತಿರುವುದೇ ವಿಶೇಷ. 1974, ಡಿಸೆಂಬರ್ 13ರ ಶುಕ್ರವಾರ ಇದೇ ರೀತಿ ಭಾಗಶಃ ಸೂರ್ಯಗ್ರಹಣ ಸಂಭವಿಸಿತ್ತು. ಕೆಲವು ದೇಶಗಳಲ್ಲಿ 13 ಮತ್ತು ಶುಕ್ರವಾರಕ್ಕೆ ಸಂಬಂಧಿಸಿ ಮೂಢನಂಬಿಕೆಗಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‍ನಲ್ಲಿ ಮಾತ್ರ ಗ್ರಹಣ ವೀಕ್ಷಣೆಗೆ ಲಭ್ಯವಿದ್ದು, ಇದು ಭಾರತದಲ್ಲಿ ಗೋಚರವಾಗುವುದಿಲ್ಲ. ಆದ್ರೆ ಅಮವಾಸ್ಯೆ ದಿನವಾಗಿರೋದ್ರಿಂದ ಮನುಕುಲದ ಮೇಲೆ ಪ್ರಭಾವ ಬೀರುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 7.18 ರಿಂದ 8.31ರವರೆಗೆ ಗ್ರಹಣವಿರಲಿದೆ.

    ಭಾರತೀಯರೂ ನೋಡಬಹುದು:
    ಭಾರತದಲ್ಲಿ ಸೂರ್ಯಗ್ರಹಣ ಕಾಣದಿದ್ದರೂ ಭಾರತೀಯರು ನಾಸಾ ವೆಬ್‍ಸೈಟ್ ನ ಲೈವ್ ಸ್ಟ್ರೀಮಿಂಗ್ ಹಾಗೂ ಯೂಟ್ಯೂಬ್ ಮೂಲಕ ಕಣ್ತುಂಬಿಕೊಳ್ಳಬಹುದು. ಬೆ ಜಗತ್ತಿನ ಬೇರೆ ದೇಶಗಳಲ್ಲಿಯೂ ಈ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಲಾಗುವುದಿಲ್ಲ. ಹಾಗೇನಾದರೂ ಬರಿಗಣ್ಣಿನಿಂದ ನೋಡಿದರೆ ದರಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದು ನ್ಯೂಯಾರ್ಕ್ ಹೇಯ್ಡೆನ್ ಪ್ಲಾನೆಟೇರಿಯಂನ ಸಹಾಯಕ ಜೋ ರಾವ್ ತಿಳಿಸಿದ್ದಾರೆ.

  • ಫ್ರಾನ್ಸ್ ಹಿಂದಿಕ್ಕಿ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದ ಭಾರತ!

    ಫ್ರಾನ್ಸ್ ಹಿಂದಿಕ್ಕಿ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದ ಭಾರತ!

    ಪ್ಯಾರಿಸ್: ಫ್ರಾನ್ಸ್ ಹಿಂದಿಕ್ಕಿ ವಿಶ್ವದಲ್ಲೇ ಭಾರತ 6ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದೆ.

    2017ರ ವಿಶ್ವಬ್ಯಾಂಕ್ ವರದಿ ಪ್ರಕಟಗೊಂಡಿದ್ದು ಒಟ್ಟು ರಾಷ್ಟ್ರೀಯ ಉತ್ಪನ್ನ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತ ಫ್ರಾನ್ಸ್ ದೇಶವನ್ನು 7ನೇ ಸ್ಥಾನಕ್ಕೆ ತಳ್ಳಿದೆ. ಭಾರತದ ಜಿಡಿಪಿ 2.59 ಲಕ್ಷ ಕೋಟಿ ಡಾಲರ್ ಗಳಿಗೆ ಏರಿದರೆ ಫ್ರಾನ್ಸ್ ಜಿಡಿಪಿ 2.582 ಲಕ್ಷ ಕೋಟಿ ಡಾಲರ್‍ಗಳಾಗಿವೆ ವರದಿ ತಿಳಿಸಿದೆ.

    ಭಾರತದ ಜನಸಂಖ್ಯೆ 134 ಕೋಟಿ ಇದ್ದರೆ, ಫ್ರಾನ್ಸ್ ಜನಸಂಖ್ಯೆ ಕೇವಲ 6.7 ಕೋಟಿ ಇದೆ. ಹೀಗಾಗಿ ಭಾರತದ ತಲಾ ಆದಾಯವನ್ನು ಜಿಡಿಪಿಗೆ ಹೋಲಿಸಿದರೆ ಫ್ರಾನ್ಸ್‍ನ ತಲಾ ಆದಾಯದ 20 ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ. ಫ್ರಾನ್ಸ್ ನಲ್ಲಿ 6.78 ಕೋಟಿ ಜನಸಂಖ್ಯೆಯಿದೆ.

