ಮಂಡ್ಯ/ ಹೈದರಾಬಾದ್: ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಯುವಕನೊಬ್ಬ ಕೊಚ್ಚಿಹೋದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಬಳಿಯ ಗೂಳಿತಿಟ್ಟು ಬಳಿ ನಡೆದಿದೆ.
ಇಂದು ಸುಪ್ರಸಿದ್ಧ ಪಕ್ಷಿಧಾಮವಾದ ರಂಗನತಿಟ್ಟು ವೀಕ್ಷಿಸಲು ಇಬ್ಬರು ಯುವಕರು ಆಗಮಿಸಿದ್ದಾರೆ. ಈ ವೇಳೆ ರಂಗನ ತಿಟ್ಟು ಬಳಿಯ ಗೂಳಿತಿಟ್ಟಿನ ಬಳಿ ಕೆಆರ್ಎಸ್ನಿಂದ ನದಿಗೆ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕಾವೇರಿ ನದಿಯ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಇದರಲ್ಲಿ ಓರ್ವ ಯುವಕ ನದಿ ಮಧ್ಯೆ ಸಿಲುಕಿ, ತಾಳೆ ಗಿಡದ ಸಹಾಯದಿಂದ ಪಾರಾಗಿದ್ದು, ರಕ್ಷಣೆ ಮಾಡುವಂತೆ ಅಂಗಲಾಚುತ್ತಿದ್ದಾನೆ.
ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಇವರಲ್ಲಿ ಓರ್ವ ಯುವಕ ನದಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾನೆ.
15 ಮಂದಿ ನಾಪತ್ತೆ:ಆಂಧ್ರಪ್ರದೇಶದ ಪೂರ್ವ ಗೋಧಾವರಿಯಲ್ಲಿ ಪ್ರಯಾಣಿಕರ ದೋಣಿಯೊಂದು ಮುಳುಗಿದ ಪರಿಣಾಮ 15 ಮಂದಿ ನಾಪತ್ತೆಯಾಗಿದ್ದಾರೆ. ದೋಣಿಯಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದು, ಬಹುತೇಕ ಮಂದಿ ವಿದ್ಯಾರ್ಥಿಗಳೇ ಇದ್ದರು ಎಂದು ತಿಳಿದು ಬಂದಿದೆ.
ವರದಿಯ ಪ್ರಕಾರ ಗೋಧಾವರಿ ನದಿಗೆ ಕಟ್ಟಲಾಗಿದ್ದ ಸೇತುವೆಯ ಕಂಬಕ್ಕೆ ದೋಣಿ ಗುದ್ದಿದ್ದರಿಂದ ಅವಘಡ ಸಂಭವಿಸಿದ್ದು, ನಾಪತ್ತೆಯಾದರವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ, ಘಟನೆ ಸಂಬಂಧ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.
ಹೈದರಾಬಾದ್: ಲವ್ವರ್ ತನ್ನನ್ನು ಮದುವೆಯಾಗಬೇಕೆಂದು ಆಗ್ರಹಿಸಿ ಯುವತಿಯೊಬ್ಬಳು ಮೊಬೈಲ್ ಟವರ್ ಏರಿ ಕುಳಿತ ಘಟನೆ ತೆಂಲಗಾಣದಲ್ಲಿ ನಡೆದಿದೆ.
ಈ ಘಟನೆ ಶುಕ್ರವಾರ ತೆಲಂಗಾಣದ ಯದಾದ್ರಿ ಭೊಂಗಿರ್ ಜಿಲ್ಲೆಯ ವಾಲಿಗೊಂಡ ಗ್ರಾಮದಲ್ಲಿ ನಡೆದಿದ್ದು, ಪೊಲೀಸರು ಮತ್ತು ಗ್ರಾಮಸ್ಥರು ಪರಿಪರಿಯಾಗಿ ಬೇಡಿಕೊಂಡ ಬಳಿಕ ಕೆಳಗಿಳಿದಿದ್ದಾಳೆ.
ಏನಿದು ಘಟನೆ?:
ಗ್ರಾಮದ ಜ್ಯೋತಿ ಮತ್ತು ಭಾಸ್ಕರ್ ಕಳೆದ 7 ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದರು. ಆದ್ರೆ ಇತ್ತೀಚೆಗೆ ಭಾಸ್ಕರ್, ಜ್ಯೋತಿಯನ್ನು ಕಡೆಗಣಿಸುತ್ತಿದ್ದನು. ಅಲ್ಲದೆ ಬೇರೊಬ್ಬಳ ಜೊತೆ ಸಂಬಂಧ ಬೆಳೆಸಿಕೊಂಡಿದ್ದ.
ಭಾಸ್ಕರ್ ವರ್ತನೆಯಿಂದ ಬೇಸತ್ತ ಜ್ಯೋತಿ ಹೈದರಾಬಾದ್ ನಲ್ಲಿರೋ ಸಾಫ್ಟ್ ವೇರ್ ಕಂಪೆನಿಯಲ್ಲಿನ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ. ಅಲ್ಲದೇ 40 ಅಡಿ ಎತ್ತರದ ಟವರ್ ಮೇಲೇರಿ ಕುಳಿತು ಬೆದರಿಕೆ ಹಾಕಿದ್ದಾಳೆ. ಒಂದು ವೇಳೆ ಭಾಸ್ಕರ್ ನನ್ನನ್ನು ಮದುವೆಯಾಗದಿದ್ದರೆ ಇಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಟವರಿನಿಂದ ಕೆಳಗಿಳಿಯುವಂತೆ ಪರಿಪರಿಯಾಗಿ ಬೇಡಿಕೊಂಡರು. ಇದೇ ವೇಳೆ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು. ಗ್ರಾಮಸ್ಥರು ಮತ್ತು ಪೊಲೀಸರು ಟವರ್ ನ ಬುಡದಲ್ಲಿ ನಿಂತು ಬೇಡಿಕೊಂಡ ಬಳಿಕ ಅಂದ್ರೆ ಸುಮಾರು 3 ತಾಸಿನ ಬಳಿಕ ಯುವತಿ ಕೆಳಗಿಳಿದಿದ್ದು, ಸ್ಥಳದಲ್ಲಿದ್ದವರು ನಿಟ್ಟಿಸಿರು ಬಿಟ್ಟಿದ್ದಾರೆ. ಕೆಳಗಿಳಿದ ಯುವತಿ, ತನಗೆ ನ್ಯಾಯ ದೊರಕಿಸಿ ಕೊಡಬೇಕು. ತಾನು ಪ್ರೀತಿಸುತ್ತಿರೋ ಯುವಕ ಭಾಸ್ಕರ್ ಜೊತೆ ಮದುವೆ ಮಾಡಿಕೊಡುವಂತೆ ಮಾತು ಕೊಡಿ ಅಂತ ಬೇಡಿಕೆಯಿಟ್ಟಿದ್ದಾಳೆ. ಯಾಕಂದ್ರೆ ಆತ ಇನ್ನೊಬ್ಬಳ ಜೊತೆ ಸಂಬಂಧ ಹೊಂದಿದ್ದಾನೆ ಅಂತ ಆಕೆ ಪೊಲೀಸರ ಮುಂದೆ ಆರೋಪ ಮಾಡಿದ್ದಾಳೆ.
ಟವರ್ ಏರಿ ಕುಳಿತುಕೊಳ್ಳುವುದಕ್ಕೂ ಮೊದಲು ಜ್ಯೋತಿ 3 ದಿನಗಳ ಕಾಲ ಭಾಸ್ಕರ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದಳು. ಯುವತಿಯ ಕಾಟದಿಂದ ಬೇಸತ್ತು ಅವರು ಮನೆಗೆ ಬೀಗ ಜಡಿದು ಗ್ರಾಮವನ್ನೇ ಬಿಟ್ಟು ಹೋಗಿದ್ದರು.
ಕಾಲೇಜು ಓದುತ್ತಿರುವ ಸಂದರ್ಭದಲ್ಲಿ ಜ್ಯೋತಿ ಹಾಗೂ ಭಾಸ್ಕರ್ ಮಧ್ಯೆ ಪ್ರೇಮಾಂಕುರವಾಗಿದೆ. ಭಾಸ್ಕರ್ ನನ್ನು ಮದುವೆ ಮಾಡಿಕೊಳ್ಳಲು ತಾನು ನನ್ನ ಕುಟುಂಬವನ್ನೂ ದೂರ ಮಾಡಿದ್ದೇನೆ ಅಂತ ಆಕೆ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ.
ಹೈದರಾಬಾದ್: 2019ರ ಲೋಕಾಸಭಾ ಚುನಾವಣೆ ವೇಳೆಗೆ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ ಮಾಡುವ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಈ ಹೇಳಿಕೆ ವಿರುದ್ಧ ಸದ್ಯ ಓವೈಸಿ ವಾಗ್ದಾಳಿ ನಡೆಸಿದ್ದು, 2019ರ ಬಳಿಕ ಈ ತೀರ್ಪು ನೀಡಲು ಹೇಳಿದೆ.
ತೆಲಂಗಾಣ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ ಅವರು, ಹೈದರಾಬಾದ್ ನಲ್ಲಿ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಹೇಳಿಕೆ ನೀಡಿದ್ದರು ಎಂದು ವರದಿಯಾಗಿತ್ತು. ಆದರೆ ಈ ಬಳಿಕ ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಬಿಜೆಪಿ ಇಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ತಿಳಿಸಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿತ್ತು.
ತೆಲಂಗಾಣದಲ್ಲಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಅಮಿತ್ ಶಾ ಯಾವುದೇ ಹೇಳಿಕೆ ನೀಡಿಲ್ಲ. ಅಂತಹ ಅಜೆಂಡಾದ ಚಿಂತನೆಯೂ ನಮ್ಮಲ್ಲಿ ಇಲ್ಲ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದೆ.
Yesterday in Telangana, BJP President Shri @AmitShah didn’t make any statement on the issue of Ram Mandir as being claimed in certain sections of the media. No such matter was even on the agenda.
