Tag: Hyderabad

  • ಹೊಸ ವರ್ಷಕ್ಕೆ ಅಭಿಮಾನಿಗಳಿಗಾಗಿ ಪೂನಂ ಪಾಂಡೆಯಿಂದ ಬಾತ್‍ಟಬ್ ಸ್ನಾನದ ವಿಡಿಯೋ ರಿಲೀಸ್

    ಹೊಸ ವರ್ಷಕ್ಕೆ ಅಭಿಮಾನಿಗಳಿಗಾಗಿ ಪೂನಂ ಪಾಂಡೆಯಿಂದ ಬಾತ್‍ಟಬ್ ಸ್ನಾನದ ವಿಡಿಯೋ ರಿಲೀಸ್

    ಹೈದರಾಬಾದ್: ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿದ್ದು, ತಮ್ಮ ಹಾಟ್ ಹಾಗೂ ಸೆಕ್ಸಿ ಫೋಟೋ, ವಿಡಿಯೋ ಅಪ್ಲೋಡ್ ಮಾಡುತ್ತಿರುತ್ತಾರೆ. ಈಗ ಮತ್ತೊಂದು ಹಾಟ್ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

    ನಟಿ ಪೂನಂ ಪಾಂಡೆ ಹೊಸ ವರ್ಷದ ಪ್ರಯುಕ್ತ ತಮ್ಮ ಅಭಿಮಾನಿಗಳಿಗಾಗಿ ಇನ್ಸ್ ಸ್ಟಾಗ್ರಾಂನಲ್ಲಿ ಬಾತ್‍ಟಬ್ ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

    ಪೂನಾಂ ಪಾಂಡೆ ಪ್ರೈವೇಟ್ ರೂಮ್ ಎಂದು ಟೈಟಲ್ ಮೊದಲಿಗೆ ಬಂದು ಒಂದು ಸಾಂಗ್ ಪ್ಲೇ ಆಗುತ್ತದೆ. ಬಳಿಕ ಪೂನಂ ನಿಧಾನವಾಗಿ ಬಾತ್‍ಟಬ್ ಇರುವ ಸ್ನಾನದ ರೂಮಿಗೆ ಬೆತ್ತಲಾಗಿ ಹೋಗಿದ್ದು, ಬಾತ್‍ಟಬ್ ನಲ್ಲಿ ಕುಳಿತು ಸ್ನಾನ ಮಾಡುವ ರೀತಿ ಪೋಸ್ ಕೊಟ್ಟಿದ್ದಾರೆ. ಇದೆಲ್ಲವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಈ ವಿಡಿಯೋವನ್ನು ಪೂನಂ ಪಾಂಡ ‘ಹ್ಯಾಪಿ 2019’ ಎಂದು ಬರೆದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಪ್ಲೋಡ್ ಮಾಡಿ ಎರಡು ದಿನಗಳಾಗಿದ್ದು, ಈ ವರೆಗೆ ವಿಡಿಯೋ 6.67 ಲಕ್ಷ ವ್ಯೂ ಆಗಿದೆ. ಸುಮಾರು 1.8 ಸಾವಿರ ಮಂದಿ ಕಮೆಂಟ್ ಕೂಡ ಮಾಡಿದ್ದಾರೆ.

    https://www.instagram.com/p/BsEK7ihgXJn/

    ಈ ಹಿಂದೆಯೂ ಕೂಡ ನಟಿ ಪೂನಂ ಪಾಂಡೆ ಬಾತ್‍ರೂಮಿನಲ್ಲಿ ಅರೆಬೆತ್ತಲಾಗಿ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿತ್ತು. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘RRR’ ಸಿನಿಮಾ ಟೈಟಲ್ ವಿಮರ್ಶೆ- ಈ ಹೆಸರು ಸೂಟ್ ಆಗುತ್ತಾ? ಅಭಿಪ್ರಾಯ ತಿಳಿಸಿ ಎಂದ ರಾಜಮೌಳಿ

    ‘RRR’ ಸಿನಿಮಾ ಟೈಟಲ್ ವಿಮರ್ಶೆ- ಈ ಹೆಸರು ಸೂಟ್ ಆಗುತ್ತಾ? ಅಭಿಪ್ರಾಯ ತಿಳಿಸಿ ಎಂದ ರಾಜಮೌಳಿ

    ಹೈದರಾಬಾದ್: ಕೆಲವು ದಿನಗಳ ಹಿಂದೆ ರಾಮ ಯಾರು, ರಾವಣ ಯಾರು ಅನ್ನೊ ಮಾತುಕಥೆ ಸ್ಯಾಂಡಲ್‍ವುಡ್‍ ನಲ್ಲೂ ಜೋರಾಗಿತ್ತು. ಈಗ ಇದೇ ಪ್ರಶ್ನೆ ಟಾಲಿವುಡ್‍ನಲ್ಲಿ ಶುರುವಾಗಿದೆ. ಅದಕ್ಕೆ ಕಾರಣ ರಾಜಮೌಳಿ ಸಾರಥ್ಯದ ಹೊಚ್ಚಹೊಸ ಸಿನಿಮಾವಾಗಿದೆ. ಚಿತ್ರತಂಡ ಆರ್ ಆರ್ ಆರ್ ಅಂತ ವರ್ಕಿಂಗ್ ಟೈಟಲ್ ಫಿಕ್ಸ್ ಮಾಡಿಕೊಂಡಿತ್ತು. ಈಗ ಈ ಸಿನಿಮಾ ಟೈಟಲ್ ಬಗ್ಗೆ ತೆಲುಗು ನಾಡಿನಲ್ಲಿ ಚರ್ಚೆ ಶುರುವಾಗಿದೆ.

    ರಾಜಮೌಳಿ ಅವರು ಸಿನಿಮಾ ಮುಹೂರ್ತ ಆಗುತ್ತಿದ್ದಂತೆ ಟೈಟಲ್ ಅನೌನ್ಸ್ ಮಾಡುತ್ತಿದ್ದರು. ಆದರೆ ಈಗ ಶೂಟಿಂಗ್ ಕಂಪ್ಲೀಟ್ ಆದ ಮೇಲೆ ಟೈಟಲ್ ಅನೌನ್ಸ್ ಮಾಡುತ್ತೇನೆ ಎಂದಿದ್ದಾರೆ. ಆದರೆ ಮೂಲಗಳ ಪ್ರಕಾರ ಒಂದಿಷ್ಟು ಹೆಸರುಗಳು ಟಾಲಿವುಡ್‍ನಲ್ಲಿ ಸೌಂಡ್ ಮಾಡುತ್ತಿವೆ. ಅದರಲ್ಲಿ ‘ರಾಮರಾವಣ ರಾಜ್ಯಂ’ ಪ್ರಮುಖವಾದ ಹೆಸರಾಗಿದೆ.

    ಥ್ರಿಬಲ್ ಆರ್ ಅನ್ನೊ ವರ್ಕಿಂಗ್ ಟೈಟಲ್‍ಗೆ ಮ್ಯಾಚ್ ಆಗುವಂತೆ ಹೊಸ ಸಿನಿಮಾದ ಹೆಸರನ್ನು ರಾಜಮೌಳಿ ಹುಡುಕುತ್ತಿದ್ದು,`ರಾಮರಾವಣ ರಾಜ್ಯಂ’ ಟೈಟಲ್ ಸೂಟ್ ಆಗುತ್ತಾ, ಒಮ್ಮೆ ನೋಡಿ ಅಂತ ಚಿತ್ರತಂಡದ ಸದಸ್ಯರಿಗೂ ಹೇಳಿದ್ದಾರಂತೆ. ಈ ಟೈಟಲ್ ಕೇಳಿದ ರಾಮ್‍ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ಅಭಿಮಾನಿಗಳು ಹಾಗಾದರೆ ರಾಮ ಯಾರು ರಾವಣ ಯಾರು ಅನ್ನೊದ್ರ ಬಗ್ಗೆ ಚರ್ಚೆ ಶುರು ಮಾಡಿಕೊಂಡಿದ್ದಾರೆ.

    ಇದೇ ಟೈಟಲ್ ಫೈನಲ್ ಆಗುತ್ತಾ ಇಲ್ವಾ ಅನ್ನೊದು ಕನ್ಫರ್ಮ್ ಆಗಬೇಕು ಎಂದರೆ ಸಂಕ್ರಾತಿ ಹಬ್ಬದವರೆಗೂ ಕಾಯಬೇಕು. ಯಾಕೆಂದರೆ ಚಿತ್ರತಂಡ ಸದ್ಯಕ್ಕೆ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದು, ಹಬ್ಬ ಆದ ಮೇಲೆ ಸೆಕೆಂಡ್ ಶೆಡ್ಯೂಲ್ ಪ್ಲಾನ್ ಮಾಡಿದೆ. ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆದ ಮೇಲೆ ರಾಜ್‍ಮೌಳಿ ಅವರು ಟೈಟಲ್ ಅನೌನ್ಸ್ ಮಾಡುತ್ತಾರೆ.

    ಸದ್ಯಕ್ಕೆ ಈ `ರಾಮರಾವಣ ರಾಜ್ಯಂ’ ಜೊತೆ ರಾಜಸಿಂಹ ಅನ್ನೊ ಟೈಟಲ್ ಕೂಡ ಸೌಂಡ್ ಮಾಡುತ್ತಿದೆ. ರಾಜಮೌಳಿ ಅವರು ಯಾವ ಟೈಟಲ್ ಅನ್ನು ಫೈನಲ್ ಮಾಡುತ್ತಾರೋ ಅನ್ನೊದನ್ನ ಕಾದುನೋಡಬೇಕಿದೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಯ ರೂಮಿನಲ್ಲಿ ಲವ್ವರ್ ನೋಡಿ ಲಾಕ್ ಮಾಡಿ ಬೆಂಕಿ ಹಚ್ಚಿದ!

    ಪತ್ನಿಯ ರೂಮಿನಲ್ಲಿ ಲವ್ವರ್ ನೋಡಿ ಲಾಕ್ ಮಾಡಿ ಬೆಂಕಿ ಹಚ್ಚಿದ!

    ಹೈದರಾಬಾದ್: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಪ್ರಿಯತಮನಿಗೆ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ಚೆವೆಲ್ಲಾದಲ್ಲಿ ನಡೆದಿದೆ.

    ಈ ಘಟನೆ ದಿಸೆಂಬರ್ 30 ಭಾನುವಾರ ನಡೆದಿದ್ದು, ಆರೋಪಿ ಪತಿ ರವಿ, ಪತ್ನಿ ಭಾಗ್ಯಲಕ್ಷ್ಮಿ ಮತ್ತು ಆಕೆಯ ಪ್ರಿಯತಮನನ್ನು ರೂಮಿನಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸದ್ಯಕ್ಕೆ ಇಬ್ಬರ ಸ್ಥಿತಿ ಗಂಭೀರಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಏನಿದು ಪ್ರಕರಣ?
    10 ವರ್ಷಗಳ ಹಿಂದೆ ಭಾಗ್ಯಲಕ್ಷ್ಮಿ ಮತ್ತು ರವಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರ ಸಂಸಾರಿಕ ಜೀವನ ಚೆನ್ನಾಗಿ ನಡೆಯುತ್ತಿತ್ತು. ಆದರೆ ಕೆಲವು ತಿಂಗಳ ಹಿಂದೆ ಜಗಳವಾಡಿಕೊಂಡು ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಪತಿಯಿಂದ ಬೇರೆಯಾದ ಬಳಿಕ ಭಾಗ್ಯಲಕ್ಷ್ಮಿ ಬೇರೆಯವರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಆರೋಪಿ ರವಿ ತನ್ನ ಪತ್ನಿ ಇನ್ನೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ತಿಳಿದಿದೆ.

    ರವಿ ಭಾನುವಾರ ಬೆಳಗ್ಗೆ ಪತ್ನಿಯ ಮನೆಗೆ ಹೋಗಿದ್ದಾನೆ. ಅಲ್ಲಿ ಭಾಗ್ಯಲಕ್ಷ್ಮಿ ಆಕೆಯ ಪ್ರಿಯತಮನ ಜೊತೆ ರೂಮಿನಲ್ಲಿ ಇದ್ದಳು. ಇದನ್ನು ನೋಡಿದ ರವಿ ರೂಮನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಮಕ್ಕಳನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ನಂತರ ರೂಮಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾನೆ.

    ಇತ್ತ ಮಕ್ಕಳು ಈ ಬಗ್ಗೆ ನೆರೆಹೊರೆಯವರಿಗೆ ತಿಳಿಸಿದ್ದಾರೆ. ತಕ್ಷಣ ನೆರೆಹೊರೆಯವರು ಬಂದು ಬಾಗಿಲು ಮುರಿದು ಮನೆಯೊಳಗೆ ಹೋಗಿದ್ದಾರೆ. ಆಗ ಭಾಗ್ಯಲಕ್ಷ್ಮಿ ಗಂಭೀರವಾಗಿ ಸುಟ್ಟು ಹೋಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಬೆಂಕಿ ಇಡೀ ಮನೆಯನ್ನು ಆವರಿಸಿಕೊಂಡಿದ್ದು, ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿ ಬಿಟ್ಟು ಹೋದ ಮಗುವಿಗೆ ಹಾಲುಣಿಸಿದ ಮಹಿಳಾ ಪೇದೆ

