Tag: ICICI

  • ಡಿಸೆಂಬರ್ 1 ರಿಂದ ಮಾರುಕಟ್ಟೆಗೆ ಟಿಜಿಟಲ್ ರುಪಿ – ಬೆಂಗ್ಳೂರಿನಲ್ಲೇ ಮೊದಲ ಪ್ರಯೋಗ

    ಡಿಸೆಂಬರ್ 1 ರಿಂದ ಮಾರುಕಟ್ಟೆಗೆ ಟಿಜಿಟಲ್ ರುಪಿ – ಬೆಂಗ್ಳೂರಿನಲ್ಲೇ ಮೊದಲ ಪ್ರಯೋಗ

    ನವದೆಹಲಿ: ಡಿಜಿಟಲ್ ರೂಪಾಯಿ (Digital Rupee) ಕಡೆಗೆ ದೇಶ ತರಾತುರಿಯಲ್ಲಿ ಹೆಜ್ಜೆ ಹಾಕುತ್ತಿದೆ. ಇದರ ಭಾಗವಾಗಿ ಡಿಸೆಂಬರ್ 1 ರಿಂದ ರಿಟೈಲ್ ಡಿಜಿಟಲ್ ರೂಪಾಯಿಯನ್ನು ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಆರ್‌ಬಿಐ (RBI) ಚಲಾವಣೆಗೆ ತರುತ್ತಿದೆ.

    ಮೊದಲಿಗೆ ಬೆಂಗಳೂರು (Bengaluru), ಮುಂಬೈ (Mumbai), ದೆಹಲಿ (NewDelhi), ಭುವನೇಶ್ವರದಲ್ಲಿ ಈ ಪ್ರಯೋಗ ನಡೆಯಲಿದೆ. ಪ್ರಯೋಗದ ಭಾಗವಾಗಿ ಆಯ್ದ ಪ್ರಾಂತ್ಯಗಳಲ್ಲಿ ಬಳಕೆದಾರರು ಮತ್ತು ವ್ಯಾಪಾರಿಗಳ ನಡುವೆ ಡಿಜಿಟಲ್ ರೂಪಾಯಿ (Digital Rupee) ಮೂಲಕ ವ್ಯವಹಾರ ನಡೆಯಲಿದೆ. ಸದ್ಯ ನೋಟು ಮತ್ತು ನಾಣ್ಯಗಳ ಮೌಲ್ಯದಲ್ಲೇ ಡಿಜಿಟಲ್ ರೂಪಾಯಿಯ ವ್ಯವಹಾರಗಳು ನಡೆಯಲಿವೆ. ಇದನ್ನೂ ಓದಿ: ಭಾರತದಲ್ಲಿ ಡಿಜಿಟಲ್‌ ರುಪಿ ಬಿಡುಗಡೆ – ಲಾಭ ಏನು? ಕ್ರಿಪ್ಟೋ ಕರೆನ್ಸಿಗಿಂತ ಭಿನ್ನ ಹೇಗೆ?

    ಎಸ್‌ಬಿಐ, ಐಸಿಐಸಿಐ ಸೇರಿ ನಾಲ್ಕು ಬ್ಯಾಂಕ್‌ಗಳು ಡಿಜಿಟಲ್ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದು, ಈ ಬ್ಯಾಂಕ್‌ಗಳು ಒದಗಿಸುವ ಡಿಜಿಟಲ್ ವ್ಯಾಲೆಟ್ ಸಹಾಯದೊಂದಿಗೆ ವ್ಯವಹಾರ ನಡೆಸಬಹುದು. ಈಗ ನಗದು ಮೇಲಿರುವ ನಂಬಿಕೆ, ಭದ್ರತೆ, ವಿಶ್ವಾಸಗಳನ್ನು ಡಿಜಿಟಲ್ ರೂಪಾಯಿಗೂ ತರಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

    RBI

    ಡಿಜಿಟಲ್ ರೂಪಾಯಿ ಹೇಗೆ ಕೆಲಸ ಮಾಡುತ್ತದೆ?
    ಆರ್‌ಬಿಐ ಬ್ಯಾಂಕುಗಳ ಮೂಲಕ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ವಿತರಣೆ ಮಾಡುತ್ತದೆ. ನಂತರ ಅರ್ಹ ಬ್ಯಾಂಕುಗಳು ನೀಡುವ ಮೊಬೈಲ್ ಫೋನ್ ಸಾಧನಗಳಲ್ಲಿ ಸಂಗ್ರಹಿಸಲಾದ ಡಿಜಿಟಲ್ ವ್ಯಾಲೆಟ್ ಮೂಲಕ ಬಳಕೆದಾರರು ಇ-ರೂಪಾಯಿಯನ್ನು ಬಳಸಲು ಸಾಧ್ಯವಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಯ ನಡುವೆಯೂ ವಹಿವಾಟು ನಡೆಸಬಹುದು. ಆನ್‌ಲೈನ್ ವಹಿವಾಟಿನಂತೆ ವ್ಯಾಪಾರದ ಸ್ಥಳಗಳಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಬಳಸಿ ರೂಪಾಯಿಗಳನ್ನು ಬಳಸಬಹುದಾಗಿದೆ ಎಂದು ಆರ್‌ಬಿಐ ಅಧಿಕೃತ ಪ್ರಕಟಣೆ ತಿಳಿಸಿದೆ.

    ಎಲ್ಲಿ ಲಭ್ಯ?
    ಮೊದಲ ಹಂತದಲ್ಲಿ ಎಸ್‌ಬಿಐ (SBI), ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ (HDFC), ಐಸಿಐಸಿಐ (ICICI), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಯಸ್ ಬ್ಯಾಂಕ್ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಸೇರಿದಂತೆ 9 ಬ್ಯಾಂಕ್‌ಗಳಿಗೆ ಡಿಜಿಟಲ್ ರುಪಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಬಾಂಡ್‌ಗಳ ಖರೀದಿ ಮತ್ತು ಮಾರಾಟ ಮಾಡಲು ಇದನ್ನು ಬಳಸಲಾಗುತ್ತದೆ. ಸದ್ಯಕ್ಕೆ ಸರ್ಕಾರಿ ಸೆಕ್ಯುರಿಟಿಗಳ ವಹಿವಾಟಿಗೆ ಮಾತ್ರ ಡಿಜಿಟಲ್ ಕರೆನ್ಸಿ ಬಳಕೆಗೆ ಅನುಮತಿ ನೀಡಲಾಗಿದೆ.

    ಲಾಭ ಏನು?
    ಬಹಳ ಮುಖ್ಯವಾಗಿ ಬಿಟ್ ಕಾಯಿನ್ ಇತ್ಯಾದಿ ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣ ಯಾರ ಬಳಿಯು ಇರುವುದಿಲ್ಲ. ಆಗಾಗ ಏರಿಳಿತ ಸಂಭವಿಸುತ್ತಿರುತ್ತದೆ. ಆದರೆ ಡಿಜಿಟಲ್ ರುಪಿ ವ್ಯವಸ್ಥೆಯ ಮೇಲೆ ಆರ್‌ಬಿಐ (RBI) ಸಂಪೂರ್ಣ ನಿಯಂತ್ರಣ ಹೊಂದಿರುತ್ತದೆ. ವಹಿವಾಟು ಶುಲ್ಕ ಇಳಿಕೆಯಾಗುವುದರಿಂದ ಎರಡು ಬ್ಯಾಂಕುಗಳ ನಡುವಿನ ವ್ಯವಹಾರ ಮತ್ತಷ್ಟು ಸರಳವಾಗಲಿದೆ. ಮುದ್ರಣ ವೆಚ್ಚ ಇರುವುದಿಲ್ಲ ಮತ್ತು ಹಾಳಾಗುವುದಿಲ್ಲ. ಅಷ್ಟೇ ಅಲ್ಲದೇ ಸಾಗಾಟ ಮಾಡುವ ಅವಶ್ಯಕತೆ ಇಲ್ಲ. ಇವುಗಳನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ನಕಲಿ ನೋಟುಗಳ ಹಾವಳಿ ಕಡಿಮೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಆಡಿದ ವಿಶ್ವಕಪ್‍ಗಳಲ್ಲೇ ಅತ್ಯಂತ ಸವಾಲಿನ ಟೂರ್ನಿ ಇದಾಗಿದೆ – ಇಂಗ್ಲೆಂಡಿಗೆ ತೆರಳುವ ಮುನ್ನ ಕೊಹ್ಲಿ ಮಾತು

    ನಾನು ಆಡಿದ ವಿಶ್ವಕಪ್‍ಗಳಲ್ಲೇ ಅತ್ಯಂತ ಸವಾಲಿನ ಟೂರ್ನಿ ಇದಾಗಿದೆ – ಇಂಗ್ಲೆಂಡಿಗೆ ತೆರಳುವ ಮುನ್ನ ಕೊಹ್ಲಿ ಮಾತು

    ನವದೆಹಲಿ: 2019ರ ವಿಶ್ವಕಪ್ ನಾನು ಆಡಿದ ವಿಶ್ವಕಪ್‍ಗಳಲ್ಲೇ ಅತ್ಯಂತ ಸವಾಲಿನ ಟೂರ್ನಿ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಇಂದು ರಾತ್ರಿ ವಿಶ್ವಕಪ್‍ಗೆಂದು ಭಾರತ ತಂಡ ಇಂಗ್ಲೆಂಡ್‍ಗೆ ತೆರಳಲಿದ್ದು, ಇದಕ್ಕೂ ಮುಂಚೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನಾನು ಇಲ್ಲಿಯವರೆಗೂ ಅಡಿದ ಮೂರು ವಿಶ್ವಕಪ್‍ನಲ್ಲಿ ಈ ಬಾರಿ ವಿಶ್ವಕಪ್ ತುಂಬ ಸವಾಲಿನಿಂದ ಕೂಡಿದೆ ಎಂದರು.

    “ಇದು ನನಗೆ ತುಂಬ ಸವಾಲಿನ ವಿಶ್ವಕಪ್. ನಾವು ಉತ್ತಮ ಕ್ರಿಕೆಟ್ ಅಟದ ಕಡೆ ಗಮನ ನೀಡಬೇಕು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆಟವಾಡಿದರೆ ನಾವು ಆಡಿದ ಪ್ರತಿ ಪಂದ್ಯದಲ್ಲೂ ಉತ್ತಮ ಫಲಿತಾಂಶ ಕಾಣಬಹುದು. ನಮ್ಮ ತಂಡ ಸಾಧ್ಯವದಷ್ಟು ಸರಳವಾಗಿ ಇರಲು ಪ್ರಯತ್ನಮಾಡಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಐಸಿಸಿ ಟೂರ್ನಿಗಳಲ್ಲಿ ಪಿಚ್‍ಗಳು ಉತ್ತಮವಾಗಿರುತ್ತವೆ. ವಿಶ್ವಪಕ್ ವೇಳೆಯ ಪಿಚ್‍ಗಳಿಗೂ ಮತ್ತು ನಾವು ಸಮಾನ್ಯವಾಗಿ ಆಡುವ ಏಕದಿನ ಪಂದ್ಯಗಳ ಪಿಚ್‍ಗಳಿಗೂ ತುಂಬಾ ವ್ಯತ್ಯಾಸವಿರುತ್ತದೆ. ಇಂಗ್ಲೆಂಡ್‍ನಲ್ಲಿರುವ ಪಿಚ್‍ಗಳು ಹೈ ಸ್ಕೋರಿಂಗ್ ಪಂದ್ಯಗಳಿಗೆ ಹೆಚ್ಚು ಅನುಕೂಲವಾಗಿವೆ. ಆದರೆ ಕೆಲ ತಂಡಗಳು 260ರಿಂದ 270 ರನ್‍ಗಳಿಗೆ ಎದುರಾಳಿಗಳನ್ನು ಕಟ್ಟಿಹಾಕುವ ಸಾಮಥ್ರ್ಯ ಹೊಂದಿವೆ ಎಂದು ಹೇಳಿದರು.

    ಮೇ 30 ರಿಂದ ವಿಶ್ವಕಪ್ ಅರಂಭವಾಗಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ದಕ್ಷಿಣ ಅಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ. ನಂತರ ಆಸ್ಟ್ರೇಲಿಯಾ(ಜೂ.9), ನ್ಯೂಜಿಲೆಂಡ್(ಜೂ.13), ಪಾಕಿಸ್ತಾನ(ಜೂ.16), ಅಪ್ಘಾನಿಸ್ತಾನ(ಜೂ.22), ವೆಸ್ಟ್ ಇಂಡೀಸ್(ಜೂ.27), ಇಂಗ್ಲೆಂಡ್(ಜೂ.30), ಬಾಂಗ್ಲಾದೇಶ(ಜು.2), ಶ್ರೀಲಂಕಾ(ಜು.6) ವಿರುದ್ಧ ಆಡಲಿದೆ.

    ಭಾರತದ ತಂಡದ ಹರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ಶಿಖರ್ ಧವನ್, ಎಂಎಸ್ ಧೋನಿ, ಕೆಎಲ್ ರಾಹುಲ್ ಮತ್ತು ಬೌಲರ್‍ ಗಳಾದ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಅವರು ಉತ್ತಮವಾದ ಫಾರ್ಮ್‍ನಲ್ಲಿ ಇರುವುದರಿಂದ ವಿಶ್ವಕಪ್ ಗೆಲ್ಲುವ ತಂಡಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.

  • ಈ 3 ಬ್ಯಾಂಕ್‍ಗಳಲ್ಲಿ ಇನ್ಮುಂದೆ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ನಗದು ವ್ಯವಹಾರ ಮಾಡಿದ್ರೆ ಹೆಚ್ಚುವರಿ ಶುಲ್ಕ ಕಟ್ಬೇಕು

    ಈ 3 ಬ್ಯಾಂಕ್‍ಗಳಲ್ಲಿ ಇನ್ಮುಂದೆ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ನಗದು ವ್ಯವಹಾರ ಮಾಡಿದ್ರೆ ಹೆಚ್ಚುವರಿ ಶುಲ್ಕ ಕಟ್ಬೇಕು

    ನವದೆಹಲಿ: ಬ್ಯಾಂಕ್‍ನಲ್ಲಿ ಇನ್ನು ಮುಂದೆ ಬೇಕಾಬಿಟ್ಟಿ ನಗದು ವ್ಯವಹಾರ ಮಾಡಿದ್ರೆ ದಂಡ ಕಟ್ಟಬೇಕಾಗುತ್ತದೆ. ಯಾಕಂದ್ರೆ ತಿಂಗಳಿಗೆ 4 ಬಾರಿ ವ್ಯವಹಾರ ಮಾಡಿದ ಬಳಿಕ ಮಾಡುವ ಪ್ರತಿಯೊಂದು ವ್ಯವಹಾರಕ್ಕೂ 150 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲು ಹೆಚ್‍ಡಿಎಫ್‍ಸಿ, ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್‍ಗಳು ನಿರ್ಧಾರ ಮಾಡಿವೆ.

    ಈ ನಿಯಮ ಮಾರ್ಚ್ 1 ರಿಂದಲೇ ಜಾರಿಗೆ ಬಂದಿದ್ದು, ಸ್ಯಾಲರಿ ಅಕೌಂಟ್ ಹಾಗೂ ಉಳಿತಾಯ ಖಾತೆಗಳಿಗೂ ಅನ್ವಯ ಆಗಲಿದೆ ಎಂದು ಹೆಚ್‍ಡಿಎಫ್‍ಸಿ ಬ್ಯಾಂಕ್ ಹೇಳಿದೆ.

    ಹೆಚ್‍ಡಿಎಫ್‍ಸಿ ಬ್ಯಾಂಕ್: ಒಂದು ತಿಂಗಳಲ್ಲಿ ಮೊದಲ 4 ನಗದು ವ್ಯವಹಾರ ಉಚಿತವಾಗಿರುತ್ತದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಆದ್ರೆ ಅದೇ ತಿಂಗಳಲ್ಲಿ 5ನೇ ಬಾರಿಗೆ ನಗದು ಡೆಪಾಸಿಟ್ ಅಥವಾ ವಿತ್‍ಡ್ರಾ ಮಾಡಿದರೆ ಹೆಚ್ಚುವರಿ 150 ರೂ. ಶುಲ್ಕ ಕಟ್ಟಬೇಕಾಗುತ್ತದೆ. ಅಲ್ಲದೆ ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ದಿನವೊಂದಕ್ಕೆ 25 ಸಾವಿರ ರೂಪಾಯಿ ಮಾತ್ರ ತೆಗೆಯಬಹುದು ಅಂತಾ ಹೆಚ್‍ಡಿಎಫ್‍ಸಿ ಬ್ಯಾಂಕ್ ತಿಳಿಸಿದ್ದು, ಕ್ಯಾಶ್ ಹ್ಯಾಂಡ್ಲಿಂಗ್ ಶುಲ್ಕವನ್ನು ಹಿಂಪಡೆದಿದೆ.

    ಐಸಿಐಸಿಐ ಬ್ಯಾಂಕ್: ಐಸಿಐಸಿಐನ ಹೋಮ್ ಬ್ರಾಂಚ್‍ನಲ್ಲಿ ತಿಂಗಳ ಮೊದಲ 4 ನಗದು ವ್ಯವಹಾರ ಉಚಿತವಾಗಿರುತ್ತದೆ. ಅದೇ ತಿಂಗಳು 5ನೇ ಬಾರಿಗೆ ವ್ಯವಹಾರ ಮಾಡಿದ್ರೆ 1 ಸಾವಿರ ರೂ. ಗೆ 5 ರೂಪಾಯಿಯಂತೆ ತಿಂಗಳಿಗೆ ಕನಿಷ್ಠ 150 ರೂ. ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ. ಬೇರೆ ಎಟಿಎಂನಿಂದ ವಿತ್‍ಡ್ರಾ ಮಾಡುವ ಮಿತಿ ದಿನಕ್ಕೆ 50 ಸಾವಿರ ರೂ. ಇರಲಿದೆ. ಆದ್ರೆ ನಾನ್ ಹೋಮ್ ಬ್ರಾಂಚ್‍ಗಳಲ್ಲಿ ತಿಂಗಳ ಮೊದಲ ನಗದು ವಿತ್‍ಡ್ರಾವಲ್‍ಗೆ ಐಸಿಐಸಿಐ ಯಾವುದೇ ಶುಲ್ಕ ಪಡೆಯುವುದಿಲ್ಲ. ಆದ್ರೆ ಅನಂತರದ ವಿತ್‍ಡ್ರಾವಲ್‍ಗೆ 1 ಸಾವಿರ ರೂ.ಗೆ 5 ರೂ. ನಂತೆ ತಿಂಗಳಿಗೆ ಕನಿಷ್ಠ 150 ರೂ. ದಂಡ ಕಟ್ಟಬೇಕು. ಹಾಗೇ ಬೇರೆ ಕಡೆ ನಗದು ಡೆಪಾಸಿಟ್ ಮಾಡಿದ್ರೆ 1 ಸಾವಿರ ರೂ.ಗೆ 5 ರೂಪಾಯಿಯಂತೆ (ಕನಿಷ್ಟ 150 ರೂ.) ಬ್ರಾಂಚ್‍ಗಳಲ್ಲಿ ಶುಲ್ಕ ಕಟ್ಟಬೇಕು. ಕ್ಯಾಶ್ ಸ್ವೀಕೃತಿ ಮಷೀನ್‍ಗಳಲ್ಲಿ ಡೆಪಾಸಿಟ್ ಮಾಡಿದ್ರೆ ತಿಂಗಳ ಮೊದಲ ಡೆಪಾಸಿಟ್‍ಗೆ ಯಾವುದೇ ಶುಲ್ಕ ಇಲ್ಲ. ನಂತರದ ಡೆಪಾಸಿಟ್‍ಗೆ 1 ಸಾವಿರ ರೂ.ಗೆ 5 ರೂಪಾಯಿಯಂತೆ ಕನಿಷ್ಠ 150 ರೂ. ಶುಲ್ಕ ತೆರಬೇಕು.

    ಆಕ್ಸಿಸ್ ಬ್ಯಾಂಕ್: ಆಕ್ಸಿಸ್ ಬ್ಯಾಂಕ್‍ಗಳಲ್ಲಿ ತಿಂಗಳ ಮೊದಲ 5 ನಗದು ವ್ಯವಹಾರ ಅಥವಾ 10 ಲಕ್ಷ ರೂ.ವರಗಿನ ನಗದು ಡೆಪಾಸಿಟ್ ಅಥವಾ ವಿತ್‍ಡ್ರಾವಲ್ ಉಚಿತವಾಗಿರುತ್ತದೆ. ನಂತರದ ವ್ಯವಹಾರಕ್ಕೆ 1 ಸಾವಿರ ರೂ. ಗೆ 5 ರೂಪಾಯಿಯಂತೆ ಕನಿಷ್ಟ 150 ರೂ. ಶುಲ್ಕವನ್ನು ತೆರಬೇಕಾಗುತ್ತದೆ.

    ನಗದು ವ್ಯವಹಾರಕ್ಕೆ ಕಡಿವಾಣ ಹಾಕುವುದು ಹಾಗೂ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವುದು ಈ ನಿಯಮದ ಉದ್ದೇಶ ಎನ್ನಲಾಗಿದೆ. ಉಳಿದ ಬ್ಯಾಂಕ್‍ಗಳೂ ಇದೇ ನಿಯಮವನ್ನು ಜಾರಿ ಮಾಡುವ ಸಾಧ್ಯತೆಯಿದೆ. ಈ ನಿಯಮ ಜಾರಿ ನಿರ್ಧಾರ ಮುಂಚೂಣಿಯಲ್ಲಿರುವ ಬ್ಯಾಂಕ್‍ಗಳು ಮಾಡಿರುವ ತೀರ್ಮಾನವಾಗಿದೆಯೇ ಹೊರತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಕೇಂದ್ರ ಸರ್ಕಾರ ಮಾಡಿರುವುದಲ್ಲ. ಈ ಮೂರು ಬ್ಯಾಂಕ್‍ಗಳು ದಂಡ ಹಾಕುವುದಕ್ಕೆ ಆರ್‍ಬಿಐ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಆದ್ರೆ ಯಾವುದೇ ಹಣಕಾಸಿನ ವ್ಯವಹಾರ 3 ಲಕ್ಷ ಮೀರಿದ್ರೆ ದಂಡ ತೆರಬೇಕಾಗುತ್ತದೆ ಅಂತಾ ಕೇಂದ್ರ ಸರ್ಕಾರ ಬಜೆಟ್‍ನಲ್ಲೇ ಘೋಷಣೆ ಮಾಡಿತ್ತು.