Tag: Horse

  • ಚಹಾ ವ್ಯಸನಿಯಾದ ಪೊಲೀಸ್ ಕುದುರೆ

    ಚಹಾ ವ್ಯಸನಿಯಾದ ಪೊಲೀಸ್ ಕುದುರೆ

    – 15 ವರ್ಷದಿಂದ ಚಹಾ ಸೇವನೆ

    ಲಂಡನ್: ಮರ್ಸಿಸೈಡ್ ದೇಶದ ಪೊಲೀಸರ ಕುದುರೆಯೊಂದು ಚಹಾ ವ್ಯಸನಿಯಾಗಿದ್ದು, ಬೆಳಗ್ಗೆ ಟೀ ಕುಡಿಯದೆ ಕೆಲಸ ಮಾಡಲ್ಲ.

    ಜ್ಯಾಕ್ ಎಂಬ ಹೆಸರಿನ 20 ವರ್ಷದ ಪೊಲೀಸ್ ಕುದುರೆಯು, ಸುಮಾರು 15 ವರ್ಷಗಳಿಂದ ಟೀ ಕುಡಿಯುವ ಅಭ್ಯಾಸ ರೂಢಿಸಿಕೊಂಡಿದೆ. ಜ್ಯಾಕ್‍ಗಾಗಿ ಪ್ರತಿದಿನ ಬೆಳಗ್ಗೆ ಒಂದು ಕಪ್ ಚಹಾವನ್ನು ಅಶ್ವಶಾಲೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಒಂದು ವೇಳೆ ಚಹಾ ಕೊಡದಿದ್ದರೆ ಜ್ಯಾಕ್ ತನ್ನ ಬೆಳಗ್ಗಿನ ಪಾಳಿಯ ಯಾವುದೇ ಕೆಲಸ ಮಾಡುವುದಿಲ್ಲ.

    ಜ್ಯಾಕ್ ಮುಂದಿನ ವರ್ಷ ಪೊಲೀಸ್ ಸೇನೆಯಿಂದ ನಿವೃತ್ತಿ ಹೊಂದಲಿದ್ದಾನೆ. ವಿಚಿತ್ರವೆಂದರೆ ಜ್ಯಾಕ್ ತನ್ನ ಜಾಕಿ ಕಪ್‍ನಲ್ಲಿ ಉಳಿದ ಚಹಾವನ್ನು ನೆಕ್ಕುವ ಮೂಲಕ ಟೀ ಪ್ರೀಯನಾದ. ಬಳಿಕ ನಾಲಿಗೆಯನ್ನು ಕಪ್‍ನಲ್ಲಿ ಅದ್ದಿ ಟೀಯನ್ನ ಬಾಯಿಗೆ ತರುವುದನ್ನು ಕಲಿತ. ಜ್ಯಾಕ್‍ನ ಈ ಅಭ್ಯಾಸವು ಮರ್ಸಿಸೈಡ್ ಪೊಲೀಸರ ಮೌಂಟ್ ವಿಭಾಗದ ಎಲ್ಲ ಸಿಬ್ಬಂದಿಗೆ ತಿಳಿದಿದೆ. ಹೀಗಾಗಿ ಅಧಿಕಾರಿಗಳು ಜ್ಯಾಕ್‍ಗೆ ನೀಡುವ ಚಹಾವನ್ನು ಎಂದಿಗೂ ತಪ್ಪಿಸುವುದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ವಿಡಿಯೋ ವೈರಲ್:
    ಜ್ಯಾಕ್ ಟೀ ಕುಡಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮರ್ಸಿಸೈಡ್ ಪೊಲೀಸ್ ವಕ್ತಾರರು ನೀಡಿರುವ ಮಾಹಿತಿ ಪ್ರಕಾರ, ಜ್ಯಾಕ್‍ಗೆ ದೊಡ್ಡ ಕಪ್ ಚಹಾಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಕೆಲಸಕ್ಕೆ ಕಳುಹಿಸುವ ಮೊದಲು ಅವನಿಗೆ ಟೀ ನೀಡಲಾಗುವುದು. ಜ್ಯಾಕ್ ಟೀ ಕುಡಿಯುವ ವಿಡಿಯೋ ಕಳೆದ ಎರಡು ವಾರಗಳಿಂದ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್‍ಗಳು ಕೂಡ ಬಂದಿವೆ ಎಂದು ತಿಳಿಸಿದ್ದಾರೆ.

    ಅಶ್ವಶಾಲೆಯಲ್ಲಿ ಚಹಾ ಕುಡಿಯುವ 12 ಕುದುರೆಗಳ ಪೈಕಿ ಜ್ಯಾಕ್ ಕೂಡ ಒಬ್ಬನಾಗಿದ್ದಾನೆ. ಆದರೆ ಅವನಿಗೆ ನೀಡುವ ಟೀ ಭಿನ್ನವಾಗಿರುತ್ತದೆ. ಜ್ಯಾಕ್‍ಗೆ ತುಂಬಾ ಬಿಸಿ ಅಥವಾ ಕೆನೆ ಚಹಾ ಇಷ್ಟವಾಗುವಿಲ್ಲ. ಅವನಿಗೆ 1 ಟೀ ಚಮಚ ಸಕ್ಕರೆ, ಸ್ವಲ್ಪ ತಣ್ಣೀರಿನೊಂದಿಗೆ ಹಾಲಿನಲ್ಲಿ ಕುದಿಸಿದ ಚಹಾವನ್ನು ನೀಡಲಾಗುತ್ತದೆ. ಆದರೆ ಎರಡು ಚಮಚ ಸಕ್ಕರೆ ಹಾಕಿದರೆ ಜಾಕ್ ಹೆಚ್ಚು ಖುಷಿಯಾಗುತ್ತಾನೆ ಎಂದು ಮರ್ಸಿಸೈಡ್ ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

  • ಬಾಗಿನ ಅರ್ಪಿಸಲು ಕುದುರೆ ಏರಿ ಬಂದ ಬಿಜೆಪಿ ಶಾಸಕ

    ಬಾಗಿನ ಅರ್ಪಿಸಲು ಕುದುರೆ ಏರಿ ಬಂದ ಬಿಜೆಪಿ ಶಾಸಕ

    ತುಮಕೂರು: ತುಂಬಿದ ಕೆರೆಗೆ ಬಾಗಿನ ಅರ್ಪಿಸಲು ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಕುದುರೆ ಏರಿ ಬಂದು ಸುದ್ದಿಯಾಗಿದ್ದಾರೆ.

    ತಾಲೂಕಿನ ಸಿಎಸ್ ಪುರ ಹೋಬಳಿಯ ಚೆಂಗಾವಿ ಕೆರೆ ಈ ಬಾರಿ ಪೂರ್ಣಪ್ರಮಾಣದಲ್ಲಿ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂದು ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಮಸಾಲೆ ಜಯರಾಮ್ ಅವರು ಕುದುರೆ ಏರಿ ಬಂದು ಕೆರೆಗೆ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಶಾಸಕರು ಕುದುರೆ ಏರಿ ಬಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.

    ಈ ಹೊಸಾ ಗೆಟಪ್ ನೋಡಿದ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಕುದುರೆ ಮೇಲಿದ್ದ ಶಾಸಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಹಾಗೆಯೇ ಕುದುರೆ ಏರಿ ಬಂದು ಪೂಜೆ ಸಲ್ಲಿಸಿದ್ದು ಮಸಾಲೆ ಜಯಾರಾಮ್ ಅವರಿಗೂ ಖುಷಿಕೊಟ್ಟಿದೆ.

    ಈ ಹಿಂದೆ ತುರುವೆಕೆರೆ ತಾಲೂಕಿನ ದೊಡ್ಡಮಲ್ಲಿಗೇರೆಯಲ್ಲಿ ಅ. 6ರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಸಖತ್ ಮನರಂಜನೆ ನೀಡುವ ಮೂಲಕ ದಸರಾ ವೈಭವನ್ನು ಇನ್ನಷ್ಟು ಹೆಚ್ಚಿಸಿದ್ದರು.

