Tag: I Phone

  • ಬೀದಿಯಲ್ಲಿ ಪೆನ್ನು ಮಾರ್ತಿದ್ದ ಬಾಲಕಿಗೆ ಐಫೋನ್ ಗಿಫ್ಟ್ ಕೊಟ್ರು ತೇಜ್ ಪ್ರತಾಪ್ ಯಾದವ್!

    ಬೀದಿಯಲ್ಲಿ ಪೆನ್ನು ಮಾರ್ತಿದ್ದ ಬಾಲಕಿಗೆ ಐಫೋನ್ ಗಿಫ್ಟ್ ಕೊಟ್ರು ತೇಜ್ ಪ್ರತಾಪ್ ಯಾದವ್!

    ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಒಂದೊಳ್ಳೆ ಕೆಲಸ ಮಾಡಿರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು, ಬೀದಿಗಳಲ್ಲಿ ಪೆನ್ನು ಮಾರಾಟ ಮಾಡ್ತಿದ್ದ ಬಡ ಕುಟುಂಬದ ಬಾಲಕಿಯೊಬ್ಬಳಿಗೆ ಐಫೋನ್ ಗಿಫ್ಟ್ ನೀಡಿದ್ದಾರೆ. ಇದರ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್

    ಶನಿವಾರ ಸಂಜೆ ತನ್ನ ಸ್ನೇಹಿತರೊಂದಿಗೆ ತೇಜ್ ಪ್ರತಾಪ್ ಪಾಟ್ನಾದ ಬೋರಿಂಗ್ ರೋಡ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಪುಟ್ಟ ಬಾಲಕಿಯೊಬ್ಬಳು ಪೆನ್ನು ಮಾರಾಟ ಮಾಡುತ್ತಿರುವುದು ತೇಜ್ ಕಣ್ಣಿಗೆ ಬಿದ್ದಿದೆ. ತಮ್ಮ ಗಮನಕ್ಕೆ ಬಂದ ಕೂಡಲೇ ಅಲ್ಲಿಗೆ ತೆರಳಿರುವ ತೇಜ್ ಪ್ರತಾಪ್, ಕೆಲ ಹೊತ್ತುಆಕೆಯ ಜೊತೆ ಮಾತುಕತೆ ನಡೆಸಿದ್ದಾರೆ.

    ಈ ವೇಳೆ ಬಾಲಕಿಗೆ ತನ್ನ ಮೊಬೈಲ್ ನಂಬರ್ ನೀಡಿ, ಸಹಾಯಕ್ಕಾಗಿ ಕರೆ ಮಾಡುವಂತೆ ತಿಳಿಸಿದ್ದಾರೆ. ಆಗ ಬಾಲಕಿ ತನ್ನ ಬಳಿ ಮೊಬೈಲ್ ಇಲ್ಲ ಎಂದು ಹೇಳಿದ್ದಾಳೆ. ಈ ಬೆನ್ನಲ್ಲೇ ಪಕ್ಕದ ಮೊಬೈಲ್ ಶಾಪ್‍ಗೆ ಬಾಲಕಿಯನ್ನ ಕರೆದುಕೊಂಡು ಹೋಗಿದ ತೇಜ್, ಆಕೆಗೆ 50 ಸಾವಿರ ರೂ. ಮೌಲ್ಯದ ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್

    ಗಿಫ್ಟ್ ಸಿಕ್ಕ ಬಳಿಕ ಬಾಲಕಿ ಇದನ್ನು ತನ್ನ ವಿದ್ಯಾಭ್ಯಾಸಕ್ಕಾಗಿ ಬಳಕೆ ಮಾಡಿಕೊಳ್ಳುವ ಭರವಸೆ ನೀಡಿದ್ದಾಳೆ. ಬಾಲಕಿಯ ಮಾತಿಗೆ ಫಿದಾ ಆದ ತೇಜ್, ಏನಾದರೂ ಸಹಾಯ ಬೇಕಿದ್ದರೆ ಕರೆ ಮಾಡುವಂತೆ ಹೇಳಿ ಅಲ್ಲಿಂದ ತೆರಳಿದ ಪ್ರಸಂಗ ನಡೆದಿದೆ.

  • ಆರ್ಡರ್ ಮಾಡಿದ್ದು ಐಫೋನ್, ಸಿಕ್ಕಿದ್ದು ಬಾರ್ ಸೋಪ್, 5ರೂ. ನಾಣ್ಯ – ವ್ಯಕ್ತಿ ಶಾಕ್

    ಆರ್ಡರ್ ಮಾಡಿದ್ದು ಐಫೋನ್, ಸಿಕ್ಕಿದ್ದು ಬಾರ್ ಸೋಪ್, 5ರೂ. ನಾಣ್ಯ – ವ್ಯಕ್ತಿ ಶಾಕ್

    ತಿರುವನಂತಪುರ: ಇ-ಕಾಮರ್ಸ್ ವೆಬ್ ಸೈಟ್‍ನಲ್ಲಿ ಆರ್ಡರ್ ಮಾಡಿದಾಗ ನಿಮಗೆ ತಪ್ಪಾದ ಪ್ರಾಡೆಕ್ಟ್ ಬರುವುದು ಹೊಸ ವಿಚಾರವೇನಲ್ಲ. ಸದ್ಯ ಕೇರಳದ ವ್ಯಕ್ತಿಯೋರ್ವ ಐಷಾರಾಮಿ ಐಫೋನ್ ಆರ್ಡರ್ ಮಾಡಿದ್ದು, ಅವರಿಗೆ ಐಫೋನ್ ಅಲ್ಲಿ ಪಾತ್ರೆ ತೊಳೆಯುವ ಸೋಪು ಮತ್ತು 5 ರೂ. ನಾಣ್ಯ ಸಿಕ್ಕಿದೆ.

    ಹೌದು ಅಲುವಾ ನಿವಾಸಿಯಾದ ನೂರುಲ್ ಅಮೀನ್, ಆರ್ಡರ್ ಮಾಡಿದ್ದ ಆಪಲ್ ಸ್ಮಾರ್ಟ್ ಫೋನ್‍ಗಾಗಿ ಕಾಯುತ್ತಿದ್ದರು. ಆದರೆ ಐಫೋನ್ ಬಾಕ್ಸ್‌ನಲ್ಲಿ ಸೋಪನ್ನು ಸ್ವೀಕರಿಸುತ್ತಾರೆ ಎಂಬುವುದನ್ನು ಎಂದೂ ಊಹಿಸಿರಲಿಲ್ಲ. ಇದನ್ನೂ ಓದಿ:  ಬೆಂಗಳೂರಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ಸಿದ್ಧ: ಜಗದೀಶ್

    5 rs coin

    ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ, ಹಸಿರು ಬಣ್ಣದ ವಿಮ್ ಡಿಶ್ ವಾಶ್ ಸೋಪ್ ಮತ್ತು 5 ರೂ. ನಾಣ್ಯ ಇರುವುದನ್ನು ಕಾಣಬಹುದಾಗಿದೆ. ನುರುಲ್ 70,900 ರೂ ಸ್ಮಾರ್ಟ್ ಫೋನ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಸ್ಮಾರ್ಟ್ ಫೋನ್ ಬದಲಾಗಿ ಪಾತ್ರೆ ತೊಳೆಯುವ ಸಾಬೂನನ್ನು ಪಡೆದಿದ್ದರು. ಹೀಗಾಗಿ ಎನ್‍ಆರ್‍ಐನಲ್ಲಿ ದೂರು ದಾಖಲಿಸಿ ನಂತರ ಅದೃಷ್ಟವಶಾತ್ ಪಾವತಿಸಿದ ಹಣ ಹಿಂಪಡೆದರು.

    ಅಮೀನ್ ಅವರು ಅಕ್ಟೋಬರ್ 12ರಂದು ಐಫೋನ್ ಬುಕ್ ಮಾಡಿದ್ದರು. ಅಕ್ಟೋಬರ್ 15ರಂದು ಆರ್ಡರ್ ಅನ್ನು ಸ್ವೀಕರಿಸಿದ್ದರು.ಇತ್ತೀಚೆಗೆ ಆನ್‍ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನೂ ಓದಿ: ಬಿಜೆಪಿಯವರ ಬ್ರಹ್ಮಾಂಡಗಳನ್ನು ಹೇಳ ಹೊರಟರೆ ಸಮಯ ಹಿಡಿಯುತ್ತೆ: ಪ್ರಜ್ವಲ್ ರೇವಣ್ಣ

    ಇದೀಗ ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಅಲ್ಲದೇ ನೂರುಲ್ ಸ್ವೀಕರಿಸಬೇಕಿದ್ದ ಫೋನ್ ಅನ್ನು ಜಾರ್ಖಂಡ್ ನಲ್ಲಿ ಸೆಪ್ಟೆಂಬರ್‌ನಿಂದ ಯಾರೋ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊಬೈಲ್ ನ ಐಎಂಇಐ ಸಂಖ್ಯೆಯಿಂದಾಗಿ ಇದೆಲ್ಲವನ್ನು ಕಂಡುಹಿಡಿಯಲು ಸಾಧ್ಯವಾಯಿತು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮೆಸೇಜ್, ಫೋಟೋಸ್ ಡಿಲೀಟ್ – ಸಂಜನಾಳ ಖತರ್ನಾಕ್ ಐಡಿಯಾಗೆ ಪೊಲೀಸ್ರು ಸುಸ್ತು

    ಮೆಸೇಜ್, ಫೋಟೋಸ್ ಡಿಲೀಟ್ – ಸಂಜನಾಳ ಖತರ್ನಾಕ್ ಐಡಿಯಾಗೆ ಪೊಲೀಸ್ರು ಸುಸ್ತು

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟಿ ಸಂಜನಾ ಗಲ್ರಾನಿ ಮಾಡಿರುವ ಖತರ್ನಾಕ್ ಐಡಿಯಾಗೆ ಪೊಲೀಸರೇ ದಂಗಾಗಿ ಹೋಗಿದ್ದಾರೆ.

    ಚಂದನವನದಲ್ಲಿ ಡ್ರಗ್ ಘಾಟು ಬರಲಾರಂಭಿಸಿದ ಮೊದಲ ದಿನದಿಂದಲೂ ಸಂಜನಾ ಗಲ್ರಾನಿ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದರು. ನಿನ್ನೆ ಯಾವುದೇ ನೋಟಿಸ್ ನೀಡದೇ ಏಕಾಏಕಿ ಸಂಜನಾಳ ಇಂದಿರಾನಗರದ ಮನೆ ಮೇಲೆ ಸಿಸಿಸಿಬಿ ಅಧಿಕಾರಿಗಳು ದಾಳಿ ಮಾಡಿ ಸಂಜನಾಳನ್ನು ವಶಕ್ಕೆ ಪಡೆದು ಅರೆಸ್ಟ್ ಮಾಡಿದ್ದಾರೆ.

    ವೇಳೆ ಸಂಜನಾ ಸಾಕ್ಷಿ ನಾಶ ಮಾಡಿದ್ದು, ತನ್ನ ಮೊಬೈಲ್‍ನಲ್ಲಿದ್ದ ಮೆಸೇಜ್, ಫೋಟೋಸ್ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಾಟ್ಸಪ್ ಗ್ರೂಪ್‍ಗಳನ್ನು ಡಿಲೀಟ್ ಮಾಡಿದ್ದಾರೆ. ಡಿಲೀಟ್ ಆದ ಮೆಸೇಜ್ ಗಳನ್ನು ಪೊಲೀಸರು ಸುಲಭವಾಗಿ ರಿಟ್ರೀವ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

    ಸಂಜನಾ ಐಫೋನ್ 11 ಪ್ರೋ ಬಳಸುತ್ತಿರುವ ಕಾರಣ ಕಷ್ಟ ಎಂದು ಪೊಲೀಸರು ಹೇಳುತ್ತಿದ್ದರು. ಆದರೆ ಪೊಲೀಸರು ಟೆಲಿಕಾಂ ಕಂಪನಿ ಬಳಿ ಕೇಳಿದರೆ ಎಲ್ಲ ಸಂದೇಶಗಳನ್ನು ನೀಡಬೇಕಾಗುತ್ತದೆ. ಸಂಜನಾ ಒಂದು ವೇಳೆ ವಾಟ್ಸಪ್ ಬ್ಯಾಕಪ್ ಮಾಡಲು ಒಪ್ಪದೇ ಇದ್ದಾಗ ಪೊಲೀಸರು ವಾಟ್ಸಪ್ ಕಂಪನಿ ಪತ್ರ ಬರೆದು ಮಾಹಿತಿ ನೀಡುವಂತೆ ಕೇಳಬೇಕಾಗುತ್ತದೆ.

    ನಟಿ ಸಂಜನಾ ಆಪ್ತ ರಾಹುಲ್ ಹೇಳಿಕೆಯಿಂದಾಗಿ ಮಂಗಳವಾರ ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾ ಮನೆ ಮೇಲೆ ದಾಳಿ ಮಾಡಿದ್ದರು. ಹಲವು ಗಂಟೆ ಶೋಧ ಕಾರ್ಯ ನಡೆಸಿ, ಸಂಜನಾರನ್ನು ಅರೆಸ್ಟ್ ಮಾಡಿದ್ದಾರೆ. ಎಫ್‍ಐಆರ್ ನಲ್ಲಿ ಸಂಜನಾರನ್ನು ಎ-14 ಎಂದು ಉಲ್ಲೇಖಿಸಲಾಗಿದೆ. ಡ್ರಗ್ ಮಾಫಿಯಾ ಜೊತೆ ನಂಟಿರುವ ಅನುಮಾನದ ಮೇಲೆ ತೀವ್ರ ವಿಚಾರಣೆ ನಡೆಸಲಾಗಿದೆ. ಮೆಡಿಕಲ್ ಚೆಕಪ್ ಬಳಿಕ ವಸಂತನಗರದ ಸ್ಪೆಷಲ್ ರಿಮ್ಯಾಂಡ್ ಕೋರ್ಟ್‍ಗೆ ಹಾಜರುಪಡಿಸಿ ಸಂಜನಾರನ್ನು ಐದು ದಿನ ಕಸ್ಟಡಿಗೆ ಪಡೆದುಕೊಂಡಿದೆ.

    ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ವಿರುದ್ಧ ಕಳೆದ ವಾರ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಹೀಗಾಗಿ ಸೂಕ್ತ ಸಾಕ್ಷ್ಯಕ್ಕಾಗಿ ಕಾಯುತ್ತಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಹಲವು ಮಾಹಿತಿಗಳನ್ನು ತಿಳಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‍ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಕಸ್ಟಡಿಯಲ್ಲಿರುವ ಸಂಜನಾ ಹೊಸ ವರೆಸೆಯನ್ನು ತೆಗೆದಿದ್ದು, ಸಿಸಿಬಿ ಪೊಲೀಸರ ಜೊತೆ ದಯವಿಟ್ಟು ಮಾಧ್ಯಮಗಳ ಜೊತೆ ಮಾತನಾಡಲು ಒಂದು ಬಾರಿ ಅವಕಾಶ ಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಒಂದು ಬಾರಿ ಅವಕಾಶ ನೀಡುವಂತೆ ಸಿಬ್ಬಂದಿ ಜೊತೆ ಸಂಜನಾ ರಾತ್ರಿಯೂ ಕೇಳಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬಂಧನದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಲು ಸಂಜನಾ ಇಚ್ಛೆ ವ್ಯಕ್ತಪಡಿಸಿದ್ದರು.

  • ಐ ಫೋನ್ ವಿಚಾರಕ್ಕಾಗಿ ಯುವಕನ ಮೇಲೆ ಸ್ನೇಹಿತರಿಂದಲೇ ಮಾರಣಾಂತಿಕ ಹಲ್ಲೆ

    ಐ ಫೋನ್ ವಿಚಾರಕ್ಕಾಗಿ ಯುವಕನ ಮೇಲೆ ಸ್ನೇಹಿತರಿಂದಲೇ ಮಾರಣಾಂತಿಕ ಹಲ್ಲೆ

    ಬೆಂಗಳೂರು: ಐ ಫೋನ್ ಹಾಗೂ ಹಣದ ವಿಚಾರಕ್ಕಾಗಿ ಯುವಕನ ಮೇಲೆ ಸ್ನೇಹಿತರೇ ಲಾಂಗ್ ಮತ್ತು ಡ್ರಾಗರ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟದಲ್ಲಿ ನಡೆದಿದೆ.

    ಆನೇಕಲ್‍ನ ಮುತ್ತಗಟ್ಟಿ ನಿವಾಸಿ ಸಂತೋಷ್ ಹಲ್ಲೆಗೆ ಒಳಗಾದ ಯುವಕ. ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ದೇವಾಲಯದ ರಸ್ತೆಯಲ್ಲಿ ಘಟನೆ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತೋಷ್‍ನನ್ನು ಸಮೀಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಸಂತೋಷ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

    ಸಂತೋಷ್ ಇಂದು ಸ್ನೇಹಿತರ ಜೊತೆ ಹುಳಿಮಾವು ಬಳಿ ಸಿನಿಮಾ ನೋಡಲು ಹೋಗುತ್ತಿದ್ದ. ಈ ವೇಳೆ ಹಾರಗದ್ದೆ ಸಮೀಪ ಐ ಫೋನ್ ಹಾಗೂ ಹಣದ ವಿಚಾರಕ್ಕಾಗಿ ಗಲಾಟೆಯಾಗಿದೆ. ಇದರಿಂದಾಗಿ ಅಲ್ಲಿಂದ ಸಂತೋಷ್ ಪರಾರಿಯಾಗಿದ್ದ. ಆದರೆ ಕಾರಿನಲ್ಲಿ ಬಂದ ಆರು ಜನ ಯುವಕರು ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ದೇವಾಲಯದ ರಸ್ತೆಯಲ್ಲಿ ಸಂತೋಷ್‍ನನ್ನು ಹಿಡಿದು ಮತ್ತೆ ಜಗಳ ಮಾಡಿದ್ದಾರೆ.

    ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗುತ್ತಿದ್ದಂತೆ ಯುವಕರ ತಂಡವು ಲಾಂಗ್ ಮತ್ತು ಡ್ರಾಗರ್ ನಿಂದ ಸಂತೋಷ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಸಂತೋಷ್‍ನನ್ನು ಸ್ಥಳೀಯರು ಚಂದಾಪುರ ಬಳಿಯ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

  • ನಷ್ಟ ಸರಿದೂಗಿಸಿಕೊಳ್ಳಲು ಆ್ಯಪಲ್ ಕಂಪನಿಯ ಹೊಸ ಪ್ಲಾನ್

    ನಷ್ಟ ಸರಿದೂಗಿಸಿಕೊಳ್ಳಲು ಆ್ಯಪಲ್ ಕಂಪನಿಯ ಹೊಸ ಪ್ಲಾನ್

    ನವದೆಹಲಿ: ಕಳೆದ ಒಂದು ವರ್ಷದಲ್ಲಿ ಭಾರತ ಮತ್ತು ಚೀನಾಗಳಲ್ಲಿ ಐ-ಫೋನ್ ಮಾರುಕಟ್ಟೆ ಕುಸಿತ ಕಾಣುತ್ತಿದೆ. ಈ ಸಂಬಂಧ ಕಂಪನಿ ಸಹ ತನ್ನ ಉತ್ಪನ್ನಗಳಲ್ಲಿ ಬದಲಾವಣೆ ಸೇರಿದಂತೆ ಹಲವು ಮಾರುಕಟ್ಟೆ ತಂತ್ರಗಳ ಬಳಕೆಗೆ ಮುಂದಾಗಿದೆ. ಈಗಾಗಲೇ ಐ-ಫೋನ್ ಚೀನಾದಲ್ಲಿ ತನ್ನ ಉತ್ಪನ್ನ ಖರೀದಿದಾರರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದೆ.

    ಚೀನಾದ ಅಲಿಬಾಬಾ ಗ್ರೂಪ್ ಮಾಲೀಕತ್ವದ ಏಂಟ್ ಫೈನಾನಿಶಿಯಲ್ ಸರ್ವಿಸ್ ಸಹಯೋಗದಿಂದ ಸಾವಿರಾರು ಸರ್ವಿಸ್ ಸೆಂಟರ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಈ ಸಾಲದಿಂದ ಐ-ಫೋನ್ ಖರೀದಿಯಲ್ಲಿ ತಿಂಗಳ ಕಂತು ಕಡಿಮೆಯಾಗಲಿದೆ. ಅತಿ ಹೆಚ್ಚು ಸ್ಮಾರ್ಟ್ ಫೋನ್ ಬಳಕೆದಾರರನ್ನು ಹೊಂದಿರುವ ಚೀನಾದಲ್ಲಿ ಒಂದು ತಿಂಗಳಿನಿಂದ ಐ-ಫೋನ್ ಮಾರುಕಟ್ಟೆ ಕುಸಿತ ಕಾಣಲಾರಂಭಿಸಿತು. ಈ ಹೊಸ ಸ್ಕೀಮ್ ನಿಂದಾಗಿ ಐ-ಫೋನ್ ಚೇತರಿಸಿಕೊಳ್ಳುತ್ತಿದೆ.

    ಐ-ಫೋನ್ ಗಾಗಿ ಬಡ್ಡಿ ರಹಿತ ಸಾಲ ಪಡೆಯಲು ಇಚ್ಛಿಸುವ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸಕೊಳ್ಳಬೇಕೆಂದು ಚೀನಾದ ಮೂರು ದೊಡ್ಡ ಬ್ಯಾಂಕ್ ಗಳು ತಿಳಿಸಿವೆ. 12 ರಿಂದ 24 ಕಂತುಗಳಲ್ಲಿ ಗ್ರಾಹಕರು ಹಣವನ್ನು ಪಾವತಿಸಬೇಕಾಗುತ್ತದೆ.

    24 ತಿಂಗಳು ಕಂತಿನ ಸೌಲಭ್ಯ ಮಾರ್ಚ್ ತಿಂಗಳಿಗೆ ಅಂತ್ಯವಾಗಲಿದೆ. ಇನ್ನು ಐ-ಫೋನ್ ಬಳಕೆ ಮಾಡುತ್ತಿರುವ ಬಳಕೆದಾರರು ತಮ್ಮ ಹಳೆ ಫೋನ್ ಬದಲಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಹಳೆ ಫೋನ್ ಗಳನ್ನು ಬದಲಿಸಿಕೊಳ್ಳುವ ಗ್ರಾಹಕರಿಗೆ ಹೆಚ್ಚುವರಿ ರಿಯಾಯ್ತಿಯನ್ನು ಆ್ಯಪಲ್ ಕಂಪನಿ ನೀಡಲು ಮುಂದಾಗಿದೆ. ಈ ವಿಶೇಷ ಆಫರ್ ನಿಂದ 2018ರ ಡಿಸೆಂಬರ್ ನಲ್ಲಾದ ನಷ್ಟ ಸರಿದೂಗಿಸಿಕೊಳ್ಳಲು ಕಂಪನಿ ಚಿಂತಿಸಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯತಮೆಗೆ ಐ-ಫೋನ್ ಖರೀದಿಸಲು ಬಾಲಕನ ಅಪಹರಿಸಿ ಹತ್ಯೆಗೈದ ಅಪ್ರಾಪ್ತನ ಬಂಧನ!

    ಪ್ರಿಯತಮೆಗೆ ಐ-ಫೋನ್ ಖರೀದಿಸಲು ಬಾಲಕನ ಅಪಹರಿಸಿ ಹತ್ಯೆಗೈದ ಅಪ್ರಾಪ್ತನ ಬಂಧನ!

    ಲಕ್ನೋ: ತನ್ನ ಪ್ರಿಯತಮೆಗೆ ಐ-ಫೋನ್ ಕೊಡಬೇಕೆಂಬ ಉದ್ದೇಶದಿಂದ 14 ವರ್ಷದ ಬಾಲಕನನ್ನು ಅಪಹರಿಸಿ ಹತೈಗೈದ 17 ವರ್ಷದ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಹೌದು, ಪ್ರಿಯತಮೆಗೆ ಐ-ಫೋನ್ ಕೊಡಿಸಬೇಕೆಂಬ ಉದ್ದೇಶದಿಂದ 17 ವರ್ಷ ಯುವಕನೊಬ್ಬ 14 ವರ್ಷದ ಬಾಲಕನನ್ನು ಅಪಹರಿಸಿ, ಬಳಿಕ ಬರ್ಬರವಾಗಿ ಹತ್ಯೆ ಮಾಡಿ, ಸುಟ್ಟುಹಾಕಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    14 ವರ್ಷದ ಅಭಿಷೇಕ್ ಮೃತ ಬಾಲಕ. ಮೃತ ಬಾಲಕನ ತಂದೆ ಸರ್ವೇಶ್ ಯಾದವ್ ಖಾಸಗಿ ಕಂಪನಿಯ ಬಸ್ ಚಾಲಕನಾಗಿದ್ದಾರೆ. ಸರ್ವೇಶ್ ಆರೋಪಿಯ ತಂದೆಯ ಮನೆಯಲ್ಲಿ ಬಾಡಿಗೆಗಿದ್ದರು. ಅಲ್ಲದೇ ಆರೋಪಿಯ ತಂದೆಯೂ ಸಹ ಸರ್ವೇಶ್ ಯಾದವ್ ಕಂಪನಿಯಲ್ಲೇ ಬಸ್ ನಿರ್ವಾಹಕರಾಗಿದ್ದರು.

    ಏನಿದು ಘಟನೆ?
    ಕಳೆದ ಮಂಗಳವಾರ ಸಂಜೆ 8 ನೇ ತರಗತಿ ಓದುತ್ತಿದ್ದ ಅಭಿಷೇಕ್ ಕೋಚಿಂಗ್ ಕ್ಲಾಸ್‍ಗೆ ಹೋಗಿದ್ದವನು ವಾಪಾಸ್ಸು ಬಂದಿರಲಿಲ್ಲ. ಅದೇ ದಿನ ಸಂಜೆ ಅಭಿಷೇಕ್ ತಾಯಿ ಹಾಗೂ ತಂದೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಮಗನನ್ನು ಅಪಹರಿಸಿದ್ದು, ಬಿಡುಗಡೆ ಮಾಡಲು 20 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಇಟ್ಟಿದ್ದರು. ಕೂಡಲೇ ಎಚ್ಚೆತ್ತ ಪೋಷಕರು ಶಾಲೆ ಹಾಗೂ ಕೋಚಿಂಗ್ ಸೆಂಟರ್ ಬಳಿ ವಿಚಾರಿಸಿದಾಗ ಮಗ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

    ಕೂಡಲೇ ಆರೋಪಿಗೆ ಕರೆ ಮಾಡಿದ್ದ ಪೋಷಕರು, ಅಷ್ಟು ದೊಡ್ಡ ಮೊತ್ತದ ಹಣವನ್ನು ಹೊಂದಿಸಲು ನಮ್ಮಿಂದ ಸಾಧ್ಯವಿಲ್ಲ. ನಮಗೆ ನಾಳೆ ಬೆಳಗ್ಗೆಯವರೆಗೂ ಸಮಯ ಕೊಡುವಂತೆ ಕೇಳಿಕೊಂಡಿದ್ದರು. ಇದರ ಜೊತೆ ಪೋಷಕರು ಮಣಿಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು.

    ಪತ್ತೆಯಾಗಿದ್ದು ಹೇಗೆ?
    ಮಣಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಕರೆ ಬಂದಿದ್ದರ ಕುರಿತು ತನಿಖೆ ನಡೆಸಿದರು. ತನಿಖೆ ವೇಳೆ ಅಭಿಷೇಕ್ ವಾಸವಿದ್ದ ಮನೆಯ ಆಸುಪಾಸಿನಲ್ಲೇ ಕರೆ ಮಾಡಿರುವುದು ಪತ್ತೆಯಾಗಿತ್ತು. ಅಲ್ಲದೆ ಕರೆ ಮಾಡಿದ್ದ ಮೊಬೈಲ್ ನಂಬರ್ ಅನ್ನು ಪರೀಕ್ಷಿಸಿದಾಗ ಅದು ನಕಲಿ ದಾಖಲೆಗಳಿಂದ ಖರೀದಿಸಿರುವುದು ಬೆಳಕಿಗೆ ಬಂದಿತ್ತು.

    ಮೊಬೈಲ್ ನೆಟ್‍ವರ್ಕ್ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಮೊಬೈಲ್‍ನಲ್ಲಿ ಮತ್ತೊಂದು ಸಿಮ್ ಸಂಖ್ಯೆ ದಾಖಲಾಗಿರುವುದು ಪತ್ತೆಯಾಗಿತ್ತು. ಅದನ್ನು ಪರೀಕ್ಷಿಸಿದಾಗ ಆ ಮೊಬೈಲ್ ಸಂಖ್ಯೆ ಆರೋಪಿಯ ಸಹೋದರಿಗೆ ಸೇರಿದ ನಂಬರ್ ಎನ್ನುವುದು ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಮನೆ ದಾಳಿ ನಡೆಸಿ ಅಪಹರಣಕಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

    ಬಂಧಿತ ಅಪ್ರಾಪ್ತ ಬಾಲಕನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ, ನನ್ನ ಪ್ರಿಯತಮೆಗಾಗಿ ಐ-ಫೋನ್ ಖರೀದಿಸಲು ಅಭಿಷೇಕ್‍ನನ್ನು ಮಂಗಳವಾರ ಅಪಹರಿಸಿದ್ದೆ. ಆದರೆ ಆತ ಜೋರಾಗಿ ಅಳಲು ಪ್ರಾರಂಭಿಸಲು ಶುರುಮಾಡಿದ. ಇದರಿಂದ ನಾನು ಆತನನ್ನು ಕೊಂದು ಸುಟ್ಟು ಹಾಕಿದೆ ಎಂದು ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾನೆ.

    ಘಟನೆ ಸಂಬಂಧ ಅಭಿಷೇಕ್ ತಂದೆ ದೂರಿನ ಆಧಾರ ಮೇಲೆ ಆರೋಪಿ, ಆತನ ತಂದೆ ಹಾಗೂ ಸಹೋದರರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಮಣಿಪುರ ಪೊಲೀಸರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ), 364 ಎ (ಅಪಹರಣ ಹಾಗೂ ಹಲ್ಲೆ) 201 (ಸಾಕ್ಷ್ಯ ನಾಶ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಭಿಷೇಕ್ ತಂದೆ ಸರ್ವೇಶ್ ಯಾದವ್, ಕೇವಲ 17 ವರ್ಷದ ಬಾಲಕನೊಬ್ಬನೇ ಹತ್ಯೆ ಮಾಡಿ, ಆತನನ್ನು ಸುಟ್ಟು ಹಾಕಿ ನಂತರ ಗುಂಡಿ ತೆಗೆದು ಹೂಳಲು ಹೇಗೆ ಸಾಧ್ಯ? ಇದಕ್ಕೆ ಆತನ ಕುಟುಂಬದವರು ಸಹ ಬೆಂಬಲ ನೀಡಿದ್ದಾರೆ. ನನ್ನ ಮಗನ ಹತ್ಯೆ ಪೂರ್ವನಿಯೋಜಿತ ಕೊಲೆ ಎಂದು ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊಸ ಐಫೋನಲ್ಲಿ ಇ ಸಿಮ್ ಹಾಕಬಹುದು – ಏನಿದು ಇ-ಸಿಮ್? ಹೇಗೆ ಕಾರ್ಯನಿರ್ವಹಿಸುತ್ತೆ?

    ಹೊಸ ಐಫೋನಲ್ಲಿ ಇ ಸಿಮ್ ಹಾಕಬಹುದು – ಏನಿದು ಇ-ಸಿಮ್? ಹೇಗೆ ಕಾರ್ಯನಿರ್ವಹಿಸುತ್ತೆ?

    ನವದೆಹಲಿ: ಆಪಲ್ ಕಂಪೆನಿಯು ಮೊದಲ ಬಾರಿಗೆ ಡ್ಯುಯಲ್ ಸಿಮ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ ಈಗ ಇರುವ ಡ್ಯುಯಲ್ ಸಿಮ್ ನಂತೆ ಈ ಫೋನ್ ನಲ್ಲಿ ಎರಡು ಟ್ರೇಯಲ್ಲಿ ಸಿಮ್ ಹಾಕಲು ಸಾಧ್ಯವಿಲ್ಲ.

    ಹೊಸ ಐಫೋನ್ ಎಕ್ಸ್ಎಸ್, ಎಕ್ಸ್ಎಸ್ ಮ್ಯಾಕ್ಸ್ ಹಾಗೂ ಎಕ್ಸ್ಆರ್ ಫೋನುಗಳಿಗೆ ಇ ಸಿಮ್ ಹಾಕಿ ಕರೆ ಮಾಡಬಹುದು. ಸಿಮ್ ಕಾರ್ಡ್ ಗಳನ್ನು ನಾವು ನೋಡಬಹುದು. ಆದರೆ ಇ-ಸಿಮ್ ಕಾರ್ಡ್ ಗಳನ್ನು ನೋಡಲು ಸಾಧ್ಯವಿಲ್ಲ. ಐಫೋನ್ ನ್ಯಾನೋ ಸಿಮ್ ಸ್ಲಾಟ್‍ನೊಂದಿಗೆ ಲಭ್ಯವಾದರೆ, ಇನ್ನೊಂದು ಡಿಜಿಟಲ್ ಮಾದರಿಯ ಸಿಮ್ ಆಗಿರುತ್ತದೆ.

    ಈ ಫೋನ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಆಪಲ್ ಕಂಪೆನಿಯ ಮಾರುಕಟ್ಟೆ ಉಪಾಧ್ಯಕ್ಷ ಫಿಲಿಪ್ ಷಿಲ್ಲರ್, ಬಹಳಷ್ಟು ಜನ ವಿದೇಶಕ್ಕೆ ಪ್ರವಾಸ ಹೋಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಂವಹನಕ್ಕಾಗಿ ಆ ದೇಶದಲ್ಲಿರುವ ಸಿಮ್ ಕಾರ್ಡ್ ಬಳಸಲು ತಾನು ಬಳಸುತ್ತಿರುವ ಸಿಮ್ ತೆಗೆಯಬೇಕಾಗುತ್ತದೆ. ಇದನ್ನು ತಪ್ಪಿಸಲು ಇ ಸಿಮ್ ವಿಶೇಷತೆಯನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

    ಏನಿದು ಇ-ಸಿಮ್?
    ಇ-ಸಿಮ್ ಎಂದರೆ ಎಂಬೆಡೆಡ್ ಸಬ್‍ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್. ಇದು ಮ್ಯಾನುವಲ್ ಸಿಮ್ ರೀತಿಯಂತೆ ಕಾರ್ಯನಿರ್ವಹಿಸಲಿದ್ದು, ಯಾವುದೇ ಸಿಮ್‍ಗಳ ಅವಶ್ಯಕತೆ ಇರುವುದಿಲ್ಲ. ಫೋನುಗಳಲ್ಲಿ ಒಂದು ಸಾಮಾನ್ಯ ಸಿಮ್ ಸ್ಲಾಟ್ ಇದ್ದೇ ಇರುತ್ತದೆ. ಇದರ ಜೊತೆ ಇ-ಸಿಮ್ ಮುಖಾಂತರ ಇನ್ನೊಂದು ನೆಟ್‍ವರ್ಕ್‍ನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಇ-ಸಿಮ್‍ಗಳನ್ನು ಮುಂದಿನ ಪೀಳಿಗೆಯ ಪರಿಣಾಮಕಾರಿ ಸಂವಹನ ತಂತ್ರಜ್ಞಾನವೆಂದೇ ಪರಿಗಣಿಸಲಾಗಿದೆ.

    ಭಾರತದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ?
    ಇ-ಸಿಮ್ ತಂತ್ರಜ್ಞಾನಕ್ಕೆ ಭಾರತದ ಕಂಪೆನಿಗಳು ಕೈಜೋಡಿಸಿದ್ದು, ಈಗಾಗಲೇ ಜಿಯೋ ಹಾಗೂ ಏರ್‌ಟೆಲ್‌ ಕಂಪೆನಿಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಹೀಗಾಗಿ ಭಾರತದಲ್ಲಿನ ಇ-ಸಿಮ್ ಫೋನ್‍ಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಮೊಬೈಲ್ ಖರೀದಿಸಿದ ನಂತರ ಗ್ರಾಹಕರು ತಮ್ಮ ಮ್ಯಾನುವಲ್ ಸಿಮ್‍ನೊಂದಿಗೆ ಇನ್ನೊಂದು ಸಿಮ್‍ನ ಅವಶ್ಯಕತೆಯಿದ್ದರೆ ಇ-ಸಿಮ್ ಮುಖಾಂತರ ಮತ್ತೊಂದು ನೆಟ್‍ವರ್ಕ್‍ನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಗೂಗಲ್ ಪಿಕ್ಸೆಲ್ 2 ಮೊದಲ ಬಾರಿಗೆ ಇ-ಸಿಮ್ ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಬಂದಿತ್ತು. ಪ್ರಸ್ತುತ ಇ-ಸಿಮ್ ವಿಶೇಷತೆ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ. ಇದನ್ನೂ ಓದಿ: ಬಿಡುಗಡೆಯಾಯ್ತು ಡ್ಯುಯಲ್ ಸಿಮ್ ಐಫೋನ್‍ಗಳು: ಭಾರತಕ್ಕೆ ಯಾವಾಗ ಬರುತ್ತೆ? ಬೆಲೆ ಎಷ್ಟು?

    ಹೇಗೆ ಸಹಕಾರಿ?
    ಮೆಸೇಂಜಿಗ್ ಅಪ್ಲಿಕೇಶನ್ ಗಳಿಗೆ ಫೋನ್ ನಂಬರ್ ಬೇಕೇಬೇಕು. ಆದರೆ ಒಂದು ಬಾರಿ ಅಪ್ಲಿಕೇಶನ್ ಇನ್ ಸ್ಟಾಲ್ ಆದ ನಂತರ ಸಿಮ್ ತೆಗೆಯಬಹುದು. ಆದರೆ ಈ ಅಪ್ಲಿಕೇಶನ್ ಕೆಲಸ ಮಾಡಲು ಇಂಟರ್ ನೆಟ್ ಸಂಪರ್ಕ ಬೇಕಾಗುತ್ತದೆ. ಉದಾಹರಣೆಗೆ ಭಾರತದ ವ್ಯಕ್ತಿಯೊಬ್ಬರು ಅಮೆರಿಕಕ್ಕೆ ಹೋದರೆ ಮೊಬೈಲ್ ಡೇಟಾ ಮೂಲಕವೇ ಇಂಟರ್ ನೆಟ್/ ಮೆಸೇಜಿಂಗ್ ಆಪಿಕ್ಲೇಶನ್ ಮೂಲಕ ಓಪನ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಭಾರತದ ಕಂಪೆನಿಗಳು ಅಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಡೇಟಾ ಬೇಕಾದರೆ ಅಮೆರಿಕದ ಟೆಲಿಕಾಂ ಕಂಪೆನಿಯ ಸಿಮ್ ಬಳಕೆ ಮಾಡಬೇಕಾಗುತ್ತದೆ. ಸಿಮ್ ತೆಗೆಯುವುದು, ಸಿಮ್ ಹಾಕುವ ಕೆಲಸ ತ್ರಾಸದಾಯಕ. ಈ ಸಮಸ್ಯೆಯನ್ನು ದೂರ ಮಾಡಲು ಇ ಸಿಮ್ ಸಹಕಾರಿಯಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐ ಫೋನ್ ಖರೀದಿದಾರರಿಗೆ ಸಿಹಿ ಸುದ್ದಿ

    ಐ ಫೋನ್ ಖರೀದಿದಾರರಿಗೆ ಸಿಹಿ ಸುದ್ದಿ

    ನವದೆಹಲಿ: ಆಪಲ್ ಐ ಫೋನ್ ಪ್ರಿಯರಿಗೆ ಫ್ಲಿಪ್ ಕಾರ್ಟ್ ತನ್ನ ಆಪಲ್ ವೀಕ್ ಮಾರಾಟದಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದೆ.

    ಒಂದು ವಾರ ನಡೆಯುವ ಆಪಲ್ ವೀಕ್ ಮಾರಾಟ ಮೇ 27 ರಂದು ಕೊನೆಯಾಗಲಿದೆ. ಕೆಲವು ಐಫೋನ್ ಮಾದರಿಗಳು, ಮ್ಯಾಕ್ ಬುಕ್ ಏರ್, ಐಪಾಡ್, ಐಪಾಡ್ ಪ್ರೊ ಮತ್ತು ಆಪಲ್ ವಾಚ್ ಗಳ ಮೇಲೆ ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಫ್ಲಿಪ್ ಕಾರ್ಟ್ ನೀಡುತ್ತಿದೆ.

    ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಮೂಲಕ ಹಣ ಪಾವತಿಸಿದಲ್ಲಿ ಶೇ10 ರಷ್ಟು ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಐಸಿಐಸಿಐ ಬ್ಯಾಂಕ್ ನೀಡುತ್ತಿದೆ.

    ಆಪಲ್ ವೀಕ್ ಮಾರಾಟದ ಕೆಲವು ಪ್ರಾಡಕ್ಟ್ ಗಳ ದರಗಳು

    ಐ ಪೋನ್ 6(32 ಜಿಬಿ) – ನಿಖರ ಬೆಲೆ 29,500 ರೂ. – ಮಾರಾಟ ಬೆಲೆ 23,999 ರೂ.
    ಐ ಪೋನ್ 6 ಎಸ್(32 ಜಿಬಿ) – ನಿಖರ ಬೆಲೆ 40,000 ರೂ. – ಮಾರಾಟ ಬೆಲೆ 33,999 ರೂ.
    ಐ ಪೋನ್ ಎಸ್ ಇ(32 ಜಿಬಿ) – ನಿಖರ ಬೆಲೆ 26,000 ರೂ. – ಮಾರಾಟ ಬೆಲೆ 17,999 ರೂ.
    ಐ ಪೋನ್ 7(32 ಜಿಬಿ) – ನಿಖರ ಬೆಲೆ 49,000 ರೂ. – ಮಾರಾಟ ಬೆಲೆ 46,999 ರೂ.
    ಐ ಪೋನ್ ಎಕ್ಸ್(32 ಜಿಬಿ) – ನಿಖರ ಬೆಲೆ 89,000 ರೂ. – ಮಾರಾಟ ಬೆಲೆ 85,999 ರೂ.
    ಐ ಪೋನ್ 8 & 8 ಪ್ಲಸ್(32 ಜಿಬಿ) – ನಿಖರ ಬೆಲೆ 67,940 ರೂ. – ಮಾರಾಟ ಬೆಲೆ 62,999 ರೂ.
    ಏರ್ ಪಾಡ್ಸ್ ಮತ್ತು ಇಯರ್ ಪಾಡ್ಸ್ – ನಿಖರ ಬೆಲೆ 2,199 ರೂ. – ಮಾರಾಟ ಬೆಲೆ ಕನಿಷ್ಠ 1,899 ರೂ.
    ಆಪಲ್ ಐ ಪಾಡ್ಸ್ – ನಿಖರ ಬೆಲೆ 28,000 ರೂ. – ಮಾರಾಟ ಬೆಲೆ 21,900 ರೂ.
    ಆಪಲ್ ವಾಚ್ ಸೀರೀಸ್ ಕನಿಷ್ಠ 20,900 ರೂ.
    ಆಪಲ್ ಲ್ಯಾಪ್ ಟಾಪ್ – ನಿಖರ ಬೆಲೆ 57,990 ರೂ. – ಮಾರಾಟ ಬೆಲೆ 55,990 ರೂ.