Tag: income

  • ಸರ್ಕಾರಿ ನೌಕರರಿಗೆ ನೀಡ್ತಿದ್ದ ಬಿಎಂಟಿಸಿ ರಿಯಾಯಿತಿ ಬಸ್ ಪಾಸ್ ರದ್ದು

    ಸರ್ಕಾರಿ ನೌಕರರಿಗೆ ನೀಡ್ತಿದ್ದ ಬಿಎಂಟಿಸಿ ರಿಯಾಯಿತಿ ಬಸ್ ಪಾಸ್ ರದ್ದು

    ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಭಾರೀ ನಷ್ಟಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ರಿಯಾಯಿತಿ ಬಸ್ ಪಾಸ್ ರದ್ದಾಗಿದೆ.

    ಆರ್ಥಿಕ ಹೊರೆಯಿಂದ ಕಂಗಾಲಾಗಿರುವ ಬಿಎಂಟಿಸಿಯಿಂದ ನಷ್ಟ ಕಡಿಮೆ ಮಾಡಲು ರಿಯಾಯಿತಿ ಪಾಸ್ ಅನ್ನು ರದ್ದುಗೊಳಿಸಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿರುವ ಬಿಬಿಎಂಪಿ ಸಾರ್ವಜನಿಕರಿಗೆ ನೀಡುವ ಮಾಸಿಕ ಪಾಸ್ ಗಳನ್ನು ಪಡೆಯುವಂತೆ ನೌಕರರಿಗೆ ಸೂಚಿಸಿದೆ. ಬಿಎಂಟಿಸಿಯಿಂದ ಎಲ್ಲಾ ಸರ್ಕಾರಿ ಇಲಾಖೆಗಳ ಮುಖ್ಯಸ್ಥರಿಗೆ ಈ ಸಂಬಂಧ ಪತ್ರ ರವಾನೆಯಾಗಿದೆ.

    2011-2012 ರಿಂದ 2016-17ರವರೆಗಿನ ಅವಧಿಯಲ್ಲಿ ಬಿಎಂಟಿಸಿಗೆ 608 ಕೋಟಿ ರೂ. ನಷ್ಟವಾಗಿದೆ. ಒಟ್ಟು ಆದಾಯದಲ್ಲಿ 27.27% ಹಣ ಡೀಸೆಲ್ ಖರೀದಿಗೆ ಖರ್ಚಾದರೆ 53% ಹಣ ಸಿಬ್ಬಂದಿ ಸಂಬಳಕ್ಕೆ ಹೋಗುತ್ತದೆ. ಬಿಎಂಟಿಸಿಗೆ ವಿಶೇಷವಾಗಿ ಮೆಟ್ರೋ ಸಂಚರಿಸುವ ಮಾರ್ಗಗಳಲ್ಲಿ ಕಡಿಮೆ ಆದಾಯ ಬರುತ್ತಿದೆ.

  • ಬಿಜೆಪಿ ಆದಾಯ 81.18% ಏರಿಕೆ, ಕಾಂಗ್ರೆಸ್ 14% ಇಳಿಕೆ: ಯಾವ ಪಕ್ಷದ ಆದಾಯ, ಖರ್ಚು ಎಷ್ಟು?

    ಬಿಜೆಪಿ ಆದಾಯ 81.18% ಏರಿಕೆ, ಕಾಂಗ್ರೆಸ್ 14% ಇಳಿಕೆ: ಯಾವ ಪಕ್ಷದ ಆದಾಯ, ಖರ್ಚು ಎಷ್ಟು?

    ನವದೆಹಲಿ: 2015- 16 ಮತ್ತು 2016-17ರ ಹಣಕಾಸು ವರ್ಷದಲ್ಲಿ ಬಿಜೆಪಿಯ ಆದಾಯ 81.18%ರಷ್ಟು ಏರಿಕೆಯಾಗಿದ್ದರೆ ಕಾಂಗ್ರೆಸ್ ಆದಾಯ 14% ಇಳಿಕೆಯಾಗಿದೆ.

    ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್  ಸಂಸ್ಥೆ ರಾಷ್ಟ್ರೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳನ್ನು ಲೆಕ್ಕಾಚಾರ ಮಾಡಿ ಈ ವರದಿಯನ್ನು ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ಬಿಜೆಪಿಯ ಆದಾಯ 1,034.27 ಕೋಟಿ ರೂ. ಇದ್ದರೆ, ಕಾಂಗ್ರೆಸ್ ಆದಾಯ 225.36 ಕೋಟಿ ರೂ. ಇತ್ತು ಎಂದು ವರದಿ ತಿಳಿಸಿದೆ.

    ಬಿಜೆಪಿ, ಕಾಂಗ್ರೆಸ್, ಬಿಎಸ್‍ಪಿ, ಎನ್‍ಸಿಪಿ, ಸಿಪಿಐ(ಎಂ), ಸಿಪಿಐ ಪಕ್ಷಗಳು ಘೋಷಿಸಿರುವ ಒಟ್ಟು ಆದಾಯದ ಮೊತ್ತ 1,559.17 ಕೋಟಿ ರೂ. ಆಗಿದೆ. ಈ ಪಕ್ಷಗಳು ಒಟ್ಟು 1,228.26 ಕೋಟಿ ರೂ. ಖರ್ಚು ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    2016-17 ರ ಹಣಕಾಸು ವರ್ಷದಲ್ಲಿ ಬಿಜೆಪಿ 1,034.27 ಕೋಟಿ ರೂ. ಆದಾಯ ಗಳಿಸಿದ್ದರೆ, 710 ಕೋಟಿ ರೂ. ಖರ್ಚು ಮಾಡಿದೆ. ಕಾಂಗ್ರೆಸ್ ಈ ಅವಧಿಯಲ್ಲಿ 225.36 ಕೋಟಿ ರೂ. ಆದಾಯ ಗಳಿಸಿದ್ದು, 321.66 ಕೋಟಿ ರೂ. ಖರ್ಚು ಮಾಡಿದೆ. ಕಾಂಗ್ರೆಸ್ ಖರ್ಚು ಮಾಡಿದ ಮೊತ್ತ ಅದರ ಆದಾಯಕ್ಕಿಂತಲೂ 96.3 ಕೋಟಿ ರೂ. ಅಧಿಕ ಎಂದು ಹೇಳಿದೆ.  ಇದನ್ನೂ ಓದಿ: ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತ ಸಿಎಂ: ದೇಶದ ಸಿಎಂಗಳ ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

    2015-16 ರಲ್ಲಿ ಬಿಜೆಪಿ ಆದಾಯ 570.86 ಕೋಟಿ ರೂ. ಇದ್ದರೆ ಕಾಂಗ್ರೆಸ್ ಆದಾಯ 261.56 ಕೋಟಿ ರೂ. ಇತ್ತು. 2016-17ರಲ್ಲಿ ಬಿಜೆಪಿ 1,034 ಕೋಟಿ ರೂ.ಗೆ ಏರಿಕೆಯಾಗಿದ್ದರೆ ಕಾಂಗ್ರೆಸ್ ಆದಾಯ 225.36 ಕೋಟಿ ರೂ.ಗೆ ಇಳಿಕೆಯಾಗಿದೆ.

    ಯಾವ ಪಕ್ಷದ ಆದಾಯ ಎಷ್ಟಿದೆ? ಪಾಲು ಎಷ್ಟು?
    ಬಿಜೆಪಿ – 1,034.27 ಕೋಟಿ ರೂ.(66.34%)
    ಕಾಂಗ್ರೆಸ್ – 225.36 ಕೋಟಿ ರೂ.(14.45%)
    ಬಿಎಸ್‍ಪಿ – 173.58 ಕೋಟಿ ರೂ.(11.13%)
    ಸಿಪಿಎಂ – 100.256 ಕೋಟಿ ರೂ.(6.43%)
    ಎನ್‍ಸಿಪಿ – 17.235 ಕೋಟಿ ರೂ.(1.11%)
    ಎಐಟಿಸಿ – 3.39 ಕೋಟಿ ರೂ.(0.41%)
    ಸಿಪಿಐ – 2.079 ಕೋಟಿ ರೂ.(0.13%)