ಸದ್ಯ ಬಿಜೆಪಿ ಸ್ಪಷ್ಟನೆ ನಡುವೆಯೇ ರಾಮಮಂದಿರ ನಿರ್ಮಾಣ ಹೇಳಿಕೆ ಕುರಿತು ಅಸಮಾಧಾನ ಹೊರ ಹಾಕಿರುವ ಎಐಎಂಐಎಂ (ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ) ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ, ಸದ್ಯ ರಾಮ ಮಂದಿರ ನಿರ್ಮಾಣದ ಪ್ರಕರಣ ವಿಚಾರಣೆ ಸುಪ್ರೀ ಕೋರ್ಟ್ ನಲ್ಲಿದ್ದು, ಅಮಿತ್ ಶಾ ಅವರು ಲೋಕಸಭಾ ಚುನಾವಣೆಗೂ ಮುನ್ನವೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಅದ್ದರಿಂದ ನ್ಯಾಯೋಚಿತ ಚುನಾವಣೆ ನಡೆಸಲು ಪ್ರಕರಣದ ಕುರಿತ ತೀರ್ಪು ಲೋಕಸಭಾ ಚುನಾವಣೆಗೂ ಬಳಿಕ ಬಂದರೆ ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಕಪಿಲ್ ಸಿಬಲ್ ಸೇರಿದಂತೆ ಹಲವು ಪಕ್ಷಗಳ ನಾಯಕರು ಸಹ ರಾಮ ಮಂದಿರ ಕುರಿತ ತೀರ್ಪು ಚುನಾವಣೆಯ ಬಳಿಕ ಪ್ರಕಟಗೊಂಡರೆ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರ ನಡುವೆಯೇ ಮುಸ್ಲಿಂ ಶಿಯಾ ವಕ್ಫ್ ಬೋರ್ಡ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಬೇಕೇ ಹೊರತು ಮಸೀದಿ ಅಲ್ಲ, ರಾಮ ಮಂದಿರ ವಿವಾದವನ್ನು ಶಾಂತಿಯುವಾಗಿ ಬಗೆಹರಿಸಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಗೆ ಶುಕ್ರವಾರ ತಿಳಿಸಿದೆ.
AShah in Hyd says Mandir will be built b4 the Parl elections Qs is Shah going to write the judgment when the SCourt is deciding the Title dispute,& whether Masjid is essential feature of Islaam It is better if the issue / Judgment given after Parl Elections for free & fair Elec
ಹೈದರಾಬಾದ್: ಖಾಸಗಿ ಸ್ಟೀಲ್ ಮಿಲ್ ರೋಲಿಂಗ್ ಘಟಕದಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ ಆರು ಜನ ಕಾರ್ಮಿಕರು ಮೃತಪಟ್ಟಿರುವ ಘಟನೆ ತೆಲಂಗಾಣದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ತಡಿಪತ್ರಿ ಪ್ರದೇಶದಲ್ಲಿದ್ದ ಸ್ಟೀಲ್ ಮಿಲ್ ಘಟಕದಲ್ಲಿ ನಿರ್ವಹಣೆ ಕಾರ್ಯ ಮುಗಿದ ನಂತರ ಪರೀಕ್ಷೆ ನಡೆಸುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿದ್ದರಿಂದ ಅವಘಢ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಅಶೋಕ್ ಕುಮಾರ್ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರ್ಬನ್ ಮೊನಾಕ್ಸೈಡ್ ಸೋರಿಕೆಯೇ ಅವಘಡಕ್ಕೆ ಕಾರಣವಾಗಿದೆ. ಸದ್ಯಕ್ಕೆ ರಕ್ಷಣಾಕಾರ್ಯ ಮುಂದುವರೆದಿದ್ದು, ಇನ್ನು ಎಷ್ಟು ಜನ ಗಾಯಗೊಂಡಿದ್ದಾರೆ ಎನ್ನುವುದು ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಡಿಪತ್ರಿಯ ಸ್ಟೀಲ್ ಘಟಕವು ಬ್ರೆಜಿಲಿಯನ್ ನ ಗೇರ್ಡಾ ಸಂಸ್ಥೆಗೆ ಸೇರಿದ್ದು, ಅತಿ ಹೆಚ್ಚು ಸ್ಟೀಲ್ ಅನ್ನು ಉತ್ಪಾದಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಎನ್. ಚೀನಾ ರಾಜಪ್ಪ ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು: ಹಾರಾಟದ ವೇಳೆ ಬೆಂಗಳೂರು ಏರೋಸ್ಪೇಸ್ ನಲ್ಲಿ ಎರಡು ವಿಮಾನಗಳ ಮಧ್ಯೆ ಸಂಭವಿಸಬಹುದಾಗಿದ್ದ ಡಿಕ್ಕಿ ಕೆಲವೇ ಅಂತರದಲ್ಲಿ ತಪ್ಪಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 10 ರಂದು ಇಂಡಿಗೋ ಸಂಸ್ಥೆಯ ಎರಡು ವಿಮಾನಗಳು ಕೇವಲ 200 ಅಡಿ ಅಂತರದಲ್ಲಿ ಹಾರಾಟ ನಡೆಸಿತ್ತು. ಒಂದು ವೇಳೆ ಮುಖಾಮುಖಿ ಡಿಕ್ಕಿಯಾಗಿದ್ದರೆ ಹೈದರಾಬಾದಿಗೆ ಹೊರಟಿದ್ದ ವಿಮಾನದಲ್ಲಿದ್ದ 162 ಜನ ಹಾಗೂ ಹಾಗೂ ಕೊಚ್ಚಿಗೆ ತೆರಳುತ್ತಿದ್ದ ವಿಮಾನದಲ್ಲಿದ್ದ 166 ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು.