    ನೋಟು ನಿಷೇಧ ಮತ್ತು ಜಿಎಸ್‍ಟಿ ಜಾರಿಯಾದ ಬಳಿಕ ಭಾರತದ ಆರ್ಥಿಕತೆ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಏಷ್ಯಾದಲ್ಲಿ ಚೀನಾದ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದ್ದರೆ ಭಾರತದ ಆರ್ಥಿಕತೆ ವೇಗವಾಗಿ ಸಾಗುತ್ತಿದೆ ಎಂದು ವಿಶ್ವಬ್ಯಾಂಕ್ ವರದಿ ಉಲ್ಲೇಖಿಸಿದೆ.

    ವಿಶ್ವದ ಐದು ದೊಡ್ಡ ಅರ್ಥವ್ಯವಸ್ಥೆಯ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನದಲ್ಲಿ ಅನುಕ್ರಮವಾಗಿ ಇಂಗ್ಲೆಂಡ್, ಚೀನಾ, ಜಪಾನ್, ಜರ್ಮನಿ ಪಡೆದುಕೊಂಡಿವೆ.

    ಈ ಹಿಂದೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಪ್ರಕಾರ 2019 ರ ಭಾರತ ಆರ್ಥಿಕ ಪ್ರಗತಿ 7.8% ಗೆ ಹೆಚ್ಚಳವಾಗಲಿದೆ ಎಂದು ತಿಳಿಸಿತ್ತು. 2018 ರಲ್ಲಿ ವರ್ಷದಲ್ಲಿ ಭಾರತದ ಜಿಡಿಪಿ ದರ 7.4% ಕ್ಕೆ ಏರಿಕೆ ಆಗಲಿದ್ದು, ಈ ವೇಳೆ ಚೀನಾ 6.8% ರಷ್ಟು ಹೊಂದಿರಲಿದೆ ಎಂದು ಐಎಂಎಫ್ ಹೇಳಿದೆ.

    ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆ ಈ ವರ್ಷವೇ ಬ್ರಿಟನ್ ಮತ್ತು ಫ್ರಾನ್ಸ್ ಅನ್ನು ಮೀರಿಸಲಿದೆ. ಇದೇ ಬೆಳವಣಿಗೆಯನ್ನು ಕಾಯ್ದುಕೊಂಡರೆ 2032ರ ವೇಳೆಗೆ ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಲಂಡನ್ ಮೂಲದ ಸೆಂಟರ್ ಫಾರ್ ಎಕನಾಮಿಕ್ಸ್ ಅಂಡ್ ಬಿಸಿನೆಸ್ ರೀಸರ್ಚ್ ಈ ಹಿಂದೆ ಭವಿಷ್ಯ ನುಡಿದಿತ್ತು.

    ಯಾವ ಅವಧಿಯಲ್ಲಿ ಭಾರತದ ಜಿಡಿಪಿ ಎಷ್ಟಿತ್ತು?
    ಮಾರ್ಚ್ 2016 – 9.2%
    ಜೂನ್ 2016 – 7.9%
    ಸೆಪ್ಟೆಂಬರ್ 2016 – 7.5%
    ಡಿಸೆಂಬರ್ 2016 – 7%
    ಮಾರ್ಚ್ 2017 – 6.1%
    ಜೂನ್ 2017 – 5.7%
    ಸೆಪ್ಟೆಂಬರ್ 2017 – 6.5%
    ಡಿಸೆಂಬರ್ 2017 – 7.2%

  • ಕೇವಲ ವೋಟಿಗಾಗಿ ನನ್ನನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗ್ತಿದೆ: ಕೇಂದ್ರದ ವಿರುದ್ಧ ಮಲ್ಯ ಕಿಡಿ

    ಕೇವಲ ವೋಟಿಗಾಗಿ ನನ್ನನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗ್ತಿದೆ: ಕೇಂದ್ರದ ವಿರುದ್ಧ ಮಲ್ಯ ಕಿಡಿ

    ಲಂಡನ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಗಳಿಸಲು ನನ್ನನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮದ್ಯ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.

    ಬ್ರಿಟನ್ ನಲ್ಲಿರುವ ವಿಜಯ್ ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬ್ರಿಟನ್ ಕೋರ್ಟ್ ಜಾರಿ ಆದೇಶ ಹೊರಡಿಸಿದೆ. ನ್ಯಾಯಾಲಯದ ತೀರ್ಪಿಗೆ ತಲೆಬಾಗಿದ್ದು, ಅಧಿಕಾರಿಗಳಿಗೆ ಸಹಕರಿಸುವುದಾಗಿ ವಿಜಯ್ ಮಲ್ಯ ತಿಳಿಸಿದ್ದಾರೆ.