    ಆಯೋಗಕ್ಕೆ ವಿವರ ನೀಡಿದ್ದು ಯಾವಾಗ?
    2017ರ ಅಕ್ಟೋಬರ್ 30 ಕೊನೆಯ ದಿನಾಂಕವಾಗಿದ್ದರೂ, ಬಿಎಸ್‍ಪಿ ಮತ್ತು ಸಿಪಿಎಂ ಅಕ್ಟೋಬರ್ 26 ರಂದು ನೀಡಿದ್ದರೆ, ಎಐಟಿಸಿ ಅಕ್ಟೋಬರ್ 27 ರಂದು ನೀಡಿತ್ತು. ಸಿಪಿಐ ನವೆಂಬರ್ 23ರಂದು ನೀಡಿದ್ದರೆ ಎನ್‍ಸಿಪಿ 2018ರ ಜನವರಿ 19 ರಂದು ನೀಡಿತ್ತು. ಬಿಜೆಪಿ 99 ದಿನಗಳ ನಂತರ ಅಂದರೆ ಫೆಬ್ರವರಿ 8 ರಂದು ನೀಡಿದ್ದರೆ ಕಾಂಗ್ರೆಸ್ 138 ದಿನಗಳ ನಂತರ ಮಾರ್ಚ್ 19 ರಂದು ತನ್ನ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಇದನ್ನೂ ಓದಿ: 4 ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 956.77 ಕೋಟಿ ರೂ. ದೇಣಿಗೆ: ಯಾವ ಪಕ್ಷಕ್ಕೆ ಎಷ್ಟು ಕೋಟಿ ಬಂದಿದೆ? ಕೊಟ್ಟವರು ಯಾರು?

     

  • ಟೆಲಿವಿಷನ್ ಹಕ್ಕುಗಳಿಂದ ಕೋಟಿ ಕೋಟಿ ಗಳಿಸಿದ ಬಿಸಿಸಿಐ: ಒಂದು ಪಂದ್ಯಕ್ಕೆ ಬಿಸಿಸಿಐಗೆ ಎಷ್ಟು ಕೋಟಿ ಸಿಗುತ್ತೆ?

    ಟೆಲಿವಿಷನ್ ಹಕ್ಕುಗಳಿಂದ ಕೋಟಿ ಕೋಟಿ ಗಳಿಸಿದ ಬಿಸಿಸಿಐ: ಒಂದು ಪಂದ್ಯಕ್ಕೆ ಬಿಸಿಸಿಐಗೆ ಎಷ್ಟು ಕೋಟಿ ಸಿಗುತ್ತೆ?

    ನವದೆಹಲಿ: ಸ್ಟಾರ್ ಇಂಡಿಯಾ ಭಾರತದಲ್ಲಿ ಕ್ರಿಕೆಟ್ ನ ನೇರಪ್ರಸಾರ ಹಾಗೂ ಡಿಜಿಟಲ್ ಹಕ್ಕುಗಳಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ಮುಂದಿನ ಐದು ವರ್ಷಗಳ ಅವಧಿ (2018-2023) ಗೆ ಭಾರತದ ಕ್ರಿಕೆಟ್ ನ ನೇರಪ್ರಸಾರ ಹಕ್ಕನ್ನು ದಾಖಲೆಯ 6,138 ಕೋಟಿ ರೂಪಾಯಿಗೆ ಸ್ಟಾರ್ ಇಂಡಿಯಾ ಖರೀದಿಸಿದೆ.

    ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಇ-ಮಾರಾಟದಲ್ಲಿ ಸೋನಿ ಮತ್ತು ರಿಲಯನ್ಸ್ ಜಿಯೋ ಸಂಸ್ಥೆಯನ್ನು ಹಿಂದಿಕ್ಕಿದ ಸ್ಟಾರ್ ಇಂಡಿಯಾ ವಿಶ್ವ ಕ್ರಿಕೆಟ್ ನೇರಪ್ರಸಾರ ಒಪ್ಪಂದವನ್ನು ಪಡೆದಿದೆ. ಈ ಒಪ್ಪಂದವೂ ಏಪ್ರಿಲ್ 2018 ರಿಂದ ಮಾರ್ಚ್ 2023ರ ಅವಧಿಯವರೆಗೂ ಚಾಲ್ತಿಯಲ್ಲಿದೆ. ಇದೇ ಮೊದಲ ಬಾರಿಗೆ ಬಿಸಿಸಿಐ ಮಾಧ್ಯಮ ಹಕ್ಕುಗಳ ಮಾರಾಟವನ್ನು ಇ-ಬಿಡಿಂಗ್ ಮೂಲಕ ನಡೆಸಿತು.

    ಮೂರು ದಿನಗಳ ಅವಧಿಯಲ್ಲಿ ನಡೆದ ಬಿಡ್ ಮಂಗಳವಾರ ಹಾಗೂ ಬುಧವಾರ ಬಿಡ್ ಮೊತ್ತ ಹೆಚ್ಚಳಕ್ಕೆ 1 ಗಂಟೆಯ ಅವಧಿ ನೀಡಲಾಗಿತ್ತು. ಗುರುವಾರ ಈ ಅವಧಿಯನ್ನು 30 ನಿಮಿಷಕ್ಕೆ ಇಳಿಸಲಾಗಿತ್ತು. ಕ್ರಮವಾಗಿ ಮಂಗಳವಾರ ಹಾಗೂ ಬುಧವಾರ ಅಂತ್ಯಕ್ಕೆ 4,442 ಕೋಟಿ ರೂ., 6,032.50 ಕೋಟಿ ರೂ.ಗೆ ಹೆಚ್ಚಳವಾಗಿತ್ತು. ಕೊನೆಯ ದಿನವಾದ ಗುರುವಾರ ಸಣ್ಣ ಪ್ರಮಾಣದಲ್ಲಿ ಬಿಡ್ ಮೊತ್ತ ಏರಿಕೆ ಕಂಡು 6,138 ಕೋಟಿ ರೂ. ಗಳಿಗೆ ಸ್ಟಾರ್ ಸಂಸ್ಥೆ ಹಕ್ಕು ಪಡೆಯಿತು.

    ಬಿಸಿಸಿಐ ಈ ಬಿಡ್ ಮುಕ್ತಾಯದ ನಂತರ ಮೊದಲ ವರ್ಷ ನಡೆಯುವ ಪ್ರತಿ ಪಂದ್ಯಕ್ಕೆ 46 ಕೋಟಿ ರೂ. ಪಡೆಯಲಿದೆ. ಎರಡನೇ ಹಾಗೂ ಮೂರನೇ ವರ್ಷದಲ್ಲಿ ಕ್ರಮವಾಗಿ ಈ ಮೊತ್ತ 47 ಕೋಟಿ ರೂ., 46.50 ಕೋಟಿ ರೂ. ಗೆ ಹೆಚ್ಚಾಗಲಿದೆ. ಒಪ್ಪಂದ ಕೊನೆಯ ವರ್ಷದ ವೇಳೆ ಈ ಮೊತ್ತ ಪ್ರತಿ ಪಂದ್ಯಕ್ಕೆ 78.90 ಕೋಟಿ ರೂ. ಪಡೆಯಲಿದೆ.

