Tag: Hyderabad

  • ಅಕ್ರಮವಾಗಿ 11.1 ಕೆಜಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಅಂದರ್

    ಅಕ್ರಮವಾಗಿ 11.1 ಕೆಜಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಅಂದರ್

    – 4.25 ರೂ ಮೌಲ್ಯದ ವಿದೇಶ ಕರೆನ್ಸಿ ವಶ

    ಹೈದರಾಬಾದ್: ಅಕ್ರಮವಾಗಿ 11.1 ಕೆಜಿ ಚಿನ್ನ, ಯುಎಇ ಮತ್ತು ಸಿಂಗಾಪುರ ದೇಶಗಳ ಕರೆನ್ಸಿ ಸಾಗಿಸುತ್ತಿದ್ದ ಮಹಿಳೆಯನ್ನು ಬಂಧಿಸಿದ ಘಟನೆ ಹೈದರಾಬಾದ್‍ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಬಂಧಿತ ಮಹಿಳೆ ದುಬೈ ಮೂಲದವಳು ಎಂದು ತಿಳಿದುಬಂದಿದೆ. ಆರೋಪಿ ಮಹಿಳೆಯು ಕಳೆದ ಮೂರು ತಿಂಗಳಿನಿಂದ ಹೈದರಾಬಾದ್‍ನಲ್ಲಿ ನೆಲೆಸಿದ್ದಳು.

    ಹೈದರಾಬಾದ್‍ನ ವಿಮಾನ ನಿಲ್ದಾಣದ ಎಕ್ಸಿಟ್ ಗೇಟ್‍ನಲ್ಲಿ ಇಂದು ಬೆಳಗ್ಗೆ ಬ್ಯಾಗ್‍ಗಳನ್ನು ಪರಿಶೀಲನೆ ಮಾಡಲಾಗುತಿತ್ತು. ಈ ವೇಳೆ ದುಬೈನಿಂದ ಆಗಮಿಸಿದ ಮಹಿಳೆಯ ಬ್ಯಾಗ್‍ನಲ್ಲಿ ಬಟ್ಟೆ, ಸಾಕ್ಸ್ ಒಳಗೆ ಇಟ್ಟಿದ್ದ 3,63,52,500 ಕೋಟಿ ರೂ. ಮೌಲ್ಯದ 11.1 ಕೆ.ಜಿ ಚಿನ್ನ ಪತ್ತೆಯಾಗಿದೆ. ಅಷ್ಟೇ ಅಲ್ಲದೆ 4,25,312 ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಸಂಬಂಧ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಮಹಿಳೆ ಫೈ ಸ್ಟಾರ್ ಹೋಟೆಲ್‍ನ ರೂಮ್ ಒಂದರಲ್ಲಿ ಕಳೆದ ಮೂರು ತಿಂಗಳಿಂದ ವಾಸವಾಗಿದ್ದ ಮಾಹಿತಿ ಸಿಕ್ಕಿತ್ತು. ತಕ್ಷಣವೇ ರೂಮ್ ಪರಿಶೀಲನೆ ಮಾಡಿದ ಅಧಿಕಾರಿಗಳಿಗೆ 1.5 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ಸಿಕ್ಕಿದೆ.

  • ಒಂದು ದಿನಕ್ಕೆ 1 ಸಾವಿರ ಜನಕ್ಕೆ ಕೈಯಾರೆ ಊಟ ತಿನ್ನಿಸಿ ವ್ಯಕ್ತಿಯಿಂದ ವಿಶ್ವ ದಾಖಲೆ

    ಒಂದು ದಿನಕ್ಕೆ 1 ಸಾವಿರ ಜನಕ್ಕೆ ಕೈಯಾರೆ ಊಟ ತಿನ್ನಿಸಿ ವ್ಯಕ್ತಿಯಿಂದ ವಿಶ್ವ ದಾಖಲೆ

    ಹೈದರಾಬಾದ್: ವ್ಯಕ್ತಿಯೊಬ್ಬರು ತನ್ನ ಕೈಯಾರೆ ದಿನಕ್ಕೆ 1 ಸಾವಿರಕ್ಕೂ ಅಧಿಕ ಜನಕ್ಕೆ ಊಟ ತಿನ್ನಿಸಿ ವಿಶ್ವ ದಾಖಲೆ ಮಾಡಿದ್ದಾರೆ.

    ಹೈದರಾಬಾದ್ ಮೂಲದ ಸರ್ಕಾರೇತರ ಸಂಸ್ಥೆ “ಸರ್ವ್ ನೀಡಿ” ಸ್ಥಾಪಕ ಗೌತಮ್ ಕುಮಾರ್ ಒಂದೇ ದಿನದಲ್ಲಿ 1 ಸಾವಿರಕ್ಕೂ ಅಧಿಕ ಜನಕ್ಕೆ ಊಟ ತಿನ್ನಿಸಿ ಯೂನಿರ್ವಸಲ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆ ಮಾಡಿದ್ದಾರೆ.

    ಗೌತಮ್ ಭಾನುವಾರ ಮೂರು ಸ್ಥಳಗಳಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಊಟ ತಿನ್ನಿಸಿದ್ದಾರೆ. ಗೌತಮ್ ಮೊದಲು ಗಾಂಧಿ ಆಸ್ಪತ್ರೆ, ರಾಜೇಂದ್ರ ನಗರ ಹಾಗೂ ಚೌತುಪಾಲ್‍ನ ಅಮ್ಮ-ನಾನಾ ವೃದ್ಧಶ್ರಮದಲ್ಲಿ ಇದ್ದ ಜನರಿಗೆ ಊಟ ಮಾಡಿಸಿದ್ದಾರೆ. ಯೂನಿರ್ವಸಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಕೆ.ವಿ ರಮಣ ರಾವ್ ಹಾಗೂ ತೆಲಂಗಾಣವನ್ನು ಪ್ರತಿನಿಧಿಸುವ ಟಿ.ಎಂ ಶ್ರೀಲತಾ ಅವರು ಗೌತಮ್ ಕುಮಾರ್ ಅವರಿಗೆ ಈ ಪ್ರಶಸ್ತಿ ಪತ್ರವನ್ನು ನೀಡಿದ್ದಾರೆ.

    ನಾನು ಸರ್ವ್ ನೀಡಿ ಸಂಸ್ಥೆಯನ್ನು 2014ರಲ್ಲಿ ಶುರು ಮಾಡಿದೆ. ಈಗ ಈ ಸಂಸ್ಥೆಯಲ್ಲಿ 140ಕ್ಕೂ ಹೆಚ್ಚು ಸ್ವಯಂ ಸೇವಕರಿದ್ದಾರೆ. 2014ರಿಂದ ನಾವು ಈ ರೀತಿಯ ಸಮಾಜ ಸೇವೆ ಕೆಲಸಗಳು ಮಾಡುತ್ತಿದ್ದೇವೆ. ಆದರೆ ಈಗ ನಾನು 1,000ಕ್ಕೂ ಹೆಚ್ಚು ಜನರಿಗೆ ಊಟ ತಿನ್ನಿಸಿದ್ದೇನೆ. ಹಾಗಾಗಿ ಇದು ವಿಶ್ವ ದಾಖಲೆ ಆಗಿದೆ. “ಯಾರೂ ಅನಾಥರಂತೆ ಸಾಯಬಾರದು, ಯಾರು ಕೂಡ ಹಸಿವಿನಿಂದ ಸಾಯಬಾರದು” ಇದು ನನ್ನ ಸಂಸ್ಥೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

  • ಶಾಸಕರ ಬೆಂಗಾವಲು ವಾಹನ ಡಿಕ್ಕಿ – 3 ವರ್ಷದ ಕಂದಮ್ಮ ಸ್ಥಳದಲ್ಲೇ ಸಾವು

    ಶಾಸಕರ ಬೆಂಗಾವಲು ವಾಹನ ಡಿಕ್ಕಿ – 3 ವರ್ಷದ ಕಂದಮ್ಮ ಸ್ಥಳದಲ್ಲೇ ಸಾವು

    ಹೈದರಾಬಾದ್: ಮುಲುಗು ಕ್ಷೇತ್ರದ ಎಂಎಲ್‍ಎ ದನ್ಸಾರಿ ಅನುಸುಯಾ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

    ವಾರಂಗಲ್ ಜಿಲ್ಲೆಯ ಜೆಡಿವಾಲು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು. ತಂದೆ ಅರುಣ್ ಮತ್ತು ತಾಯಿ ವಿಜಯ ಜೊತೆ ಬೈಕಿನಲ್ಲಿ ಅಂಗನವಾಡಿಗೆ ಹೋಗುತ್ತಿದ್ದ ಶ್ರಾವಂತಿ (3) ಮೃತಪಟ್ಟ ಕಂದಮ್ಮ. ಅಪಘಾತದಲ್ಲಿ ಬೈಕ್ ಸಂಪೂರ್ಣ ನಜ್ಜುಗಿದ್ದು ಮಗುವಿನ ಪೋಷಕರು ಗಾಯಗೊಂಡಿದ್ದಾರೆ.

    ಮುಲುಗು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗತಿಕೊಯಗುಡೆನ್ ಊರಿಗೆ ಸೇರಿದ ಈ ದಂಪತಿ ತಮ್ಮ ಮಗಳು ಶ್ರಾವಂತಿಯನ್ನು ಅಂಗನವಾಡಿಗೆ ಬಿಟ್ಟು ಬರಲು ಬೈಕಿನಲ್ಲಿ ಬರುತ್ತಿದ್ದರು. ಇದೇ ವೇಳೆಗೆ ಅ ದಾರಿಯಲ್ಲಿ ಎಂಎಲ್‍ಎ ದನ್ಸಾರಿ ಅನುಸುಯಾ ಅವರು ಹೋಗುತ್ತಿದ್ದರು. ಎದುರಿಗೆ ಬಂದ ಬೈಕಿಗೆ ಎಂಎಲ್‍ಎ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಶ್ರಾವಂತಿ ತಲೆಗೆ ಬಲವಾದ ಪೆಟ್ಟಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಈ ಘಟನೆಯ ಬಗ್ಗೆ ಸಂತಾಪ ಸೂಚಿಸಿರುವ ದನ್ಸಾರಿ ಅನುಸುಯಾ ಅವರು, ಕುಟುಂಬಕ್ಕೆ ಅರ್ಥಿಕವಾಗಿ ಇಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ನನಗೆ ಈ ಅಪಘಾತದಲ್ಲಿ 3 ವರ್ಷದ ಮಗು ಸಾವನ್ನಪ್ಪಿರುವುದು ತುಂಬ ನೋವಾಗಿದೆ. ಈ ಮಗುವಿನ ಕುಟುಂಬ ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರಮಿಸಿತ್ತು. ನಮ್ಮ ಕಡೆಯಿಂದ ತಪ್ಪಾಗಿದೆ ನಾನು ಈ ದುಃಖದ ಸಮಯದಲ್ಲಿ ಈ ಕುಟುಂಬದ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾರೆ.

  • ಟಿಕ್ ಟಾಕ್ ಮಾಡ್ತಿದ್ದಂತೆ ಮೆಟ್ಟಿಲಿನಿಂದ ಜಾರಿದ ಮಹಿಳೆ- ವಿಡಿಯೋ ನೋಡಿ

    ಟಿಕ್ ಟಾಕ್ ಮಾಡ್ತಿದ್ದಂತೆ ಮೆಟ್ಟಿಲಿನಿಂದ ಜಾರಿದ ಮಹಿಳೆ- ವಿಡಿಯೋ ನೋಡಿ

    ಹೈದರಾಬಾದ್: ಮಹಿಳೆಯೊಬ್ಬರು ತೆಲುಗು ಹಾಡಿಗೆ ಟಿಕ್‍ಟಾಕ್ ಮಾಡುತ್ತಿದ್ದಂತೆ ಮೆಟ್ಟಿಲಿನಿಂದ ಜಾರಿ ಬಿದ್ದ ಘಟನೆಯೊಂದು ಆಂಧ್ರಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಮಹಳೆ ತೆಲುಗಿನ ‘ಡಿಕೆ ಬೋಸ್’ ಚಿತ್ರದ ‘ಪಡಿಪೋಯಾ’ ಹಾಡಿಗೆ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದಳು. ಮಹಿಳೆ ಹಾಡನ್ನು ಹಾಡುತ್ತಾ ಮೆಟ್ಟಿಲು ಹತ್ತಿಕೊಂಡು ಬಂದಳು. ಬಳಿಕ ಕೂರಲು ಹೋದಾಗ ಅಲ್ಲಿಂದ ಕೆಳಗೆ ಬಿದಿದ್ದಾಳೆ.

    ಮಹಿಳೆ ಟಿಕ್‍ಟಾಕ್ ವಿಡಿಯೋ ಮಾಡುವಾಗ ಮೆಟ್ಟಿಲು ನೋಡದೇ ಕ್ಯಾಮೆರಾಗೆ ಪೋಸ್ ನೀಡುತ್ತಾ ಬಂದಿದ್ದಾಳೆ. ಕೊನೆ ಮೆಟ್ಟಲು ಹತ್ತಿದ್ದ ನಂತರ ಆಕೆ ಅಲ್ಲಿ ಕೂರಲು ಹೋದಾಗ ಆಯತಪ್ಪಿ ತಪ್ಪಿ ಕೆಳಗೆ ಬಿದಿದ್ದಾಳೆ.

    ಇತ್ತೀಚೆಗೆ ಮುಂಬೈನಲ್ಲಿ ಓರ್ವ ಅಪ್ರಾಪ್ತ ಸೇರಿದಂತೆ ಇಬ್ಬರು ಯುವಕರು ಕೈಯಲ್ಲಿ ಲಾಂಗ್ ಹಿಡಿದು ನಟ ಸಂಜಯ್ ದತ್ ಸಿನಿಮಾದ `ಅಪುನ ಕೋ ಕೋಯಿ ಟಚ್ ನಹಿ ಕರ್ ಸಕತಾ’ (ನಮ್ಮನ್ನು ಯಾರು ಟಚ್ ಮಾಡಲು ಸಾಧ್ಯವಿಲ್ಲ) ಡೈಲಾಗ್‍ಗೆ ಟಿಕ್ ಟಾಕ್ ಮಾಡಿಕೊಂಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ತ್ರಿವರ್ಣ ಧ್ವಜ ನೇಯಲು ಪೂರ್ವಜರಿಂದ ಬಂದಿದ್ದ ಸ್ವಂತ ಮನೆ ಮಾರಾಟ

    ತ್ರಿವರ್ಣ ಧ್ವಜ ನೇಯಲು ಪೂರ್ವಜರಿಂದ ಬಂದಿದ್ದ ಸ್ವಂತ ಮನೆ ಮಾರಾಟ

    ಹೈದರಾಬಾದ್: ಆಂಧ್ರ ಪ್ರದೇಶದ ನೇಕಾರರೊಬ್ಬರು ತಮ್ಮ ಮನೆಯನ್ನೇ ಮಾರಾಟ ಮಾಡಿ ತ್ರಿವರ್ಣ ಧ್ವಜವನ್ನು ನೇಯುವ ಮೂಲಕ ಭಾರತ ದೇಶದ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.

    ಆರ್. ಸತ್ಯನಾರಾಯಣ ತ್ರಿವರ್ಣ ಧ್ವಜವನ್ನು ನೇಯಲು ಮನೆ ಮಾರಿದ್ದಾರೆ. ಇವರು ನೇಕಾರ ವೃತ್ತಿಯನ್ನು ಮಾಡುತ್ತಿದ್ದು, ತಾವೂ ಯಾವುದೇ ಹೊಲಿಗೆ ಇಲ್ಲದ ತ್ರಿವರ್ಣ ಧ್ವಜ ನೇಯಬೇಕು ಎಂದು ಕನಸು ಕಂಡಿದ್ದರು. ಇದಕ್ಕಾಗಿ ಅವರಿಗೆ 6.5 ಲಕ್ಷ ರೂಪಾಯಿ ಹಣ ಬೇಕಾಗಿತ್ತು. ಹೀಗಾಗಿ ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಿ ತಮ್ಮ ಕನಸು ನನಸಾಗಿಸಿಕೊಳ್ಳುವ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ.

    8 ಅಡಿ ಎತ್ತರ ಮತ್ತು 12 ಅಡಿ ಅಗಲದ ಈ ತ್ರಿವರ್ಣ ಧ್ವಜವನ್ನು ಯಾವುದೇ ಹೊಲಿಗೆ ಹಾಕದೇ ತಯಾರಿಸಲಾಗಿದೆ. ಸಾಮಾನ್ಯವಾಗಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ನಂತರ ಧ್ವಜವನ್ನು ನೇಯುತ್ತಾರೆ. ಆದರೆ ಇವರು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಫ್ಲಾಗ್ ಹೊಲಿಯಲು ನಾನು ಯಾವುದೇ ಹೊಲಿಗೆಯನ್ನು ಹಾಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ತಾವು ನೇಯ್ದಿರುವ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸುವ ಕನಸಿದೆ ಎಂದು ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶಾಖಪಟ್ಟಣಂಗೆ ಭೇಟಿ ನೀಡಿದ್ದರು. ಈ ವೇಳೆ ಸತ್ಯನಾರಾಯಣ ಅವರು ತಾವು ನೇಯ್ದಿರುವ ತ್ರಿವರ್ಣ ಧ್ವಜವನ್ನು  ಮೋದಿ ಅವರಿಗೆ ಕೊಟ್ಟಿದ್ದಾರೆ. ಆದರೆ ಈ ಸಂದರ್ಭದಲ್ಲಿ ಧ್ವಜದ ವಿಶಿಷ್ಟತೆ ಬಗ್ಗೆ ತಿಳಿಸಲು ಅವಕಾಶ ಸಿಕ್ಕಿರಲಿಲ್ಲ.

    ಈ ಧ್ವಜವನ್ನು ಸಿದ್ಧಪಡಿಸಲು ಸತತ ನಾಲ್ಕು ವರ್ಷ ಶ್ರಮಪಟ್ಟಿದ್ದಾರೆ. ಜೊತೆಗೆ ತಮಗೆ ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದ ಮನೆಯನ್ನು ಮಾರಾಟ ಮಾಡಿ ಧ್ವಜವನ್ನು ನೇಯ್ದಿದ್ದಾರೆ. ತಾವು ‘ಲಿಟಲ್ ಇಂಡಿಯನ್ಸ್’ ಎಂಬ ಕಿರುಚಿತ್ರವನ್ನು ನೋಡಿ ಯಾವುದೇ ಹೊಲಿಗೆ ಇಲ್ಲದೇ ಧ್ವಜ ತಯಾರಿಸಲು ಮುಂದಾದೆ ಎಂದು ಹೇಳಿದ್ದಾರೆ.

  • ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಗೆಲುವಿನ ಹತ್ತಿರ ತಂದ ವಾಟ್ಸನ್ ನೋವಿನ ಕಥೆ ಬಿಚ್ಚಿಟ್ಟ ಭಜ್ಜಿ!

    ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಗೆಲುವಿನ ಹತ್ತಿರ ತಂದ ವಾಟ್ಸನ್ ನೋವಿನ ಕಥೆ ಬಿಚ್ಚಿಟ್ಟ ಭಜ್ಜಿ!

    ಬೆಂಗಳೂರು: ಮುಂಬೈ ವಿರುದ್ಧ ಐಪಿಎಲ್ ಫೈನಲ್ ಪಂದ್ಯದ ವೇಳೆ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದ ವಾಟ್ಸನ್ ಕಾಲಿನಲ್ಲಿ ರಕ್ತ ಬರುತ್ತಿದ್ದರೂ ಬ್ಯಾಟ್ ಮಾಡಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇನ್‍ಸ್ಟಾ ಗ್ರಾಮ್ ನಲ್ಲಿ ವಾಟ್ಸನ್ ಬ್ಯಾಟ್ ಬೀಸುತ್ತಿರುವ ಫೋಟೋ ಹಾಕಿ, ವಾಟ್ಸನ್ ಅವರ ಮೊಣಕಾಲಿನಲ್ಲಿ ರಕ್ತ ಬರುತ್ತಿರುವುದನ್ನು ನೀವು ಗಮನಿಸಿದ್ದೀರಾ? ಆಟ ಮುಗಿದ ಬಳಿಕ 6 ಸ್ಟಿಚ್ ಗಳನ್ನು ಹಾಕಲಾಗಿದೆ. ಡೈವ್ ಮಾಡುವಾಗ ಕಾಲಿಗೆ ಪೆಟ್ಟಾಗಿದ್ದು, ಈ ವಿಚಾರವನ್ನು ಯಾರಿಗೂ ಹೇಳದೇ ಆಟವಾಡಿ ಪಂದ್ಯವನ್ನು ಗೆಲುವಿನ ಸಮೀಪ ತಂದಿದ್ದರು. ಇದು ನಮ್ಮ ಶೇನ್ ವಾಟ್ಸನ್ ಎಂದು ಬರೆದು ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಭಜ್ಜಿ 5 ಸ್ಟಾರ್ ನೀಡಿ ವಾಟ್ಸನ್ ಆಟವನ್ನು ಹೊಗಳಿದ್ದಾರೆ.

    ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಗೊಂಡಾಗ ಯಾರಿಂದಲೂ ಸ್ಪಷ್ಟನೆ ಸಿಗದ ಕಾರಣ ಇದು ನಕಲಿ ಫೋಟೋ, ಫೋಟೋ ಶಾಪ್ ಮಾಡಲಾಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈಗ ಹರ್ಭಜನ್ ಅವರೇ ಸ್ಪಷ್ಟನೆ ನೀಡಿದ ಬಳಿಕ ಎದ್ದಿದ್ದ ಎಲ್ಲ ಅಂತೆ ಕಂತೆಗಳ ಸುದ್ದಿಗೆ ತೆರೆ ಬಿದ್ದಿದೆ.

    150 ರನ್ ಗಳ ಸವಾಲು ಪಡೆದ ಚೆನ್ನೈ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದ ವಾಟ್ಸನ್ ತಂಡದ ಮೊತ್ತ  146 ರನ್ ಆಗಿದ್ದಾಗ ಪಂದ್ಯದ ಕೊನೆ ಓವರಿನ 4ನೇ ಎಸೆತದಲ್ಲಿ ಎರಡು ರನ್ ಕದಿಯಲು ಹೋಗಿ ರನೌಟ್ ಆಗಿದ್ದರು.

    ಮಾಲಿಂಗ ಎಸೆದ 16ನೇ ಓವರ್ ವಾಟ್ಸನ್ ಹ್ಯಾಟ್ರಿಕ್ ಫೋರ್ ಹೊಡೆದಿದ್ದರೆ, ನಂತರ ಕೃನಾಲ್ ಪಾಂಡ್ಯ ಎಸೆದ ಓವರಿನಲ್ಲಿ ವಾಟ್ಸನ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಚೆನ್ನೈ ತಂಡವನ್ನು ಗೆಲುವಿನ ಹತ್ತಿರ ತಂದಿದ್ದರು. ಅಂತಿಮವಾಗಿ 80 ರನ್(59 ಎಸೆತ, 8 ಬೌಂಡರಿ, 4 ಸಿಕ್ಸರ್) ಸಿಡಿಸಿ ವಾಟ್ಸನ್ ಔಟ್ ಆದರು.

    ವಾಟ್ಸನ್ ಕ್ರೀಸಿನಲ್ಲಿ ಇರುವವರೆಗೂ ಚೆನ್ನೈ ತಂಡ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಕೊನೆಯ ಓವರಿನಲ್ಲಿ 9 ರನ್ ಗಳಿಸುವ ಒತ್ತಡದಲ್ಲಿದ್ದಾಗ ವಾಟ್ಸನ್ ಕಾಲು ನೋವಿನ ನಡುವೆಯೂ 2 ರನ್ ಕದಿಯಲು ಮುಂದಾದಾಗ ರನೌಟ್ ಆಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.

  • ತಂತ್ರಗಾರಿಕೆ, ಅದೃಷ್ಟ ಪರೀಕ್ಷೆಯಲ್ಲಿ ಧೋನಿಯನ್ನು ಮಣಿಸಿದ ರೋಹಿತ್ ಶರ್ಮಾ!

    ತಂತ್ರಗಾರಿಕೆ, ಅದೃಷ್ಟ ಪರೀಕ್ಷೆಯಲ್ಲಿ ಧೋನಿಯನ್ನು ಮಣಿಸಿದ ರೋಹಿತ್ ಶರ್ಮಾ!

    ಹೈದರಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಇದೆ. ಧೋನಿ ನಾಯಕತ್ವದಲ್ಲೇ ಟೀಂ ಇಂಡಿಯಾ ಹಲವು ಟ್ರೋಫಿಗಳನ್ನು ಜಯಿಸಿದೆ. ಇತ್ತ ಐಪಿಎಲ್ ನಲ್ಲೂ ಧೋನಿ ಚೆನ್ನೈ ತಂಡವನ್ನು ಫೈನಲ್ ವರೆಗೆ ತಂದಿದ್ದರು. ಆದರೆ ಫೈನಲ್ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ತಂತ್ರಗಾರಿಕೆಯಿಂದ ಚೆನ್ನೈ ತಂಡವನ್ನು ಸೋಲಿಸಿದ್ದಾರೆ.

    2019ರ ಟೂರ್ನಿಯಲ್ಲಿ ಮುಂಬೈ ತಂಡ ಫೈನಲ್‍ಗೂ ಮುನ್ನ 3 ಬಾರಿ ಚೆನ್ನೈ ವಿರುದ್ಧ ಆಡಿತ್ತು. ರೋಹಿತ್ ಬಳಗ ಮೂರು ಪಂದ್ಯಗಳಲ್ಲಿ ಜಯಗಳಿಸಿತ್ತು. ಈ ಆತ್ಮವಿಶ್ವಾಸದಿಂದಲೇ ಫೈನಲ್ ಪಂದ್ಯದಲ್ಲೂ ರೋಹಿತ್, ಚೆನ್ನೈ ತಂಡದ ವಿರುದ್ಧ ತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ.

    ಟಿ 20ಯಲ್ಲಿ 150 ರನ್ ಸವಾಲು ಅಲ್ಲವೇ ಅಲ್ಲ. ಆದರಲ್ಲೂ ಬಲಿಷ್ಠ ಬ್ಯಾಟಿಂಗ್ ಹೊಂದಿರುವ ಚೆನ್ನೈ ಸುಲಭವಾಗಿ ಗೆಲ್ಲಬಹುದು ಎನ್ನುವ ನಿರೀಕ್ಷೆ ಆರಂಭದಲ್ಲಿತ್ತು. ಆದರೆ ಈ ನಿರೀಕ್ಷೆಯನ್ನು ರೋಹಿತ್ ಶರ್ಮಾ ತಮ್ಮ ತಂತ್ರದ ಮೂಲಕ ತಲೆಕೆಳಗೆ ಮಾಡಿದ್ದರು.

    ಲತಿಸ್ ಮಾಲಿಂಗ ಹಾಗೂ ಬುಮ್ರಾರ ಓವರಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಪಂದ್ಯವನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದರು. ಧೋನಿ ಬ್ಯಾಟಿಂಗ್ ವೇಳೆ ಬುಮ್ರಾ, ಹಾರ್ದಿಕ್ ಬೌಲಿಂಗ್ ಆಯ್ಕೆ ರೋಹಿತ್ ಮುಂದಿತ್ತು.

    ಕೃನಾಲ್ ಪಾಂಡ್ಯ ಎಸೆದ 18ನೇ ಓವರ್ ನಲ್ಲಿ ವಾಟ್ಸನ್ 3 ಸಿಕ್ಸರ್ ಸಿಡಿಸಿದ್ದರು. ಕೊನೆಯ 12 ಎಸೆತಗಳಲ್ಲಿ 18 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ ಬುಮ್ರಾ ಕೈಗೆ ಬಾಲ್ ಕೊಟ್ಟರು. ಉತ್ತಮವಾಗಿ ದಾಳಿ ಮಾಡಿದ ಬುಮ್ರಾ ಒಂದು ವಿಕೆಟ್ ಪಡೆಯುವುದರ ಜೊತೆ ಕೇವಲ 5 ರನ್ ನೀಡಿದ್ದರು. ಆದರೆ ಕೊನೆಯ ಎಸೆತವನ್ನು ಕೀಪರ್ ಕಾಕ್ ಹಿಡಿಯದ ಪರಿಣಾಮ ಬೈ ಮೂಲಕ 4 ಇತರೇ ರನ್ ಬಂದಿತು.

    ಕೊನೆಯ 6 ಎಸೆತಗಳಲ್ಲಿ 9 ರನ್ ಬೇಕಿದ್ದಾಗ ಅನುಭವಿ ಬೌಲರ್, ಹಿರಿಯ ಆಟಗಾರ ಮಾಲಿಂಗ ಕೈಗೆ ರೋಹಿತ್ ಬಾಲ್ ನೀಡಿದರು. ಕೊನೆ ಓವರ್ ಮಾಲಿಂಗ ಕೈಗೆ ಕೊಟ್ಟಾಗ ಕ್ರಿಕೆಟ್ ಅಭಿಮಾನಿಗಳು ಒಮ್ಮೆ ಅಚ್ಚರಿ ವ್ಯಕ್ತಪಡಿಸಿದ್ದರು. ಯಾಕೆಂದರೆ ಇನ್ನಿಂಗ್ಸ್ ನ 16ನೇ ಓವರಿನಲ್ಲಿ ಮಾಲಿಂಗ 20 ರನ್ ನೀಡಿದ್ದರು. ಬ್ರಾವೋ ಒಂದು ಸಿಕ್ಸರ್ ಸಿಡಿಸಿದ್ದರೆ ವಾಟ್ಸನ್ ಹ್ಯಾಟ್ರಿಕ್ ಫೋರ್ ಚಚ್ಚಿದ್ದರು. ಹೀಗಾಗಿ ಕೊನೆಯ ಓವರಿನಲ್ಲಿ ಪಂದ್ಯ ಏನಾಗುತ್ತದೆ ಎನ್ನುವ ಕುತೂಹಲವಿತ್ತು. ಈ ಓವರಿನಲ್ಲಿ ಮಾಲಿಂಗ ಕೇವಲ 7 ರನ್ ನೀಡಿ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನು ಉಳಿಸಿ ಪಂದ್ಯವನ್ನು ಗೆದ್ದುಕೊಟ್ಟರು.

    ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಜಸ್‍ಪ್ರೀತ್ ಬೂಮ್ರಾ. 4 ಓವರ್ ಎಸೆದ ಬುಮ್ರಾ ಕೇವಲ 14 ರನ್ ನೀಡಿ ಚೆನ್ನೈ ತಂಡದ ರನ್ನಿಗೆ ಕಡಿವಾಣ ಹಾಕಿದರು. ವಿಶೇಷ ಏನೆಂದರೆ ರೋಹಿತ್ ಶರ್ಮಾ ಮೆಕ್ಲಾಗನ್, ಕೃನಾಲ್ ಪಾಂಡ್ಯ, ಮಾಲಿಂಗ ಬಳಿಕ ನಾಲ್ಕನೇ ಬೌಲರ್ ಆಗಿ ಬುಮ್ರಾ ಅವರನ್ನು ಇಳಿಸಿದ್ದರು. ಇನ್ನಿಂಗ್ಸಿನ 5, 11, 17, 19ನೇ ಓವರ್ ಎಸೆದ ಬುಮ್ರಾ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

    ತಂಡದ ಆಯ್ಕೆಯೊಂದಿಗೆ ಸಮರ್ಥವಾಗಿ ಪಂದ್ಯದ ಸಂದರ್ಭವನ್ನು ಆರ್ಥೈಸಿಕೊಂಡು ಗೇಮ್ ಪ್ಲಾನ್ ಬದಲಾಯಿಸಿದ್ದ ರೋಹಿತ್ ನಡೆಗೆ ಸಚಿನ್ ಕೂಡ ಮೆಚ್ಚುಗೆ ನೀಡಿದ್ದಾರೆ. ಅಲ್ಲದೇ ಅಂತರ್ ರಾಷ್ಟ್ರಿಯ ಮಟ್ಟದಲ್ಲಿ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಆಟಗಾರ ಎಂದಿದ್ದಾರೆ. ಧೋನಿ ಕುರಿತು ಪ್ರಸ್ತಾಪ ಮಾಡಿರುವ ಸಚಿನ್, ಇಬ್ಬರು ಆಟಗಾರರು ಪಂದ್ಯ ಸಂದರ್ಭಗಳನ್ನು ಬಹುಬೇಗ ತಿಳಿಯುವ ಗುಣವನ್ನು ಹೊಂದಿದ್ದು, ವಿಶ್ವಕಪ್ ತಂಡದಲ್ಲಿ ಇದು ತಂಡದ ನೆರವಿಗೆ ಬರುತ್ತದೆ ಎಂದು ವಿಶ್ಲೇಷಿಸಿದ್ದಾರೆ.

    ಸಾಧಾರಣವಾಗಿ ಟಿ 20 ಪಂದ್ಯದಲ್ಲಿ ಟಾಸ್ ಗೆದ್ದವರು ಫೀಲ್ಡಿಂಗ್ ಆಯ್ಕೆ ಮಾಡುತ್ತಾರೆ. ಆದರೆ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆಯನ್ನು ಮಾಡಿಕೊಂಡಿದ್ದರು. ಮೊದಲು ಬ್ಯಾಟಿಂಗ್ ಆಯ್ಕೆಯ ಹಿಂದೆ ಮುಂಬೈ ಅದೃಷ್ಟ ಇದೆ. ಈ ಕಾರಣಕ್ಕೆ ಆಯ್ಕೆ ಮಾಡಿರಲೂಬಹುದು ಎನ್ನುವ ವಿಶ್ಲೇಷಣೆ ಈಗ ಕೇಳಿ ಬರುತ್ತಿದೆ. ಯಾಕೆಂದರೆ ಈ ಹಿಂದೆ 2013, 2015, 2017ರ ಫೈನಲಿನಲ್ಲೂ ಮುಂಬೈ ತಂಡ ಮೊದಲ ಬ್ಯಾಟಿಂಗ್ ಮಾಡಿ ಕಪ್ ಗೆದ್ದುಕೊಂಡಿತ್ತು. ಹೀಗಾಗಿ ಈ ಬಾರಿಯೂ ಅದೃಷ್ಟ ಪರೀಕ್ಷೆಯಲ್ಲಿ ರೋಹಿತ್ ಶರ್ಮಾ ಅವರ ಈ ತಂತ್ರಗಾರಿಕೆಯೂ ಪಾಸ್ ಆಗಿದೆ.

    ಐಪಿಎಲ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಇದುವರೆಗೂ ಶೇ. 63.60 ರಷ್ಟು ಗೆಲುವು ಪಡೆದಿವೆ. ಇದರಂತೆ ಕಡಿಮೆ ಮೊತ್ತ ಗಳಿಸಿದರೂ ಚೆನ್ನೈ ತಂಡದ ಆಟಗಾರರನ್ನು ನಿಯಂತ್ರಿಸಬೇಕು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಇತ್ತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

  • 2019 ಐಪಿಎಲ್ ಫೈನಲ್ ಕದನಕ್ಕೆ ಕ್ಷಣಗಣನೆ – ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತ

    2019 ಐಪಿಎಲ್ ಫೈನಲ್ ಕದನಕ್ಕೆ ಕ್ಷಣಗಣನೆ – ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತ

    ಹೈದರಾಬಾದ್: 2019 ಐಪಿಎಲ್ ಟೂರ್ನಿನ ಪೈನಲ್ ಕದನ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದು, ಪ್ರಶಸ್ತಿಗಾಗಿ ಚೆನ್ನೈ, ಮುಂಬೈ ತಂಡಗಳ ನಡುವೆ ಭಾರೀ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಟೂರ್ನಿಯಲ್ಲಿ ಜಯ ಪಡೆದ ತಂಡ ಭಾರೀ ಬಹುಮಾನದ ಮೊತ್ತವನ್ನು ಪಡೆಯಲಿದೆ.

    ಟೂರ್ನಿಯ ಚಾಂಪಿಯನ್ ಪಟ್ಟ ಪಡೆಯುವ ತಂಡಕ್ಕೆ ಬರೋಬ್ಬರಿ 25 ಕೋಟಿ ರೂ. ಬಹುಮಾನ ಹಾಗೂ ಟ್ರೋಫಿ ಸಿಗಲಿದೆ. ಇದರಲ್ಲಿ ಅರ್ಧ ಮೊತ್ತ ಫ್ರಾಂಚೈಸಿಗಳು ಪಡೆದರೆ, ಉಳಿದ ಹಣ ತಂಡದ ಆಟಗಾರರಿಗೆ ಲಭ್ಯವಾಗಲಿದೆ. ರನ್ನರ್ ಅಪ್ ಆದ ತಂಡಕ್ಕೆ 12.5 ಕೋಟಿ ರೂ. ಸಿಗಲಿದೆ.

    ಟೂರ್ನಿಯಲ್ಲಿ 3ನೇ ಸ್ಥಾನ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 10.5 ಕೋಟಿ ಹಾಗೂ 4ನೇ ಸ್ಥಾನ ಪಡೆದ ಹೈದರಾಬಾದ್‍ಗೆ 8.5 ಕೋಟಿ ರೂ. ಮೊತ್ತ ಸಿಗಲಿದೆ. ವೈಯಕ್ತಿಕ ಪ್ರಶಸ್ತಿ ಪಟ್ಟಿಯಲ್ಲಿ ಬ್ಯಾಟಿಂಗ್ (ಆರೆಂಜ್ ಕ್ಯಾಪ್), ಬೌಲಿಂಗ್ (ಪರ್ಪಲ್ ಕ್ಯಾಪ್) ಸೇರಿದಂತೆ ಹಲವು ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಪ್ರಶಸ್ತಿಗಳು ಕೂಡ ನಗದು ಬಹುಮಾನವನ್ನು ಹೊಂದಿದ್ದು, ಟೂರ್ನಿಯ ಉದಯೋನ್ಮುಖ ಆಟಗಾರನಿಗೆ ಆಕರ್ಷಕ ಟ್ರೋಫಿಯೊಂದಿಗೆ 10 ಲಕ್ಷ ರೂ. ಬಹುಮಾನ ಸಿಗಲಿದೆ.

    ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ 10 ಲಕ್ಷ ರೂ. ಸಿಗಲಿದೆ. ಈ ಬಾರಿ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ಈ ಪ್ರಶಸ್ತಿಗೆ ಆರ್ಹರಾಗಿದ್ದಾರೆ. ಟೂರ್ನಿಯ ಮಧ್ಯದಲ್ಲೇ ವಾರ್ನರ್ ಮರಳಿದ್ದರೂ ಕೂಡ ಆಡಿರುವ 12 ಪಂದ್ಯಗಳಿಂದ 692 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಇತ್ತ ಬೆಸ್ಟ್ ಬೌಲರ್ ಕೂಡ 10 ಲಕ್ಷ ರೂ. ಬಹುಮಾನ ಪಡೆಯಲಿದ್ದು, ಈ ಪಟ್ಟಿಯಲ್ಲಿ ಸದ್ಯ ರಬಾಡ 25 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 24 ವಿಕೆಟ್ ಗಳಿಸಿ ಚೆನ್ನೈನ ಇಮ್ರಾನ್ ತಹೀರ್ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಟೂರ್ನಿಯ ‘ಮೋಸ್ಟ್ ವ್ಯಾಲುಬಲ್ ಪ್ಲೇಯರ್’ 10 ಲಕ್ಷ ರೂ. ಪಡೆಯಲಿದ್ದಾರೆ.

    ಇತ್ತೀಚೆಗೆ ಮುಗಿದ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ತಂಡ 1 ದಶಲಕ್ಷ ಡಾಲರ್ (ಸುಮಾರು 6.99 ಕೋಟಿ ರೂ.) ರನ್ನರ್ ಅಪ್ ಗಳಿಗೆ 700 ಡಾಲರ್ (ಸುಮಾರು 4.89 ಕೋಟಿ) ರೂ. ನಗದು ಬಹುಮಾನವನ್ನು ನೀಡಿತ್ತು.

  • ಚೆನ್ನೈ Vs ಮುಂಬೈ – ಬಲಾಬಲ ಹೇಗಿದೆ? ಈ ಬಾರಿ ಕಪ್ ಯಾರಿಗೆ?

    ಚೆನ್ನೈ Vs ಮುಂಬೈ – ಬಲಾಬಲ ಹೇಗಿದೆ? ಈ ಬಾರಿ ಕಪ್ ಯಾರಿಗೆ?

    – ಆತ್ಮವಿಶ್ವಾಸದಲ್ಲಿ ರೋಹಿತ್ ಬಳಗ
    – ಸೇಡು ತೀರಿಸಿಕೊಳ್ಳುತ್ತಾ ಚೆನ್ನೈ?

    ಹೈದರಾಬಾದ್: ಹಲವು ವಿಶೇಷಗಳೊಂದಿಗೆ ಆರಂಭವಾಗಿ ತಂಡಗಳ ಹೋರಾಟದ ನಡುವೆ ಸಾಗಿದ 2019ರ ಐಪಿಎಲ್ ಅಂತಿಮ ಫೈನಲ್ ಪಂದ್ಯಕ್ಕೆ ಹೈದರಾಬಾದ್‍ನ ಕ್ರೀಡಾಂಗಣ ಸಿದ್ಧವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಟೈಟಲ್‍ಗಾಗಿ ಮುಖಾಮುಖಿ ಆಗಲಿದೆ.

    ಈ ಬಾರಿಯ ಟೂರ್ನಿಯ ಲೀಗ್ ಹಂತದ ಪಂದ್ಯಗಳಲ್ಲಿ ಎರಡು ಬಾರಿ, ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಮಣಿಸಿದ ರೋಹಿತ್ ಶರ್ಮಾ ನಾಯಕತ್ವದ ತಂಡ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ. ಇತ್ತ ಟೂರ್ನಿಯಲ್ಲಿ ಟೈಟಲ್ ಉಳಿಸಿಕೊಳ್ಳಲು ಚೆನ್ನೈ ಸಿದ್ಧತೆ ನಡೆಸಿದ್ದು, ಧೋನಿ ಬಳಗ ಪ್ರತಿಕಾರ ತೀರಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

    ಸೇಡು ತೀರಿಸಿಕೊಳ್ಳುತ್ತಾ ಚೆನ್ನೈ?
    ಟೂರ್ನಿಯಲ್ಲಿ ಈಗಾಗಲೇ 3 ಬಾರಿ ಚೆನ್ನೈ ತಂಡವನ್ನು ಸೋಲಿಸಿರುವ ಮುಂಬೈ ಹೆಚ್ಚು ಆತ್ಮವಿಶ್ವಾಸ ಹೊಂದಿದೆ ಎಂದು ಹೇಳಬಹುದು. ಮುಂಬೈ ತಂಡ ಬಿಟ್ಟು ಬೇರೆ ಯಾವುದೇ ತಂಡ ವಿರುದ್ಧದ ಕೂಡ ಚೆನ್ನೈ ನೀರಸ ಪ್ರದರ್ಶನ ತೋರಿಲ್ಲ. ಫೈನಲ್ ಪಂದ್ಯದಲ್ಲಿ ಚೆನ್ನೈಗೆ ಉತ್ತಮ ಅವಕಾಶ ಲಭಿಸಿದೆ ಎನ್ನಬಹುದು. ಆರಂಭಿಕಾಗಿ ಚೆನ್ನೈಗೆ ವ್ಯಾಟ್ಸನ್, ಡು ಪ್ಲೆಸಿಸ್ ಉತ್ತಮ ಫಾರ್ಮ್ ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ. ರೈನಾ, ರಾಯುಡು, ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಿದರೆ, ಧೋನಿ, ಬ್ರಾವೋ ಅಂತಿಮ ಹಂತದಲ್ಲಿ ಸ್ಕೋರ್ ಹೆಚ್ಚಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ.

    ಇತ್ತ ಡೆಲ್ಲಿ ತಂಡದ ವಿರುದ್ಧ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುರಳಿ ವಿಜಯ್ ಬದಲಾಗಿ ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಶಾರ್ದೂಲ್ ಪಂದ್ಯದಲ್ಲಿ ವಿಫಲರಾಗಿದ್ದರು ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆ ಇದೆ. ಅಲ್ಲದೇ ಮತ್ತದೆ ತಂಡವನ್ನು ಧೋನಿ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಉಳಿದಂತೆ ಐವರು ಬೌಲರ್ ಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದು, ತಹೀರ್, ಹರ್ಭಜನ್ ಸಿಂಗ್, ಜಡೇಜಾ ಮೋಡಿ ಮಾಡುವ ನಿರೀಕ್ಷೆ ಇದೆ.

    ಮತ್ತೊಂದು ಜಯದ ನಿರೀಕ್ಷೆಯಲ್ಲಿ ಮುಂಬೈ:
    ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ್ದು, ತಂಡದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಡಿಕಾಕ್, ರೋಹಿತ್ ಉತ್ತಮ ಫಾರ್ಮ್ ನಲ್ಲಿದ್ದು, ಒಂದೊಮ್ಮೆ ಇಬ್ಬರು ವಿಫಲರಾದರೂ, ಸೂರ್ಯಕುಮಾರ್ ತಂಡಕ್ಕೆ ಆಸೆರೆಯಾಗುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಉಳಿದಂತೆ ಇಶಾನ್ ಕಿಶಾನ್, ಪೋಲಾರ್ಡ್, ಹಾರ್ದಿಕ್, ಕೃನಾಲ್ ಪಾಂಡ್ಯರೊಂದಿಗೆ ತಂಡ ಲೈನಪ್ ಹೊಂದಿದೆ. ಬೌಲಿಂಗ್ ನಲ್ಲಿ ಬುಮ್ರಾ, ಮಾಲಿಂಗ, ಕೃನಾಲ್, ರಾಹುಲ್ ಚಹರ್ ಸ್ಪಿನ್ನರ್ ಗಳಾಗಿ ಉತ್ತಮ ಸಾಥ್ ನೀಡುತ್ತಿದ್ದಾರೆ.

    ಮುಂಬೈ ಸಾಧನೆ: 2013, 2015, 2017 ರಲ್ಲಿ ಮುಂಬೈ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದೆ. 2013 ರಲ್ಲಿ 23 ರನ್, 2015 ರಲ್ಲಿ 41 ರನ್ ಗಳಲ್ಲಿ ಚೆನ್ನೈ ತಂಡವನ್ನು ಸೋಲಿಸಿದ್ದು ಮುಂಬೈ ಮಹತ್ವದ ಸಾಧನೆ ಆಗಿದೆ. 2017ರಲ್ಲಿ ಹೈದರಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲೂ ಕೂಡ ಪುಣೆ ತಂಡವನ್ನು ಮುಂಬೈ 1 ರನ್ ಅಂತರದಲ್ಲಿ ರೋಚಕ ಜಯ ಪಡೆದಿತ್ತು.

    ಚೆನ್ನೈ ಸಾಧನೆ: 2010 ರಲ್ಲಿ ಚೆನ್ನೈ ತಂಡ 22 ರನ್ ಗಳ ಹಂತದಲ್ಲಿ ಮುಂಬೈ ವಿರುದ್ಧ ಗೆದ್ದು ಮೊದಲ ಬಾರಿಗೆ ಕಪ್ ಜಯಿಸಿತ್ತು. 2011 ರಲ್ಲಿ ಆರ್ ಸಿಬಿ ವಿರುದ್ಧ 58 ರನ್ ಗಳ ಹಂತದಲ್ಲಿ ಹಾಗೂ 2018 ರಲ್ಲಿ ಹೈದರಾಬಾದ್ ವಿರುದ್ಧ 8 ವಿಕೆಟ್ ಹಂತದಲ್ಲಿ ಜಯ ಪಡೆದು ಸಂಭ್ರಮಿಸಿತ್ತು. ಸದ್ಯ ಎರಡು ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಇತ್ತಂಡಗಳು 3 ಬಾರಿ ಕಪ್ ಗೆದ್ದಿರುವ ಹಿನ್ನೆಲೆಯಲ್ಲಿ 4ನೇ ಬಾರಿಗೆ ಕಪ್ ಯಾವ ತಂಡ ಗೆಲ್ಲಲಿದೆ ಎಂಬುವುದು ಕುತೂಹಲ ಮೂಡಿಸಿದೆ.

  • ಮೇಕಪ್ ಹಾಕಿಕೊಳ್ಳಿ ಎಂದವನಿಗೆ ಮಹೇಶ್ ಬಾಬು ಪತ್ನಿ ಖಡಕ್ ಉತ್ತರ

    ಮೇಕಪ್ ಹಾಕಿಕೊಳ್ಳಿ ಎಂದವನಿಗೆ ಮಹೇಶ್ ಬಾಬು ಪತ್ನಿ ಖಡಕ್ ಉತ್ತರ

    ಹೈದರಾಬಾದ್: ಪ್ರಿನ್ಸ್ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರಿಗೆ ನೆಟ್ಟಿಗರೊಬ್ಬರು ಅವರ ಮೇಕಪ್ ಬಗ್ಗೆ ಕಮೆಂಟ್ ಮಾಡಿದ್ದರು. ಇದೀಗ ಕಮೆಂಟ್ ಮಾಡಿದವನನ್ನು ನಮ್ರತಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಗುರುವಾರವಷ್ಟೇ ನಮ್ರತಾ ಪತಿ ಮಹೇಶ್ ಬಾಬು ಅಭಿನಯದ ‘ಮಹರ್ಷಿ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ನಟ ಮಹೇಶ್, ಸಿನಿಮಾ ನಿರ್ದೇಶಕ ವಂಶಿ ಪೈಡಿಪಲ್ಲಿ ಸೇರಿದಂತೆ ಕುಟುಂಬದವರು ಪಾರ್ಟಿ ಮಾಡಿದ್ದಾರೆ. ಈ ವೇಳೆ ನಮ್ರತಾ ಅವರು ಸಂತೋಷದ ಕ್ಷಣಗಳನ್ನು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಆ ಫೋಟೋವನ್ನು ಇನ್ಸ್ ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದರು.

    ನಮ್ರತಾ ಆ ಫೋಟೋಗೆ “ಸೂಪರ್ ಡೂಪರ್ ಸಕ್ಸಸ್ ಮಹರ್ಷಿ ಸಿನಿಮಾ ಕೊಟ್ಟಿದ್ದಕ್ಕೆ ನಿರ್ದೇಶಕ ವಂಶಿಪೈಡಿಪಲ್ಲಿ ಅವರಿಗೆ ಧನ್ಯವಾದಗಳು” ಎಂದು ಬರೆದಿದ್ದರು. ಈ ಫೋಟೋಗೆ ಗೌರವ್ ಎಂಬಾತ ‘ನಮ್ರತಾ ನೀವ್ಯಾಕೆ ಸ್ವಲ್ಪವೂ ಮೇಕಪ್ ಮಾಡಿಕೊಳ್ಳವುದಿಲ್ಲ. ನೀವು ಯಾವುದಾದರೂ ಫೋಬಿಯಾದಿಂದ ಬಳಲುತ್ತಿದ್ದೀರಾ? ಅಥವಾ ಖಿನ್ನತೆಯಲ್ಲಿದ್ದೀರಾ? ಎಂದು ಕಮೆಂಟ್ ಮಾಡಿದ್ದನು.

    ಗೌತಮ್ ಕಮೆಂಟ್ ನೋಡಿದ ನಮ್ರತಾ ಅವರು, “ಗೌರವ್ ನೀನು ಮೇಕಪ್ ಮಾಡಿಕೊಂಡ ಮಹಿಳೆಯರನ್ನೇ ಇಷ್ಟಪಡುತ್ತೀಯಾ? ಹಾಗಿದ್ದರೆ ಇನ್ನು ಮುಂದೆ ನೀನು ನನ್ನಂತೆ ಆಲೋಚನೆ ಮಾಡುವವರನ್ನು ಫಾಲೋ ಮಾಡು. ಇಲ್ಲಿಂದ ನೀನು ನಿರ್ಗಮಿಸಬಹುದು. ಇದು ನನ್ನ ಮನವಿ” ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.

    ನಮ್ರತಾ ಅವರು 1993ರಲ್ಲಿ ಮಿಸ್ ಇಂಡಿಯಾ ಅವಾರ್ಡ್ ಗೆದ್ದಿದ್ದರು. ಅಷ್ಟೇ ಅಲ್ಲದೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಅದರಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದ್ದರು. 2005ರಲ್ಲಿ ನಮ್ರತಾ ಮಹೇಶ್ ಬಾಬು ಅವರನ್ನು ಮದುವೆಯಾಗಿದ್ದು, ವಿವಾಹವಾದ ನಂತರ ಅವರು ಸಿನಿಮಾರಂಗದಿಂದ ದೂರ ಉಳಿದಿದ್ದಾರೆ.

    https://www.instagram.com/p/BxS5TuFBeYz/