Tag: Ice Cream

  • ಸಹೋದರಿಗಾಗಿ ಆರ್ಡರ್ ಮಾಡಿದ್ದ ಐಸ್‍ಕ್ರೀಮ್‍ನಲ್ಲಿತ್ತು ಮನುಷ್ಯನ ಕೈಬೆರಳು – ಮುಂದೇನಾಯ್ತು?

    ಸಹೋದರಿಗಾಗಿ ಆರ್ಡರ್ ಮಾಡಿದ್ದ ಐಸ್‍ಕ್ರೀಮ್‍ನಲ್ಲಿತ್ತು ಮನುಷ್ಯನ ಕೈಬೆರಳು – ಮುಂದೇನಾಯ್ತು?

    ಮುಂಬೈ: ತನ್ನ ಸಹೋದರಿಗಾಗಿ ವ್ಯಕ್ತಿಯೊಬ್ಬರು ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ್ದ ಐಸ್‍ಕ್ರೀಮ್‍ನಲ್ಲಿ (Ice Cream) ಮನುಷ್ಯನ ಕೈಬೆರಳು ಪತ್ತೆಯಾಗಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.

    ಮುಂಬೈನ ಮಲಾಡ್‍ನ ಡಾ.ಸೆರಾವೊ ಎಂಬ ವ್ಯಕ್ತಿ, ಆನ್‍ಲೈನ್‍ನಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಈ ವೇಳೆ ಅವರ ಸಹೋದರಿಗಾಗಿ ಐಸ್‍ಕ್ರೀಮ್ ಅನ್ನೂ ಆರ್ಡರ್ ಮಾಡಿದ್ದರು. ಬಳಿಕ ಆರ್ಡರ್ ಮಾಡಿದ್ದ ಐಸ್‍ಕ್ರೀಮ್ ಬರುತ್ತಿದ್ದಂತೆ ಓಪನ್ ಮಾಡಿದ್ದಾರೆ. ಈ ವೇಳೆ, ಅವರಿಗೆ ಬೆರಳು ನಟ್ಸ್ ರೀತಿ ಕಾಣಿಸಿಕೊಂಡಿದೆ. ಬಳಿಕ ಅದು ಮನುಷ್ಯನ ಕೈ ಬೆರಳು ಎಂಬುದು ಅವರ ಅರಿವಿಗೆ ಬಂದಿದೆ. ಇದನ್ನೂ ಓದಿ: ನಾಗ್ಪುರದ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಬ್ಲಾಸ್ಟ್ – ಐವರ ದುರ್ಮರಣ!

    ಆನ್‍ಲೈನ್‍ನಲ್ಲಿ ಹಂಚಿಕೊಳ್ಳಲಾದ ಫೋಟೋದಲ್ಲಿ ಐಸ್‍ಕ್ರೀಮ್‍ನಲ್ಲಿ ಕೈಬೆರಳಿರುವುದು ಕಾಣಿಸುತ್ತದೆ. ಈ ಬಗ್ಗೆ ಸೆರಾವೊ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಐಸ್ ಕ್ರೀಮ್‍ನ್ನು ಮತ್ತು ಬೆರಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

    ಈ ರೀತಿ ಕೈ ಬೆರಳು ಪತ್ತೆಯಾಗಿರುವುದು ದೊಡ್ಡ ಅಪರಾಧದ ಶಂಕೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೋಡಾ ಟೆರರಿಸ್ಟ್ ಅಟ್ಯಾಕ್ – 4 ಉಗ್ರರ ರೇಖಾಚಿತ್ರ ಬಿಡುಗಡೆ

  • ಚನ್ನಪಟ್ಟಣದಲ್ಲಿ ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಚನ್ನಪಟ್ಟಣದಲ್ಲಿ ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ರಾಮನಗರ: ಅವಧಿ ಮುಗಿದ ಐಸ್ ಕ್ರೀಂ (Ice Cream) ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಚನ್ನಪಟ್ಟಣ (Channapatna) ಟಿಪ್ಪುನಗರದ ಮಿಲನ್ ಶಾದಿಮಹಲ್‌ನಲ್ಲಿ ನಡೆದಿದೆ.

    ಮಿಲನ್ ಶಾದಿಮಹಲ್‌ನಲ್ಲಿ ಭಾನುವಾರ ನಡೆದ ಮದುವೆ ಸಮಾರಂಭವೊಂದರಲ್ಲಿ 80ಕ್ಕೂ ಹೆಚ್ಚು ಮಂದಿ ಐಸ್ ಕ್ರೀಂ ಸೇವಿಸಿದ್ದರು. ಈ ಪೈಕಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಸಂತ್ರರನ್ನು ಚಿಕಿತ್ಸೆಗಾಗಿ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸಂತ್ರಸ್ತೆಯರಿಗಾಗಿ ಸಹಾಯವಾಣಿ ತೆರೆದ ಎಸ್‌ಐಟಿ

    ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ ಘಟನೆಯಿಂದ ಸ್ಥಳೀಯರು ಗಾಬರಿಗೊಂಡಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಯುವತಿಯ ಮೇಲೆ ಅತ್ಯಾಚಾರವೆಸಗಿ ವೀಡಿಯೋ ಹರಿಬಿಟ್ಟ ನಾಲ್ವರು ಅಪ್ರಾಪ್ತರು

  • ಐಸ್‌ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್ ಕುಡಿಯಬೇಡಿ – ಲಾ ಕಾಲೇಜ್‌ ಸೂಚನಾ ಪತ್ರ ವೈರಲ್‌ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ನೋಟಿಸ್‌

    ಐಸ್‌ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್ ಕುಡಿಯಬೇಡಿ – ಲಾ ಕಾಲೇಜ್‌ ಸೂಚನಾ ಪತ್ರ ವೈರಲ್‌ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ನೋಟಿಸ್‌

    ಚಿಕ್ಕಬಳ್ಳಾಪುರ: ಐಸ್‌ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್, ಫ್ರಿಡ್ಜ್ ವಾಟರ್ ಕುಡಿಯಬೇಡಿ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕಾನೂನು ಕಾಲೇಜು ಕಟ್ಟಪ್ಪಣೆ ಹೊರಡಿಸಿದ ಸೂಚನಾ ಪತ್ರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ.

    ಮೊದಲು ಕಳುಹಿಸಿದ ಸೂಚನಾ ಪತ್ರ

    ಚಿಕ್ಕಬಳ್ಳಾಪುರ (Chikkaballaoura) ನಗರದ ವಾಪಸಂದ್ರ ಬಡವಾವಣೆಯಲ್ಲಿರುವ ಶ್ರೀ ನಿಡುಮಾಮಿಡಿ ಶಾಖಾ ಮಠದ ಉಸ್ತುವಾರಿಯ ಶ್ರೀ ಸಿದ್ದರಾಮಯ್ಯ ಕಾನೂನು ಮಹಾವಿದ್ಯಾಲಯ (Sri Siddaramaiah Law College) ಇಂತಹದೊದು ಎಡವಟ್ಟು ಮಾಡಿದೆ.

    ಮೇ 2 ರಂದು ಸಂಸ್ಥೆಯ ಆಡಳಿತಾಧಿಕಾರಿ ಶಿವಜ್ಯೋತಿ ನಿರ್ದೇಶನದ ಮೇರೆಗೆ ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾರ ಉದಯ್ ಶಂಕರ್ ಈ ಮುಖ್ಯ ಸೂಚನಾ ಪತ್ರ ಹೊರಡಿಸಿದ್ದು ಈಗ ಇಡೀ ರಾಜ್ಯಾದ್ಯಾಂತ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಆರೋಗ್ಯ ಇಲಾಖೆಯಿಂದ ನೋಟಿಸ್‌

    ಕೋವಿಡ್ (Covid) ಸಮಯದಲ್ಲಿ ಪಡೆದ ಕೋವಿಶೀಲ್ಡ್ ವ್ಯಾಕ್ಸಿನ್ (Covishield Vaccine) ಪಡೆದವರು ತಂಪು ಪಾನೀಯಗಳು, ಫ್ರಿಡ್ಜ್‌ ನೀರು, ಐಸ್ ಕ್ರೀಂ ತಿನ್ನುವುದರಿಂದ ಹೃದಯಾಘಾತವಾಗುವ ಸಾಧ್ಯತೆಯಿದೆ. ಹೀಗಾಗಿ ಕಡ್ಡಾಯವಾಗಿ ಕೂಲ್ ಡ್ರಿಂಕ್ಸ್ ಐಸ್ ಕ್ರೀಂ ಫ್ರಿಡ್ಜ್ ವಾಟರ್ ಕುಡಿಯದಂತೆ ತಿಳಿಸಲಾಗಿದೆ.

    ಸೂಚನಾ ಪತ್ರದಲ್ಲಿ ಆರೋಗ್ಯ ಇಲಾಖೆಯ (Health Department) ಮಾಹಿತಿ ತಿಳುವಳಿಕೆ ಪ್ರಕಾರ ಎಂದು ಉಲ್ಲೇಖಿಸಲಾಗಿದ್ದು ಇದು ಬಹುತೇಕ ಸತ್ಯ ಎಂದು ನಂಬಿ ಜನ ಮತ್ತಷ್ಟು ಮಂದಿ ಕಳುಹಿಸುತ್ತಿದ್ದಾರೆ. ವೈರಲ್‌ ಆದ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆಯ ಗಮನಕ್ಕೂ ಬಂದು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಿದ್ದರಾಮಯ್ಯ ಕಾನೂನು ಕಾಲೇಜಿಗೆ ಭೇಟಿ ನೀಡಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ನೋಟಿಸ್ ನೀಡಿದ್ದಾರೆ.

    ಟಿವಿ ಮಾಧ್ಯಮ/ ಜಾಹೀರಾತು ಎಂದು ಬದಲಾಯಿಸಿ ಕಾಲೇಜಿನಿಂದ ಮತ್ತೊಂದು ಸೂಚನೆ ಪ್ರಕಟ

    ನೋಟಿಸ್‌ಗೆ ಸಮರ್ಪಕ ಉತ್ತರ ನೀಡದ ಆಡಳಿತಾಧಿಕಾರಿ ಶಿವಜ್ಯೋತಿ ಮತ್ತೆ ಅದೇ ಆದೇಶದ ಆರಂಭದಲ್ಲಿ ಆರೋಗ್ಯ ಇಲಾಖೆ ಎಂಬುದುನ್ನು ತೆಗೆದು ಹಾಕಿ ಟಿವಿ ಮಾಧ್ಯಮ ಹಾಗೂ ಜಾಹೀರಾತು ಮಾಹಿತಿ ಪ್ರಕಾರ ಎಂದು ಬರೆದು ಅದನ್ನೇ ಮರು ಆದೇಶ ಹೊರಡಿಸಿದ್ದಾರೆ.

    ಈಗಲಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನ ಹರಿಸಿ ಈ ಸೂಚನಾ ಪತ್ರದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ.

  • ಶ್ರೀರಂಗಪಟ್ಟಣದಲ್ಲಿ ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಸಾವು

    ಶ್ರೀರಂಗಪಟ್ಟಣದಲ್ಲಿ ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಸಾವು

    ಮಂಡ್ಯ: ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಪೂಜಾ, ಪ್ರಸನ್ನ ದಂಪತಿ ಮಕ್ಕಳಾದ ತ್ರಿಶುಲ್ ಹಾಗೂ ತ್ರಿಶ ಸಾವನ್ನಪ್ಪಿದ ಕಂದಮ್ಮಗಳು. ನಿನ್ನೆ ಮಧ್ಯಾಹ್ನ ಮಕ್ಕಳಿಗೆ ತಾಯಿ ಐಸ್‌ಕ್ರೀಂ ತಿನ್ನಿಸಿದ್ದರು. ತಳ್ಳುವ ಗಾಡಿಯಾತನಿಂದ ಐಸ್‌ಕ್ರೀಂ ಕೊಡಿಸಿದ್ದರು. ಆನಂತರ ಮಕ್ಕಳು ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

    ಗ್ರಾಮದಲ್ಲಿ ಬೇರೆ ಮಕ್ಕಳು ಕೂಡ ಐಸ್‌ಕ್ರೀಂ ‌ತಿಂದಿದ್ದರು. ಐಸ್‌ಕ್ರೀಂ ತಿಂದ ಬೇರೆ ಯಾರಿಗೂ ತೊಂದರೆ ಆಗಿಲ್ಲ. ಅವಳಿ ಮಕ್ಕಳ ಸಾವಿಗೆ ಇದುವರೆಗೂ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ.

    ಮಿಮ್ಸ್ ಆಸ್ಪತ್ರೆಗೆ ಶವಗಳನ್ನು ರವಾನಿಸಲಾಗಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಲಂಡನ್‌, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ

  • ಮಿಡ್‌ನೈಟ್ ಆಸೆ – ಪಾರ್ಲರ್ ಬೀಗ ಮುರಿದು ನಾಲ್ಕೇ ಐಸ್‌ಕ್ರೀಮ್ ಕದ್ದು ಪರಾರಿಯಾದ ಕಳ್ರು

    ಮಿಡ್‌ನೈಟ್ ಆಸೆ – ಪಾರ್ಲರ್ ಬೀಗ ಮುರಿದು ನಾಲ್ಕೇ ಐಸ್‌ಕ್ರೀಮ್ ಕದ್ದು ಪರಾರಿಯಾದ ಕಳ್ರು

    ಬೆಂಗಳೂರು: ಮಧ್ಯ ರಾತ್ರಿಯಲ್ಲಿ ಐಸ್‌ಕ್ರೀಮ್ (Ice Cream) ತಿನ್ನೋ ಆಸೆಗೆ ಪಾರ್ಲರ್‌ಗೆ ಕನ್ನ ಹಾಕಿದ ಕಳ್ಳರು ನಾಲ್ಕೇ ನಾಲ್ಕು ಐಸ್‌ಕ್ರೀಮ್ ಕದ್ದು ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ (Madanayakanahalli) ಬಳಿಯ ದೊಂಬರಹಳ್ಳಿಯಲ್ಲಿ ನಡೆದಿದೆ.

    ಕಳ್ಳರು ಮಧ್ಯರಾತ್ರಿ 2 ಗಂಟೆ ವೇಳೆ ಐಸ್‌ಕ್ರೀಮ್ ಅಂಗಡಿಗೆ ಕನ್ನ ಹಾಕಿದ್ದಾರೆ. ಆಟೋದಲ್ಲಿ ಬಂದ ನಾಲ್ವರು ಪಾರ್ಲರ್‌ನ ರೋಲಿಂಗ್ ಶೆಟರ್ ಬೀಗ ಮುರಿದು ಒಳ ನುಗ್ಗಿದ್ದಾರೆ. ನಾಲ್ಕು ಜನರು 4 ಐಸ್‌ಕ್ರೀಂ ಎತ್ತಿಕೊಂಡು ಸುಮಾರು 100 ರೂ.ಯ ಐಸ್‌ಕ್ರೀಮ್ ಅನ್ನು ತಿಂದಿದ್ದಾರೆ. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್‌ಗೆ ಬಂಪರ್ – ಟೊಮೆಟೊ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಕೆ

    ನಂತರ ಮನಸ್ಸು ಬದಲಾಯಿಸಿದ ಖದೀಮರು ಅಂಗಡಿಯ ಕ್ಯಾಷಿಯರ್ ಕೌಂಟರ್‌ಗೂ ಕೈ ಹಾಕಿ 200 ರೂ. ಚಿಲ್ಲರೆ ಹಣದೊಂದಿಗೆ ಪರಾರಿಯಾಗಿದ್ದಾರೆ. ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ದೆಹಲಿ ಪ್ರವಾಹ – ಸುಪ್ರೀಂ ಕೋರ್ಟ್‍ವರೆಗೂ ಉಕ್ಕಿ ಹರಿದ ಯಮುನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಸಕ ಅಭಯ್ ಪಾಟೀಲ್‍ರಿಂದ ಶಾಲಾ ಮಕ್ಕಳಿಗೆ ಐಸ್‍ಕ್ರೀಂ ವಿತರಣೆ

    ಶಾಸಕ ಅಭಯ್ ಪಾಟೀಲ್‍ರಿಂದ ಶಾಲಾ ಮಕ್ಕಳಿಗೆ ಐಸ್‍ಕ್ರೀಂ ವಿತರಣೆ

    ಬೆಳಗಾವಿ: ಶಾಸಕ ಅಭಯ್ ಪಾಟೀಲ್ (Abhay Patil) ಬೆಂಬಲಿಗರಿಂದ ಶಾಸಕರ ಭಾವಚಿತ್ರವಿರುವ ಪೋಸ್ಟರ್ ನೀಡಿ ಶಾಲಾ ಮಕ್ಕಳಿಗೆ ಐಸ್ ಕ್ರೀಂ (Ice cream) ವಿತರಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.

    ಬೆಳಗಾವಿ (Belagavi) ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಹಲವು ಶಾಲಾ ಆವರಣದಲ್ಲಿ ಶಾಸಕರ ಬೆಂಬಲಿಗರಿಂದ ಮಕ್ಕಳಿಗೆ ಐಸ್ ಕ್ರೀಂ ಉತ್ಸವ ಹೆಸರಿನಲ್ಲಿ ವಿತರಣೆ ಮಾಡಲಾಗುತ್ತಿದೆ. ಶಾಸಕರ ಒತ್ತಾಯಕ್ಕೆ ಮಣಿದು ಶಾಲಾ ಆಡಳಿತ ಮಂಡಳಿ ಐಸ್ ಕ್ರೀಂ ವಿತರಣೆ ಮಾಡಲು ಅನುಮತಿ ನೀಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಷ್ಕರಕ್ಕೂ ಮೊದಲೇ ಜಯ – KPTCL, ESCOM ನೌಕರರ ವೇತನ ಹೆಚ್ಚಳ

    ಪೋಸ್ಟರ್ ಕೆಳಗೆ ನೀಡಿರುವ ಅಂಗಡಿಗಳಲ್ಲಿ ಕೂಪನ್ ನೀಡಿ ಐಸ್ ಕ್ರೀಂ ಪಡೆಯಲು ಮಕ್ಕಳಿಗೆ ಸೂಚನೆ ಕೊಡಲಾಗಿದೆ. ಚುನಾವಣೆ (Election) ಹೊತ್ತಲ್ಲಿ ಆಮಿಷ ಒಡ್ಡದಂತೆ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದಾರೆ. ಆದರೆ ಬೆಳಗಾವಿಯಲ್ಲಿ ರಾಜಾರೋಷವಾಗಿ ಮಿಕ್ಸರ್, ಗ್ರೈಂಡರ್, ಟಿಫಿನ್ ಬಾಕ್ಸ್, ಐಸ್ ಕ್ರೀಂ ಆಮಿಷ ಒಡ್ಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದನ್ನೂ ಓದಿ: 10 ಕ್ಷೇತ್ರಗಳಿಂದ ನನಗೆ ಆಹ್ವಾನ, ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ: ಡಿ.ಕೆ.ಸುರೇಶ್

  • ಇನ್ಮುಂದೆ ಶಾಲೆಗಳ ಮುಂದೆ ಮಾರುವಂತಿಲ್ಲ ಐಸ್‌ಕ್ರೀಮ್, ಚಾಟ್ ಫುಡ್ – ಇಲ್ಲಿದೆ ವಿವರ

    ಇನ್ಮುಂದೆ ಶಾಲೆಗಳ ಮುಂದೆ ಮಾರುವಂತಿಲ್ಲ ಐಸ್‌ಕ್ರೀಮ್, ಚಾಟ್ ಫುಡ್ – ಇಲ್ಲಿದೆ ವಿವರ

    ಲಕ್ನೋ: ಶಾಲೆ ಹೊರಗೆ ಇನ್ಮುಂದೆ ವಿದ್ಯಾರ್ಥಿಗಳು ಫಾಸ್ಟ್ ಫುಡ್, ಐಸ್‌ಕ್ರೀಮ್, ಬಲೂನ್ ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಲಕ್ನೋ ಆಡಳಿತವು ಶಾಲೆಗಳ ಹೊರಗೆ ಐಸ್ ಕ್ರೀಮ್ ಮತ್ತು ಫಾಸ್ಟ್ ಫುಡ್ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

    ವಿವಿಧ ಶಾಲೆಗಳ ನೋಡಲ್ ಅಧಿಕಾರಿಗಳು ಮತ್ತು ನಗರ ಸಂಚಾರ ಪೊಲೀಸರು ಮತ್ತು ಜಿಲ್ಲಾಡಳಿತದ ನಡುವಿನ ಚರ್ಚೆಯ ನಂತರ ಪೀಕ್ ಅವರ್‌ನಲ್ಲಿ ಶಾಲೆಯ ಸುತ್ತಮುತ್ತ ಟ್ರಾಫಿಕ್ ತಪ್ಪಿಸಲು ಮಾರ್ಗಸೂಚಿಗಳನ್ನು ಹೊರಡಿಸಿತು. ಇದನ್ನೂ ಓದಿ: ಮೂರು ಮುದ್ದಾದ ಹುಲಿ ಮರಿಗಳನ್ನ ಅಮ್ಮನಂತೆ ಅಪ್ಪಿ ಮುದ್ದಾಡುವ ಚಿಂಪಾಂಜಿ 

    ಮಾರ್ಗಸೂಚಿಯಲ್ಲಿ ಏನಿದೆ?
    ಶಾಲಾ ಸಮಯದ ನಂತರ ಟ್ರಾಫಿಕ್ ಜಾಮ್ ಉಂಟುಮಾಡುವ ಐಸ್ ಕ್ರೀಮ್, ಚಾಟ್, ಬಲೂನ್ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಲು ಶಾಲೆಗಳ ಸುತ್ತಲೂ ಯಾವುದೇ ಅಂಗಡಿಗಳಿಗೆ ಅನುಮತಿಸಲಾಗುವುದಿಲ್ಲ.

    ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡುವ ಬದಲು ನೇರವಾಗಿ ತಮ್ಮ ಶಾಲಾ ಕ್ಯಾಬ್ ಅಥವಾ ಬಸ್‍ನಲ್ಲಿ ಕುಳಿತುಕೊಳ್ಳಬೇಕು. ಶಾಲೆ ಮುಗಿಯುವ ಮುನ್ನವೇ ಮಕ್ಕಳಿಗಾಗಿ ಕಾಯುವ ಪೋಷಕರು ತಮ್ಮ ವಾಹನಗಳನ್ನು ಶಾಲೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ನಿಲ್ಲಿಸಬೇಕು. ಇದನ್ನೂ ಓದಿ:  ಆರೋಗ್ಯ ಸಚಿವರಿಂದ ಛೀಮಾರಿ – ಪಂಜಾಬ್ ಮಾಜಿ ಸಿಎಂ ಅತ್ತಿಗೆ ರಾಜೀನಾಮೆ 

    ಶಾಲೆಯ ಸಮಯ ಮುಗಿದ ತಕ್ಷಣ, ಅವರು ಶಾಲೆಯ ಗೇಟ್ ಒಳಗೆ ಬರಬೇಕು. ಹೆಚ್ಚು ಸಮಯ ತೆಗೆದುಕೊಳ್ಳದೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು. ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಯಾವುದೇ ವಾಹನ ನಿಲುಗಡೆ ಮಾಡುವಂತಿಲ್ಲ. ಪೋಷಕರು-ಶಿಕ್ಷಕರ ಸಭೆಯ ಸಮಯದಲ್ಲಿ ಮಾರ್ಗಸೂಚಿಗಳ ಬಗ್ಗೆ ಶಾಲೆಗಳು ಪೋಷಕರಿಗೆ ತಿಳಿಸಬೇಕು ಎಂದು ಆದೇಶವನ್ನು ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಕ್ಕಳಿಗೆ ಐಸ್ ಕ್ರೀಂ ನೀಡದ್ದಕ್ಕೆ ಅಂಗಡಿ ಮೇಲೆ ದಾಳಿ ಮಾಡಿದ ತಂದೆ

    ಮಕ್ಕಳಿಗೆ ಐಸ್ ಕ್ರೀಂ ನೀಡದ್ದಕ್ಕೆ ಅಂಗಡಿ ಮೇಲೆ ದಾಳಿ ಮಾಡಿದ ತಂದೆ

    ಮುಂಬೈ: ಅಂಗಡಿಯವರು ಐಸ್ ಕ್ರೀಂ ಕೊಡಲು ನಿರಾಕರಿಸಿದರೆ ಜನರು ಏನು ಮಾಡಬಹುದು? ಸುಮ್ಮನೆ ಹೋಗುತ್ತಾರೆ ಅಥವಾ ಬೇರೆ ಅಂಗಡಿಯನ್ನು ಹುಡುಕುತ್ತಾರೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಕ್ಕಳಿಗೆ ಐಸ್ ಕ್ರೀಂ ಕೊಡಲಿಲ್ಲ ಎಂದು ಅಂಗಡಿ ಮೇಲೆ ದಾಳಿ ಮಾಡಿರುವ ಆಫಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

    ಮುಂಬೈ ಉಪನಗರ ವಸಾಯಿಯಲ್ಲಿ ವ್ಯಕ್ತಿಯೊಬ್ಬರು ಮಧ್ಯರಾತ್ರಿ ಎರಡು ಗಂಟೆಗೆ ಐಸ್‍ಕ್ರೀಂ ನೀಡುವಂತೆ ಮಾರಾಟ ಮಾಡುವ ಮಾಲೀಕನನ್ನು ಕೇಳಿದ್ದಾನೆ. ಆದರೆ ಈ ವೇಳೆ ಅವರು ಕೊಡಲು ನಿರಾಕರಿಸಿದ್ದು, ಪರಿಣಾಮ ಆ ವ್ಯಕ್ತಿ ಅಂಗಡಿಯ ಸಂಪೂರ್ಣ ಐಸ್ ಕ್ರೀಮ್ ಸ್ಟಾಕ್‍ನ ಫ್ರೀಜರ್ ಅನ್ನು ಒಡೆದು ಹಾನಿಗೊಳಿಸಿರುವ ಆಫಾತಕಾರಿ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ

    ಡಿಸೆಂಬರ್ 19 ರಂದು ನಸುಕಿನ ಜಾವ 2:11 ರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೊಬ್ಬ ಐಸ್ ಕ್ರೀಂ ಅಂಗಡಿ ಮಾಲೀಕರೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತೆ. ಆ ವ್ಯಕ್ತಿಯ ಹಿಂದೆ ಹುಡುಗಿ ಮತ್ತು ಚಿಕ್ಕ ಮಗು ನಿಂತಿರುರುವುದನ್ನು ದೃಶ್ಯದಲ್ಲಿ ನೋಡಬಹುದು.

    ಆ ವ್ಯಕ್ತಿ ನಂತರ ಮಕ್ಕಳನ್ನು ಪಕ್ಕಕ್ಕೆ ಹೋಗುವಂತೆ ಸೂಚಿಸಿ ವೆಲ್‍ನೆಸ್ ಮೆಡಿಕಲ್ ಸ್ಟೋರ್‍ನ ಹೊರಗೆ ಇರಿಸಲಾಗಿರುವ ಮೂರು ಐಸ್‍ಕ್ರೀಂ ಫ್ರೀಜರ್‍ಗಳನ್ನು ಸಮೀಪಿಸುತ್ತಾನೆ. ಇದರಿಂದ ಮಕ್ಕಳು ಏನು ತಿಳಿಯದೆ ಅಲ್ಲಿಂದ ಸುಮ್ಮನೆ ಹೋಗುತ್ತಾರೆ. ಕೊನೆಯದಾಗಿ ಆ ವ್ಯಕ್ತಿ ಅಂಗಡಿಯವರಿಗೆ ಎಚ್ಚರಿಕೆಯನ್ನು ನೀಡುತ್ತಾನೆ. ಅಲ್ಲೇ ಇದ್ದ ರಾಡ್ ಅನ್ನು ತೆಗೆದುಕೊಂಡು ಮೂರು ಫ್ರೀಜರ್‍ನ ಗಾಜನ್ನು ಆ ರಾಡಿನಿಂದ ಒಡೆದು ಹಾಕುತ್ತಾನೆ. ನಂತರ ಅಲ್ಲಿಂದ ಆ ರಾಡ್ ಅನ್ನು ಎಸೆದು ಕೋಪದಿಂದ ಹೊರಟು ಹೋಗುತ್ತಾನೆ. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

    ಆ ವ್ಯಕ್ತಿ ಏಕೆ ಈ ರೀತಿ ಮಾಡಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಕರಣ ಕುರಿತು ತಡವಾಗಿ ಬೆಳಕಿಗೆ ಬಂದಿದ್ದು, ಪೂರ್ತಿಯಾಗಿ ತನಿಖೆಯಾಗಿಲ್ಲ. ಪ್ರಸ್ತುತ ವ್ಯಕ್ತಿ ವಿರುದ್ಧ ಮಾಣಿಕಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

  • ಐಸ್ ಕ್ರೀಂ ತಣ್ಣಗಾಗಿದೆ, ಹಣ ವಾಪಸ್ ಕೊಡಿ: ಗ್ರಾಹಕ

    ಐಸ್ ಕ್ರೀಂ ತಣ್ಣಗಾಗಿದೆ, ಹಣ ವಾಪಸ್ ಕೊಡಿ: ಗ್ರಾಹಕ

    ವಾಷಿಂಗ್ಟನ್: ತಣ್ಣಗಾದ ಐಸ್ ಕ್ರೀಂ ಕೊಟ್ಟಿದ್ದಕ್ಕೆ ರೆಸ್ಟೋರೆಂಟ್‍ನಿಂದ ಗ್ರಾಹಕ ಹಣ ವಾಪಾಸ್ ಕೇಳಿರುವ ವಿಚಿತ್ರ ಘಟನೆಯೊಂದು ಸುದ್ದಿಯಾಗಿದೆ.

    ಚೀಸ್, ಐಸ್​ ಕ್ರೀಂ, ಮಿಲ್ಕ್​ಶೇಕ್  ಸೇರಿದಂತೆ ಗ್ರಾಹಕನೊಬ್ಬ ಆರ್ಡರ್ ಮಾಡಿದ್ದನು. ಈ ತಿನಿಸುಗಳು ತಣ್ಣಗಾಗಿದೆ, ಹಣ ಮರು ಪಾವತಿಸಿ ಎಂದು ಗ್ರಾಹಕನನ್ನ ಬಳಿ  ಕ್ಯಾತೆ ತೆಗೆದಿದ್ದನು ಎಂದು ರೆಸ್ಟೋರೆಂಟ್‍ ಮಾಲೀಕ ಹಸನ್ ಹಬೀಬ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ

    ಇತ್ತೀಚೆಗೆ ಡೆಲಿವರಿ ಸೇವೆ ಬಗ್ಗೆ ಗ್ರಾಹಕರಿಂದ ಅತಿ ಹೆಚ್ಚು ದೂರುಗಳು ಬರುತ್ತಿದ್ದು, ಅವುಗಳಲ್ಲಿ ಕೆಲವು ವಿಚಿತ್ರವಾದ ಪ್ರಕರಣಗಳಾಗಿವೆ. ನಾಲ್ಕು ಮಿಲ್ಕ್​ಶೇಕ್, ಚೀಸ್‍ಕೇಕ್ ಮತ್ತು ಐಸ್​ಕ್ರೀಂ ಅನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರು ಅದಾದ 45 ನಿಮಿಷಗಳ ನಂತರ ಅವರು ಆಹಾರ ತಣ್ಣಗಿರುವ ಕಾರಣ ತಾವು ನೀಡಿದ ಹಣವನ್ನು ಮರುಪಾವತಿ ಮಾಡಬೇಕೆಂದು ದೂರು ನೀಡಿದರು. ಐಸ್‍ಕ್ರೀಂ, ಮಿಲ್ಕ್‍ಶೇಕ್, ಚೀಸ್ ಕೇಕ್ ಎಲ್ಲಾದರೂ ಬಿಸಿಯಾಗಿರುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಯುವಕನ ಜೊತೆಗೆ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

    ಕೆಲವೊಮ್ಮೆ ನಾವು ತಪ್ಪುಗಳನ್ನು ಮಾಡುತ್ತೇವೆ. ಟ್ರಾಫಿಕ್‍ನಿಂದಾಗಿ ಅಥವಾ ಇನ್ನಿತರ ಕಾರಣಗಳಿಂದ ಸರಿಯಾದ ಸಮಯದಲ್ಲಿ ಆಹಾರವನ್ನು ಡೆಲಿವರಿ ನೀಡಲು ಆಗುವುದಿಲ್ಲ. ಕೆಲವೊಮ್ಮೆ ನಾವು ಐಟಂಗಳನ್ನು ಕಳೆದುಕೊಳ್ಳುತ್ತೇವೆ ಅಥವಾ ತಪ್ಪು ಐಟಂ ಅನ್ನು ಕಳುಹಿಸುತ್ತೇವೆ. ಆದರೆ ಬದಲಿ ಐಟಂ ಅಥವಾ ಸಂಪೂರ್ಣ ಅರ್ಹ ಮರುಪಾವತಿಯೊಂದಿಗೆ ನಾವು ಅದನ್ನು ಗ್ರಾಹಕರಿಗೆ ಒಪ್ಪಿಸುತ್ತೇವೆ. ಆದರೆ cರು ಹೀಗೆ ವಿಚಿತ್ರವಾದ ಕಾರಣಗಳನ್ನು ನೀಡಿ ಹಣವನ್ನು ಮರುಪಾವತಿ ಮಾಡಲು ದೂರು ನೀಡುವುದು ಇತ್ತೀಚೆಗೆ ಹೆಚ್ಚಾಗಿದೆ. ಐಸ್‌ಕ್ರೀಂ ತಣ್ಣಗಿದೆ ಹಣ ವಾಪಸ್‌ ಕೊಡಿ ಎಂದು ಹೇಳಿದ್ದು,  ಆಶ್ಚರ್ಯವಾಗಿದೆ ಎಂದಿದ್ದಾರೆ.

  • ಶಿವನ ನೈವೇದ್ಯವಾಗಿ 10 ಕೆಜಿ ಐಸ್ ಕ್ರೀಮ್ ನೀಡಿದ ಭಕ್ತ

    ಶಿವನ ನೈವೇದ್ಯವಾಗಿ 10 ಕೆಜಿ ಐಸ್ ಕ್ರೀಮ್ ನೀಡಿದ ಭಕ್ತ

    ಹೈದರಾಬಾದ್: ಭಕ್ತನೊಬ್ಬ ಶಿವಲಿಂಗ ನೈವೇದ್ಯವಾಗಿ 10 ಕೆಜಿ ಐಸ್ ಕ್ರೀಮ್ ನೀಡಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದ ಪಾಲಕೋಲ್‍ನಲ್ಲಿ ನಡೆದಿದೆ.

    ಪಂಚರಾಮ ಕ್ಷೇತ್ರಗಳಲ್ಲಿ ಒಂದಾದ ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವನಿಗೆ, ಪಾಲಕೋಲಿನ ದೇವೆಲ್ಲ ನರಸಿಂಹ ಮೂರ್ತಿ ನೈವೇದ್ಯವಾಗಿ 10 ಕೆಜಿ ಐಸ್ ಕ್ರೀಮ್ ಅರ್ಪಿಸಿದ್ದು, ಸುತ್ತಮುತ್ತಲೂ ಬಹಳ ಪ್ರಸಿದ್ಧರಾಗಿದ್ದಾರೆ. ಐಸ್ ಕ್ರೀಮ್ ಅನ್ನು ಶಿವಲಿಂಗದ ಮೇಲೆ ಸುರಿಯಲಾಯಿತು. ಅದು ದೇವರ ಸುತ್ತಲೂ ತುಂಬಿಕೊಂಡಾಗ ಆ ಅದ್ಭುತ ದೃಶ್ಯವನ್ನು ವೀಕ್ಷಿಸಲು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ದೇವರ ಪ್ರಸಾದವಾಗಿ ತಣ್ಣನೆಯ ಐಸ್ ಕ್ರೀಮ್ ಅನ್ನು ಪಡೆಯಲು ಭಕ್ತರು  ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

    ಶಿವನಿಗೆ ಮಾಂಸದ ಅಡುಗೆಯನ್ನು ನೈವೇದ್ಯವಾಗಿ ನೀಡಿದ ಉದಾಹರಣೆಗಳೂ ಪುರಾಣದಲ್ಲಿದೆ. ಇನ್ನು ಕೆಲವರು ಪಾಯಸ, ಸಕ್ಕರೆ ಪೊಂಗಲ್ ಮತ್ತು ಹೂರಣವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಆದರೆ ಈ ಭಕ್ತ ಶಿವನ ನೈವೇದ್ಯಕ್ಕೆ ಐಸ್ ಕ್ರೀಮ್ ನೀಡಿರುವುದು ಎಲ್ಲಡೇ ಸುದ್ದಿಯಾಗುತ್ತಿದೆ. ಇದನ್ನೂ ಓದಿ: ಪತ್ನಿಯನ್ನು ಮನೆಗೆ ಕಳುಹಿಸದ ಅತ್ತೆಗೆ ಬ್ಲೇಡ್‌ನಿಂದ ಹಲ್ಲೆ ಮಾಡಿದ ಅಳಿಯ