Tag: Hyderabad

  • ಟಿಆರ್‌ಎಸ್‌, ಓವೈಸಿಯ ಕೋಟೆ ಛಿದ್ರ – ಹೈದರಾಬಾದ್‌ನಲ್ಲಿ ಬಿಜೆಪಿ ಮುನ್ನಡೆ

    ಟಿಆರ್‌ಎಸ್‌, ಓವೈಸಿಯ ಕೋಟೆ ಛಿದ್ರ – ಹೈದರಾಬಾದ್‌ನಲ್ಲಿ ಬಿಜೆಪಿ ಮುನ್ನಡೆ

    ಹೈದರಾಬಾದ್‌: ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಸಿಎಂ ಚಂದ್ರಶೇಖರ್‌ ರಾವ್‌ ಮತ್ತು ಅಸಾದುದ್ದೀನ್ ಒವೈಸಿಯ ಕೋಟೆಯನ್ನು ಛಿದ್ರಗೊಳಿಸಿ ಬಿಜೆಪಿ ಮೊದಲ ಬಾರಿಗೆ ಎರಡಂಕಿಯನ್ನು ದಾಟಿ  ಮುನ್ನಡೆಯುತ್ತಿದೆ.

    ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಒಟ್ಟು 150 ಸ್ಥಾನಗಳ ಪೈಕಿ ಟಿಆರ್‌ಎಸ್‌ 71ರಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 40, ಎಐಎಂಎಂ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್‌ 3 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

    ವಿಶೇಷ ಏನೆಂದರೆ 2016ರ ಚುನಾವಣೆಯಲ್ಲಿ ಟಿಆರ್‌ಎಸ್‌ 99, ಎಐಎಂಎಂ 44, ಕಾಂಗ್ರೆಸ್‌ 3 ವಾರ್ಡ್‌ಗಳನ್ನು ಗೆದ್ದುಕೊಂಡಿದ್ದರೆ ಬಿಜೆಪಿ ಕೇವಲ 4 ವಾರ್ಡ್‌ಗಳನ್ನು ಮಾತ್ರ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತ್ತು. ಪರಿಣಾಮ ಗೃಹ ಸಚಿವ ಅಮಿತ್‌ ಶಾ ಆದಿಯಾಗಿ ಕೇಂದ್ರದ ಬಿಜೆಪಿ ನಾಯಕರು ವ್ಯಾಪಕ ಪ್ರಚಾರ ಕೈಗೊಂಡಿದ್ದರು.

    ಈ ಬಾರಿ ಕೊರೊನಾ ಸುರಕ್ಷಾ ಕ್ರಮಗಳನ್ನು ಪಾಲಿಸಿಕೊಂಡು ಚುನಾವಣೆ ನಡೆಸಿದ ಕಾರಣ ಮತಗಟ್ಟೆಯ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು. ಅಷ್ಟೇ ಅಲ್ಲದೇ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆದಿರುವ ಕಾರಣ ಅಂತಿಮ ಫಲಿತಾಂಶಗಳು ರಾತ್ರಿ ಪ್ರಕಟವಾಗುವ ಸಾಧ್ಯತೆಯಿದೆ. ಕೆಲವು ವಾರ್ಡ್‌ಗಳಲ್ಲಿ ಭಾರೀ ಪೈಪೋಟಿ ಇದ್ದು ಈಗ ಮುನ್ನಡೆಯಲ್ಲಿದ್ದರೂ ಅಂತಿಮ ಫಲಿತಾಂಶದಲ್ಲಿ ಬದಲಾಗುವ ಸಾಧ್ಯತೆಯಿದೆ.

    ಸಂಜೆ 4:30ರ ವೇಳೆಗೆ ಒಟ್ಟು 34 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಟಿಆರ್‌ಎಸ್‌ 15, ಎಐಎಂಎಂ 13, ಬಿಜೆಪಿ 4, ಕಾಂಗ್ರೆಸ್‌ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

  • ಒತ್ತಾಯದಿಂದ ಮದುವೆ ಮಾಡಿದ್ದಕ್ಕೆ ನವವಿವಾಹಿತೆ ಆತ್ಮಹತ್ಯೆಗೆ ಶರಣು

    ಒತ್ತಾಯದಿಂದ ಮದುವೆ ಮಾಡಿದ್ದಕ್ಕೆ ನವವಿವಾಹಿತೆ ಆತ್ಮಹತ್ಯೆಗೆ ಶರಣು

    ಹೈದರಾಬಾದ್: ಒತ್ತಾಯಪೂರ್ವಕವಾಗಿ ಮದುವೆ ಮಾಡಿದ್ದರಿಂದ ಮನನೊಂದ ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ.

    ನವವಿವಾಹಿತೆಯನ್ನು ಚೈತನ್ಯ ಎಂದು ಗುರುತಿಸಲಾಗಿದೆ. ಈಕೆ ಮಂಕಲಡೋಡಿ ನಿವಾಸಿ ಶ್ರೀನಿವಾಸುಲು ಅವರ ಪುತ್ರಿ. ಈಕೆಯನ್ನು ಅಕ್ಟೋಬರ್ 29 ರಂದು ಕುರ್ಮನುಪಲ್ಲಿಯ ತಂಗವೇಲ್ (24) ಜೊತೆ ಮದುವೆ ಮಾಡಿಕೊಡಲಾಗಿತ್ತು. ಚೈತನ್ಯ ಮದುವೆಯಾಗಲು ಇಷ್ಟಪಡದ ಕಾರಣ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ತಂಗವೇಲ್ ತನ್ನ ಮಾವ ಶ್ರೀನಿವಾಸುಲುಗೂ ಇದೇ ಕಾರಣವನ್ನು ಹೇಳಿದ್ದನು.

    ಇತ್ತ ಚೈತನ್ಯ ತನ್ನ ಪತಿ ಮನೆಯ ಬಾತ್‍ರೂಂನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತನ್ನ ಸಹೋದರಿಯ ಸಾವಿನ ಸುದ್ದಿಯನ್ನು ಚೈತನ್ಯ ಸಹೋದರರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ ಇದರಿಂದ ಕೋಪೋದ್ರಿಕ್ತರಾದ ಅವರು ತಂಗವೇಲ್ ಮನೆಯ ಮೇಲೆ ದಾಳಿ ಮಾಡಿದರು. ಅಲ್ಲದೆ ಮನೆಯ ವಸ್ತುಗಳನ್ನು ನಾಶಪಡಿಸಿದರು. ಘಟನೆ ಸಂಬಂಧ ಇಬ್ಬರು ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಸಿಐ ಶ್ರೀಧರ್ ಮತ್ತು ಎಸ್‍ಐ ನರೇಂದ್ರ ತಿಳಿಸಿದ್ದಾರೆ.

  • ಸೇತುವೆ ಮೇಲೆ ಕಾರು ಪಾರ್ಕ್ ಮಾಡಿ ನದಿಗೆ ಜಿಗಿದ ಕೃಷಿ ಅಧಿಕಾರಿ

    ಸೇತುವೆ ಮೇಲೆ ಕಾರು ಪಾರ್ಕ್ ಮಾಡಿ ನದಿಗೆ ಜಿಗಿದ ಕೃಷಿ ಅಧಿಕಾರಿ

    – ಅರುಣಾ ಆತ್ಮಹತ್ಯೆಗೆ ಕಾರಣವೇನು..?

    ಹೈದರಾಬಾದ್: ಮಹಿಳಾ ಕೃಷಿ ಅಧಿಕಾರಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಧ್ರಪ್ರದೇಶದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯನ್ನು ಅರುಣಾ(23) ಎಂದು ಗುರುತಿಸಲಾಗಿದೆ. ಅರುಣಾ ಮನೋರ್ ಮಂಡಲದಲ್ಲಿರುವ ಮಂಜೀರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ಸಂಗರೆಡ್ಡಿಯಲ್ಲಿರುವ ರೈತ ತರಬೇತಿ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಈ ಘಟನೆ ಕಳೆದ ಶನಿವಾರವೇ ನಡೆದಿದೆ ಎನ್ನಲಾಗಿದ್ದು, ಸೇತುವೆಯ ಮೇಲೆ ಬಹಳ ದಿನಗಳಿಂದ ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಕಾರನ್ನು ತಪಾಸಣೆ ಮಾಡಿದಾಗ ಅದರಲ್ಲಿ ಅರುಣಾ ಅವರ ಫೋನ್ ಮತ್ತು ಅವರು ವಾಲೆಟ್ ಸಿಕ್ಕಿದೆ. ನಂತರ ಅರುಣಾ ಮನೆಯವರನ್ನು ಸಂಪರ್ಕ ಮಾಡಿದ್ದು, ಅವರು ಕೂಡ ಅರುಣಾ ಅವರು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ಈ ವಿಷಯ ತಿಳಿದ ಪೊಲೀಸರು ಅಗ್ನಿಶಾಮಕ ದಳವರ ಜೊತೆ ಬಂದು ಅರುಣಾ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅರುಣಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ತಿಳಿದು ಬಾರದ ಕಾರಣ ಪೊಲೀಸರು ತನಿಖೆಯನ್ನು ಆರಂಭ ಮಾಡಿದ್ದಾರೆ. ಈ ಸಂಬಂಧ ಸಂಗರೆಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 6ನೇ ಮಹಡಿಯಿಂದ ಜಿಗಿದ 21 ವರ್ಷದ ಮಹಿಳಾ ಟೆಕ್ಕಿ

    6ನೇ ಮಹಡಿಯಿಂದ ಜಿಗಿದ 21 ವರ್ಷದ ಮಹಿಳಾ ಟೆಕ್ಕಿ

    – ವಾಶ್‍ರೂಂ ಕಿಟಕಿಯಿಂದ ಜಂಪ್

    ಹೈದರಾಬಾದ್: ಮಹಿಳಾ ಟೆಕ್ಕಿ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದಾರಾಬಾದ್ ನಲ್ಲಿ ನಡೆದಿದೆ.

    21 ವರ್ಷದ ಸುಶ್ಮಿತಾ ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಟೆಕ್ಷಟೈಲ್ ವ್ಯಾಪಾರಿ ರಂಗನ್ ಗೋವಿಂದರಾಜ್ ಅವರ ಮೂವರ ಮಕ್ಕಳಲ್ಲಿ ಹಿರಿಯಳಾದ ಸುಶ್ಮಿತಾ ಟೆಕ್ ಮಹೀಂದ್ರಾದಲ್ಲಿ ಕೆಲಸ ಮಾಡಿಕೊಂಡಿದ್ದಳು. ಅಕ್ಟೋಬರ್ 30ರಂದು ಸುಶ್ಮಿತಾ ಕೆಲಸಕ್ಕೆ ಸೇರಿಕೊಂಡು ವೃತ್ತಿ ಜೀವನ ಆರಂಭಿಸಿದ್ದಳು.

    ಗುರುವಾರ ಬೆಳಗ್ಗೆ 9.30ಕ್ಕೆ ಸುಶ್ಮಿತಾಳಕ್ಕೆ ತಂದೆಯೇ ಡ್ರಾಪ್ ಮಾಡಿದ್ದರು. ಆಫೀಸ್ ಒಳಗೆ ಬಂದ ಸುಶ್ಮಿತಾ ನೇರವಾಗಿ ಕ್ಯಾಂಟೀನ್ ಗೆ ತೆರಳಿದ್ದಾಳೆ. ಅಲ್ಲಿಂದ ಆರನೇ ಮಹಡಿಯಲ್ಲಿರುವ ವಾಶ್ ರೂಂಗೆ ಹೋದ ಸುಶ್ಮಿತಾ ಕಿಟಕಿಯಿಂದ ಜಿಗಿದಿದ್ದಾಳೆ. ಸಿಬ್ಬಂದಿ ಆಗಮಿಸುವಷ್ಟರಲ್ಲಿಯಾ ಸುಶ್ಮಿತಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇದನ್ನೂ ಓದಿ: ಏಳನೇ ಮಹಡಿಯಿಂದ ಜಿಗಿದ ನವವಿವಾಹಿತೆ 

    ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸುಶ್ಮಿತಾ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸುಶ್ಮಿತಾ ಕುಟುಂಬಸ್ಥರು ಮತ್ತು ಸಹದ್ಯೋಗಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್‍ನಲ್ಲಿ ಪರಿಚಯ- ಟೆಕ್ಕಿಯನ್ನು ಮನೆಗೆ ಕರೆದು 5 ಲಕ್ಷ ಕೊಡು ಅಂದ್ಳು!

  • ಹೈದರಾಬಾದ್‍ನ ಆ ಬೌಲರ್‌ಗೆ ಬ್ಯಾಟ್ ಬೀಸುವುದು ಬಹಳ ಕಷ್ಟ: ಪಡಿಕ್ಕಲ್

    ಹೈದರಾಬಾದ್‍ನ ಆ ಬೌಲರ್‌ಗೆ ಬ್ಯಾಟ್ ಬೀಸುವುದು ಬಹಳ ಕಷ್ಟ: ಪಡಿಕ್ಕಲ್

    – ಅವಕಾಶ ಬಂದ್ರೆ ಎರಡು ಕೈಯಿಂದ ಬಾಚಿಕೊಳ್ತೇನೆ

    ಬೆಂಗಳೂರು: ಸನ್‍ರೈಸಸ್ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ವಿರುದ್ಧ ಬ್ಯಾಟ್ ಬೀಸುವುದು ಬಹಳ ಕಷ್ಟ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದೇವದತ್ ಪಡಿಕ್ಕಲ್ ಹೇಳಿದ್ದಾರೆ.

    ಕರ್ನಾಟಕದ ದೇವದತ್ ಪಡಿಕ್ಕಲ್ ಈ ಬಾರಿ ತಾವಾಡಿದ ಮೊದಲ ಐಪಿಎಲ್ ಆವೃತ್ತಿಯಲ್ಲೇ ದಾಖಲೆಯ ಆಟವಾಡಿದ್ದಾರೆ. ಆರ್‌ಸಿಬಿ ಪರ ಆರಂಭಿಕನಾಗಿ ಬ್ಯಾಟ್ ಬೀಸಿ ಐದು ಅರ್ಧಶತಕಗಳನ್ನು ಸಿಡಿಸುವ ಮೂಲಕ ಸಾಧನೆ ಮಾಡಿದ್ದಾರೆ. ಜೊತೆಗೆ ವಿಶ್ವದ ಡೆಡ್ಲಿ ಬೌಲರ್ ಗಳಾದ ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್ ಮತ್ತು ಕಗಿಸೊ ರಬಾಡಾರನ್ನು ಸಮರ್ಥವಾಗಿ ಎದುರಿಸು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.

    ಐಪಿಎಲ್ ಮುಗಿದ ನಂತರ ಬೌಲರ್ ಗಳ ವಿಚಾರವಾಗಿ ಮಾತನಾಡಿರುವ ಪಡಿಕ್ಕಲ್, ನಾನು ದೇಶೀಯ ಕ್ರಿಕೆಟ್‍ನಲ್ಲಿ ವೇಗದ ಬೌಲರ್ ಗಳನ್ನು ಫೇಸ್ ಮಾಡಿದ್ದೇನೆ. ಹೀಗಾಗಿ ವೇಗದ ಬೌಲರ್ ಗಳನ್ನು ಐಪಿಎಲ್‍ನಲ್ಲಿ ಸಮರ್ಥವಾಗಿ ಎದುರಿಸಿದ್ದೇನೆ. ಆದರೆ ಐಪಿಎಲ್‍ನಲ್ಲಿ ಸ್ಪಿನ್ ಬೌಲರ್ ಗಳನ್ನು ಫೇಸ್ ಮಾಡುವುದು ಬಹಳ ಕಷ್ಟವಾಗಿತ್ತು. ಅದರಲ್ಲೂ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ವಿರುದ್ಧ ಬ್ಯಾಟ್ ಬೀಸುವುದು ಕಷ್ಟ ಎಂದು ಹೇಳಿದ್ದಾರೆ.

    ಐಪಿಎಲ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಪಡಿಕ್ಕಲ್ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಆಯ್ಕೆಯಾಗುವಲ್ಲಿ ವಿಫಲರಾದರು. ಆದರೆ ಈ ವಿಚಾರವಾಗಿ ಮಾತನಾಡಿರುವ ಪಡಿಕ್ಕಲ್, ತಮ್ಮ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಡ್ರೀಮ್ ಆಗಿರುತ್ತದೆ. ನಾನು ಕೂಡ ಟೀಂ ಇಂಡಿಯಾಗೆ ಆಡುವ ಆಸೆ ಇಟ್ಟುಕೊಂಡಿದ್ದೇನೆ. ಅದಕ್ಕಾಗಿಯೇ ಶ್ರಮ ಪಡುತ್ತಿದ್ದೇನೆ. ಅವಕಾಶ ಬಂದರೆ ಎರಡೂ ಕೈಯಿಂದ ಬಾಚಿಕೊಳ್ಳುತ್ತೇನೆ ಎಂದು ಪಡಿಕ್ಕಲ್ ತಿಳಿಸಿದ್ದಾರೆ.

    ಐಪಿಎಲ್ 2020ರ ಆವೃತ್ತಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದ ಪಡಿಕ್ಕಲ್, ಮಾಧ್ಯಮಗಳೊಂದಿಗೆ ಮಾತನಾಡಿ, ಇದು ಆರಂಭ ಮಾತ್ರ. ನನ್ನ ಆಟ ಮತ್ತಷ್ಟು ಸುಧಾರಿಸಿಕೊಳ್ಳಬೇಕಿದೆ. ಇನ್ನಿಂಗ್ಸ್ ಆರಂಭ ಮಾಡುವ ವಿಚಾರದಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ಸಹಾಯ ಮಾಡಿದ್ದರು. ಯಶಸ್ಸನ್ನು ತಲೆಗೇರಿಕೊಳ್ಳದೆ ಶ್ರಮವಹಿಸಿಬೇಕು. ದೇಶಕ್ಕಾಗಿ ಆಡಬೇಕು ಎಂಬ ಅಲೋಚನೆಗಳನ್ನು ಬಿಟ್ಟು ಕೇವಲ ನಿನ್ನ ಆಟವನ್ನು ಎಂಜಾಯ್ ಮಾಡುತ್ತಾ ಮುಂದೇ ಸಾಗು. ಎಲ್ಲವೂ ನಡೆಯಬೇಕಾದ ಸಂದರ್ಭದಲ್ಲಿ ನಡೆಯುತ್ತದೆ ಎಂದು ಸಲಹೆ ನೀಡಿದ್ದರು ಎಂದು ಪಡಿಕ್ಕಲ್ ತಿಳಿಸಿದ್ದಾರೆ.

    2020ರ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಆರ್‌ಸಿಬಿ ತಂಡದಲ್ಲಿ ಪಡಿಕ್ಕಲ್ ಹೆಚ್ಚು ಗಮನ ಸೆಳೆದರು. ಟೂರ್ನಿಯಲ್ಲಿ 15 ಪಂದ್ಯಗಳನ್ನು ಆಡಿರುವ ಯುವ ಆಟಗಾರ ಪಡಿಕ್ಕಲ್ 5 ಶತಕದ ಜೊತೆಗೆ 473 ರನ್ಸ್ ಗಳಿಸಿದ್ದು, ಪಾದಾರ್ಪಣೆ ಮಾಡಿದ ವರ್ಷದಲ್ಲೇ ಅತ್ಯಧಿಕ ರನ್ ಗಳಿಸಿದ ಶ್ರೇಯಸ್ ಅಯ್ಯರ್ ದಾಖಲೆಯನ್ನು ಅಳಿಸಿ ಹಾಕಿದ್ದರು.

  • ಕೊರೊನಾ ಬಂದಿರೋ ಕಾರಣ ಬಿಚ್ಚಿಟ್ಟ ಮೆಗಾಸ್ಟಾರ್ ಚಿರಂಜೀವಿ

    ಕೊರೊನಾ ಬಂದಿರೋ ಕಾರಣ ಬಿಚ್ಚಿಟ್ಟ ಮೆಗಾಸ್ಟಾರ್ ಚಿರಂಜೀವಿ

    – ಮೊದ್ಲು ಕೊರೊನಾ ಪಾಸಿಟಿವ್, 3 ಬಾರಿ ನೆಗೆಟಿವ್

    ಹೈದರಾಬಾದ್: ಇತ್ತೀಚೆಗೆ ಮೆಗಾಸ್ಟಾರ್ ಜಿರಂಜೀವಿಯವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಆದರೆ ನನಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಜಿರಂಜೀವಿಯವರೇ ಸ್ಪಷ್ಟಪಡಿಸಿದ್ದಾರೆ.

    ಕಳೆದ ನಾಲ್ಕು ದಿನಗಳ ಹಿಂದೆ ಮೆಗಾಸ್ಟಾರ್ ಜಿರಂಜೀವಿಯವರಿಗೆ ಕೊರೊನಾ ಸೋಂಕು ಬಂದಿದೆ ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿಯ ಹಿಂದಿನ ಕಾರಣವನ್ನು ಸ್ವತಃ ಜಿರಂಜೀವಿಯವರೇ ರೀವಿಲ್ ಮಾಡಿದ್ದು, ದೋಷಪೂರಿತ ಆರ್.ಟಿ-ಪಿ.ಸಿ.ಆರ್ ಕಿಟ್‍ನಿಂದ ನನ್ನ ಕೊರೊನಾ ವರದಿ ತಪ್ಪಾಗಿ ಬಂದಿತ್ತು ಎಂದು ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಜಿರಂಜೀವಿಯವರು, ನನಗೆ ವೈದ್ಯರ ತಂಡ ಮೂರು ಬಗೆಯ ಕೊರೊನಾ ಟೆಸ್ಟ್ ಮಾಡಿದ್ದು, ಈ ವೇಳೆ ನನಗೆ ಕೊರೊನಾ ನೆಗೆಟಿವ್ ಇದೆ ಎಂದು ಖಚಿತವಾಗಿದೆ. ಇದಕ್ಕೂ ಮೊದಲು ಬಂದ ವರದಿ ಸುಳ್ಳಾಗಿದ್ದು, ದೋಷಪೂರಿತ ಆರ್.ಟಿ-ಪಿ.ಸಿ.ಆರ್ ಕಿಟ್ ಬಳಕೆಯಿಂದ ನನಗೆ ಕೊರೊನಾ ಪಾಸಿಟಿವ್ ಎಂದು ಬಂದಿತ್ತು. ಈ ಕಠಿಣ ಸಮಯದಲ್ಲಿ ನನ್ನ ಆರೋಗ್ಯದ ಮೇಲೆ ಕಾಳಜಿ ಮತ್ತು ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

    ಟೈಮ್ ಮತ್ತು ಕೊರೊನಾ ವೈರಸ್ ಕಳೆದ ನಾಲ್ಕು ದಿನದಿಂದ ನನ್ನ ಜೊತೆ ಆಟವಾಡುತ್ತಿದೆ. ಕಳೆದ ಭಾನುವಾರ ಕೊರೊನಾ ಪಾಸಿಟಿವ್ ಎಂದು ತಿಳಿದು ನಾನು ಕ್ವಾರಂಟೈನ್ ಆಗಿದ್ದೆ. ಆದರೆ ಎರಡು ದಿನವಾದರೂ ಕೊರೊನಾದ ಯಾವುದೇ ಗುಣಲಕ್ಷಣ ಕಾಣಿಸಿಕೊಳ್ಳಲಿಲ್ಲ. ಈ ವೇಳೆ ಮತ್ತೆ ಪರೀಕ್ಷೆ ಮಾಡಿಸೋಣ ಎಂದು ಅಪೋಲೋ ಆಸ್ಪತ್ರೆ ವೈದ್ಯರನ್ನು ಭೇಟಿ ಮಾಡಿದೆ. ಅಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದಾಗ ಕೊರೊನಾ ಸೋಂಕು ಇಲ್ಲ ಎಂಬುದು ತಿಳಿಯಿತು. ನಂತರ ಮತ್ತೆ ಮೂರು ಬಾರಿ ಕೊರೊನಾ ಟೆಸ್ಟ್ ಮಾಡಿಸಿದ್ದು, ಅಲ್ಲಿಯೂ ಕೂಡ ನನಗೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಚಿರಂಜೀವಿ ಟ್ವಿಟ್ಟರಿನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಸದ್ಯ ಚಿರಂಜೀವಿಯವರು ತಮ್ಮ ಪುತ್ರ ರಾಮ್‍ಚರಣ್ ನಿರ್ಮಾಣ ಮಾಡುತ್ತಿರುವ ಆಚಾರ್ಯ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್‍ಗೆ ಹೋಗುವ ಮುನ್ನ ಚಿರಂಜೀವಿಯವರು ಕೊರೊನಾ ಟೆಸ್ಟ್ ಮಾಡಿಸಿದ್ದು, ಈ ವರದಿಯಲ್ಲಿ ಅವರಿಗೆ ಮೊದಲ ಬಾರಿ ಪಾಸಿಟಿವ್ ಬಂದಿತ್ತು. ಈ ಕಾರಣದಿಂದ ಆಚಾರ್ಯ ಸಿನಿಮಾದ ಶೂಟಿಂಗ್ ಅನ್ನು ಮುಂದೂಡಲಾಗಿತ್ತು.

  • ಟಾಲಿವುಡ್ ನಟ ಚಿರಂಜೀವಿಗೆ ಕೊರೊನಾ ಪಾಸಿಟಿವ್

    ಟಾಲಿವುಡ್ ನಟ ಚಿರಂಜೀವಿಗೆ ಕೊರೊನಾ ಪಾಸಿಟಿವ್

    ಹೈದರಾಬಾದ್: ಟಾಲಿವುಡ್ ಖ್ಯಾತ ನಟ ಚಿರಂಜೀವಿ ಕೊನಿಡೆಲಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರು ಖಚಿತಪಡಿಸಿದ್ದು, ಆಚಾರ್ಯ ಸಿನಿಮಾ ಚಿತ್ರೀಕರಣ ಆರಂಭಿಸುವುದಕ್ಕೂ ಮುನ್ನ ಕೊರೊನಾ ಟೆಸ್ಟ್ ಗೆ ಒಳಗಾದೆ. ಈ ವೇಳೆ ಪಾಸಿಟಿವ್ ವರದಿ ಬಂದಿದೆ. ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲ. ಹೀಗಾಗಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ.

    ಇತ್ತೀಚೆಗೆ ಕಳೆದ 5 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆಗೆ ಒಳಗಾಗಬೇಕೆಂದು ವಿನಂತಿಸುತ್ತೇನೆ. ನನ್ನ ಆರೋಗ್ಯದ ಸ್ಥಿತಿಯ ಬಗ್ಗೆ ನಿಮಗೆ ಶೀಘ್ರವೇ ಅಪ್‍ಡೇಟ್ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಲೆಟರ್ ಹೆಡ್ ಇರುವ ಪತ್ರವನ್ನು ಹಂಚಿಕೊಳ್ಳುವ ಮೂಲಕ ಚಿರಂಜೀವಿ ಈ ಕುರಿತು ಖಚಿತಪಡಿಸಿದ್ದಾರೆ. ಸದ್ಯ ಹೋಮ್ ಐಸೋಲೇಶನ್‍ಗೆ ಒಳಪಟ್ಟಿದ್ದಾರೆ.

    ಇಂದಿನಿಂದ ಆಚಾರ್ಯ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಚಿರಂಜೀವಿ ಹಾಗೂ ಕೊರಟಾಲ ಶಿವ ತಮ್ಮ ಭಾಗದ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಕೊರೊನಾ ನಿಯಮದಂತೆ ಚಿತ್ರ ತಂಡದ ಎಲ್ಲ ಸದಸ್ಯರಿಗೆ ಪರೀಕ್ಷೆ ಮಾಡಲಾಗಿದ್ದು, ಈ ವೇಳೆ ಚಿರಂಜೀವಿ ಅವರಿಗೆ ಪಾಸಿಟಿವ್ ವರದಿ ಬಂದಿದೆ.

    ಕೊರೊನಾ ಲಾಕ್‍ಡೌನ್‍ನಿಮದಾಗಿ ಆಚಾರ್ಯ ಸಿನಿಮಾ ಚಿತ್ರೀಕರಣ ಸ್ಥಗಿತವಾಗಿತ್ತು. ಇದೀಗ ಮತ್ತೆ ಆರಂಭವಾಗಿದ್ದು, ಹೈದರಾಬಾದ್‍ನಲ್ಲಿ ಚಿತ್ರಕರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಇಂದು ಚಿರಂಜೀವಿಗೆ ಪಾಸಿಟಿವ್ ಬಂದಿದೆ. ಚಿರಂಜೀವಿ ಸೇರಿದಂತೆ ಇತರ ಪ್ರಮುಖ ಪಾತ್ರಗಳ ಶೂಟಿಂಗ್ ಮಾಡಲು ಚಿತ್ರತಂಡ ಯೋಜಿಸಿತ್ತು. ಈ ಚಿತ್ರವನ್ನು ಮ್ಯಾಟನಿ ಎಂಟರ್ ಟೈನ್ಮೆಂಟ್ ಸಹಯೋಗದೊಂದಿಗೆ ಕೊನಿಡೆಲಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  • 2 ಕಿ.ಮೀ ಓಡಿ ಅಂಬುಲೆನ್ಸ್‌ಗೆ ದಾರಿಮಾಡಿಕೊಟ್ಟ ಟ್ರಾಫಿಕ್ ಪೊಲೀಸ್- ವಿಡಿಯೋ

    2 ಕಿ.ಮೀ ಓಡಿ ಅಂಬುಲೆನ್ಸ್‌ಗೆ ದಾರಿಮಾಡಿಕೊಟ್ಟ ಟ್ರಾಫಿಕ್ ಪೊಲೀಸ್- ವಿಡಿಯೋ

    ಹೈದರಾಬಾದ್: ನೂರಾರು ವಾಹನಗಳು ಚಲಿಸುತ್ತಿರುವ ರಸ್ತೆಯಲ್ಲಿ 2 ಕಿ.ಮೀ ಓಡಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿರುವ ಹೈದರಾಬಾದ್ ಟ್ರಾಫಿಕ್ ಕಾನ್‍ಸ್ಟೆಬಲ್ ವಿಡಿಯೋ ಸಖತ್ ವೈರಲ್ ಆಗಿದೆ.

    ನವೆಂಬರ್2 ರಂದು ಸಂಜೆ ಸುಮಾರು 6 ರಿಂದ 7 ಗಂಟೆಗೆ ಸಮಯದಲ್ಲಿ ರಸ್ತೆಯಲ್ಲಿ ದಟ್ಟವಾದ ವಾಹನ ಸಂಚಾರ ಇತ್ತು. ಈ ವೇಳೆ ಅಂಬುಲೆನ್ಸ್‌ನಲ್ಲಿ ರೋಗಿ ಇರುವುದನ್ನು ಗಮನಿಸಿದ ಕಾನ್‍ಸ್ಟೆಬಲ್ ಜಿ.ಬಾಬ್ಜಿ ರಸ್ತೆಯ ಮಧ್ಯದಲ್ಲಿ ಓಡಿ ಟ್ರಾಫಿಕ್ ಕ್ಲೀಯರ್ ಮಾಡುತ್ತಾ ಸಾಗಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಹಲವರು ಕಾನ್‍ಸ್ಟೆಬಲ್ ಜಿ.ಬಾಬ್ಜಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕಾನ್‍ಸ್ಟೆಬಲ್ ಬಾಬ್ಜಿ ಅವರು ಹೈದರಾಬಾದ್ ನಗರದ ಜಿಪಿಒ ಜಂಕ್ಷನ್, ಅಬ್ದಿಸ್ ಮತ್ತು ಕೋಟಿಯ ಆಂಧ್ರ ಬ್ಯಾಂಕ್ ನಡುವಿನ ರಸ್ತೆಯಲ್ಲಿ ಸುಮಾರು 2 ಕಿ ಮೀ ಓಡಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಬ್ಜಿ ಅವರು, ಅಂಬ್ಯುಲೆನ್ಸ್ ಜಿಪಿಒ ಜಂಕ್ಷನ್‍ಗೆ ತಲುಪಿದಾಗ ಸಂಜೆ 7 ಗಂಟೆ ಆಗಿತ್ತು. ಟ್ರಾಫಿಕ್‍ನಲ್ಲಿ ಸಿಲುಕಿಕೊಂಡಿರುವುದನ್ನು ಗಮನಿಸಿದೆ. ನಾನು ಏನನ್ನಾದರೂ ಸಹಾಯ ಮಾಡಬಹುದಾಗಿತ್ತು ಎಂದುಕೊಂಡು ರಸ್ತೆಯಲ್ಲಿ ಆಂಧ್ರ ಬ್ಯಾಂಕ್ ಕಡೆಗೆ ಓಡಿ ಅಂಬುಲೆನ್ಸ್ ಗೆ ಸ್ವಲ್ಪ ಸ್ಥಳಾವಕಾಶ ನೀಡುವಂತೆ ವಾಹನ ಚಾಲಕರಲ್ಲಿ ಕೇಳಿಕೊಂಡೆ. ಆಗ ವಾಹನ ಸವಾರರು ಅಂಬುಲೆನ್ಸ್ ಹೋಗಲು ಜಾಗ ಮಾಡಿಕೊಟ್ಟರು ಎಂದು ಹಳಿದ್ದಾರೆ.

    ನನ್ನ ಪ್ರಾಮಾಣಿಕತೆಯನ್ನು ನೋಡಿದ ವಾಹನ ಚಾಲಕರು ಮೆಚ್ಚುಗೆಯೊಂದಿಗೆ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು. ಅನೇಕ ವಾಹನ ಚಾಲಕರು ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ. ನನಗೆ ಅಪಾರ ಸಂತೋಷ ಮತ್ತು ತೃಪ್ತಿಯನ್ನು ನೀಡಿದೆ ಎಂದು ಟ್ರಾಫಿಕ್ ಕಾನ್‍ಸ್ಟೆಬಲ್ ಬಾಬ್ಜಿ ಸಂತಸ ವ್ಯಕ್ತಪಡಿಸಿದ್ದಾರೆ.

  • ಅಮೆರಿಕದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಭಾರತೀಯನ ಚಾಕುವಿನಿಂದ ಇರಿದು ಕೊಂದ್ರು!

    ಅಮೆರಿಕದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಭಾರತೀಯನ ಚಾಕುವಿನಿಂದ ಇರಿದು ಕೊಂದ್ರು!

    – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
    – ಸಹಾಯಕ್ಕಾಗಿ ಸರ್ಕಾರದ ಮೊರೆ ಹೋದ ಪತ್ನಿ

    ಹೈದರಾಬಾದ್: ಕೆಲಸಕ್ಕೆಂದು ಅಮೆರಕಕ್ಕೆ ತೆರಳಿ ಅಲ್ಲಿ ಪಾಲುದಾರಿಕೆಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಭಾರತೀಯನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

    ಈ ಘಟನೆ ಅಮೆರಿಕದ ಜಾರ್ಜಿಯಾ ಎಂಬಲ್ಲಿ ಭಾನುವಾರ ನಡೆದಿದೆ. ಮೃತ ದುರ್ದೈವಿಯನ್ನು ಮೊಹಮ್ಮದ್ ಆರಿಫ್ ಮೊಹಿಯುದ್ದೀನ್(37) ಎಂದು ಗುರುತಿಸಲಾಗಿದೆ. ಈತ ಮೂಲತಃ ಹೈದರಾಬಾದ್ ನವನಾಗಿದ್ದು, ಕಳೆದ 10 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದನು.

    ಜಾರ್ಜಿಯಾದಲ್ಲಿ ಪಾಲುದಾರಿಕೆಯಲ್ಲಿ ಆರಿಫ್ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದನು. ಇದೀಗ ಮನೆಯ ಆವರಣದಲ್ಲಿಯೇ ದುಷ್ಕರ್ಮಿಗಳು ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಅಂಗಡಿಯ ಉದ್ಯೋಗಿ ಕೂಡ ಕೃತ್ಯದಲ್ಲಿ ಪಾಲುದಾರರಾಗಿರುವುದಾಗಿ ಆರಿಫ್ ಕುಟುಂಬ ಆರೋಪಿಸಿದೆ.

    ನನಗೆ ಮತ್ತು ನನ್ನ ತಂದೆಗೆ ತುರ್ತು ವೀಸಾದ ಮೂಲಕ ಅಮೆರಿಕ್ಕೆ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಿಕೊಡಿ. ಈ ಅವಕಾಶ ಕೊಟ್ಟರೆ ಪತಿಯ ಅಂತ್ಯಸಂಸ್ಕಾರವನ್ನು ಅಲ್ಲಿಯೇ ನಡೆಸುತ್ತೇವೆ ಎಂದು ಆರಿಫ್ ಪತ್ನಿ ಮೆಹ್ನಾಜ್ ಫಾತಿಮಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಭಾನುವಾರ 9 ಗಂಟೆಯ ಸುಮಾರಿಗೆ ನಾನು ಪತಿ ಜೊತೆ ಮಾತನಾಡಿದ್ದೇನೆ. ಆಗ ಆತ ಅರ್ಧ ಗಂಟೆ ಬಿಟ್ಟು ಮನೆಗೆ ಹೋಗಿ ನಂತರ ಕರೆ ಮಾಡುವುದಾಗಿ ತಿಳಿಸಿದ್ದ. ಆದರೆ ಅರ್ಧ ಗಂಟೆಯ ಬಳಿಕ ಆತನಿಂದ ನನಗೆ ಯಾವುದೇ ಕರೆ ಬಂದಿರಲಿಲ್ಲ. ಕೆಲ ಹೊತ್ತಿನ ಬಳಿಕ ನಾದಿನಿಯಿಂದಾಗಿ ನನಗೆ ವಿಚಾರ ತಿಳಿಯಿತು. ಆಕೆ ನನ್ನ ಪತಿಯನ್ನು ದುಷ್ಕರ್ಮಿಗಳು ಕೊಲೆಗೈದಿರುವುದಾಗಿ ತಿಳಿಸಿದಳು. ಸದ್ಯ ಪತಿ ಶವ ಜಾರ್ಜಿಯಾ ಆಸ್ಪತ್ರೆಯಲ್ಲಿದ್ದು, ಅಲ್ಲಿ ನಮ್ಮ ಕುಟುಂಬಸ್ಥರು ಯಾರೂ ಇಲ್ಲ ಎಂದು ಫಾತಿಮಾ ಬೇಸರ ವ್ಯಕ್ತಪಡಿಸಿದರು.

    ತೆಲಂಗಾಣದ ಎಂಬಿಟಿ ಪಕ್ಷದ ವಕ್ತಾರ ಉಲ್ಲಾ ಖಾನ್ ಅವರಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಅಮೆರಿಕದ ಭಾರತೀಯ ರಾಯಭಾರಿ ಕಚೇರಿಗೆ ಆರಿಫ್ ಕುಟುಂಬದ ಪರವಾಗಿ ಪತ್ರ ಬರೆದಿದ್ದಾರೆ.

  • ತಾಯಿಯಿಂದ  ವಾಟ್ಸಪ್ ಸ್ಟೇಟಸ್ ಅಪ್ಡೇಟ್ – ಮಗ ಅರೆಸ್ಟ್

    ತಾಯಿಯಿಂದ ವಾಟ್ಸಪ್ ಸ್ಟೇಟಸ್ ಅಪ್ಡೇಟ್ – ಮಗ ಅರೆಸ್ಟ್

    ಹೈದರಾಬಾದ್: ನೆರೆಮನೆಯ ಬೀಗ ಒಡೆದು ಚಿನ್ನದ ಆಭರಣಗಳನ್ನು ಖದ್ದಿದ್ದ ಕಳ್ಳನೊಬ್ಬ 15 ತಿಂಗಳ ನಂತರ ತಾಯಿಯ ವಾಟ್ಸಪ್ ಸ್ಟೇಟಸ್ ಮೂಲಕ ಸಿಕ್ಕಿಬಿದ್ದಿರುವ ಘಟನೆ ಹೈದರಾಬಾದ್‍ನ ಸಾಯಿಪುರಿ ಕಾಲೋನಿಯಲ್ಲಿ ನಡೆದಿದೆ.

    ಹೈದರಾಬಾದ್‍ನ ರಾಚಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಸಾಯಿಪುರಿ ಕಾಲೋನಿಯಲ್ಲಿ 2019ರ ಜುಲೈ 12 ರಂದು ರವಿಕಿರಣ್ ಎಂಬವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.

    ಬೆಳಕಿಗೆ ಬಂದಿದ್ದು ಹೇಗೆ?
    ರವಿಕಿರಣ್ ಅವರ ನೆರೆಮನೆಯಲ್ಲಿ ವಾಸವಾಗಿದ್ದ ಮಹಿಳೆ ಚಿನ್ನಾಭರಣ ಧರಿಸಿ ವಾಟ್ಸಪ್ ಸ್ಟೇಟಸ್‍ನಲ್ಲಿ ತನ್ನ ಫೋಟೋ ಹಾಕಿಕೊಂಡಿದ್ದಳು. ಇದನ್ನ ನೋಡಿದ ರವಿಕಿರಣ್ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ವಿಚಾರಣೆ ಮಾಡಿದಾಗ ನೆರೆಮನೆಯ ಆ ಮಹಿಳೆಯ ಮಗ ಜಿತೇಂದರ್ 15 ತಿಂಗಳ ಹಿಂದೆ ಆಭರಣ ಕದ್ದ ವಿಚಾರ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    2019ರ ಜುಲೈ 12 ರಂದು ರವಿಕಿರಣ್ ಮನೆಯವರು ದೇವಸ್ಥಾನಕ್ಕೆ ಹೋಗಿ ಮರಳಿ ಬಂದಾಗ ಬಾಗಿಲು ತೆರೆದುಕೊಂಡಿತ್ತು. ಬಹುಶ: ನಾನೇ ಬೀಗ ಹಾಕುವುದನ್ನು ಮರೆತಿರಬಹುದು ಎಂದುಕೊಂಡು ರವಿಕಿರಣ್ ಮನೆ ಪ್ರವೇಶಿಸಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾದರೂ ಆರೋಪಿ ಸಿಕ್ಕಿ ಬಿದ್ದಿರಲಿಲ್ಲ.

    ಈಗ ಆರೋಪಿ ಜಿತೇಂದರ್‍ನನ್ನು ಅರೆಸ್ಟ್ ಮಾಡಲಾಗಿದ್ದು, ಕೃತ್ಯದ ಬಗ್ಗೆ ತಿಳಿದಿದ್ದರೂ ವಿಷಯ ಮುಚ್ಚಿಟ್ಟಿದ್ದ ತಾಯಿಗೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.