Tag: Hyderabad

  • ಗೆದ್ದು ಬೀಗಿದ ಕೆಸಿಆರ್ ಗಿಂದು ಪಟ್ಟಾಭಿಷೇಕ – ಜ್ಯೋತಿಷಿಗಳ ಸಲಹೆಯಂತೆ ಮುಹೂರ್ತ ಫಿಕ್ಸ್

    ಗೆದ್ದು ಬೀಗಿದ ಕೆಸಿಆರ್ ಗಿಂದು ಪಟ್ಟಾಭಿಷೇಕ – ಜ್ಯೋತಿಷಿಗಳ ಸಲಹೆಯಂತೆ ಮುಹೂರ್ತ ಫಿಕ್ಸ್

    ಹೈದರಾಬಾದ್: ಅವಧಿಗೂ ಮುನ್ನ ವಿಧಾನಸಭೆ ವಿಸರ್ಜನೆ, ರಾಷ್ಟ್ರ ನಾಯಕರ ಅಬ್ಬರದ ಪ್ರಚಾರ ಇಷ್ಟೆಲ್ಲಾ ಸವಾಲುಗಳ ನಡುವೆಯೂ ಗೆದ್ದು ಬೀಗಿದ ಕೆ. ಚಂದ್ರಶೇಖರ್ ರಾವ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಗೇರುವ ತಯಾರಿಯಲ್ಲಿದ್ದಾರೆ.

    ಜ್ಯೋತಿಷಿಗಳ ಸಲಹೆ ನೀಡಿರುವ ಮುಹೂರ್ತದಲ್ಲಿ, ಅಂದರೆ ಇಂದು ಮಧ್ಯಾಹ್ನದ ಹೊತ್ತಿಗೆ ಕೆಸಿಆರ್ ಪಟ್ಟಾಭಿಷೇಕ ನಡೆಯಲಿದೆ. ಇವರ ಜೊತೆ ಇಬ್ಬರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಐದಾರು ದಿನಗಳ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ಮಾಹಿತಿ ಲಭಿಸಿದೆ.

    ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ನಿರೀಕ್ಷೆಯಂತೆ ಅಧಿಕಾರಕ್ಕೆ ಏರುತ್ತಿದ್ದು, ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್ ಪಕ್ಷ 88 ಸ್ಥಾನ, ಕಾಂಗ್ರೆಸ್ 19 ಹಾಗೂ ತೆಲುಗುದೇಶಂ ಪಕ್ಷ 2, ಇತರೆ 1 ಸ್ಥಾನ ಪಡೆದಿವೆ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ತಿಳಿಸಿದಂತೆ ಟಿಆರ್ ಎಸ್ ಸುಲಭವಾಗಿ ಮ್ಯಾಜಿಕ್ ನಂಬರ್ ಪಡೆದಿತ್ತು.

    2013ರಲ್ಲಿ ಏನಾಗಿತ್ತು?
    2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಆರ್ ಎಸ್ 63 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ 21, ಟಿಡಿಪಿ 15, ಬಿಜೆಪಿ 5 ಹಾಗೂ ಇತರೆ 7 ಸ್ಥಾನಗಳು ಬಂದಿದ್ದವು. ಒಟ್ಟು 119 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ಬಹುಮತಕ್ಕೆ 60 ಸ್ಥಾನಗಳು ಅಗತ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇವಿಎಂಗಳ ಮೇಲೆ ಅನುಮಾನ ಮೂಡುತ್ತಿದೆ – ತೆಲಂಗಾಣ ಕೈ ಮುಖಂಡ

    ಇವಿಎಂಗಳ ಮೇಲೆ ಅನುಮಾನ ಮೂಡುತ್ತಿದೆ – ತೆಲಂಗಾಣ ಕೈ ಮುಖಂಡ

    ಹೈದರಾಬಾದ್: ತೆಲಂಗಾಣದಲ್ಲಿ ಭರ್ಜರಿಯಾಗಿ ಟಿಆರ್‍ಎಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದ ಬೆನ್ನಲ್ಲೆ ಇಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳ ಮೇಲೆಯೇ ಅನುಮಾನ ಮೂಡುತ್ತಿದೆ ಎಂದು ಕಾಂಗ್ರೆಸ್ ಸಮಿತಿ ವಕ್ತಾರ ಉತ್ತಮ್ ಕುಮಾರ್ ರೆಡ್ಡಿ ಶಂಕೆ ವ್ಯಕ್ತಪಡಿಸಿದ್ದಾರೆ.

    ತೆಲಂಗಾಣದಲ್ಲಿ ಟಿಆರ್‍ಎಸ್ ನಾಗಲೋಟ ಕುರಿತು ಪ್ರತಿಕ್ರಿಯಿಸಿರುವ ಅವರು, ಇಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್ ಗಳ ಮೇಲೆ ನಮಗೆ ಅನುಮಾನವಿದೆ. ವಿವಿ ಪ್ಯಾಟ್ ಗಳಲ್ಲಿ ನಮೂದಾಗಿರುವ ದಾಖಲೆಗಳನ್ನು ಸಹ ಪರಿಶೀಲನೆ ನಡೆಸಬೇಕು. ಇವಿಎಂ ಹ್ಯಾಕ್ ಮಾಡಿರುವ ಗುಮಾನಿಯಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಚುನಾವಣಾ ನಿಯಂತ್ರಣಾಧಿಕಾರಿಗಳಿಗೆ ದೂರನ್ನು ನೀಡುತ್ತಾರೆಂದು ಹೇಳಿದ್ದಾರೆ.

    ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಟಿಆರ್‍ಎಸ್ ನಾಯಕರು ಯಾವ ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ ಎಂಬುದು ಹೇಳಲು ಹೇಗೆ ಸಾಧ್ಯ. ಈ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ದಾಖಲಿಸುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ನಿರೀಕ್ಷೆಯಂತೆ ಅಧಿಕಾರಕ್ಕೆ ಏರುವುದು ಖಚಿತವಾಗಿದೆ. ಹಾಲಿ ಅಧಿಕಾರದಲ್ಲಿರುವ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‍ಎಸ್ ಮತ್ತೆ ಅಧಿಕಾರ ಉಳಿಸಿಕೊಳ್ಳುತ್ತದೆ ಎಂದಿದ್ದ ಚುನಾವಣೋತ್ತರ ಸಮೀಕ್ಷೆ ನಿಜವಾಗಿದೆ.ಸದ್ಯದ ಮಾಹಿತಿಗಳ ಪ್ರಕಾರ ಟಿಆರ್‍ಎಸ್ 90 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

     

    ಕಾಂಗ್ರೆಸ್ ಹಾಗೂ ಟಿಡಿಪಿ ಮೈತ್ರಿ ಕೂಟ 20 ಸ್ಥಾನಗಳಲ್ಲಿ ಮಾತ್ರವೇ ಮುನ್ನಡೆ ಸಾಧಿಸಿದೆ. ಇನ್ನು ಬಿಜೆಪಿ 02 ಕ್ಷೇತ್ರ ಹಾಗೂ ಎಐಎಂಎಂ 06 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇದನ್ನೂ ಓದಿ: ನಿರೀಕ್ಷೆಯಂತೆ ತೆಲಂಗಾಣದಲ್ಲಿ ಕೆಸಿಆರ್ ಅಧಿಕಾರಕ್ಕೆ – ಟಿಆರ್‏ಎಸ್ ಜಯಕ್ಕೆ ಕಾರಣ ಏನು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿರೀಕ್ಷೆಯಂತೆ ತೆಲಂಗಾಣದಲ್ಲಿ ಕೆಸಿಆರ್ ಅಧಿಕಾರಕ್ಕೆ – ಟಿಆರ್‏ಎಸ್ ಜಯಕ್ಕೆ ಕಾರಣ ಏನು?

    ನಿರೀಕ್ಷೆಯಂತೆ ತೆಲಂಗಾಣದಲ್ಲಿ ಕೆಸಿಆರ್ ಅಧಿಕಾರಕ್ಕೆ – ಟಿಆರ್‏ಎಸ್ ಜಯಕ್ಕೆ ಕಾರಣ ಏನು?

    ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‏ಎಸ್) ನಿರೀಕ್ಷೆಯಂತೆ ಅಧಿಕಾರಕ್ಕೆ ಏರುವುದು ಖಚಿತವಾಗಿದೆ. ಹಾಲಿ ಅಧಿಕಾರದಲ್ಲಿರುವ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‏ಎಸ್ ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲವೆನ್ನುವ ಚುನಾವಣೋತ್ತರ ಸಮೀಕ್ಷೆಗಳು ಸರಿಯಾಗಿವೆ.

    ಟಿಆರ್‏ಎಸ್ ಮುನ್ನಡೆಗೆ ಕಾರಣಗಳೇನು?
    – ರಾಷ್ಟ್ರೀಯ ಪಕ್ಷಗಳನ್ನು ಒಳಬಿಟ್ಟುಕೊಳ್ಳಲು ತೆಲಂಗಾಣ ಮತದಾರರು ಸಿದ್ಧರಿಲ್ಲ. ಹೀಗಾಗಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಜನ ತಿರಸ್ಕರಿಸಿದ್ದಾರೆ.
    – ಮತದಾರರ ಸಾಂಪ್ರದಾಯಿಕ ಮನಸ್ಥಿತಿಯ ಮೇಲೆ ಸ್ಥಳೀಯ ನಾಯಕರಾದ ಚಂದ್ರಶೇಖರ್ ರಾವ್ ಬಿಗಿಹಿಡಿತ ಹೊಂದಿರುವುದು.
    – ಟಿಆರ್‏ಎಸ್ ಜೊತೆಗೆ ತನ್ನದು ಸ್ನೇಹಮಯ ಕದನ ಎಂದು ಬಿಜೆಪಿ ಹೇಳಿಕೊಂಡಿದ್ದು ಮಾತ್ರವಲ್ಲದೇ ಅದೇ ರೀತಿ ನಡೆದುಕೊಂಡಿತ್ತು. ಹೀಗಾಗಿ ಬಿಜೆಪಿ ತಾನಾಗಿಯೇ ಟಿಆರ್‍ಎಸ್ ಪರ ಪ್ರಚಾರ ಮಾಡಿದಂತಾಗಿತ್ತು.

    – ಚುನಾವಣೆಗೂ ಮೊದಲೇ ಚಂದ್ರಬಾಬು ನಾಯ್ಡು ಪ್ರಭಾವ ಕಡಿಮೆ ಇದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ನಾಯ್ಡು ಜೊತೆ ಕಾಂಗ್ರೆಸ್ ಸೇರಿದರೆ ಲಾಭಕ್ಕಿಂತಲೂ ಕಾಂಗ್ರೆಸ್ಸಿಗೆ ನಷ್ಟವೇ ಹೆಚ್ಚು ಎನ್ನುವ ಮಾತು ಕೇಳಿ ಬಂದಿತ್ತು. ಈ ವಿಶ್ಲೇಷಣೆ ನಿಜವಾಗಿದ್ದು ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡರೂ ಕಡಿಮೆ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಟಿಡಿಎಸ್-ಕಾಂಗ್ರೆಸ್ ಮೈತ್ರಿ ಟಿಆರ್‍ಎಸ್ ಅನ್ನು ಮುಗಿಸುವಷ್ಟು ಬಲಿಷ್ಠವಾಗಿರಲಿಲ್ಲ.

    – ಚಂದ್ರಶೇಖರ್ ರಾವ್ ಅವರಿಗೆ ಪ್ರತಿಪಕ್ಷದಲ್ಲಿ ಪ್ರತಿಸ್ಪರ್ಧಿಗಳು, ಸಿಎಂ ಅಭ್ಯರ್ಥಿಗಳು ಇರಲಿಲ್ಲ. ಜನಪ್ರಿಯವಾದ ಹಲವಾರು ಯೋಜನೆಗಳನ್ನು ಕೆಸಿ ರಾವ್ ಜಾರಿಗೆ ತಂದಿದ್ದರು. ಈ ಬಾರಿಯೂ ನಮ್ಮ ಪಕ್ಷವೇ ಅಧಿಕಾರಕ್ಕೆ ಏರಲಿದೆ ಎನ್ನುವ ಖಚಿತ ವಿಶ್ವಾಸದ ಹಿನ್ನೆಲೆಯಲ್ಲಿ ಚಂದ್ರಶೇಖರ್ ವಿಧಾನಸಭೆಯನ್ನು ವಿಸರ್ಜಿಸಿದ ತಂತ್ರ ಫಲ ನೀಡಿದೆ.

    11.30ರ ವೇಳೆಗೆ ಟಿಆರ್‏ಎಸ್ 91 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಹಾಗೂ ಟಿಡಿಪಿ ಮೈತ್ರಿ ಕೂಟ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 03 ಹಾಗೂ ಎಐಎಂಎಂ 05 ಸ್ಥಾನಗಳಲ್ಲಿ ಮುನ್ನಡೆ ಹೊಂದಿವೆ.

    2013ರಲ್ಲಿ ಏನಾಗಿತ್ತು?
    2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಆರ್‏ಎಸ್ 63 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ 21, ಟಿಡಿಪಿ 15, ಬಿಜೆಪಿ 5 ಹಾಗೂ ಇತರೆ 7 ಸ್ಥಾನಗಳು ಬಂದಿದ್ದವು. ಒಟ್ಟು 119 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ಬಹುಮತಕ್ಕೆ 60 ಸ್ಥಾನಗಳು ಅಗತ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪ್ರಾಮಾಣಿಕ ನಾಯಕ ಸಿಎಂ ಆಗಲೆಂದು ನಾಲಿಗೆ ಕತ್ತರಿಸಿ ದೇವರ ಹುಂಡಿಗೆ ಹಾಕಿದ ಮತದಾರ

    ಪ್ರಾಮಾಣಿಕ ನಾಯಕ ಸಿಎಂ ಆಗಲೆಂದು ನಾಲಿಗೆ ಕತ್ತರಿಸಿ ದೇವರ ಹುಂಡಿಗೆ ಹಾಕಿದ ಮತದಾರ

    ಹೈದರಾಬಾದ್: ಪ್ರಾಮಾಣಿಕ ನಾಯಕ ಮುಖ್ಯಮಂತ್ರಿಯಾಗಲಿ ಅಂತಾ ಮತದಾರನೊಬ್ಬ ತನ್ನ ನಾಲಿಗೆ ಕತ್ತರಿಸಿಕೊಂಡು, ದೇವರ ಹುಂಡಿಗೆ ಹಾಕಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಪಶ್ಚಿಮ ಗೋದಾವರಿ ಜಿಲ್ಲೆಯ ಮಹೇಶ್ (35) ಬುಧವಾರ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಮಹೇಶ್ ಹೈದ್ರಾಬಾದ್‍ನ ಶ್ರೀನಗರ ಕಾಲೊನಿಯ ವೆಂಕಟೇಶ್ವರ ದೇವಾಲಯದ ಹುಂಡಿಗೆ ನಾಲಿಗೆ ಹಾಕಿದ್ದಾರೆ. ಅವರನ್ನು ಸ್ಥಳೀಯ ಓಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ತೆಲಂಗಾಣ ವಿಧಾನಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಮತ ಎಣಿಕೆಯು ಡಿಸೆಂಬರ್ 11ರಂದು ನಡೆಯಲಿದೆ. ಈ ನಿಟ್ಟಿನಲ್ಲಿ ನಾಯಕರ ಗೆಲುವಿಗಾಗಿ ಅಭಿಮಾನಿಗಳು ಪೂಜೆ, ದಾನದ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

    ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ ಪ್ರಾಮಾಣಿಕ ರಾಜಕಾರಣಿಗಳು ಮುಖ್ಯಮಂತ್ರಿಗಳಾಗಬೇಕು ಎಂದು ಮಹೇಶ್ ಪತ್ರ ಬರೆದಿಟ್ಟಿದ್ದಾರೆ ಎಂದು ಬಂಜಾರ ಹಿಲ್ಸ್ ಇನ್ಸ್‍ಪೆಕ್ಟರ್ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

    ಮಹೇಶ್ ಅವರು ಕಳೆದ 2004 ಹಾಗೂ 2009ರ ಚುನಾವಣೆ ವೇಳೆ ಮಹೇಶ್ ನಾಲಿಗೆಯನ್ನು ಕತ್ತರಿಸಿಕೊಂಡಿದ್ದ ಎನ್ನಲಾಗಿದೆ. ಮಹೇಶ್ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ಗೆಲುವು ಸಾಧಿಸಲಿ ಎನ್ನುವ ಉದ್ದೇಶದಿಂದ ನಾಲಿಗೆ ಕತ್ತರಿಸಿಕೊಂಡಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ಅಧಿಕಾರಕ್ಕೆ ಬಂದು 1654 ದಿನ ಆಗಿದ್ರು, ಒಂದೂ ಸುದ್ದಿಗೋಷ್ಠಿ ನಡೆಸಿಲ್ಲ- ರಾಗಾ

    ಮೋದಿ ಅಧಿಕಾರಕ್ಕೆ ಬಂದು 1654 ದಿನ ಆಗಿದ್ರು, ಒಂದೂ ಸುದ್ದಿಗೋಷ್ಠಿ ನಡೆಸಿಲ್ಲ- ರಾಗಾ

    – ಧೈರ್ಯವಿದ್ದರೆ ಸುದ್ದಿಗೋಷ್ಠಿ ನಡೆಸಿ, ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿ

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 1654 ದಿನಗಳಾಗಿದ್ದರೂ, ಇದೂವರೆಗೂ ಒಂದೇ ಒಂದು ಸುದ್ದಿಗೋಷ್ಠಿಯನ್ನು ನಡೆಸಿಲ್ಲವೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

    ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣದ ರಾಜಧಾನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು 1654 ದಿನಗಳಾಗಿದ್ದರೂ, ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ಮೋದಿಯವರಿಗೆ ಧೈರ್ಯವಿದ್ದರೆ ಎಂದಾದರು ಸುದ್ದಿಗೋಷ್ಠಿ ನಡೆಸಿ, ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಬಿಜೆಪಿ ಸೈಲೆಂಟ್ ಪ್ರಧಾನಿ ಎಂದು ವ್ಯಂಗ್ಯವಾಡುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಇದೇ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.

    ಇದಲ್ಲದೇ ತಮ್ಮ ಟ್ವಿಟ್ಟರ್ ನಲ್ಲಿಯೂ ಆಕ್ರೋಶ ಹೊರಹಾಕಿರುವ ಅವರು, ಈಗ ದೇಶದ ಎಲ್ಲಾ ಪ್ರಚಾರ ಕಾರ್ಯಗಳು ಮುಗಿದಿವೆ. ಈಗಲಾದರೂ ನಿಮ್ಮ ಪಾರ್ಟ್ ಟೈಮ್ ಹುದ್ದೆಯಾದ ಪ್ರಧಾನಿ ಸ್ಥಾನವನ್ನು ಮುಂದುವರಿಸಿ. ನೀವು 1,654 ದಿನಗಳ ಕಾಲ ಪ್ರಧಾನಿಯಾಗಿದ್ದರೂ, ಒಂದೂ ಸುದ್ದಿಗೋಷ್ಠಿ ನಡೆಸಿಲ್ಲ. ಇದು ನಮ್ಮ ಹೈದರಾಬಾದಿನಲ್ಲಿ ನಡೆದ ಸುದ್ದಿಗೋಷ್ಠಿಯ ಚಿತ್ರಗಳು. ಒಮ್ಮೆಯಾದೂ ನೀವು ಹೀಗೆ ಪ್ರಯತ್ನಿಸಿ, ತಮಾಷೆಯ ಪ್ರಶ್ನೆಗಳು ನಿಮ್ಮ ವಿರುದ್ಧ ಬರಬಹುದು ಎಂದು ಕಾಲೆಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳ್ಳಿ ಅಡುಗೆ ಮೂಲಕ ವಿಶ್ವ ವಿಖ್ಯಾತಿಗಳಿಸಿದ್ದ ಶೆಫ್ ಮಸ್ತಾನಮ್ಮ ಇನ್ನಿಲ್ಲ

    ಹಳ್ಳಿ ಅಡುಗೆ ಮೂಲಕ ವಿಶ್ವ ವಿಖ್ಯಾತಿಗಳಿಸಿದ್ದ ಶೆಫ್ ಮಸ್ತಾನಮ್ಮ ಇನ್ನಿಲ್ಲ

    ಹೈದರಾಬಾದ್: ತಮ್ಮ ಹಳ್ಳಿ ಅಡುಗೆ ಮೂಲಕವೇ ವಿಶ್ವವ್ಯಾಪಿ ಫೇಮಸ್ ಆಗಿದ್ದ ಮಸ್ತ್ ಮಸ್ತಾನಮ್ಮ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.

    ಬರೋಬ್ಬರಿ 107 ವರ್ಷದ ಶೆಫ್ ಆಗಿ ಯೂಟ್ಯೂಬ್ ಸ್ಟಾರ್ ಆಗಿದ್ದ ಮಸ್ತಾನಮ್ಮ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಿಧನರಾಗಿದ್ದಾರೆ.

    ಮಸ್ತಾನಮ್ಮ ಅವರ ಅಂತಿಮಮಾತ್ರೆಯನ್ನು ಯಾವುದೇ ಸೆಲೆಬ್ರಿಟಿಗೂ ಕಡಿಮೆ ಇಲ್ಲದಂತೆ ನಡೆಸಲಾಯಿತು. ದಾರಿಯುದ್ದಕ್ಕೂ ರಾಶಿ ರಾಶಿ ಹೂಗಳನ್ನು ಚೆಲ್ಲಿ ಮಸ್ತಾನಮ್ಮನಿಗೆ ಅಂತಿಮ ವಿದಾಯ ಹೇಳಿದರು. ಮಸ್ತಾನಮ್ಮ ಅಡುಗೆ ನೋಡಲು ಯೂಟ್ಯೂಬ್‍ನಲ್ಲಿ ಜನ ಕಾಯುತ್ತಿದ್ದರು. ಇವರು ಸಾಂಪ್ರದಾಯಿಕ ಶೈಲಿಯಲ್ಲಿ ತರಹೇವಾರಿ ಅಡುಗೆ ಮಾಡಿ ಖ್ಯಾತಿ ಪಡೆದಿದ್ದು, ಅವರ ವಿಡಿಯೋಗಳು ಯೂಟ್ಯೂಬ್ ನಲ್ಲಿ ಲಕ್ಷ ಲಕ್ಷ ವ್ಯೂ ಕಂಡಿದೆ.

    ಅಂದಹಾಗೇ ಮಸ್ತಾನಮ್ಮ ಅವರಿಗೆ 11ನೇ ವರ್ಷದಲ್ಲಿ ಮದುವೆಯಾಗಿತ್ತು. ಆದರೆ ತಮ್ಮ 22ನೇ ವಯಸ್ಸಿಗೆ ಪತಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ದಿನಗೂಲಿ ಕಾರ್ಮಿಕರಾಗಿ ದುಡಿದು ತಮ್ಮ ಮಕ್ಕಳನ್ನು ಸಲುಹಿದ್ದರು. ಇವರ ಖ್ಯಾತಿ ಯೂಟ್ಯೂಬ್ ಮೂಲಕ ವಿಶ್ವ ಖ್ಯಾತಿ ಪಡೆಯಿತು.  ಕೇವಲ 2 ವರ್ಷದಲ್ಲಿ ದೇಶದ ಅತಿ ಹಿರಿಯ ಯೂಟ್ಯೂಬ್ ಸ್ಟಾರ್ ಎನಿಸಿಕೊಂಡ ಅವರ ಹೆಸರಿನ `ಮಾಸ್ತಾನಮ್ಮ ಚಾನೆಲ್ 12 ಲಕ್ಷ ಜನ ಚಂದಾದಾರರಿದ್ದಾರೆ. ಅಲ್ಲದೇ ಖ್ಯಾತ ಬಿಬಿಸಿ ವಾಹಿನಿ ಕೂಡ ವಿಶೇಷ ಕಾರ್ಯಕ್ರಮ ಮಾಡಿ ಪ್ರಸಾರ ಮಾಡಿತ್ತು.

    https://www.youtube.com/watch?v=3wAYJEBNrE8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿಯವರನ್ನು ಅಲ್ಲಾ ಖಂಡಿತ ಸೋಲಿಸ್ತಾರೆ: ಅಸಾದುದ್ದೀನ್ ಓವೈಸಿ

    ಪ್ರಧಾನಿ ಮೋದಿಯವರನ್ನು ಅಲ್ಲಾ ಖಂಡಿತ ಸೋಲಿಸ್ತಾರೆ: ಅಸಾದುದ್ದೀನ್ ಓವೈಸಿ

    ಹೈದರಾಬಾದ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲ್ಲಾ (ದೇವರು) ಖಂಡಿತವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸುತ್ತಾನೆ. ಇದರಲ್ಲಿ ಯಾವುದೇ ಸಂಶಯವಿಲ್ಲವೆಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಯೋಗಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯೋಗಿ ಆದಿತ್ಯನಾಥ್ ಅವರೇ ನಿಮಗೆ ಇತಿಹಾಸ ಸರಿಯಾಗಿ ಗೊತ್ತಿಲ್ಲ. ನಿಜಾಮರು ಎಂದಿಗೂ ಪಲಾಯನ ಮಾಡಿಲ್ಲ. ಬದಲಾಗಿ ಭಾರತ ಮತ್ತು ಚೀನಾ ನಡುವಿನ ಯುದ್ಧ ಸಂದರ್ಭದಲ್ಲಿ ತಮ್ಮಲ್ಲಿರುವ ಚಿನ್ನಾಭರಣಗಳನ್ನು ಮಾರಾಟ ಮಾಡಿ ದೇಶಕ್ಕೆ ಆರ್ಥಿಕ ನೆರವು ನೀಡಿದ್ದರು. ನೀವು ಇದನ್ನು ಮರೆಯಬಾರದೆಂದು ಕಿಡಿಕಾರಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಹೋರಾಡಲು ನಮಗೆ ಅಲ್ಲಾಹುವೇ ಶಕ್ತಿ ನೀಡುತ್ತಾನೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿ ಅಲ್ಲಾ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಈ ದೇಶ ಕೇವಲ ನಿಮ್ಮದೇ, ನಮ್ಮದಲ್ಲವೇ? ನಾನು ಪ್ರಧಾನಿ ನರೇಂದ್ರ ಮೋದಿ, ಆರ್‍ಎಸ್‍ಎಸ್, ಬಿಜೆಪಿ ಹಾಗೂ ಯೋಗಿ ಆದಿತ್ಯನಾಥ್ ವಿರುದ್ಧ ಮಾತನಾಡಿದರೇ, ನನ್ನನ್ನು ಈ ದೇಶದಿಂದ ಹೊರಹಾಕುತ್ತೀರಾ ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ರಾಹುಲ್ ಈಗ ಜನಿವಾರಧಾರಿಯಾಗಲು ಹೊರಟಿದ್ದಾರೆ. ಹೇಳಬೇಕೆಂದರೇ ಅವರು ರಾಜಕಾರಣಿಯೇ ಅಲ್ಲ, ಬದಲಾಗಿ ಓರ್ವ ಪ್ರವಾಸಿಗ ಮಾತ್ರ. ರಾಹುಲ್ ಗೆ ಅಲ್ಪಸಂಖ್ಯಾರ ಯಾವುದೇ ಸಮಸ್ಯೆಗಳು ಗೊತ್ತಿಲ್ಲ. ಅಲ್ಲದೇ ಅವರಿಗೆ ಯಾವುದೇ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲವೆಂದು ವ್ಯಂಗ್ಯವಾಡಿದರು.

    ಯೋಗಿ ಹೇಳಿದ್ದೇನು?
    ತೆಲಂಗಾಣದ ಘೋಶ್‍ಮಹಲ್ ವಿಧಾನಸಭಾ ಕ್ಷೇತ್ರ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಅವರು, ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುತ್ತೇವೆ. ಆಗ ಓವೈಸಿ ನಿಜಾಮರಂತೆ ಓಡಿ ಹೋಗುತ್ತಾರೆಂದು ಹೇಳಿದ್ದರು. ಇದನ್ನೂ ಓದಿ : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಹೈದರಾಬಾದನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡ್ತೀವಿ: ಯೋಗಿ ಆದಿತ್ಯನಾಥ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಹೈದರಾಬಾದನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡ್ತೀವಿ: ಯೋಗಿ ಆದಿತ್ಯನಾಥ್

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಹೈದರಾಬಾದನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡ್ತೀವಿ: ಯೋಗಿ ಆದಿತ್ಯನಾಥ್

    ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದರೆ, ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಗರವನ್ನಾಗಿ ಮರುನಾಮಕರಣ ಮಾಡುತ್ತೇವೆಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಚುನಾವಣಾ ಪ್ರಚಾರ ನಿಮಿತ್ತ ತೆಲಂಗಾಣದ ಘೋಶ್‍ಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೈದರಾಬಾದಿಗೆ ಈ ಮೊದಲು ಭಾಗ್ಯನಗರ ಎಂದೇ ಹೆಸರಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ  ಭಾರತದ ಮೇಲೆ ದಾಳಿ ನಡೆಸಿದ್ದ ಕಿಲ್ ಕುತುಬ್ ಶಾ ಈ ನಗರವನ್ನು ಹೈದರಾಬಾದ್ ಎಂದು ಬದಲಾಯಿಸಿದ್ದ. ಅಲ್ಲದೇ ಅದೇ ವೇಳೆ ಕುತುಬ್ ಹಿಂದೂಗಳ ಮೇಲೆಯೂ ದಾಳಿ ನಡೆಸಿ, ದೇವಾಲಯಗಳನ್ನೆಲ್ಲಾ ನಾಶ ಮಾಡಿದ್ದ. ಹೀಗಾಗಿ ಹೈದರಾಬಾದ್‍ಗೆ ಪುನಃ ಭಾಗ್ಯನಗರವನ್ನಾಗಿ ಮಾಡುತ್ತೇವೆಂದು ಘೋಷಿಸಿದ್ದಾರೆ.

    ಕಳೆದ ತಿಂಗಳು ಘೋಶ್‍ಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ಕೂಡ ಇದೇ ಹೇಳಿಕೆ ನೀಡಿದ್ದರು. ಅಲ್ಲದೇ ಸಿಕಂದರಬಾದ್ ಹಾಗೂ ಕರೀಂನಗರ ಜಿಲ್ಲೆಗಳ ಹೆಸರನ್ನು ಸಹ ಬದಲಾಯಿಸುವ ಕುರಿತು ಮಾತನಾಡಿದ್ದರು.

    ಯೋಗಿ ಆದಿತ್ಯನಾಥ್ ಈಗಾಗಲೇ ಉತ್ತರಪ್ರದೇಶದಲ್ಲಿನ ಫೈಜಾಬಾದ್ ನಗರವನ್ನು ಅಯೋಧ್ಯೆಯೆಂದು ಹಾಗೂ ಅಲಹಾಬಾದ್ ಜಿಲ್ಲೆಗೆ ಪ್ರಯಾಗ್‍ರಾಜ್ ಎಂದು ಮರುನಾಮಕರಣ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಜಾಮರಂತೆ ಓವೈಸಿ ಕೂಡ ತೆಲಂಗಾಣದಿಂದ ಪಲಾಯನ ಮಾಡಬೇಕಾಗುತ್ತದೆ – ಯೋಗಿ ಆದಿತ್ಯನಾಥ್

    ನಿಜಾಮರಂತೆ ಓವೈಸಿ ಕೂಡ ತೆಲಂಗಾಣದಿಂದ ಪಲಾಯನ ಮಾಡಬೇಕಾಗುತ್ತದೆ – ಯೋಗಿ ಆದಿತ್ಯನಾಥ್

    ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖಂಡ ನಾಯಕ ಅಸಾದುದ್ದೀನ್ ಓವೈಸಿ, ನಿಜಾಮರಂತೆ ತೆಲಂಗಾಣದಿಂದ ಪಲಾಯನ ಮಾಡಬೇಕಾಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ವಿಕರಾಬಾದ್ ಜಿಲ್ಲೆಯ ತಂದೂರ್ ನಗರದಲ್ಲಿ ಏರ್ಪಡಿಸಲಾಗಿದ್ದ ಯಾತ್ರೆಯಲ್ಲಿ ಭಾಗವಹಿಸಿ ಯೋಗಿ ಆದಿತ್ಯನಾಥ್ ಮಾತನಾಡಿದರು. ಬಳಿಕ ಸಂಗಾರೆಡ್ಡಿ ಜಿಲ್ಲೆ ಸೇರಿದಂತೆ ಹಲವು ಯಾತ್ರೆಯಲ್ಲಿ ಭಾಗವಹಿಸಿದ್ದರು.

    ಉಗ್ರಗಾಮಿ ಹಾಗೂ ಐಸಿಸ್ ಸಂಘಟನೆಗಳೊಂದಿಗೆ ಸಂಬಂಧಗಳನ್ನು ಹೊಂದಿರುವ ಸಂಘಟನೆಗಳ ಕೈಯಲ್ಲಿ ದೇಶದ ರಕ್ಷಣೆ ಸಾಧ್ಯವೇ? ದೇಶದ ಕುರಿತು ಬದ್ಧತೆ ಹೊಂದಿರುವ ಯುವಕರ ಸಂಘಟನೆಯಿಂದ ದೇಶ ನಡೆಯಬೇಕೇ ಅಥವಾ ಕಾಂಗ್ರೆಸ್ ನಂತಹ ಪಕ್ಷ ನಾಯಕರ ಮುಂದಾಳತ್ವದಲ್ಲಿ ದೇಶ ನಡೆಯಬೇಕೇ ಎನ್ನುವುದನ್ನು ನೀವೇ ನಿರ್ಧಾರ ಮಾಡಿ ಎಂದರು. ಅಲ್ಲದೇ ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಪಕ್ಷಗಳು ನಕ್ಸಲ್ ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

    ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಸಿಎಂ ಯೋಗಿ ಆದಿತ್ಯನಾಥ್ ಇಂದಿನಿಂದ ತೆಲಂಗಾಣ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಕೆಲ ದಿನಗಳ ಹಿಂದೆ ವಿಕರಾಬಾದ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಓವೈಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಲ್ಲಾ ಸೋಲಿಸುತ್ತಾನೆ ಎಂದು ವಾಗ್ದಾಳಿ ನಡೆಸಿದ್ದರು. ಸದ್ಯ ಓವೈಸಿ ಹೇಳಿಕೆಗೆ ಸಿಎಂ ಯೋಗಿ ಆದಿತ್ಯನಾಥ್ ಟಾಂಗ್ ನೀಡಿದ್ದಾರೆ. ಅಂದಹಾಗೇ ಕಳೆದ 2014 ತೆಲಂಗಾಣ ಚುನಾವಣೆಯಲ್ಲಿ ಬಿಜೆಪಿ 119 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಇದನ್ನು ಓದಿ : ಶಾ, ಮೋದಿಗೆ ಬೀಫ್ ಬಿರಿಯಾನಿ ತಿನ್ನಿಸ್ತಾರಂತೆ ಓವೈಸಿ..!- ತೆಲಂಗಾಣ ಚುನಾವಣೆಯಲ್ಲಿ ಬೀಫ್ ಪಾಲಿಟಿಕ್ಸ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 2.0 ಗಾಗಿ ಬೈಕ್ ಮೇಲೆ ನಿಂತು ಆಮಿ ಜ್ಯಾಕ್ಸನ್ ಸ್ಟಂಟ್ – ವಿಡಿಯೋ ವೈರಲ್

    2.0 ಗಾಗಿ ಬೈಕ್ ಮೇಲೆ ನಿಂತು ಆಮಿ ಜ್ಯಾಕ್ಸನ್ ಸ್ಟಂಟ್ – ವಿಡಿಯೋ ವೈರಲ್

    ಚೆನ್ನೈ: ಭಾರತೀಯ ಸಿನಿಮಾರಂಗದ ಬಹುನಿರೀಕ್ಷಿತ ‘ರೋಬೋ 2.0’ ಸಿನಿಮಾ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ನಟಿ ಆಮಿ ಜ್ಯಾಕ್ಸನ್ ತಾವು ಸ್ಟಂಟ್ ಮಾಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗುತ್ತಿದೆ.

    ನಟಿ ಆಮಿ ಜ್ಯಾಕ್ಸನ್ ರೋಬೋ 2.0 ಸಿನಿಮಾದಲ್ಲಿ ಮಾಡಿದ ಬೈಕಿನ ಮೇಲೆ ಸ್ಟಂಟ್ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ನಟಿ ಆಮಿ ಒಂದು ಬೈಕ್ ಮೇಲೆ ಕುಳಿತ್ತಿರುತ್ತಾರೆ. ಬಳಿಕ ನಿಧಾನವಾಗಿ ಬೈಕಿನ ಮೇಲೆ ನಿಂತುಕೊಂಡು ಬೆನ್ನಿಗೆ ಕಟ್ಟಿ ಕೊಂಡಿರುವ ಹಗ್ಗದ ಸಹಾಯದಿಂದ ಮೇಲಕ್ಕೆ ಹೋಗಿ ಅಲ್ಲೇ ಒಂದು ಪಲ್ಟಿ ಮಾಡಿ ನೆಲದ ಮೇಲೆ ನಿಂತಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿ ಈ ಬಗ್ಗೆ, “ನಾವು 2.0 ಸಿನಿಮಾ ಪ್ರಾರಂಭಿಸುವ ಮೊದಲೇ ಉತ್ತಮ ಸಾಹಸ ನೃತ್ಯ ನಿರ್ದೇಶಕರು ಚೆನ್ನೈಗೆ ತೆರಳಿದ್ದು, ಅಲ್ಲಿ ಸ್ಟಂಟ್ ಮಾಡಲು ತಯಾರಿ ಮಾಡಲಾಗಿತ್ತು. ಅದು ನಮ್ಮ ಮೊದಲ ಸ್ಟಂಟ್ ತರಬೇತಿಯಾಗಿತ್ತು. ಸ್ಟಂಟ್ ಮಾಡುವಾಗ ಏನಾದರೂ ತಪ್ಪು ಮಾಡಿದರೆ ತಿಳಿದುಕೊಳ್ಳಬಹುದೆಂದು ಪ್ರತಿಯೊಂದನ್ನು ನಿಧಾನವಾಗಿ ಶೂಟ್ ಮಾಡಲಾಗಿದೆ. ರಿಯಲ್ ಶೂಟಿಂಗ್ ಮಾಡುವ ಮೊದಲು ನಾವು ಹಗ್ಗದ ಸಹಾಯದಿಂದ ಸ್ಟಂಟ್ ಮಾಡಲಾಗಿದೆ” ಎಂದು ಬರೆದುಕೊಂಡಿದ್ದಾರೆ.

    ಈ ವಿಡಿಯೋವನ್ನು ಆಮಿ ಜ್ಯಾಕ್ಸನ್ ಅವರು ನಾಲ್ಕು ದಿನಗಳ ಹಿಂದೇ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದುವರೆಗೂ 16.44 ಲಕ್ಷ ವೀವ್ಸ್ ಕಂಡಿದ್ದು, 2.50 ಲಕ್ಷ ಮಂದಿ ಲೈಕ್ಸ್ ಮಾಡಿದ್ದಾರೆ.

    https://www.instagram.com/p/BqpUlLwgC-O/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv