Tag: Hyderabad

  • ತಂಗಿಗೆ ಮದ್ವೆ ನಿಶ್ಚಯಿಸಿದ್ರು – ಸಹೋದರಿಯರಿಬ್ಬರು ಮನೆ ಬಿಟ್ಟು ಹೋಗಿ ಆತ್ಮಹತ್ಯೆಗೆ ಶರಣಾದ್ರು!

    ತಂಗಿಗೆ ಮದ್ವೆ ನಿಶ್ಚಯಿಸಿದ್ರು – ಸಹೋದರಿಯರಿಬ್ಬರು ಮನೆ ಬಿಟ್ಟು ಹೋಗಿ ಆತ್ಮಹತ್ಯೆಗೆ ಶರಣಾದ್ರು!

    ಹೈದರಾಬಾದ್: ಮದುವೆ ನಿಶ್ಚಯ ಮಾಡಿದ್ದಕ್ಕೆ ಸಹೋದರಿಯರಿಬ್ಬರು ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಅದಿಲಾಬಾದ್ ಜಿಲ್ಲೆಯ ನಾರಡಿಗಂಡ ಮಂಡಲಮ್ ನ ಬಂಡಿಡಿ ಗ್ರಾಮದ ಕಮಲ್ ಸಿಂಗ್ ಮಕ್ಕಳಾದ ಅಂಜುಲಾ (18) ಮತ್ತು ಅರ್ಚನಾ (19) ಆತ್ಮಹತ್ಯೆಗೆ ಶರಣಾದ ಸಹೋದರಿಯರು ಎಂದು ಗುರುತಿಸಲಾಗಿದೆ.

    ಕಿರಿಯ ಸಹೋದರಿ ಅಂಜುಲಾ 7ನೇ ತರಗತಿವರೆಗೆ ಓದಿದ್ದರೆ, ಅರ್ಚನಾ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇವರ ಪೋಷಕರು ಅಂಜುಲಾಗೆ ವರನನ್ನು ನೋಡಿ ವಿವಾಹ ನಿಶ್ಚಯ ಮಾಡಿದ್ದರು. ಆದರೆ ಅಂಜುಲಾ, ನನಗೆ ಹುಡುಗ ಇಷ್ಟ ಇಲ್ಲ. ನಾನು ಆತನನ್ನು ಮದುವೆ ಆಗುವುದಿಲ್ಲ ಎಂದು ತಂದೆ ಬಳಿ ಹೇಳಿದ್ದಾಳೆ. ಆದರೆ ಪೋಷಕರು ಆಕೆಯ ಮಾತಿಗೆ ಕಿವಿಗೊಡಲಿಲ್ಲ. ಅಷ್ಟೇ ಅಲ್ಲದೇ ನಾನು ನೋಡಿದ ವರನನ್ನು ನೀನು ಮದುವೆಯಾಗಬೇಕೆಂದು ಒತ್ತಾಯಿಸಿದ್ದಾರೆ.

    ಅಂಜುಲಾ ಮದುವೆ ವಿಚಾರದಿಂದ ಖಿನ್ನತೆಗೆ ಒಳಗಾಗಿದ್ದು, ಅರ್ಚನಾ ನನ್ನು ಜೊತೆಗೆ ಕರೆದುಕೊಂಡು ಪೋಷಕರಿಗೆ ಹೊರಗೆ ಹೋಗುತ್ತಿದ್ದೇವೆ ಎಂದು ಹೇಳಿ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ತುಂಬಾ ಸಮಯವಾದರೂ ಇಬ್ಬರು ಮನೆಗೆ ಹಿಂದಿರುಗಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಮಾಹಿತಿ ತಿಳಿಸಿದ್ದಾರೆ ಎಂದು ಎಸ್.ಐ ವೆಂಕಣ್ಣ ತಿಳಿಸಿದ್ದಾರೆ.

    ಪೊಲೀಸರು ಇಬ್ಬರು ಸಹೋದರಿಯರಿಗಾಗಿ ಹುಡುಕಾಟ ಪ್ರಾರಂಭಿಸಿದ್ದು, ಇಬ್ಬರೂ ಸಹೋದರಿಯರು ಹೈದರಾಬಾದ್ ಗೆ ಬಂದು ಅಲ್ಲಿಂದ ಇಕೋಡಾ ಮತ್ತು ಸಿರ್ಕೊಂಡಾಗೆ ಹೋಗಿದ್ದಾರೆ. ಸಿರ್ಕೊಂಡಾದಲ್ಲಿ ಇಬ್ಬರು ಕೀಟನಾಶಕವನ್ನು ಸೇವಿಸಿದ್ದಾರೆ. ಇದನ್ನು ಗ್ರಾಮಸ್ಥರು ನೋಡಿದ್ದು, ತಕ್ಷಣ ಪೋಷಕರು ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಸಮೀಪದ ಆರ್‍ಐಎಂಎಕ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಈ ಘಟನೆ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮಾಡುತ್ತಿದ್ದಾರೆ.

  • ಇಂಗ್ಲೀಷ್ ಪರೀಕ್ಷೆಗೆ ಓದಿ 8ನೇ ಮಹಡಿಯಿಂದ ಜಿಗಿದ SSLC ವಿದ್ಯಾರ್ಥಿನಿಯರು

    ಇಂಗ್ಲೀಷ್ ಪರೀಕ್ಷೆಗೆ ಓದಿ 8ನೇ ಮಹಡಿಯಿಂದ ಜಿಗಿದ SSLC ವಿದ್ಯಾರ್ಥಿನಿಯರು

    ಹೈದರಾಬಾದ್: ಅಪಾರ್ಟ್‍ಮೆಂಟ್ ನ 8ನೇ ಮಹಡಿಯಿಂದ ಹಾರಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಹೈದರಾಬಾದ್ ನ ಎಲ್‍ಬಿ ನಗರದಲ್ಲಿ ನಡೆದಿದೆ.

    ಶ್ರಾವಣಿ, ಭಾರ್ಗವಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು. ಇಬ್ಬರು ನಗರದ ಪ್ರತಿಷ್ಟಿತ ಅಕ್ಷರ ಅಂತಾರಾಷ್ಟ್ರೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶ್ರಾವಣಿ ಅವರ ತಂದೆ ನರೇಂದ್ರ ಅವರು ನಗರದ ಕಂಚನ್ಬಾಗ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್ ಡಿಎ)ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಭಾರ್ಗವಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿಕೊಳ್ಳಲು ಶ್ರಾವಣಿ ವಾಸಿಸುವ ಟಿಎನ್‍ಆರ್ ಅಪಾರ್ಟ್ ಮೆಂಟ್ ಗೆ ತೆರಳಿದ್ದಾಳೆ. ಈ ವೇಳೆ ಮುಂದಿನ ಫೈನಲ್ ಇಂಗ್ಲೀಷ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ವಿದ್ಯಾರ್ಥಿನಿಯರ ಪೋಷಕರು ತರಕಾರಿ ತರಲು ಹೊರಹೋಗಿದ್ದ ಸಮಯದಲ್ಲಿ ಸಂಜೆ 6.30 ರ ವೇಳೆಯಲ್ಲಿ ಇಬ್ಬರು ಸೇರಿ ಅಪಾರ್ಟ್‍ಮೆಂಟ್ ನ 8 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸ್ಥಳೀಯರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ವಿದ್ಯಾರ್ಥಿನಿಯರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

  • ಮರಕ್ಕೆ ಡಿಕ್ಕಿ ಹೊಡೆದ ಕಾರು – ವರ ಸೇರಿ ಐವರ ದುರ್ಮರಣ

    ಮರಕ್ಕೆ ಡಿಕ್ಕಿ ಹೊಡೆದ ಕಾರು – ವರ ಸೇರಿ ಐವರ ದುರ್ಮರಣ

    ಹೈದರಾಬಾದ್: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವರ ಸೇರಿ ಐವರು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪಲ್ಲಿಪಾಡು ಬಳಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವರನ ಕುಟುಂಬುದವರು ವರಾಂಗಲ್ ಜಿಲ್ಲೆಯ ತಮ್ಮ ಮನೆಯಿಂದ ಆಂಧ್ರ ಪ್ರದೇಶದ ತಡೆಪಲ್ಲಿಗುಡೆಮ್ ನ ವಧುವಿನ ನಿವಾಸಕ್ಕೆ ಕಾರಿನಲ್ಲಿ ಹೋಗುತ್ತಿದ್ದರು. ಕಾರು ಪಲ್ಲಿಪಾಡುಗೆ ತಲುಪಿದೆ. ಈ ಸಂದರ್ಭದಲ್ಲಿ ಚಾಲಕನಿಗೆ ಕಾರಿನ ಸ್ಟೇರಿಂಗ್ ಮೇಲೆ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.

    ಮರಕ್ಕೆ ಹೊಡೆದ ರಭಸಕ್ಕೆ ವರ ಸೇರಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ವೈಫೈ ಆಫ್ ಮಾಡಿದ್ದಕ್ಕೆ ವೈಫ್ ಮೇಲೆ ಹಲ್ಲೆ ಮಾಡಿದ ಪತಿ!

    ವೈಫೈ ಆಫ್ ಮಾಡಿದ್ದಕ್ಕೆ ವೈಫ್ ಮೇಲೆ ಹಲ್ಲೆ ಮಾಡಿದ ಪತಿ!

    ಹೈದರಾಬಾದ್: ಪತಿರಾಯ ಮಧ್ಯರಾತ್ರಿ ಕಳೆದರೂ ಮೊಬೈಲಲ್ಲಿ ಇಂಟರ್‍ನೆಟ್ ಜಾಲಾಡುತ್ತಾ ಕಾಲ ಕಳೆಯುತ್ತಾನೆ ಎಂದು ಪತ್ನಿ ವೈಫೈ ಆಫ್ ಮಾಡಿದ್ದಕ್ಕೆ ಪತಿರಾಯ ರಾಕ್ಷಸನಾಗಿದ್ದಾನೆ. ದುಂಡಿಗಲ್ ಎಂಬಲ್ಲಿ ಘಟನೆ ನಡೆದಿದ್ದು, ಸದ್ಯ ಪತ್ನಿ ರೇಷ್ಮಾ ಸುಲ್ತಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಕೆಯ ಪತಿ ಒಮರ್ ಪಾಷಾ ವಿರುದ್ಧ ರೇಷ್ಮಾಳ ಅಜ್ಜಿ ಪುಂಜಗುಟ್ಟ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಆಗಿದ್ದೇನು?: ಬುಧವಾರ ರಾತ್ರಿ ಮನೆಯಲ್ಲಿದ್ದ ಒಮರ್ ಪಾಷಾ ಮೊಬೈಲಲ್ಲಿ ಇಂಟರ್ ನೆಟ್ ಜಾಲಾಟ ಶುರು ಮಾಡಿದ್ದಾನೆ. ಆದರೆ ಮಧ್ಯರಾತ್ರಿ ದಾಟಿದರೂ ಪತಿ ಮೊಬೈಲ್ ಆಫ್ ಮಾಡೋದು ಕಾಣಿಸಲಿಲ್ಲ. ಹೀಗಾಗಿ ರೇಷ್ಮಾ ಸುಲ್ತಾನಾ ವೈಫೈ ರೌಟರ್ ಆಫ್ ಮಾಡಿದ್ದಾಳೆ. ಇದರಿಂದ ಆತನ ಮೊಬೈಲ್ ಇಂಟರ್‍ನೆಟ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ಸಿಟ್ಟಿಗೆದ್ದ ಪಾಷಾ ರೇಷ್ಮಾ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ರೇಷ್ಮಾ ಬಲಕಣ್ಣಿನ ಕೆಳಭಾಗ ಊದಿಕೊಂಡಿದೆ.

    ನನ್ನ ಪತಿ ನನ್ನ ಮುಖ, ಎದೆ ಹಾಗೂ ತಲೆಗೆ ಹೊಡೆದಿದ್ದಾನೆ. ಈತನ ಹೊಡೆತ ತಾಳಲಾರದೇ ನಾನು ಮನೆಯಿಂದ ಹೊರಗೆ ಓಡಿ ಹೋದ ಬಳಿಕ ಹೊಡೆಯುವುದನ್ನು ನಿಲ್ಲಿಸಿದ್ದಾನೆ ಎಂದು ರೇಷ್ಮಾ ಸುಲ್ತಾನಾ ಹೇಳಿದ್ದಾಳೆ. ಇವರಿಬ್ಬರಿಗೂ ಮದುವೆಯಾಗಿ 6 ವರ್ಷವಾಗಿದ್ದು, ಮೂವರು ಹೆಣ್ಣು ಮಕ್ಕಳಿದ್ದಾರೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪಂಜಗುಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ರವೀಂದ್ರ, ಸಂಬಂಧಿಕರು ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ರಾಜಿಯಾಗದಿದ್ದರೆ ಈ ಘಟನೆಯನ್ನು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸುತ್ತೇವೆ. ಅಲ್ಲಿ ಕೌನ್ಸೆಲಿಂಗ್ ಮಾಡಲು ಯತ್ನಿಸುತ್ತೇವೆ. ಇದಾದ ಬಳಿಕವೂ ಪ್ರಯೋಜನವಾಗದಿದ್ದರೆ, ಅಗತ್ಯಬಿದ್ದರೆ ನಂತರ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ. ಘಟನೆ ರೇಷ್ಮಾಳ ಅತ್ತೆ ಮನೆಯಲ್ಲೇ ನಡೆದಿದ್ದು, ಸಿಟ್ಟಿಗೆದ್ದ ಒಮರ್ ಆಕೆಯನ್ನು ಸೋಮಾಜಿಗುಡದಲ್ಲಿರುವ ತಾಯಿ ಮನೆಗೆ ತಂದು ಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.

  • ಸ್ವೀಟಿಯ ಬಾಲಿವುಡ್ ಎಂಟ್ರಿ ತಡೆದ ಪ್ರಭಾಸ್!

    ಸ್ವೀಟಿಯ ಬಾಲಿವುಡ್ ಎಂಟ್ರಿ ತಡೆದ ಪ್ರಭಾಸ್!

    ಹೈದರಾಬಾದ್: ಟಾಲಿವುಡ್‍ನಲ್ಲಿ ಪ್ರಭಾಸ್-ಅನುಷ್ಕಾ ಸೂಪರ್ ಜೋಡಿ. ಕ್ಯೂಟ್ ಹೀರೋ-ಹೀರೋಯಿನ್ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಯಾವಾಗಲು ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿ ಆಗುತ್ತಿರುತ್ತಾರೆ. ಅದರಲ್ಲೂ `ಬಾಹುಬಲಿ 2 ಚಿತ್ರ ತೆರೆಕಂಡ ನಂತರ ಇವರಿಬ್ಬರ ಆಫ್ ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಗಾಸಿಪ್‍ಗಳು ಹೆಚ್ಚಾಗುತ್ತಲೇ ಇವೆ.

    ಸ್ರ್ಕೀನ್ ಮೇಲೆ ಪ್ರಭಾಸ್ ಹಾಗೂ ಅನುಷ್ಕಾ ಒಟ್ಟಾಗಿ ನಟಿಸಿದರೆ ಆ ಚಿತ್ರ ಸೂಪರ್ ಹಿಟ್. ಅಭಿಮಾನಿಗಳನ್ನು ಮೋಡಿ ಮಾಡುವ ಈ ಜೋಡಿಗೆ ಟಾಲಿವುಡ್‍ನಲ್ಲಿ ತುಂಬಾ ಬೇಡಿಕೆ ಇದೆ. ಇತ್ತೀಚಿಗಷ್ಟೇ ಪ್ರನುಷ್ಕಾ ಜೋಡಿ ಬಾಹುಬಲಿ 2 ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಮತ್ತೊಮ್ಮೆ ಒಂದಾಗಲಿ ಎಂದು ಅಭಿಮಾನಿಗಳ ಡಿಮ್ಯಾಂಡ್ ಹೆಚ್ಚಿದೆ.

    ನಟ ಪ್ರಭಾಸ್ ಬಾಲಿವುಡ್‍ಗೆ ಎಂಟ್ರಿ ಕೊಡುತ್ತಿರುವ ವಿಷಯ ಹಳೆಯದು. ಅಮರೇಂದ್ರ ಬಾಹುಬಲಿ ಬಿಟೌನ್‍ಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ. ಇತ್ತ ಸ್ವೀಟಿ ಅನುಷ್ಕಾಗೂ ಕೂಡ ಬಾಲಿವುಡ್‍ನಿಂದ ಆಫರ್ ಗಳು ಬಂದಿದ್ದು, ಇತ್ತೀಚಿಗಷ್ಟೇ ನಿರ್ದೇಶಕರೊಬ್ಬರು ಬಾಲಿವುಡ್‍ಗೆ ಬರುವಂತೆ ಅನುಷ್ಕಾ ಶೆಟ್ಟಿಗೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಬಾಲಿವುಡ್‍ನಿಂದ ಬಂದ ಆಹ್ವಾನವನ್ನು ಅನುಷ್ಕಾ ತಿರಸ್ಕರಿಸಿದ್ದಾರೆ. ಈ ನಿರ್ಧಾರದ ಹಿಂದೆ ಪ್ರಭಾಸ್ ಇದ್ದಾರೆ ಎಂಬ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ.

    ಸದ್ಯಕ್ಕೆ ಅನುಷ್ಕಾ ಬಾಲಿವುಡ್‍ಗೆ ಬರೋದು ಬೇಡ ಎಂದು ಪ್ರಭಾಸ್ ಹೇಳುತ್ತಿದ್ದು, ಬಾಲಿವುಡ್‍ನ ಆಫರ್ ತಿರಸ್ಕರಿಸುವಂತೆ ಹೇಳಲು ಬಲವಾದ ಕಾರಣವಿದೆ. ಒಂದು ವೇಳೆ ಅನುಷ್ಕಾ ಶೆಟ್ಟಿ ಬಾಲಿವುಡ್‍ಗೆ ಎಂಟ್ರಿ ಕೊಡುವುದಾದರೆ ಅದು ಪ್ರಭಾಸ್ ಜೊತೆಯೇ ಆಗಬೇಕಂತೆ. ಅನುಷ್ಕಾ ಅವರೊಂದಿಗೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಬೇಕೆಂದು ಪ್ರಭಾಸ್ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಪ್ರಭಾಸ್ `ಭಾಗಮತಿ’ ಸಿನಿಮಾದ ಚಿತ್ರೀಕರಣದಲ್ಲಿ ಸ್ವತಃ `ಭಾಗಮತಿ’ ಸೆಟ್‍ಗೆ ತೆರಳಿ ಅನುಷ್ಕಾರನ್ನು ಭೇಟಿಯಾಗಿದ್ದರು. ಸೆಟ್ ಪ್ರವೇಶಕ್ಕೂ ಮುನ್ನ ಯಾರಿಗೂ ತಿಳಿಯಬಾರದೆಂದು ಮುಖಕ್ಕೆ ಕರ್ಚಿಪ್ ಕಟ್ಟಿಕೊಂಡು ಹೋಗಿದ್ದರು. ಭಾಗಮತಿ ಟ್ರೇಲರ್ ಬಿಡುಗಡೆಗೊಂಡಾಗ ಪ್ರಭಾಸ್ ಫೇಸ್‍ಬುಕ್‍ನಲ್ಲಿ “ಪ್ರತಿ ಸಿನಿಮಾಗಳಲ್ಲಿಯೂ ಹೊಸ ರೀತಿಯ ಪ್ರಯೋಗ ಮಾಡುವುದರಲ್ಲಿ ಅನುಷ್ಕಾ ಶೆಟ್ಟಿ ಯಾವಾಗಲೂ ಮೊದಲಿರುತ್ತಾರೆ. ಗುಡ್ ಲಕ್ ಸ್ವೀಟಿ.. ಹಾಗೂ ಚಿತ್ರತಂಡಕ್ಕೆ ಶುಭವಾಗಲಿ” ಎಂದು ಬರೆದು ಭಾಗಮತಿ ಸಿನಿಮಾ ಟೀಸರ್ ಹಾಕಿಕೊಂಡು ಅನುಷ್ಕಾ ಶೆಟ್ಟಿಗೆ ಶುಭಕೋರಿದ್ದರು.

    ಪ್ರಸ್ತುತ ಪ್ರಭಾಸ್ ಸುಜೀತ್ ನಿರ್ದೇಶನದ `ಸಾಹೋ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಮತ್ತು ನೀಲ್ ನಿತಿನ್ ಮುಖೇಶ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ಯುಎಇಯಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ. ಈ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮೂಡಿ ಬರುತ್ತಿದ್ದು, ಪ್ರಭಾಸ್ ಅವರ ಮೊದಲು ಬಾಲಿವುಡ್ ಸಿನಿಮಾವಾಗಿದೆ. ಈ ಚಿತ್ರವು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

  • ಪ್ರೇಯಸಿಯನ್ನ ಕೊಂದು ಮರುದಿನವೇ ಬೇರೆ ಯುವತಿಯ ಜೊತೆ ಹಸೆಮಣೆ ಏರಿದ!

    ಪ್ರೇಯಸಿಯನ್ನ ಕೊಂದು ಮರುದಿನವೇ ಬೇರೆ ಯುವತಿಯ ಜೊತೆ ಹಸೆಮಣೆ ಏರಿದ!

    ಹೈದರಾಬಾದ್: ಪ್ರೀತಿಸಿ ಮದುವೆಯಾಗುವೆನೆಂದು ನಂಬಿಸಿದ ಪ್ರಿಯಕರ, ಪ್ರೇಯಸಿಯನ್ನ ಬರ್ಬರವಾಗಿ ಹತ್ಯೆಗೈದು ಮರುದಿನವೇ ಬೇರೆ ಯುವತಿಯ ಜೊತೆ ಹಸೆಮಣೆ ಏರಿದ್ದು, ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

    ನರೇಶ್ ಬಂಧಿತ ಆರೋಪಿ. ಈತ ಆಂಬುಲೆನ್ಸ್ ಡ್ರೈವರ್ ಆಗಿದ್ದು, ಪ್ರೇಯಸಿಯಾದ ಭಾರ್ಗವಿ ಖಾಸಗಿ ಆಸ್ಪತ್ರೆಯಲ್ಲಿ ರಿಸೆಪ್ಶನಿಸ್ಟ್ ಆಗಿದ್ದರು. ಇಬ್ಬರೂ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ನರೇಶ್ ಭಾರ್ಗವಿಯನ್ನ ಮದುವೆಯಾಗುವುದಾಗಿ ನಂಬಿಸಿದ್ದ. ಆದ್ರೆ ಮನೆಯಲ್ಲಿ ನಿಶ್ಚಯಿಸಿದ ಹುಡುಗಿಯನ್ನ ನರೇಶ್ ಮದುವೆಯಾಗುತ್ತಿದ್ದಾನೆ ಎಂಬ ವಿಷಯ ಪ್ರೇಯಸಿಗೆ ತಿಳಿಯುತ್ತಿದಂತೆ, ಆಕೆಯನ್ನ ತನ್ನ ಜಮೀನಿಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ಎರಡು ದಿನಗಳಿಂದ ಮನೆಗೆ ಬಾರದ ಮಗಳನ್ನ ಹುಡುಕಾಡಿದ ಪೋಷಕರು, ಪೊಲೀಸರಿಗೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ಸಲ್ಲಿಸಿದ್ದರು. ಭಾರ್ಗವಿಯ ಮೊಬೈಲ್ ಕರೆಯ ಆಧಾರದ ಮೇರೆಗೆ ಪ್ರಿಯಕರ ನರೇಶ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ತನ್ನ ಪ್ರಿಯಕರ ಬೇರೊಬ್ಬ ಯುವತಿಯ ಜೊತೆ ವಿವಾಹ ಆಗುತ್ತಿರುವ ವಿಷಯ ತಿಳಿಯುತ್ತಿದಂತೆ ಭಾರ್ಗವಿ ಕಂಗಾಲಾಗಿ ನರೇಶ್ ಜಗಳವಾಡಿದ್ದಳು. ಬಳಿಕ ನರೇಶ್, ಮನೆಯಲ್ಲಿ ಮಾಡುತ್ತಿರುವ ಮದುವೆ ನನಗೆ ಇಷ್ಟವಿಲ್ಲ. ನಾವಿಬ್ಬರು ಓಡಿಹೋಗಿ ಮದುವೆಯಾಗೋಣ ಎಂದು ಭಾರ್ಗವಿಯನ್ನ ನಂಬಿಸಿ ಮಾರ್ಚ್ 3ರಂದು ಭುವನಗಿರಿಯ ಭೊಂಗಿರ್ ನ  ತನ್ನ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾನೆ.

    ಕೊಲೆ ಮಾಡಿದ ಮರುದಿನವೇ ಅಂದರೆ ಮಾರ್ಚ್ 4ರಂದು ಮನೆಯಲ್ಲಿ ನಿಶ್ಚಯಿಸಿದ ಯುವತಿಯ ಜೊತೆ ಅಮಾಯಕನಂತೆ ಮದುವೆಯಾಗಿದ್ದಾನೆ. ನಾಪತ್ತೆಯಾದ ಭಾರ್ಗವಿಯನ್ನ ಹುಡುಕಿದ ಪೊಲೀಸರು ನರೇಶ್ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ತನ್ನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.

    ಘಟನೆ ನಡೆದ ಸ್ಥಳಕ್ಕೆ ನರೇಶ್ ಪೊಲೀಸರನ್ನ ಕರೆದೊಯ್ದು ಮೃತದೇಹವನ್ನ ತೋರಿಸಿದ್ದಾನೆ. ನರೇಶ್ ಭಾರ್ಗವಿ ತಲೆಯ ಮೇಲೆ ಕಲ್ಲು ಬಂಡೆಯನ್ನು ಹಾಕಿ ಕೊಂದಿದ್ದು, ಗುಂಡಿಯನ್ನು ತೋಡಿ ಹೆಣವನ್ನ ಹೂತು ಹಾಕಿದ್ದ. ಮಗಳ ಮೃತದೇಹ ಕಂಡ ಭಾರ್ಗವಿಯ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

     

  • ಮೊದಲನೇ ವರ್ಷದ ಪತ್ರಿಕೋದ್ಯಮ ಪದವಿ ಪರೀಕ್ಷೆಯಲ್ಲಿ ಪಾಸಾದ 11 ವರ್ಷದ ಪೋರ!

    ಮೊದಲನೇ ವರ್ಷದ ಪತ್ರಿಕೋದ್ಯಮ ಪದವಿ ಪರೀಕ್ಷೆಯಲ್ಲಿ ಪಾಸಾದ 11 ವರ್ಷದ ಪೋರ!

    ಹೈದರಾಬಾದ್: 11 ವರ್ಷದ ಬಾಲಕನೊಬ್ಬ ಬಿಎ ಪತ್ರಿಕೋದ್ಯಮದ ಮೊದಲನೇ ವರ್ಷದ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದಾನೆ.

    ಯೂಸುಫ್‍ಗುಡದ ಸೆಂಟ್ ಮೇರಿಸ್ ಕಾಲೇಜಿನ ವಿದ್ಯಾರ್ಥಿಯಾದ ಅಗಸ್ತ್ಯ, ಎಸ್‍ಜಿಪಿಎ ಶೇಕಡ 6.11 ಅಂಕವನ್ನ ಗಳಿಸಿ ಹೊಸ ದಾಖಲೆಯನ್ನ ಸೃಷ್ಟಿಸಿದ್ದಾನೆ. ಇದಲ್ಲದೇ ಈತ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇಕಡ 63 ಅಂಕಗಳನ್ನ ಪಡೆದಿದ್ದು, 9 ವರ್ಷಗಳಿರುವಾಗಲೇ ಹತ್ತನೇ ತರಗತಿಯಲ್ಲಿ ಜಿಪಿಎ ಶೇಕಡ 7.5 ಅಂಕಗಳನ್ನ ಪಡೆದು ರಾಜ್ಯದ ಮೊದಲ ಕಿರಿಯ ವಿದ್ಯಾರ್ಥಿಯಾಗಿದ್ದಾನೆ. ಇದನ್ನೂ ಓದಿ: 11ನೇ ವಯಸ್ಸಿಯಲ್ಲೇ 63% ಅಂಕಗಳೊಂದಿಗೆ 12ನೇ ತರಗತಿ ಪಾಸ್ ಮಾಡಿದ ಪೋರ

    ಅಗಸ್ತ್ಯ ಖ್ಯಾತ ಅಂತಾರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ನೈನಾ ಜೈಸ್ವಾಲ್‍ರ ಸಹೋದರ. ನೈನಾ ಜೈಸ್ವಾಲ್ 13ನೇ ವಯಸ್ಸಿಗೆ ಪತ್ರಿಕೋದ್ಯಮ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶದ ಅತೀ ಕಿರಿಯ ಪತ್ರಿಕೋದ್ಯಮ ಪದವಿಧರೆ ಎನಿಸಿಕೊಂಡಿದ್ದು, ಇದೀಗ ಅಗಸ್ತ್ಯ ಆ ದಾಖಲೆಯನ್ನ ಮುರಿದಿದ್ದಾನೆ. ಮಂಗಳವಾರದಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ತಮ್ಮ ಮಾಡಿದ ಸಾಧನೆಗೆ ಅಕ್ಕ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 16 ವರ್ಷದ ಈಕೆ ಈಗ ಏಷ್ಯಾದಲ್ಲೇ ಅತ್ಯಂತ ಕಿರಿಯ ಸ್ನಾತಕೋತ್ತರ ಪದವೀಧರೆ

    ಅಗಸ್ತ್ಯನ ನಿತ್ಯ ಪಾಠಕ್ರಮವು ಎಲ್ಲಾ ಪೋಷಕರನ್ನ ಹುಬ್ಬೇರಿದುವಂತೆ ಮಾಡಬಲ್ಲದು. ಏಕೆಂದರೆ ಅಗಸ್ತ್ಯ ಪ್ರತಿನಿತ್ಯ 3-5 ಗಂಟೆಗಳ ವರೆಗೆ ಟೆನ್ನಿಸ್ ಆಟವಾಡುತ್ತಿದ್ದ. ಪರೀಕ್ಷೆಗೆ ರಜಾ ದಿನಗಳಲ್ಲಿ ಮಾತ್ರ ತಯಾರಾಗುತ್ತಿದ್ದುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 11ರ ಪೋರ!

    ಅಗಸ್ತ್ಯನ ಪೋಷಕರು ಮಗ ಮಾಡಿದ ಈ ಸಾಧನೆ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ನಾವು ನಮ್ಮ ಮಕ್ಕಳನ್ನು ಸ್ಮಾರ್ಟ್‍ಫೋನ್‍ನಿಂದ ದೂರವಿರಿಸಿದ್ದು, ಇದರಿಂದ ಅವರ ಏಕಾಗ್ರತೆ ಹೆಚ್ಚಾಗಿ ಈ ಸಾಧನೆ ಮಾಡಲು ಅನುಕೂಲವಾಯಿತೆಂದು ಹೇಳಿದರು. ಪ್ರತಿನಿತ್ಯ ಮಕ್ಕಳಿಗೆ ನಾವು ಹೇಳಿಕೊಟ್ಟ ಮೂಲ ಪಾಠಗಳು ಅವರಿಗೆ ಭದ್ರಬುನಾದಿ ಆಗಿದೆ ಎಂದು ತಿಳಿಸಿದರು.

  • ಪೋರ್ನ್ ವಿಡಿಯೋ ನೋಡಿದ್ದಕ್ಕೆ ತಂದೆಯಿಂದ ಮಗನ ಕೈ ಕಟ್!

    ಪೋರ್ನ್ ವಿಡಿಯೋ ನೋಡಿದ್ದಕ್ಕೆ ತಂದೆಯಿಂದ ಮಗನ ಕೈ ಕಟ್!

    ಹೈದರಾಬಾದ್: ಮಧ್ಯರಾತ್ರಿವರೆಗೂ ಮಗ ಮೊಬೈಲ್ ಹಿಡಿದು ಪೋರ್ನ್ ವಿಡಿಯೋ ನೋಡುತ್ತಿದ್ದ ಎಂದು ತಂದೆಯೇ ತನ್ನ ಮಗನ ಕೈ ಕಟ್ ಮಾಡಿದ ಘಟನೆ ಸೋಮವಾರದಂದು ಹೈದರಾಬಾದ್‍ನ ಪಹದಿಶರೀಫ್ ಹೊರವಲಯದಲ್ಲಿ ನಡೆದಿದೆ.

    ಖಾಲೀದ್ ಖುರೇಶಿ(19) ಕೈ ಕಳೆದುಕೊಂಡ ಯುವಕ. ಖಾಲೀದ್ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಹೊಸ ಸ್ಮಾರ್ಟ್ ಫೋನ್ ಖರೀದಿಸಿದ್ದನು. ಮಧ್ಯರಾತ್ರಿವರೆಗೂ ಫೋನ್‍ನಲ್ಲಿ ಪೋರ್ನ್ ವಿಡಿಯೋವನ್ನು ನೋಡುತ್ತಿದ್ದನು. ಇದರಿಂದ ಕೋಪಗೊಂಡ ಆತನ ತಂದೆ ಖಾಯುಮ್ ಖುರೇಶಿ, ಖಾಲೀದ್ ಗೆ ಫೋನ್ ಕಡಿಮೆ ಉಪಯೋಗಿಸು ಎಂದು ಎಚ್ಚರಿಕೆ ನೀಡಿದ್ದರು.

    ತಂದೆಯ ಮಾತಿನಿಂದ ಕೋಪಗೊಂಡು ಖಾಲೀದ್ ಮನೆಯಿಂದ ಹೊರಗೆ ಹೋಗಿದ್ದ. ನಂತರ ರಾತ್ರಿ ಮನೆಗೆ ಹಿಂದುರುಗಿದಾಗ ಖಾಲೀದ್ ತನ್ನ ಫೋನಿನಲ್ಲಿ ಮತ್ತೆ ಪೋರ್ನ್ ವಿಡಿಯೋ ನೋಡುತ್ತಿದ್ದನು. ಇದರಿಂದ ಮತ್ತಷ್ಟು ಕೋಪಗೊಂಡ ತಂದೆ ಸೋಮವಾರ ಆತ ಮಲಗಿದ್ದ ವೇಳೆ ಆತನ ಬಲಗೈಯನ್ನೇ ಕಟ್ ಮಾಡಿದ್ದಾರೆ.

    ಖಲೀದ್ ನೋವಿನಿಂದ ಜೋರಾಗಿ ಕಿರುಚಿಗೊಂಡಾಗ ಮನೆಯವರಿಗೆ ಎಚ್ಚರವಾಗಿ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಕೈ ಮರುಜೋಡಣೆ ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಖಾಲೀದ್ ತಂದೆ ಖಾಯುಮ್ ನನ್ನು ಪೊಲೀಸರು ಬಂಧಿಸಿದ್ದು, ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ.

  • ಚಾಕ್ಲೇಟ್, ತಿಂಡಿ ಕೊಟ್ಟು ಅಪ್ರಾಪ್ತೆಯನ್ನ ನಿರಂತರ ರೇಪ್ ಮಾಡಿ ಗರ್ಭಿಣಿ ಮಾಡಿದ 76 ರ ಮುದುಕ

    ಚಾಕ್ಲೇಟ್, ತಿಂಡಿ ಕೊಟ್ಟು ಅಪ್ರಾಪ್ತೆಯನ್ನ ನಿರಂತರ ರೇಪ್ ಮಾಡಿ ಗರ್ಭಿಣಿ ಮಾಡಿದ 76 ರ ಮುದುಕ

    ಹೈದರಾಬಾದ್: 76 ವರ್ಷದ ವೃದ್ಧನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ನಿರಂತವಾಗಿ ಅತ್ಯಾಚಾರ ಮಾಡಿ ಆಕೆಯನ್ನು ಗರ್ಭಿಣಿ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್ ನಗರದ ಓಲ್ಡ್ ಸಿಟಿಯಲ್ಲಿ ನಡೆದಿದೆ.

    ಆರೋಪಿಯನ್ನು ಅಬ್ದುಲ್ ವಹಾಬ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಗುರುವಾರ ಪೋಷಕರು ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಹಾಬ್ ಹಬೀಬ್ ನಗರದಲ್ಲಿರುವ ಅಘಪುರದಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಪೋಷಕರ ದೂರಿನನ್ವಯ ನಾವು ಆರೋಪಿ ವಹಾಬ್ ನನ್ನು ಬಂಧಿಸಿದ್ದೇವೆ. ಸಂತ್ರಸ್ತೆ ಮತ್ತು ಆರೋಪಿ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು. 2017ರ ಜೂನ್ ನಿಂದ ಸೆಪ್ಟೆಂಬರ್ ವರೆಗೆ ತಮ್ಮ ಮಗಳನ್ನು ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ. ಸಂತ್ರಸ್ತೆಗೆ ಚಾಕ್ಲೇಟ್ ಮತ್ತು ತಿಂಡಿಗಳ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ. ಈಗ ಸಂತ್ರಸ್ತೆ ಗರ್ಭಿಣಿಯಾಗಿದ್ದು, ತನ್ನ ಪೋಷಕರಿಗೆ ಹೊಟ್ಟೆ ನೋವು ಎಂದು ತಿಳಿಸಿದ್ದಾಳೆ. ನಂತರ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ವಿಷಯ ತಿಳಿದಿದೆ. ಕೂಡಲೇ ಆರೋಪಿ ಬಗ್ಗೆ ತಿಳಿದುಕೊಂಡು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಹಬೀಬ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಮಧುಕರ್ ಸ್ವಾಮಿ ತಿಳಿಸಿದ್ದಾರೆ.

    ಆರೋಪಿ ವಹಾಬ್ ನನ್ನು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸ್ವಾಮಿ ಹೇಳಿದ್ದಾರೆ.

  • ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಟ್ಟಿದ್ದಕ್ಕೆ 10 ಪೋಷಕರಿಗೆ ಜೈಲು

    ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಟ್ಟಿದ್ದಕ್ಕೆ 10 ಪೋಷಕರಿಗೆ ಜೈಲು

    – 14 ವರ್ಷದ ಬಾಲಕನನ್ನು ರಿಮ್ಯಾಂಡ್ ಹೋಮ್‍ಗೆ ಕಳಿಸಿದ ಕೋರ್ಟ್

    ಹೈದರಾಬಾದ್: ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಟ್ಟಿದ್ದಕ್ಕೆ ಹೈದರಾಬಾದ್ ಕೋರ್ಟ್ ಗುರುವಾರದಂದು 10 ಪೋಷಕರಿಗೆ 1 ದಿನದ ಜೈಲು ಶಿಕ್ಷೆ ವಿಧಿಸಿದೆ.

    ಅಪ್ರಾಪ್ತರು ವಾಹನ ಚಾಲನೆ ಮಾಡೋ ಪ್ರಕರಣಗಳಿಗೆ ಬ್ರೇಕ್ ಹಾಕೋ ಸಲುವಾಗಿ ಇದೇ ಮೊದಲ ಬಾರಿಗೆ 14 ವರ್ಷದ ಬಾಲಕನನ್ನು ಒಂದು ದಿನದ ಮಟ್ಟಿಗೆ ರಿಮ್ಯಾಂಡ್ ಹೋಮ್‍ಗೆ ಕಳಿಸಲಾಗಿದೆ.

    ಜೈಲಿಗೆ ಕಳಿಸಲಾಗಿರೊ ಪೋಷಕರ ವಿರುದ್ಧ ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 180ರಡಿ ಪ್ರಕರಣ ದಾಖಲಾಗಿದೆ. ಜೈಲು ಶಿಕ್ಷೆಯ ಜೊತೆಗೆ ಪೋಷಕರಿಗೆ 500 ರೂ. ದಂಡವನ್ನೂ ವಿಧಿಸಲಾಗಿದೆ.

    ರಸ್ತೆ ಸುರಕ್ಷತಾ ಕಾರ್ಯಕರ್ತರೊಬ್ಬರು ಈ ಬಗ್ಗೆ ಮಾತನಾಡಿ, ಪ್ರತಿನಿತ್ಯ ಪೊಲೀಸರು ಇಂತಹ 10ಕ್ಕೂ ಹೆಚ್ಚು ಪ್ರಕರಣಗಳನ್ನ ದಾಖಲಿಸಿಕೊಂಡು ಅವರೆಲ್ಲರನ್ನೂ ನ್ಯಾಯಾಲಯ ಜೈಲಿಗೆ ಕಳಿಸಿದ್ರೆ ಖಂಡಿತವಾಗಿಯೂ ಪೋಷಕರಲ್ಲಿ ಬದಲಾವಣೆ ತರುತ್ತದೆ. ಅಪ್ರಾಪ್ತರ ಮೇಲೂ ಇದರಿಂದ ಪರಿಣಾಮವಾಗುತ್ತದೆ ಎಂದು ಹೇಳಿದ್ದಾರೆ.

    ಅಪ್ರಾಪ್ತರು ವಾಹನ ಚಾಲನೆ ಮಾಡಿ ನಿಯಮ ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ಈವರೆಗೆ 1079 ಪ್ರಕರಣಗಳು ದಾಖಲಾಗಿವೆ. ಫೆಬ್ರವರಿ ತಿಂಗಳಲ್ಲೇ 45 ಪೋಷಕರನ್ನು ಜೈಲಿಗೆ ಕಳಿಸಲಾಗಿದೆ ಎಂದು ವರದಿಯಾಗಿದೆ.