ನಡೆದದ್ದು ಏನು?
6ಇ-779 ಇಂಡಿಗೋ ವಿಮಾನವು ಕೊಯಮತ್ತೂರಿನಿಂದ ಹೈದ್ರಾಬಾದ್ಗೆ ಹೊರಟಿತ್ತು. ಅದೇ ಸಮಯದಲ್ಲಿ 6ಇ-6505 ವಿಮಾನವು ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತ್ತು. ಎರಡು ವಿಮಾನಗಳು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆಯುವ ಸಂಭವವನ್ನು ಅರಿತ ಸಂಚಾರ ಡಿಕ್ಕಿ ತಪ್ಪಿಸುವ ವ್ಯವಸ್ಥೆ(ಟಿಸಿಎಎಸ್) ಎಚ್ಚರಿಕೆಯ ಸಿಗ್ನಲ್ ರವಾನಿಸಿದೆ. ಅಪಾಯದ ಸಿಗ್ನಲ್ ಬಂದ ಕೂಡಲೇ ವಿಮಾನಗಳ ಹಾರಾಟದ ಎತ್ತರವನ್ನು ಬದಲಾಯಿಸಲಾಗಿದೆ ಎಂದು ಇಂಡಿಗೋ ಏರ್ ಲೈನ್ಸ್ ಹೇಳಿದೆ.
ಹೈದರಾಬಾದಿಗೆ ಹೊರಟಿದ್ದ ವಿಮಾನವು 36,000 ಅಡಿ ಅಂತರದಲ್ಲಿ ಹಾರಬೇಕಿದ್ದರೆ, ಕೊಚ್ಚಿಗೆ ಹೊರಟಿದ್ದ ವಿಮಾನ 28,000 ಅಡಿ ಎತ್ತರದಲ್ಲಿರಬೇಕಿತ್ತು. ಆದರೆ ಈ ವಿಮಾನಗಳು ಅನುಕ್ರಮವಾಗಿ 27,300 ಅಡಿ ಮತ್ತು 27,500 ಅಡಿ ಎತ್ತರದಲ್ಲಿ ಹಾರಾಟ ನಡೆಸುತಿತ್ತು. 8 ಕಿ.ಮೀ ದೂರದಲ್ಲಿದ್ದಾಗ ವಿಮಾನಗಳ ಕಾಕ್ಪಿಟ್ ಗೆ ಎಚ್ಚರಿಕೆ ಸಿಗ್ನಲ್ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಮಂಡಳಿ(ಎಎಐಬಿ) ತನಿಖೆ ಆರಂಭಿಸಿದೆ.
ಏನಿದು ಟಿಸಿಎಎಸ್?
ಹಾರಾಟದ ಸಂದರ್ಭದಲ್ಲಿ ಎರಡು ವಿಮಾನಗಳ ಮಧ್ಯೆ ಸಂಭವಿಸಬಹುದಾದ ಡಿಕ್ಕಿಯನ್ನು ತಪ್ಪಿಸಲು ಸಂಚಾರ ಡಿಕ್ಕಿ ತಪ್ಪಿಸುವ ವ್ಯವಸ್ಥೆ(ಟಿಸಿಎಎಸ್) ಬಳಸಲಾಗುತ್ತದೆ. ಕಡಿಮೆ ಅಂತರದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎರಡು ವಿಮಾನಗಳು ಹಾರಾಟ ನಡೆಸುತ್ತಿದ್ದರೆ ಟಿಸಿಎಎಸ್ ನಲ್ಲಿರುವ ಟ್ರಾನ್ಸ್ಪಾಂಡರ್ ಸಿಗ್ನಲ್ಗಳನ್ನು ಆಧಾರಿಸಿ ಕಾಕ್ಪಿಟ್ ನಲ್ಲಿ ಸ್ವಯಂಚಾಲಿತವಾಗಿ ಧ್ವನಿ ಸಂದೇಶ ನೀಡುತ್ತದೆ. ಎಚ್ಚರಿಕೆಯ ಸಂದೇಶ ಹೇಗಿರುತ್ತದೆ ಎಂದರೆ ಒಂದು ವಿಮಾನದ ಕಾಕ್ಪಿಟ್ಗೆ “ಮತ್ತಷ್ಟು ಎತ್ತರಕ್ಕೆ ಹೋಗಿ” ಎನ್ನುವ ಎಚ್ಚರಿಕೆ ನೀಡಿದರೆ ಇನ್ನೊಂದು ವಿಮಾನಕ್ಕೆ “ಎತ್ತರವನ್ನು ತಗ್ಗಿಸಿ” ಎನ್ನುವ ಧ್ವನಿ ಸಂದೇಶವನ್ನು ನೀಡುತ್ತದೆ. ಈ ಸಂದೇಶ ಅನುಸಾರ ಪೈಲಟ್ಗಳು ವಿಮಾನ ಎತ್ತರವನ್ನು ಏರಿಸಿ/ತಗ್ಗಿಸುವ ಮೂಲಕ ಡಿಕ್ಕಿಯನ್ನು ತಪ್ಪಿಸುತ್ತಾರೆ.
