Tag: human

  • ಬಾಕ್ಸ್‌ನಲ್ಲಿ ಕಣ್ಣು, ಕಿವಿ ಮೆದುಳು ಸಂಗ್ರಹಿಸಿಟ್ಟ ದುಷ್ಕರ್ಮಿಗಳು

    ಬಾಕ್ಸ್‌ನಲ್ಲಿ ಕಣ್ಣು, ಕಿವಿ ಮೆದುಳು ಸಂಗ್ರಹಿಸಿಟ್ಟ ದುಷ್ಕರ್ಮಿಗಳು

    ಮುಂಬೈ: ಕಟ್ಟಡದ ನೆಲಮಾಳಿಗೆಯಲ್ಲಿ ಬೀಗ ಹಾಕಲಾಗಿದ್ದ ಅಂಗಡಿಯೊಂದರಲ್ಲಿ ಮೃತ ದೇಹದ ಭಾಗಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಕಳೆದೆರಡು ದಿನಗಳಿಂದ ಅಂಗಡಿಯಿಂದ ದುರ್ವಾಸನೆ ಬರುತ್ತಿತ್ತು. ಈ ಕುರಿತಾಗಿ ಮಹಾರಾಷ್ಟ್ರದ ನಾಸಿಕ್ ನಗರದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪರಿಶೀಲನೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

    ನಡೆದಿದ್ದೇನು?: ಮೂರ್ನಾಲ್ಕು ದಿನಗಳಿಂದ ಬೀಗ ಹಾಕಲಾಗಿದ್ದ ಅಂಗಡಿಯೊಂದರಿಂದ ದುರ್ನಾತ ಬರುತ್ತಿತ್ತು. ಅಕ್ಕಪಕ್ಕದವರಿಗೆ ಅನುಮಾನ ಉಂಟಾಗಿ ಪೊಲೀಸರಿಗೆ ಈ ವಿಷಯ ತಿಳಿಸಿದ್ದರು. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಗಡಿಯ ಬಾಗಿಲು ಒಡೆದು ನೆಲಮಾಳಿಗೆಯನ್ನು ಪರಿಶೀಲನೆ ಮಾಡಿದ್ದಾರೆ.

    ತುಂಬಿಡಲಾಗಿದ್ದ ಗುಜರಿ ವಸ್ತುಗಳ ಮಧ್ಯೆ ಒಂದು ಬಾಕ್ಸ್‌ನಲ್ಲಿ ಮನುಷ್ಯರ ಕಣ್ಣು, ಕಿವಿ, ಮೆದುಳು, ಮುಖದ ಕೆಲವು ಭಾಗಗಳು ಪತ್ತೆಯಾಗಿವೆ. ಮಾನವನ ದೇಹದ ಭಾಗಗಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಅಂಗಡಿಯ ಮಾಲೀಕನ ಇಬ್ಬರು ಪುತ್ರರು ವೈದ್ಯರಾಗಿದ್ದಾರೆ. ವೈದ್ಯಕೀಯ ಉದ್ದೇಶಗಳಿಗಾಗಿ ಸಂರಕ್ಷಿಸಿಟ್ಟಿರುವ ಸಾಧ್ಯತೆಯಿದೆ. ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮುಂಬೈ ನಾಕಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

  • ಮೊದಲ ಬಾರಿಗೆ ಮಾನವನಿಗೆ ಹಂದಿ ಕಿಡ್ನಿ ಅಳವಡಿಕೆ

    ಮೊದಲ ಬಾರಿಗೆ ಮಾನವನಿಗೆ ಹಂದಿ ಕಿಡ್ನಿ ಅಳವಡಿಕೆ

    ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡ(ಕಿಡ್ನಿ)ಯನ್ನು ಮಾನವನಿಗೆ ಕಸಿ ಮಾಡಲಾಗಿದೆ. ಕಿಡ್ನಿ ಅಳವಡಿಸಿದ ರೋಗಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಆಗಿಲ್ಲ ಎಂದು ನ್ಯೂಯಾರ್ಕ್ ವೈದ್ಯರು ಹೇಳಿದ್ದಾರೆ.

    ನ್ಯೂಯಾರ್ಕ್ ಲಾಂಗ್‍ಒನ್ ಹೆಲ್ತ್(ಎನ್‍ವೈಎಲ್) ಸಂಸ್ಥೆಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಿದುಳು ನಿಷ್ಕ್ರಿಯವಾಗಿ ಜೀವರಕ್ಷಕ ಸಾಧನದ ಮೇಲೆ ಜೀವಂತವಿರುವ ಮಹಿಳೆಗೆ ವಂಶವಾಹಿ ಪರಿವರ್ತಿಸಲಾದ ಹಂದಿ ಕಿಡ್ನಿ ಕಸಿ ಮಾಡಲಾಗಿದೆ. ಇದರಿಂದ ಹಂದಿಯ ಕಿಡ್ನಿಯನ್ನು ಮಾನವ ದೇಹ ತಕ್ಷಣಕ್ಕೆ ತಿರಸ್ಕರಿಸುವುದಿಲ್ಲ ಎಂಬುದು ಗೊತ್ತಾಗಿದೆ ಎಂದು ಎನ್‍ವೈಎಲ್ ಸಂಸ್ಥೆ ತಿಳಿಸಿವೆ.

    ಕಿಡ್ನಿ ಕಸಿಯಾದ ಮೇಲೆ ಮೂರು ದಿನ ಅದನ್ನು ಆಕೆಯ ದೇಹದ ಹೊರಗೆ ನಿರ್ವಹಿಸಲಾಯಿತು. ಆಕೆಗೆ ಮೂತ್ರ ಮಾಡಲು ಯಾವುದೇ ಕಷ್ಟವಾಗಿಲ್ಲ ಎಂಬುದನ್ನು ನಾವು ಖಚಿತ ಮಾಡಿಕೊಂಡೆವು. ಈ ಪ್ರಯೋಗಾತ್ಮಕ ಚಿಕಿತ್ಸೆ ನಡೆಸುವುದಕ್ಕೂ ಮುದಲು ಮಿದುಳು ನಿಷ್ಕ್ರಿಯವಾದ ಮಹಿಳೆಯ ಕುಟುಂಬಸ್ಥರಿಂದ ಒಪ್ಪಿಗೆ ಪಡೆದುಕೊಂಡಿದ್ದೇವೆ ಎಂದು ಎನ್‍ವೈಎಲ್ ವಿವರಿಸಿದೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ

    ಪ್ರಯೋಗ: ಮುದುಳು ನಿಷ್ಕ್ರಿಯವಾದ ಮಹಿಳೆಯ ಮೂತ್ರಪಿಂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಂದಿ ಕಿಡ್ನಿ ಅಳವಡಿಸಿದ ನಂತರ ಕಾರ್ಯ ಸಹಜವಾಗಿ ನಡೆಸಲು ಆರಂಭವಾಯಿತ್ತು ಎಂದು ನ್ಯೂಯಾರ್ಕ್ ಲಾಂಗ್‍ಒನ್ ಹೆಲ್ತ್ ಸಂಶೋಧನಾ ತಂಡದ ಮುಖ್ಯಸ್ಥ ಡಾ. ರಾಬರ್ಟ್ ಮಾಂಟ್ಗೊಮೆರಿ ಹೇಳಿದ್ದಾರೆ. ದನ್ನೂ ಓದಿ: 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದ : ಸಿದ್ದರಾಮಯ್ಯ

    ಮಾನವರಿಗೆ ಪ್ರಾಣಿಗಳ ಅಂಗಗಳನ್ನು ಜೋಡಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಆದರೆ ಕಸಿ ಮಾಡಿದ ತಕ್ಷಣ ಮಾನವ ದೇಹ ಸ್ಪಂದನೆ ನೀಡುತ್ತಿದೆ. ರಾಬರ್ಟ್ ಅವರ ತಂಡ ಈ ನಿಟ್ಟಿನಲ್ಲಿ ಮೊದಲ ಹಂತದ ಯಶಸ್ಸುಗಳಿಸಿದೆ. ಈ ಪ್ರಯೋಗವನ್ನು ಥೇರಪ್ಯೂಟಿಕ್ಸ್ ಕಾಪ್ರ್ಸ್ ರಿವಿವಿಕಾರ್ ಯುನಿಟ್ ಮಾಡಿದೆ.

  • ಮಾನವನ ಮುಖ ಹೊತ್ತು ಜನಿಸಿದ ಮೇಕೆ ಮರಿ

    ಮಾನವನ ಮುಖ ಹೊತ್ತು ಜನಿಸಿದ ಮೇಕೆ ಮರಿ

    ಗಾಂಧಿನಗರ: ಆಗ ತಾನೇ ಜನಿಸಿದ ಮೇಕೆ ಮರಿಯೊಂದು ಮಾನವನಂತೆ ಮುಖ ಹೊಂದಿರುವ ಫೋಟೋ ಹಾಗೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು. ಮಾನವನಂತೆ ಮುಖವಿರುವ ಮೇಕೆ ಮರಿಯೊಂದು ಜನಿಸಿರುವ ವಿಚಿತ್ರ ಘಟನೆ ಗುಜರಾತ್‍ನ ಸಾಂಗ್ದ್ ತಾಲೂಕಿನ ಟ್ಯಾಪಿ ನದಿಸಮೀಪದ ಸೆಲ್ಟಿಪಾಡಾ ಗ್ರಾಮದಲ್ಲಿ ನಡೆದಿದೆ. ಮೇಕೆಯಂತೆಯೇ, ಮೇಕೆ ಮರಿ ನಾಲ್ಕು ಕಾಲು ಹಾಗೂ ಕಿವಿಗಳನ್ನು ಹೊಂದಿದೆ. ಆದರೆ ಉಳಿದ ಅರ್ಧ ಭಾಗ ನೋಡಲು ಮನುಷ್ಯನಂತೆ ಕಾಣಿಸುತ್ತದೆ.

    ಈ ಮೇಕೆಯು ರೈತ ಅಜಯ್ಭಾಯ್ ಎಂಬವರ ಮನೆಯಲ್ಲಿ ಜನಿಸಿದ್ದು, ಹಣೆ, ಕಣ್ಣು, ಬಾಯಿ ಮತ್ತು ಗಲ್ಲ ಸೇರಿದಂತೆ ಕೆಲವು ಭಾಗಗಳು ಮನುಷ್ಯರಂತೆ ಇದೆ. ಅಲ್ಲದೆ ಮೇಕೆ ಬಾಲವನ್ನು ಸಹ ಹೊಂದಿಲ್ಲ. ಆದರೆ ಮೇಕೆ ಜನಿಸಿದ ಬಳಿಕ ಕೇವಲ ಹತ್ತು ನಿಮಿಷಗಳ ಕಾಲ ಮಾತ್ರ ಬದುಕಿತ್ತು.

    ವೈರಲ್ ಆಗಿರುವ ವೀಡಿಯೋದಲ್ಲಿ, ಮೇಕೆ ಮರಿಯನ್ನು ಗ್ರಾಮಸ್ಥರು ಸಮಾಧಿ ಮಾಡುವ ಮುನ್ನ ಪೂಜೆ ಮಾಡುವುದನ್ನು ಕಾಣಬಹುದಾಗಿದೆ. ಇದು ಪೂರ್ವಜರ ಜನ್ಮ ಎಂದು ಅವರು ಭಾವಿಸಿದ್ದಾರೆ.

  • ಮಾನವ ಸಹಿತ ಬಾಹ್ಯಾಕಾಶ ಪ್ರಯಾಣ ಮತ್ತಷ್ಟು ಹತ್ತಿರ: ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

    ಮಾನವ ಸಹಿತ ಬಾಹ್ಯಾಕಾಶ ಪ್ರಯಾಣ ಮತ್ತಷ್ಟು ಹತ್ತಿರ: ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಕನಸಿನ ಯೋಜನೆ `ಮಾನವ ಸಹಿತ ಬಾಹ್ಯಾಕಾಶ ಪಯಣ’ ಮತ್ತಷ್ಟು ಹತ್ತಿರವಾಗಿದ್ದು, ಇಸ್ರೋ ನಡೆಸಿದ ಪರೀಕ್ಷೆ ಅಭೂತಪೂರ್ವ ಯಶಸ್ಸು ಸಾಧಿಸಿದೆ.

    ಇಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ ಬೆಳಿಗ್ಗೆ 7 ಗಂಟೆಗೆ ಇಸ್ರೋ ಈ ಪರೀಕ್ಷೆ ಮಾಡಿದ್ದು, ನಿರೀಕ್ಷೆಯಂತೆಯೇ ನೌಕೆ ಉಡಾವಣಾ ವಾಹಕದಿಂದ ಬೇರ್ಪಟ್ಟು ಪ್ಯಾರಾಚೂಟ್ ಗಳ ಮೂಲಕ ಸುರಕ್ಷಿತವಾಗಿ ಭೂಮಿಗೆ ಇಳಿದಿದೆ.

    ಭವಿಷ್ಯದಲ್ಲಿ ಮಾನವರನ್ನು ಬಾಹ್ಯಕಾಶಕ್ಕೆ ಕಳುಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಮುಂದಾಗಿರುವ ಇಸ್ರೋ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು ಯಾನಿಗಳ ಮಾದರಿಗಳನ್ನು ಹೊತ್ತ ನೌಕೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಬಾಹ್ಯಾಕಾಶ ಪಯಣದ ವೇಳೆ ತುರ್ತು ಪರಿಸ್ಥಿತಿಯಲ್ಲಿ ತುರ್ತು ನಿರ್ಗಮನ ಮಾಡುವುದು ಹೇಗೆ ಎಂಬ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ.

    ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾದ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ ಶಿವನ್, ನೌಕೆಯನ್ನು ರಾಕೆಟ್ ಇಂಜಿನ್‍ಗೆ ನೌಕೆಯನ್ನು  ಜೋಡಣೆಮಾಡಲಾಗಿತ್ತು. ಈ ನೌಕೆಯಲ್ಲಿ ಅಂತರಿಕ್ಷ ಯಾನಿಗಳ ದೇಹದ ಮಾದರಿಗಳನ್ನು ಇರಿಸಿ ಉಡಾವಣೆ ಮಾಡಲಾಯಿತು. ಕೆಲವೇ ಕ್ಷಣಗಳಲ್ಲಿ ರಾಕೆಟ್‍ನಿಂದ ಬೇರ್ಪಟ್ಟ ನೌಕೆ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಲಾಯಿತು ಎಂದು ಹೇಳಿದರು.

    ಪ್ರಯೋಗಾರ್ಥವಾಗಿ ನಡೆದ ಪರೀಕ್ಷೆ ಯಶಸ್ವಿಯಾಗಿದ್ದು, 259 ಸೆಕೆಂಡ್‍ಗಳ ಕಾಲ ನಡೆದ ಪರೀಕ್ಷೆಯ ಯಶಸ್ವಿನೊಂದಿಗೆ ಮುಂದಿನ ದಿನಗಳಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಹಾಯಕವಾಗುತ್ತದೆ. ಅಂತರಿಕ್ಷಯಾನಕ್ಕೆ ಇನ್ನಷ್ಟು ಹಾದಿ ಸುಗಮವಾಗಿದೆ. ಉಡಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ನೌಕೆ ಒಳಗಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ನಿಟ್ಟಿನಲ್ಲಿ ನಡೆಸಿದ ಮೊದಲ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

    1962ರಲ್ಲಿ ಪ್ರಾರಂಭಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಳ್ಳಲು ಹಲವಾರು ಪ್ರಯೋಗಗಳನ್ನು ನಡೆಸುತ್ತಾ ಬಂದಿದೆ. ವಿಶ್ವದಲ್ಲಿ ಇಲ್ಲಿಯವರೆಗೂ ಕೇವಲ ಮೂರು ರಾಷ್ಟ್ರಗಳಾದ ರಷ್ಯಾ, ಅಮೆರಿಕ ಹಾಗೂ ಚೀನಾವು ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಂಡಿದ್ದವು. ಇಂದು ನಡೆದ ಪ್ರಯೋಗ ಯಶಸ್ವಿಯಾಗಿದ್ದರಿಂದ ಭಾರತದ ಮಾನವಸಹಿತ ಅಂತರಿಕ್ಷ ಯಾನದ ಕನಸು ನನಸಾಗುವ ಸಮಯಯ ಸನ್ನಿಹಿತವಾಗಿದೆ.

     

  • ವಿಶ್ವದ ಮೊದಲ ತಲೆ ಕಸಿ ಯಶಸ್ವಿ ಆಗಿದೆಯೋ? ಇಲ್ವೋ? ತಲೆಕೆಡಿಸಿಕೊಂಡಿದ್ದಾರೆ ವೈದ್ಯರು

    ವಿಶ್ವದ ಮೊದಲ ತಲೆ ಕಸಿ ಯಶಸ್ವಿ ಆಗಿದೆಯೋ? ಇಲ್ವೋ? ತಲೆಕೆಡಿಸಿಕೊಂಡಿದ್ದಾರೆ ವೈದ್ಯರು

    ಲಂಡನ್: ವಿಶ್ವದ ಮೊದಲ ತಲೆ ಕಸಿ ಯಶಸ್ವಿಯಾಗಿದೆ ಎಂದು ಇಟಲಿಯ ಶಸ್ತ್ರಚಿಕಿತ್ಸಕರೊಬ್ಬರು ಘೋಷಿಸಿದ್ದು ಇದೀಗ ವೈದ್ಯಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

    ಇಟಲಿಯ ಟ್ಯುರಿನ್ ಅಡ್ವಾನ್ಸ್‍ಡ್ ನ್ಯೂರೋಮಾಡ್ಯುಲೇಷನ್ ಸಂಸ್ಥೆಯ ಸೆರ್ಜಿಯೋ ಕ್ಯಾನ್‍ವೆರೋ ಅವರು ಚೀನಾದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ  ಹೇಳಿಕೆ ನೀಡಿದ್ದಾರೆ. ಆದರೆ ವಿಶ್ವದಲ್ಲಿರುವ ಹಲವು ವೈದ್ಯರು ಈ ರೀತಿ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

    ಕ್ಯಾನ್‍ವೆರೋ ಹೇಳಿದ್ದು ಏನು?
    ಚೀನಾದ ಹರ್ಬಿನ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 18 ಗಂಟೆಗಳ ಕಾಲ ನಡೆದ ತಲೆ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಮೆದುಳು ನಿಷ್ಕ್ರಿಯಗೊಂಡಿರುವ ವ್ಯಕ್ತಿಯ ತಲೆಯನ್ನು ಬೇರೊಬ್ಬ ವ್ಯಕ್ತಿಗೆ ಜೋಡಿಸಿದ್ದು, ಜೋಡಣೆಯಾದ ಬಳಿಕ ದೇಹದ ಬೆನ್ನೆಲುಬು, ನರಗಳು ಮತ್ತು ರಕ್ತ ನಾಳಗಳು ಯಶಸ್ವಿಯಾಗಿ ಕಾರ್ಯನಿರ್ವಹಣೆಯಾಗಿದೆ ಎಂದು ಹೇಳಿದ್ದಾರೆ.

    ಸಾಧ್ಯವೇ ಇಲ್ಲ:
    ಈ ಸಂಬಂಧವಾಗಿ ಇಂಗ್ಲೆಂಡಿನ ಕಾರ್ಡಿಫ್ ಮೆಡಿಕಲ್ ವಿಶ್ವವಿದ್ಯಾಲಯಲ್ಲಿ ಪ್ರಾಧ್ಯಾಪಕಾರದ ಡಿಯನ್ ಬರ್ನಟ್ ಎಂಬವರು ಗಾರ್ಡಿಯನ್‍ಗೆ ಲೇಖನ ಬರೆದಿದ್ದು, ತಲೆ ಕಸಿ ನಡೆಯಲು ಸಾಧ್ಯವೇ ಇಲ್ಲ. ದೇಹದ ಉಳಿದ ಅಂಗಾಗಳಂತೆ ತಲೆ ಅಲ್ಲ. ಇಬ್ಬರ ತಲೆ ಬೇರ್ಪಡಿಸಿದರೆ ರಕ್ತ ಪರಿಚಲನೆ ಹೇಗೆ ನಡೆಯುತ್ತದೆ? ಕ್ಯಾನ್‍ವೆರೋ ಅವರು ಮೆದುಳು ನಿಷ್ಕ್ರಿಯಗೊಂಡಿರುವ ವ್ಯಕ್ತಿಯ ತಲೆಯನ್ನು ಜೋಡಿಸಿರುವುದಾಗಿ ಹೇಳಿದ್ದಾರೆ. ಈಗಾಗಲೇ ನಿಷ್ಕ್ರಿಯಗೊಂಡಿರುವ ಮೆದಳು ಬೇರೆ ವ್ಯಕ್ತಿಯ ದೇಹದಲ್ಲಿ ಜೋಡಣೆಯಾದ ಬಳಿಕ ಚುರುಕಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

    ಕೆಲ ವೈದ್ಯರು ತಲೆ ಕಸಿ ನಡೆಯಲು ಸಾಧ್ಯವೇ ಇಲ್ಲ. ಕ್ಯಾನ್‍ವೆರೋ ಪ್ರಚಾರಕ್ಕಾಗಿ ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎನ್ನುವುದಕ್ಕೆ ಯಾವುದೇ ಪ್ರಬಲವಾದ ಸಾಕ್ಷ್ಯಗಳನ್ನು ನೀಡಿಲ್ಲ. ಹೀಗಾಗಿ ಈ ಶಸ್ತ್ರ ಚಿಕಿತ್ಸೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಈ ಹೃದಯ ಕಸಿ, ಕಿಡ್ನಿ ಕಸಿ  ಮಾಡಿದಂತೆ ತಲೆ ಕಸಿಯನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ  ಎಂದು ಪ್ರತಿಕ್ರಿಯಿಸಿದ್ದಾರೆ.