Tag: Howdu Hulia

  • 2019ರಲ್ಲಿ ರಾತ್ರೋರಾತ್ರಿ ಸ್ಟಾರ್ ಆದವರು

    2019ರಲ್ಲಿ ರಾತ್ರೋರಾತ್ರಿ ಸ್ಟಾರ್ ಆದವರು

    ಪ್ರತಿಭೆಯಿದ್ದರೆ ಒಂದಲ್ಲ ಒಂದು ದಿನ ಸ್ಟಾರ್ ಆಗುತ್ತಾರೆ. ಆದರೆ ಅದೃಷ್ಟ ಇದ್ದರೆ ಒಂದೇ ರಾತ್ರಿಯಲ್ಲೂ ಸ್ಟಾರ್ ಆಗಿ ಮಿಂಚಬಹುದು. ಅದೇ ರೀತಿ 2019ರಲ್ಲಿ ಅನೇಕರು ಒಂದು ರಾತ್ರಿಯಲ್ಲೇ ಸ್ಟಾರ್ ಆಗಿ ಮಿಂಚಿದ್ದಾರೆ. ಉದಾಹರಣೆಗೆ ಹಳ್ಳಿಯಲ್ಲಿ ಕುರಿ ಕಾಯುತ್ತಿದ್ದ ಹುಡುಗ ಇಂದು ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಇನ್ನೂ ರೈಲ್ವೆ ಸ್ಟೇಷನ್‍ನಲ್ಲಿ ಕುಳಿತು ಹಾಡು ಹಾಡುತ್ತಿದ್ದವರು ನ್ಯಾಷನಲ್ ಸ್ಟಾರ್ ಆಗಿ ಮಿಂಚಿದ್ದಾರೆ. ಹೀಗಾಗಿ 2019ರಲ್ಲಿ ಯಾರೆಲ್ಲಾ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚಿದ್ದಾರೆ ಎಂಬುದನ್ನು ಒಮ್ಮೆ ನೋಡಿ

    ಕೊಪ್ಪಳದ ಗಂಗಮ್ಮ:
    ಅಂಬೇಡ್ಕರ್ ನಗರದ ನಿವಾಸಿ ಗಂಗಮ್ಮ ಗದ್ದೆಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಇವರು 20 ವರ್ಷದಿಂದಲೂ ಹಾಡುತ್ತಿದ್ದರೂ ಆದರೆ ಫೇಸ್‍ಬುಕ್ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಇಂದು ಗಾಯಕಿ ಕೊಪ್ಪಳದ ಗಂಗಮ್ಮ ನಾಡಿನಾದ್ಯಂತ ಚಿರಪರಿಚಿತರಾಗಿದ್ದು, ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದಾರೆ. ಇವರನ್ನು ಮಾದರಿಯಾಗಿಟ್ಟುಕೊಂಡು ಅನೇಕ ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರುವ ಪ್ರಯತ್ನ ಮಾಡುತ್ತಿವೆ.

    ಕೊಪ್ಪಳದ ಅರ್ಜುನ್ ಇಟಗಿ:
    ಅರ್ಜುನ್ ಇಟಗಿ ಏಳರ ಬಾಲಕ. ಆದರೆ ಖಾಸಗಿ ವಾಹಿನಿಯ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಸಣ್ಣ ವಯಸ್ಸಿನಲ್ಲೇ ದೊಡ್ಡ ಯಶಸ್ಸು ಗಳಿಸಿಕೊಂಡಿದ್ದಾರೆ. ಈಗ ಛೋಟಾ ಸಿಂಗರ್ ಎಂತಲೇ ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿರುವ ಪ್ರತಿಭೆ. ಅರ್ಜುನ್ ಇಟಗಿ ಅದ್ಭುತ ಗಾಯನದ ಜೊತೆ ತನ್ನ ಸ್ಟೈಲ್‍ನಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ಪ್ರೈಜ್ ಟ್ಯಾಗ್ ತೆಗೆಯದೇ ಕನ್ನಡಕ ಹಾಕಿಕೊಳ್ಳುವ ಅರ್ಜುನ್ ಸ್ಟೈಲ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಈ ವರ್ಷ ಕೊಪ್ಪಳದ ಪುಟಾಣಿ ಅರ್ಜುನ್ ಇಟಗಿ, ರಾಜ್ಯದ ಮೂಲೆ ಮೂಲೆಯಲ್ಲೂ ಫೇಮಸ್ ಆಗಿದ್ದಾನೆ.

    ಸರಿಗಮಪ ಹನುಮಂತ್:
    ಯಾವುದೇ ಸಂಗೀತ ತರಬೇತಿಯನ್ನು ಪಡೆಯದೆ, ಕುರಿ ಮೇಯಿಸುತ್ತಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಕಾರ್ಯಕ್ರಮದಲ್ಲಿ ಹಾವೇರಿ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದ ನಿವಾಸಿ ಹನುಮಂತ ಭಾಗವಹಿಸಿದ್ದರು. ಇಂದು ಹಾಡು ಹೇಳುವ ಮೂಲಕ ಹನುಮಂತ ಪ್ರಸಿದ್ಧಿಯಾಗಿದ್ದಾರೆ. ಬಾಲ್ಯದಿಂದಲೂ ಹನುಮಂತ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಓದಿದ್ದು ಕೇವಲ ಐದನೇ ತರಗತಿ. ಸಂಗೀತ ಕಲಿಯಲು ಯಾವುದೇ ಸಂಗೀತ ಶಾಲೆಗೂ ಹೋಗಿಲ್ಲ. ಕುರಿಗಳನ್ನ ಮೇಯಿಸುತ್ತಾ ಮೊಬೈಲಿನಲ್ಲಿ ಹಾಡು ಕೇಳುತ್ತಾ ಇಂಪಾಗಿ ಹಾಡುಗಳನ್ನ ಹಾಡುವುದನ್ನು ಕಲಿಯುತ್ತಿದ್ದಾರೆ. ಇಂದು ಡ್ಯಾನ್ಸ್ ಮಾಡುವ ಮೂಲಕವೂ ಕರ್ನಾಟಕದ ಜನತೆಗೆ ಅಚ್ಚುಮೆಚ್ಚಾಗಿದ್ದಾರೆ.

    ರಾನು ಮೊಂಡಲ್:
    ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ರಾನು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನು ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆದ ಬೆನ್ನಲೇ ರಾನು ಅವರಿಗೆ ರಿಯಾಲಿಟಿ ಶೋನಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಬಳಿಕ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಚಿತ್ರದಲ್ಲಿ ಹಾಡಲು ರಾನು ಅವರಿಗೆ ಅವಕಾಶ ಕೊಟ್ಟಿದ್ದರು. ಹೀಗೆ ರಾನು ಮೊಂಡಲ್ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚಿದ್ದಾರೆ.

    ಹೌದು ಹುಲಿಯ -ಪೀರಪ್ಪ:
    ಉಪಚುನಾವಣೆ ಪ್ರಚಾರದ ವೇಳೆ ಪಕೀರಪ್ಪ (ಪೀರಪ್ಪ) ಕಟ್ಟಿಮನಿ ಎಂಬವರು ಕುಡಿದ ಮತ್ತಿನಲ್ಲಿ ಹೌದು ಹುಲಿಯಾ ಎಂದು ಹೇಳಿದ್ದರು. ಈ ಡೈಲಾಗ್ ರಾಜ್ಯಾದ್ಯಂತ ಫೇಮಸ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಸಿದ್ದರಾಮಯ್ಯನವರು ಪ್ರಚಾರದ ಭಾಷಣ ಮಾಡುವ ವೇಳೆ ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು ಅಂದಾಗ ವೇದಿಕೆ ಮುಂದೆ ಕುಳಿತಿದ್ದ ಪಕೀರಪ್ಪ ಕಟ್ಟಿಮನಿ ‘ಹೌದು ಹುಲಿಯಾ’ ಅಂತಾ ಜೋರಾಗಿ ಕೂಗಿ ಹೇಳಿದ್ದರು. ಟಿಕ್‍ಟಾಕ್‍ಗಳಲ್ಲಿ ಎಲ್ಲಾ ಫುಲ್ ಬಳಕೆ ಮಾಡಿಕೊಂಡು ಡಬ್ ಸ್ಮ್ಯಾಶ್ ಮಾಡಿದ್ರು. ಇದಾದ ಬಳಿಕ ಡೈಲಾಗ್ ಹೇಳಿದ ಪಕೀರಪ್ಪ ಕಟ್ಟಿಮನಿ ಕೂಡ ಫುಲ್ ಫೇಮಸ್ ಆದರು.

    ಗದಗ ಹನುಮಂತಪ್ಪ(ಕುರಿ ಕಾಯುವ):
    ಗದಗ ಜಿಲ್ಲೆ ಶಿರಹಟ್ಟಿಯ ಕುರಿಗಾಹಿ ಹನುಮಂತ ಬಟ್ಟೂರ ಕುರಿ ಕಾಯುತ್ತಿರುವಾಗ ಶಿವರಾಜ್‍ಕುಮಾರ್ ಸಿನಿಮಾದ ‘ಸಾಗರಿಯೇ ಸಾಗರಿಯೇ’ ಹಾಡನ್ನು ಹಾಡುತ್ತಾ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದರು. ಆತ ಹಾಡಿರುವ ಹಾಡು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ರಾತ್ರೋರಾತ್ರಿ ಫೇಮಸ್ ಆಗಿದ್ದನು. ಹನುಮಂತ ಹೈಸ್ಕೂಲ್‍ವರೆಗೂ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾನೆ. ಈತನ ಹಾಡನ್ನು ಕೇಳಿ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಕೋಟೆ ಡ್ಯಾನ್ಸರ್ ಪ್ರದೀಪ್: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಹಿಂಡಸಕಟ್ಟೆ ಗ್ರಾಮದ ರಂಗಸ್ವಾಮಿ ಹಾಗೂ ತಿಪ್ಪಮ್ಮ ದಂಪತಿಯ ಮೂರನೇ ಮಗ ಪ್ರದೀಪ್. ಹಲವು ಬಾರಿ ಪರೀಕ್ಷೆಗಳಲ್ಲಿ ಫೇಲ್ ಆಗಿದ್ದ ಪ್ರದೀಪ್ ವ್ಯವಸಾಯದ ಕೆಲಸಕ್ಕೆ ಸೀಮಿತನಾಗಿದ್ದನು. ಮನೆಯಲ್ಲಿ ಮೈಕಲ್ ಜಾಕ್ಸನ್ ಹಾಡು, ಡ್ಯಾನ್ಸ್ ಕೇಳುತ್ತಾ ಅವರಂತ ಸಾಧಿಸಲು ಮುಂದಾದ. ಒಮ್ಮೆ ಜಮೀನಿನಲ್ಲಿ ಇಂಗ್ಲಿಷ್ ಹಾಡನ್ನು ಹೇಳುತ್ತಾ, ಮೈಕಲ್ ಜಾಕ್ಸನ್ ಮಾದರಿಯಲ್ಲಿ ನೃತ್ಯ ಮಾಡುವ ದೃಶ್ಯ ಸಾಮಾಜಿಕ ಜಾಲಾತಾಣಕ್ಕೆ ಅಪ್ಲೋಡ್ ಆಯ್ತು. ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾತ್ರೋ ರಾತ್ರಿ ಸ್ಟಾರ್ ಆಗಿದ್ದಾನೆ.

  • ಪಾರ್ಟಿ ಮಾಡುತ್ತಾ ‘ಹೌದು ಹುಲಿಯಾ’ ಎಂದ ಚೀನಿಯರು

    ಪಾರ್ಟಿ ಮಾಡುತ್ತಾ ‘ಹೌದು ಹುಲಿಯಾ’ ಎಂದ ಚೀನಿಯರು

    ಧಾರವಾಡ: ಉಪಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಭಾರೀ ವೈರಲ್ ಆಗಿದ್ದ ಹೌದು ಹುಲಿಯಾ ಉದ್ಘೋಷ ಈಗ ದೂರದ ಚೀನಾ ದೇಶವನ್ನೂ ತಲುಪಿದೆ.

    ಹೌದು. ಚೀನಾ ದೇಶದ ಶೆಂಜಿನ್ ನಗರದಲ್ಲಿ ಭಾರತೀಯ ದೇಸಿ ಶೈಲಿಯಲ್ಲಿ ಪಾರ್ಟಿ ಮಾಡಿರುವ ನಾಲ್ವರು ಚೀನಿ ಯುವಕರು ವಿಸ್ಕಿ ಕುಡಿಯುತ್ತ ಹೌದು ಹುಲಿಯಾ ಡೈಲಾಗ್ ಹೇಳಿ ಖುಷಿಪಟ್ಟಿದ್ದಾರೆ. ಚೀನಾ ದೇಶ ಶೆಂಜಿನ್ ನಗರದ ಜೆಮ್ಮಿ, ಹೆನ್ರಿ, ಜೆಫ್ ಹಾಗೂ ಜಾಯ್ ಕ್ಸೋ ಟ್ಯಾಂಗ್ ಅವರು ಭಾರತೀಯ ದೇಸಿ ಶೈಲಿಯಲ್ಲಿ ಪಾರ್ಟಿ ಮಾಡುತ್ತ ಹೌದು ಹುಲಿಯಾ ಎಂದಿದ್ದಾರೆ.

    ಧಾರವಾಡ ಮೂಲದ ಶಶಿ ಶಿರಗುಪ್ಪಿ ಅವರು ಸದ್ಯ ಚೀನಾದಲ್ಲಿ ನೆಲೆಸಿದ್ದಾರೆ. ಅವರ ಜೊತೆಯಲ್ಲಿ ಚೀನಿ ಸ್ನೇಹಿತರು ಪಾರ್ಟಿ ಮಾಡುತ್ತಿದ್ದಾಗ ಶಶಿ ಅವರ ಬಾಯಿಂದ ಹೌದು ಹುಲಿಯಾ ಎಂಬುದನ್ನು ಕೇಳಿ ಅವರು ಹಾಗೆಯೇ ಉದ್ಘೋಷ ಹೊರಡಿಸಿದ್ದಾರೆ. ಕನ್ನಡದ ದೊಡ್ಮನೆ ಹುಡ್ಗ ಚಿತ್ರದ ‘ತ್ರಾಸ್ ಆಕ್ಕತಿ’ ಹಾಡು ಹಾಕಿಕೊಂಡು ಪಾರ್ಟಿ ಮಾಡಿರುವ ಈ ಚೀನಿಯರನ್ನು ಪಾರ್ಟಿ ಹೇಗಿತ್ತು? ಊಟ ಹೇಗಿತ್ತು? ಡ್ರಿಂಕ್ಸ್ ಹೇಗಿತ್ತು ಎಂದು ಕೇಳಿದಾಗ ಹೌದು ಹುಲಿಯಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಈ ದೃಶ್ಯವನ್ನು ಶಶಿ ಅವರು ವಿಡಿಯೋ ಮಾಡಿ ತಮ್ಮ ಯುಟ್ಯೂಬ್ ಚಾನಲ್‍ಗೆ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಚೀನಿಯರ ಬಾಯಲ್ಲಿ ನಮ್ಮ ಕನ್ನಡ ಭಾಷೆ ಕೇಳುತ್ತಿರುವುದು ಖುಷಿಯಾಗುತ್ತಿದೆ ಎಂದು ಶಶಿ ಹೇಳಿದ್ದಾರೆ.

  • ಸಿದ್ದರಾಮಯ್ಯರನ್ನು ಭೇಟಿಯಾದ ಹೌದು ಹುಲಿಯಾ ಖ್ಯಾತಿಯ ಪೀರಪ್ಪ

    ಸಿದ್ದರಾಮಯ್ಯರನ್ನು ಭೇಟಿಯಾದ ಹೌದು ಹುಲಿಯಾ ಖ್ಯಾತಿಯ ಪೀರಪ್ಪ

    ಬೆಂಗಳೂರು: ಹೌದು ಹುಲಿಯಾ ಡೈಲಾಗ್ ಖ್ಯಾತಿಯ ಪಕೀರಪ್ಪ (ಪೀರಪ್ಪ) ಕಟ್ಟಿಮನಿ ಹುಲಿಯಾ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಆಶೀರ್ವಾದ ಪಡೆದು ಕುಶಾಲೋಪರಿ ವಿಚಾರಿಸಿದ್ದಾರೆ.

    ಉಪಚುನಾವಣೆ ಪ್ರಚಾರದ ವೇಳೆ ಫುಲ್ ವೈರಲ್ ಆದ ಡೈಲಾಗ್ ‘ಹೌದು ಹುಲಿಯಾ’. ಕಾಗವಾಡದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಪರ ಸಿದ್ದರಾಮಯ್ಯನವರು ಪ್ರಚಾರದ ಭಾಷಣ ಮಾಡುವ ವೇಳೆ ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು ಅಂದಾಗ ವೇದಿಕೆ ಮುಂದೆ ಕುಳಿತಿದ್ದ ಪಕೀರಪ್ಪ ಕಟ್ಟಿಮನಿ ಹೌದು ಹುಲಿಯಾ ಅಂತಾ ಜೋರಾಗಿ ಕೂಗಿ ಹೇಳಿದ್ದರು.

    ಕುಡಿದ ಮತ್ತಿನಲ್ಲಿ ಹೌದು ಹುಲಿಯಾ ಎಂದು ಹೇಳಿದ್ದು ಮಾತು ರಾಜ್ಯಾದ್ಯಂತ ಫೇಮಸ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿತ್ತು. ಟಿಕ್ ಟಾಕ್ ಗಳಲ್ಲಿ ಎಲ್ಲಾ ಫುಲ್ ಬಳಕೆ ಮಾಡಿಕೊಂಡು ಡಬ್ ಸ್ಮ್ಯಾಶ್ ಮಾಡಿದ್ರು. ಇದಾದ ಬಳಿಕ ಡೈಲಾಗ್ ಹೇಳಿದ ಪಕೀರಪ್ಪ ಕಟ್ಟಿಮನಿ ಕೂಡ ಫುಲ್ ಫೇಮಸ್ ಆದರು. ಇದರ ಬೆನ್ನಲ್ಲೆ ಇಂದು ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ.

    ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಬಳಿಕ ಪಕೀರಪ್ಪ ಕಟ್ಟಿಮನಿ ಭೇಟಿಯಾಗಿದ್ದಾರೆ. ಈ ವೇಳೆ ಪಕೀರಪ್ಪ ಕಟ್ಟಿಮನಿ ಸಿದ್ದರಾಮಯ್ಯನವರ ಕಾಲಿಗೆ ಮುಗಿದು ನಮಸ್ಕರಿಸಿ ನೀವೆ ನಮ್ಮ ಒಡೆಯಾ ನೀವು ಕೊಟ್ಟ ಒಂದು ರೂಪಾಯಿ ಕೆ.ಜಿ ಅಕ್ಕಿ ತಿಂದು ಇವತ್ತು ಉದ್ಧಾರ ಆಗಿದ್ದೀವಿ ಒಡೆಯ ಅಂತಾ ಸಿದ್ದರಾಮಯ್ಯರಿಗೆ ನಮಸ್ಕರಿಸಿದ್ದಾರೆ.

    ಪಕೀರಪ್ಪ ಕಟ್ಟಿಮನಿ ಭೇಟಿಯಾದ ಬಳಿಕ ಸಿದ್ದರಾಮಯ್ಯ ನವರು ಪಕೀರಪ್ಪನನ್ನ ಮಾತನಾಡಿಸಿದ್ದು. ರಾಜ್ಯಾದ್ಯಂತ ನೀನು ಫೇಮಸ್ ಆದ್ಯಾಲಪ್ಲ ಅಂತಾ ಪಕೀರಪ್ಪನನ್ನ ಸಿದ್ದರಾಮಯ್ಯ ನವರು ಕೇಳಿದ್ರು ಆಗ ಪಕೀರಪ್ಪ ಏನು ಮಾತನಾಡದೇ ಸಿದ್ದರಾಮಯ್ಯ ಮುಂದೆ ನಿಂತು ಮೌನಕ್ಕೆ ಶರಣಾಗಿ ಮುಗುಳ್ನಗೆ ಬೀರಿದ್ದಾರೆ.

    ಪಕೀರಪ್ಪ ಭೇಟಿ ಮಾಡಿದ ಬಳಿಕ ಸಿದ್ದರಾಮಯ್ಯ ನವರು ಟ್ವೀಟ್ ಮಾಡಿದ್ದು ಕಾಗವಾಡದಲ್ಲಿ ನನ್ನ ಭಾಷಣದ ವೇಳೆ ಹೌದು ಹುಲಿಯಾ ಅಂತಾ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟಿಮನಿ. ಅಷ್ಟೇ ಪ್ರೀತಿಯಿಂದ ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಇತನೇ ನಿಜವಾದ ಹುಲಿಯಾ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ‘ಹೌದು ಹುಲಿಯಾ’ ಡೈಲಾಗ್ ವೈರಲ್- ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

    ‘ಹೌದು ಹುಲಿಯಾ’ ಡೈಲಾಗ್ ವೈರಲ್- ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

    ರಾಯಚೂರು: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ‘ಹೌದು ಹುಲಿಯಾ’ ಡೈಲಾಗ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಒಳಬಳ್ಳಾರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ‘ಹೌದು ಹುಲಿಯಾ’ ಎಲ್ಲೆಡೆ ತುಂಬಾ ವೈರಲ್ ಅಗಿದೆ. ಚುನಾವಣಾ ಪ್ರಚಾರದಲ್ಲಿ ನಡೆದದ್ದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ ಈಗ ಹೇಳಬಾರದು ಎಂದು ನಗುತ್ತಲೇ ನೆರದಿದ್ದ ಜನರಿಗೆ ಹೇಳಿದರು. ಕಾರ್ಯಕ್ರಮದಲ್ಲಿದ್ದ ಕಾರ್ಯಕರ್ತರು ‘ಹೌದು ಹುಲಿಯಾ’ ಎನ್ನುತ್ತಿದ್ದಂತೆ ನಕ್ಕ ಸಿದ್ದರಾಮಯ್ಯ ಹಾಗೇ ಅನ್ನಬಾರದು ಎಂದರು. ಸಿದ್ದರಾಮಯ್ಯ ಹೋದಲ್ಲೆಲ್ಲಾ ಕಾರ್ಯಕರ್ತರು ‘ಹೌದು ಹುಲಿಯಾ’ ಎನ್ನುವ ಘೋಷವಾಕ್ಯವನ್ನು ಕೂಗುತ್ತಿದ್ದಾರೆ.

    ಇತ್ತೀಚೆಗಷ್ಟೇ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ ‘ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ `ಹೌದು ಹುಲಿಯಾ’ ಎಂದಿದ್ದರು. ಆ ಬಳಿಕ ಕುಡುಕನ `ಹೌದು ಹುಲಿಯಾ’ ಡೈಲಾಗ್ ಸಖತ್ ಟ್ರೆಂಡ್ ಆಗಿತ್ತು.