ಪರಸ್ಪರ ಡಿಕ್ಕಿಯಾಗುವ ಬಗ್ಗೆ ಟಿಸಿಎಎಸ್ ಸಂದೇಶ ಮೊಳಗಿಸುವುದು ಇದೇ ಮೊದಲೆನಲ್ಲ. ಈ ಜನವರಿಯಲ್ಲಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ಪರಸ್ಪರ ಮುಖಾಮುಖಿಯಾಗಿತ್ತು.
ಹೈದರಾಬಾದ್: ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಪತ್ನಿ ಮೇಲಿನ ಕೋಪಕ್ಕೆ ಮೂರು ವರ್ಷದ ಮಗುವನ್ನು ಆಟೋಗೆ ಬಡಿದು ತನ್ನ ಕೋಪ ತೀರಿಸಿಕೊಂಡಿರುವ ಅಮಾನವೀಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಆಟೋ ರಿಕ್ಷಾ ಚಾಲಕನಾಗಿರುವ ಶಿವ ಗೌಡರ್(40) ಮಗುವನ್ನು ಆಟೋಗೆ ಬಡಿದು ಆಕ್ರೋಶ ವ್ಯಕ್ತಪಡಿಸಿದ ತಂದೆಯಾಗಿದ್ದಾನೆ. ಘಟನೆ ಬಳಿಕ ತಂದೆ ತಲೆಮರೆಸಿಕೊಂಡಿದ್ದಾನೆ.
ಶಿವ ಗೌಡರ್ ಕುಡಿದ ಮತ್ತಿನಲ್ಲಿ ಭಾನುವಾರ ರಾತ್ರಿ ತನ್ನ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಈ ವೇಳೆ ಪತ್ನಿಯು ಸ್ಥಳದಲ್ಲಿದ್ದ ಗಸ್ತು ಪೊಲೀಸರಿಗೆ ತಿಳಿಸಿದ್ದಾಳೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶಿವಗೌಡರ್ ಗೆ ಎಚ್ಚರಿಸಿದ್ದಾರೆ. ಈ ವೇಳೆ ಕುಪಿತಗೊಂಡ ಅವನು ಪತ್ನಿ ಮೇಲಿನ ಕೋಪವನ್ನು ತನ್ನ ಮೂರು ವರ್ಷದ ಮಗುವನ್ನು ಆಟೋಗೆ ಎಸೆದು ತನ್ನ ಕೋಪ ತೀರಿಸಿಕೊಂಡಿದ್ದಾನೆ.
#WATCH Man in an inebriated state bangs his 3-yr-old son against an auto-rickshaw following a quarrel with his wife. Child handed over to Child Welfare Committee. Case registered under Sec 324 of IPC & Sec 75 of the Juvenile Justice Act; Accused absconding (9.07.18) #Hyderabadpic.twitter.com/8YWjfrEdjN
ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆರೋಪಿಗೆ ಬಾರಿಸಿದ್ದಾರೆ. ಅಲ್ಲದೇ ವಶಕ್ಕೆ ಪಡೆಯುವ ವೇಳೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಎಲ್ಲಾ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಮಗುವನ್ನು ಆಟೋಗೆ ಬಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಯ ಮೇಲೆ ನೆಟ್ಟಿಗರು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಗಿದೆ.
ಘಟನೆ ಕುರಿತು ಮಗುವಿನ ತಾಯಿ ತನ್ನ ಪತಿಯ ವಿರುದ್ಧ ದೂರು ದಾಖಲಿಸಲು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲುಮಾಡಿಕೊಂಡು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 324 ಮತ್ತು 75ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಗುವಿನ ಮೇಲೆ ಹಲ್ಲೆ ಮಾಡಿದ ಆರೋಪಿಯ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಹೈದರಾಬಾದ್: ಇತ್ತೀಚೆಗೆ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಈ ಬಗ್ಗೆ ಸ್ವತಃ ರೇಣು ದೇಸಾಯಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ರೇಣು ದೇಸಾಯಿ ಅವರು ಬೇರೆಯವರ ಜೊತೆ ಎರಡನೇ ಮದುವೆ ಆಗುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕೆಟ್ಟ ಕಮೆಂಟ್ ಬರುತ್ತಿದ್ದವು. ಆದರೆ ಇದುವರೆಗೂ ಪವನ್ ಮತ್ತು ರೇಣು ದೇಸಾಯಿ ಅವರ ವಿಚ್ಛೇದನಕ್ಕೆ ಕಾರಣ ಮಾತ್ರ ಎಲ್ಲೂ ಬಹಿರಂಗವಾಗಿಲ್ಲ. ರೇಣು 2012ರಂದು ತನ್ನ ಪತಿ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಸುಮಾರು 6 ವರ್ಷಗಳಾದರೂ ಡಿವೋರ್ಸ್ ಯಾರು ಕೊಟ್ಟಿದ್ದು ಎಂದು ತಿಳಿದಿರಲಿಲ್ಲ. ಆದರೆ ಈಗ ಡಿವೋರ್ಸ್ ಕೇಳಿದ್ದು ಪವನ್ ಕಲ್ಯಾಣ್ ಎಂದು ರೇಣು ದೇಸಾಯಿ ಅವರು ಹೇಳಿದ್ದಾರೆ.
ನಾನು ಡಿವೋರ್ಸ್ ಕೇಳಿಲ್ಲ: ಸಂದರ್ಶನದಲ್ಲಿ ಮಾತನಾಡಿದ ಅವರು, “ನಾನು ನಿಜವಾಗಿಯೂ ಡಿವೋರ್ಸ್ ಕೇಳಿಲ್ಲ. ಪವನ್ ಕಲ್ಯಾಣ್ ಅವರೇ ವಿಚ್ಛೇದನ ಕೇಳಿದರು. ಅದು ನನಗೆ, ಪವನ್ ಕಲ್ಯಾಣ್ ಮತ್ತು ಆ ದೇವರಿಗೆ ಗೊತ್ತು. ನಮ್ಮಿಬ್ಬರ ಮಧ್ಯೆ ಪತ್ನಿ-ಪತಿಯ ರೀತಿಯಲ್ಲಿ ಸಾಮಾನ್ಯ ಜಗಳವಾಗಿತ್ತು. ನಾನು ಬೇಡ ಎಂದು ವಾದ ಮಾಡಿದೆ. ಕೋಪ ಮಾಡಿಕೊಂಡೆ. ಆದರೆ ಕೊನೆಯಲ್ಲಿ ಅವರಿಗೆ ವಿಚ್ಛೇದನ ಬೇಕಿತ್ತು, ಆದ್ದರಿಂದ ಡಿವೋರ್ಸ್ ನೀಡಿದೆ” ಎಂದು ರೇಣು ದೇಸಾಯಿ ತಿಳಿಸಿದ್ದಾರೆ.
2ನೇ ಮದುವೆಗೆ ನಿರ್ಧರಿಸಿದ್ದು ಏಕೆ?: ಡಿವೋರ್ಸ್ ನೀಡಿದ ಬಳಿಕ ನಾನು ಒಂದು ವರ್ಷ ಖಿನ್ನತೆಗೆ ಒಳಗಾಗಿದ್ದೆ. ನನಗೆ ನನ್ನ ಕುಟುಂಬ ಸಹಾಯ ಮಾಡಿತ್ತು. ಕೌನ್ಸಲಿಂಗ್ ತೆಗೆದುಕೊಂಡಿದ್ದೇನೆ. ಒಂಟಿಯಾಗಿ ಏಳು ವರ್ಷ ನನ್ನ ಮಕ್ಕಳನ್ನು ನೋಡಿಕೊಂಡು ಬದುಕಿದ್ದೇನೆ. ನನಗೆ ನನ್ನ ಕುಟುಂಬ, ಸ್ನೇಹಿತರು ಎಲ್ಲರೂ ಒಂಟಿಯಾಗಿ ಇರಬೇಡ. ಎರಡನೇ ಮದುವೆಯಾಗು ಎಂದು ಹೇಳಿದರು. ಆದರೆ ನಾನು ಒಪ್ಪಲಿಲ್ಲ. ಕೊನೆಗೆ ಎರಡನೇ ಮದುವೆಯಾಗುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ಮಹಿಳಾ ಅಭಿಮಾನಿಗೆ ಪ್ರಶ್ನೆ ಕೇಳಿದ್ದಾರೆ. “ನನ್ನ ಜಾಗದಲ್ಲಿ ನೀವು ಇದ್ದು, ಮದುವೆಯ ನಂತರವೂ 11 ವರ್ಷಗಳ ಕಾಲ ನಿಮಗೆ ಗೊತ್ತಾಗದೇ ಬೇರೆಯೊಬ್ಬರ ಜೊತೆ ಇದ್ದು, ಒಂದು ಮಗುವಿಗೆ ಜನ್ಮ ನೀಡಿದರೇ ನಿಮ್ಮ ಪರಿಸ್ಥಿತಿ ಹೇಗಿರುತ್ತೆ”ಎಂದು ಪ್ರಶ್ನಿಸಿದ್ದಾರೆ.
ಅಭಿಮಾನಿಗಳಲ್ಲಿ ತಪ್ಪ ಗ್ರಹಿಕೆ: ಪವನ್ ಕಲ್ಯಾಣ್ ಅವರು ಈಗ ಸಿನಿಮಾ ನಟ ಮಾತ್ರವಲ್ಲ ರಾಜಕಾರಣಿ ಕೂಡ ಆಗಿದ್ದಾರೆ. ನಾನು ಈ ಬಗ್ಗೆ ಮಾತನಾಡಿದರೆ ಅವರ ರಾಜಕೀಯಕ್ಕೆ ತೊಂದರೆಯಾಗುತ್ತದೆ. ವಿಚ್ಛೇದನ ಬಗ್ಗೆ ಜನತೆಗೆ ವಿವರಣೆ ನೀಡಲು ಪವನ್ ಅವರಿಗೆ ಹೇಳಿದೆ, ಆದರೆ ಅವರು ನನ್ನ ಮಾತನ್ನು ಒಪ್ಪಲಿಲ್ಲ. ಆದ್ದರಿಂದ ಅಭಿಮಾನಿಗಳಲ್ಲಿ ಈ ರೀತಿ ತಪ್ಪು ಗ್ರಹಿಕೆಯಾಗಿದೆ. ಈಗ ಅವರು ಬೇರೆ ಮದುವೆಯಾಗಿ ಮಕ್ಕಳ ಜೊತೆ ಸಂತೋಷದಿಂದಯಿದ್ದಾರೆ ಎಂದು ಹೇಳಿದರು.
ಈ ಹಿಂದೆ ಪವನ್ 1997ರಲ್ಲಿ ನಂದಿನಿ ಅವರನ್ನು ಮದುವೆಯಾಗಿದ್ದರು. ನಂತರ 2007ರಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿ ರೇಣು ಅವರನ್ನು ಮದುವೆಯಾಗಿದ್ದರು. ಬಳಿಕ ರೇಣು ಅವರಿಗೂ ವಿಚ್ಛೇದನ ನೀಡಿ ಸದ್ಯ ಈಗ ಅನ್ನಾ ಲೆಜ್ನೆವಾ ಜೊತೆ ಸಂಸಾರ ನಡೆಸುತ್ತಿದ್ದಾರೆ.
ಪವನ್ ಹಾಗೂ ರೇಣು 2000ರಲ್ಲಿ ಬಿಡುಗಡೆಯಾಗಿದ್ದ `ಬದ್ರಿ’ ಮತ್ತು 2003ರಲ್ಲಿ ಬಿಡುಗಡೆಯಾದ `ಜಾನಿ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲದೇ ರೇಣು ಪವನ್ ಕಲ್ಯಾಣ್ ನಟನೆಯ `ಗುಡುಂಬ ಶಂಕರ್’ ಹಾಗೂ `ಬಾಲು ಎಬಿಸಿಡಿಇಎಫ್ಜಿ’ ಚಿತ್ರದಲ್ಲಿ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.
ಹೈದರಾಬಾದ್: ಹೈ ಪ್ರೊಫೈಲ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ, ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಮುಂಬೈ ಮೂಲದ 24 ವರ್ಷದ ಡಬ್ಬಿಂಗ್ ನಟಿಯೊಬ್ಬರನ್ನು ರಕ್ಷಿಸಿದ್ದಾರೆ.
ನಗರದ ಬಂಜಾರ್ ಹಿಲ್ಸ್ ನಲ್ಲಿರುವ ಹೋಟೆಲ್ ಮೇಲೆ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿದ್ದರು. ಜನಾರ್ದನ್ ರಾವ್ ಎಂಬ ವ್ಯಕ್ತಿ ವೇಶ್ಯಾಗೃಹ ಸಂಘಟಕ ಹಾಗೂ ಬಂಧಿತ ಆರೋಪಿ. ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ನಟಿಯೊಬ್ಬರನ್ನು ರಕ್ಷಿಸಲಾಗಿದೆ. ಹಾಗೆಯೇ ಈ ಪ್ರಕರಣ ಸಂಬಂಧಿತ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣೆ ಮಾಡಿರುವ ನಟಿ ಮೂಲತಃ ಆಗ್ರಾ ನಿವಾಸಿಯಾಗಿದ್ದು, ಮುಂಬೈನಲ್ಲಿ ಡಬ್ಬಿಂಗ್ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಜನಾರ್ದನ್ ರಾವ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಈ ಹಿಂದೆಯೂ ಕೂಡ ನಟಿಯನ್ನು ತನ್ನ ಬಣ್ಣದ ಮಾತಿನಿಂದ ಮರುಳುಮಾಡಿ ಹೈದರಾಬಾದ್ ಸುತ್ತಮುತ್ತ ಮಾಂಸ ದಂಧೆಯಲ್ಲಿ ತೊಡಗಿಸಿದ್ದನು. ಅಲ್ಲದೇ ಆರೋಪಿ ರಾವ್ ಹಾಗೂ ಪರಾರಿಯಾಗಿರುವ ಉಳಿದ ಆರೋಪಿಗಳು ಮುಂಬೈ ಹಾಗೂ ಇತರೇ ರಾಜ್ಯದ ಯುವತಿಯರನ್ನು ವಾರದ ಒಪ್ಪಂದ ಮೇಲೆ 1 ಲಕ್ಷ ರೂ.ಗಳನ್ನು ನೀಡಿ, ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದರು ಹಾಗೂ ವೇಶ್ಯಾಗೃಹಕ್ಕೆ ಬರುವ ಗ್ರಾಹಕರಿಂದ ತಲಾ 20,000 ಪಡೆಯುತ್ತಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬೀದರ್: ಹೈದ್ರಾಬಾದ್ ನ ಕೊಟಿ ಆಸ್ಪತ್ರೆಯಿಂದ ಹೆಣ್ಣು ಮಗುವನ್ನು ಅಪಹರಿಸಿದ್ದ ಮಹಿಳಾ ಆರೋಪಿಯನ್ನು ತೆಲಂಗಾಣ ಹಾಗೂ ಬೀದರ್ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಯನ(34) ಮಗು ಅಪಹರಿಸಿದ್ದ ಆರೋಪಿ. ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಸ್ವಗ್ರಾಮದಲ್ಲಿ ಆರೋಪಿಯನ್ನ ಬಂಧಿಸಿಲಾಗಿದೆ. ಬೀದರ್ ತಾಲೂಕಿನ ಕಾಶಂಪೂರ್ (ಬಿ) ಗ್ರಾಮದ ನಿವಾಸಿಯಾಗಿರುವ ನಯನ ಕಳೆದ ಎರಡು ದಿನಗಳ ಹಿಂದೆ ಹೈದ್ರಾಬಾದ್ ನ ಕೊಟಿ ಆಸ್ಪತ್ರೆಯಿಂದ ಹೆಣ್ಣುಮಗು ಅಪಹರಿಸಿ ಬೀದರ್ ಜಿಲ್ಲಾಸ್ಪತ್ರೆಯ ನಲ್ಲಿ ಮಗು ಬಿಟ್ಟು ಪರಾರಿಯಾಗಿದ್ದಳು. ಇದನ್ನೂ ಓದಿ: ಹೈದರಾಬಾದ್ನಲ್ಲಿ ಕಾಣೆಯಾಗಿದ್ದ ಮಗು ಬೀದರ್ ನಲ್ಲಿ ಪತ್ತೆ
ಮದುವೆ ಬಳಿಕ ಹೈದ್ರಾಬಾದ್ ನಲ್ಲಿಯೇ ವಾಸವಾಗಿದ್ದ ನಯನಾಗೆ ಎರಡು ಬಾರಿ ಗರ್ಭಪಾತವಾಗಿತ್ತು. ಇದರಿಂದ ಮನನೊಂದು ನಯನ ಮಗುವನ್ನು ಅಪಹರಿಸಿದ್ದಳು ಎನ್ನಲಾಗಿದೆ.
ಈ ಕುರಿತು ಹೈದ್ರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮಗುವಿನ ಪೋಷಕರಿಂದ ಅಪಹರಣ ಪ್ರಕರಣ ದಾಖಲಾಗಿತ್ತು.
ಬೀದರ್: ಹೈದರಾಬಾದ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಾಪತ್ತೆಯಾಗಿದ್ದ ಆರು ದಿನದ ಹೆಣ್ಣು ಮಗು ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಪತ್ತೆಯಾಗಿದೆ.
ಹೈದರಾಬಾದ್ ನ ಸುಲ್ತಾನ್ ಬಜಾರ್ ನಲ್ಲಿರುವ ಕೊಟ್ಟಿ ಆಸ್ಪತ್ರೆಯಲ್ಲಿ ಸಬಾವತ್ ನಾರಿ ಹಾಗೂ ವಿಜಯ ಎಂಬ ದಂಪತಿಗಳ ಮಗುವನ್ನ ಸೋಮವಾರ ಅಪಹರಣ ಮಾಡಲಾಗಿತ್ತು. ಈ ಬಗ್ಗೆ ಹೈದರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನವಜಾತ ಶಿಶುವಿನ ದಂಪತಿಗಳು ದೂರು ದಾಖಲಿಸಿದ್ದರು. ಮಗುವಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆ ಕಂದನನ್ನು ತೆಗೆದುಕೊಂಡು ಹೋಗಿದ್ದು ತನಿಖೆಯಲ್ಲಿ ತಿಳಿದು ಬಂದಿತ್ತು.
ಆರೋಪಿ ಮಹಿಳೆ ಕಂದನನ್ನು ಕರೆದುಕೊಂಡು ಬೀದರ್ ನತ್ತ ಪ್ರಯಾಣ ಬೆಳೆಸಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈಗಾಗಲೇ ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಸಿಕ್ಕ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ನ್ನ ಆಧರಿಸಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಮಂಗಳವಾರ ಆರೋಪಿ ಮಗುವನ್ನು ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಾಳೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನ ಪರಿಶೀಲಿಸದಾಗ ಹೈದ್ರಾಬಾದ್ ನಲ್ಲಿ ನಾಪತ್ತೆಯಾಗಿದ್ದ ಕಂದ ಎನ್ನವುದನ್ನು ಖಚಿತ ಪಡೆಸಿಕೊಂಡಿದ್ದಾರೆ.
ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ತೆಲಂಗಾಣ ಹಾಗೂ ಕರ್ನಾಟಕ ಪೊಲೀಸರು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ. ಬಳಿಕ ತೆಲಂಗಾಣ ಹಾಗೂ ರಾಜ್ಯ ಪೊಲೀಸರು ಜಂಟಿ ಸುದ್ದಿಗೋಷ್ಠಿ ಮಾಡಿದ್ದು ಎಸ್ಪಿ ದೇವರಾಜ್ ಮಾತನಾಡಿ ಮಗುವನ್ನ ಕದ್ದ ಆರೋಪಿಯ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದು, ಆರೋಪಿ ಯಾವ ಕಾರಣಕ್ಕಾಗಿ ಮಗು ಕದ್ದಿದ್ದಾಳೆ ಎನ್ನುವುದು ತಿಳಿಯಬೇಕಿದೆ. ಸದ್ಯ ತನಿಖೆ ಮುಂದುವರೆಸಲಾಗಿದೆ ತಿಳಿಸಿದರು.