    ಬ್ರಿಟಿಷ್ ಫಾರ್ಮುಲಾ ಒನ್ ರೇಸ್ ವೇಳೆ ಪಾಲ್ಗೊಂಡಿದ್ದ ಮಲ್ಯ ಅವರನ್ನು ಮಾಧ್ಯಮವೊಂದು ಮಾತನಾಡಿಸಿದ್ದು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

    ಭಾರತದ 13 ಬ್ಯಾಂಕ್ ಗಳ ಸಾಲ ಮರುಪಾವತಿಗಾಗಿ ಇಂಗ್ಲೆಂಡಿನಿಂದ ಗಡಿಪಾರು ಮಾಡುವಂತೆ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರವು ರಾಜಕೀಯ ಉದ್ದೇಶದಿಂದ ನನ್ನನ್ನು ಇಂಗ್ಲೆಂಡ್ ನಿಂದ ಭಾರತಕ್ಕೆ ಕರೆತರಲು ಯತ್ನಿಸುತ್ತಿದೆ. ಈ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಈ ರೀತಿ ಮಾಡಿದರೆ ಮತಗಳು ಹೆಚ್ಚಿಗೆ ಸಿಗುತ್ತವೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ ಎಂದು ಆರೋಪಿಸಿದರು.

    ಇಂಗ್ಲೆಂಡಿನಲ್ಲಿರುವ ನನ್ನ ಆಸ್ತಿಯ ವಿವರಗಳ ಬಗ್ಗೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ನನ್ನಲ್ಲಿ ಕೆಲವೊಂದು ಕಾರುಗಳು, ಚಿನ್ನಾಭರಣಗಳು ಇವೆ. ಅದನ್ನು ವಶಕ್ಕೆ ಪಡೆಯಲು ನೀವು ನನ್ನ ಮನೆಗೆ ಬರಬೇಕಿಲ್ಲ. ದಿನಾಂಕ, ಸಮಯ ಹಾಗೂ ಸ್ಥಳವನ್ನು ತಿಳಿಸಿದರೆ ನಾನೇ ಅವುಗಳನ್ನು ತಮ್ಮ ವಶಕ್ಕೆ ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಎಸ್‍ಬಿಐನಿಂದ 963 ಕೋಟಿ ರೂ. ಮೌಲ್ಯದ ವಿಜಯ್‍ಮಲ್ಯ ಆಸ್ತಿ ವಶ!

    ನನ್ನ ಹೆಸರಿನಲ್ಲಿರುವ ಆಸ್ತಿಗಳನ್ನು ಮಾತ್ರ ಬ್ಯಾಂಕ್‍ಗಳು ವಶಕ್ಕೆ ಪಡೆಯಬಹುದೇ ಹೊರತು ಇತರೆ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ವಿಜಯ ಮಲ್ಯ ಇಂಗ್ಲೆಂಡಿನಲ್ಲಿರುವ ಬೆಲೆ ಬಾಳುವ ಆಸ್ತಿಗಳನ್ನು ತಮ್ಮ ಹೆಸರಿನಲ್ಲಿರಿಸಿಕೊಳ್ಳದೇ ಕುಟುಂಬ ಸದಸ್ಯರ ಹೆಸರಿನಲ್ಲಿರಿಸಿದ್ದಾರೆ.

  • ಒಂದೇ ಪಂದ್ಯದಲ್ಲಿ ನಾಲ್ಕು ದಾಖಲೆಗಳನ್ನು ನಿರ್ಮಿಸಿದ ಧೋನಿ!

    ಲಂಡನ್: ಭಾನುವಾರ ನಡೆದ ಇಂಗ್ಲೆಂಡ್ ತಂಡದ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು 4 ದಾಖಲೆಗಳನ್ನು ಬರೆದು ಇತಿಹಾಸ ನಿರ್ಮಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ 6 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಟಿ-20ಯ ಒಂದೇ ಪಂದ್ಯದಲ್ಲಿಯೇ 6 ಮಂದಿಯನ್ನು ಔಟ್ ಮಾಡಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ 5 ಕ್ಯಾಚ್ ಹಿಡಿದ ಮೊದಲ ಕೀಪರ್ ಎನ್ನುವ ದಾಖಲೆಯನ್ನು ಧೋನಿ ನಿರ್ಮಿಸಿದರು.

    ಇದಲ್ಲದೇ ಅಂತರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 50 ಕ್ಯಾಚ್ ಹಿಡಿದ ಮೊದಲ ಕೀಪರ್ ಹಾಗೂ ಟಿ-20ಯಲ್ಲಿ 150 ಕ್ಯಾಚ್ ಪೂರೈಸಿದ ವಿಶ್ವದ ಮೊದಲನೇ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಒಂದೇ ಟಿ-20 ಪಂದ್ಯದಲ್ಲಿ ನಾಲ್ಕು ದಾಖಲೆಗಳನ್ನು ನಿರ್ಮಿಸುವ ಮೂಲಕ ಧೋನಿ ಇತಿಹಾಸ ನಿರ್ಮಿಸಿದ್ದಾರೆ.

  • ರೋ`ಹಿಟ್’ ಭರ್ಜರಿ ಶತಕ, ಪಾಂಡ್ಯ ಆಲ್‍ರೌಂಡರ್ ಆಟಕ್ಕೆ ಒಲಿಯಿತು ಸರಣಿ!

    ರೋ`ಹಿಟ್’ ಭರ್ಜರಿ ಶತಕ, ಪಾಂಡ್ಯ ಆಲ್‍ರೌಂಡರ್ ಆಟಕ್ಕೆ ಒಲಿಯಿತು ಸರಣಿ!

    ಬ್ರಿಸ್ಟಲ್: ರೋಹಿತ್ ಶರ್ಮಾ ಭರ್ಜರಿ ಅಜೇಯ ಶತಕ, ಹಾರ್ದಿಕ್ ಪಾಂಡ್ಯ ಆಲ್‍ರೌಂಡರ್ ಆಟದಿಂದಾಗಿ ಭಾರತ ಇಂಗ್ಲೆಂಡ್ ವಿರುದ್ಧ 7 ವಿಕೆಟ್‍ಗಳ ಜಯ ಸಾಧಿಸಿದ್ದು 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದೆ.

    ಇಂಗ್ಲೆಂಡ್ ನೀಡಿದ 199 ರನ್‍ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ 18.4 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು. 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ ಅಂತಿಮವಾಗಿ ಅಜೇಯ 100 ರನ್(56 ಎಸೆತ, 11 ಬೌಂಡರಿ, 2 ಸಿಕ್ಸರ್) ಸಿಡಿಸಿದರೆ, ಹಾರ್ದಿಕ್ ಪಾಂಡ್ಯ ಅಜೇಯ 33 ರನ್(14 ಎಸೆತ, 4 ಬೌಂಡರಿ, 2 ಸಿಕ್ಸರ್) ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

    5.2 ಓವರ್ ಗಳಲ್ಲಿ 62 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ರೋಹಿತ್ ಮತ್ತು ಕೊಹ್ಲಿ ಮೂರನೇ ವಿಕೆಟ್ ಗೆ 89 ರನ್ ಜೊತೆಯಾಟವಾಡಿದರು. ಕೊನೆಗೆ ಕೇವಲ 23 ಎಸೆತಗಳಲ್ಲಿ ಪಾಂಡ್ಯ ಮತ್ತು ರೋಹಿತ್ ಮುರಿಯದ ನಾಲ್ಕನೇಯ ವಿಕೆಟ್ ಗೆ 50 ರನ್ ಸಿಡಿಸಿದರು.

    ಕೊಹ್ಲಿ 43 ರನ್(29 ಎಸೆತ, 2 ಬೌಂಡರಿ, 2 ಸಿಕ್ಸರ್) ಕೆಎಲ್ ರಾಹುಲ್ 19 ರನ್(10 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದರೆ ಶಿಖರ್ ಧವನ್ 5 ರನ್ ಗಳಿಸಿ ಔಟಾದರು. ಜಸನ್ ರಾಯ್ 67 ರನ್(31 ಎಸೆತ, 4 ಬೌಂಡರಿ, 7 ಸಿಕ್ಸರ್) ಬಟ್ಲರ್ 34, ಹೇಲ್ಸ್, 30, ಬೇನ್‍ಸ್ಟೋ 25 ರನ್ ಸಿಡಿಸಿದ ಪರಿಣಾಮ ಇಂಗ್ಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತ್ತು. ಹಾರ್ದಿಕ್ ಪಾಂಡ್ಯ 38 ರನ್ ನೀಡಿ 4 ವಿಕೆಟ್ ಕಬಳಿಸಿದರು. ಶತಕ ಸಿಡಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಯ ಜೊತೆಗೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಇಂಗ್ಲೆಂಡ್ ರನ್ ಏರಿದ್ದು ಹೇಗೆ?
    50 ರನ್ – 27 ಎಸೆತ
    100 ರನ್ – 55 ಎಸೆತ
    150 ರನ್ – 91 ಎಸೆತ
    198 ರನ್ – 120 ಎಸೆತ

    ಭಾರತದ ರನ್ ಏರಿದ್ದು ಹೇಗೆ?
    50 ರನ್ – 29 ಎಸೆತ
    100 ರನ್ – 61 ಎಸೆತ
    150 ರನ್ – 85 ಎಸೆತ
    201 ರನ್ – 112 ಎಸೆತ

  • ಜಿಮ್ನಾಸ್ಟಿಕ್‍ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ದೀಪಾ ಕರ್ಮಾಕರ್

    ಜಿಮ್ನಾಸ್ಟಿಕ್‍ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ದೀಪಾ ಕರ್ಮಾಕರ್

    ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆದ ಜಿಮ್ನಾಸ್ಟಿಕ್ ವರ್ಲ್ಡ್  ಚಾಲೆಂಜ್ ಕಪ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.  ಬಹಳ ಕಷ್ಟದ ವಾಲ್ಟ್ ವಿಭಾಗದಲ್ಲಿ  14.150 ಅಂಕಗಳಿಸುವ ಮೂಲಕ 24 ವರ್ಷದ ದೀಪಾ ಚಿನ್ನದ ಪದಕವನ್ನು ಗೆದ್ದಿದ್ದಾರೆ.

    ರಿಯೋ ಒಲಿಂಪಿಕ್ಸ್ ನಲ್ಲಿ ಗಾಯಗೊಂಡ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿರಲಿಲ್ಲ. ಆದರೆ ಈಗ ಎರಡೂವರೆ ವರ್ಷದ ಬಳಿಕ ಟೂರ್ನಿಯಲ್ಲಿ ಭಾಗವಹಿಸಿ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಜಿಮ್ನಾಸ್ಟಿಕ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎನ್ನುವ ಹೆಗ್ಗಳಿಕಿಗೆ ಪಾತ್ರರಾಗಿದ್ದಾರೆ.

    ರಿಯೋ ಒಲಿಂಪಿಕ್ ಪದಕ ವಿಜೇತರಾಗಿದ್ದ ಪಿವಿ ಸಿಂಧು, ಸಾಕ್ಷಿ ಮಲಿಕ್ ಮತ್ತು ಜಿಮ್ನಾಸ್ಟಿಕ್ಸ್ ಇತಿಹಾಸದಲ್ಲಿ ಭಾರತದ ಪರ ವಿಶೇಷ ಸಾಧನೆ ಮಾಡಿದ್ದ ದೀಪಾ ಕರ್ಮಕರ್ ಅವರಿಗೆ 2016ರ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಭಾರತ ಸರ್ಕಾರ ಗೌರವಿಸಿತ್ತು.

    ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದೀಪಾ ಕರ್ಮಾಕರ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

    https://twitter.com/TheBridge_IN/status/1015946961206239232

  • ಜೂನ್ ತಿಂಗಳಿನಲ್ಲಿ ಮಾರುತಿ ಕಾರು ಮಾರಾಟ ಹೆಚ್ಚಳ: ಯಾವ ಕಾರು ಎಷ್ಟು ಮಾರಾಟವಾಗಿದೆ?

    ಜೂನ್ ತಿಂಗಳಿನಲ್ಲಿ ಮಾರುತಿ ಕಾರು ಮಾರಾಟ ಹೆಚ್ಚಳ: ಯಾವ ಕಾರು ಎಷ್ಟು ಮಾರಾಟವಾಗಿದೆ?

    ಬೆಂಗಳೂರು: ಉತ್ತಮ ಗುಣಮಟ್ಟ ಹಾಗೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಮೂಲಕ ಮತ್ತೊಮ್ಮೆ ಮಾರುತಿ ಸುಜುಕಿ ಕಾರು ಉತ್ಪಾದನಾ ಸಂಸ್ಥೆಯು ಭಾರತದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ.

    2018ರ ಜೂನ್ ತಿಂಗಳ ಮಾರಾಟದ ವರದಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಒಟ್ಟು 1,44,981 ಕಾರುಗಳನ್ನು ಮಾರಾಟ ಮಾಡಿ 36.3% ರಷ್ಟು ಮಾರಾಟವನ್ನು ಹೆಚ್ಚಿಸಿಕೊಂಡಿದೆ. ತನ್ನ ಇತ್ತೀಚಿನ ವರದಿಯಲ್ಲಿ ರಫ್ತು ಸೇರಿದಂತೆ ಒಟ್ಟು 1,44,981 ಕಾರುಗಳನ್ನು ಮಾರಿದ್ದ ಕಂಪೆನಿಯು 2017ರ ಜೂನ್ ತಿಂಗಳಲ್ಲಿ ಒಟ್ಟು 1,06,394ರಷ್ಟು ಮಾತ್ರ ಮಾರಿತ್ತು.

    ವರದಿಯ ಪ್ರಕಾರ ಭಾರತದಲ್ಲಿ 2017 ಜೂನ್ ತಿಂಗಳಲ್ಲಿ ಒಟ್ಟು 93,263 ಕಾರುಗಳನ್ನು ಮಾರಿತ್ತು. ಆದರೆ ಇದೇ ವರ್ಷ ಜೂನ್ ತಿಂಗಳಲ್ಲಿ 1,35,662 ಮಾರಾಟ ಮಾಡಿದೆ.

    ಆಲ್ಟೋ ಮತ್ತು ವ್ಯಾಗನ್ ಆರ್ ಮಾಡೆಲ್‍ಗಳು 2018ರಲ್ಲಿ 29,381 ಮಾರಾಟವಾಗಿದ್ದರೆ 2017ರಲ್ಲಿ 25,534ರಷ್ಟು ಮಾರಾಟವಾಗಿತ್ತು. ಸ್ವಿಫ್ಟ್, ಎಸ್ಟಿಲೋ, ಡಿಸೈರ್, ಬೆಲೆನೂ ಮಾಡೆಲ್‍ಗಳು 2018ರಲ್ಲಿ 71,570 ಮಾರಾಟವಾಗಿದ್ದರೆ 2017ರಲ್ಲಿ 40,496ರಷ್ಟು ಮಾರಾಟಗೊಂಡಿದ್ದವು.

    ಸೆಡಾನ್ ಕಾರುಗಳು ವಿಭಾಗದಲ್ಲಿ ಸಿಯಾಜ್ ಕಾರ್ 2018ರಲ್ಲಿ 1,579 ಹಾಗೂ 2017ರಲ್ಲಿ 3,950ರಷ್ಟು ಮಾರಾಟಗೊಂಡಿದ್ದವು. ಎರ್ಟಿಗಾ, ಎಸ್-ಕ್ರಾಸ್, ಹಾಗೂ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಕಾರು ವಿಟಾರ ಬ್ರೇಜಾ 2018ರಲ್ಲಿ 19,321 ಹಾಗೂ 2017 ರಲ್ಲಿ 13,879ರಷ್ಟು ಸೇಲ್ ಆಗಿತ್ತು.

    ವ್ಯಾನ್ ಕಾರುಗಳ ವಿಭಾಗದಲ್ಲಿ ಓಮಿನಿ ಹಾಗೂ ಇಕೋ ಮಾಡೆಲ್‍ಗಳು 2018ರಲ್ಲಿ 12,185 ಹಾಗೂ 2017ರಲ್ಲಿ 9,208ರಷ್ಟು ಮಾರಾಟವಾಗಿತ್ತು. 2017ನೇ ಹಾಗೂ 2018ನೇ ಜೂನ್ ತಿಂಗಳ ವರದಿ ಪ್ರಕಾರ ಮಾರುತಿ ಸುಜುಕಿ ಕಂಪನಿಯು ತನ್ನ ಮಾರಾಟವನ್ನು ಶೇ 36.3ರಷ್ಟನ್ನು ಹೆಚ್ಚಿಸಿಕೊಂಡಿದೆ.

    ಮಾರುತಿ ಸುಜುಕಿ ಕಂಪನಿಯು ಕಳೆದ 37 ವರ್ಷಗಳಿಂದ ಜಪಾನ್ ಒಡೆತನದ ಸುಜುಕಿ ಕಂಪೆನಿಯೊಂದಿಗೆ ಸಹಭಾಗಿತ್ವದಲ್ಲಿ ಭಾರತದಲ್ಲಿ ಕಾರುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಭಾವವನ್ನು ಮಾರುತಿ ಸುಜುಕಿ ಸ್ವಲ್ಪ ಕಳೆದುಕೊಂಡಿತ್ತು. ಆದರೆ ಈಗ ತನ್ನ ನೂತನ ಆವೃತ್ತಿಯ ಕಾರುಗಳಿಂದ ಭಾರತದ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿದೆ. ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

  • ಕ್ಸಿಯೋಮಿಯ ಮೊಬೈಲ್ ಹೊರತು ಪಡಿಸಿ ಇತರೆ ಉತ್ಪನ್ನಗಳು ಮಾಹಿತಿ ಇಲ್ಲಿದೆ

    ಕ್ಸಿಯೋಮಿಯ ಮೊಬೈಲ್ ಹೊರತು ಪಡಿಸಿ ಇತರೆ ಉತ್ಪನ್ನಗಳು ಮಾಹಿತಿ ಇಲ್ಲಿದೆ

    ಬೆಂಗಳೂರು: ಕಡಿಮೆ ಅವಧಿಯಲ್ಲಿ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನ ಪಡೆದ ಕ್ಸಿಯೋಮಿ ಕೇವಲ ಸ್ಮಾರ್ಟ್ ಫೋನ್ ಅಲ್ಲದೇ ಇತರೆ ವಿನೂತನ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೀಗಾಗಿ ಇಲ್ಲಿ ಕ್ಸಿಯೋಮಿಯ ಕೆಲ ಉತ್ಪನ್ನಗಳ ಮಾಹಿತಿ ಮತ್ತು ಬೆಲೆಯನ್ನು ನೀಡಲಾಗಿದೆ.

    1. ಕ್ಸಿಯೋಮಿ ತೂಕದ ಯಂತ್ರ: ಸಿಲಿಕಾನ್‍ನಿಂದ ನಿರ್ಮಾಣವಾದ ಇದು, ಧೂಳು ಹಾಗೂ ತುಕ್ಕು ರಹಿತವಾಗಿದೆ. ಬೆಲೆ ರೂ.465.

    2. ಕ್ಸಿಯೋಮಿ ಎಲೆಕ್ಟ್ರಿಕ್ ಟೂತ್‍ಬ್ರಶ್: ಒಂದು ಬಾರಿ ಚಾರ್ಜ್ ಮಾಡಿದರೆ ಸುದೀರ್ಘ 60 ದಿನಗಳವರೆಗಿನ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಮೂರು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಬೆಲೆ ರೂ.1999

    3. ಕ್ಸಿಯೋಮಿ ಟ್ರಾವೆಲ್ ಪಿಲ್ಲೋ: ಪ್ರಯಾಣದ ಸಂದರ್ಭದಲ್ಲಿ ಕುತ್ತಿಗೆಗೆ ಆರಾಮದಾಯಕ ನೀಡುವ ನೂತನ ಮಾದರಿಯ ಟ್ರಾವೆಲ್ ಪಿಲ್ಲೋ ಪರಿಚಯಿಸಿದೆ. ಬೆಲೆ ರೂ. 999

    4. ಕ್ಸಿಯೋಮಿ ಟೀಶರ್ಟ್: ಐ ಲವ್ ಎಂಐ ಹಾಗೂ ಎಂಐ ಎಂಬ ಬರಹವುಳ್ಳ ಪುರುಷ ಹಾಗೂ ಮಹಿಳಾ ಟಿ ಶರ್ಟ್ ಗಳನ್ನು ಕ್ಸಿಯೋಮಿ ಬಿಡುಗಡೆ ಮಾಡಿದೆ. ಇವು ಬಿಳಿ, ಕಪ್ಪು ಹಾಗೂ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಬೆಲೆ ರೂ.599

    5.ಕ್ಸಿಯೋಮಿ ರೋಲರ್ ಬಾಲ್ ಪೆನ್: ಸಿಲ್ವರ್ ಮತ್ತು ಗೋಲ್ಡ್ ಮಾದರಿಯ ಬಣ್ಣಗಳನ್ನು ಹೊಂದಿರುವ ರೋಲರ್ ಬಾಲ್ ಪೆನ್‍ಗಳಾಗಿದ್ದು ಪ್ರತ್ಯೇಕವಾಗಿ ರೀಫಿಲ್ ಖರೀದಿಸಬೇಕು. ಬೆಲೆ ರೂ.179

    6. ಕ್ಸಿಯೋಮಿ ಬ್ಯಾಕ್‍ಪ್ಯಾಕ್: 14″ ಲ್ಯಾಪ್‍ಟಾಪ್ ಹೊಂದುವ ವಾಟರ್ ಪ್ರೂಫ್ ಉತ್ಕೃಷ್ಟ ಬ್ಯಾಕ್‍ಪ್ಯಾಕ್ ಬಿಡುಗಡೆಗೊಳಿಸಿದ್ದು, ಬೆಲೆ ರೂ. 1,599

     

    7.ಕ್ಸಿಯೋಮಿ ರೈಸ್ ಕುಕ್ಕರ್: 3 ಲೀಟರ್ ಸಾಮರ್ಥ್ಯ ಹಾಗೂ ಸುಲಭವಾಗಿ ಸ್ವಚ್ಛಗೊಳಿಸುವ ರೈಸ್ ಕುಕ್ಕರ್ ಆಗಿದ್ದು, ಮೊಬೈಲ್ ಆಪ್ ಮುಖಾಂತರ ರೈಸ್ ತಯಾರಿಸಬಹುದಾಗಿದೆ. ಬೆಲೆ ರೂ. 5,900

    8.ಕ್ಸಿಯೋಮಿ ಸೂಟ್‍ಕೇಸ್: ಸಧೃಡ ನಿರ್ಮಾಣ ಹಾಗೂ ಗಡುಸುತನದಿಂದ ಕೂಡಿದ 29 ಕಿಲೋ ಸಾಮರ್ಥ್ಯದ ಟ್ರಾವೆಲರ್ ಸೂಟ್‍ಕೇಸ್ ಪರಿಚಯಿಸಿದೆ. ಬೆಲೆ ರೂ. 4,400

    9.ಕ್ಸಿಯೋಮಿ ಅಲಾರಂ ಕ್ಲಾಕ್: ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಹಾಗೂ 2600 ಎಂಎಎಚ್ ಬ್ಯಾಟರ್ ಸಾಮರ್ಥ್ಯದ ವಿನೂತನ ಅಲಾರಂ ಕ್ಲಾಕ್. ಬೆಲೆ ರೂ. 2,600

    10.ಕ್ಸಿಯೋಮಿ 4ಕೆ ಡ್ರೋನ್: 4ಕೆ ವಿಡಿಯೋ ರೆಕಾರ್ಡಿಂಗ್ ಜೊತೆಗೆ, 27 ನಿಮಿಷ ಹಾರಾಟ ಸಾಮರ್ಥ್ಯ ಹಾಗೂ ಜಿಪಿಎಸ್, ಮೊಬೈಲ್ ಕನೆಕ್ಟಿವಿಟಿ ಹೊಂದಿರುವ ಡ್ರೋನ್ ಗೆ ರೂ.21,000 ನಿಗದಿ ಮಾಡಿದೆ.

    11. ಕ್ಸಿಯೋಮಿ ಟಿಡಿಎಸ್ ವಾಟರ್ ಮೀಟರ್: ನೀರಿನ ಗುಣಮಟ್ಟವನ್ನು ಅಳೆಯುವ ಟಿಡಿಎಸ್ ಮೀಟರ್ ಅನ್ನು ಅಲ್ಯೂಮಿನಿಯಂ ಬಳಸಿ ತಯಾರಿಸಲಾಗಿದೆ. ಬೆಲೆ ರೂ. 664

    12.ಕ್ಸಿಯೋಮಿ ಎಲೆಕ್ಟ್ರಿಕ್ ಸ್ಕೂಟರ್: ಕಚೇರಿಗಳಲ್ಲಿ ಒಡಾಡಲು ಬಳಸುವ ನೂತನ ಸ್ಕೂಟರ್ ಪರಿಚಯಿಸಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 30 ಕಿ.ಮೀ. ಕ್ರಮಿಸಬಹುದಾಗಿದೆ. ಅಷ್ಟೇ ಅಲ್ಲದೇ ಸ್ಮಾರ್ಟ್ ಆ್ಯಪ್ ವ್ಯವಸ್ಥೆ ಹೊಂದಿದೆ. ಬೆಲೆ ರೂ.24,000(ಅಂದಾಜು)

    13.ಕ್ಸಿಯೋಮಿ ಸ್ಮಾರ್ಟ್ ಡಾಗ್ ಬಟನ್: ನಾಯಿಯ ಆರೋಗ್ಯವನ್ನು ತಿಳಿಯಲಿ ಫಿಟ್‍ನೆಸ್ ಬ್ಯಾಂಡ್ ಅನ್ನು ರೂ. 1,060 ಬೆಲೆಗೆ ಬಿಡುಗಡೆ ಮಾಡಿದೆ.

    14.ಕ್ಸಿಯೋಮಿ ಸ್ಮಾರ್ಟ್ ರೀಯರ್ ವೀವ್ ಮೀರರ್: ಕಾರ್‍ಗಳಲ್ಲಿ ಬಳಸುವ ರಿಯರ್ ವೀವ್ ಮಿರರ್ ನಲ್ಲಿ ಸ್ಮಾರ್ಟ್‍ಫೋನ್‍ಗಳಲ್ಲಿರುವ ತಂತ್ರಜ್ಞಾನವನ್ನು ಬಳಸಿದ್ದು, ಇದು ಮಿರರ್ ಹಾಗೂ ಮಾಹಿತಿಯ ಸಾಧನವಾಗಿಯೂ ಬಳಸಬಹುದಾಗಿದೆ. ಬೆಲೆ ರೂ. 12500 (ಅಂದಾಜು)

    ಕ್ಸಿಯೋಮಿ ವಸ್ತುಗಳು ಎಂಐ ಜಾಲತಾಣ ಹಾಗೂ ಅಮೇಜಾನ್ ಜಾಲತಾಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಸ್ಕೂಟರ್ ಹಾಗೂ ರೀಯರ್ ವೀವ್ ಮಿರರ್ ಸದ್ಯ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.