    ಕಳೆದೊಂದು ವರ್ಷದಲ್ಲಿ ಬಿಸಿಸಿಐ 25 ಸಾವಿರ ಕೋಟಿಗೂ ಅಧಿಕ ಮೊತ್ತದ ಒಪ್ಪಂದ ಪಡೆದಿದೆ. ಐಪಿಎಲ್ ಶೀರ್ಷಿಕೆ ಒಪ್ಪಂದಕ್ಕೆ (ವಿವೋ ಸಂಸ್ಥೆ)2,199 ಕೋಟಿ ಹಾಗೂ ಟೀಂ ಪ್ರಾಯೋಜಕತ್ವಕ್ಕೆ (ಒಪ್ಪೊ ಮೊಬೈಲ್ ಸಂಸ್ಥೆ)1,079 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಸ್ಟಾರ್ ಸಂಸ್ಥೆ ಐಪಿಎಲ್ ಮಾರಾಟ ಹಕ್ಕುಗಳನ್ನು 2.55 ಶತಕೋಟಿ ಯುಎಸ್ ಡಾಲರ್ (ಸುಮಾರು 16,347 ಕೋಟಿ ರೂ. ಗಳಿಗೆ)ಪಡೆದುಕೊಂಡಿತ್ತು.

     

    ವಿಶ್ವ ಇತರೇ ಲೀಗ್‍ಗಳ ಪ್ರತಿ ಪಂದ್ಯದ ಪ್ರಸಾರದ ಮೊತ್ತ:
    ನ್ಯಾಷನಲ್ ಫುಟ್ ಬಾಲ್ ಲೀಗ್ (ಎನ್‍ಎಫ್‍ಎಲ್)- 22.47 ಮಿಲಿಯನ್ ಯುಎಸ್ ಡಾಲರ್ (ಸುಮಾರು 146 ಕೋಟಿ ರೂ.)
    ಇಂಡಿಯನ್ ಕ್ರಿಕೆಟ್ – 9.26 ಮಿಲಿಯನ್ ಯುಎಸ್ ಡಾಲರ್ (ಸುಮಾರು 60.18 ಕೋಟಿ ರೂ.)
    ಪ್ರೀಮಿಯರ್ ಲೀಗ್ – 13.15 ಮಿಲಿಯನ್ ಯುಎಸ್ ಡಾಲರ್ (ಸುಮಾರು 85.44 ಕೋಟಿ ರೂ.)
    ಐಪಿಎಲ್-8.47 ಮಿಲಿಯನ್ ಯುಎಸ್ ಡಾಲರ್ (ಸುಮಾರು 55.03 ಕೋಟಿ)
    ನ್ಯಾಷನಲ್ ಬ್ಯಾಸ್‍ಕೆಟ್ ಬಾಲ್ ಲೀಗ್ (ಎನ್‍ಬಿಎ) – 1.99 ಮಿಲಿಯನ್ ಯುಎಸ್ ಡಾಲರ್ (ಸುಮಾರು 12.34 ಕೋಟಿ ರೂ.)
    ಮೇಜರ್ ಲೀಗ್ ಬೆಸ್ ಬಾಲ್ (ಎಂಎಲ್‍ಬಿ)- 0.63 ಮಿಲಿಯನ್ ಯುಎಸ್ ಡಾಲರ್ (ಸುಮಾರು 4.09 ಕೋಟಿ ರೂ.)

    ಬಿಸಿಸಿಐ ಆದಾಯ ವರ್ಷಗಳಲ್ಲಿ:
    2012-18: 125 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 8,123 ಕೋಟಿ ರೂ.)
    2018-23: 189 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 1,228 ಕೋಟಿ ರೂ.)
    ಐಪಿಎಲ್ 2018-22: 508 ಮಿಲಿಯನ್ ಡಾಲರ್ (ಸುಮಾರು 33,007 ಕೋಟಿ ರೂ.)

    ಬಿಸಿಸಿಐ ಆದಾಯ ಪ್ರತಿ ಪಂದ್ಯಕ್ಕೆ:
    2012-18: 6.17 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 40,08 ಕೋಟಿ ರೂ.)
    2018-23: 9.26 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 60.16 ಕೋಟಿ ರೂ.)
    ಐಪಿಎಲ್ 2018-22: 8.47 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 55.03 ಕೋಟಿ ರೂ.)

    ಕ್ರಿಕೆಟ್ ಟಾಪ್ ಪ್ರಸಾರ ಒಪ್ಪಂದಗಳು
    ಐಪಿಎಲ್ 2018-22: 508 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 33,012 ಕೋಟಿ ರೂ.)
    ಇಂಗ್ಲೆಂಡ್ ಕ್ರಿಕೆಟ್ 2020-24: 287 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 18,650 ಕೋಟಿ ರೂ.)
    ಇಂಡಿಯನ್ ಕ್ರಿಕೆಟ್ 2018-23: 189 ಮಿಲಿಯನ್‍ಅಮೆರಿಕನ್ ಡಾಲರ್ (ಸುಮಾರು 12,281 ಕೋಟಿ ರೂ.)
    ಆಸ್ಟ್ರೇಲಿಯಾ ಕ್ರಿಕೆಟ್ 2013-18: 100 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 6,498 ಕೋಟಿ ರೂ.)

  • ಬಗೆ ಹರಿಯಿತು ಸುವರ್ಣ ರಥ ಆದಾಯ ಹಂಚಿಕೆ ಗೊಂದಲ

    ಬಗೆ ಹರಿಯಿತು ಸುವರ್ಣ ರಥ ಆದಾಯ ಹಂಚಿಕೆ ಗೊಂದಲ

    ಬೆಂಗಳೂರು: ಸುವರ್ಣ ರಥ(ಗೋಲ್ಡನ್ ಚಾರಿಯಟ್) ಆದಾಯ ಹಂಚಿಕೆಗೆ ಸಂಬಂಧಿಸಿದಂತೆ, ಕೇಂದ್ರ ರೈಲ್ವೇ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‍ಟಿಡಿಸಿ)ನಡುವೆ ಇದ್ದ ಗೊಂದಲ ಬಗೆಹರಿದಿದೆ.

    ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೆಶಕರ ಮಾತುಕತೆ ಫಲವಾಗಿ ಇನ್ನು ಮುಂದೆ ಸುವರ್ಣ ರಥದ ಆದಾಯ ರೈಲ್ವೆ ಮಂಡಳಿಗೆ 56%, ಹಾಗೂ ಕೆಎಸ್‍ಟಿಡಿಗೆ 44% ರಷ್ಟು ಸಂದಾಯವಾಗಲಿದೆ. ಈ ಮಾತುಕತೆಯ ಫಲವಾಗಿ ವರ್ಷಕ್ಕೆ 10 ಬಾರಿ ಪ್ರವಾಸ ಕೈಗೊಳ್ಳುತ್ತಿದ್ದ ಗೋಲ್ಡನ್ ಚಾರಿಯಟ್, ಮುಂದಿನ ದಿನಗಳಲ್ಲಿ ಕನಿಷ್ಠ 20 ಬಾರಿ ಪ್ರಯಾಣಕ್ಕೆ ಅಣಿಯಾಗಬಹುದು ಅಂತ ಅಂದಾಜಿಸಲಾಗಿದೆ.

    ಪ್ರಸ್ತುತ ಒಂದು ವಾರದ ಪ್ರಯಾಣ ಪ್ಯಾಕೇಜ್ ಹೊಂದಿರುವ ಗೋಲ್ಡನ್ ಚಾರಿಯಟ್, ಭವಿಷ್ಯದಲ್ಲಿ 2-3 ದಿನಗಳ ಪ್ರಯಾಣದ ವೇಳಾಪಟ್ಟಿ ಸಿದ್ಧಪಡಿಸಲು ಆಲೋಚಿಸಿದೆ. ಸ್ಥಳೀಯ ಪ್ರವಾಸಿಗರನ್ನು ಹಂಪಿ, ಬಾದಾಮಿ, ಮೈಸೂರು ಮಾರ್ಗಗಳಲ್ಲಿ ಕರೆದೊಯ್ಯಲು ಉದ್ದೇಶಿಸಿದೆ.

  • ತಿಂಗಳಿಗೆ 30 ಸಾವಿರ ದುಡಿದು 3 ಹೆಂಡ್ತಿಯರನ್ನು ಸಾಕುತ್ತಿರುವ ಭಿಕ್ಷುಕ!

    ತಿಂಗಳಿಗೆ 30 ಸಾವಿರ ದುಡಿದು 3 ಹೆಂಡ್ತಿಯರನ್ನು ಸಾಕುತ್ತಿರುವ ಭಿಕ್ಷುಕ!

    ರಾಂಚಿ: ತಿಂಗಳಿಗೆ 30 ಸಾವಿರ ರೂ ಸಂಪಾದಿಸಿ 3 ಹೆಂಡತಿಯರನ್ನು ಸಾಕುತ್ತಿರುವ ಭಿಕ್ಷುಕವೊಬ್ಬ ಜಾರ್ಖಂಡ್ ನ ರಾಂಚಿಯಲ್ಲಿ ಪತ್ತೆಯಾಗಿದ್ದಾನೆ.

    ಜಾರ್ಖಂಡ್‍ನ ರಾಂಚಿಯನ್ನು ತನ್ನ ‘ರಾಜಧಾನಿ’ ಮಾಡಿಕೊಂಡಿರುವ ಚೋಟು ಬೈರಕ್ (40) ಎಂಬ ಹೆಸರಿನ ಈ ‘ಕುಬೇರ ಭಿಕ್ಷುಕ’ನದು ವೈಭವೋಪೇತ ಬದುಕು. ಹೆಸರಿಗೆ ಮಾತ್ರ ಈತ ಚೋಟು ಆದರೆ ಸಂಪಾದನೆಯಲ್ಲಿ ಮಾತ್ರ ಮೋಟು ಆಗಿದ್ದಾನೆ.

    ಜಾರ್ಖಂಡ್‍ನ ಚಕ್ರಧರ್‍ಪುರ್ ರೈಲ್ವೆ ನಿಲ್ದಾಣವೇ ಈತನ ಭಿಕ್ಷಾಟನೆಯ ಅಡ್ಡವಾಗಿದ್ದು, ಜೊತೆಗೆ ಮೂವರು ಪತ್ನಿಯರನ್ನು ರಾಣಿಯರಂತೆ ಸಾಕುತ್ತಿದ್ದಾನೆ. ಕಡು ಬಡ ಕುಟುಂಬದಲ್ಲಿ ಜನಿಸಿದ್ದ ಈತನಿಗೆ ಹುಟ್ಟಿನಿಂದಲೇ ಸೊಂಟದಲ್ಲಿ ಬಲವಿರಲಿಲ್ಲ. ಆದ್ದರಿಂದ ಚಿಕ್ಕಂದಿನಿಂದಲೇ ಭಿಕ್ಷೆ ಬೇಡುವ ಕಾಯಕಕ್ಕಿಳಿದಿದ್ದಾನೆ. ಆರಂಭದಲ್ಲಿ ತಿಂಗಳಿಗೆ 1 ಸಾವಿರ ರೂ. ಸಂಪಾದಿಸುತ್ತಿದ್ದ ಚೋಟು, ಈಗ ವರ್ಷಕ್ಕೆ ಕನಿಷ್ಠ 4 ಲಕ್ಷ ರೂ. ಆದಾಯಗಳಿಸುವ ಮಟ್ಟಕ್ಕೆ ಬೆಳೆದಿದ್ದಾನೆ.

    ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಇದೀಗ ಪಾತ್ರೆ ಅಂಗಡಿಯೊಂದನ್ನು ಬೇರೆ ತೆರೆದಿದ್ದಾನೆ. ಇನ್ನೊಂದು ವಿಶೇಷ ಸಂಗತಿ ಏನಪ್ಪಾ ಅಂದರೆ ಭಿಕ್ಷಾಟನೆ ಮತ್ತು ಪಾತ್ರೆ ಅಂಗಡಿ ‘ಬಿಸಿನೆಸ್’ ಜೊತೆ ಚೋಟು ಮಹಾಶಯ ವೆಸ್ಟಿಗ್ ಎಂಬ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಕೂಡ ಮಾಡುತ್ತಾನೆ. ಕಂಪನಿ ಈತನಿಗೆ ಐಡಿ ಕಾರ್ಡ್ ಕೂಡ ನೀಡಿದೆಯಂತೆ.

    ಚೋಟುಗೆ ಮೂವರು ಹೆಂಡತಿಯರಿದ್ದು, ಮೂವರಿಗೂ ಇಷ್ಟು ಹಣ ಎಂದು ಅವರಿಗೆ ನೀಡುತ್ತಾನೆ. ಮೊದಲ ಹೆಂಡತಿ ಪಾತ್ರೆ ಅಂಗಡಿಯಲ್ಲಿ ನೋಡಿಕೊಂಡರೆ, ಇನ್ನಿಬ್ಬರು ಹೆಂಡತಿಯರು ಚಿಕ್ಕಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.

  • ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರ್ತಿರಾ: ಅರುಣ್ ಜೇಟ್ಲಿ ಹೇಳಿದ್ದು  ಹೀಗೆ

    ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರ್ತಿರಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ನವದೆಹಲಿ: ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು ಎನ್ನುವ ಪ್ರಸ್ತಾಪಕ್ಕೆ ಪೂರ್ಣ ವಿರಾಮ ಬಿದ್ದಿದ್ದು, ಸರ್ಕಾರದ ಬಳಿ ಕೃಷಿಗೆ ತೆರಿಗೆ ವಿಧಿಸುವ ಯಾವುದೇ ಯೋಜನೆಗಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

    ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಕೃಷಿಗೆ ತೆರಿಗೆ ವಿಧಿಸುವ ಪ್ರಸ್ತಾಪ ಸರ್ಕಾರದಲ್ಲಿ ಇಲ್ಲ. ಕೃಷಿ ವಲಯ ಈಗ ಸಂಕಷ್ಟದಲ್ಲಿದೆ. ಹೀಗಾಗಿ ತೆರಿಗೆ ವಿಧಿಸಬೇಕೇ ಎನ್ನುವ ಬಗ್ಗೆ ಯಾವುದೇ ಪ್ರಶ್ನೆಯೇ ಉದ್ಭಸುವುದಿಲ್ಲ ಎಂದು ಹೇಳಿದರು.

    ಈಗಾಗಲೇ ನಾನು ಈ ವಿಚಾರದ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಶ್ರೀಮಂತ ರೈತರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ನಾವು ಈಗ ಕೃಷಿಯನ್ನು ಬೆಂಬಲಿಸಬೇಕು. ರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಅಷ್ಟೇ ಅಲ್ಲದೇ ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ರಾಜ್ಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರ ಇದೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಯಾವೊಂದು ಸರ್ಕಾರ ಈ ನಿರ್ಧಾರವನ್ನು ಕೈಗೊಳ್ಳಲಾರದು ಎಂದು ತಿಳಿಸಿದರು.

    ಚರ್ಚೆಗೆ ಕಾರಣ ಏನು?
    ನೀತಿ ಆಯೋಗದ ಸದಸ್ಯ ವಿವೇಕ್ ದೇಬ್‍ರಾಯ್ ಈ ಹಿಂದೆ, ಕೃಷಿ ಆದಾಯಕ್ಕೆ ವಿನಾಯಿತಿ ಇರುವುದರಿಂದ ತೆರಿಗೆ ಕಳ್ಳರು ದುರುಪಯೋಗ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಒಂದು ಮಿತಿಯ ಬಳಿಕ ಕೃಷಿಯಿಂದ ಬರುವ ಆದಾಯವನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ಅಷ್ಟೇ ಅಲ್ಲದೇ ವೈಯಕ್ತಿಕ ಆದಾಯ ತೆರಿಗೆಯಲ್ಲಿರುವ ಎಲ್ಲ ವಿನಾಯಿತಿಗಳನ್ನೂ ತೆಗೆದು ಹಾಕಬೇಕೆಂದು ಹೇಳಿದ್ದರು. ಇವರ ಹೇಳಿಕೆಯಿಂದಾಗಿ ಸರ್ಕಾರ ಕೃಷಿಗೆ ತೆರಿಗೆ ವಿಧಿಸುತ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು.