Tag: Hyderabad

  • ಪತ್ನಿಯ ಲವ್ವರ್ ಅಂದ್ಕೊಂಡು 14ರ ಮಗನ ಮೇಲೆಯೇ ಕೊಡಲಿಯಿಂದ ಹಲ್ಲೆಗೈದ ಅಪ್ಪ!

    ಪತ್ನಿಯ ಲವ್ವರ್ ಅಂದ್ಕೊಂಡು 14ರ ಮಗನ ಮೇಲೆಯೇ ಕೊಡಲಿಯಿಂದ ಹಲ್ಲೆಗೈದ ಅಪ್ಪ!

    ಹೈದರಾಬಾದ್: ಪತ್ನಿಯ ಪ್ರಿಯಕರ ಅಂದುಕೊಂಡು ಅಪ್ಪನೇ 14 ವರ್ಷದ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕುರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    14ರ ಹರೆಯದ ಪರಶುರಾಮ ತಂದೆಯಿಂದಲೇ ಹಲ್ಲೆಗೊಳಗಾದ ಹುಡುಗ. ಈ ಘಟನೆ ಬೆಥಾಮೆರ್ಲಾ ಮಂಡಲ್ ಗುತುಪಲ್ಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ತಂದೆ ಸೋಮಣ್ಣ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಅಂದುಕೊಂಡು ಹಲ್ಲೆ ಮಾಡಿದ್ದಾನೆ.

    ನಡೆದಿದ್ದೇನು?
    ಸೋಮಣ್ಣ ಮತ್ತು ರಮಲಕ್ಷ್ಮೀ ಇಬ್ಬರು ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿದ್ದರು. ಈ ದಂಪತಿಗೆ ನಾಲ್ಕು ಮಕ್ಕಳಿದ್ದು, ಸೋಮಣ್ಣನಿಗೆ ತನ್ನ ಪತ್ನಿ ಅದೇ ಗ್ರಾಮದ ಬೇರೊಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನವಿತ್ತು. ಈ ವಿಚಾರವಾಗಿ ಆಗಾಗ ಇಬ್ಬರ ಮಧ್ಯೆ ಜಗಳ ಕೂಡ ನಡೆಯುತ್ತಿತ್ತು. ಶುಕ್ರವಾರ ಸೋಮಣ್ಣ ಕುಡಿದು ಮನೆಗೆ ರಾತ್ರಿ ಬಂದಿದ್ದಾನೆ. ಆಗ ಪತ್ನಿ ಲಕ್ಷ್ಮಿ ತನ್ನ ಮಗ ಪರುಶರಾಮನ ಜೊತೆ ಮಲಗಿದ್ದರು. ಆದರೆ ಸೋಮಣ್ಣ ತನ್ನ ಮಗನನ್ನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಬೇರೊಬ್ಬ ವ್ಯಕ್ತಿ ಎಂದು ತಿಳಿದು ಕೋಪಗೊಂಡು ಅಲ್ಲೇ ಪಕ್ಕದಲ್ಲಿದ್ದ ಕೊಡಲಿಯಿಂದ ಮಲಗಿದ್ದ ಮಗನ ಕೈ ಮತ್ತು ಭುಜಗಳಿಗೆ ಹೊಡೆದಿದ್ದಾನೆ.

    ಪರಶುರಾಮ ಅಪ್ಪ ಹಲ್ಲೆ ಮಾಡಿದ ಬಳಿಕ ಕೂಗಿಕೊಂಡು ಹಾಸಿಗೆಯಿಂದ ಕೆಳಗೆ ಬಿದ್ದಿದ್ದಾನೆ. ನಂತರ ಹಲ್ಲೆ ಮಾಡಿದ್ದು ಮಗನಿಗೆ ಎಂದು ತಿಳಿದು ಕಣ್ಣೀರಿಟ್ಟು ನೆರೆಹೊರೆಯವರ ಸಹಾಯ ಪಡೆದು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಕೊಡಲಿಯಿಂದ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಪೆಟ್ಟಾಗಿದ್ದು, ವೈದ್ಯರು ತೀವ್ರ ಗಾಯಗಳಾಗಿದೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಬಳಿಕ ಕಾರ್ನೂಲ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಹುಡುಗನ ಸ್ಥಿತಿ ತೀರ ಗಂಭೀರವಾಗಿದೆ ಎಂದು ಹೇಳಿದ್ದಾರೆ.

    ಈ ಘಟನೆ ಸಂಬಂಧ ಪೊಲೀಸರು ಆರೋಪಿ ಸೋಮಣ್ಣ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಯುವಕ ಸಾವು

    ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಯುವಕ ಸಾವು

    ಹೈದರಾಬಾದ್: ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಆಟಗಾರನೊಬ್ಬ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ.

    ಮೃತ ಯುವಕನನ್ನು ನಗರದ ನಿವಾಸಿ 23 ವರ್ಷದ ಲಾಯ್ಡ್ ಅಂಥೋನಿ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಸ್ಥಳೀಯ ತಂಡಗಳ ನಡುವೆ ಏರ್ಪಡಿಸಲಾಗಿದ್ದ ಕ್ರಿಕೆಟ್ ಪಂದ್ಯ ವೇಳೆ ಈ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದಲ್ಲಿ ಬೌಲಿಂಗ್ ಮಾಡುತ್ತಿದ್ದ ಅಂಥೋನಿ ಇದ್ದಕ್ಕಿದ್ದ ಹಾಗೆ ಕುಸಿದು ಬೀಳುತ್ತಾನೆ. ಈ ವೇಳೆ ಸ್ಥಳದಲ್ಲಿದ್ದ ಇತರ ಆಟಗಾರರು ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನಿಸಿದ್ರು. ಆದ್ರೆ ಅಂಥೋನಿ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾನೆ. ಹೃದಯಘಾತದಿಂದ ಆಂಥೋನಿ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಮೃತ ಯುವಕ ಅಂಥೋನಿ ಶಾಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಇಂಥದ್ದೇ ಘಟನೆಯೊಂದು ಮಂಗಳೂರಿನಲ್ಲಿ ನಡೆದಿತ್ತು. ನಗರದ ಜೋಡುಕಲ್ಲು ಕಯ್ಯೂರು ನಿವಾಸಿ ಪದ್ಮನಾಭ ಎಂಬ ಯುವಕ ಮೀಯಪದವು ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದನು.

    https://www.youtube.com/watch?v=1PNStK6WaYU

  • `ಈಗ’ ಸಿನಿಮಾ ಖ್ಯಾತಿಯ ನಟ ನಾನಿ ಕಾರ್ ಅಪಘಾತ!

    `ಈಗ’ ಸಿನಿಮಾ ಖ್ಯಾತಿಯ ನಟ ನಾನಿ ಕಾರ್ ಅಪಘಾತ!

    ಹೈದರಾಬಾದ್: ಟಾಲಿವುಡ್‍ನಲ್ಲಿ ತನ್ನದೇ ಆದ ಶೈಲಿಯ ಚಿತ್ರಗಳಿಗೆ ಹೆಸರುವಾಸಿಯಾಗಿರೋ ನಟ ನಾನಿ ಕಾರ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಜೂಬಿಲಿ ಹಿಲ್ಸ್ ರೋಡ್ ನಂ. 45 ರಲ್ಲಿ ಈ ಅಪಘಾತ ಸಂಭವಿಸಿದೆ. ಸಿನಿಮಾವೊಂದರ ಚಿತ್ರೀಕರಣ ಮುಗಿಸಿಕೊಂಡು ಶುಕ್ರವಾರ ನಾನಿ ತನ್ನ ಇನ್ನೋವಾ ಕಾರಿನಲ್ಲಿ ಡ್ರೈವರ್ ಶ್ರೀನಿವಾಸ್ ಜೊತೆ ಮನೆಗೆ ಹಿಂದಿರುಗುತ್ತಿದ್ದರು. ಅಂತೆಯೇ ತನ್ನ ಟೊಯೊಟಾ ಇನ್ನೊವಾ ಕಾರಿನಲ್ಲಿ ಜುಬಿಲೀ ಹಿಲ್ಸ್ ನಿಂದ ಗ್ಯಾಚಿಬೋವ್ಲಿಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸುಮಾರು ಸಂಜೆ 4.30 ಕ್ಕೆ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯ ಸಂದರ್ಭದಲ್ಲಿ ನಟ ನಾನಿ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದರು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಅದೃಷ್ಟವಶಾತ್ ಕಾರಿನಲ್ಲಿ ಏರ್ ಬ್ಯಾಗ್‍ಗಳನ್ನು ಅಳವಡಿಸಿದ್ದರಿಂದ ಇಬ್ಬರ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನರೇಶ್ ಹೇಳಿದ್ದಾರೆ.

    ಈ ಸಂಬಂಧ ಚಾಲಕನ ವಿರುದ್ಧ ಸೆಕ್ಷನ್ 3 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪಘಾತದ ಬಳಿಕ ಪ್ರತಿಕ್ರಿಯಿಸಿದ ನಾನಿ, ನಾನು ಚೆನ್ನಾಗಿದ್ದೇನೆ. ಸಣ್ಣ ಪುಟ್ಟ ಗಾಯಗಳಾಗಿವೆ. ಯುದ್ಧಂಗೆ ಚಿತ್ರೀಕರಣಕ್ಕೆ ಸಣ್ಣ ಬ್ರೇಕ್ ಅಷ್ಟೆ. ನಾನು ಒಂದು ವಾರದಲ್ಲಿ ಚೇತರಿಸಿಕೊಂಡು ಮತ್ತೆ ಬರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಪ್ರಸ್ತುತ ನಾನಿ ಮೆರ್ಲಾಪಾಕಾ ಗಾಂಧಿ ನಿರ್ದೇಶನದ `ಕೃಷ್ಣಾರ್ಜುನ ಯುದ್ಧಂ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾನಿ ಡಬಲ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೃಷ್ಣ ಮತ್ತು ಅರ್ಜುನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅನುಪಮ ಪರಮೇಶ್ವರನ್ ಮತ್ತು ರುಕ್ಷಾರ್ ಮೀರ್ ನಾಯಕಿ ಪಾತ್ರದಲ್ಲಿ ಮಿಂಚಲಿದ್ದಾರೆ.

    2012 ಜುಲೈ 6 ರಲ್ಲಿ ಬಿಡುಗಡೆಯಾಗಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ `ಈಗ’ ಸಿನಿಮಾದಲ್ಲಿ ನಾನಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ನಾನಿ ಒಂದು ನೊಣವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿದ್ದರು. ಈ ಸಿನಿಮಾದಲ್ಲಿ ಸ್ಯಾಂಡಲ್‍ವುಡ್ ನ ಸುದೀಪ್ ವಿಲನ್ ಆಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.

  • ಕೂಗಿದ್ರೂ ಕೇಳಲಿಲ್ಲ, 1 ನಿಮಿಷ… ಅಂತ ಸ್ಮೈಲ್ ಕೊಟ್ಟು ಸೆಲ್ಫಿಗೆ ನಿಂತ ಯುವಕನಿಗೆ ರೈಲು ಡಿಕ್ಕಿ

    ಕೂಗಿದ್ರೂ ಕೇಳಲಿಲ್ಲ, 1 ನಿಮಿಷ… ಅಂತ ಸ್ಮೈಲ್ ಕೊಟ್ಟು ಸೆಲ್ಫಿಗೆ ನಿಂತ ಯುವಕನಿಗೆ ರೈಲು ಡಿಕ್ಕಿ

    ಹೈದರಾಬಾದ್: ಸಖತ್ತಾಗಿ ಸೆಲ್ಫಿ ತೆಗೆಯಬೇಕು ಅಂತ ಹುಚ್ಚು ಸಾಹಸಗಳನ್ನ ಮಾಡಲು ಹೋಗಿ ಅನೇಕ ಜನ ಪ್ರಾಣ ಕಳೆದುಕೊಂಡಿರೋ ಬಗ್ಗೆ ವರದಿಯಾಗ್ತಾನೆ ಇದ್ದರೂ ಅಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಸೆಲ್ಫಿ ವಿಡಿಯೋ ಯುವಕನೊಬ್ಬನಿಗೆ ಮಾರಣಾಂತಿಕವಾಗಿ ಪರಿಣಮಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

     

    ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗಲೇ ರೈಲು ಡಿಕ್ಕಿಯಾಗಿ ಶಿವ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿವೆ. ಹೈದರಾಬಾದ್‍ನ ಭರತ್‍ನಗರ ರೈಲ್ವೆ ನಿಲ್ದಾಣದಲ್ಲಿ ಭಾನುವಾರದಂದು ಈ ಘಟನೆ ನಡೆದಿದ್ದು, ಬುಧವಾರದಂದು ವಿಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.

    ಯುವಕ ಶಿವಾ ರೈಲ್ವೆ ಹಳಿಯ ಬಳಿ ತನ್ನ ಸ್ಮಾರ್ಟ್‍ಫೋನ್ ಹಿಡಿದು ಸೆಲ್ಫಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಅದೇ ಹಳಿಯಲ್ಲಿ ಎಮ್‍ಎಮ್‍ಟಿಎಸ್(ಮಲ್ಟಿ ಮೋಡಲ್ ಟ್ರಾನ್ಸ್‍ಪೋರ್ಟ್ ಸಿಸ್ಟಮ್) ರೈಲು ಬಂದಿದೆ. ರೈಲು ಬರುತ್ತಿರೋದನ್ನ ನೋಡಿ ಹಿಂದಿನಿಂದ ಒಬ್ಬರು ಏಯ್ ಏಯ್ ಎಂದು ಯುವಕನನ್ನು ಕೂಗಿದ್ದಾರೆ. ಆದ್ರೆ ಆತ ಅದಕ್ಕೆ ಸೊಪ್ಪು ಹಾಕದೆ, ಒಂದು ನಿಮಿಷ ಎಂದು ಹೇಳಿ, ರೈಲು ಸಮೀಪ ಬರುತ್ತಿದ್ದಂತೆ ಸ್ಮೈಲ್ ಕೊಟ್ಟು ನಿಂತಿದ್ದಾನೆ.

    ಜೊತೆಗೆ ತನ್ನ ಕೈ ರೈಲಿನ ಕಡೆ ತೋರಿಸುತ್ತಾ ವಿಡಿಯೋ ಮಾಡುವುದನ್ನ ಮುಂದುವರೆಸಿದ್ದಾನೆ. ರೈಲು ವೇಗವಾಗಿ ಬಂದಿದ್ದು, ಯುವಕನ ಸಮೀಪ ಬಂದಾಗ ಆತನ ಕೈಗೆ ಎಂಜಿನ್ ತಾಗಿ ಆತ ಕೆಳಗೆ ಬಿದ್ದಿದ್ದಾನೆ. ಇವೆಲ್ಲವೂ ಯುವಕನ ಸೆಲ್ಫಿ ವಿಡಿಯೋದಲ್ಲೇ ಸೆರೆಯಾಗಿದೆ. ರೈಲು ಯುವಕನಿಗೆ ಡಿಕ್ಕಿಯಾಗಿ ಆತ ಕೆಳಗೆ ಬೀಳೋದನ್ನ ನೋಡಿದ್ರೆ ಎದೆ ಜಲ್ಲೆನಿಸುವಂತಿದೆ.

    ಈ ಬಗ್ಗೆ ವಿಷಯ ತಿಳಿದ ಕೂಡಲೇ ಆರ್‍ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನನ್ನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನ ಸ್ಥಿತಿ ಸುಧಾರಿಸಿದೆ ಎಂದು ಪೊಲಿಸರು ಹೇಳಿದ್ದಾರೆ. ರೈಲ್ವೆ ಪೊಲೀಸರು ಯುವಕನ ವಿರುದ್ಧ ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 147ರ ಅಡಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಆದರೂ ಯುವ ಜನಾಂಗ ಈ ರೀತಿಯ ಹುಚ್ಚು ಸಾಹಸ ಮಾಡೋ ಮುನ್ನ ಎಚ್ಚರಿಕೆ ವಹಿಸಬೇಕು ಅನ್ನೋದಕ್ಕೆ ಇದೊಂದು ಸೂಕ್ತ ಉದಾಹರಣೆಯಾಗಿದೆ. ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮಲಗಿ ಸ್ಟಂಟ್ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

    https://www.youtube.com/watch?v=9cEbK3v-0EE

  • ಇದೇ ವರ್ಷ ಪ್ರಭಾಸ್ ಮದುವೆ: ಕೃಷ್ಣಂ ರಾಜು ಸ್ಪಷ್ಟನೆ

    ಇದೇ ವರ್ಷ ಪ್ರಭಾಸ್ ಮದುವೆ: ಕೃಷ್ಣಂ ರಾಜು ಸ್ಪಷ್ಟನೆ

    ಹೈದರಾಬಾದ್: ಬಾಹುಬಲಿ ಮೂಲಕ ವಿಶ್ವದ್ಯಾದಂತ ಅಭಿಮಾನಿಗಳನ್ನು ಗಳಿಸಿರುವ ನಟ ಪ್ರಭಾಸ್, ಮದುವೆ ವಿಚಾರಕ್ಕೆ ಹಲವು ಬಾರಿ ಸುದ್ದಿಯಾಗಿದ್ದಾರೆ. ಈಗ ಅವರ ಮದುವೆಯ ಕುರಿತು ಟಾಲಿವುಡ್ ನಟ, ಪ್ರಭಾಸ್ ಅವರ ದೊಡ್ಡಪ್ಪ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪ್ರಭಾಸ್ ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ.

    ಹೈದರಾಬಾದ್‍ನಲ್ಲಿ ಶನಿವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೃಷ್ಣಂ ರಾಜು, ಪ್ರತಿ ಬಾರಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಪ್ರಭಾಸ್ ಅವರ ಮದುವೆ ಕುರಿತು ಪ್ರಶ್ನೆ ಎದುರಾಗುತ್ತದೆ. ಪ್ರತಿ ಬಾರಿ ಈ ಕುರಿತು ಉತ್ತರಿಸಲು ಮುಜುಗರ ಉಂಟಾಗುತ್ತದೆ. ಪ್ರಭಾಸ್ ಇದೇ ವರ್ಷ ಮದುವೆಯಾಗಲಿದ್ದಾರೆ ಎಂದು ಹೇಳಿದರು.

    ಈ ಹಿಂದೆ ತಮ್ಮ ಮದುವೆಯ ಕುರಿತು ಮಾತನಾಡಿದ ಪ್ರಭಾಸ್, ನನಗೆ ಈಗಾಗಲೇ 6 ಸಾವಿರ ಮದುವೆ ಪ್ರಸ್ತಾಪಗಳು ಬಂದಿದ್ದು, ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ ಅವುಗಳನ್ನು ನಿರಾಕರಿಸಿದ್ದಾಗಿ ತಿಳಿಸಿದ್ದರು. ಅಲ್ಲದೇ ನಟಿ ಅನುಷ್ಕಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿರುವ ಕುರಿತು ವದಂತಿಗಳು ಹಬ್ಬಿದ್ದವು. ಇದನ್ನ ನಿರಾಕರಿಸಿದ್ದ ಪ್ರಭಾಸ್ ನಾನೂ ಅನುಷ್ಕಾ ನಮ್ಮಿಬ್ಬರ ಬಗ್ಗೆ ಡೇಟಿಂಗ್ ವದಂತಿಗಳು ಬರಬಾರದು ಎಂದು ನಿರ್ಧರಿಸಿದ್ದೆವು ಎಂದು ಹೇಳಿದ್ದರು.

    ಕೆಲ ದಿನಗಳ ಹಿಂದೆ `ಭಾಗಮತಿ’ ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅನುಷ್ಕಾ ಶೆಟ್ಟಿ, ಪ್ರಭಾಸ್ ನನ್ನ ಅತ್ಯುತ್ತಮ ಸ್ನೇಹಿತ. ಪ್ರಭಾಸ್ ತಮ್ಮ ನಡುವೆ ಇರುವ ಪ್ರೀತಿ, ಪ್ರೇಮ, ಮದುವೆ ಎಂದು ಹೇಳುತ್ತಿರುವ ಗಾಳಿ ಸುದ್ದಿಯೆಲ್ಲಾ ಸುಳ್ಳು ಎಂದು ಹೇಳಿ ವದಂತಿಯನ್ನ ತಳ್ಳಿ ಹಾಕಿದ್ದರು. ಈ ವೇಳೆ ಚಿತ್ರದ ಕುರಿತು ಮಾಹಿತಿ ನೀಡಿದ ಅವರು, `ಭಾಗಮತಿ’ ಚಿತ್ರದಲ್ಲಿ ಐಪಿಎಸ್ ಪಾತ್ರಧಾರಿಯಾದ ಚಂಚಲ ಭಾಗಮತಿಯಾಗಿ ಹೇಗೆ ಬದಲಾಗುತ್ತಾರೆ ಎಂಬುದು ಚಿತ್ರದ ಕಥೆಯಾಗಿದೆ ಎಂದರು. ನಿರ್ದೇಶಕ ಪೂರಿ ಜಗನಾಥ್ ನನ್ನ ಗುರು. ಅವರಿಂದ ಬಹಳ ಕಲಿತಿದ್ದೇನೆ. ನಿರ್ದೇಶಕ ರಾಜಮೌಳಿ ಚಿತ್ರದಲ್ಲಿ ಮತ್ತೆ ಅಭಿನಯಿಸುವ ಬಯಕೆ ಇದೆ ಎಂದು ಹೇಳಿದ್ದರು.

    ಪ್ರಸ್ತುತ ಪ್ರಭಾಸ್ ಸುಜೀತ್ ನಿರ್ದೇಶನದ `ಸಾಹೋ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಮತ್ತು ನೀಲ್ ನಿತಿನ್ ಮುಖೇಶ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ಚಿತ್ರವು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

  • ಬಸ್ ನಿಂದ ಎಸೆಯಲ್ಪಟ್ಟು 1ನೇ ಕ್ಲಾಸ್ ಬಾಲಕಿ ದುರ್ಮರಣ

    ಬಸ್ ನಿಂದ ಎಸೆಯಲ್ಪಟ್ಟು 1ನೇ ಕ್ಲಾಸ್ ಬಾಲಕಿ ದುರ್ಮರಣ

    ಹೈದರಾಬಾದ್: ಶಾಲಾ ಬಸ್ ನಿಂದ ಬಿದ್ದು 1ನೇ ತರಗತಿಯ ಬಾಲಕಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಈ ಘಟನೆ ಸಾಹೇಬ್ ನಗರದಲ್ಲಿರೋ ವಸಂತಲಿಪುರಂನಲ್ಲಿ ನಡೆದಿದೆ. ಮೃತ ದುರ್ದೈವಿ ಬಾಲಕಿಯನ್ನು ಅಂಜಲಿ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: ಮೃತ ಅಂಜಲಿ ಮನೆ ಶಾಹೇಬ್ ನಗರದಲ್ಲಿತ್ತು. ಈಕೆ ಪ್ರತೀ ದಿನ ಶಾಲೆಗೆ ಶಾಲಾ ಬಸ್ ನಲ್ಲೇ ಹೋಗಿ ಬರುತ್ತಿದ್ದಳು. ಅಂತೆಯೇ ಇಂದು ಕೂಡ ವಸಂತಪುರಂನಲ್ಲಿರೋ ಪ್ರಶಾಂತಿ ವಿದ್ಯಾನಿಕೇತನ್ ಶಾಲೆಗೆ ತೆರಳಿ ಮತ್ತೆ ಬಸ್ ನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದಳು. ಈ ವೇಳೆ ಬಸ್ ನ ಡೋರ್ ಪಕ್ಕ ಅಂಜಲಿ ಕುಳಿತಿದ್ದಳು. ಅಂತೆಯೇ ಬಸ್ ಚಲಿಸುತ್ತಿದ್ದ ವೇಳೆ ಚಾಲಕ ಸ್ಪೀಡ್ ಬ್ರೇಕರ್ ನೋಡಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬಾಲಕಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಚಕ್ರದಡಿ ಸಿಲುಕಿದ್ದಾಳೆ. ಇದರಿಂದ ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಆದಾಗಲೇ ಆಕೆ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಸದ್ಯ ಬಾಲಕಿಯ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ನಾವು ಇಂದು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಅಂತ ಕಣ್ಣೀರು ಸುರಿಸುತ್ತಿದ್ದಾರೆ.

    ಕೆಲ ಖಾಸಗಿ ಶಾಲೆಯ ಬಸ್ ಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸುವುದಿಲ್ಲ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಅಲ್ಲದೇ ಪೋಷಕರಿಂದ ಭಾರೀ ಶುಲ್ಕ ಪಡೆದುಕೊಳ್ಳುತ್ತಾರೆ. ಆದ್ರೆ ಮಕ್ಕಳ ಸುರಕ್ಷತೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿಲ್ಲ. ಈ ಎಲ್ಲಾ ಹಿನ್ನೆಲೆಗಳಿಂದ ಇಂತಹ ಅನಾಹುತಗಳು ಸಂಭವಿಸುತ್ತವೆ ಎಂಬುದಾಗಿ ವರದಿಯಾಗಿದೆ.

    ಸದ್ಯ ಘಟನೆ ಸಂಬಂಧ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

  • ಕರ್ನೂಲು ರಸ್ತೆಯಲ್ಲಿ ಜಂಪ್ ಆಯ್ತು ಇನ್ನೋವಾ ಕಾರು- ಪೇಜಾವರಶ್ರೀ ಬೆನ್ನು ಉಳುಕು

    ಕರ್ನೂಲು ರಸ್ತೆಯಲ್ಲಿ ಜಂಪ್ ಆಯ್ತು ಇನ್ನೋವಾ ಕಾರು- ಪೇಜಾವರಶ್ರೀ ಬೆನ್ನು ಉಳುಕು

    ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸಂಚರಿಸುತ್ತಿದ್ದ ಕಾರು ರಸ್ತೆಯಲ್ಲಿ ಎಗರಿದೆ. ಬೆನ್ನು ಉಳುಕಿದ್ದು ವೈದ್ಯರು ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿದ್ದಾರೆ.

    ಮಂತ್ರಾಲಯದಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಇನ್ನೋವಾ ಕಾರಲ್ಲಿ ಪೇಜಾವರಶ್ರೀ ಅವರು ಸಂಚಾರ ಮಾಡುತ್ತಿದ್ದರು. ಕರ್ನೂಲು ವ್ಯಾಪ್ತಿಯಲ್ಲಿ ಸ್ಪೀಡ್ ಬ್ರೇಕರ್ ಅನ್ನು ಚಾಲಕ ನೋಡದ ಕಾರಣ ಕಾರು ಸುಮಾರು ಒಂದು ಅಡಿ ಹಾರಿದೆ.

    ಕಾರು ರಸ್ತೆ ತಲುಪುತ್ತಿದ್ದಂತೆ ಹೊಸದಾಗಿ ನಿರ್ಮಾಣವಾಗುತ್ತಿದ್ದ ಸೇತುವೆ ಸಿಕ್ಕಿದೆ. ಅದು ರಸ್ತೆಯ ಎತ್ತರದಿಂದ ಸ್ವಲ್ಪ ಕೆಳಗಿತ್ತು. ಈ ವೇಳೆ ಕಾರಿನಲ್ಲಿ ಮಲಗಿದ್ದ ಪೇಜಾವರಶ್ರೀ ಒಂದು ಬಾರಿ ಎಗರಿ ಸೀಟಿಗೆ ಬಿದ್ದಿದ್ದಾರೆ. ಈ ಸಂದರ್ಭ ಬೆನ್ನು ಉಳುಕಿದೆ. ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸ್ವಾಮೀಜಿಯವರನ್ನು ದಾಖಲು ಮಾಡಲಾಯ್ತು.

    ಪ್ರಥಮ ಚಿಕಿತ್ಸೆ ಪಡೆದ ಸ್ವಾಮೀಜಿ ಅಲ್ಲಿಂದ ವಿಮಾನ ಮೂಲಕ ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಓಡಾಡಲು ಆಗದ ಸ್ಥಿತಿಯಲ್ಲಿರುವ ಸ್ವಾಮೀಜಿಯನ್ನು ಎತ್ತಿಕೊಂಡೇ ತಂದೆವು. ಬೆನ್ನು ಬಹಳ ನೋವಿದೆ ಅಂತ ಹೇಳುತ್ತಾರೆ. ಪರ್ಯಾಯದಲ್ಲಿ ಎರಡು ವರ್ಷ ಬಿಡುವಿಲ್ಲದೆ ಪೂಜಾಕೈಂಕರ್ಯದಲ್ಲಿ ತೊಡಗಿದ್ದರಿಂದ ದೇಹವು ದಣಿದಿದೆ. ಅವರಿಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ. ಆದ್ರೆ ಸ್ವಾಮೀಜಿ ನಮ್ಮ ಮಾತು ಕೇಳುವುದಿಲ್ಲ. ಅವರು ಹೇಳಿದ್ದೆ ಅವರಿಗೆ ಆಗಬೇಕು ಎಂದು ಸ್ವಾಮೀಜಿ ಆಪ್ತ ಸುನೀಲ್ ಮುಚ್ಚಿಣ್ಣಾಯ ಹೇಳಿದರು.

    ತಜ್ಞ ವೈದ್ಯರು ವಿಶ್ವೇಶತೀರ್ಥರಿಗೆ ಚಿಕಿತ್ಸೆ ಕೊಟ್ಟಿದ್ದು, ಕುಳಿತುಕೊಳ್ಳಬಾರದು, ದೇಹಕ್ಕೆ ಸುಸ್ತು ಮಾಡಿಕೊಳ್ಳಬಾರದು. ಒಂದು ವಾರ ಎಲ್ಲೂ ಓಡಾಡ್ಬಾರ್ದು ಅಂತ ತಾಕೀತು ಮಾಡಿದ್ದಾರೆ. ಜನವರಿ 18ರಂದು ಕೃಷ್ಣನ ಪೂಜಾಧಿಕಾರ ಮುಗಿಸಿದ್ದ ಸ್ವಾಮೀಜಿ 19ರಂದು ಉಡುಪಿಯಲ್ಲಿ 3-4 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಸೋಂದ ಮಠಕ್ಕೆ ಭೇಟಿಕೊಟ್ಟಿದ್ದರು. ಅಲ್ಲಿಂದ ಗದಗ, ಅಲ್ಲಿಂದ ಮಂತ್ರಾಲಯದ ಉತ್ಸವದಲ್ಲಿ ಭಾಗಿಯಾಗಿದ್ದರು.

    ಮಂತ್ರಾಲಯದಿಂದ ಹೈದರಾಬಾದ್ ಹೋಗಿ ಮಂಗಳೂರು ಹೊರಟಿದ್ದರು. ದಾರಿಮಧ್ಯೆ ಕರ್ನೂಲಿನಲ್ಲಿ ಈ ಘಟನೆ ಸಂಭವಿಸಿದೆ. ಮೂರು ದಿನದ ಹಿಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಸ್ವಾಮೀಜಿ ತನಗೆ ಬೆನ್ನು ನೋವು, ದೇಹದಲ್ಲಿ ಶಕ್ತಿಯಿಲ್ಲ, ಓಡಾಟ ಕಷ್ಟ. ಅಂತ ಹೇಳಿಕೊಂಡಿದ್ದರು. ಆದ್ರೆ ಪೇಜಾವರ ಅಭಿಮಾನಿಗಳು- ಶಿಷ್ಯರು ದೇಶದೆಲ್ಲೆಡೆ ಇದ್ದು ಪ್ರಮುಖ ಕಾರ್ಯಕ್ರಮಗಳಾದಾಗ ಆಹ್ವಾನ ನೀಡುತ್ತಾರೆ. ಪಾದಪೂಜೆಗೆ ಬರುವಂತೆ ಒತ್ತಾಯ ಮಾಡುತ್ತಾರೆ.

  • ಪದ್ಮಾವತ್ ಚಿತ್ರವನ್ನು ನೋಡಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ: ಮುಸ್ಲಿಮರಿಗೆ ಓವೈಸಿ ಕರೆ

    ಪದ್ಮಾವತ್ ಚಿತ್ರವನ್ನು ನೋಡಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ: ಮುಸ್ಲಿಮರಿಗೆ ಓವೈಸಿ ಕರೆ

    ಹೈದರಾಬಾದ್: ಬಾಲಿವುಡ್ ನ ವಿವಾದಿತ ಚಿತ್ರ ಪದ್ಮಾವತ್ ಸಿನಿಮಾವನ್ನು ಮುಸ್ಲಿಮ್ ಯುವಜನತೆ ನೋಡಿ ಹಣ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹದ್-ಉಲ್ ಮುಸ್ಲಿಮೀನ್) ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ.

    ಅಖಿಲ ಭಾರತ ಅಭಿಯಾನದ ಭಾಗವಾಗಿ ಬುಧವಾರ ವಾರಂಗಲ್ ನಗರದಲ್ಲಿ ಏರ್ಪಡಿಸಿದ್ದ ‘ಸೆವ್ ಷರಿಯಾ’ (ಷರಿಯಾ ಉಳಿಸಿ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪದ್ಮಾವತ್ ಸಿನಿಮಾ ಒಂದು ಪೌರಾಣಿಕ ಸಿನಿಮಾವಾಗಿದ್ದು, ರಜಪೂತ ರಾಣಿ ಪದ್ಮಾವತಿ ಹಾಗೂ ಚಕ್ರವರ್ತಿ ಅಲ್ಲಾವುದ್ದೀನ್ ಖಿಲ್ಜಿ ನಡುವಿನ ಕಾಲ್ಪನಿಕ ಕತೆಯನ್ನು ಆಧಾರಿಸಿದ್ದು. ಇದನ್ನು ಮುಸ್ಲಿಂ ಕವಿ ಮಲಿಕ್ ಮೊಹಮ್ಮದ ಜಯಸಿ 1540 ರಲ್ಲಿ ಪ್ರಾಸಂಗಿಕವಾಗಿ ಬರೆದಿದ್ದಾರೆ. ಇದು ಯಾವುದೇ ಐತಿಹಾಸಿಕ ಆಧಾರವನ್ನು ಹೊಂದಿಲ್ಲ. ಈ ಚಿತ್ರವನ್ನು ಯಾರು ನೋಡಬೇಡಿ ಎಂದು ಹೇಳಿದರು.

    ಪದ್ಮಾವತ್ ಚಿತ್ರವೊಂದು ‘ಮನ್ಹೂಸ್’ (ಶಾಪ-ಸವಾರಿ) ಮತ್ತು ‘ಘಲೀಜ್’ (ಕೆಟ್ಟ) ಚಿತ್ರ ಎಂದ ಅವರು, ಕೇವಲ ಎರಡು ಗಂಟೆಯ ಚಿತ್ರ ವೀಕ್ಷಿಸಲು ದೇವರು ನಿಮ್ಮನ್ನು ಸೃಷ್ಟಿಸಿಲ್ಲ. ಉತ್ತಮ ಜೀವನ ನಡೆಸಲು ಹಾಗೂ ಒಳ್ಳೆಯ ಕೆಲಸಗಳನ್ನು ಮಾಡಲು ಸೃಷ್ಟಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ಇದೇ ವೇಳೆ  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು. ಪದ್ಮಾವತ್ ಚಿತ್ರವನ್ನು ವಿಮರ್ಶೆ ಮಾಡಲು 12 ಸದಸ್ಯರ ಸಮಿತಿ ಸ್ಥಾಪಿಸಿದ್ದು, ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದ್ದಾರೆ. ಆದರೆ ಮುಸ್ಲಿಂ ಷರಿಯಾ ಕಾನೂನಿನಲ್ಲಿ (ತ್ರಿವಳಿ ತಲಾಕ್) ತಿದ್ದುಪಡಿ ತರಲು ಯಾವ ಮುಸ್ಲಿಂ ಮುಖಂಡರ ಸಲಹೆಯನ್ನು ಪಡೆದಿಲ್ಲ ಎಂದು ಆರೋಪಿಸಿದರು.

    ಪದ್ಮಾವತ್ ಚಿತ್ರದ ರಾಣಿಯ ಬೆಂಬಲಕ್ಕೆ ನಿಂತಿರುವ ರಜಪೂತರ ಹೋರಾಟಗಾರರ ಒಗ್ಗಟ್ಟನ್ನು ನೋಡಿ ಮುಸ್ಲಿಂ ಸಮುದಾಯ ಕಲಿಯಬೇಕಿದೆ. ಚಿತ್ರ ಬಿಡುಗಡೆ ವಿರೋಧಿಸಿ ಹೋರಾಟ ನಡೆಸಿದ್ದಾರೆ. ಆದರೆ ಮುಸ್ಲಿಂ ಕಾನೂನು ತಿದ್ದುಪಡಿ ವೇಳೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಲಿಲ್ಲ. ಮುಸ್ಲಿಂ ಸಮುದಾಯ ವಿಭಜನೆಯಾಗುತ್ತಿದೆ ಎಂದು ಹೇಳಿದರು.

     

     

  • ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸಿದ್ದಕ್ಕೆ ಚಾಲಕರಿಗೆ ಸನ್ಮಾನ

    ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸಿದ್ದಕ್ಕೆ ಚಾಲಕರಿಗೆ ಸನ್ಮಾನ

    ಹೈದರಾಬಾದ್: ತಮ್ಮ ವಾಹನದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ವಸ್ತುಗಳನ್ನು ಹಿಂದಿರುಗಿಸಿದ್ದಕ್ಕೆ ಹೈದರಾಬಾದ್ ಇಬ್ಬರು ಚಾಲಕರಿಗೆ ಪೊಲೀಸರು ಸನ್ಮಾನ ಮಾಡಿದ್ದಾರೆ

    ಚಾಲಕ ಮಿರ್ಜಾ ಮೊಹಮ್ಮದ್ ಅವರು ತಮ್ಮ ಆಟೋದಲ್ಲಿ ಪ್ರಯಾಣಿಕರೊಬ್ಬರು ಹಿಂದಿನ ಸೀಟಿನಲ್ಲಿ 6.5 ತೊಲೆ ಬಂಗಾರದ ಚಿನ್ನಾಭರಣವನ್ನು ಬಿಟ್ಟು ಹೋಗಿದ್ದನ್ನು ನೋಡಿದ್ದರು. ಚಿನ್ನಾಭಾರಣವನ್ನು ನೋಡಿದ ತಕ್ಷಣ ಅದನ್ನು ಎಸ್‍ಆರ್ ನಗರ ಪೊಲೀಸ್ ಠಾಣೆಗೆ ಹಿಂತಿರುಗಿಸಿದ್ದರು.

    ಮೊಹಮ್ಮದ್ ಅವರ ಪ್ರಾಮಾಣಿಕತೆಯನ್ನು ನೋಡಿ ಸರ್ಕಲ್ ಇನ್ಸ್ ಪೆಕ್ಟರ್ ವಹೀದುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿ ಶಾಲು ಹೊದಿಸಿ ಸನ್ಮಾನಿಸಿದ್ದಾರೆ.

    ಇದೇ ರೀತಿ ಮತ್ತೊಬ್ಬ ಕ್ಯಾಬ್ ಚಾಲಕ 3 ತೊಲೆ ಚಿನ್ನಾಭರಣ ಹಾಗೂ 3 ಲಕ್ಷ ರೂ. ನಗದು ಬ್ಯಾಗನ್ನು ಪೊಲೀಸರಿಗೆ ಹಿಂದಿರುಗಿಸಿದ್ದರು. ಇವರ ಪ್ರಾಮಾಣಿಕತೆಯನ್ನು ನೋಡಿ ಜೀದಿಮಟ್ಲಾ ಪೊಲೀಸರು ಸನ್ಮಾನಿಸಿದ್ದಾರೆ.

  • ಮಹಿಳಾ ಸೆಕ್ಯೂರಿಟಿ ಗಾರ್ಡ್ ಮೇಲೆ ಗ್ಯಾಂಗ್ ರೇಪ್ ಎಸಗಿ ಕೆರೆಗೆ ಬಿಸಾಕಿದ್ರು!

    ಮಹಿಳಾ ಸೆಕ್ಯೂರಿಟಿ ಗಾರ್ಡ್ ಮೇಲೆ ಗ್ಯಾಂಗ್ ರೇಪ್ ಎಸಗಿ ಕೆರೆಗೆ ಬಿಸಾಕಿದ್ರು!

    ಹೈದರಾಬಾದ್: ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸೆಕ್ಯೂರಿಟಿ ಗಾರ್ಡ್ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಕೊಲೆಗೈದಿರೋ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ರಾತ್ರಿ ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯ ಸಂತಮಗಳೂರು ಗ್ರಾಮದಲ್ಲಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಮೃತ ದುರ್ದೈವಿ ಮಹಿಳೆಯನ್ನು ಕನಕಮ್ಮ(35) ಎಂದು ಗುರುತಿಸಲಾಗಿದೆ.

    ಕನಕಮ್ಮ ಅವರು ಸಂತಮಗಳೂರು ಗ್ರಾಮದಲ್ಲಿರೋ ವೈಷ್ಣವಿ ಗ್ರಾನಿಟೆಸ್ ಎಂಬ ಅಂಗಡಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅಂತೆಯೇ ಮಂಗಳವಾರ ಅವರಿಗೆ ರಾತ್ರಿ ಪಾಳಿ ಇತ್ತು. ಈ ವೇಳೆ ಕೆಲಸದಲ್ಲಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರ ಮೇಲೆ ಅತ್ಯಾಚಾರವೆಸಗಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ದೇಹವನ್ನು ಹತ್ತಿರದ ಕೆರೆಗೆ ಬಿಸಾಕಿ ಹೋಗಿದ್ದಾರೆ.

    ಇಂದು ಬೆಳಗ್ಗೆ ಕೆರೆಯಲ್ಲಿ ಕನಕಮ್ಮ ಶವ ಪತ್ತೆಯಾಗಿದೆ. ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿ, ಮೃತದೇಹವನ್ನು ನೀರಿನಿಂದ ಮೇಲೆತ್ತಿದ್ದಾರೆ. ಈ ವೇಳೆ ದೇಹದ ಮೇಲೆಲ್ಲಾ ಗಾಯಗಳಾಗಿದ್ದು, ಅವರು ಹಾಕಿದ್ದ ಬಟ್ಟೆಯೂ ಹರಿದಿತ್ತು. ಹೀಗಾಗಿ ಯಾರೋ ಕಿಡಿಗೇಡಿಗಳು ನಿನ್ನೆ ರಾತ್ರಿ ರೇಪ್ ಆಂಡ್ ಮರ್ಡರ್ ಮಾಡಿ ಕೆರೆಗೆ ಬಿಸಾಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.