Tag: Hyderabad

  • 25 ವರ್ಷದ ಟೆಕ್ಕಿಯ ಮುಖ ಮಿರರಲ್ಲಿ ನೋಡುತ್ತಾ ಕಾರ್ ಡ್ರೈವ್ ಮಾಡ್ತಾ ಚಾಲಕನ ಹಸ್ತಮೈಥುನ!

    25 ವರ್ಷದ ಟೆಕ್ಕಿಯ ಮುಖ ಮಿರರಲ್ಲಿ ನೋಡುತ್ತಾ ಕಾರ್ ಡ್ರೈವ್ ಮಾಡ್ತಾ ಚಾಲಕನ ಹಸ್ತಮೈಥುನ!

    ಹೈದರಾಬಾದ್: ಟೆಕ್ಕಿಯೊಬ್ಬಳು ಉಬರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಸ್ತಮೈಥುನ ಮಾಡಿಕೊಂಡ ಚಾಲಕನನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. 26 ವರ್ಷ ದಾದಿ ಪ್ರೇಮ್ ಕುಮಾರ್ ಬಂಧಿತ ಚಾಲಕ.

    ಏನಾಗಿತ್ತು?: ದೆಹಲಿ ಮೂಲದ 25 ವರ್ಷದ ಟೆಕ್ಕಿಯೊಬ್ಬಳು ತನ್ನ ಕುಟುಂಬದವರ ಜೊತೆ ದೀಪಾವಳಿ ಆಚರಿಸಿಕೊಳ್ಳಲು ಹೊರಟಿದ್ದಳು. ಇದಕ್ಕಾಗಿ ಆಕೆ ಉಬರ್ ಟ್ಯಾಕ್ಸಿ ಬುಕ್ ಮಾಡಿದ್ದಳು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟ್ ಗೆ ತೆರಳುತ್ತಿದ್ದ ಕಾರು ಹೊರ ವರ್ತುಲ ರಸ್ತೆಗೆ ಬರುತ್ತಿದ್ದಂತೆಯೇ ಚಾಲಕ ಪ್ರೇಮ್ ಕುಮಾರ್ ಕಾರಿನ ವೇಗಕ್ಕೆ ಕಡಿವಾಣ ಹಾಕಿದ್ದಾರೆ.

    ಕಾರಿನ ವೇಗವನ್ನು ಇಳಿಸಿದ ಚಾಲಕ ಕಾರಿನಲ್ಲಿದ್ದ ರಿಯರ್ ಮಿರರ್ ನಲ್ಲಿ ಯುವತಿಯನ್ನು ನೋಡುತ್ತಾ ಹಸ್ತಮೈಥುನ ಆರಂಭಿಸಿದ್ದಾನೆ. ಚಾಲಕನ ಅಸಭ್ಯ ವರ್ತನೆಯಿಂದ ಸಿಟ್ಟಿಗೆದ್ದ ಯುವತಿ ಕಾರು ನಿಲ್ಲಿಸುವಂತೆ ಕೂಗಾಡುತ್ತಾಳೆ. ಆದರೂ ಆತ ಕಾರನ್ನು ನಿಲ್ಲಿಸದೆ ಮುಂದಕ್ಕೆ ಹೋಗುತ್ತಾನೆ. ಈ ವೇಳೆ ಯುವತಿ ಮೊಬೈಲ್ ನಲ್ಲಿ ಚಾಲಕನ ಫೋಟೋ ತೆಗೆಯುತ್ತಾಳೆ. ಬಳಿಕ ಅದನ್ನು ಫೇಸ್ ಬುಕ್ ನಲ್ಲಿ ಹಾಕುತ್ತಾಳೆ.

    ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಯುವತಿ ದೂರು ನೀಡಲು ಮುಂದಾಗುತ್ತಾಳೆ. ಆದರೆ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದರಿಂದ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ತಕ್ಷಣ ಆಕೆ ಆನ್ ಲೈನ್ ಮೂಲಕ ದೂರು ದಾಖಲಿಸಿದ್ದಾಳೆ. ದೂರು ಸ್ವೀಕರಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರಿನ ಚಾಲಕ ಹಾಗೂ ಮಾಲೀಕನಾಗಿದ್ದ ಹಫೀಜ್ ಪೇಟೆಯ ದಾದಿ ಪ್ರೇಮ್ ಕುಮಾರ್ ನನ್ನು ಬಂಧಿಸಿದ್ದಾರೆ. ಕಾರಿನ ಚಾಲಕ ಅಂದು ರಜೆ ಹಾಕಿದ್ದರಿಂದ ಪ್ರೇಮ್ ಕುಮಾರನ್ನೇ ಅಂದು ಕಾರು ಚಾಲನೆ ಮಾಡಿದ್ದಾನೆ.

    ಪೊಲೀಸರ ತನಿಖೆ ವೇಳೆ ಈ ಕಾರು ಉಬರ್ ಸಂಸ್ಥೆಯ ಜೊತೆ ನೋಂದಣಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೂ ಉಬರ್ ಈ ಕಾರಿಗೆ ಹೇಗೆ ಅವಕಾಶ ಕೊಟ್ಟಿತು ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಉಬರ್ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮಧಪುರ ಡಿಸಿಪಿ ವಿಶ್ವಪ್ರಸಾದ್ ಹೇಳಿದ್ದಾರೆ.

  • ಮಹಿಳೆ ಎದುರೆ ಹಸ್ತಮೈಥುನ ಮಾಡಿಕೊಂಡ ಉಬರ್ ಕ್ಯಾಬ್ ಡ್ರೈವರ್ ಅರೆಸ್ಟ್

    ಮಹಿಳೆ ಎದುರೆ ಹಸ್ತಮೈಥುನ ಮಾಡಿಕೊಂಡ ಉಬರ್ ಕ್ಯಾಬ್ ಡ್ರೈವರ್ ಅರೆಸ್ಟ್

    ಹೈದರಬಾದ್: ಮಹಿಳೆಯ ಮುಂದೆಯೇ ಹಸ್ತಮೈಥುನ ಮಾಡಿಕೊಂಡಿದ್ದ ಉಬರ್ ಕ್ಯಾಬ್ ಡ್ರೈವರ್ ನನ್ನು ಸೈಬಾರಾಬಾದ್ ಪೊಲೀಸರು ಬಂಧಿಸಿದ್ದಾರೆ.

    ಕೊಂದಾಪುರ ಗಚಿಬೌಲಿ ಬಡಾವಣೆಯ ಮಹಿಳಾ ನಿವಾಸಿ, ಅಕ್ಟೋಬರ್ 19 ರಂದು ಬೆಳಗ್ಗೆ ದೆಹಲಿಗೆ ಹೊರಡಲು ಬುಕ್ ಮಾಡಿದ್ದ ಕಾರಿನಲ್ಲಿ ಡ್ರೈವರ್ ಈ ಕೃತ್ಯ ಎಸಗಿದ್ದ. ಈ ಕೃತ್ಯವನ್ನು ನೋಡಿದ್ದ ಮಹಿಳೆ ದೆಹಲಿಯ ಸಫರ್ ಜಂಗ್ ಠಾಣೆಯಲ್ಲಿ ದೂರು ನೀಡಿದ್ದರು.

    ಏನಿದು ಪ್ರಕರಣ?
    ಅಕ್ಟೋಬರ್ 19 ರಂದು ಹೈದರಬಾದ್ ವಿಮಾನ ನಿಲ್ದಾಣಕ್ಕೆ ತೆರಳಲು ಮಹಿಳೆಯೊಬ್ಬರು ಉಬರ್ ಕಾರನ್ನು ಬುಕ್ ಮಾಡಿದ್ದರು. ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಉಬರ್ ಡ್ರೈವರ್ ಕಾರಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ಕಾರನ್ನು ನಿಲ್ಲಿಸಿ ಹಸ್ತಮೈಥುನ ಮಾಡಿದ್ದ. ಈ ವೇಳೆ ಕೃತ್ಯವನ್ನು ಪೊಲೀಸರಿಗೆ ತಿಳಿಸುವುದಾಗಿ ಎಚ್ಚರಿಕೆ ನೀಡಿದ ಬಳಿಕ ಆತ ಮಹಿಳೆಯನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದ.

    ಮಹಿಳೆಯು ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಂತೆ 1091 ಸಹಾಯವಾಣಿಗೆ ಕರೆ ಮಾಡಿ ಸಫರ್ ಜಂಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ  ಕೇಸ್ ವರ್ಗಾವೆಣೆಯಾಗಿ  ಸೈಬಾರಾಬಾದ್ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಡ್ರೈವರ್ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

    ಡಿಸಿಪಿ ಮಧಪುರ್ ಅವರು ಡ್ರೈವರ್‍ನನ್ನು ಬಂಧಿಸಿಲು ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ಈಗ ಡ್ರೈವರ್ ನನ್ನು ಬಂಧಿಸಲಾಗಿದ್ದು, ಕಾರನ್ನು ವಶಕ್ಕೆ ಪಡೆಯಲಾಗಿದೆ. ಡ್ರೈವರ್‍ನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

    ತನಗಾದ ಅನ್ಯಾಯವನ್ನು ಮಹಿಳೆ ಫೇಸ್‍ಬುಕ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಮಹಿಳೆಯ ಆರೋಪದ ಅಡಿ ಉಬರ್ ಕ್ಯಾಬ್ ಸಂಸ್ಥೆಯು ಡ್ರೈವರ್ ನನ್ನು ವಜಾ ಮಾಡಿದೆ.

    ಈ ಘಟನೆಯ ಬಳಿಕ ಡ್ರೈವರ್ ನನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಮತ್ತೆ ಡ್ರೈವರ್ ಕ್ಷಮೆಯಾಚಿಸಿದರೂ ಆತನನ್ನು ಸೇವೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಉಬರ್ ತಿಳಿಸಿದೆ.

  • ಅರ್ಚಕ ಯುವಕರನನ್ನು ಮದ್ವೆಯಾದ್ರೆ ಸರ್ಕಾರದಿಂದ 3 ಲಕ್ಷ ರೂ. ಗಿಫ್ಟ್

    ಅರ್ಚಕ ಯುವಕರನನ್ನು ಮದ್ವೆಯಾದ್ರೆ ಸರ್ಕಾರದಿಂದ 3 ಲಕ್ಷ ರೂ. ಗಿಫ್ಟ್

    ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರವು ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರವ ಯುವಕರನ್ನು ಮದುವೆಯಾದರೆ ಮೂರು ಲಕ್ಷ ರೂ. ಹಣವನ್ನು ನೀಡುವ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

    ದೇವಾಲಯಗಳಲ್ಲಿ ಅರ್ಚರಕಾಗಿ ಸೇವೆ ಸಲ್ಲಿಸುತ್ತಿರುವ ಯುವಕರ ಆದಾಯ ಅತ್ಯಂತ ಕಡಿಮೆ ಎಂಬ ಕಾರಣದಿಂದ ಅವರನ್ನು ಮದುವೆಯಾಗಲು ಯಾರು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ `ಕಲ್ಯಾಣ ಮಸ್ತು’ ಯೋಜನೆಯನ್ನು ಮುಂದಿನ ತಿಂಗಳಿಂನಿಂದ ಆರಂಭಿಸುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸರ್ಕಾರ ಮೊದಲು ಒಂದು ಲಕ್ಷ ರೂ.ಯನ್ನು ಮದುವೆಯ ಖರ್ಚಿಗಾಗಿ ನೀಡುತ್ತದೆ. ಮದುವೆ ಬಳಿಕ  ಉಳಿದ ಹಣವನ್ನು ದಂಪತಿಯ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸ್ಥಿರ ಠೇವಣಿಯನ್ನು ಇಡುತ್ತದೆ. ಈ ಹಣವು ಮೂರು ವರ್ಷಗಳ ನಂತರ ದಂಪತಿಗಳಿಗೆ ಕೈಸೇರುತ್ತದೆ.

    ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಮದುವೆಯ ವಿಚಾರದಲ್ಲಿ ಸ್ವತಂತ್ರರಾಗಿದ್ದು ತಮ್ಮ ಸಂಗತಿಯ ಆಯ್ಕೆಯಲ್ಲಿ ಹೆಚ್ಚು ಜಾಗೃತರಾಗಿದ್ದಾರೆ. ಸಾಪ್ಟ್ವೇರ್ ಇಂಜಿನಿಯರ್ ಯುವಕರ ಉದ್ಯೋಗದಲ್ಲೂ ಸ್ಥಿರತೆ ಇಲ್ಲದ ಕಾರಣ ಅವರ ಮದುವೆಯಾಗಲು ಕಷ್ಟವಾಗುತ್ತಿದೆ. ಇನ್ನೂ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಯುವಕರ ಆದಾಯ ಕಡಿಮೆ ಇರುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ ಎಂದು ಸಿಎಂ ಸಲಹೆಗಾರರಾದ ಕೆ.ವಿ ರಮಣಚಾರಿ ಹೇಳಿದ್ದಾರೆ.

    ಹೆಣ್ಣು ಮಕ್ಕಳ ಪೋಷಕರು ಸಹ ಇಂತಹ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಲು ಇಷ್ಟಪಡುವುದಿಲ್ಲ, ಇದರಿಂದ ಹಲವು ಯುವಕರು ಮದುವೆಯಾಗದೆ ಉಳಿಯುತ್ತಿದ್ದಾರೆ. ಸರ್ಕಾರದ ಯೋಜನೆಯಿಂದ ಇಂತಹ ಯುವಕರ ಆರ್ಥಿಕ ಜೀವನ ಉತ್ತಮಗೊಳ್ಳಲಿದೆ. ಅಲ್ಲದೇ ಹೆಣ್ಣು ಮಕ್ಕಳ ಪೋಷಕರಿಗೆ ಉತ್ತಮ ಭಾವನೆ ಮೂಡಲಿದೆ ಎಂದು ತಿಳಿಸಿದರು.

    ತೆಲಂಗಾಣ ಸರ್ಕಾರವು ಈ ಯೋಜನೆಗೆ `ಕಲ್ಯಾಣ ಮಸ್ತು’ ಎಂಬ ಹೆಸರನ್ನು ಇಟ್ಟಿದ್ದು, ನವೆಂಬರ್ ತಿಂಗಳಿನಿಂದ ಅನುಷ್ಠಾನಗೊಳಿಸುತ್ತಿದೆ. ದಂಪತಿಯ ಮದುವೆಯಾದ ಮೂರು ವರ್ಷಗಳ ನಂತರ ಸ್ಥಿರ ಠೇವಣಿ ಹಣವು ಅವರ ಕೈಸೇರಲಿದ್ದು, ಅವರ ಮಕ್ಕಳ ಉತ್ತಮ ಜೀವನಕ್ಕೆ ಸಹಾಯಕವಾಗಲಿದೆ ಎಂಬುವುದೇ ಸರ್ಕಾರ ಉದ್ದೇಶವಾಗಿದೆ ಎಂದರು.

    ಅರ್ಚಕ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡವು ಪೋಷಕರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ವಧು-ವರರ ಸ್ವ ವಿವರಗಳನ್ನು ಅರ್ಜಿಯೊಂದಿಗೆ ನೀಡಬೇಕಿದೆ. ಸರ್ಕಾರವು ಈ ಯೋಜನೆಗೆ ವಾರ್ಷಿಕವಾಗಿ ಇಷ್ಟೇ ದಂಪತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಯಾವುದೇ ನಿಯಮವನ್ನು ವಿಧಿಸಿಲ್ಲ. ಅರ್ಹ ಎಲ್ಲಾ ದಂಪತಿಗಳೂ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

  • ಜೆಟ್ ಏರ್ ವೇಸ್ ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕೀಟ ಪ್ರಯಾಣಿಕ ಶಾಕ್ !

    ಜೆಟ್ ಏರ್ ವೇಸ್ ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕೀಟ ಪ್ರಯಾಣಿಕ ಶಾಕ್ !

    ಹೈದರಾಬಾದ್: ಸೋಮವಾರ ಜೆಟ್ ಏರ್ ವೇಸ್ ಪ್ರಯಾಣಿಕರೊಬ್ಬರಿಗೆ ವಿಮಾನದ ಸಿಬ್ಬಂದಿ ನೀಡಿದ ಆಹಾರ ತಿನ್ನುವಾಗ ಕಹಿ ಅನುಭವವಾಗಿದೆ. ಆಗ ಆಹಾರವನ್ನು ಪರೀಶೀಲಿಸಿದಾಗ ಅದರಲ್ಲಿ ಕೀಟವೊಂದು ಕಂಡುಬಂದಿದೆ.

    ಕೃಷ್ಣ ಮೋಹನ್ ಎಂಬವರು ಜೆಟ್ ಏರ್ ವೇಸ್ 9W7081/S24460 ವಿಮಾನದಲ್ಲಿ ಹೈದರಾಬಾದ್ ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು. ಈ ವೇಳೆಯಲ್ಲಿ ವಿಮಾನದಲ್ಲಿ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ. ಬಿರಿಯಾನಿಯ ಒಳಗೆ ಕೀಟ ಇರುವುದು ಕಂಡು ಶಾಕ್ ಆಗಿದ್ದಾರೆ. ನಂತರ ಮೋಹನ್ ತಕ್ಷಣದಲ್ಲಿಯೇ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾರೆ.

    ವಿಮಾನದಲ್ಲಿ ಸಿಬ್ಬಂದಿಗೆ ದೂರು ನೀಡಲು ಯಾವುದೇ ಪೇಪರ್ ಗಳು ಲಭ್ಯವಿರಲಿಲ್ಲ. ಹಾಗಾಗಿ ಒಂದು ಚಿಕ್ಕ ಪೇಪರ್ ಅಲ್ಲಿ ದೂರನ್ನು ಬರೆದುಕೊಟ್ಟು ಬಂದಿದ್ದರು. ನಂತರ ಮುಂಬೈಯಲ್ಲಿ ವಿಮಾನದಿಂದ ಇಳಿದ ನಂತರ ಮೋಹನ್ ಇ ಮೇಲ್ ಮೂಲಕ ದೂರನ್ನು ಮುಂಬೈ ಜೆಟ್ ಏರ್ ವೇಸ್ ಗೆ ನೀಡಿದ್ದಾರೆ.

    ಇದುವರೆಗೂ ಮೋಹನ್ ಅವರಿಗೆ ಜೆಟ್ ಏರ್ ವೇಸ್ ಕಡೆಯಿಂದ ಯಾವುದೇ ತರಹದ ಉತ್ತರ ಬಂದಿಲ್ಲ ಎಂದು ತಿಳಿಸಿದ್ದಾರೆ.

  • ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ-ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

    ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ-ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

    ಹೈದರಾಬಾದ್: ಪತಿ ಮಾಂಸಾಹಾರ ಸೇವಿಸುವಂತೆ ಕಿರುಕುಳ ನೀಡುತ್ತಿದ್ದಕ್ಕೆ ಮನನೊಂದ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಿಯಾಪುರ್‍ನಲ್ಲಿ ನಡೆದಿದೆ.

    23 ವರ್ಷದ ಶ್ವೇತಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸಂಗಾರೆಡ್ಡಿ ಪಟ್ಟಣದ ಶ್ವೇತಾರನ್ನು ವಿಕರಾಬಾದ್ ನಿವಾಸಿ ಮರಿಚೆನ್ನ ರೆಡ್ಡಿ ಎಂಬರೊಂದಿಗೆ 2017 ಮೇ ನಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಕೆಲ ತಿಂಗಳ ನಂತರ ಪತಿ ಮತ್ತು ಆತನ ತಂದೆ ತಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ.

    ಮದುವೆ ವೇಳೆ ಶ್ವೇತಾ ಪೋಷಕರು 4 ಲಕ್ಷ ರೂ. ಕ್ಯಾಶ್ ಮತ್ತು 10 ತೊಲಾ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಮದುವೆ ಬಳಿಕ ಇನ್ನೂ ವರದಕ್ಷಿಣೆಯನ್ನು ನೀಡುವದಾಗಿ ಭರವಸೆಯನ್ನು ನೀಡಿದ್ದರು.

    ಈ ದಂಪತಿ ಮಿಯಾಪುರದಿಂದ ವಿಕರಾಬಾದ್‍ನ ಸಿರಿಪುರಂಗೆ ಸೆಪ್ಟಂಬರ್‍ನಲ್ಲಿ ಹೋಗಿ ವಾಸವಾಗಿದ್ದಾರೆ. ಅಲ್ಲಿ ಪತಿಯ ಪೋಷಕರು ಶ್ವೇತಾಗೆ ಮಾಂಸವನ್ನು ತಿನ್ನವಂತೆ ಬಲವಂತ ಮಾಡಿದ್ದಾರೆ. ಶ್ವೇತಾ ಸಸ್ಯಹಾರಿ ಆಗಿದ್ದರಿಂದ ಮಾಂಸವನ್ನು ತಿನ್ನಲು ನಿರಾಕರಿಸಿದ್ದಾರೆ. ಆದರೆ ಪತಿ ಬಿಡದೇ ಅವರ ಮುಂದೆ ಮಾಂಸ ಇಟ್ಟು ತಿನ್ನುವಂತೆ ಬಲವಂತ ಮಾಡಿದ್ದಾನೆ ಎಂದು ಪೊಲೀಸರು ತಿಳಿದ್ದಾರೆ.

    ಗಂಡನ ಮನೆಯವರ ಕಿರುಕುಳವನ್ನು ಸಹಿಸಿಕೊಳ್ಳಲಾಗದೇ ಶ್ವೇತಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಮತ್ತು ಆತನ ತಂದೆ-ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದಾರೆ.

     

  • ಒಂದೇ ಕುಟುಂಬದ ಐವರ ಶವ ಪತ್ತೆ: ಇದು ಕೊಲೆಯೇ? ಆತ್ಮಹತ್ಯೆಯೇ?

    ಒಂದೇ ಕುಟುಂಬದ ಐವರ ಶವ ಪತ್ತೆ: ಇದು ಕೊಲೆಯೇ? ಆತ್ಮಹತ್ಯೆಯೇ?

    ಹೈದರಾಬಾದ್: ನಗರದ ಪತನಚೇರು ಬಳಿಯ ಕೊಲ್ಲರು ಔಟರ್ ರಿಂಗ್ ರೋಡ್ (ಓಆರ್‍ಆರ್) ಬಳಿ ಒಂದೇ ಕುಟುಂಬದ ಐವರ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ.

    ಮೂವರು ಮಹಿಳೆಯರ ಶವಗಳು ಪೊದೆಯಲ್ಲಿ ಪತ್ತೆಯಾಗಿದ್ದು, ಈ ಸ್ಥಳದಿಂದ 2 ಕಿ.ಮೀ. ದೂರದಲ್ಲಿರುವ ಓಆರ್‍ಆರ್ ಬಳಿಯ ಅಂಡರ್ ಪಾಸ್ ಕಾರಿನಲ್ಲಿ ಒಬ್ಬ ವ್ಯಕ್ತಿ ಮತ್ತು ಗಂಡು ಮಗುವಿನ ಮೃತ ದೇಹ ಪತ್ತೆಯಾಗಿವೆ. ಮೃತರು ಪತನಚೇರು ಬಳಿಯ ಅಮೀನ್‍ಪುರ ನಿವಾಸಿ ಪ್ರಭಾಕರ್ ರೆಡ್ಡಿ ಮತ್ತು ಕುಟಂಬಸ್ಥರು ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಇವರೆಲ್ಲರು ಇಂದು ಶವವಾಗಿ ಪತ್ತೆಯಾಗಿದ್ದಾರೆ.

    ಮೃತರನ್ನು ಪ್ರಭಾಕರ್ ರೆಡ್ಡಿ, ಲಕ್ಷ್ಮೀ, ಸಿಂಧುಜಾ, ವಂಶಿ ಮತ್ತು ಮಾಧವಿ ಎಂದು ಗುರುತಿಸಲಾಗಿದೆ. ಮೃತರಲ್ಲಿ ಒಬ್ಬರು ಮಧ್ಯವಯಸ್ಕ ಮಹಿಳೆಯಾಗಿದ್ದು, ಇನ್ನಿಬ್ಬರು ಯುವತಿಯರಾಗಿದ್ದಾರೆ. ಇನ್ನು ಕಾರಿನಲ್ಲಿ ಪ್ರಭಾಕರ್ ಮತ್ತು ಒಂದು ಗಂಡು ಮಗು ವಂಶಿ ಎಂಬವರ ಶವಗಳು ಪತ್ತೆಯಾಗಿವೆ.

    ಕೇಕ್ ತಿಂದು ವಿಷ ಕುಡಿದ್ರಾ?: ಕಾರು ಪತ್ತೆಯಾದ 10 ಮೀಟರ್ ದೂರದಲ್ಲಿ ಅರ್ಧ ತಿಂದಿರುವ ಕೇಕ್ ಪತ್ತೆಯಾಗಿದೆ. ಇತ್ತ ಕಾರಿನಲ್ಲಿ ಕ್ರಿಮಿನಾಶಕ ಬಾಟಲ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದು ಆದರೆ ಹೊರಗಡೆಯಿಂದ ಕಾರನ್ನು ಲಾಕ್ ಮಾಡಲಾಗಿದೆ.

    ಮೃತರು ಎರಡು ದಿನಗಳ ಹಿಂದೆ ವಾಟರ್ ಫಾಲ್ಸ್ ನೋಡಲು ತೆರಳುವುದಾಗಿ ಸಂಬಂಧಿ ಬಳಿ ಹೇಳಿಕೊಂಡಿದ್ದರು. ಸಂಜೆ ವೇಳೆಗೆ ವಾಟರ್ ಫಾಲ್ಸ್ ನೋಡಲು ತೆರಳಿದವರ ಮೊಬೈಲ್ ಗಳು ಸ್ವಿಚ್ ಆಫ್ ಆಗಿತ್ತು. ಇದರಿಂದ ಭಯಗೊಂಡ ಸಂಬಂಧಿ ರವೀಂದ್ರ ರೆಡ್ಡಿ ಎಂಬವರು ನರ್‍ಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ಸ್ವತಃ ರವೀಂದ್ರ ಅವರೇ ಬಂದು ಶವಗಳನ್ನು ಗುರುತಿಸಿದ್ದಾರೆ.

    ಹಲವು ಅನುಮಾನ: ಕಾರಿನಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದು, ಆದರೆ ಕಾರ್ ಮಾತ್ರ ಹೊರಗಿನಿಂದ ಲಾಕ್ ಆಗಿದೆ. ಮಹಿಳೆಯರ ಶವಗಳು ಮಾತ್ರ ಕಾರಿನಿಂದ ಎರಡು ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ. ಇನ್ನೂ ಮಹಿಳೆಯರ ಶವದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಆದರೆ ಒಬ್ಬ ಯುವತಿಯ ಶವ ಚಿಕ್ಕ ಮರವೊಂದಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿ ಕೈ ಯಲ್ಲಿ ಮೊಬೈಲ್ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿರಬಹುದಾ ಎನ್ನುವ ಶಂಕೆ ವ್ಯಕ್ತವಾಗಿದೆ.

    ಕೊಲೆಯೋ, ಆತ್ಮಹತ್ಯೆಯೋ: ಮೃತರು ಶವ ನೋಡಿದ ಪೊಲೀಸ್ ಅಧಿಕಾರಿಗಳು ಇದೂವರೆಗೂ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಖಚಿತಪಡಿಸಿಲ್ಲ. ಬೇರೆ ಸ್ಥಳದಲ್ಲಿ ಐವರನ್ನು ಕೊಲೆ ಮಾಡಿ ಈ ರೀತಿಯಾಗಿ ಬೇರೆ ಬೇರೆ ಕಡೆ ಎಸೆಯಲಾಗಿದೆಯೇ ಎಂಬ ಅನುಮಾನಗಳು ಸಹ ಹುಟ್ಟಿಕೊಂಡಿವೆ.

    ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೀಪ್ ಶಾಂದಿಲ್ಯ, ಹೆಚ್ಚುವರಿ ಎಸ್‍ಪಿ ಜಾನಕಿ ಶೈಲಜಾ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತರ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು, ಕಾಲ್ ಡಿಟೇಲ್ಸ್ ಪರಿಶೀಲಿಸುತ್ತಿದ್ದಾರೆ. ಐವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

  • ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತು ಐಎನ್‍ಎಸ್ ಕಿಲ್ತಾನ್:  ವಿಶೇಷತೆ ಏನು?

    ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತು ಐಎನ್‍ಎಸ್ ಕಿಲ್ತಾನ್: ವಿಶೇಷತೆ ಏನು?

    ನವದೆಹಲಿ: ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿರೋಧಕ  ಯುದ್ಧ ನೌಕೆ ಐಎನ್‍ಎಸ್ ಕಿಲ್ತಾನ್ ಇಂದು ನೌಕಪಡೆಗೆ ಸೇರ್ಪಡೆಯಾಗಿದ್ದು, ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಂಧ್ರ ಪ್ರದೇಶ ವಿಶಾಖಪಟ್ಟಣಂ ಹಡುಗುಕಟ್ಟೆಯಲ್ಲಿ ಕಿಲ್ತಾನ್ ನ್ನು ದೇಶಕ್ಕೆ ಸಮರ್ಪಿಸಿದರು.

    ಭಾರತೀಯ ನೌಕಾಪಡೆಯ ಸಂಸ್ಥೆ ನೌಕಾ ವಿನ್ಯಾಸದ ನಿರ್ದೇಶನಾಲಯದಿಂದ ವಿನ್ಯಾಸಗೊಂಡಿರುವ ಐಎನ್‍ಎಸ್ ಕಿಲ್ತಾನ್ ದೇಶೀ ನಿರ್ಮಿತ ನೌಕೆಯಾಗಿದ್ದು, ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಗಳು ಮತ್ತು ಇಂಜಿನಿಯರ್ಸ್ (ಜಿಆರ್ ಎಸ್‍ಇ) ಯಿಂದ ನಿರ್ಮಿಸಲ್ಪಟ್ಟಿದೆ. ಲೋಕಾರ್ಪಣೆ ಸಮಾರಂಭದಲ್ಲಿ ಅಡ್ಮಿರಲ್ ಸುನಿಲ್ ಲಾನ್ಬಾ, ಪಿವಿಎಸ್‍ಎಂ, ಎವಿಎಸ್‍ಎಂ, ಎಡಿಸಿ, ನೌಕಾ ಸಿಬ್ಬಂದಿ ಮುಖ್ಯಸ್ಥ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.

    ಐಎನ್‍ಎಸ್ ಕಿಲ್ತಾನ್ ವಿಶೇಷತೆ ಏನು?
    ಸ್ವದೇಶದಲ್ಲಿ ನಿರ್ಮಿಸಲಾಗಿರುವ ಪ್ರಮುಖ ನಾಲ್ಕು ಜಲಾಂತರ್ಗಾಮಿ ನಿರೋಧಕ  ಯುದ್ಧ ನೌಕೆಗಳ ಪೈಕಿ 3ನೆಯ ಜಲಾಂತರ್ಗಾಮಿ ನೌಕೆ (ಎಎಸ್ ಡಬ್ಲ್ಯೂ) ಐಎನ್‍ಎಸ್ ಕಿಲ್ತಾನ್ ಇದಾಗಿದೆ. ಪ್ರಾಜೆಕ್ಟ್ 28 ಅಡಿಯಲ್ಲಿ ಐಎನ್‍ಎಸ್ ಕಿಲ್ತಾನ್ ಅನ್ನೂ ನಿರ್ಮಾಣ ಮಾಡಲಾಗಿದೆ. ಸಮುದ್ರದೊಳಗೆ ಯಾವುದೇ ಶಬ್ಧವನ್ನು ಮಾಡದೇ ಗುಪ್ತವಾಗಿ ಚಲಿಸುವ ಮೂಲಕ ವಿರೋಧಿ ಸಬ್ ಮೇರಿನ್‍ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

    ಕಾರ್ಬನ್ ಫೈಬರ್ ಸಂಯುಕ್ತ ವಸ್ತುಗಳಿಂದ ನೌಕೆಯನ್ನು ನಿರ್ಮಾಣ ಮಾಡಲಾಗಿದ್ದು, ಕಡಿಮೆ ತೂಕ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಸುಧಾರಿತ ರಹಸ್ಯ ವೈಶಿಷ್ಟ್ಯತೆಗಳನ್ನು ಹೊಂದಿದೆ.

    ಕಿಲ್ತಾನ್ ಒಟ್ಟು ತೂಕ- 3500 ಟನ್, ಉದ್ದ-109 ಮೀಟರ್, ಅಗಲ-14 ಮೀಟರ್ ಹೊಂದಿದೆ. ಅಲ್ಲದೇ 3 ಸಾವಿರ ಕಿಲೋವ್ಯಾಟ್ ಶಕ್ತಿಯನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

    ನೌಕೆಯಲ್ಲಿ ಅಣ್ವಸ್ತ್ರ ಹಾಗೂ ರಾಸಾಯನಿಕ ದಾಳಿಯನ್ನು ತಡೆಯಬಲ್ಲ ತಂತ್ರಜ್ಞಾನವನ್ನು ಹೊಂದಿದೆ. ಶತ್ರುಗಳನ್ನು ಗುರುತಿಸಿ ಹೊಡೆದುರುಳಿಸಲು ಸಾಧ್ಯವಾಗುವಂತಹ ಟೊರ್ಪೆಡೋ ಟ್ಯೂಬ್ ಲಾಂಚರ್ಸ್, ಎಎಸ್‍ಡಬ್ಲೂ ರಾಕೆಟ್ ಲಾಂಚರ್, 76 ಎಂಎಂ ಕ್ಯಾಲಿಬರ್ ಮಿಡಿಯಂ ರೇಜ್ ಗನ್ ಮತ್ತು ಮಲ್ಟಿ ಬ್ಯಾರೆಲ್ 30 ಮಿ.ಮೀ. ಗನ್ ವ್ಯವಸ್ಥೆ ಇದೆ. ಅಲ್ಲದೇ ಸೋನಾರ್ ಅಂಡ್ ಏರ್ ಸರ್ವೆಸಲೆನ್ಸ್ ರೇಡಾರ್‍ಗಳನ್ನು ಹೊಂದಿದೆ.

    ಶಿವಾಲಿಕ್ ಕ್ಲಾಸ್, ಕೋಲ್ಕತ್ತಾ ಕ್ಲಾಸ್, ಐಎನ್ ಎಸ್ ಕಮೋರ್ಟಾ ಕ್ಲಾಸ್ ನೌಕೆಗಳು ಸೇರ್ಪಡೆಯಾದ ನಂತರ ನೌಕಾದಳಕ್ಕೆ ಸೇರ್ಪಡೆಯಾಗುತ್ತಿರುವ ಇತ್ತೀಚಿನ ದೇಶಿ ನಿರ್ಮಿತ ನೌಕೆ ಇದಾಗಿದೆ.

     

     

     

     

     

  • ಅಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ-8 ವರ್ಷಗಳ ಬಳಿಕ ರೇಪಿಸ್ಟ್ ಅಪ್ಪ ಅರೆಸ್ಟ್!

    ಅಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ-8 ವರ್ಷಗಳ ಬಳಿಕ ರೇಪಿಸ್ಟ್ ಅಪ್ಪ ಅರೆಸ್ಟ್!

    ಹೈದರಾಬಾದ್: ಎಂಟು ವರ್ಷಗಳ ಹಿಂದೆ 52 ವರ್ಷದ ತಂದೆ ತನ್ನ 19 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಈಗ ಕಾಮುಕ ಅಪ್ಪ ಪುಂಜಗುಟ್ಟ ಪೊಲೀಸರ ಅಥಿತಿಯಾಗಿದ್ದಾನೆ.

    ಆರೋಪಿಯನ್ನು ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ. ಬಿಎಸ್ ಮಖ್ತಾದಲ್ಲಿ ನೆಲೆಸಿದ್ದು, ನಾಮ್‍ಪಲ್ಲಿಯಲ್ಲಿ ಡಿಟಿಪಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ಪೋಲಿಸರು ತಿಳಿಸಿದರು.

    8 ವರ್ಷಗಳ ಹಿಂದೆ ನಡೆದಿದ್ದೇನು?
    ತಾಯಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಕಾಮುಕ ಅಪ್ಪ 19 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದನು. ನಂತರ ತಾಯಿಗೆ ವಿಚಾರ ತಿಳಿಸಿದ್ದಾರೆ. ಆದರೆ ತಾಯಿ ಯಾರಿಗೂ ಹೇಳಬೇಡ ಎಂದು ಭಾಷೆ ತೆಗೆದುಕೊಂಡಿದ್ದಳು. ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ಮತ್ತೆ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

    ಸಂತ್ರಸ್ತೆ ತಂದೆಯ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಯುವತಿ ಕೊನೆಗೆ ಮನೆ ಬಿಟ್ಟು ಹೋಗಿದ್ದರು. ಒಂದು ಖಾಸಗಿ ಹಾಸ್ಟೆಲ್‍ನಲ್ಲಿ ಉಳಿದುಕೊಂಡು, ಖಾಸಗಿ ಸಂಸ್ಥೆಯಲ್ಲಿ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

    ಎಂಡು ವರ್ಷದ ಬಳಿಕ ಸಂತ್ರಸ್ತೆ ಪೋಷಕರನ್ನು ಭೇಟಿ ಮಾಡಲು ಮತ್ತೆ ಮನೆಗೆ ಬಂದಿದ್ದಾರೆ. ಆದರೆ ಕಾಮುಕ ಅಪ್ಪ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಲು ಯತ್ನಿಸಿದ್ದು, ಕೊನೆಗೆ ಸಂತ್ರಸ್ತೆ ಕಾಮುಕ ಅಪ್ಪನ ವಿರುದ್ಧ ದೂರು ದಾಖಲಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪುಂಜಗುಟ್ಟ ಠಾಣೆಯ ಇನ್ಸ್ ಪೆಕ್ಟರ್ ಎಸ್. ರವೀಂದರ್ ತಿಳಿಸಿದ್ದಾರೆ.

  • ಹೆಣ್ಣು ದೆವ್ವಕ್ಕೆ ಹೆದರಿ ಜನರು ಗ್ರಾಮವನ್ನೇ ಖಾಲಿ ಮಾಡಿದ್ರು!

    ಹೆಣ್ಣು ದೆವ್ವಕ್ಕೆ ಹೆದರಿ ಜನರು ಗ್ರಾಮವನ್ನೇ ಖಾಲಿ ಮಾಡಿದ್ರು!

    ಹೈದರಾಬಾದ್: ಹೆಣ್ಣು ದೆವ್ವಕ್ಕೆ ಭಯಗೊಂಡು ಗ್ರಾಮವನ್ನೇ ಖಾಲಿ ಮಾಡುತ್ತಿರುವ ವಿಚಿತ್ರ ಘಟನೆ ತೆಲಂಗಾಣದ ನಿರ್ಮಲ ಜಿಲ್ಲೆಯ ಕಾಶಿಗುಡ್‍ನಲ್ಲಿ ನಡೆದಿದೆ.

    ಈ ಗ್ರಾಮದಲ್ಲಿ ಕತ್ತಲಾದ ಮೇಲೆ ಹೆಣ್ಣು ಪ್ರೇತಾತ್ಮಗಳು ಪುರುಷರ ಮೇಲೆ ದಾಳಿ ಮಾಡುತ್ತಿವೆಯಂತೆ. ಆದ್ದರಿಂದ ಈ ಗ್ರಾಮದಲ್ಲಿ ಮಹಿಳೆಯರು ಮಾತ್ರ ಬದುಕುಳಿಯುತ್ತಿದ್ದಾರೆ. ಆದ್ದರಿಂದ ಪುರುಷರು ಗ್ರಾಮದಲ್ಲಿ ಇರಲು ಭಯಬೀತರಾಗಿ ಜೀವ ಉಳಿದರೆ ಸಾಕು ಎಂದು ಊರನ್ನೇ ಖಾಲಿ ಮಾಡಿ ಹೋಗುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಕಾಶಿಗುಡ ಗ್ರಾಮದಲ್ಲಿ ಸುಮಾರು 60 ಕುಟುಂಬಗಳಿದ್ದು, ಗ್ರಾಮದ ಸಮೀಪದಲ್ಲಿ ಕಲ್ಲು ಕ್ವಾರಿಗಳಿವೆ. ಅಲ್ಲಿ ಕಲ್ಲುಗಳನ್ನು ಕತ್ತರಿಸುವುದು ಮತ್ತು ಪುಡಿಮಾಡುವ ಕೆಲಸವನ್ನು ಮಾಡಿ ಜೀವನ ನಡೆಸುತ್ತಿದ್ದೇವು. ಆದರೆ ಈಗ ಕೆಲವು ದಿನಗಳಿಂದ ನಮ್ಮ ಮೇಲೆ ಯಾರೋ ದಾಳಿ ಮಾಡಿದಂತೆ ಭಾಸವಾಗುತ್ತಿದೆ. ಹೀಗಾಗಿ ಭಯಗೊಂಡು ನಾವು ಊರನ್ನು ತೊರೆಯುತ್ತಿದ್ದೇವೆ ಎಂದು ಈ ಗ್ರಾಮದ ಪುರುಷರು ಹೇಳಿದ್ದಾರೆ.

    ಗ್ರಾಮದಲ್ಲಿರುವ ಮನೆಗಳೆಲ್ಲಾ ಬೀಗ ಹಾಕಿದ್ದಾರೆ. ಹಚ್ಚ ಹಸಿರಿನಿಂದ ಕೂಡಿದ್ದ ಈ ಗ್ರಾಮ ಇಂದು ದೆವ್ವದ ಗ್ರಾಮವಾಗಿದೆ. ಇನ್ನೂ ಉಳಿದ ಸ್ವಲ್ಪ ಜನರು ಕತ್ತಲಾಗುವ ಮುನ್ನವೇ ಮನೆಗೆ ಬಂದು ಸೇರಿಕೊಳ್ಳುತ್ತಿದ್ದು, ಸೂರ್ಯ ಉದಯಿಸುವರೆಗೂ ಮನೆಯಿಂದ ಯಾರೂ ಹೊರಗೆ ಬರುತ್ತಿಲ್ಲ.

    ಗ್ರಾಮ ದೊರೆದ ಜನರು ಸುರಕ್ಷಿತವಾದ ಜಾಗಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಇಂದಿನ ಟಿ-20 ಪಂದ್ಯ ಯಶಸ್ವಿಯಾದ್ರೆ ‘ಇವುಗಳಿಗೂ’ ಸಿಗುತ್ತೆ ಕ್ರೆಡಿಟ್!

    ಇಂದಿನ ಟಿ-20 ಪಂದ್ಯ ಯಶಸ್ವಿಯಾದ್ರೆ ‘ಇವುಗಳಿಗೂ’ ಸಿಗುತ್ತೆ ಕ್ರೆಡಿಟ್!

    ಹೈದರಾಬಾದ್: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟಿ-20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಹಿನ್ನೆಲೆಯಲ್ಲಿ ಅಂಗಣ ಒಣಗಿಸಲು ಮೂರು ಫ್ಯಾನ್‍ಗಳನ್ನು ಅಳವಡಿಸಲಾಗಿದೆ.

    ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಗೂ ಮೂರನೇ ಪಂದ್ಯ ಆಂಧ್ರಪ್ರದೇಶದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಕ್ರೀಡಾಂಗಣದಲ್ಲಿ ಪಂದ್ಯಕ್ಕಾಗಿ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಪಿಚ್ ಕ್ಯೂರೇಟರ್ ವೈ ಎಲ್ ಚಂದ್ರಶೇಖರ್ ತಿಳಿಸಿದ್ದಾರೆ.

    ಕಳೆದ ಒಂದು ವಾರದಿಂದ ಹೈದರಬಾದ್‍ನಲ್ಲಿ ಸಾಧಾರಣ ಮಳೆಯಾಗುತ್ತಿದ್ದು. ಪಂದ್ಯ ಪೂರ್ಣ ಪ್ರಮಾಣದಲ್ಲಿ ನಡೆಸಲು ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಪಡಿಸುವ ಅತಂಕ ವ್ಯಕ್ತವಾಗಿದ್ದು, ಕ್ರೀಡಾಂಗಣದ ಪಿಚ್ ಒಣಗುವಂತೆ ಮಾಡಲು ಮೂರು ಫ್ಯಾನ್‍ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

    ಮೂರು ಪಂದ್ಯಗಳ ಕ್ರಿಕೆಟ್ ಟಿ-20 ಸರಣಿಯು 1-1 ಅಂತರದಲ್ಲಿ ಸಮಗೊಂಡಿದ್ದು, ಇಂದಿನ ಪಂದ್ಯ ಸರಣಿ ಜಯಿಸುವ ದೃಷ್ಟಿಯಿಂದ ಎರಡು ತಂಡಗಳಿಗೂ ಅತ್ಯಂತ ಮಹತ್ವವಾಗಿದೆ.