    ತಾಯಿ ಬಿಟ್ಟು ಹೋದ ಮಗುವಿಗೆ ಹಾಲುಣಿಸಿದ ಮಹಿಳಾ ಪೇದೆ

    ಹೈದರಾಬಾದ್: ತಾಯಿ ಬಿಟ್ಟು ಹೋಗಿದ್ದ ಪುಟ್ಟ ಮಗುವಿಗೆ ಆಂಧ್ರ ಪ್ರದೇಶದ ಮಹಿಳಾ ಪೇದೆಯೊಬ್ಬರು ಹಾಲುಣಿಸಿ ಮಾತೃ ಕಾಳಜಿ ತೋರಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಪೇದೆ ಕೆ.ಪ್ರಿಯಾಂಕ ಹಾಗೂ ಆಕೆಯ ಪತಿ ರವೀಂದರ್ ಮಗುವಿನ ಬಗ್ಗೆ ಕಾಳಜಿ ತೋರಿದ್ದಾರೆ. ಈ ಪೊಲೀಸ್ ದಂಪತಿಯ ನಿಸ್ವಾರ್ಥ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಉಸ್ಮಾನಿಯಾ ಆಸ್ಪತ್ರೆ ಬಳಿ ಮದ್ಯದ ಮತ್ತಿನಲ್ಲಿದ್ದ ಶಬನಾ ಬೇಗಂ ಎಂಬ ಮಹಿಳೆ ತನ್ನ ಎರಡು ವರ್ಷದ ಮಗುವನ್ನು ಅಪರಿಚಿತ ವ್ಯಕ್ತಿಗೆ ಕೊಟ್ಟು, ಕೆಲವೇ ನಿಮಿಷದಲ್ಲಿ ಮರಳಿ ಬರುವುದಾಗಿ ಹೇಳಿ ಹೋಗಿದ್ದಾಳೆ. ಆಕೆಯ ಮಾತು ನಂಬಿದ ವ್ಯಕ್ತಿ ಮಗುವನ್ನು ಎತ್ತಿಕೊಂಡಿದ್ದಾನೆ. ಆದರೆ ಮಗು ಕೊಟ್ಟು ಹೋದ ಮಹಿಳೆ ಬಹಳ ಸಮಯ ಕಳೆದರೂ ಮಹಿಳೆ ಬಾರದೇ ಇದ್ದಾಗ ಆತ ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಹಾಲು ಕುಡಿಸಿದ್ದಾನೆ. ಆದರೆ ಅದು ಕುಡಿಯದೇ ಜೋರಾಗಿ ಅಳಲು ಪ್ರಾರಂಭಿಸಿದೆ. ಮಗುವನ್ನು ತನ್ನ ಬಳಿ ಇಟ್ಟುಕೊಳ್ಳುವುದು ಅಪರಾಧ ಎಂದು ಅರಿತ ವ್ಯಕ್ತಿ ಸೋಮವಾರ ಸಮೀಪದ ಅಫ್ಜಲ್‍ಗಂಜ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾನೆ.

    ಠಾಣೆಯಲ್ಲಿಯೂ ಮಗು ಅಳುವುದನ್ನು ಕಂಡ ಸಿಬ್ಬಂದಿ ಸಮಾಧಾನ ಮಾಡಲು ಹರಸಾಹಸ ಪಟ್ಟಿದ್ದಾರೆ. ಆದರೆ ಮಗು ಮಾತ್ರ ತನ್ನ ಅಳುವನ್ನು ನಿಲ್ಲಿಸಿರಲಿಲ್ಲ. ಹಾಲು ಕುಡಿಸಲು ಮುಂದಾದರೂ ಕುಡಿಯುತ್ತಿರಲಿಲ್ಲ. ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವೀಂದರ್ ಎಂಬವವರು ಮಗುವಿನ ವಿಚಾರವಾಗಿ ಪತ್ನಿ ಪ್ರಿಯಾಂಕಾ ಅವರಿಗೆ ಹೇಳಿದ್ದಾರೆ. ಮಗುವಿನ ವಿಚಾರ ಕೇಳಿದ ಪ್ರಿಯಾಂಕ ರಾತ್ರಿ 10.30ರ ವೇಳೆಗೆ ಠಾಣೆಗೆ ಬಂದು ಮಗುವಿಗೆ ಹಾಲುಣಿಸಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಗ್ನಿಸ್ಪರ್ಶದ ವೇಳೆ ಬಿಕ್ಕಿಬಿಕ್ಕಿ ಅತ್ತ ಮಧುಕರ್ ಪತ್ನಿ- ಅಪ್ಪ ಬೇಕು ಅಂತ ಮಗಳು ಕಣ್ಣೀರು

    ಅಗ್ನಿಸ್ಪರ್ಶದ ವೇಳೆ ಬಿಕ್ಕಿಬಿಕ್ಕಿ ಅತ್ತ ಮಧುಕರ್ ಪತ್ನಿ- ಅಪ್ಪ ಬೇಕು ಅಂತ ಮಗಳು ಕಣ್ಣೀರು

    ಉಡುಪಿ: ಐಪಿಎಸ್ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಅವರು ಇಂದು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಪತಿಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಪತ್ನಿ ಹಾಗೂ ಮಗಳು ಬಿಕ್ಕಿಬಿಕ್ಕಿ ಅತ್ತಿದ್ದಾರೆ.

    ಪತಿಯ ಚಿತೆಯ ಮುಂದೆ ನಿಂತಿದ್ದ ಪತ್ನಿ ಸ್ವರ್ಣ ದುಃಖಿತರಾದ್ರೆ, ಮಗಳು ಸಮ್ಯಾ ನನಗೆ ಅಪ್ಪ ಬೇಕು ಅಂತ ಕಣ್ಣೀರು ಹಾಕಿರುವುದು ನೆರೆದವರಲ್ಲಿ ಮತ್ತಷ್ಟು ಕಣ್ಣೀರಿಗೆ ಕಾರಣವಾಯಿತು. ಈ ವೇಳೆ ಕುಟುಂಬದವರು ಹಾಗೂ ಸಮಾಧಾನ ಮಾಡಿ ಸಾಂತ್ವಾನ ಹೇಳಿದ್ದಾರೆ.

    ಶೆಟ್ಟಿಯವರಿಗೆ ಒಬ್ಬಳೇ ಹೆಣ್ಣು ಮಗಳಿದ್ದು, ಹೀಗಾಗಿ ಅವರ ಚಿತೆಗೆ ನಾಲ್ವರಿಂದ ಅಗ್ನಿ ಸ್ಪರ್ಶ ಮಾಡಲಾಯಿತು. ಮಗಳು ಸಮ್ಯಾ, ಅಣ್ಣನ ಮಗ ಸಾರಂಗ್, ಸಹೋದರ ಮುರುಳಿಧರ್ ಶೆಟ್ಟಿ, ಸುಧಾಕರ್ ಶೆಟ್ಟಿಯಿಂದ ಬೆಂಕಿ ಕೊಡಲಾಯಿತು. ಈ ಮೂಲಕ ಮಧುಕರ್ ಶೆಟ್ಟಿಯವರು ತಮ್ಮ ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿಯಲ್ಲಿಯೇ ಪಂಚಭೂತಗಳಲ್ಲಿ ಲೀನರಾದರು.

    ಮಧುಕರ್ ಶೆಟ್ಟಿಯವರ ತೋಟದಲ್ಲಿ ಧಾರ್ಮಿಕ ವಿಧಿವಿಧಾನ ಮೂಲಕ ಬಂಟ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ತಂದೆ-ತಾಯಿಯ ಸಮಾಧಿ ಬಳಿಯೇ ಇವರ ಅಂತ್ಯಕ್ರಿಯೆ ನಡೆದಿದೆ. ಈ ವೇಳೆ ಕುಟುಂಬಸ್ಥರು, ಹಿರಿಯ ಪೊಲಿಸ್ ಅಧಿಕಾರಿಗಳು, ಸಾರ್ವಜನಿಕರು, ಅಭಿಮಾನಿಗಳು ಸೇರಿದಂತೆ ಗಣ್ಯಾತೀಗಣ್ಯರು ಭಾಗಿಯಾಗಿದ್ದರು.

    ಎಚ್ 1 ಎನ್ 1 ಜ್ವರ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಐಪಿಎಸ್ ಖಡಕ್ ಅಧಿಕಾರಿ ಮಧುಕರ್ ಶೆಟ್ಟಿ(47)ಯವರು ಶುಕ್ರವಾರ ರಾತ್ರಿ ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅಂದು ಮನೆಯಲ್ಲಿಯೇ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಯಿತು. ಸಹೋದ್ಯೋಗಿಗಳು ಹಾಗೂ ಇತರ ಗಣ್ಯರು ಅಂತಿಮ ದರ್ಶನ ಪಡೆದಿದ್ದರು. ವಿಶೇಷವೆಂದರೆ ಸಹೋದ್ಯೋಗಿಯೊಬ್ಬರು ಮಧುಕರ್ ಅವರ ಇಷ್ಟದ ಹಾಡನ್ನು ಹಾಡಿ ಕಣ್ಣೀರ ವಿದಾಯ ಹೇಳಿದ್ದರು. ಈ ವೇಳೆ ನೆರೆದಿದ್ದ ಮಂದಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬಳಿಕ ಅಲ್ಲಿಂದ ಶನಿವಾರ ಮೃತದೇಹವನ್ನು ಬೆಂಗಳೂರಿಗೆ ರವಾನೆ ಮಾಡಲಾಯಿತು. ಯಲಹಂಕದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದಲ್ಲಿಯೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಲಿಸಲಾಗಿದ್ದು ರಾಜಕಾರಣಿಗಳು, ಗಣ್ಯರು ಸೇರಿದಂತೆ ಸಾವಿರಾರು ಮಂದಿ ಕರುನಾಡ ಸಿಂಗಂಗೆ ಅಂತಿಮ ವಿದಾಯ ತಿಳಿಸಿದ್ರು. ಅಲ್ಲಿಂದ ನೇರವಾಗಿ ಮಧುಕರ್ ಹುಟ್ಟೂರು ಕುಂದಾಪುರದ ಯಡಾಡಿಗೆ ಮೃತದೇಹವನ್ನು ಸಾಗಿಸಲಾಗಿದ್ದು, ಇಂದು ಅವರು ಪಂಚಭೂತಗಳಲ್ಲಿ ಲೀನವಾದ್ರು.

    https://www.youtube.com/watch?v=umjUL4BMlBc

    https://www.youtube.com/watch?v=_uRFFyi3Qic

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕ ಪತಿಯನ್ನ ಕೊಲೆಗೈದ ಪತ್ನಿ

    ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕ ಪತಿಯನ್ನ ಕೊಲೆಗೈದ ಪತ್ನಿ

    ಹೈದರಾಬಾದ್: ಕುಡಿದ ಅಮಲಿನಲ್ಲಿ ಸ್ವಂತ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನನ್ನು ಆತನ ಪತ್ನಿಯೇ ಹೊಡೆದು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಕಲ್ಯಾಣದುರ್ಗಂನಲ್ಲಿ ನಡೆದಿದೆ.

    ಸದಾಶಿವ ಎಂಬಾತನೇ ಮೃತ ಶಿಕ್ಷಕ. ಶೋಭಾರಾಣಿ ಕೊಲೆ ಮಾಡಿದ ಆರೋಪಿ. ಕೊತಚೆರುವು ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಸದಾಶಿವ ಕರ್ತವ್ಯ ನಿರ್ವಹಿಸುತ್ತಿದ್ದನು. ಕಳೆದ 25 ವರ್ಷದ ಹಿಂದೆ ಸದಾಶಿವ ಹಾಗೂ ಶೋಭಾರಾಣಿ ಮದುವೆಯಾಗಿದ್ದರು. ಆದರೆ ಮದುವೆಯಾದ 5 ವರ್ಷದ ಬಳಿಕ ಸದಾಶಿವ ಕುಡಿಯಲು ಆರಂಭಿಸಿ ಬೇರೆ ಮಹಿಳೆಯರ ಸಂಬಂಧವನ್ನು ಇಟ್ಟುಕೊಂಡಿದ್ದ. ಹಾಗೆಯೆ ಹೆಂಡತಿ ಮಗಳನ್ನು ಬಿಟ್ಟು ಬೇರೆ ಮಹಿಳೆಯ ಜೊತೆ ಇರಲು ಆರಂಭಿಸಿದ್ದನು.

    ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ ಸದಾಶಿವ ಪತ್ನಿ ಹಾಗೂ ಮಗಳಿಗೆ ಹೊಡೆದು ಹಿಂಸೆ ನೀಡುತ್ತಿದ್ದನು. ಆದರೂ ಇದನ್ನೆಲ್ಲ ಸಹಿಸಿಕೊಂಡು ಶೋಭಾ ತನ್ನ ಮಗಳನ್ನು ಹೇಗೋ ಕಷ್ಟ ಪಟ್ಟು ಸಾಕುತ್ತಿದ್ದಳು. ಬುಧವಾರ ರಾತ್ರಿ ಸದಾಶಿವ ಕುಡಿದು ಬಂದು ಶೋಭಾ ಜೊತೆ ಜಗಳವಾಡಿದ್ದಾನೆ. ಅಷ್ಟೆ ಅಲ್ಲದೆ ತನ್ನ ಸ್ವಂತ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಶೋಭಾ ಬೇರೆ ಉಪಾಯವಿಲ್ಲದೆ ಆತನ ತಲೆಗೆ ಕಟ್ಟಿಗೆ ತುಂಡಿನಿಂದ ಹೊಡಿದ್ದಾಳೆ. ಸದಾಶಿವನ ತಲೆಗೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಗುರುವಾರದಂದು ಈ ಘಟನೆ ಬೆಳಕಿಗೆ ಬಂದಿದ್ದು, ಆರೋಪಿ ಶೋಭಾಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಷ್ಟದ ಹಾಡು ಹಾಡಿ ಕಣ್ಣೀರ ವಿದಾಯ ತಿಳಿಸಿದ್ರು ಮಧುಕರ್ ಸಹೋದ್ಯೋಗಿ

    ಇಷ್ಟದ ಹಾಡು ಹಾಡಿ ಕಣ್ಣೀರ ವಿದಾಯ ತಿಳಿಸಿದ್ರು ಮಧುಕರ್ ಸಹೋದ್ಯೋಗಿ

    ಹೈದರಾಬಾದ್: ಕರ್ನಾಟಕದ ರಿಯಲ್ ಸಿಂಗಂ, ಭ್ರಷ್ಟ ರಾಜಕಾರಣಿಗಳನ್ನೇ ಜೈಲಿಗಟ್ಟಿ ಅಬ್ಬರಿಸಿ ಲೋಕಾಯುಕ್ತಕ್ಕೆ ಹೊಸ ಖದರ್ ತಂದು ಕೊಟ್ಟಿದ್ದ ಯುವ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಇಷ್ಟದ ಹಾಡು ಹಾಡುವ ಮೂಲಕ ಸಹೋದ್ಯೋಗಿಗಳು ಗೀತ ನಮನ ಸಲ್ಲಿಸಿದ್ದಾರೆ.

    ಹೈದರಾಬಾದ್ ನಲ್ಲಿ ಇಂದು ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಹೀಗಾಗಿ ಅಂತಿಮ ದರ್ಶನ ಪಡೆಯುತ್ತಿದ್ದ ಸಂದರ್ಭದಲ್ಲಿ ಸಹೋದ್ಯೋಗಿ ಪವನ್ ಕುಮಾರ್ ಅವರು ಮಧುಕರ್ ಅವರ ಇಷ್ಟವಾದ ಹಿಂದಿ ಹಾಡೊಂದನ್ನು ಹಾಡಿ ಕಣ್ಣೀರಿನ ವಿದಾಯ ತಿಳಿಸಿದ್ದಾರೆ. ಬಿಕ್ಕಿ ಬಿಕ್ಕಿ ಅಳುತ್ತಾ ಹೇಳುತ್ತಿದ್ದ ಪವನ್ ಹಾಡಿಗೆ ಅಂತಿಮ ದರ್ಶನ ಪಡೆಯಲು ಬಂದಿದ್ದ ಜನಸಾಗರವೇ ದುಃಖದ ಕಡಲಲ್ಲಿ ಮುಳುಗಿತ್ತು. ಪವನ್ ಕುಮಾರ್ ಅವರು 2009ರ ಬ್ಯಾಚ್ ಮೇಟ್ ಆಗಿದ್ದಾರೆ.

    ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಐಪಿಎಸ್ ಮಧುಕರ್ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ 8.15ರ ಸುಮಾರಿಗೆ ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ರಾತ್ರಿ 8 ಗಂಟೆಯವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗುವುದು. ನಂತರ ನಾಳೆ ಅವರ ಹುಟ್ಟೂರು ಉಡುಪಿ ಜಿಲ್ಲೆಯ ಯಡಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ

    ಖ್ಯಾತ ಪತ್ರಕರ್ತರಾಗಿದ್ದ ಉಡುಪಿ ಜಿಲ್ಲೆಯ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರ ಮಧುಕರ್‍ಗೆ ಕೇವಲ 47 ವರ್ಷ ವಯಸ್ಸಾಗಿತ್ತು. ಇವರು 1999ರ ಕರ್ನಾಟಕ ಕೇಡರ್‍ನ ಐಪಿಎಸ್ ಅಧಿಕಾರಿಯಾಗಿದ್ದರು. ಭಾರತೀಯ ಕಂದಾಯ ಸೇವೆ ಅಧಿಕಾರಿಯಾಗೋ ಅವಕಾಶ ಸಿಕ್ಕರೂ ತಾನು ಪೊಲೀಸ್ ಅಧಿಕಾರಿಯೇ ಆಗಬೇಕೆಂದು ಹಠಹಿಡಿದು ಖಾಕಿ ಧರಿಸಿ ಆ ಸೇವೆಗಾಗಿಯೇ ತಮ್ಮ ಜೀವನವನ್ನ ಮುಡಿಪಾಗಿಟ್ಟಿದ್ದರು. ಮಧುಕರ್ ಶೆಟ್ಟಿ ಒಬ್ಬಳು ಪುತ್ರಿ ಮತ್ತು ಪತ್ನಿಯನ್ನ ಅಗಲಿದ್ದಾರೆ. ಕರ್ನಾಟಕದಿಂದ ಕೇಂದ್ರ ಸೇವೆಗೆ ಮರಳಿದ್ದ ಅವರನ್ನ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದರು. ಇದನ್ನೂ ಓದಿ: ಕರುನಾಡ ಸಿಂಗಂ ಸಾವಿನ ಬಗ್ಗೆ ಸಚಿವ ಡಿಕೆಶಿಗೆ ಸಂಶಯ..!

    https://www.youtube.com/watch?v=umjUL4BMlBc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೆಫ್ರಿಜರೇಟರ್ ಸ್ಫೋಟಗೊಂಡು ಯುವತಿ ದುರ್ಮರಣ

    ರೆಫ್ರಿಜರೇಟರ್ ಸ್ಫೋಟಗೊಂಡು ಯುವತಿ ದುರ್ಮರಣ

    ಹೈದರಾಬಾದ್: ರೆಫ್ರಿಜರೇಟರ್ ಸ್ಫೋಟಗೊಂಡ ಪರಿಣಾಮ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬೊಂಗುಲೂರಿನಲ್ಲಿ ಗುರುವಾರ ನಡೆದಿದೆ.

    ದೀಪಿಕಾ ಮೃತ ದುರ್ದೈವಿ. ಈಕೆ ಶ್ರೀ ಇಂದು ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಳು. ಗುರುವಾರ ದೀಪಿಕಾ ಕುಟುಂಬ ಸದಸ್ಯರೆಲ್ಲರೂ ಕಾರ್ಯಕ್ರಯಕ್ಕೆ ಹೋಗುತ್ತಿದ್ದರು. ಈ ವೇಳೆ ದೀಪಿಕಾ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ. ಪರೀಕ್ಷೆ ಇದೆ ಓದಬೇಕು ಒಬ್ಬಳೇ ಇರುತ್ತೇನೆ ಎಂದು ಹೇಳಿ ಕಾರ್ಯಕ್ರಮಕ್ಕೆ ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದಳು.

    ಮನೆಯವರು ಹೋದ ಬಳಿಕ ತಿಂಡಿ ತಿನ್ನೋಣ ಎಂದು ರೆಫ್ರಿಜರೇಟರ್ ತೆರೆದಿದ್ದಾಳೆ. ಆಗ ಇದ್ದಕ್ಕಿದ್ದಂತೆ ಫ್ರಿಜ್ ಸ್ಫೋಟವಾಗಿದೆ. ಪರಿಣಾಮ ಮನೆಯ ತುಂಬಾ ಹೊಗೆ ಆವರಿಸಿ ಬೆಂಕಿ ಹೊತ್ತಿಕೊಂಡಿದೆ. ಇತ್ತ ಫ್ರೀಜ್ ಸ್ಫೋಟಕ್ಕೆ ದೀಪಿಕಾ ಜೀವಂತವಾಗಿ ಸುಟ್ಟು ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಮನೆಯಲ್ಲಿ ಹೊಗೆ ತುಂಬಿಕೊಂಡಿದ್ದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ದೌಡಾಯಿಸಿ ದೀಪಿಕಾ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ದೀಪಿಕಾ ಮನೆಯವರು ಹಿಂದಿರುಗಿ ಬಂದು ನೋಡಿದಾಗ ದೀಪಿಕಾ ಮೃತ ದೇಹವು ಸಂಪೂರ್ಣ ಸುಟ್ಟು ಹೋಗಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಇದ್ದಕ್ಕಿದ್ದಂತೆ ರೆಫ್ರಿಜರೇಟರ್ ಹೇಗೆ ಸ್ಫೋಟಗೊಂಡಿತ್ತು. ಇದಕ್ಕೆ ಕಾರಣವೇನು? ಎಂಬುದು ತನಿಖೆಯ ನಂತರ ತಿಳಿದು ಬರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಯಸಿ ಜೊತೆಗಿದ್ದ ಪತಿಯನ್ನ ಹಿಡಿದ ಪತ್ನಿ

    ಪ್ರೇಯಸಿ ಜೊತೆಗಿದ್ದ ಪತಿಯನ್ನ ಹಿಡಿದ ಪತ್ನಿ

    ಹೈದರಾಬಾದ್: ಪ್ರಿಯತಮೆಯ ಜೊತೆ ಇದ್ದಾಗ ಪತಿಯನ್ನು ರೆಡ್‍ಹ್ಯಾಂಡ್ ಆಗಿ ಹಿಡಿದು ಮಹಿಳೆ ಆತನನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ತೆಲಂಗಾಣದ ಮೀರ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ನಾಗರಾಜು ಪ್ರೇಯಸಿ ಜೊತೆ ಇದ್ದಾಗ ಪತ್ನಿಗೆ ಸಿಕ್ಕಿಹಾಕಿಕೊಂಡ ಪತಿ. ಈತ 2007ರಲ್ಲಿ ಅಮೂಲ್ಯರನ್ನು ಮದುವೆಯಾಗಿದ್ದನು. ಈ ದಂಪತಿಗೆ 8 ವರ್ಷದ ಮಗಳಿದ್ದಾಳೆ. ನಾಗರಾಜು ಟಿಸಿಎಸ್ ತಂಡದ ಲೀಡರ್ ಆಗಿ ಕೆಲಸ ಮಾಡುತ್ತಿದ್ದು, ಇಬ್ಬರ ಸಂಸಾರ ಜೀವನ ಚೆನ್ನಾಗಿ ಇತ್ತು. ಆದರೆ ಕಳೆದ ಕೆಲವು ದಿನಗಳ ಹಿಂದೆ ಜಗಳವಾಡಿಕೊಂಡು ಇಬ್ಬರು ಬೇರೆ ಬೇರೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಪತ್ನಿ ಅಮೂಲ್ಯ ಅವರಿಗೆ ತನ್ನ ಪತಿ ಕಳೆದ ಆರು ತಿಂಗಳಿನಿಂದ ಆತನ ಸಹೋದ್ಯೋಗಿ ಜೊತೆ ತುಂಬಾ ಕ್ಲೋಸ್ ಆಗಿ ಇರುವುದು ತಿಳಿದು ಬಂದಿದೆ. ಇದನ್ನು ಪತ್ತೆ ಮಾಡಲು ಬುಧವಾರ ಸಂಬಂಧಿಗಳೊಂದಿಗೆ ಹಸ್ತಿನಾಪುರಂವನ ದ್ವಾರಕಾನಗರ ಪತಿಯ ಮನೆಗೆ ಏಕಾಏಕಿ ಹೋಗಿದ್ದಾರೆ. ಇತ್ತ ಪತಿ ನಾಗರಾಜು ಪ್ರೇಯಸಿ ಜೊತೆ ಇದ್ದನು. ನಂತರ ನಾಗರಾಜು ಪ್ರಿಯತಮೆ ಜೊತೆ ಇದ್ದಾಗ ರೆಡ್‍ಹ್ಯಾಂಡ್ ಆಗಿ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಪತ್ನಿ ಅಮೂಲ್ಯ ಸಂಬಂಧಿಕರ ಸಹಾಯದಿಂದ ಅವರ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ನಾಗರಾಜುವಿನ ವಿರುದ್ಧ 490 ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇಬ್ಬರಿಗೂ ಕೌನ್ಸಿಲ್ ಮಾಡಿ ಮನೆಗೆ ವಾಪಸ್ ಕಳುಹಿಸಿದ್ದೇವೆ ಎಂದು ಮೀರ್ ಪೇಟ್ ಸಿಐ ಯಾದಯ್ಯ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv