Tag: illicit affair

  • ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಸ್ಟೋರ್ – ಪತಿಯನ್ನು ಹತ್ಯೆ ಮಾಡಿದ್ದು ಯಾಕೆ?

    ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಸ್ಟೋರ್ – ಪತಿಯನ್ನು ಹತ್ಯೆ ಮಾಡಿದ್ದು ಯಾಕೆ?

    ನವದೆಹಲಿ: ಶ್ರದ್ಧಾ ವಾಕರ್ ಕ್ರೂರ ಹತ್ಯೆಯ ಕಾವು ಆರುವ ಮುನ್ನವೇ ಮತ್ತೊಂದು ಪೀಸ್ ಪೀಸ್ ಕ್ರೈಂ ಸ್ಟೋರಿ ಬೆಳಕಿಗೆ ಬಂದಿದ್ದು, ಸ್ವತಃ ಪತ್ನಿಯೇ ಮಗನೊಂದಿಗೆ ಸೇರಿ ಗಂಡನನ್ನ ಕೊಂದು, ಫ್ರಿಡ್ಜ್ನಲ್ಲಿ ಸಂಗ್ರಹಿಸಿಟ್ಟಿದ್ದಲ್ಲದೇ ದೆಹಲಿ ನೆರೆಹೊರೆಯ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿದ ಘಟನೆ ನಡೆದಿದೆ. ಯಾವ ಸೀನಿಮಾಗೂ ಕಡಿಮೆಯಿಲ್ಲದಂತೆ ಪಕ್ಕಾ ಪ್ಲ್ಯಾನ್‌ ಮಾಡಿ ಕೊಲೆ ಮಾಡಲಾಗಿದೆ.

    ಹತ್ಯೆ ಮಾಡಿದ್ದು ಹೇಗೆ?
    ಪೂನಂ ಮತ್ತು ಆಕೆಯ ಮಗ ದೀಪಕ್ ಅಕ್ರಮ ಸಂಬಂಧ ಹೊಂದ್ದರಿಂದಾಗಿ ಅಂಜನ್ ದಾಸ್ ಅವರನ್ನ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೊಂದು ಪೀಸ್ ಪೀಸ್ ಕ್ರೈಂ ಸ್ಟೋರಿ- ಪತಿಯನ್ನು ತುಂಡರಿಸಿ ಫ್ರಿಜ್‌ನಲ್ಲಿಟ್ಟ ಪತ್ನಿ!

    2016ರಲ್ಲಿ ಪೂನಂ ಮಾಜಿ ಪತಿ ಕಲ್ಲು ನಿಧನರಾದ ನಂತರ 2017ರಲ್ಲಿ ಅಂಜನ್ ದಾಸ್ ಅವರನ್ನ ಮದುವೆಯಾದ್ರು. ಮೃತ ಅಂಜನ್ ಬಿಹಾರದಲ್ಲಿ ಮದುವೆಯಾಗಿ 8 ಮಕ್ಕಳನ್ನು ಹೊಂದಿದ್ದರು. ಆದರೆ ಸಂಪಾದನೆ ಮಾಡುತ್ತಿರಲಿಲ್ಲ. ಇದರಿಂದ ತಾಯಿ ಮಗ ಬೇಸತ್ತಿದ್ದರು. ಮೊದಲು ಅಂಜನ್ ದಾಸ್‌ಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರಸಿ ಕೊಟ್ಟಿದ್ದಾರೆ. ನಿದ್ರೆಗೆ ಜಾರಿದ ನಂತರ ಕತ್ತು ಕೊಯ್ದು ರಕ್ತವನ್ನು ಸಂಪೂರ್ಣವಾಗಿ ಹೊರಹೋಗಲು ಶವವನ್ನು ಮನೆಯಲ್ಲೇ ಬಿಟ್ಟಿದ್ದಾರೆ.

    ದೇಹದಿಂದ ರಕ್ತ ಸಂಪೂರ್ಣವಾಗಿ ಹರಿದುಹೋದ ನಂತರ 10 ತುಂಡುಗಳಾಗಿ ಕತ್ತರಿಸಿ, ಪ್ರಿಡ್ಜ್‌ನಲ್ಲಿ ಶೇಖರಿಸಿಟ್ಟು ಪಾಂಡವ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ. ಇದನ್ನೂ ಓದಿ: ಕುಂಬಳಕಾಯಿ ಕೇಳುವ ಧೈರ್ಯ ಬೆಳೆಸಿಕೊಳ್ಳಿ: ಸತೀಶ್ ಜಾರಕಿಹೊಳಿ

    ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ತಾಯಿ ಮಗ ಇಬ್ಬರನ್ನು ಬಂಧಿಸಲಾಗಿದೆ. ಈಗಾಗಲೇ ಹೂತಿಟ್ಟಿದ್ದ 6 ತುಂಡುಗಳನ್ನು ವಶಪಡಿಸಿಕೊಂಡಿದ್ದು, ಇನ್ನೂ ದೇಹದ ಮುಂಡ ಸಿಕ್ಕಿಲ್ಲ. ಅಲ್ಲದೇ ಕೊಲೆಗೆ ಬಳಸಿದ ಆಯುಧಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಸಂಬಂಧ ಹೊಂದಿದ್ದವಳನ್ನೇ ಕೊಂದ – ಜೈಲಿನಲ್ಲಿ ತಾನೂ ನೇಣಿಗೆ ಶರಣಾದ

    ಅಕ್ರಮ ಸಂಬಂಧ ಹೊಂದಿದ್ದವಳನ್ನೇ ಕೊಂದ – ಜೈಲಿನಲ್ಲಿ ತಾನೂ ನೇಣಿಗೆ ಶರಣಾದ

    ಧಾರವಾಡ: ಕಳೆದ ವಾರವಷ್ಟೇ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಜೈಲು ಸೇರಿದ್ದ ಆರೋಪಿಯೊಬ್ಬ ಇದೀಗ ತಾನೂ ಕೂಡ ಜೈಲಿನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ವಿದ್ಯಾಕಾಶಿ ಧಾರವಾಡ (Dharwad) ನಗರದಲ್ಲಿ ಕಳೆದ ಅಕ್ಟೋಬರ್ 14 ರಂದು ಸವಿತಾ ಕಿತ್ತೂರ ಎಂಬ ಮಹಿಳೆಯ ಕೊಲೆ ನಡೆದಿತ್ತು. ಧಾರವಾಡ ಜಿಲ್ಲಾ ಆಸ್ಪತ್ರೆ ಬಳಿ ಸವಿತಾಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಘಟನೆ ನಡೆದ ಎರಡು ದಿನದ ನಂತರ ಧಾರವಾಡ ಉಪನಗರ ಠಾಣೆಯ ಪೊಲೀಸರು ಆರೋಪಿ ಆನಂದ್ ದುದನಿಯನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದರು. ಇದೀಗ ಆನಂದ್ ಕೂಡ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ನ.1ರಂದು ನಟ ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ: ಸಿಎಂ ಬೊಮ್ಮಾಯಿ

    ಧಾರವಾಡ ನೆಹರೂನಗರದ ಸವಿತಾ ಜೊತೆ ಈ ಅಕ್ರಮ ಸಂಬಂಧ ಹೊಂದಿದ್ದ ಆನಂದ್, ಇದೇ ಕಾರಣಕ್ಕೆ ಸವಿತಾಳನ್ನು ಕೊಲೆ ಮಾಡಿದ್ದ. ಕೊಲೆಯ ನಂತರ ಪರಾರಿಯಾಗಿದ್ದ ಆನಂದ್ ಅನ್ನು ಕೇವಲ ನಾಲ್ಕು ದಿನಗಳ ಹಿಂದಷ್ಟೇ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಬುಧವಾರ ತಡ ರಾತ್ರಿ ಜೈಲಿನ ಶೌಚಾಲಯದಲ್ಲಿ ಬೆಡ್‍ಶೀಟ್ ತುಂಡಿನಿಂದ ನೇಣು ಹಾಕಿಕೊಂಡಿದ್ದಾನೆ. ನಾಲ್ಕನೇ ನಂಬರ್ ಸೆಲ್‍ನಲ್ಲಿದ್ದ ಆರೋಪಿ ತಡರಾತ್ರಿ ನೇಣು ಹಾಕಿಕೊಂಡಾಗ ಜೈಲಿನ ಸಿಬ್ಬಂದಿ ಕೂಡ ಅಲ್ಲಿಂದ ದೂರ ಇದ್ದರು. ಈತ ಬಿದ್ದ ಶಬ್ದ ಕೇಳಿಸಿಕೊಂಡು ತಕ್ಷಣ ಆತನನ್ನು ಸಿಬ್ಬಂದಿ ಆಸ್ಪತ್ರೆಗೆ ರವಾನೆ ಮಾಡಿದರು. ಆದರೂ ಆತ ಬದುಕುಳಿಯಲಿಲ್ಲ.

    ಸದ್ಯ ಕಾನೂನಿನ ಪ್ರಕಾರ ಧಾರವಾಡ ಉಪನಗರ ಠಾಣೆಗೆ ಜೈಲು ಅಧೀಕ್ಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಂಚನಾಮೆ ಮಾಡಿದ್ದಾರೆ. ಈತ ನರೇಂದ್ರ ಗ್ರಾಮದವನಾಗಿದ್ದ ಎಂದು ತಿಳಿಸಿದ ಜೈಲು ಅಧೀಕ್ಷಕರು, ಮೃತನ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ

    Live Tv
    [brid partner=56869869 player=32851 video=960834 autoplay=true]

  • ಪತ್ನಿಯೊಂದಿಗೆ ಅಕ್ರಮ ಸಂಬಂಧ – ವ್ಯಕ್ತಿಯನ್ನು ರಾಡ್‍ನಿಂದ ಬಡಿದು ಕೊಂದ ಪತಿ

    ಪತ್ನಿಯೊಂದಿಗೆ ಅಕ್ರಮ ಸಂಬಂಧ – ವ್ಯಕ್ತಿಯನ್ನು ರಾಡ್‍ನಿಂದ ಬಡಿದು ಕೊಂದ ಪತಿ

    ರಾಯಚೂರು: ನಗರದ ಮಹಿಳಾ ಸಮಾಜ ಆವರಣದಲ್ಲಿನ ಪಾಳು ಕೋಣೆಯಲ್ಲಿ ಪತ್ತೆಯಾಗಿದ್ದ ಶವದ ಕೊಲೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಅನ್ನೋದು ಬಯಲಾಗಿದೆ.

    ನವೆಂಬರ್ 30ರಂದು ದೇವನಪಲ್ಲಿಯ ಖಾಸಗಿ ಬ್ಯಾಂಕ್ ಉದ್ಯೋಗಿ 32 ವರ್ಷದ ಸೈಯದ್ ಇಮ್ರಾನ್ ಖಾದ್ರಿ ಶವವಾಗಿ ಪತ್ತೆಯಾಗಿದ್ದ. ಕೊಲೆ ಪ್ರಕರಣ ಆರೋಪಿ ರಾಯಚೂರಿನ ಬೈರೂನ್ ಕಿಲ್ಲಾ ನಿವಾಸಿ ಅಬ್ದುಲ್ ರಷೀದ್‍ನನ್ನ ಬಂಧಿಸಲಾಗಿದೆ. ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಅನುಮಾನದ ಮೇಲೆ ಆರೋಪಿಯನ್ನ ಬಂಧಿಸಿರುವ ಪೊಲೀಸರು ಸತ್ಯ ಬಾಯಿಬಿಡಿಸಿದ್ದಾರೆ.

    ಸೈಯದ್ ಇಮ್ರಾನ್ ಖಾದ್ರಿ ಜೊತೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತ ಅಬ್ದುಲ್ ರಶೀದ್ ಅನುಮಾನಗೊಂಡಿದ್ದ. ಅಲ್ಲದೆ ತನ್ನಿಂದ ದೂರವಾಗಿರುವ ಪತ್ನಿ ಇಮ್ರಾನ್ ಕುಮ್ಮಕ್ಕಿನಿಂದ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ಹಿಂಸೆ ಹಾಗೂ ಜೀವನಾಂಶ ಪ್ರಕರಣ ದಾಖಲಿದ್ದಾಳೆ ಎಂದು ಸಿಟ್ಟಿನಿಂದ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊಲೆಯಾದ ಇಮ್ರಾನ್ ಸಹ ತನ್ನ ಪತ್ನಿಯಿಂದ ದೂರವಾಗಿದ್ದ, ವಿವಾಹ ವಿಚ್ಛೇದನ ಪ್ರಕರಣವೂ ನಡೆಯುತ್ತಿತ್ತು. ಹೀಗಾಗಿ ಕೊಲೆಯ ಹಿಂದೆ ಇಮ್ರಾನ್ ಪತ್ನಿ ಕಡೆಯವರ ಕೈವಾಡವಿದೆ ಅಂತ ಇಮ್ರಾನ್ ಕುಟುಂಬಸ್ಥರು ಆರೋಪಿಸಿದ್ದರು. ಆದರೆ ಪೊಲೀಸ್ ತನಿಖೆಯಲ್ಲಿ ಆರೋಪಿ ಅಬ್ದುಲ್ ರಶೀದ್ ಸಿಕ್ಕಿಬಿದ್ದಿದ್ದು, ತಪ್ಪೊಪ್ಪಿಕೊಂಡಿದ್ದಾನೆ.

    ಸದರ ಬಜಾರ್ ಠಾಣಾ ಪೊಲೀಸರು ಘಟನೆ ನಡೆದು ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಧಿಕಾರಿಗಳು ಅತೀ ಕಡಿಮೆ ಸಮಯದಲ್ಲಿ ಆರೋಪಿಯನ್ನು ಬಂಧಿಸಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್ ತನಿಖಾ ತಂಡವನ್ನು ಅಭಿನಂದಿಸಿದ್ದಾರೆ.

  • ಅಳಿಯನ ಜೊತೆ ಅತ್ತೆಯ ಕಳ್ಳ ಸಂಬಂಧ- ಅಡ್ಡಿಯಾದ ಗಂಡನನ್ನೇ ಕೊಂದ್ಳು

    ಅಳಿಯನ ಜೊತೆ ಅತ್ತೆಯ ಕಳ್ಳ ಸಂಬಂಧ- ಅಡ್ಡಿಯಾದ ಗಂಡನನ್ನೇ ಕೊಂದ್ಳು

    -ಕೊಂದು ಪಕ್ಕದ್ಮನೆಯಲ್ಲಿ ಶವ ನೇತಾಕಿದ್ರು
    -ಅತ್ತೆ ಮೇಲಿನ ವ್ಯಾಮೋಹಕ್ಕೆ ತನ್ನೂರು ತೊರೆದಿದ್ದ ಅಳಿಯ
    -ಸುಳ್ಳು ಕಥೆ ಹೇಳಿದ ಅಪ್ರಾಪ್ತ ಮಗ

    ಪಾಟ್ನಾ/ವೈಶಾಲಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಅಳಿಯನ ಜೊತೆ ಸೇರಿ ಮಹಿಳೆ ಕೊಲೆ ಮಾಡಿರುವ ಘಟನೆ ವೈಶಾಲಿ ಜಿಲ್ಲೆಯ ದೇಸ್ರಿ ಠಾಣಾ ವ್ಯಾಪ್ತಿಯ ಮುರೌವತಪುರನಲ್ಲಿ ನಡೆದಿದೆ.

    50 ವರ್ಷದ ತಿಲಕ್ ರಾಯ್ ಕೊಲೆಯಾದ ವ್ಯಕ್ತಿ. ತಿಲಕ್ ಪತ್ನಿ ಸವಿತಾ ಅಳಿಯ ಮೋಹನ್ ರಾಯ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಳಿಯ ಮೋಹನ್ ನಿಂದ ದೂರವಿರುವಂತೆ ತಿಲಕ್ ಪತ್ನಿಗೆ ಎಚ್ಚರಿಕೆ ಸಹ ನೀಡಿದ್ದನು. ರಾತ್ರಿ ನಶೆಯಲ್ಲಿ ಪತಿಯನ್ನು ಸವಿತಾ ಮತ್ತು ಮೋಹನ್ ಥಳಿಸಿ ಕೊಂದಿದ್ದಾರೆ. ತಮ್ಮ ಮೇಲೆ ಅನುಮಾನ ಬರದಿರಲಿ ಅಂತ ಪಕ್ಕದಲ್ಲಿಯ ನಿರ್ಮಾಣ ಹಂತಹ ಮನೆಯಲ್ಲಿ ಶವವನ್ನ ನೇತು ಹಾಕಿ ಮನೆ ಸೇರಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ಶವ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವೇಳೆ ಸವಿತಾಳ ಅಪ್ರಾಪ್ತ ಮಗ, ತಂದೆ ಪ್ರತಿದಿನ ಕುಡಿದು ಬಂದು ನಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದರು. ನಿನ್ನೆ ರಾತ್ರಿಯೂ ಪಾನಮತ್ತನಾಗಿ ಬಂದ ತಂದೆ ನಮ್ಮ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಹೋಗಿದ್ದರು. ಈ ವೇಳೆ ನೇಣು ಹಾಕಿಕೊಂಡಿರಬಹುದು ಎಂದು ಹೇಳಿದ್ದನು. ಇದನ್ನೂ ಓದಿ: ಸೊಸೆ ಜೊತೆ ಮಾವನ ಸರಸ- ವಿಷ್ಯ ತಿಳಿದು ಇಬ್ಬರನ್ನೂ ಬರ್ಬರವಾಗಿ ಕೊಂದ ಮಗ

    ಶವದ ಮೇಲೆ ಗಾಯದ ಗುರುತುಗಳು ಕಂಡು ಅನುಮಾನಗೊಂಡ ತಿಲಕ್ ಸೋದರ ಪೊಲೀಸ್ ಠಾಣೆಗೆ ತೆರಳಿ ಅತ್ತಿಗೆ, ಅಳಿಯ ಮೋಹನ್ ಮತ್ತು ಮಗನ ವಿರುದ್ಧ ದೂರು ದಾಖಲಿಸಿದ್ದರು. ಅನುಮಾನದ ಮೇಲೆ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಾವನ ಜೊತೆ 10 ತಿಂಗ್ಳ ಮಗುವಿನ ಸಮೇತ ಸೊಸೆ ಎಸ್ಕೇಪ್

    ಅಳಿಯ ಮೋಹನ್ ಜೊತೆ ಅಕ್ರಮ ಸಂಬಂಧ ಹೊಂದಿರೋದನ್ನ ಅತ್ತೆ ಸವಿತಾ ಒಪ್ಪಿಕೊಂಡಿದ್ದಾಳೆ. ಅತ್ತೆಯ ಮೇಲಿನ ವ್ಯಾಮೋಹದಿಂದ ಸಮಸ್ತಿಪುರದ ನಿವಾಸಿಯಾಗಿದ್ದ ಮೋಹನ್ ರಾಯ್ ಮುರೌವತಪುರನಲ್ಲಿಯೇ ಉಳಿದುಕೊಂಡಿದ್ದನು. ಇಬ್ಬರ ಅಕ್ರಮ ಸಂಬಂಧ ವಿಷಯ ತಿಳಿದ ತಿಲಕ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು.  ಇದನ್ನೂ ಓದಿ: ಮಗನೊಂದಿಗೆ ಸೆಕ್ಸ್ ಮಾಡದಂತೆ ಸೊಸೆಯನ್ನ ತಡೆದ ಮಾವ