Tag: Hyderabad

  • ಮೋದಿ ಹತ್ಯೆಗೆ ಸಂಚು: ವರವರ ರಾವ್ ಬಂಧನಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ

    ಮೋದಿ ಹತ್ಯೆಗೆ ಸಂಚು: ವರವರ ರಾವ್ ಬಂಧನಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಸಂ ಸಂಸ್ಥಾಪಕ ಮತ್ತು ಕ್ರಾಂತಿಕಾರಿ ಬರಹಗಾರ ವರವರ ರಾವ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದು, ಈಗ ದೆಹಲಿ ಹೈಕೋರ್ಟ್ ಬಂಧನಕ್ಕೆ ತಡೆಯಾಜ್ಞೆ ನೀಡಿದೆ.

    ಇಂದು ಹೈದರಾಬಾದ್‍ಗೆ ಬಂದಿದ್ದ ಪುಣೆ ಪೊಲೀಸ್ ತಂಡವು, ಸ್ಥಳೀಯ ಪೊಲೀಸರ ಸಹಾಯ ಪಡೆದು, ನಗರದ ವಿವಿಧೆಡೆ ವರವರ ರಾವ್ ಪತ್ತೆಗಾಗಿ ಶೋಧಕಾರ್ಯ ನಡೆಸಿದ್ದರು. ಚಿಕ್ಕಡ್‍ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಜವಾಹರ್ ನಗರದಲ್ಲಿರುವ ವರವರ ರಾವ್ ಮನೆಗೆ 20ಕ್ಕೂ ಹೆಚ್ಚು ಪುಣೆ ಮಫ್ತಿ ವೇಷದ ಪೊಲೀಸರು ಭೇಟಿ ನೀಡಿದ್ದರು. ಈ ವೇಳೆ ಕೆಲ ಹೊತ್ತು ರಾವ್ ಅವವನ್ನು ವಿಚಾರಣೆಗೆ ಒಳಪಡಿಸಿ ಬಳಿಕ ಬಂಧಿಸಿದ್ದರು.

    ವರವರ ರಾವ್ ಹಾಗೂ ಕುಟುಂಬಸ್ಥರ ಮನೆ ಮೇಲೆ ಅಷ್ಟೇ ಅಲ್ಲದೆ ಪತ್ರಕರ್ತರಾದ ಕೆ.ವಿ.ಕುಮಾರನಾಥ್, ಕ್ರಾಂತಿ ತೆಕುಲ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ.ಸತ್ಯನಾರಾಯಣ ಅವರ ಮನೆ ಮೇಲೂ ಪೊಲೀಸರು ದಾಳಿ ಮಾಡಿ, ಶೋಧ ನಡೆಸಿದ್ದಾರೆ ಎಂದು ವರದಿಯಾಗಿದೆ.

    ಏನಿದು ಪ್ರಕರಣ?
    ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಚುರುಕು ಕಾರ್ಯಾಚರಣೆ ನಡೆಸಿದ್ದರು. ಇತ್ತೀಚೆಗೆ ಮಾನವಹಕ್ಕು ಕಾರ್ಯಕರ್ತ ರೋನಾ ಜಾಕೋಬ್ ವಿಲ್ಸನ್ ಅವರ ದೆಹಲಿಯ ಮನೆಯಲ್ಲಿ ಕೆಲವು ಪತ್ರಗಳನ್ನು ವಶಕ್ಕೆ ಪಡೆದಿದ್ದರು. ಆ ಪತ್ರಗಳಲ್ಲಿ ವರವರ ರಾವ್ ಹೆಸರು ಉಲ್ಲೇಖವಾಗಿದೆ. ಅವರನ್ನು ಬಂಧಿಸಲು ಅನುಮತಿ ನೀಡುವಂತೆ ಕೋರ್ಟ್‍ಗೆ ಮನವಿ ಮಾಡಿಕೊಂಡಿದ್ದರು. ಇನ್ನು ರಾವ್ ನಕ್ಸಲ್ ಸಂಘಟನೆಗಳಿಗೆ ಹಾಗೂ ಅವರು ನಡೆಸುತ್ತಿರುವ ದಾಳಿಗೆ ಆರ್ಥಿಕ ನೆರವು ನೀಡುತ್ತಿದ್ದರು ಎನ್ನುವ ಆರೋಪವೂ ಕೇಳಿ ಬಂದಿದೆ.

    ವರವರ ರಾವ್ ಬಂಧನಕ್ಕೆ ಖಂಡಿಸಿ ಎಡಪಕ್ಷಗಳ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ಈಗಾಗಲೇ ಮದುವೆಯಾಗಿದ್ದೇನೆ: ರಾಹುಲ್ ಗಾಂಧಿ

    ನಾನು ಈಗಾಗಲೇ ಮದುವೆಯಾಗಿದ್ದೇನೆ: ರಾಹುಲ್ ಗಾಂಧಿ

    ಹೈದರಾಬಾದ್: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಮದುವೆಯ ಕುರಿತು ಪ್ರಶ್ನೆಗೆ ಉತ್ತರಿಸಿ ತಾನು ಈಗಾಗಲೇ ಪಕ್ಷವನ್ನು ಮದುವೆಯಾಗಿದ್ದಾಗಿ ಹೇಳಿದ್ದಾರೆ.

    ಸದ್ಯ ರಾಹುಲ್ ಗಾಂಧಿ ಎರಡು ದಿನಗಳ ಹೈದರಾಬಾದ್ ಪ್ರವಾಸದಲ್ಲಿದ್ದು, ಈ ವೇಳೆ ಕೆಲ ಪತ್ರಕರ್ತರು ಮದುವೆಯ ಕುರಿತು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿರುವ ರಾಹುಲ್, ನಾನು ಈಗಾಗಲೇ ಪಕ್ಷದೊಂದಿಗೆ ಮದುವೆಯಾಗಿದ್ದೇನೆ ಎಂದು ಉತ್ತರಿಸಿದ್ದಾರೆ.

    ಇದೇ ವೇಳೆ 2019ರ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆ ಆಗುವುದಿಲ್ಲ ಎಂದು ಭವಿಷ್ಯ ನುಡಿದ ಅವರು ಚುನಾವಣೆಯಲ್ಲಿ ಬಿಜೆಪಿ 230 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ಮೈತ್ರಿಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ನೇರ ಉತ್ತರವನ್ನು ನೀಡದ ರಾಹುಲ್, ಈ ಕುರಿತು ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದು, ಮುಂದಿನ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸ್ವತಃ ಬಲದಿಂದ ಸರ್ಕಾರ ರಚಿಸಲಿದೆ. ಈ ಹಿಂದಿನ 2014ರ ಚುನಾವಣೆಗಿಂತಲೂ ಉತ್ತಮ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ತೆಲಂಗಾಣದಲ್ಲಿ ಕುಟುಂಬವೊಂದು ಆಡಳಿತ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೂರ್ಯಗ್ರಹಣದ ದಿನದಂದೇ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದರ್ಶನಕ್ಕೆ ಗ್ರಹಣ!

    ಸೂರ್ಯಗ್ರಹಣದ ದಿನದಂದೇ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದರ್ಶನಕ್ಕೆ ಗ್ರಹಣ!

    ತಿರುಪತಿ/ಹೈದರಾಬಾದ್: ತಿಮ್ಮಪ್ಪನ ಸನ್ನಿಧಿಯಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣ ಇಂದಿನಿಂದ ಆರಂಭಗೊಳ್ಳಲಿದೆ.

    ಪೂಜೆಯ ಭಾಗವಾಗಿ ಇಂದು ರಾತ್ರಿ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ತಿಮ್ಮಪ್ಪನ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದ್ದು, ಭಾನುವಾರ ಬೆಳಗ್ಗೆ 6 ಗಂಟೆಯಿಂದ ಆಗಮಶಾಸ್ತ್ರದ ಪ್ರಕಾರ ಧಾರ್ಮಿಕ ವಿಧಿವಿಧಾನ ಆರಂಭವಾಗಲಿದೆ. ವಿಶೇಷ ಮಹಾಸಂಪ್ರೋಕ್ಷಣೆ ಕಾರ್ಯವನ್ನು ಆಂಧ್ರ, ಕರ್ನಾಟಕ, ತೆಲಂಗಾಣದ 45 ಆಗಮ ಪಂಡಿತರು ನಡೆಸಲಿದ್ದಾರೆ. ಬಳಿಕ ಗುರುವಾರದವರೆಗೂ ತಿಮ್ಮಪ್ಪನ ಪದತಳದಲ್ಲಿ ಅಷ್ಟಬಂಧನ ಬಾಲಾಲಯ ಮಹಾ ಸಂಪ್ರೋಕ್ಷಣೆ ಮಾಡಲಾಗುತ್ತದೆ.

    ಮಹಾ ಯಾಗಕ್ಕಾಗಿ ತಿರುಮಲದ ಯೋಗಶಾಲೆಯಲ್ಲಿ 28 ಹೋಮ ಗುಂಡಿ ನಿರ್ಮಾಣ ಮಾಡಲಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತುಪ್ಪದ ದೀಪದ ಬೆಳಕಿನಲ್ಲೇ ಹೋಮ ಹವನ ನಡೆಸಲು ತೀರ್ಮಾನ ಮಾಡಲಾಗಿದೆ. ಈ ವೇಳೆ ಭಕ್ತರ ದರ್ಶನಕ್ಕೆ ದೇವಾಲಯದ ಟಿಟಿಡಿ ಸಮಿತಿ ನಿರ್ಬಂಧ ಹೇರಿದೆ. ಟಿಟಿಡಿ ಗುರುವಾರದಿಂದಲೇ ತಿಮ್ಮಪ್ಪನ ದಿವ್ಯ ದರ್ಶನ, ಸರ್ವದರ್ಶನ ಟೋಕನ್ ನೀಡುವುದನ್ನು ರದ್ದು ಮಾಡಿದ್ದು, ಸರತಿ ಸಾಲಿನಲ್ಲಿ ಬರುವ ಭಕ್ತರಿಗೂ ಮಿತಿ ಹೇರಿದೆ.

    ಏನಿದು ಬಾಲಾಲಯ ಮಹಾಸಂಪ್ರೋಕ್ಷಣೆ?: ತಿಮ್ಮಪ್ಪನ ಮೂಲವಿರಾಟ್ ಮತ್ತು ಇತರೆ ದೇವರ ವಿಗ್ರಹಗಳ ಶಕ್ತಿಯನ್ನು ಬಿಂಬದಿಂದ ಕುಂಭದೊಳಕ್ಕೆ ಆವಾಹನೆ ಮಾಡುವ ಪ್ರಕ್ರಿಯೆಯಾಗಿದೆ. ಧಾರ್ಮಿಕ ಆಚಾರಣೆಯನ್ನು 12 ವರ್ಷಗಳಿಗೆ ಒಮ್ಮೆ ಮಾತ್ರ ಮಾಡಲಾಗುತ್ತದೆ.

    ಅಷ್ಟಬಂಧನ: 8 ರೀತಿಯ ವಸ್ತುಗಳಿಂದ ತಯಾರು ಮಾಡಿದ ಚೂರ್ಣ. ಈ ಚೂರ್ಣದ ಆಯಸ್ಸು 12 ವರ್ಷಗಳ ಕಾಲ ಇರುತ್ತದೆ. ಈ ಅಷ್ಟ ಬಂಧನವನ್ನು ತಿಮ್ಮಪ್ಪನ ಪಾದದಲ್ಲಿ ಇರಿಸುತ್ತಾರೆ. ವಿಶೇಷವಾಗಿ ಮಹಾಸಂಪ್ರೋಕ್ಷಣೆ ವೇಳೆ ದೇಗುಲದ ಸಿಬ್ಬಂದಿಗೂ ರಾಮುಲವಾರಿ ಮೇಡ ದಾಟಲು ಅವಕಾಶ ಇರಲ್ಲ.

    30 ಸಾವಿರ ಭಕ್ತಿಗೆ ಮಾತ್ರ ಅವಕಾಶ: ದೇವರಿಗೆ ನಡೆಯುವ ಪ್ರಕ್ರಿಯೆ ಬಾಲಾಲಯ ಮಹಾಸಂಪ್ರೋಕ್ಷಣೆ ವಿಶೇಷ ಪೂಜಾ ಕಾರ್ಯದ ದಿನಗಳಲ್ಲಿ ಟಿಟಿಡಿ ಸಮಿತಿ 30 ಸಾವಿರ ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಿದೆ. ಆಗಸ್ಟ್ 16 ರ ವರೆಗೂ ಈ ನಿಯಮವನ್ನು ಪಾಲನೆ ಮಾಡಲಾಗುತ್ತದೆ ಎಂದು ಟಿಟಿಡಿ ಸಮಿತಿ ತಿಳಿಸಿದೆ. ಈ ಹಿಂದಿನ ವರ್ಷಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ಪ್ರತಿನಿತ್ಯ ಸುಮಾರು 1 ಲಕ್ಷ ಮಂದಿ ದೇವರ ದರ್ಶನ ಪಡೆಯುತ್ತಿದ್ದರು.

    ಈ ಹಿಂದೆ ಬಾಲಾಲಯ ಮಹಾಸಂಪ್ರೋಕ್ಷಣೆ ನಡೆಯುವ 6 ದಿನಗಳ ಅವಧಿಯಲ್ಲಿ ಭಕ್ತರಿಗೆ ದೇವರ ದರ್ಶನ ಕಾರ್ಯ ನೀಡದಿರಲು ಟಿಟಿಡಿ ನಿರ್ಧರಿಸಿತ್ತು. ಆದರೆ ಈ ಬಳಿಕ ನಡೆದ ಚರ್ಚೆಗಳಲ್ಲಿ ಭಕ್ತರಿಂದ ಒತ್ತಡ ಹೆಚ್ಚಾಗಿದ್ದರಿಂದ ಸದ್ಯ 30 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಪತ್ನಿ ಮೇಲಿನ ಸಿಟ್ಟಿಗೆ ಮೂವರು ಮಕ್ಕಳನ್ನು ನದಿಗೆ ಎಸೆದು ಕೊಂದ!

    ಪತ್ನಿ ಮೇಲಿನ ಸಿಟ್ಟಿಗೆ ಮೂವರು ಮಕ್ಕಳನ್ನು ನದಿಗೆ ಎಸೆದು ಕೊಂದ!

    ಹೈದರಾಬಾದ್: ಆಂಧ್ರದ ವ್ಯಕ್ತಿಯೊಬ್ಬ ಪತ್ನಿ ಮೇಲಿನ ಸಿಟ್ಟಿಗೆ ತನ್ನ ಮೂವರು ಗಂಡು ಮಕ್ಕಳನ್ನು ನದಿಗೆ ಎಸೆದು ಕೊಲೆ ಮಾಡಿರುವ ಘಟನೆ ಚಿತ್ತೂರ್ ಜಿಲ್ಲೆಯಲ್ಲಿ ನಡೆದಿದೆ.

    ಮಕ್ಕಳಾದ ಪುನೀತ್(5), ಸಂಜಯ್(3), ಮತ್ತು ರಾಹುಲ್(2 ತಿಂಗಳು) ಕೊಲೆ ಮಾಡಿ ವೆಂಕಟೇಶ್ ಹತ್ಯೆಗೈದು ಈಗ ಪರಾರಿಯಾಗಿದ್ದಾನೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತನ್ನ ಹೆಂಡತಿಯೊಂದಿಗೆ ಗಲಾಟೆ ಮಾಡಿಕೊಂಡ ಬಳಿಕ ತಂದೆ ವೆಂಕಟೇಶ್ ಮೂವರು ಮಕ್ಕಳನ್ನು ಕರೆದುಕೊಂಡು ಹೋಗಿ ನದಿಯೊಳಗೆ ಎಸೆದಿದ್ದಾನೆ. ನಂತರ ಸೋಮವಾರ ಬೆಳಗ್ಗೆ ಮಕ್ಕಳ ಮೃತದೇಹಗಳು ನೀರಿನಲ್ಲಿ ತೇಲಾಡುತ್ತಿರುವುದನ್ನು ಗ್ರಾಮಸ್ಥರು ನೋಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ವೆಂಕಟೇಶ್ ಕಟ್ಟಡ ನಿರ್ಮಾಣದ ಕೆಲಸವನ್ನು ಮಾಡುತ್ತಿದ್ದನು. ಪತ್ನಿ ಅಮರಾವತಿ ಈತನಿಗೆ ಎರಡನೇ ಪತ್ನಿ. ಮೊದಲ ಹೆಂಡತಿಗೆ ಮಕ್ಕಳಾಗದ ಕಾರಣ ಎರಡನೇ ಮದುವೆಯಾಗಿದ್ದನು.

    ವೆಂಕಟೇಶ್ ಮದ್ಯಸೇವನೆ ಮಾಡಿ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೇ ಪತ್ನಿ ಅಮರಾವತಿ ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದಳು. ಭಾನುವಾರ ರಾತ್ರಿ ವೆಂಕಟೇಶ್ ಮದ್ಯಸೇವನೆ ಮಾಡಿ ಅಮರಾವತಿ ತವರು ಮನೆಗೆ ತೆರಳಿ ಆಕೆಯನ್ನು ಮನೆಗೆ ಬರುವಂತೆ ಒತ್ತಾಯಿಸಿದ್ದಾನೆ. ಅಮರಾವತಿ ನಾನು ಆತನ ಜೊತೆ ತೆರಳುವುದಿಲ್ಲ ಎಂದು ಹೇಳಿದ್ದಾಳೆ. ವೆಂಕಟೇಶ್ ಕುಡಿದ ನಶೆಯಲ್ಲೇ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಹಳ್ಳಿಗೆ ತೆರಳುತ್ತಾನೆ. ಹಳ್ಳಿಗೆ ಬರುವ ದಾರಿ ಮಧ್ಯದಲ್ಲಿ ಮೂವರು ಮಕ್ಕಳನ್ನು ನದಿಯೊಳಗೆ ಎಸೆದು ಏನು ಆಗಿಯೇ ಇಲ್ಲವೆಂಬಂತೆ ಮನೆಗೆ ತೆರಳಿ ಮಲಗುತ್ತಾನೆ. ಸೋಮವಾರ ನೀರಿನಲ್ಲಿ ತೆಲುತ್ತಿದ್ದ ಕಂದಮ್ಮಗಳ ದೇಹವನ್ನು ಕಂಡ ಗ್ರಾಮಸ್ಥರು ಅಮರಾವತಿಗೆ ಮಾಹಿತಿ ತಿಳಿಸುತ್ತಾರೆ.

    ವೆಂಕಟೇಶ್ ತನ್ನ ಮಕ್ಕಳನ್ನು ಈ ರೀತಿ ಕ್ರೂರವಾಗಿ ಕೊಲ್ಲುತ್ತಾನೆಂದು ಅಂದುಕೊಂಡಿರಲಿಲ್ಲ ಎಂದು ಅಮರಾವತಿ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಕೃತ್ಯವನ್ನು ಎಸಗಿ ಪರಾರಿಯಾಗಿರುವ ಆರೋಪಿ ವೆಂಕಟೇಶ್‍ನನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 1,125 ನಕ್ಷತ್ರ ಆಮೆ ಕಳ್ಳಸಾಗಾಣೆ – ಮೂವರ ಬಂಧನ

    1,125 ನಕ್ಷತ್ರ ಆಮೆ ಕಳ್ಳಸಾಗಾಣೆ – ಮೂವರ ಬಂಧನ

    ಹೈದರಾಬಾದ್: ಅಕ್ರಮವಾಗಿ 1,125 ನಕ್ಷತ್ರ ಆಮೆಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ 3 ಆರೋಪಿಗಳನ್ನು ಬಂಧಿಸಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

    ಈ ಆಮೆಗಳನ್ನು ಅಕ್ರಮವಾಗಿ 3 ಆರೋಪಿಗಳು ಕಳ್ಳಸಾಗಾಣೆ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

    ಆರೋಪಿಗಳಿಂದ ಸದ್ಯ ವಶಕ್ಕೆ ಪಡೆದ ಆಮೆಗಳನ್ನು ಅರಣ್ಯ ಇಲಾಖೆ ಗೆ ವಶಕ್ಕೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ಸಂಪೂರ್ಣ ತನಿಖೆ ನಡೆದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

    ಸ್ಟಾರ್ ಆಮೆ ಭಾರತದಲ್ಲಿ ದೊರೆಯುವ ಅಪರೂಪದ ಜಾತಿಗೆ ಸೇರಿದಾಗಿದ್ದು, ಕಾಳಸಂತೆಯಲ್ಲಿ ಇವುಗಳಿಗೆ ಹೆಚ್ಚಿನ ಲಕ್ಷ ರೂ.ಗಳಲ್ಲಿ ಬೆಲೆ ಇರುವುದರಿಂದ ಇತ್ತೀಚೆಗೆ ಇವುಗಳ ಕಳ್ಳಸಾಗಾಣೆ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಆಮೆಗಳನ್ನು ಮನೆಯಲ್ಲಿ ಸಾಕಾಣೆ ಮಾಡಿದರೆ ಅದೃಷ್ಟ ಬರುತ್ತದೆ ಎಂಬ ಮೂಢ ನಂಬಿಕೆಯೂ ಕಳ್ಳಸಾಗಾಣೆಗೆ ಕಾರಣವಾಗಿದ್ದು, ಭಾರತದಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಯಲ್ಲೂ ನಕ್ಷತ್ರ ಆಮೆಗಳಿಗೆ ಭಾರೀ ಬೇಡಿಕೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಗ್ರಾನೈಟ್ ಕಲ್ಲುಗಳ ಕ್ವಾರಿಯಲ್ಲಿ ಸ್ಫೋಟ- 10 ಮಂದಿ ದುರ್ಮರಣ

    ಗ್ರಾನೈಟ್ ಕಲ್ಲುಗಳ ಕ್ವಾರಿಯಲ್ಲಿ ಸ್ಫೋಟ- 10 ಮಂದಿ ದುರ್ಮರಣ

    ಹೈದಾರಬಾದ್: ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಗ್ರಾನೈಟ್ ಕಲ್ಲುಗಳ ಕ್ವಾರಿಯಲ್ಲಿ ಸ್ಫೋಟಗೊಂಡು 10 ಮಂದಿ ಮೃತಪಟ್ಟಿದ್ದಾರೆ.

    ಈ ಅವಘಡ ಶುಕ್ರವಾರ ರಾತ್ರಿ ಕರ್ನೂಲ್‍ನ ಹಾಥಿ ನೆಲ್ಗಾಲ್ ನಲ್ಲಿ ಸಂಭವಿಸಿದ್ದು, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಐದಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕರ್ನೂಲ್‍ನ ಎಸ್ ಪಿ ಹೇಳಿದ್ದಾರೆ.

    ಕಲ್ಲುಗಳು ಮುರಿದು ಬೀಳುತ್ತಿದ್ದಂತೆಯೇ ಬೆಂಕಿ ಸ್ಫೋಟಗೊಂಡಿದ್ದು, ಸುತ್ತಮುತ್ತ ಸ್ಥಳಗಳಿಗೂ ಬೆಂಕಿ ಆವರಿಸಿದೆ. ಅಷ್ಟೇ ಅಲ್ಲದೇ 3 ಟ್ರಾಕ್ಟರ್, 1 ಲಾರಿ ಮತ್ತು 2 ಶೆಡ್‍ಗಳು ಬೆಂಕಿಗೆ ಆಹುತಿಯಾಗಿವೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ.

    ಈ ಪ್ರಕರಣವನ್ನು ಯು/ಎಸ್ 304, ಭಾಗ-2 ರ ಸ್ಫೋಟಕಕಾರಿ ವಸ್ತುಗಳ ಕಾಯ್ದೆಯಡಿ ಐಪಿಸಿ ಸೆಕ್ಷನ್ 3 ಮತ್ತು 5 ರಲ್ಲಿ ದಾಖಲಿಸಿಕೊಂಡಿದ್ದು, ಘಟನೆ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ಎಸ್‍ಪಿ ಹೇಳಿದ್ದಾರೆ.

    ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವಘದ ಬಗ್ಗೆ ಮರುಕ ವ್ಯಕ್ತಪಡಿಸಿದ್ದು, ಮೃತಪಟ್ಟ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡಿದರು. ಹಾಗೂ ಘಟನೆ ಬಗ್ಗೆ ತೀವ್ರ ಕಾರ್ಯಚರಣೆ ಕೈಗೊಳ್ಳುವಂತೆ ಆದೇಶ ನೀಡಿದರು.

  • ಉಸಿರಾಟದ ತೊಂದರೆಯಿಂದಾಗಿ ವಿಮಾನದಲ್ಲೇ ಮೃತಪಟ್ಟ ಹಸುಗೂಸು

    ಉಸಿರಾಟದ ತೊಂದರೆಯಿಂದಾಗಿ ವಿಮಾನದಲ್ಲೇ ಮೃತಪಟ್ಟ ಹಸುಗೂಸು

    ಹೈದರಾಬಾದ್: ಉಸಿರಾಟದ ಸಮಸ್ಯೆಯಿಂದಾಗಿ ನಾಲ್ಕು ತಿಂಗಳ ಹಸುಗೂಸೊಂದು ವಿಮಾನದಲ್ಲೇ ಮೃತಪಟ್ಟಿದೆ.

    ಬೆಂಗಳೂರಿನಿಂದ ಪಾಟ್ನಾಗೆ ತೆರಳುತ್ತಿದ್ದ ವಿಮಾನದಲ್ಲಿ 4 ತಿಂಗಳ ಮಗುವೊಂದು ಉಸಿರಾಟದ ತೊಂದರೆಯಿಂದ ಮೃತಪಟ್ಟಿದೆ. ಮಂಗಳವಾರ ಬೆಳಗ್ಗೆ 6.15 ಕ್ಕೆ 4 ತಿಂಗಳ ಮಗುವಿನೊಂದಿಗೆ ಪೋಷಕರು ಇಂಡಿಗೋದ 6E-897 ವಿಮಾನದಲ್ಲಿ ಬೆಂಗಳೂರಿನಿಂದ ಪಾಟ್ನಾಗೆ ತೆರಳುತ್ತಿದ್ದರು. ಸುಮಾರು 7.30ರ ಹೊತ್ತಿಗೆ ಮಗುವಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

    ಕೂಡಲೇ ಎಚ್ಚೆತ್ತ ವಿಮಾನ ಸಿಬ್ಬಂದಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ತುರ್ತು ಕಾರಣದಿಂದ ವಿಮಾನದ ಮಾರ್ಗವನ್ನು ಬದಲಾಯಿಸಿ, ಹೈದರಬಾದ್ ನಲ್ಲಿ ಲ್ಯಾಂಡ್ ಮಾಡಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಮಗುವನ್ನು ಅಂಬುಲೆನ್ಸ್ ಮೂಲಕ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಮಗುವನ್ನು ಪರೀಕ್ಷಿಸಿದ ವೈದ್ಯರು, ಈಗಾಗಲೇ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಇಂಡಿಗೋ ವಿಮಾನಯಾನ ಅಧಿಕಾರಿಗಳು, ಮಂಗಳವಾರ ಬೆಂಗಳೂರಿನಿಂದ ಪಾಟ್ನಾಗೆ ತೆರಳುತಿದ್ದ ವಿಮಾನದಲ್ಲಿ 4 ತಿಂಗಳ ಮಗುವೊಂದು ತೀವ್ರ ಉಸಿರಾಟ ತೊಂದರೆಯಿಂದ ಬಳಲಿತ್ತು. ಹೀಗಾಗಿ ವಿಮಾನವನ್ನು ಕೂಡಲೇ ಹೈದರಾಬಾದ್‍ನಲ್ಲಿ ಲ್ಯಾಂಡ್ ಮಾಡಿ, ಆಸ್ಪತ್ರೆಗೆ ದಾಖಲಿಸಿದರೂ, ಮಗು ಮೃತಪಟ್ಟಿದೆ ಎಂದು ಸಂತಾಪ ಸೂಚಿಸಿದ್ದಾರೆ.

    ಘಟನೆ ಸಂಬಂಧ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನಪುಂಸಕ ಎಂದ ಪತ್ನಿ – ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನ ಮಾವನಿಗೆ ಕಳಿಸ್ದ!

    ನಪುಂಸಕ ಎಂದ ಪತ್ನಿ – ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನ ಮಾವನಿಗೆ ಕಳಿಸ್ದ!

    ಹೈದರಾಬಾದ್: ಮಹಿಳೆಯೊಬ್ಬರು ಪತಿಗೆ ನಪುಂಸಕ ಎಂದಿದ್ದಕ್ಕೆ ಪತಿ ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನು ತನ್ನ ಮಾವನಿಗೆ ಕಳುಹಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ವಿಬಾವಾಸು ಬಂಧಿತ ಆರೋಪಿ. ಈಗ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದು ಜೈಲಿಗೆ ಕಳುಹಿಸಿದ್ದಾರೆ. ಪತ್ನಿ ತನ್ನ ಪತಿ ನಪುಂಸಕ ಎಂದು ವಿಚ್ಛೇದನ ಪಡೆಯಲು ಕೋರ್ಟ್ ನ ಮೆಟ್ಟಿಲೇರಿದ್ದಾರೆ. ಆದರೆ ಇದರಿಂದ ಕೋಪಕೊಂಡ ಆರೋಪಿ ವಿಬಾವಾಸು ಇನ್ನೊಬ್ಬಳ ಜೊತೆ ಇದ್ದ ಪೋರ್ನ್ ವಿಡಿಯೋವನ್ನು ಪತ್ನಿಯ ತಂದೆ ಮತ್ತು ಚಿಕ್ಕಮ್ಮ ಅವರಿಗೆ ಕಳುಹಿಸಿದ್ದಾನೆ ಎಂದು ಇನ್ಸ್ ಪೆಕ್ಟರ್ ಡಿ. ಚೈತ್ರಾ ಅವರು ಹೇಳಿದ್ದಾರೆ.

    ಏನಿದು ಪ್ರಕರಣ?
    ಹೈದರಾಬಾದ್ ನ ಲಾಲ್ ಬಹದ್ದೂರ ನಗರದ ನಿವಾಸಿ ವಿಬಾವಾಸು ಮತ್ತು ಮುತಾಮಿಜ್ ನಗರ ನಿವಾಸಿ ಮೀನಾಕ್ಷಿ (ಹೆಸರು ಬದಲಾಯಿಸಲಾಗಿದೆ) 2016 ರಲ್ಲಿ ಮದುವೆಯಾಗಿತ್ತು. ಎರಡು ಕುಟುಂಬದವರು ನೋಡಿ ಒಪ್ಪಿ ಮದುವೆ ಮಾಡಿದ್ದರು. ಆದರೆ ಈ ದಂಪತಿ ಮದುವೆಯಾಗಿ ಕೇವಲ 15ದಿನಗಳ ಮಾತ್ರ ಜೊತೆಯಲ್ಲಿದ್ದರು. ಆದರೆ ಪದೇ ಪದೇ ಇಬ್ಬರು ಜಗಳ ಮಾಡುತ್ತಿದ್ದರು. ಇದರಿಂದ ಪತ್ನಿ ಮೀನಾಕ್ಷಿ ತನ್ನ ತವರು ಮನೆಗೆ ಹಿಂದಿರುಗಿದ್ದರು. ನಂತರ ಎರಡೂ ಕುಟುಂಬದವರು ಅವರಿಗೆ ಬುದ್ಧಿ ಹೇಳಿ ಒಂದು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ.

    ಕೊನೆಗೆ ಮೀನಾಕ್ಷಿ ವಿಚ್ಛೇದನಕ್ಕಾಗಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿದ್ದರು. ಆಗ ಪತ್ನಿ ಮೀನಾಕ್ಷಿ ಕೋರ್ಟ್ ನಲ್ಲಿ ಎಲ್ಲರ ಮುಂದೆ ನನ್ನ ಪತಿ ನಪುಂಸಕ ಎಂದು ಕಾರಣ ಕೊಟ್ಟಿದ್ದಾರೆ. ಪತ್ನಿ ಹೇಳಿದ ಕಾರಣವನ್ನು ಕೇಳಿದ ವಿಬಾವಾಸು ಕೋಪಗೊಂಡು ಇನ್ನೊಬ್ಬಳ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದು, ಅದನ್ನು ಬೇರೆಯವರ ಕೈಯಲ್ಲಿ ರೆಕಾರ್ಡ್ ಮಾಡಿಸಿದ್ದಾನೆ. ಬಳಿಕ ಆ ಪೋರ್ನ್ ವಿಡಿಯೋವನ್ನು ಪತ್ನಿಯ ತಂದೆ ಮತ್ತು ಚಿಕ್ಕಮ್ಮಗೆ ಕಳುಹಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ವಿಬಾವಾಸು ಕಳುಹಿಸಿದ್ದ ವಿಡಿಯೋವನ್ನು ನೋಡಿದ ತಕ್ಷಣ ತಂದೆ ಮತ್ತು ಚಿಕ್ಕಮ್ಮ ಕೂಡಲೇ ಚೆನ್ನೈ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆರೋಪಿ ವಿಚಾರಣೆ ವೇಳೆ ತಾನೇ ವಿಡಿಯೋ ಮಾಡಿ ಕಳುಹಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಸದ್ಯಕ್ಕೆ ಆರೋಪಿಯ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ಕಿರುಕುಳ, ಅಶ್ಲೀಲ ವಿಡಿಯೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಜೈಲಿಗೆ ಕಳುಹಿಸಿದ್ದಾರೆ.

  • ಲವ್ವರ್ ಜೊತೆ ಸೆಕ್ಸ್ ಮಾಡಿ, ಅದೇ ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ್ಳು!

    ಲವ್ವರ್ ಜೊತೆ ಸೆಕ್ಸ್ ಮಾಡಿ, ಅದೇ ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ್ಳು!

    ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಲೈಂಗಿಕ ಸಂಪರ್ಕ ಬೆಳಿಸಿ ಬಳಿಕ ಅದೇ ಮಂಚಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    ಈ ಘಟನೆ ಪ್ರಕಾಶಂ ಜಿಲ್ಲೆಯ ಚೌಟಾಪಲ್ಲಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತನನ್ನು ಪೊಡಿಲಿ ನಿವಾಸಿ ಶೇಕ್ ಶಬ್ಬೀರ್ (32) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಶಕೀರಾ (28) ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾಳೆ.

    ಘಟನೆಯ ವಿವರ:
    ಶಬ್ಬೀರ್ ಮರಿಪುಡಿ ಪೊಲೀಸ್ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಜೊತೆಗೆ ಕೋಳಿ ಫಾರಂ ಉದ್ಯಮವನ್ನು ಮಾಡುತ್ತಿದ್ದನು. ಇವರಿಬ್ಬರ ನಡುವೆ ಪ್ರೀತಿ ಇತ್ತು. ಆದರೆ ಶರೀರಾ ಮತ್ತು ಶಬ್ಬೀರ್ ಬೇರೆ ಬೇರೆ ಮದುವೆಯಾಗಿದ್ದರು. ಮದುವೆಯ ನಂತರವೂ ಇವರಿಬ್ಬರು ತಮ್ಮ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದರು. ಇವರಿಬ್ಬವರು ಆಗಾಗ ಕೋಳಿ ಫಾರಂನಲ್ಲಿ ಭೇಟಿಯಾಗುತ್ತಿದ್ದರು.

    ಇವರಿಬ್ಬರ ನಡುವೆ ಕಳೆದ 8 ತಿಂಗಳಿಂದ ಹಣದ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಆದ್ದರಿಂದ ಶಕೀರಾ ಶನಿವಾರ ರಾತ್ರಿ ಶಬ್ಬೀರ್ ನನ್ನು ಭೇಟಿ ಮಾಡಲು ನಿರ್ಧಾರ ಮಾಡಿದ್ದಳು. ಆದರೆ ಆಕೆ ಮೊದಲೆ ಶಬ್ಬೀರನ್ನ ಕೊಲೆ ಮಾಡಲು ಪ್ಲಾನ್ ಮಾಡಿಕೊಂಡು ಪೆಟ್ರೋಲ್ ಸಮೇತ ಅಲ್ಲಿಗೆ ಬಂದಿದ್ದಳು. ನಂತರ ಆಕೆ ಶಬ್ಬೀರ್ ಗೆ ಸೆಕ್ಸ್ ಮಾಡುವಂತೆ ಹೇಳಿದ್ದಾಳೆ. ಅದರಂತೆಯೇ ಸೆಕ್ಸ್ ಆದ ಬಳಿಕ ಅದೇ ಕಬ್ಬಿಣದ ಮಂಚಕ್ಕೆ ಸರಪಳಿಯಿಂದ ಶಬ್ಬೀರ್ ಕಟ್ಟಿಹಾಕಿದ್ದಾಳೆ. ನಂತರ ತಾನು ತಂದಿದ್ದ ಪೆಟ್ರೋಟ್ ಹಾಕಿ ಬೆಂಕಿ ಹಚ್ಚಿದ್ದಾಳೆ ಹೋಗಿದ್ದಾಳೆ ಎಂದು ಪೊಡಿಲಿ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸರಾವ್ ಹೇಳಿದ್ದಾರೆ.

    ಸೋಮವಾರ ಮುಂಜಾನೆ ಕಾರ್ಮಿಕರು ಕೆಲಸಕ್ಕೆ ಬಂದಾಗ ನೋಡಿ ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಆರೋಪಿ ಶಕೀರಾ ಪೊಲೀಸ್ ಠಾಣೆಗೆ ಬಂದು ತಾನು ಕೊಲೆ ಮಾಡಿರುವುದನ್ನು ಹೇಳಿ ಶರಣಾಗಿದ್ದಾಳೆ. ಸದ್ಯಕ್ಕೆ ಆರೋಪಿ ಶಕೀರಾಳನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಮದ್ವೆ ಬಗ್ಗೆ ಸ್ಪಷ್ಟನೆ ನೀಡಿದ ಮಿಲ್ಕಿ ಬ್ಯೂಟಿ ತಮನ್ನಾ!

    ಮದ್ವೆ ಬಗ್ಗೆ ಸ್ಪಷ್ಟನೆ ನೀಡಿದ ಮಿಲ್ಕಿ ಬ್ಯೂಟಿ ತಮನ್ನಾ!

    ಹೈದರಾಬಾದ್: ಮಿಲ್ಕಿ ಬ್ಯೂಟಿ ತಮನ್ನಾ ಭಾಟೀಯಾ ಅಮೆರಿಕದ ಡಾಕ್ಟರ್ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ತಮನ್ನಾ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಒಮ್ಮೆ ನಟ, ಮತ್ತೊಮ್ಮೆ ಕ್ರಿಕೆಟರ್ ಈಗ ಡಾಕ್ಟರ್.. ಇದನ್ನು ಕೇಳುತ್ತಿದ್ದರೆ ನಾನು ಪತಿಯ ಶಾಪಿಂಗ್ ಮಾಡುತ್ತಿದ್ದೇನೆ ಎಂದು ಅನ್ನಿಸುತ್ತಿದೆ. ನನ್ನ ಜೀವನದಲ್ಲಿ ಇತಂಹ ಸುದ್ದಿಗಳು ಹರಿದಾಡುತ್ತಿದೆ. ನಾನು ಇಂತಹ ಸುದ್ದಿಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ನಾನು ಈಗ ಸಿಂಗಲ್ ಆಗಿ ಖುಷಿಯಾಗಿದ್ದೇನೆ. ನನ್ನ ಪೋಷಕರು ಕೂಡ ನನ್ನ ಮದುವೆಗೆ ಹುಡುಗ ಹುಡುಕುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ನಾನು ಈಗ ನನ್ನ ಸಿನಿಮಾಗಳನ್ನು ಮಾತ್ರ ಪ್ರೀತಿಸುತ್ತಿದ್ದೇನೆ. ನಾನು ಶೂಟಿಂಗ್‍ನಲ್ಲಿ ಬ್ಯುಸಿ ಇದ್ದಾಗ ಇತಂಹ ಸುದ್ದಿಗಳು ಹೇಗೆ ಹರಡುತ್ತದೆ ಎಂಬ ಆಶ್ಚರ್ಯವಾಗುತ್ತಿದೆ. ಇದು ಅಗೌರವ ತರುವಂತಹ ವಿಷಯ. ನಾನು ಮದುವೆ ಆಗುವುದಾದರೆ ಎಲ್ಲರಿಗೂ ತಿಳಿಸಿಯೇ ಮದುವೆ ಆಗುತ್ತೇನೆ. ಹಾಗಾಂತ ನೀವು ಈ ರೀತಿಯ ಗಾಸಿಪ್ ಗಳನ್ನು ಹರಡಿಸಬಾರದು. ಇದು ಯಾರೋ ಯೋಚಿಸಿಕೊಂಡು ಮಾಡುತ್ತಿರುವ ಗಾಸಿಪ್ ಎಂದು ತಮನ್ನಾ ಟ್ವೀಟ್ ಮಾಡಿದ್ದಾರೆ.

    ವೈರಲ್ ಸುದ್ದಿ ಏನು?:
    ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅಮೆರಿಕದಲ್ಲಿರುವ ಡಾಕ್ಟರ್ ಒಬ್ಬರ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಅಮೆರಿಕದಲ್ಲಿರುವ ಎನ್‍ಆರ್‍ಐ ಡಾಕ್ಟರ್, ವೈದ್ಯ ವೃತ್ತಿ ಅಲ್ಲದೇ ಬೇರೆ ವ್ಯವಹಾರಗಳನ್ನು ಕೂಡ ಮಾಡುತ್ತಿದ್ದಾರೆ. ಇಬ್ಬರು ಒಬ್ಬರಿಗೊಬ್ಬರನ್ನು ಇಷ್ಟಪಡುತ್ತಿದ್ದು, ಶೀಘ್ರವೇ ಮದುವೆಯಾಗಲಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿತ್ತು. ಆದರೆ ತಮನ್ನಾ ಟ್ವೀಟ್ ಮಾಡಿ ಈ ಗಾಸಿಪ್‍ಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

    ತಮನ್ನಾ ಈಗ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ `ಸೈರಾ ನರಸಿಂಹ ರೆಡ್ಡಿ’ ಹಾಗೂ ಹಿಂದಿಯ `ಕ್ವೀನ್’ ಚಿತ್ರದ ರಿಮೇಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.