Tag: Hyderabad

  • ಬೀಳ್ತಿದ್ದ ಮೊಬೈಲ್ ಹಿಡಿಯಲು ಹೋಗಿ ರೈಲಿನಿಂದ ಬಿದ್ದು ಎಂಟೆಕ್ ವಿದ್ಯಾರ್ಥಿ ಸಾವು

    ಬೀಳ್ತಿದ್ದ ಮೊಬೈಲ್ ಹಿಡಿಯಲು ಹೋಗಿ ರೈಲಿನಿಂದ ಬಿದ್ದು ಎಂಟೆಕ್ ವಿದ್ಯಾರ್ಥಿ ಸಾವು

    ಹೈದರಾಬಾದ್: ಬೀಳುತ್ತಿದ್ದ ಮೊಬೈಲ್ ಹಿಡಿಯಲು ಹೋಗಿ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಎಂಟೆಕ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಎಂಟೆಕ್ ಮೊದಲ ವರ್ಷ ಓದುತ್ತಿದ್ದ ವಿ. ಪ್ರಶಾಂತ್ ರೆಡ್ಡಿ ಎಂದು ಗುರುತಿಸಲಾಗಿದೆ. ಪ್ರಶಾಂತ್ ರಜೆ ಇದ್ದ ಹಿನ್ನೆಲೆಯಲ್ಲಿ ವಾರಂಗಲ್ ಜಿಲ್ಲೆಯಲ್ಲಿರುವ ತನ್ನೂರು ಹಾಸನಪರ್ತಿಗೆ ರೈಲಿನಲ್ಲಿ ಹೊರಟ್ಟಿದ್ದ ವೇಳೆ ಈ ದುರಂತ ಸಂಭವಿಸಿದೆ.

    ಪ್ರಶಾಂತ್ ರೆಡ್ಡಿ ಸಿಕಿಂದರಬಾದ್-ನಲಾಗುಂಡಾ ಮಾರ್ಗದ ಶಾತವಾಹನ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಈ ವೇಳೆ ರೈಲು ಬೋಗಿಯ ಬಾಗಿಲಿನ ಬಳಿ ನಿಂತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದನು. ಆಗ ಮೊಬೈಲ್ ಆತನ ಕೈಯಿಂದ ಆಕಸ್ಮಿಕವಾಗಿ ಜಾರಿದೆ. ನಂತರ ಪ್ರಶಾಂತ್ ಜಾರಿ ಬೀಳುತ್ತಿದ್ದ ಮೊಬೈಲ್ ಅನ್ನು ಹಿಡಿದುಕೊಳ್ಳಲು ಹೋಗಿ ರೈಲಿನ ಕೆಳಗೆ ಬಿದ್ದು, ರೈಲು ಕೆಳಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.

    ಈ ಘಟನೆ ಸಂಬಂಧ ಸಿಕಿಂದರಬಾದ್ ರೈಲ್ವೆ ಪೊಲೀಸರು ತನಿಖೆ ನಡೆಸಿದ್ದಾರೆ. ವಿದ್ಯಾರ್ಥಿ ಪ್ರಶಾಂತ್ ರೆಡ್ಡಿ ಮೃತ ದೇಹವನ್ನು ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

  • ಚಿಕ್ಕಮ್ಮನ ಮಗನೊಂದಿಗೆ ಆಕ್ರಮ ಸಂಬಂಧ-ಅಡ್ಡಿ ಬಂದ ಪತಿಯ ಕೊಲೆ!

    ಚಿಕ್ಕಮ್ಮನ ಮಗನೊಂದಿಗೆ ಆಕ್ರಮ ಸಂಬಂಧ-ಅಡ್ಡಿ ಬಂದ ಪತಿಯ ಕೊಲೆ!

    ಹೈದರಾಬಾದ್: ಪತ್ನಿಯೊಬ್ಬಳು ತನ್ನ ಆಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

    ಹರಿಪ್ರಸಾದ್ ಕೊಲೆಯಾದ ದುರ್ದೈವಿ. ಪತಿಯನ್ನೇ ಕೊಲೆ ಮಾಡಿದ ಮಹಿಳೆ ಹೆಸರು ಹಿಮಚಂದು. ಕಳೆದ ಎಂಟು ವರ್ಷಗಳ ಹಿಂದೆ ಇಬ್ಬರಿಗೂ ವಿವಾಹವಾಗಿತ್ತು. ದಂಪತಿಗೆ ಮೂರು ಹೆಣ್ಣು ಮಕ್ಕಳು ಇದ್ದಾರೆ.

    ಏನಿದು ಘಟನೆ: ಹಿಮಚಂದು ಜನಿಸಿದ ಬಳಿಕ ಆಕೆಯ ತಾಯಿ ಮೃತ ಪಟ್ಟಿದ್ದರು. ಇದರಿಂದ ಹಿಮಚಂದು ತಂದೆ ಎರಡನೇ ವಿವಾಹವಾಗಿದ್ದರು. ಹಿಮಚಂದು ಅವರ ಚಿಕ್ಕಮ್ಮನಿಗೆ ಒಂದು ಗಂಡು ಮಗು ಜನಿಸಿತ್ತು. ಕೆಲ ವರ್ಷಗಳ ನಂತರ ಹಿಮಚಂದುಳನ್ನು ಹರಿಪ್ರಸಾದ್ ಎಂಬವರ ಜೊತೆ ಮದುವೆ ಮಾಡಲಾಗಿತ್ತು.

    ಹರಿಪ್ರಸಾದ್ ಮೂಲತಃ ಕಾಕಿನಾಡ ಜಿಲ್ಲೆಯ ರಮಣಯ್ಯ ನಗರದಲ್ಲಿ ಕಾರು ಚಾಲಕರಾಗಿ ಜೀವನ ನಡೆಸುತ್ತಿದ್ದರು. ಮದುವೆ ನಂತರ ಇಬ್ಬರ ನಡುವಿನ ಜೀವನ ಉತ್ತಮವಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ತನ್ನ ತಂದೆಯ ಮಗ, ಅಂದರೆ ತಮ್ಮ ಭಾನುಪ್ರಸಾದ್, ಹಿಮಚಂದ್ರ ನಡುವೆ ಆಕ್ರಮ ಸಂಬಂಧ ಉಂಟಾಗಿತ್ತು. ಇದನ್ನು ತಿಳಿದ ಹರಿಪ್ರಸಾದ್ ಪತ್ನಿಗೆ ಎಚ್ಚರಿಕೆ ನೀಡಿದ್ದರು. ಆದರೆ ತನ್ನ ಆಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿ ವಿರುದ್ಧ ಕೋಪಗೊಂಡ ಆಕೆ ಭಾನುಪ್ರಸಾದ್ ಜೊತೆ ಸೇರಿ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.

    ಪತಿಯನ್ನು ಕೊಲೆ ಮಾಡಿದ ನಂತರ ಭಾನುಪ್ರಸಾದ್ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಮೃತದೇಹವನ್ನು ನಗರದ ಹೊರವಲಯದ ಕಸ ವಿಲೇವಾರಿ ಸ್ಥಳದಲ್ಲಿ ಹಾಕಿ ಬೆಂಕಿ ಹಚ್ಚಿ ಸುಟ್ಟುಹಾಕಿದ್ದರು.

    ಹರಿಪ್ರಸಾದ್ ಮೊಬೈಲ್ ಇದ್ದಕ್ಕಿದ್ದ ಹಾಗೇ ಸ್ವಿಚ್ ಆಫ್ ಆಗಿದ್ದನ್ನು ಗಮನಿಸಿದ ಆತನ ಸಹೋದರ ಹಿಮಚಂದುಳ ಬಳಿ ವಿಚಾರಿಸಿದ್ದಾರೆ. ಆದರೆ ತನ್ನ ಆತ್ತಿಗೆ ಇಂದ ಸರಿಯಾದ ಉತ್ತರ ಲಭಿಸಿದ ಕಾರಣ ಆತ ಸ್ಥಳೀಯ ಪೊಲೀಸರಿಗೆ ಹರಿಪ್ರಸಾದ್ ಕಾಣೆಯಾದ ಬಗ್ಗೆ ದೂರು ನೀಡಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ನಗರದ ಹೊರವಲಯದಲ್ಲಿ ಅರ್ಧ ಸುಟ್ಟು ಹೋಗಿದ್ದ ಮೃತದೇಹ ಹರಿಪ್ರಸಾದ್ ಅವರದ್ದೇ ಎಂದು ಗುರುತಿಸಿದ್ದರು. ನಂತರದ ವಿಚಾರಣೆಯಲ್ಲಿ ಹರಿಪ್ರಸಾದ್ ಪತ್ನಿ ಹಿಮಚಂದ್ರ ಹಾಗೂ ಭಾನುಪ್ರಸಾದ್ ಕೊಲೆ ಆರೋಪಿಗಳು ಎಂದು ತಿಳಿದುಬಂದಿತ್ತು. ಪ್ರಸ್ತುತ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಕೊಲೆ ಮಾಡಲು ಸಹಕಾರ ನೀಡಿದ್ದ ಭಾನುಪ್ರಸಾದ್ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದಿದ್ದಾರೆ.

  • ಪ್ರಿಯಾ ವಾರಿಯರ್ ಗೆ ಸುಪ್ರೀಂನಿಂದ ಗುಡ್ ನ್ಯೂಸ್

    ಪ್ರಿಯಾ ವಾರಿಯರ್ ಗೆ ಸುಪ್ರೀಂನಿಂದ ಗುಡ್ ನ್ಯೂಸ್

    ನವದೆಹಲಿ: ಮಲೆಯಾಳಂ ನಟಿ ಪ್ರಿಯಾ ವಾರಿಯರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಸುಪ್ರೀಂ ಕೋರ್ಟ್ ತಡೆ ನೀಡಿ ಅದೇಶ ನೀಡಿದೆ.

    ಪ್ರಿಯಾ ವಾರಿಯರ್ ನಟನೆಯ ಚಿತ್ರದ ಹಾಡಿನ ವಿರುದ್ಧ ತೆಲಂಗಾಣದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ವಿಚಾರಣೆ ತಡೆ ಕೋರಿ ಪ್ರಿಯಾ ಸೋಮವಾರ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ರಾಜ್ಯಗಳಿಗೆ ತಮ್ಮ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸದಂತೆ ನಿರ್ದೇಶನ ನೀಡಲು ಮನವಿ ಸಲ್ಲಿಸಿದ್ದರು. ಅಲ್ಲದೇ ಚಿತ್ರದ ನಿರ್ದೇಶಕರು ಸುಪ್ರೀಂ ಮೊರೆ ಹೋಗಿದ್ದರು.

    ಪ್ರಿಯಾ ವಾರಿಯರ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ದೀಪಕ್ ಮಿಶ್ರಾ, ನ್ಯಾ. ಎಎಂ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಮುಂದಿನ ವಿಚಾರಣೆ ನಡೆಯುವವರೆಗೂ ಯಾವುದೇ ಕ್ರಿಮಿನಲ್ ವಿಚಾರಣೆ ನಡೆಸದಂತೆ ಸೂಚಿಸಿದೆ. ಅಲ್ಲದೇ ಚಿತ್ರ ನಿರ್ದೇಶಕರ ಅರ್ಜಿಗೂ ಈ ಸೂಚನೆಗಳು ಅನ್ವಯವಾಗುತ್ತದೆ ಎಂದು ತಿಳಿಸಿದೆ. ಪ್ರಿಯಾ ವಿರುದ್ಧ ದಾಖಲಾಗಿದ್ದ ದೂರಿನ ಕುರಿತು ತೆಲಂಗಾಣ ಸರ್ಕಾರ ಮತ್ತು ಸೇರಿ ಇತರೇ ರಾಜ್ಯಗಳಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ.

    ಏನಿದು ಪ್ರಕರಣ? ಪ್ರಿಯಾ ವಾರಿಯರ್ ನಟನೆಯ `ಒರು ಅಡಾರ್ ಲವ್’ ಚಿತ್ರದಲ್ಲಿನ ಹಾಡಿನ ವಿರುದ್ಧ ತೆಲಂಗಾಣದ ಹೈದರಬಾದ್ ನ ಫಲಕ್‍ನಾಮಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಚಿತ್ರದ ಹಾಡಿನಲ್ಲಿ ಪ್ರವಾದಿ ಕೀರ್ತನೆಗಳನ್ನ ಬಳಸಿರುವುದು ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸದ್ದರು. ಅಲ್ಲದೇ ಮಹಾರಾಷ್ಟ್ರದ ಮುಂಬೈ ರಝಾ ಆಕಾಡೆಮಿಯಲ್ಲೂ ಹಾಡಿನ ವಿರುದ್ಧ ದೂರು ದಾಖಲಿಸಲಾಗಿತ್ತು. ಇದನ್ನೂ ಓದಿ: ತನ್ನ ನೆಚ್ಚಿನ ಕ್ರಿಕೆಟರ್ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಪ್ರಿಯಾ

    ಈ ಕುರಿತು ಪ್ರಿಯಾ ತಮ್ಮ ಪರ ವಕೀಲೆ ಪಲ್ಲವಿ ಪ್ರತಾಪ್ ಮೂಲಕ ಅರ್ಜಿ ಸಲ್ಲಿಸದ್ದರು. ಈ ವೇಳೆ ಮಾತನಾಡಿದ್ದ ಅವರು, ಮಲಯಾಳಂ ಯೇತರ ರಾಜ್ಯಗಳಲ್ಲಿ ದೂರು ದಾಖಲಿಸಿರುವವರು ಹಾಡನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಪ್ರವಾದಿ ಮಹಮ್ಮದ್ ಹಾಗೂ ಅವರ ಮೊದಲ ಪತ್ನಿ ಖದೀಜಾ ಅವರ ನಡುವಿನ ಪ್ರೀತಿಯನ್ನು ಹಾಡು ಶ್ಲಾಘಿಸುತ್ತದೆ. ಇದು ಜಾನಪದ ಹಾಡು. ಜಬ್ಬಾರ್ ಎಂಬವರು 1978ರಲ್ಲಿ ರಚಿಸಿದ್ದಾರೆ. ಕಳೆದ 40 ವರ್ಷಗಳಿಂದ ಮುಸ್ಲಿಮರು ಇದನ್ನು ಹಾಡುತ್ತಿದ್ದು ಈಗ ಏಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಿಯಾ ಪ್ರಶ್ನಿದ್ದರು. ಇದನ್ನೂ ಓದಿ: ಕನ್ನಡಕ್ಕೆ ಬರ್ತಾಳಂತೆ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್!

  • ಫೇಸ್‍ ಬುಕ್‍ನಲ್ಲಿ 20 ಮಹಿಳೆಯರಿಗೆ ಮದ್ವೆಯಾಗ್ತೀನೆಂದು ನಂಬಿಸಿ ಹಣ, ಆಭರಣ ದೋಚಿದ್ದ ವ್ಯಕ್ತಿ ಅರೆಸ್ಟ್!

    ಫೇಸ್‍ ಬುಕ್‍ನಲ್ಲಿ 20 ಮಹಿಳೆಯರಿಗೆ ಮದ್ವೆಯಾಗ್ತೀನೆಂದು ನಂಬಿಸಿ ಹಣ, ಆಭರಣ ದೋಚಿದ್ದ ವ್ಯಕ್ತಿ ಅರೆಸ್ಟ್!

    ಹೈದರಾಬಾದ್: ಫೇಸ್ ಬುಕ್‍ನಲ್ಲಿ 20 ಮಹಿಳೆಯರಿಗೆ ಮೋಸ ಮಾಡಿದ ವ್ಯಕ್ತಿಯನ್ನು ರಾಚಕೊಂಡ ಪೊಲೀಸರು ಮಂಗಳವಾರದಂದು ಹೈದರಾಬಾದ್‍ನಲ್ಲಿ ಬಂಧಿಸಿದ್ದಾರೆ.

    ರಂಗಸ್ವಾಮಿ ಬಂಧಿತ ಆರೋಪಿ. ಆರೋಪಿ ಮೂಲತಃ ಅನಂತಪುರದವನಾಗಿದ್ದು, ಹೈದರಬಾದ್‍ನಲ್ಲಿ ವಾಸಿಸುತ್ತಿದ್ದ. ತನ್ನ ಓದನ್ನು ಅರ್ಧದಲ್ಲೇ ನಿಲ್ಲಿಸಿದ್ದ ಈತ ಫೇಸ್‍ಬುಕ್ ನಲ್ಲಿ ಮಹಿಳೆಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ನಂತರ ಅವರನ್ನು ನೇರವಾಗಿ ಭೇಟಿ ಮಾಡಿ ಪ್ರೀತಿಯ ನಾಟಕವಾಡ್ತಿದ್ದ. ಅವರ ವಿಶ್ವಾಸವನ್ನು ಗಳಿಸಿದ ನಂತರ ಹಣ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದ.

    ರಂಗಸ್ವಾಮಿಯಿಂದ ಮೋಸ ಹೋದವರು ಸಿಕಂದರಾಬಾದ್ ನ ನಚಾರಾಮ್, ಲಾಲ್‍ಪೇಟ್ ಹಾಗೂ ಲಾಲಗುಡದ ನಿವಾಸಿಗಳಾಗಿದ್ದು, ಎಂಎನ್‍ಸಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಮೋಸ ಹೋದವರು ಭಯ ಹಾಗೂ ಮುಜುಗರದಿಂದ ಆರೋಪಿ ವಿರುದ್ಧ ದೂರನ್ನು ದಾಖಲಿಸಿರಲಿಲ್ಲ. ನಂತರ ಒಬ್ಬರು ಯುವತಿ ಬಂದು ರಂಗಸ್ವಾಮಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ರಂಗಸ್ವಾಮಿ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿ ಹಣ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾನೆ ಎಂದು ಯುವತಿ ದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಲವಾರು ಸಂದರ್ಭಗಳಲ್ಲಿ ರಂಗಸ್ವಾಮಿ ನನಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ಹೇಳಿದ್ದಾರೆ. ಯುವತಿ ದೂರು ದಾಖಲಿಸುತ್ತಿದ್ದಂತೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದರು.

    ಸದ್ಯ ಪೊಲೀಸರು ಆರೋಪಿ ರಂಗಸ್ವಾಮಿಯನ್ನ ಬಂಧಿಸಿದ್ದಾರೆ. ರಂಗಸ್ವಾಮಿಯ ವಿರುದ್ಧ ಹಲವಾರು ಕಳ್ಳತನ ಹಾಗೂ ಕೊಲೆ ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಾಲುವೆಗೆ ಹಾರಿ 20ರ ಯುವತಿ ಆತ್ಮಹತ್ಯೆ!

    ಕಾಲುವೆಗೆ ಹಾರಿ 20ರ ಯುವತಿ ಆತ್ಮಹತ್ಯೆ!

    ಹೈದರಾಬಾದ್: 20 ವರ್ಷದ ಯುವತಿಯೊಬ್ಬಳು ತನ್ನ ಅಜ್ಜಿ ಬೈದಳು ಎಂದು ಹಂದ್ರಿ-ನೀವಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕುರ್ನೂಲ್ ಜಿಲ್ಲೆಯ ಮಡ್ಡಿಕೇರಾ ಗ್ರಾಮದಲ್ಲಿ ನಡೆದಿದೆ.

    ಮೃತ ಯುವತಿಯನ್ನು ಅನಂತಪುರ ಜಿಲ್ಲೆಯ ಗುಂಟಕಲ್ ಪಟ್ಟಣದ ಭೀಮಾಲಿಂಗ ಅವರ ಮಗಳು ಝಾನ್ಸಿ ಎಂದು ಗುರುತಿಸಲಾಗಿದೆ. ಝಾನ್ಸಿ ಕಳೆದ ಕೆಲವು ತಿಂಗಳುಗಳಿಂದ ಕರ್ನೂಲ್ ಜಿಲ್ಲೆಯಲ್ಲಿರುವ ಮಡ್ಡಿಕೇರಾದಲ್ಲಿರುವ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. ಇತ್ತೀಚೆಗೆ ಅಜ್ಜಿ ಈಶ್ವರಮ್ಮ ಝಾನ್ಸಿ ಫೋನಿನಲ್ಲಿ ಗಂಟೆಗಳವರೆಗೆ ಮಾತನಾಡುತ್ತಿದ್ದೀಯಾ ಎಂದು ಬೈದಿದ್ದಾರೆ. ಇದರಿಂದ ಝಾನ್ಸಿ ಖಿನ್ನತೆಗೆ ಒಳಗಾಗಿದ್ದು, ತನ್ನ ಅಜ್ಜಿ ಬೈದ್ರು ಎಂದು ಗುಂಟಕಲ್ ನಲ್ಲಿರುವ ತನ್ನ ಪೋಷಕರ ಮನೆಗೆ ಹೋಗುತ್ತೇನೆ ಎಂದು ಹೇಳಿ ಫೆಬ್ರವರಿ 12 ರಂದು ಮನೆಯಿಂದ ಹೊರಟಿದ್ದಾಳೆ.

    ಝಾನ್ಸಿ ಪೋಷಕರ ಮನೆಗೆ ಹೋಗದೇ ಹಂದ್ರಿ-ನೀವಾ ಕಾಲುವೆ ಸಮೀಪವಿರುವ ಗ್ರಾಮದ ಹೊರವಲಯಕ್ಕೆ ಹೋಗಿದ್ದು, ನಂತರ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರು ಝಾನ್ಸಿ ನಮ್ಮ ಮನೆಗೂ ಬಂದಿಲ್ಲ ಎಂದು ತಿಳಿಸಿದ ನಂತರ ಅಜ್ಜಿ ಈಶ್ವರಮ್ಮ ಫೆಬ್ರವರಿ 15 ರಂದು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.

    ಪೊಲೀಸರು ದೂರನ್ನು ದಾಖಲಿಸಿಕೊಂಡು ಕಾಣೆಯಾಗಿದ್ದ ಝಾನ್ಸಿ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಶುಕ್ರವಾರ ಅನಂತಪುರ ಜಿಲ್ಲೆಯ ವಜ್ರಕಾರುರ್ ಗ್ರಾಮದಲ್ಲಿ ಅಪರಿಚಿತ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ನಂತರ ಪ್ರಕರಣವನ್ನು ದಾಖಲಿಸಿಕೊಂಡು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಭಾಗಮತಿ ಬಳಿಕ ‘ಭಾನುಮತಿ’ ನೆರಳಲ್ಲಿ ಅನುಷ್ಕಾ ಶೆಟ್ಟಿ

    ಭಾಗಮತಿ ಬಳಿಕ ‘ಭಾನುಮತಿ’ ನೆರಳಲ್ಲಿ ಅನುಷ್ಕಾ ಶೆಟ್ಟಿ

    ಹೈದರಾಬಾದ್: ವಿಶೇಷ ಕಥಾವಸ್ತು ಹೊಂದಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ಆಪಾರ ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ತಮ್ಮ ಮುಂದಿನ ಚಿತ್ರದಲ್ಲಿ ಹಿರಿಯ ನಟಿ `ಭಾನುಮತಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ಈಗಾಗಲೇ ನಟಿ ಸಾವಿತ್ರಿ ಅವರ ಜೀವನ ಆಧಾರಿತ ಸಿನಿಮಾ ತೆಲುಗಿನಲ್ಲಿ ತಯಾರಾಗುತ್ತಿದೆ. ಹಿರಿಯ ನಟಿ ಸಾವಿತ್ರಿ ಪಾತ್ರಕ್ಕೆ ಕೀರ್ತಿ ಸುರೇಶ್ ಬಣ್ಣ ಹಚ್ಚಲಿದ್ದಾರೆ. ಸಾವಿತ್ರಿಯವರ ಸಮಕಾಲಿನ ನಟಿ ಭಾನುಮತಿ. ಇವರಿಬ್ಬರ ನಡುವಿನ ಸನ್ನೀವೇಶಗಳು ಚಿತ್ರದಲ್ಲಿರಲಿವೆ ಎಂದು ಹೇಳಲಾಗುತ್ತಿದ್ದು, ಭಾನುಮತಿ ಪಾತ್ರಕ್ಕೆ ಅನುಷ್ಕಾ ಶೆಟ್ಟಿಯವರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಿಂದ ಕೇಳಿ ಬಂದಿದೆ. ಈ ಕುರಿತು ಅನುಷ್ಕಾ ಅವರಿಂದ ಸ್ಪಷ್ಟನೆ ಲಭಿಸಬೇಕಿದೆ.

    ಸಾವಿತ್ರಿ ಹಾಗೂ ಭಾನುಮತಿ ಇಬ್ಬರು ಒಂದೇ ಕಾಲಮಾನದ ಸ್ಟಾರ್ ನಟಿಯರು. ಅಲ್ಲದೇ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು ಎನ್ನಲಾಗಿದೆ. ಇವರಿಬ್ಬರ ಬಾಂಧವ್ಯವೇ ಚಿತ್ರದ ತಿರುಳು ಎನ್ನಲಾಗಿದೆ. ಚಿತ್ರವು ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರ ತಯಾರಾಗುತ್ತಿದೆ.

    ಚಿತ್ರದಲ್ಲಿ ಹಲವು ಸ್ಟಾರ್ ನಟರು ಅಭಿನಯಿಸುತ್ತಿದ್ದು, ಮೋಹನ್ ಬಾಬು, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಶಾಲಿನಿ ಪಾಂಡೆ, ವಿಕ್ರಮ್ ಪ್ರಭು ಪ್ರಮುಖ ನಟರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಮಾರ್ಚ್ ಕೊನೆಯ ವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.

  • ಬಾಯ್ ಫ್ರೆಂಡ್ ಗೆ ವಿಡಿಯೋ ಕಾಲ್ ಮಾಡಿ ಎಂಬಿಎ ವಿದ್ಯಾರ್ಥಿನಿ ನೇಣಿಗೆ ಶರಣು!

    ಬಾಯ್ ಫ್ರೆಂಡ್ ಗೆ ವಿಡಿಯೋ ಕಾಲ್ ಮಾಡಿ ಎಂಬಿಎ ವಿದ್ಯಾರ್ಥಿನಿ ನೇಣಿಗೆ ಶರಣು!

    ಹೈದರಾಬಾದ್: ತನ್ನ ಸ್ನೇಹಿತ ವಿಡಿಯೋ ಕಾಲ್ ಮಾಡಿದ್ದ ಸಂದರ್ಭದಲ್ಲಿ ಎಂಬಿಎ ವಿದ್ಯಾರ್ಥಿನಿಯೊಬ್ಬಳು ಹಾಸ್ಟೇಲಿನಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಕೊಂಪಲ್ಲಿಯಲ್ಲಿ ನಡೆದಿದೆ.

    24 ವರ್ಷದ ಬಿ. ಹನೀಶಾ ಚೌಧರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಶಿವಶಿವನಿ ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು.

    ಏನಿದು ಘಟನೆ?: ಭಾನುವಾರ ಬೆಳಗ್ಗೆ ಹನೀಶಾಳಿಗೆ ದೀಕ್ಷಿತ್ ಪಟೇಲ್ ಗೆ ವಿಡಿಯೋ ಕಾಲ್ ಮಾಡಿದ್ದನು. ಈ ವೇಳೆ ಅವರಿಬ್ಬರ ಮಧ್ಯೆ ನಡೆದ ಮಾತುಕತೆ ತಾರಕಕ್ಕೇರಿದೆ. ಬಳಿಕ ಹನೀಶಾ ತನ್ನ ರೂಮ್ ನಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ದೀಕ್ಷಿತ್ ಪಟೇಲ್ ಆಕೆಯ ಹಾಸ್ಟೆಲ್ ಗೆ ಹೋಗಿ ಬಾಗಿಲು ಮುರಿದು ಆಕೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅದಾಗಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

    ವಿಡಿಯೋ ಕಾಲ್ ಮಾಡಿದ್ದ ಸಂದರ್ಭದಲ್ಲಿಯೇ ಹನೀಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ ಅಂತ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದ್ರೆ ಆಕೆ ಆತ್ಮಹತ್ಯೆಗೆ ಶರಣಾಗುವ ಮುನ್ನ ಆಕೆಯ ಬಾಯ್ ಫ್ರೆಂಡ್ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾಳೆ. ಅಲ್ಲದೇ ಹನೀಶಾ ಆತ್ಮಹತ್ಯೆಗೆ ಶರಣಾಗುವುದನ್ನು ಆಕೆಯ ಫ್ರೆಂಡ್ ನೋಡಿರುವುದಾಗಿ ಹೇಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹನೀಶಾ ಚೌಧರಿ ಮೂಲತಃ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರಾಗಿದ್ದು, ಅನಂತಪು ಹೈದರಾಬಾದ್‍ನಿಂದ ಸುಮಾರು 350 ಕಿ.ಮೀ. ದೂರದಲ್ಲಿದೆ. ಆದ್ದರಿಂದ ಹೈದರಾಬಾದ್‍ನ ಕೊಂಪಲ್ಲಿಯ ಖಾಸಗಿ ಹಾಸ್ಟೆಲ್ ನಲ್ಲಿ ವಾಸವಿದ್ದರು.

    ಹನೀಶಾಳನ್ನು ದೀಕ್ಷಿತ್ ಮದುವೆ ಕಾರ್ಯಕ್ರಮಕ್ಕೆ ಹೋಗಲು ಬಿಡದೇ ಇರುವುದಕ್ಕೆ ಅವರಿಬ್ಬರ ಮಧ್ಯೆ ವಾಗ್ವಾದ ನಡೆದಿದ್ದೇ  ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂಬಂಧ ಚೌಧರಿ ಪೋಷಕರು ದೂರು ನೀಡಿದ್ದಾರೆ. ಸದ್ಯ ಹನೀಶಾ ಫೋನನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

  • ಪತ್ರಿಕಾಗೋಷ್ಠಿ ವೇಳೆ ಮಹಿಳೆಯ ಕನ್ನೆಗೆ ಬಾರಿಸಿದ ಪೊಲೀಸ್- ತನಿಖೆಗೆ ಆದೇಶ

    ಪತ್ರಿಕಾಗೋಷ್ಠಿ ವೇಳೆ ಮಹಿಳೆಯ ಕನ್ನೆಗೆ ಬಾರಿಸಿದ ಪೊಲೀಸ್- ತನಿಖೆಗೆ ಆದೇಶ

    ಹೈದರಾಬಾದ್: ಪತ್ರಿಕಾ ಗೋಷ್ಠಿ ವೇಳೆ ಸಹಾಯಕ ಪೊಲೀಸ್ ಆಯುಕ್ತರೊಬ್ಬರು ಮಹಿಳೆಯ ಕೆನ್ನೆಗೆ ಬಾರಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

    ಬೇಗಂಪೇಟ್ ಸಹಾಯಕ ಪೊಲೀಸ್ ಆಯುಕ್ತರಾದ ಎಸ್ ರಂಗ ರಾವ್ ಪದ್ಮಾ ಎಂಬ ಆರೋಪಿ ಮಹಿಳೆಯ ಕಪಾಳಕ್ಕೆ ಹೊಡೆದಿದ್ದಾರೆ. ಈಕೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆಂದು ಪತ್ರಿಕಾ ಗೋಷ್ಠಿ ವೇಳೆ ಪೊಲೀಸರು ಹೇಳಿದ್ದರು. ಈ ವೇಳೆ ಮಹಿಳೆ ತಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ವಾದಿಸಿದ್ದಳು.

     

    ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ತನಿಖೆ ನಡೆಸಲಾಗ್ತಿದೆ ಎಂದು ಉತ್ತರ ವಲಯ ಉಪ ಪೊಲೀಸ್ ಆಯುಕ್ತರಾದ ಬಿ. ಸುಮತಿ ಹೇಳಿದ್ದಾರೆ. ಎಸಿಪಿ ವಿರುದ್ಧ ತನಿಖೆ ಆರಂಭವಾಗಿದೆ. ಅವರಿಂದ ವಿವರಣೆ ಕೇಳಿದ್ದೇವೆ. ಅದರ ಆಧಾರದ ಮೇಲೆ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಸುಮತಿ ತಿಳಿಸಿದ್ದಾರೆ.

    ಪದ್ಮಾ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆ. ಆಕೆ ಹಾಗೂ ಇನ್ನೂ ಮೂವರು ಮಹಿಳೆಯರು ಜನರ ಗಮನ ಬೇರೆಡೆ ಸೆಳೆದು ಹಲವು ಅಪರಾಧಗಳನ್ನ ಎಸಗಿದ್ದಾರೆ. ನಾಲ್ವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಕರುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಆರೋಪ ಹೊತ್ತಿರುವ ಎಸಿಪಿ ಅವರನ್ನ ಸಂಪರ್ಕಿಸಿದಾಗ, ಮಹಿಳೆ ಪೊಲೀಸರ ಮೇಲೆಯೇ ಆರೋಪಗಳನ್ನ ಮಾಡ್ತಿದ್ದರಿಂದ ಪತ್ರಿಕಾ ಗೋಷ್ಠಿಯಿಂದ ಹೊರಹೋಗುವಂತೆ ನಾನು ಮಹಿಳೆಯನ್ನ ತಳ್ಳಿದೆ ಎಷ್ಟೇ ಎಂದು ಹೇಳಿದ್ದಾರೆ.

  • ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ ಪ್ರಕರಣ – ಶಿಶು ಬಲಿ ನೀಡಿದ್ದು ಈ ಕಾರಣಕ್ಕೆ

    ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ ಪ್ರಕರಣ – ಶಿಶು ಬಲಿ ನೀಡಿದ್ದು ಈ ಕಾರಣಕ್ಕೆ

    ಹೈದರಾಬಾದ್: ಅಪರಿಚಿತ ಮಗುವಿನ ರುಂಡ ಮನೆಯ ಟೆರೇಸ್ ಮೇಲೆ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದು ಮಾನವ ಬಲಿ ಎಂದು ರಾಚಕೊಂಡ ಪೊಲೀಸರು ದೃಢಪಡಿಸಿದ್ದಾರೆ.

    ಫೆಬ್ರವರಿ 1ರಂದು ಇಲ್ಲಿನ ಉಪ್ಪಲ್ ಪ್ರದೇಶದ ಮನೆಯೊಂದರ ಮಹಡಿಯ ಮೇಲೆ ಮಗುವಿನ ರುಂಡ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷದ ಕ್ಯಾಬ್ ಚಾಲಕ ಕೆ. ರಾಜಶೇಖರ್ ಹಾಗೂ ಆತನ ಪತ್ನಿ ಶ್ರೀಲತಾ(35) ಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಆರೋಪಿ ರಾಜಶೇಖರ್ ನ ಪತ್ನಿಗೆ ದೀರ್ಘಕಾಲದ ಅನಾರೋಗ್ಯ ಇದ್ದು, ಅದನ್ನ ವಾಸಿ ಮಾಡಲು ನರಬಲಿ ಕೊಡಬೇಕು ಎಂದು ಯಾರೋ ಹೇಳಿದ್ದರಿಂದ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಅನಾಥ ಹೆಣ್ಣುಮಗು ಕಿಡ್ನಾಪ್: ರಾಜಶೇಖರ್ ಜನವರಿ 31ರಂದು ಬೋಯಗುಡ ಪ್ರದೇಶದಲ್ಲಿ ರಸ್ತೆಬದಿಯಿಂದ 3 ತಿಂಗಳ ಅನಾಥ ಹೆಣ್ಣುಮಗುವನ್ನ ಅಪಹರಿಸಿಕೊಂಡು ಬಂದಿದ್ದ ಎಂದು ರಾಚಕೊಂಡ ಪೊಲೀಸ್ ಆಯುಕ್ತರಾದ ಮಹೇಶ್ ಎಂ ಭಾಗ್ವತ್ ಹೇಳಿದ್ದಾರೆ.

    ಮಗುವಿನ ದೇಹ, ಚಾಕುವನ್ನ ನದಿಗೆ ಎಸೆದಿದ್ದ: ರಾಜಶೇಖರ್ ಮಧ್ಯರಾತ್ರಿ ಮಗುವಿನ ರುಂಡ ಕಡಿದು, ಅದರ ದೇಹ ಮತ್ತು ಕೃತ್ಯಕ್ಕೆ ಬಳಸಿದ ಚಾಕುವನ್ನ ನದಿಗೆ ಎಸೆದಿದ್ದ. ನಂತರ ತನ್ನ ಹೆಂಡತಿ ಶ್ರೀಲತಾ ಜೊತೆಗೂಡಿ ಚಿಲುಕನಗರದ ತನ್ನ ಮನೆಯಲ್ಲಿ ಮಗುವಿನ ರುಂಡವನ್ನ ಇಟ್ಟು ಕ್ಷುದ್ರ ಪೂಜೆ ಕೈಗೊಂಡಿದ್ದ. ನಂತರ ತನಗೆ ಹೇಳಿದಂತೆ ಮಗುವಿನ ರುಂಡವನ್ನ ಮನೆಯ ಟೆರೇಸ್ ಮೇಲೆ ನೈಋತ್ಯ ಭಾಗದಲ್ಲಿ ಇಟ್ಟು ಚಂದ್ರಗ್ರಹಣದ ಬೆಳಕು ಹಾಗೂ ಬೆಳಗ್ಗೆ ಸುಮಾರು 4 ಗಂಟೆಯ ಸೂರ್ಯೋದಯದ ಬೆಳಕು ಅದರ ಮೇಲೆ ಬೀಳುವಂತೆ ಇಟ್ಟಿದ್ದ ಎಂದು ಮಹೇಶ್ ತಿಳಿಸಿದ್ದಾರೆ.

    ಜನವರಿ 31ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಿತ್ತು. ಮರುದಿನ ಬೆಳಗ್ಗೆ ರಾಜಶೇಖರ್ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಆದ್ರೆ ಆತನ ಅತ್ತೆ ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಮಗುವಿನ ರುಂಡವನ್ನ ನೋಡಿ ಕಿರುಚಿಕೊಂಡಾಗ ಎಲ್ಲರಿಗೂ ವಿಚಾರ ಗೊತ್ತಾಗಿ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

    ಪ್ರಕರಣದ ತನಿಖೆ ವೇಳೆ 122 ಮೊಬೈಲ್ ಕಾಲ್ ರೆಕಾಡ್ರ್ಸ್ ಪರಿಶೀಲಿಸಲಾಗಿತ್ತು, 45 ಜನರನ್ನ ವಿಚಾರಣೆಗೊಳಪಡಿಸಿ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನ ತಪಾಸಣೆ ಮಾಡಲಾಗಿತ್ತು ಎಂದು ಮಹೇಶ್ ಹೇಳಿದ್ದಾರೆ.

    ರಾಜಶೇಖರ್ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಟೆರೇಸ್ ಮೇಲೆ ಪತ್ತೆಯಾದ ಮಗುವಿನ ರುಂಡದ ಡಿಎನ್‍ಎ ಮಾದರಿ ಜೊತೆ ಹೊಂದಾಣಿಕೆ ಇರುವುದು ವಿಧಿವಿಜ್ಞಾನ ಪರೀಕ್ಷೆಯ ವರದಿಯಿಂದ ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ವಿಚಾರಣೆ ಮಾಡಿದಾಗ ರಾಜಶೇಖರ್ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

    ದುಷ್ಟಶಕ್ತಿ ಓಡಿಸಲು ನರಬಲಿ ಕೊಟ್ರಂತೆ: ಆರೋಪಿ ರಾಜಶೇಖರ್ ಪತ್ನಿಯ ಕಾಯಿಲೆ ಗುಣಪಡಿಸಲು 4 ವರ್ಷದಿಂದ ವೈದ್ಯರು, ಜ್ಯೋತಿಷಿಗಳು ಹಾಗೂ ಮಾಂತ್ರಿಕರನ್ನ ಸಂಪರ್ಕಿಸಿದ್ದ. ಇತ್ತೀಚೆಗೆ ಸಮ್ಮಕ್ಕ ಸರಳಮ್ಮ ಜಾತ್ರೆಗೆ ಹೋದಾಗ ಬುಡಕಟ್ಟು ವ್ಯಕ್ತಿಯೊಬ್ಬರನ್ನ ಭೇಟಿಯಾಗಿದ್ದ. ಆಗ ಅವರು, ಮನೆಯಲ್ಲಿ ದುಷ್ಟಶಕ್ತಿ ಇದೆ. ಪತ್ನಿಯ ಕಾಯಿಲೆ ವಾಸಿ ಮಾಡಲು ಮಗುವನ್ನ ಬಲಿ ಕೊಡಬೇಕೆಂದು ಹೇಳಿದ್ದರು. ವಾಪಸ್ ಬಂದ ನಂತರ ರಾಜಶೇಖರ್ ಮೂವರು ಮಾಂತ್ರಿಕರನ್ನ ಭೇಟಿಯಾಗಿದ್ದ. ಅವರು ಕೆಲವು ಪೂಜೆಗಳನ್ನ ಮಾಡಿದ್ದರೂ ಪತ್ನಿಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ದಂಪತಿ ನರಬಲಿ ಕೊಡಲು ನಿರ್ಧರಿಸಿದ್ದರು.

    ಶ್ರೀಲತಾ ಕಳೆದ 4 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಹೀಗಾಗಿ ಅಕೆಯಿಂದ ದುಷ್ಟಶಕ್ತಿಗಳನ್ನ ದೂರ ಮಾಡಲು ಹೆಣ್ಣುಮಗುವನ್ನ ತಂದು ನರ ಬಲಿ ಕೊಡುವಂತೆ ಯಾರೋ ಸಲಹೆ ನೀಡಿದ್ದರು ಎಂದು ರಾಜಶೇಖರ್ ಪೊಲೀಸರಿಗೆ ಹೇಳಿದ್ದಾನೆ.

    ಅನಾಥ ಮಗುವನ್ನ ಅಪಹರಣ ಮಾಡಿದ್ರೆ ಅದು ಕಾಣೆಯಾದ್ರೂ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡು ರಾಜಶೇಖರ್ ಅನಾಥ ಮಗುವನ್ನೇ ಹುಡುಕಲು ನಿರ್ಧರಿಸಿದ್ದ ಎಂದು ಆಯುಕ್ತರಾದ ಮಹೇಶ್ ಹೇಳಿದ್ದಾರೆ.

    ಆರೋಪಿಗಳ ವಿರುದ್ಧ ಕೊಲೆ, ಅಪಹರಣ ಹಾಗೂ ಐಪಿಸಿ ಸೆಕ್ಷನ್ ನ ಇನ್ನಿತರೆ ಸಂಬಂಧಿತ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಮೃತ ಮಗುವಿನ ಗುರುತು ಪತ್ತೆಹಚ್ಚಲು ಮುಂದೆ ಬರುವಂತೆ ಜನರನ್ನು ಭಾಗ್ವತ್ ಮನವಿ ಮಾಡಿದ್ದಾರೆ.

  • ಹೆಂಡ್ತಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ರೈಲಿನ ಮುಂದೆ ಜಿಗಿದು ಪತಿ ಆತ್ಮಹತ್ಯೆ!

    ಹೆಂಡ್ತಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ರೈಲಿನ ಮುಂದೆ ಜಿಗಿದು ಪತಿ ಆತ್ಮಹತ್ಯೆ!

    ಹೈದರಾಬಾದ್: ಪತ್ನಿ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ವಿಷಯ ತಿಳಿದು ಬೇಸತ್ತ ಪತಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ನಡೆದಿದೆ.

    ವಿನಯ್ ಕುಮಾರ್(24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿನಯ್ ಗೋನೆಗಾಂಡ್ಲಾ ಗ್ರಾಮದ ನಿವಾಸಿಯಾಗಿದ್ದು, 2017ರ ನವೆಂಬರ್ 1 ರಂದು ಸೌಜನ್ಯ ಜೊತೆ ಮದುವೆಯಾಗಿದ್ದನು. ನಂತರ ಸೌಜನ್ಯಳಿಗೆ ಬೇರೆಯವನ ಜೊತೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ಪ್ರತಿನಿತ್ಯ ಜಗಳವಾಡುತ್ತಿದ್ದ.

    ದಿನನಿತ್ಯ ಇಬ್ಬರ ನಡುವೆ ಜಗಳವಾಗುತ್ತಿದ್ದ ಕಾರಣ ವಿನಯ್ ಪತ್ನಿ ಕೆಲವು ತಿಂಗಳ ಹಿಂದೆ ತನ್ನ ತವರು ಮನೆಯನ್ನು ಸೇರಿದ್ದಳು. ನಂತರ ಸೌಜನ್ಯ ಅವರ ಪೋಷಕರು ವಿಜಯ್‍ಗೆ ಕರೆ ಮಾಡಿ ಆಕೆಯ ಆರೋಗ್ಯ ಸರಿಯಿಲ್ಲ ಹಾಗೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಕರೆ ಮಾಡಿದ್ದಾರೆ.

    ತನ್ನ ಪತ್ನಿ ಸೌಜನ್ಯಳನ್ನು ನೋಡಲು ವಿನಯ್ ತನ್ನ ಸಹೋದರ ವಂಶಿಕೃಷ್ಣ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಆಗ ವಿನಯ್ ಹಾಗೂ ಸೌಜನ್ಯ ನಡುವೆ ಮತ್ತೆ ಜಗಳ ನಡೆದಿದೆ. ಜಗಳವಾಡಿದ ನಂತರ ವಿನಯ್ ಕರ್ನೂಲ್ ಹೊರವಲಯದಲ್ಲಿರುವ ಮಧುನಗರದ ಕಾರ್ಬೈಡ್ ಫ್ಯಾಕ್ಟರಿಗೆ ಹೋಗಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ರೈಲ್ವೇ ಸಿಬ್ಬಂದಿ ಮೃತದೇಹವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.