Tag: hotspot

  • ಕೊರೊನಾ ಹಬ್ಬಿಸೋ ಹಾಟ್‍ಸ್ಪಾಟ್ ಆಗುತ್ತಾ ಕಾಫಿನಾಡು?- ಪ್ರವಾಸಿಗರಿಂದ ಸ್ಥಳೀಯರಿಗೆ ಆತಂಕ

    ಕೊರೊನಾ ಹಬ್ಬಿಸೋ ಹಾಟ್‍ಸ್ಪಾಟ್ ಆಗುತ್ತಾ ಕಾಫಿನಾಡು?- ಪ್ರವಾಸಿಗರಿಂದ ಸ್ಥಳೀಯರಿಗೆ ಆತಂಕ

    ಚಿಕ್ಕಮಗಳೂರು: ಪ್ರಸ್ತುತ ಕೊರೊನಾದ ಕಾಲಘಟ್ಟದಲ್ಲಿ ಕಾಫಿನಾಡಿನ ಸೌಂದರ್ಯವೇ ಜಿಲ್ಲೆ ಹಾಗೂ ಜನರಿಗೆ ಮುಳ್ಳಾಗಿದೆಯಾ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ. ಏಕೆಂದರೆ, ಶನಿವಾರ ಹಾಗೂ ಭಾನುವಾರ ಬಂತೆಂದರೆ ಪ್ರವಾಸಿಗರಿಗೆ ಮೋಜು-ಮಸ್ತಿ, ನಿಸರ್ಗದೊಂದಿಗೆ ಎಂಜಾಯ್ ಮಾಡೋ ದಿನ. ಆದರೆ, ಜಿಲ್ಲೆಯ ಜನರಿಗೆ ಭಯ, ಆತಂಕ.

    ರಾಜ್ಯದ ಅತ್ಯಂತ ಎತ್ತರದ ಗಿರಿಶಿಖರ ಎಂಬ ಖ್ಯಾತಿಗೆ ಪಾತ್ರವಾಗಿರೋ ಮುಳ್ಳಯ್ಯನಗಿರಿಯಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳದ ಪ್ರವಾಸಿಗರ ಮೋಜು-ಮಸ್ತಿಯಿಂದ ಪ್ರವಾಸಿಗರ ಜೊತೆ ಸ್ಥಳೀಯರಿಗೂ ಕೊರೊನಾ ಹಬ್ಬುವ ಆತಂಕ ಎದುರಾಗಿದೆ. ವಾರಾಂತ್ಯದಲ್ಲಿ ಜಿಲ್ಲೆಗೆ ರಾಜ್ಯದ ಮೂಲೆ-ಮೂಲೆಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಬಂದವರು ಮುಖಕ್ಕೆ ಮಾಸ್ಕ್ ಹಾಕ್ತಿಲ್ಲ. ಇನ್ನು ಸಾಮಾಜಿಕ ಅಂತರವನ್ನಂತೂ ಕೇಳೋದೇ ಬೇಡ. ಇದು ಸ್ಥಳಿಯರು ಹಾಗೂ ಬೇಜವಾಬ್ದಾರಿ ಪ್ರವಾಸಿಗರಿಂದ ಉಳಿದ ಪ್ರವಾಸಿಗರಿಗೆ ಭಯ ಹುಟ್ಟಿಸಿದೆ.

    ಕೆಲ ಪ್ರವಾಸಿಗರಿಗೆ ಎ ಸಿಮ್ಟೆಮ್ಸ್ ಕೊರೊನಾ ಇರುತ್ತೆ. ಅವರು ನೋಡಲು ಚೆನ್ನಾಗಿ ಇರುತ್ತಾರೆ. ಕೊರೊನಾದ ಯಾವುದೇ ಗುಣ-ಲಕ್ಷಣಗಳು ಇರೋದಿಲ್ಲ. ಅವರಿಂದಲೂ ಕೊರೊನಾ ಹಬ್ಬಬಹುದು ಎಂದು ಸರ್ಕಾರ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳುತ್ತಿದೆ. ಆದರೆ, ಇಲ್ಲಿಗೆ ಬರುತ್ತಿರುವ ಬೇಜವಾಬ್ದಾರಿ ಪ್ರವಾಸಿಗರು ಸರ್ಕಾರದ ಕೂಗು ನಮಗಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ರಾಜ್ಯದ ಮೂಲೆ-ಮೂಲೆಗಳಿಂದ ಬರುವ ಪ್ರವಾಸಿಗರಿಗೆ ಒಬ್ಬರಿಂದ ಒಬ್ಬರಿಗೆ ಹರಡಿ ಚೆನ್ನಾಗಿದ್ದೋರು ಕೊರೊನಾಗೆ ತುತ್ತಾಗಬಹುದು. ಅವರವರ ಊರಲ್ಲಿ ಮತ್ತಷ್ಟು ಜನಕ್ಕೆ ಹಬ್ಬಿಸಬಹುದು. ಇದ್ಯಾವುದರ ಬಗ್ಗೆ ಪ್ರವಾಸಿರು ಯೋಚನೆ ಕೂಡ ಮಾಡುತ್ತಿಲ್ಲ.

    ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸಲು ಸರ್ಕಾರ ಹೆಣಕಾಡುತ್ತಿದೆ. ಆದರೆ, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರೋ ಪ್ರವಾಸಿಗರು ನಮಗೂ ಸರ್ಕಾರದ ನಿಯಮಗಳಿಗೂ ಸಂಬಂಧವೇ ಇಲ್ಲ ಎಂಬಂತೆ ಸರ್ಕಾರದ ನಿಯಾಮವಳಿಗಳನ್ನು ಸಂಪೂರ್ಣ ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಸರ್ಕಾರ ಕೂಡ ಪ್ರವಾಸಿ ತಾಣಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿಲ್ಲ. ಪೊಲೀಸರು ಇಲ್ಲ. ಗ್ರಾಮ ಪಂಚಾಯಿತಿ ಕೂಡ ಯಾರನ್ನು ನೇಮಕ ಮಾಡಿಲ್ಲ. ಇದು ಪ್ರವಾಸಿಗರ ಅಂಧ ದರ್ಬಾರ್ ಗೆ ಕಾರಣವಾಗಿದೆ.

    ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕ್ಯಾಮೆರಾ ಕಂಡಾಗ ಮುಖಕ್ಕೆ ಮಾಸ್ಕ್ ಧರಿಸುವ ಪ್ರವಾಸಿಗರು ಮತ್ತದೇ ತಪ್ಪು ಮಾಡ್ತಿದ್ದಾರೆ. ಪ್ರವಾಸಿಗರೇನೋ ಕಾಫಿನಾಡಿನ ಸೌಂದರ್ಯಕ್ಕೆ ಮಾರು ಹೋಗಿ ವಾವ್, ಸೂಪರ್ ಎಂದು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ನಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯವೂ ಮುಖ್ಯ ಎಂದು ಅದಕ್ಕೆ ಮಾಡಬೇಕಿರೋದ ಮಾಡುತ್ತಿಲ್ಲ. ಇದು ಜಿಲ್ಲೆಯ ಜನ ಹಾಗೂ ಪ್ರವಾಸಿಗರಿಗೂ ಆತಂಕ ತಂದೊಡ್ಡುತ್ತಿದ್ದು, ಜನ ಕೊರೊನಾ ಹರಡುವ ಆತಂಕದಲ್ಲಿ ಬದುಕುತ್ತಿದ್ದಾರೆ. ಹಾಗಾಗಿ, ಸರ್ಕಾರ ಪ್ರವಾಸಿ ತಾಣಗಳಲ್ಲಿ ಅಧಿಕಾರಿಗಳನ್ನು ನೇಮಿಸಿ, ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

  • ಕೊರೊನಾ ಹಾಟ್‍ಸ್ಪಾಟ್ ಆಯ್ತು ಮಂಗ್ಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ

    ಕೊರೊನಾ ಹಾಟ್‍ಸ್ಪಾಟ್ ಆಯ್ತು ಮಂಗ್ಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ತಗಲಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಸೋಂಕು ತಗುಲಿಸಿಕೊಂಡಿದ್ದ ಇಬ್ಬರು ಮಹಿಳೆಯರಿಂದ ಅವರ ಮಕ್ಕಳಿಗೂ ಸೋಂಕು ಹರಡಿದೆ.

    ಎಪ್ರಿಲ್ 19ರಂದು ಮೃತಪಟ್ಟಿದ್ದ ಬಂಟ್ವಾಳ ಕಸಬಾ ನಿವಾಸಿ ಮಹಿಳೆಯ 16 ವರ್ಷದ ಪುತ್ರಿಗೆ ಸೋಂಕು ಆಗಿದ್ದರೆ, ಬೋಳೂರಿನ ವೃದ್ಧ ಮಹಿಳೆಯ ಸಂಪರ್ಕದಲ್ಲಿದ್ದ 11 ವರ್ಷದ ಬಾಲಕಿ ಮೊಮ್ಮಗಳು ಮತ್ತು 35 ವರ್ಷದ ಮಗಳಿಗೆ ಸೋಂಕು ಕಾಣಿಸಿಕೊಂಡಿದೆ.

    ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಒಟ್ಟು 13 ಮಂದಿಗೆ ಕೊರೊನಾ ಹರಡಿದ್ದು, ಎಲ್ಲರೂ ಈಗ ವೆನ್ಲಾಕ್ ಮತ್ತು ಫಸ್ಟ್ ನ್ಯೂರೋ ಐಸೊಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಇರುವ ಬಹಳಷ್ಟು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, 15 ದಿನಗಳ ಬಳಿಕ ಕೆಲವರಲ್ಲಿ ಸೋಂಕು ದೃಢಪಡುತ್ತಿದೆ.

    ಈಗ ಫಸ್ಟ್ ನ್ಯೂರೋ ಆಸ್ಪತ್ರೆಯೇ ದಕ್ಷಿಣ ಕನ್ನಡದ ಪಾಲಿಗೆ ಕೊರೊನಾ ವಾಹಕ ಆಗಿ ಪರಿವರ್ತನೆಗೊಂಡಿದೆ. ಈ ಬಗ್ಗೆ ಜಿಲ್ಲಾಡಳಿತ ನಿಗಾ ಇಟ್ಟಿದ್ದು ಬಂಟ್ವಾಳ ಮತ್ತು ಮಂಗಳೂರಿನ ಒಟ್ಟು ಎಂಟು ಕಡೆ ಈಗ ಸೀಲ್‍ಡೌನ್ ಜಾರಿಯಲ್ಲಿದೆ. ಉಳಿದಂತೆ ಜಿಲ್ಲೆಯಾದ್ಯಂತ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಚಟುವಟಿಕೆ ಆರಂಭಗೊಂಡಿದೆ.

  • ಥಳಿಸಿದ್ರು ದೂಡಿದ್ರು – ಓಡಿ ಹೋದ್ರೂ ಹಿಂಬಾಲಿಸಿ ಕಲ್ಲೆಸೆದ ಗುಂಪು

    ಥಳಿಸಿದ್ರು ದೂಡಿದ್ರು – ಓಡಿ ಹೋದ್ರೂ ಹಿಂಬಾಲಿಸಿ ಕಲ್ಲೆಸೆದ ಗುಂಪು

    – ಇಬ್ಬರು ಪೊಲೀಸರಿಗೆ ಗಾಯ, ವಿಡಿಯೋ ವೈರಲ್

    ಕೋಲ್ಕತ್ತಾ: ಲಾಕ್‍ಡೌನ್ ಜಾರಿಗೊಳಿಸಲು ಹೋದ ಪೊಲೀಸರ ಮೇಲೆ ಜನರು ಕಲ್ಲುಗಳಿಂದ ಹಲ್ಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯಲ್ಲಿ ನಡೆದಿದೆ.

    ಕೋಲ್ಕತ್ತಾದ ಹತ್ತಿರವಿರುವ ಹೌರ ಜಿಲ್ಲೆ ಕೊರೊನಾ ಹಾಟ್‍ಸ್ಟಾಟ್ ಆಗಿದೆ. ಈ ಹಿನ್ನೆಲೆಯಲ್ಲಿ ಹೌರ ಜಿಲ್ಲೆಯ ಟಿಕಿಯಪುರದ ಮಾರುಕಟ್ಟೆಯಲ್ಲಿ ಜಾಸ್ತಿ ಜನಸಮೂಹ ಸೇರಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದಾರೆ. ಈ ವೇಳೆ ಜನಸಮೂಹ ಪೊಲೀಸರ ಮೇಲೆ ದಾಳಿ ಮಾಡಿದೆ.

    ಗುಂಪನ್ನು ಚದುರಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ಜನರ ಒಟ್ಟಿಗೆ ಕಲ್ಲುಗಳನ್ನು ತೂರಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಅವರನ್ನು ಸ್ವಲ್ಪ ದೂರ ಓಡಿಸಿಕೊಂಡು ಬಂದಿದ್ದಾರೆ. ಆ ಸಮಯದಲ್ಲಿ ಪೊಲೀಸರು ಟಿಕಿಯಪುರದ ಪೊಲೀಸ್ ಚೌಕಿಗೆ ಓಡಿ ಬಂದಿದ್ದಾರೆ. ಆದರೂ ಸುಮ್ಮನಗಾದ ಜನಸಮೂಹ ಪೊಲೀಸ್ ಚೌಕಿಯ ಮೇಲೂ ಕಲ್ಲು ತೂರಿದೆ. ಈ ಘಟನೆಯಲ್ಲಿ ಎರಡು ಪೊಲೀಸ್ ವಾಹನಗಳು ಜಖಂ ಆಗಿವೆ.

    ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹೌರ ಜಿಲ್ಲೆ ಕೊರೊನಾ ಹಾಟ್‍ಸ್ಟಾಟ್ ಆಗಿದೆ. ರಾಜ್ಯದಲ್ಲಿ ಒಟ್ಟು 697 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರೆ, ಅದರಲ್ಲಿ 79 ಪ್ರಕರಣಗಳು ಹೌರ ಜಿಲ್ಲೆಯಲ್ಲಿ ವರದಿಯಾಗಿವೆ. ಹೀಗಾಗಿ ಇದನ್ನು ಸೂಕ್ಷ್ಮ ಸ್ಥಳ ಎಂದು ಗುರುತಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ದಾಳಿಯ ನಂತರ ಟಿಕಿಯಪುರಕ್ಕೆ ಹೆಚ್ಚನ ಪೊಲೀಸ್ ಪಡೆಯನ್ನು ಕಳುಹಿಸಿ ಲಾಕ್‍ಡೌನ್ ಜಾರಿ ಮಾಡಲಾಗಿದೆ.

    ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಯಲ್ಲಿ ಹೌರಾ ಜಿಲ್ಲೆಯನ್ನು ಪ್ರತಿನಿಧಿಸುವ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿರುವ ರಾಜೀವ್ ಬ್ಯಾನರ್ಜಿ ಈ ವಿಚಾರದ ಬಗ್ಗೆ ಮಾತನಾಡಿ, ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಹಿಂಸಾಚಾರಕ್ಕೆ ಕಾರಣವಾದ ಜನಸಮೂಹದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಕೋಲ್ಕತ್ತಾದ ದಕ್ಷಿಣ ಭಾಗದಲ್ಲಿರುವ ಬೆಹಾಲಾದಲ್ಲೂ ಪೊಲೀಸರ ಮೇಲೆ ದಾಳಿ ಮಾಡಲಾಗಿದೆ. ಈ ಪ್ರದೇಶದಲ್ಲಿ ಲಾಕ್‍ಡೌನ್ ಇದ್ದರು ಬೈಕಿನಲ್ಲಿ ಹೊರಗೆ ಬಂದ ಯುವಕನನ್ನು ಪೊಲೀಸರು ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ವರದಿಯಾಗಿದೆ. ಆದರೆ ಯುವಕನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

  • ಯಾವ ಜಿಲ್ಲೆಯಲ್ಲಿ ಎಷ್ಟು ಜನ ಸೋಂಕಿತರು? ಇಲ್ಲಿದೆ ಮಾಹಿತಿ

    ಯಾವ ಜಿಲ್ಲೆಯಲ್ಲಿ ಎಷ್ಟು ಜನ ಸೋಂಕಿತರು? ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಕೊರೊನಾ ಸೋಂಕಿತ 6 ಜನ ರೋಗಿಗಳು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ್ಕೆ ಇಂದು ಕರಾಳ ದಿನವಾಗಿ ಪರಿಣಮಿಸಿದೆ. ಏಕೆಂದರೆ ಬುಧವಾರ ಒಂದೇ ದಿನದಲ್ಲಿ ಇಬ್ಬರು ಕೊರೊನಾದಿಂದ ಮೃತಪಟ್ಟಿದ್ದು ದೃಢಪಟ್ಟಿದೆ. ಜೊತೆಗೆ 19 ಜನರಿಗೆ ಸೋಂಕು ತಗುಲಿದೆ.

    ಹೆಮ್ಮಾರಿ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 80 ವರ್ಷದ ವೃದ್ಧೆ ಹಾಗೂ ಚಿಕ್ಕಬಳ್ಳಾಪುರ ನಿವಾಸಿ 65 ವರ್ಷದ ರೋಗಿ-250 ಏಪ್ರಿಲ್ 13ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಅವರು ಕೊರೊನಾ ವೈರಸ್‍ನಿಂದಲೇ ಮೃತಪಟ್ಟಿದ್ದಾರೆ ಎನ್ನುವುದು ಇಂದು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಹಾಟ್‍ಸ್ಪಾಟ್ ಜಿಲ್ಲೆಗಳ ಪಟ್ಟಿ:
    * ಬೆಂಗಳೂರು ನಗರ – 71 ಜನರಿಗೆ ಸೋಂಕು (ಗುಣಮುಖ- 35, ಸಕ್ರಿಯ- 34, ಸಾವು- 02)
    * ಮೈಸೂರು – 58 ಜನರಿಗೆ ಸೋಂಕು (ಗುಣಮುಖ- 12, ಸಕ್ರಿಯ- 46)
    * ಬೆಳಗಾವಿ – 19 ಜನರಿಗೆ ಸೋಂಕು (ಸಕ್ರಿಯ- 18, ಸಾವು- 01)

    ಹಾಟ್‍ಸ್ಪಾಟ್ ಜಿಲ್ಲೆ ವಿತ್ ಕ್ಲಸ್ಟರ್:
    * ದಕ್ಷಿಣ ಕನ್ನಡ – 11 ಮಂದಿಗೆ ಕೊರೊನಾ (ಗುಣಮುಖ- 08, ಸಕ್ರಿಯ- 03)
    * ಬೀದರ್ – 13 ಮಂದಿಗೆ ಕೊರೊನಾ (ಸಕ್ರಿಯ- 13)
    * ಕಲಬುರಗಿ – 17 ಮಂದಿಗೆ ಕೊರೊನಾ (ಗುಣಮುಖ- 02, ಸಕ್ರಿಯ- 12 ಸಾವು- 03)
    * ಬಾಗಲಕೋಟೆ – 14 ಮಂದಿಗೆ ಕೊರೊನಾ (ಸಕ್ರಿಯ- 13, ಸಾವು- 01)
    * ಧಾರವಾಡ – 6 ಮಂದಿಗೆ ಕೊರೊನಾ (ಗುಣಮುಖ-01, ಸಕ್ರಿಯ- 05)

    ನಾನ್ ಹಾಟ್‍ಸ್ಪಾಟ್‍ಗಳು:
    * ಬಳ್ಳಾರಿ – 6 ಜನರಿಗೆ ಸೋಂಕು (ಸಕ್ರಿಯ- 06)
    * ಮಂಡ್ಯ – 8 ಜನರಿಗೆ ಸೋಂಕು (ಸಕ್ರಿಯ- 08)
    * ಬೆಂಗಳೂರು ಗ್ರಾಮಾಂತರ – 12 ಜನರಿಗೆ ಸೋಂಕು (ಸಕ್ರಿಯ- 12)
    * ದಾವಣಗೆರೆ- 2 ಜನರಿಗೆ ಸೋಂಕು (ಗುಣಮುಖ- 02)
    * ಉಡುಪಿ- 3 ಜನರಿಗೆ ಸೋಂಕು (ಗುಣಮುಖ- 02, ಸಕ್ರಿಯ- 01)
    * ಗದಗ- 01 ಜನರಿಗೆ ಸೋಂಕು (ಸಾವು- 01)

    * ತುಮಕೂರು- 2 ಜನರಿಗೆ ಸೋಂಕು (ಸಾವು- 01, ಸಕ್ರಿಯ- 01)
    * ವಿಜಯಪುರ – 10 ಜನರಿಗೆ ಸೋಂಕು (ಸಕ್ರಿಯ- 09, ಸಾವು- 01)
    * ಕೊಡಗು- 01 ಜನರಿಗೆ ಸೋಂಕು (ಗುಣಮುಖ, ಮತ್ತೆ ದಾಖಲು)
    * ಚಿಕ್ಕಬಳ್ಳಾಪುರ – 13 ಜನರಿಗೆ ಸೋಂಕು (ಗುಣಮುಖ- 8, ಸಕ್ರಿಯ- 03, ಸಾವು- 02)
    * ಉತ್ತರ ಕನ್ನಡ – 11 ಜನರಿಗೆ ಸೋಂಕು (ಗುಣಮುಖ- 08, ಸಕ್ರಿಯ- 03)

    ಸೋಂಕು ಇಲ್ಲದ ಹಸಿರು ವಲಯದ ಜಿಲ್ಲೆಗಳ ವ್ಯಾಪ್ತಿಗೆ ಶಿವಮೊಗ್ಗ, ಯಾದಗಿರಿ, ರಾಮನಗರ, ಕೋಲಾರ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಹಾಸನ, ರಾಯಚೂರು, ಚಾಮರಾಜನಗರ, ಚಿಕ್ಕಮಗಳೂರು ಬರುತ್ತವೆ.

  • ಬೆಂಗ್ಳೂರಲ್ಲಿ 40 ಹಾಟ್‍ಸ್ಪಾಟ್ – ಯಾವ ವಾರ್ಡಿನಲ್ಲಿ ಎಷ್ಟು ಮಂದಿಗೆ ಸೋಂಕು?

    ಬೆಂಗ್ಳೂರಲ್ಲಿ 40 ಹಾಟ್‍ಸ್ಪಾಟ್ – ಯಾವ ವಾರ್ಡಿನಲ್ಲಿ ಎಷ್ಟು ಮಂದಿಗೆ ಸೋಂಕು?

    ಬೆಂಗಳೂರು: ಸಿಲಿಕಾನ್ ಸಿಟಿ, ಗ್ರೀನ್‍ಸಿಟಿ ಎಂದು ಕರೆಸಿಕೊಳ್ಳೋ ಬೆಂಗಳೂರು ಈಗ ಕೊರೊನಾ ಹಾಟ್‍ಸ್ಪಾಟ್ ಆಗುತ್ತಿದೆ. ಬೆಂಗಳೂರಿನಲ್ಲಿ 2 ದಿನಗಳ ಅಂತರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜೊತೆಗೆ, ಟಿಪ್ಪುನಗರ, ಆನಂದಪುರ ವಾರ್ಡ್‌ಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, 40 ಹಾಟ್‍ಸ್ಪಾಟ್‍ಗಳ ಮೇಲೆ ಸರ್ಕಾರ ತೀವ್ರ ನಿಗಾ ಇರಿಸಿದೆ.

    ಲಾಕ್‍ಡೌನ್ ಮಾಡಿ ಎಷ್ಟೇ ಮನವಿ ಮಾಡಿ, ಬುದ್ಧಿ ಹೇಳಿದರೂ ಜನರು ಕೇಳುತ್ತಿಲ್ಲ. ಸುಖಾಸುಮ್ಮನೇ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಇದರ ಪರಿಣಾಮವೇ ರಾಜ್ಯದಲ್ಲಿನ ಕೊರೊನಾ ಲಿಸ್ಟ್ ನಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇಲ್ಲಿ ಪ್ರತಿದಿನವೂ ಕೇಸ್ ದಾಖಲಾಗುತ್ತಿದ್ದು, ಬೆಂಗಳೂರಿನಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ 80 ಕೊರೊನಾ ಕೇಸ್ ದಾಖಲಾಗಿದೆ.

    ಇದನ್ನ ಮನಗಂಡ ಬಿಬಿಎಂಪಿ ಕೊರೊನಾ ತಡೆಗೆ ಬ್ಲೂ ಪ್ರಿಂಟ್ ಸಿದ್ಧ ಪಡಿಸಿಕೊಂಡಿದೆ. ಬೆಂಗಳೂರಿನ ಆರು ವಲಯಗಳಲ್ಲಿ 40 ವಾರ್ಡ್‌ಗಳನ್ನು ಹಾಟ್‍ಸ್ಪಾಟ್ ಅಂತ ಗುರುತಿಸಿದೆ. ಇದರಲ್ಲಿ ಈಗಾಗಲೇ ಪಾದರಾಯನಪುರ, ಬಾಪೂಜಿನಗರ, ಜೆಜೆ ನಗರ ವಾರ್ಡ್ ಗಳು ಸೀಲ್‍ಡೌನ್ ಆಗಿದೆ. ಇವುಗಳ ಜೊತೆಗೆ 40 ವಾರ್ಡಿನಲ್ಲಿ ಟಫ್ ಲಾಕ್‍ಡೌನ್ ಜಾರಿಯಾಗಲಿದೆ. ಈ ವಾರ್ಡ್‌ಗಳನ್ನು ಅಗತ್ಯ ವಸ್ತುಗಳ ಖರೀದಿಗೂ ಜನರು ಹೊರಬಾರದಂತೆ ನಿಗಾ ವಹಿಸಲು ಪ್ಲಾನ್ ಆಗುತ್ತಿದೆ. ಹೀಗಾಗಿ ಅಡ್ಡ ರಸ್ತೆಗಳನ್ನ ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಗ್ತಿದೆ.

    ಬೆಂಗಳೂರು ದಕ್ಷಿಣ ವಲಯ-12 ವಾರ್ಡ್
    * ಜೆ.ಪಿ.ನಗರ – 4 ಕೇಸ್
    * ಶಾಕಂಬರಿನಗರ – 3 ಕೇಸ್
    * ಬಾಪೂಜಿನಗರ – 2 ಕೇಸ್
    * ಮಡಿವಾಳ – 2 ಕೇಸ್
    * ಗಿರಿನಗರ – 1 ಕೇಸ್
    * ಆಡುಗೋಡಿ – 1 ಕೇಸ್
    * ಸುದ್ದುಗುಂಟೆಪಾಳ್ಯ – 1 ಕೇಸ್
    * ಹೊಸಹಳ್ಳಿ – 1 ಕೇಸ್
    * ಸುಧಾಮನಗರ – 1 ಕೇಸ್
    * ಅತ್ತಿಕುಪ್ಪೆ – 1 ಕೇಸ್
    * ಕರಿಸಂದ್ರ – 1 ಕೇಸ್

    ಪೂರ್ವ ವಲಯ – 9 ವಾರ್ಡ್
    * ವಸಂತನಗರ – 2 ಕೇಸ್
    * ಗಂಗಾನಗರ – 1 ಕೇಸ್
    * ಲಿಂಗರಾಜಪುರ – 1 ಕೇಸ್
    * ಜೀವನ್ ಭೀಮಾನಗರ – 2 ಕೇಸ್
    * ರಾಧಕೃಷ್ಣ ಟೆಂಪಲ್ – 4 ಕೇಸ್
    * ಸಿ.ವಿ ರಾಮನ್ ನಗರ – 1 ಕೇಸ್
    * ರಾಮಸ್ವಾಮಿ ಪಾಳ್ಯ – 1 ಕೇಸ್
    * ಮಾರುತಿಸೇವಾ ನಗರ – 1 ಕೇಸ್
    * ಸಂಪಗಿರಾಮ ನಗರ

    ಪಶ್ಚಿಮ ವಲಯ – 7 ವಾರ್ಡ್ ಗಳು
    * ಅರಮನೆನಗರ – 3 ಕೇಸ್
    * ನಾಗರಭಾವಿ – 1 ಕೇಸ್
    * ನಾಗಪುರ – 1 ಕೇಸ್
    * ಶಿವನಗರ – 1 ಕೇಸ್
    * ಆಜಾದ್‍ನಗರ – 5 ಕೇಸ್
    * ಜಗಜೀವನ್‍ರಾಮ್ ನಗರ – 1 ಕೇಸ್
    * ಸುಭಾಷ್ ನಗರ

    ಯಲಹಂಕ ವಲಯದಲ್ಲಿ ಒಟ್ಟು 2 ವಾರ್ಡ್‌ಗಳನ್ನು ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ.
    * ಥಣಿಸಂಧ್ರ – 1 ಕೇಸ್
    * ಬ್ಯಾಟರಾಯನಪುರ – 1 ಕೇಸ್

    ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 2 ಹಾಟ್‍ಸ್ಪಾಟ್ ವಾರ್ಡ್‌ಗಳಿವೆ.
    * ಸಿಂಗಸಂದ್ರ – 4 ಕೇಸ್
    * ಬೇಗೂರು – 1 ಕೇಸ್

    ಮಹದೇವಪುರ ವಲಯದಲ್ಲಿ 6 ವಾರ್ಡ್ ಗಳು ಹಾಟ್‍ಸ್ಟಾಟ್ ಆಗಿವೆ.
    * ಹೊರಮಾವು – 2 ಕೇಸ್
    * ಹಗದೂರು – 1 ಕೇಸ್
    * ರಾಮಮೂರ್ತಿನಗರ – 1 ಕೇಸ್
    * ಹೂಡಿ – 1 ಕೇಸ್
    * ವರ್ತೂರು – 1 ಕೇಸ್
    * ಗರುಡಾಚಾರ್ ಪಾಳ್ಯ – 1 ಕೇಸ್

    ಇಷ್ಟು ನಗರಗಳು ಬೆಂಗಳೂರಿನಲ್ಲಿ ಕೊರೊನಾ ಹಾಟ್‍ಸ್ಪಾಟ್‍ಗಳಾಗಿವೆ. ಈ ಬಗ್ಗೆ ಡಿಜಿ ಪ್ರವೀಣ್ ಸೂದ್ ಅವರ ಜೊತೆ ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಅವರು ಚರ್ಚೆ ಮಾಡಿದ್ದಾರೆ. ಹಾಟ್‍ಸ್ಪಾಟ್‍ಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಿ ಅಂತ ಭಾಸ್ಕರ್ ರಾವ್ ಅವರಿಗೆ ಡಿಜಿ ಸೂಚಿಸಿದ್ದಾರೆ. ಗೃಹ ಸಚಿವ ಬೊಮ್ಮಾಯಿ ಕೂಡ ಕಠಿಣ ಕ್ರಮ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ.

    ಅಷ್ಟೇ ಅಲ್ಲದೇ ಸಹಾಯವಾಣಿ ಕೇಂದ್ರ ತೆರೆದು ಎಲ್ಲ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಕೊಡಲು ಬಿಬಿಎಂಪಿಯಲ್ಲಿ ಚರ್ಚೆಯಾಗಿದೆ. ರೆಡ್ ಝೋನ್‍ಗಳಲ್ಲಿ ಹೊರಗಿನವರು ಒಳಗೆ, ಒಳಗಿನವರು ಹೊರಗೆ ಬಾರದಂತೆ ಕ್ರಮವಹಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

  • ಸಿಲಿಕಾನ್ ಸಿಟಿಯಲ್ಲಿ ಉಚಿತ ವೈಫೈಗೆ ಚಿಂತನೆ- ಡಿಸಿಎಂ

    ಸಿಲಿಕಾನ್ ಸಿಟಿಯಲ್ಲಿ ಉಚಿತ ವೈಫೈಗೆ ಚಿಂತನೆ- ಡಿಸಿಎಂ

    ಬೆಂಗಳೂರು: ನಗರದ ಎಲ್ಲ ಕಡೆ ವೈಫೈ ಹಾಟ್ ಸ್ಪಾಟ್ ಮೂಲಕ ಪ್ರತಿ ದಿನ ಒಂದು ಜಿಬಿ ಉಚಿತ ಇಂಟರ್ ನೆಟ್ ಸೇವೆ ಒದಗಿಸಬೇಕೆಂಬ ಉದ್ದೇಶ ಇದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

    ಬೆಂಗಳೂರು ಟೆಕ್ ಸಮ್ಮಿಟ್ ಇಂದು ಕಡೆಯ ದಿನವಾದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವೈಫೈ ಹಾಟ್ ಸ್ಪಾಟ್ ಮೂಲಕ ಬೆಂಗಳೂರಿನ ಎಲ್ಲ ಕಡೆ ಪ್ರತಿ ದಿನ ಒಂದು ಗಂಟೆ ಉಚಿತ ಇಂಟರ್ ನೆಟ್ ಸೇವೆ ಒದಗಿಸಲು ಚಿಂತಿಸಲಾಗುತ್ತಿದೆ. ಈ ಯೋಜನೆಗೆ 100 ಕೋಟಿ ರೂ. ವೆಚ್ಚವಾಗಲಿದ್ದು, ಈ ಕುರಿತು ರಾಜ್ಯ ಸರ್ಕಾರ ಆಕ್ಟ್(ACT) ಕಂಪನಿ ಜೊತೆ ಮಾತನಾಡಿದೆ. ನಗರದಲ್ಲಿ ಈ ಸೌಲಭ್ಯ ಅಗತ್ಯವಿದೆ ಎಂದರು.

    ಇನ್ನೂ ಚರ್ಚೆಯ ಹಂತದಲ್ಲಿದ್ದು, ಕಾನೂನು ಕ್ರಮಗಳನ್ನು ಅನುಸರಿಸಿ ಕೆಲವೇ ತಿಂಗಳುಗಳಲ್ಲಿ ನಗರಾದ್ಯಂತ ವೈಫೈ ಇಂಟರ್ ನೆಟ್ ಜಾರಿಗೆ ತರುತ್ತೇವೆ. ಈ ಯೋಜನೆ ಪೂರ್ಣ ಆಗಲು ವಂಭತ್ತು ತಿಂಗಳು ಬೇಕಾಗುತ್ತದೆ. ಇದಕ್ಕಾಗಿ ಆಕ್ಟ್ ಕಂಪನಿಯವರು ಮುಂದೆ ಬಂದಿದ್ದಾರೆ. ಯೋಜನೆಗೆ ತಗಲುವ 100 ಕೋಟಿ ರೂ. ವೆಚ್ಚವನ್ನು ಕಂಪನಿಯವರೇ ಭರಿಸುತ್ತಾರೆ. ಆದರೆ ಇದಕ್ಕಾಗಿ ವಿದ್ಯುತ್ ಅಗತ್ಯವಿದ್ದು, ಇದನ್ನು ಮಾತ್ರ ಅವರು ಕೇಳುತ್ತಿದ್ದಾರೆ. ವಿದ್ಯುತ್ ಪೂರೈಸುವ ಪ್ರಕ್ರಿಯೆ ನಡೆಯಬೇಕಿದೆ ಎಂದರು.

  • ಜಿಯೋಫಿ ಹೊಸ ಸಾಧನ ಬಿಡುಗಡೆ: ಬೆಲೆ ಎಷ್ಟು? ಎಷ್ಟು ಡಿವೈಸ್ ಕನೆಕ್ಟ್ ಮಾಡಬಹುದು?

    ಜಿಯೋಫಿ ಹೊಸ ಸಾಧನ ಬಿಡುಗಡೆ: ಬೆಲೆ ಎಷ್ಟು? ಎಷ್ಟು ಡಿವೈಸ್ ಕನೆಕ್ಟ್ ಮಾಡಬಹುದು?

    ಮುಂಬೈ: ರಿಲಯನ್ಸ್ ಜಿಯೋ ಹೊಸ ಮಾದರಿಯ ಜಿಯೋಫಿ 4ಜಿ ಎಲ್‍ಟಿಇ ಹಾಟ್ ಸ್ಪಾಟ್ ಸಾಧನವನ್ನು ಬಿಡುಗಡೆ ಮಾಡಿದ್ದು 999 ರೂ. ಬೆಲೆಯಲ್ಲಿ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.

    ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು, ಒಂದು ವರ್ಷ ವಾರಂಟಿ ಸಿಗಲಿದೆ. ಹಿಂದೆ ಬಿಡುಗಡೆ ಮಾಡಿದ್ದ ಸಾಧನ ಮೊಟ್ಟೆ ಆಕಾರದಲ್ಲಿ ಇದ್ದರೆ ಈಗ ಬಿಡುಗಡೆಯಾಗಿರುವ ಸಾಧನ ವೃತ್ತಾಕಾರದಲ್ಲಿದೆ.

    ಆನ್, ಆಫ್, ಡಬ್ಲ್ಯೂಪಿಎಸ್(ವೈಫೈ ಪ್ರೊಟೆಕ್ಟೆಡ್ ಸೆಟಪ್), ಬ್ಯಾಟರಿ ನೋಟಿಫಿಕೇಶನ್ ಲೈಟ್, 4ಜಿ, ವೈಫೈ ಸಿಗ್ನಲ್ ನೋಡಲು ಸಾಧ್ಯವಿದೆ. 150 ಎಂಬಿಎಸ್ ಡೌನ್ಲೋಡ್ ಸ್ಪೀಡ್ ಇದ್ದರೆ 50 ಎಂಬಿ ಅಪ್ಲೋಡ್ ಸ್ವೀಡ್ ಇದೆ.

    ಒಂದು ಬಾರಿ ಗರಿಷ್ಟ 32 ಸಾಧನಗಳನ್ನು ಕನೆಕ್ಟ್ ಮಾಡುವ ಸಾಮರ್ಥ್ಯ ಈ ಸಾಧನಕ್ಕಿದೆ. ಮೈಕ್ರೋ ಎಸ್‍ಡಿ ಸ್ಲಾಟ್ ನೀಡಲಾಗಿದ್ದು, ಗರಿಷ್ಟ 64 ಜಿಬಿ ಮೆಮೊರಿ ಕಾರ್ಡ್ ಹಾಕಬಹುದಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಸಾಧನ 2300 ಎಂಎಎಚ್ ಬ್ಯಾಟರಿ ಹೊಂದಿದ್ದರೆ ಹೊಸ ಸಾಧನ 3000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.