Tag: inauguration

  • ನಾವೇ ದುಡ್ಡು ಹಾಕಿ ನೀರು ತರ್ತೀವಿ- ಮಹದಾಯಿಗಾಗಿ ಸ್ಥಾಪನೆಯಾಯ್ತು ಜನಸಾಮಾನ್ಯರ ಪಕ್ಷ

    ನಾವೇ ದುಡ್ಡು ಹಾಕಿ ನೀರು ತರ್ತೀವಿ- ಮಹದಾಯಿಗಾಗಿ ಸ್ಥಾಪನೆಯಾಯ್ತು ಜನಸಾಮಾನ್ಯರ ಪಕ್ಷ

    ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಜನ ಸಾಮಾನ್ಯರ ಮಧ್ಯದಲ್ಲಿಯೇ ನೂತನ ಜನ ಸಾಮಾನ್ಯರ ಪಕ್ಷಕ್ಕೆ ಚಾಲನೆ ನೀಡಲಾಯಿತು. ಡಾ. ಅಯ್ಯಪ್ಪ ನೇತೃತ್ವದಲ್ಲಿ ಮುನ್ನಡೆಯುತ್ತಿರೋ ಪಕ್ಷಕ್ಕೆ ರೈತ ಮಹಿಳೆ ನಿಂಬೆವ್ವ ದೊರೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

    ಜನ ಸಾಮಾನ್ಯರ ಪಕ್ಷವನ್ನ ಬೆಂಬಲಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಸಮಾರಂಭದಲ್ಲಿ ಹಿರಿಯ ಸಾಹಿತಿ ಚಂಪಾ, ಮಹಾದಾಯಿ ಹೋರಾಟಗಾರ ವಿಜಯ್ ಕುಲಕರ್ಣಿ ಸೇರಿದಂತೆ ಮಹದಾಯಿ ಹೋರಾಟಗಾರರು ಹಾಗೂ ಬಹುತೇಕ ರೈತಪರ ಸಂಘಟನೆಗಳು ಪಕ್ಷ ಸ್ಥಾಪನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಹದಾಯಿ ಹೋರಾಟಗಾರ ವಿಜಯ್ ಕುಲಕರ್ಣಿ ಅವರು, ರೈತರಿಗಾಗಿ, ಮಹದಾಯಿಗಾಗಿ ಯಾರು ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೋ ಆ ಪಕ್ಷಕ್ಕೆ ನನ್ನನ್ನು ನಾನು ಅರ್ಪಿಸಿಕೊಳ್ಳುತ್ತೇನೆ. ಸರ್ಕಾರದ ದುಡ್ಡಿನ ಸಹಾಯವಿಲ್ಲದೇ ರೈತರೇ ದುಡ್ಡು ಹಾಕಿ ಕಾಲುವೆ ನಿರ್ಮಿಸಿ ರಾಜ್ಯಕ್ಕೆ ನೀರು ತರುತ್ತೇವೆ. ನಮ್ಮ ಹೋರಾಟಕ್ಕೆ ಆರ್ಥಿಕ ಸಹಾಯ ಮಾಡಲು ನೂತನ ಜನ ಸಾಮಾನ್ಯರ ಪಕ್ಷ ಮುಂದೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಪ್ರಮುಖ ಪಕ್ಷಗಳಿಗೆ ಎಚ್ಚರಿಕೆ ನೀಡುತ್ತೇನೆ ಎಂದರು.

    ಜನ ಸಾಮಾನ್ಯ ಪಕ್ಷದ ಅಧ್ಯಕ್ಷ ಡಾ. ಅಯ್ಯಪ್ಪ ಅವರು ಮಾತನಾಡಿ, ದಿನಕ್ಕೆ ಐದು ತರಹ ಡ್ರೆಸ್ ಹಾಕುವ ಪ್ರಧಾನಿ ರೈತರ ಕೈ ಹಿಡಿಯುವುದಿಲ್ಲ. ಪ್ರಧಾನಿ ಮೋದಿ ಭಾಷಣ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಬರೀ ಯುದ್ಧದ ಬಗ್ಗೆ ಮಾತನಾಡುತ್ತಾರೆ. ನಿಮಗೆ ಅನ್ನ ಬೇಕಾ, ಯುದ್ಧ ಬೇಕಾ ಎಂದು ಜನರಿಗೆ ಪ್ರಶ್ನಿಸಿದರು.

    ಈ ವೇಳೆ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನ ಸಾಮಾನ್ಯರ ಪಕ್ಷದಿಂದ 20 ಕೋಟಿ ರೂ. ಖರ್ಚು ಮಾಡಲು ಸಿದ್ಧರಿದ್ದು, ಶ್ರಮದಾನದ ಮೂಲಕ ಕೆಲಸ ಮಾಡುತ್ತೇವೆ. ಕಳಸಾ ಬಂಡೂರಿ ನಾಲಾ ಕಾಮಗಾರಿಗೆ ಅನುಮತಿ ಕೊಡಿ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣ ಮಾಡಿ ಮುಗಿಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಎಸೆದರು.

    ಆರ್ ಎಸ್‍ಎಸ್ ಒಂದು ನಿರುದ್ಯೋಗಿಗಳ ಸಂಘ. ಪ್ರಧಾನಿ ಮೋದಿ ನಿರುದ್ಯೋಗಿಗಳ ಸಂಘದ ಸದಸ್ಯ. ಪ್ರಧಾನಿ ಮೋದಿ ಅವರು ಬರೀ ಯಾವ ರೀತಿ ಭಾಷಣ ಮಾಡಬೇಕು ಎಂದು ಯೋಚಿಸುತ್ತಾರೆ. ಈ ಮೂಲಕ ಭಾಷಣ ಮಾಡಿ ಜನರ ದಿಕ್ಕು ತಪ್ಪಿಸುತ್ತಾರೆ. ರಾಜ್ಯ ಮತ್ತು ಕೇಂದ್ರ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿವೆ. ಶೀಘ್ರದಲ್ಲೇ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

     

  • ಇನ್ನು ಮುಂದೆ ಬೆಂಗಳೂರಿನಿಂದ ಶಿರಡಿಗೆ ಕೆಲವೇ ಗಂಟೆಗಳಲ್ಲಿ ಕ್ರಮಿಸಬಹುದು!

    ಇನ್ನು ಮುಂದೆ ಬೆಂಗಳೂರಿನಿಂದ ಶಿರಡಿಗೆ ಕೆಲವೇ ಗಂಟೆಗಳಲ್ಲಿ ಕ್ರಮಿಸಬಹುದು!

    ಅಹಮದ್‍ನಗರ: ಬೆಂಗಳೂರಿನಿಂದ ಶಿರಡಿಗೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್. ಇನ್ನು ಮುಂದೆ ನೀವು ಕಡಿಮೆ ಅವಧಿಯಲ್ಲಿ ಬಾಬಾ ದರ್ಶನ ಪಡೆಯಬಹುದು.

    ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಇಂದು ನೂತನವಾಗಿ ನಿರ್ಮಾಣಗೊಂಡಿದ್ದ ಶಿರಡಿ ವಿಮಾನ ನಿಲ್ದಾಣವನ್ನು ನಗರದಲ್ಲಿ ಉದ್ಘಾಟಿಸಿದ್ದಾರೆ. ಉದ್ಘಾಟನೆಯ ಬಳಿಕ ಅಲಯನ್ಸ್ ಏರ್ ವಿಮಾನದಲ್ಲಿ ಪ್ರಥಮ ಬಾರಿಗೆ ಶಿರಡಿಯಿಂದ ಮುಂಬೈಗೆ ಹಾರಾಟ ಮಾಡಿದ್ದಾರೆ.

    ಶ್ರೀ ಸಾಯಿಬಾಬಾ ಸಮಾಧಿಯ ಶತಮಾನೋತ್ಸವದ ಆಚರಣೆಯ ಕಾರ್ಯಕ್ರಮವು ಆರಂಭವಾಗಲಿದ್ದು, ಈ ಆಚರಣೆಗೆ ವಿಶ್ವದಾದ್ಯಂತ ಸುಮಾರು 71.81 ಕೋಟಿ (11 ಮಿಲಿಯನ್) ಭಕ್ತರು ಶಿರಡಿಗೆ ಆಗಮಿಸುತ್ತಾರೆ. ಆದ್ದರಿಂದ ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ಧಿ (ಎಂಎಡಿಸಿ) ಅಭಿವೃದ್ಧಿ ಪಡಿಸಿದ ವಿಮಾನ ನಿಲ್ದಾಣವನ್ನು ಇಂದು ಉದ್ಘಾಟನೆಯಾಗಿದೆ.

    ಪಶ್ಚಿಮ ಮಹಾರಾಷ್ಟದ ಸಣ್ಣ ಪಟ್ಟಣವು 20 ನೇ ಶತಮಾನದಲ್ಲಿ ಸಂತ ಸಾಯಿಬಾಬಾರ ಸಮಾಧಿ ಸ್ಥಳವಾಗಿ ವಿಶ್ವಪ್ರಸಿದ್ಧಿ ಪಡೆದಿತ್ತು. ಇಂದು ಎಲ್ಲಾ ಸಮುದಾಯಗಳ ಜನರು ಬಾಬಾ ಅವರನ್ನು ಪೂಜಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಿರಡಿಗೆ ಆಗಮಿಸುತ್ತಿದ್ದಾರೆ.

    ಮುಂಬೈನಿಂದ ಶಿರಡಿಗೆ ಸುಮಾರು 240 ಕಿ.ಮೀ ದೂರವಿದ್ದು ರಸ್ತೆ ಮಾರ್ಗದಲ್ಲಿ ಆರು ಗಂಟೆಗಳ ಕಾಲ ಭಕ್ತರು ಪ್ರಯಾಣಿಸಬೇಕಿತ್ತು. ಆದರೆ ಈ ಹೊಸ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷದಲ್ಲಿ ಮುಂಬೈನಿಂದ ಶಿರಡಿಗೆ ಪ್ರಯಾಣಿಸಬಹುದು.

    ಈ ಉದ್ಘಾಟನಾ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಸಿ.ವಿ. ರಾವ್, ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಪ್ರತಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್, ಎಂಎಡಿಸಿ ಉಪಾಧ್ಯಾಕ್ಷ , ಎಂಡಿ ಸುರೇಶ್ ಕಕಾನಿ ಹಾಗೂ ಕೇಂದ್ರ ಮತ್ತು ರಾಜ್ಯದ ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಬೆಂಗಳೂರಿನಿಂದ ಖಾಸಗಿ ಸಂಸ್ಥೆ ಇಂಡಿಗೋ ಶಿರಡಿಗೆ ವಿಮಾನಯಾನ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ.

  • ರಾಜ್ಯದ ಎಲ್ಲಾ ರೈತರಿಗೂ ಎ ಗ್ರೇಡ್ ಬಿತ್ತನೆ ಬೀಜ ನೀಡಲು ಸರ್ಕಾರ ನಿರ್ಧಾರ

    ರಾಜ್ಯದ ಎಲ್ಲಾ ರೈತರಿಗೂ ಎ ಗ್ರೇಡ್ ಬಿತ್ತನೆ ಬೀಜ ನೀಡಲು ಸರ್ಕಾರ ನಿರ್ಧಾರ

    ಬೆಂಗಳೂರು: ರಾಜ್ಯದ ಎಲ್ಲಾ ರೈತರಿಗೂ ಎ ಗ್ರೇಡ್ ಬಿತ್ತನೆ ಬೀಜ ನೀಡುವುದಾಗಿ ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

    ಹೆಬ್ಬಾಳ, ಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ನಿರ್ಮಿಸಿರುವ ಬೀಜ ಭವನದಲ್ಲಿ ಮಾರಾಟ ಭವನ ಕಟ್ಟಡ ಉದ್ಘಾಟನೆ ವೇಳೆಯಲ್ಲಿ ಮಾತನಾಡಿದ ಕೃಷಿ ಸಚಿವ ಕೃಷ್ಣಭೈರೇಗೌಡ ರಾಜ್ಯದ ಎಲ್ಲಾ ರೈತರಿಗೂ ಎ ಗ್ರೇಡ್ ಬಿತ್ತನೆ ಬೀಜ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.

    ರೈತರಿಗೆ ನಮ್ಮ ಸರ್ಕಾರ ಬಂದ ಮೇಲೆ ಅಗತ್ಯ ಬಿತ್ತನೆ ಬೀಜಗಳನ್ನ ನೀಡಿದ್ದೇವೆ. ಹಿಂದಿನ ಸರ್ಕಾರಗಳು ಸಮರ್ಪಕವಾಗಿ ಬಿತ್ತನೆ ಬೀಜ ನೀಡದೇ ಗಲಾಟೆಗಳಾಗಿ ರೈತರು ಸತ್ತಿದ್ದಾರೆ. ಆದರೆ ನಮ್ಮ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆದಿಲ್ಲ. ರೈತರಿಗೆ ಮುಂದಿನ 3 ವರ್ಷಗಳ ಕಾಲ ಉತ್ತಮ ಬಿತ್ತನೆ ಬೀಜ ನೀಡಲು ಸರ್ಕಾರ ನಿರ್ಧಾರ ಮಾಡಿಕೊಂಡಿದೆ. ಇನ್ಮುಂದೆ ರೈತರಿಗೆ ಈ ವರ್ಷದಿಂದಲೇ ಎ ದರ್ಜೆಯ ಬೀಜ ಮಾತ್ರ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಎರಡನೇ ದರ್ಜೆಯ ಬೀಜ ರೈತರಿಗೆ ನೀಡದಿರಲು ಸೂಚನೆಯನ್ನು ನೀಡಲಾಗಿದೆ.

    ಬೀಜ ಕಂಪನಿಗಳು, ಬೀಜ ನಿಗಮ ವಿಶ್ವವಿದ್ಯಾಲಯಗಳು ಜೊತೆ ಮಾತುಕತೆಯಾಗಿದೆ. ಎ ದರ್ಜೆ ಬಿತ್ತನೆ ಬೀಜ ನೀಡಲು ನಿಯಮ ರೂಪಿಸಿದ ಮೊದಲ ಸರ್ಕಾರ ನಮ್ಮದು ಎಂದು ಕೃಷ್ಣಭೈರೇಗೌಡರು ಹೇಳಿಕೆ ನೀಡಿದರು.

    ಪುಷ್ಪೋದ್ಯಮದಲ್ಲಿ ನಮ್ಮ ರಾಜ್ಯ ಅತ್ಯಂತ ಮುಂಚೂಣಿಯಲ್ಲಿದೆ. 2000 ರಿಂದ ಇಲ್ಲಿಯವರೆಗೂ ನಿತ್ಯ ಪುಷ್ಪ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಭಾರತದಲ್ಲೇ ಮೊದಲ ಪುಷ್ಪ ಹರಾಜು ಕೇಂದ್ರ ನಮ್ಮದು. ಏಷ್ಯಾದಲ್ಲಿ ಜಪಾನ್ ಬಿಟ್ಟರೆ ಎರಡನೇ ಸ್ಥಾನ, ನಮ್ಮ ಪುಷ್ಪ ಹರಾಜು ಕೇಂದ್ರ. ಪುಷ್ಪ ವಾಣಿಜ್ಯ ಉದ್ಯಮವನ್ನ ಉನ್ನತೀಕರಿಸಲು ಪುಷ್ಪ ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ ಎಂದರು.

    ದೇಶದಲ್ಲೇ ಅತಿ ಹೆಚ್ಚು ಪುಷ್ಪ ಬೆಳೆಯುವ ರಾಜ್ಯ ಕರ್ನಾಟಕ. ಪುಷ್ಪೋದ್ಯಮ ಕ್ಷೇತ್ರದಲ್ಲಿ ದೇಶಕ್ಕೆ ಕರ್ನಾಟಕ ನಂಬರ್ ಒನ್. 2006-07 ರಿಂದ ಹಾಲೆಂಡ್ ಮಾದರಿಯಲ್ಲಿ ಹರಾಜು ಪ್ರಕ್ರಿಯೆ ನಡೆಸುತ್ತಿದ್ದೇವೆ. ಜನವರಿಯಿಂದ ಎಪಿಎಂಸಿಗಳಂತೆ ಪುಷ್ಪ ಹರಾಜಿಗೆ ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆಂದು ಕೃಷ್ಣಭೈರೇಗೌಡ ತಿಳಿಸಿದರು.

    ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ವತಿಯಿಂದ ಅತ್ಯಾಧುನಿಕ 7 ಅಂತಸ್ತಿನ ಬೀಜ ಭವನ ನೂತನ ಕಟ್ಟಡವನ್ನು ಒಂದು ಎಕರೆ ಜಾಗದಲ್ಲಿ, 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ಉದ್ಘಾಟಿಸಿದರು.

  • ವಿಧಾನಸೌಧ ಉದ್ಘಾಟನೆಯಾಗಿದ್ದು ಯಾವಾಗ?- ಸರ್ಕಾರಕ್ಕೇ ಗೊತ್ತಿಲ್ಲ ಮಾಹಿತಿ

    ವಿಧಾನಸೌಧ ಉದ್ಘಾಟನೆಯಾಗಿದ್ದು ಯಾವಾಗ?- ಸರ್ಕಾರಕ್ಕೇ ಗೊತ್ತಿಲ್ಲ ಮಾಹಿತಿ

    ಬೆಂಗಳೂರು: ರಾಜ್ಯದ ಶಕ್ತಿಸೌಧ ಉದ್ಘಾಟನೆಯಾಗಿದ್ದು ಯಾವಾಗ ನಿಮಗೆ ಗೊತ್ತಾ? ನಿಮಗೆ ಅಲ್ಲ, ಘನ ಸರ್ಕಾರಕ್ಕೂ ಈ ಬಗ್ಗೆ ಗೊತ್ತಿಲ್ಲ. ಹೀಗಂತ ನಾವ್ ಹೇಳ್ತಿಲ್ಲ. ಸ್ವತಃ ಸರ್ಕಾರವೇ ನಮ್ಮ ಬಳಿ ಮಾಹಿತಿ ಇಲ್ಲ ಅಂತಿದೆ.

    ಆಶ್ಚರ್ಯ ಎನ್ನಿಸಿದ್ರೂ ನೀವು ನಂಬಲೇಬೇಕು. ಕೆಂಗಲ್ ಹನುಮಂತ್ಯನವರು ಕಟ್ಟಿಸಿದ್ದ ವಿಧಾನಸೌಧ ಯಾವಾಗ ಉದ್ಘಾಟನೆ ಆಗಿದ್ದು? ಉದ್ಘಾಟನೆ ಮಾಡಿದ್ದು ಯಾರು ಅನ್ನೋ ಮಹತ್ವದ ಮಾಹಿತಿನೇ ಸರ್ಕಾರದ ಬಳಿ ಇಲ್ಲ. ಮೊನ್ನೆಯಷ್ಟೆ ಮುಗಿದ ಅಧಿವೇಶನದಲ್ಲಿ ವಿಧಾನಸೌಧದ ಶಂಕುಸ್ಥಾಪನೆಯಾಗಿದ್ದು ಯಾವಾಗ? ಉದ್ಘಾಟನೆಯಾದದ್ದು ಯಾವಾಗ? ಯಾರು ಉದ್ಘಾಟನೆ ಮಾಡಿದ್ದು ಎಂಬ ಬಗ್ಗೆ ಮಾಹಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ರು.

    ಇದಕ್ಕೆ ಉತ್ತರ ನೀಡಿರುವ ಲೋಕೋಪಯೋಗಿ ಇಲಾಖೆ, 1951 ಜುಲೈ 13 ರಂದು ಅಂದಿನ ಪ್ರಧಾನಿಗಳಾದ ಪಂಡಿತ್ ಜವಹಾರ್ ಲಾಲ್ ನೆಹರು ವಿಧಾನಸೌಧಕ್ಕೆ ಶಂಕುಸ್ಥಾಪನೆ ಮಾಡಿದ್ರು. ಅಂದು ಕೆಸಿ ರೆಡ್ಡಿ ಮುಖ್ಯಮಂತ್ರಿಯಾಗಿದ್ರು. ಇದನ್ನ ಬಿಟ್ಟು ಬೇರೆ ಮಾಹಿತಿ ಇಲ್ಲ ಎಂದಿದೆ. ಇನ್ನು ಉದ್ಘಾಟನೆ ಆಗಿದ್ದು ಯಾವಾಗ? ಯಾರು ಮಾಡಿದ್ದು ಅಂತಾ ಕೇಳಿದ್ರೆ ಯಾವುದೇ ಮಾಹಿತಿ ಇಲ್ಲ ಅಂತ ಇಲಾಖೆ ಹೇಳಿದೆ.

    ನಿಗದಿಗಿಂತ 3 ಪಟ್ಟು ಹಣ ಖರ್ಚು!: ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ ವಿಧಾನಸೌಧ ಕಟ್ಟಲು ಅಂದಾಜು ಮಾಡಲಾದ ವೆಚ್ಚ 50 ಲಕ್ಷ ರೂಪಾಯಿ. ಆದ್ರೆ ಕಟ್ಟಡ ಪೂರ್ಣ ಆಗುವ ವೇಳೆಗೆ ಖರ್ಚಾಗಿದ್ದು 184 ಲಕ್ಷ, ಅಂದ್ರೆ 1 ಕೋಟಿ, 84 ಲಕ್ಷ ರೂಪಾಯಿ. ಅಂದ್ರೆ ಬಹುತೇಕ ನಿಗದಿಪಡಿಸಿದಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಖZರ್ಚಾಗಿದೆ. 1951 ರಲ್ಲಿ ಪ್ರಾರಂಭವಾದ ಕಟ್ಟಡ 5 ವರ್ಷದ ಬಳಿಕ ಅಂದ್ರೆ 1956 ರಲ್ಲಿ ಪೂರ್ಣಗೊಂಡಿದೆ.