    ದಸರಾ ಕಾರ್ಯಕ್ರಮದಲ್ಲಿ ರಂಜಿಸಿದ ಶಾಸಕ ಮಸಾಲೆ ಜಯರಾಮ್ ಹಾಡಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೂಲತಃ ನಾಟಕ ಕಲಾವಿದರಾಗಿರುವ ಶಾಸಕರು ದಸರಾ ಕಾರ್ಯಕ್ರಮದಲ್ಲಿ ಸಖತ್ ಮನರಂಜನೆ ನೀಡಿ ಎಲ್ಲರ ಗಮನ ಸೆಳೆದಿದ್ದರು. ದೊಡ್ಡಮಲ್ಲಿಗೇರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡು ಹೇಳಿ ಶಾಸಕರು ಎಲ್ಲರ ಮನ ಗೆದ್ದಿದ್ದರು.

    ರಾಮನ ಅವತಾರ ರಘುಕುಲ ಸೋಮನ ಅವತಾರ ಸಂಪೂರ್ಣ ಹಾಡು ಹಾಡಿ ಮಿಂಚಿದ್ದರು. ಶಾಸಕರ ಹಾಡಿಗೆ ಕಾರ್ಯಕ್ರಮದಲ್ಲಿ ನೆರೆದ ಪ್ರೇಕ್ಷಕರು ತಲೆದೂಗಿ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆ ಮೂಲಕ ಮೆಚ್ಚುಗೆ ಸೂಚಿಸಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕರಿಗೆ ಕಾರ್ಯಕರ್ತರು ಒತ್ತಾಯ ಮಾಡಿದ್ದಕ್ಕೆ ಅವರು ಹಾಡು ಹೇಳಿದರು. ಹೀಗಾಗಿ ಶಾಸಕರ ಗಾಯನ ಕೇಳಿ ಕಾರ್ಯಕರ್ತರು ಸಿಕ್ಕಾಪಟ್ಟೆ ಖುಷಿಪಟ್ಟಿದ್ದರು. ಜೊತೆಗೆ ವೇದಿಕೆ ಮೇಲೆ ಮಸಾಲ ಜಯರಾಮ್ ಅವರು ಮೈಕ್ ಹಿಡಿದು ಹಾಡು ಹೇಳುತ್ತಾ ಎಲ್ಲರನ್ನು ರಂಜಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಕೂಡ ಮಾಡಿಕೊಂಡಿದ್ದರು.

  • ‘ನಾನು ನಡೆಯಲ್ಲ ಅಷ್ಟೇ’ – ಸತ್ತಂತೆ ನಟಿಸೋ ಸೋಮಾರಿ ಕುದುರೆಗಳ ವಿಡಿಯೋ ವೈರಲ್

    ‘ನಾನು ನಡೆಯಲ್ಲ ಅಷ್ಟೇ’ – ಸತ್ತಂತೆ ನಟಿಸೋ ಸೋಮಾರಿ ಕುದುರೆಗಳ ವಿಡಿಯೋ ವೈರಲ್

    ಕೆಲವೊಮ್ಮೆ ಕೆಲವರಿಗೆ ಕೆಲಸ ಮಾಡಲು ಹೋದರೆ ಸೋಮಾರಿತನ ಅಡ್ಡಬರುತ್ತದೆ. ಈ ಸೋಮಾರಿತನ ಈಗ ಕುದುರೆಗಳಿಗೆ ಬಂದಿದ್ದು ವಿಡಿಯೋ ವೈರಲ್ ಆಗಿದೆ.

    ಹೌದು. ಕುದುರೆಗಳು ತಮ್ಮ ಕೆಲಸ ನಿರ್ವಹಿಸಲು ಹಿಂದೇಟು ಹಾಕಿದ್ದ ಅದಕ್ಕೆ ಖತರ್ನಾಕ್ ಪ್ಲಾನೊಂದನ್ನು ರೂಢಿಸಿಕೊಂಡಿವೆ. ಕುದುರೆಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲಾಗುತ್ತಿದೆ.

    ವಿಡಿಯೋದಲ್ಲೇನಿದೆ..?
    ಯಾರಾದರೂ ಬಂದು ತನ್ನ ಮೇಲೆ ಕುಳಿತು ಸವಾರಿ ಮಾಡಲು ಪ್ರಯತ್ನಿಸಿದರೆ ಆ ವೇಳೆ ಕುದುರೆ ಧೊಪ್ಪನೆ ಕುಸಿದು ಬಿದ್ದು ಸತ್ತಂತೆ ನಟನೆ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಕ್ರಿಟ್ಟರ್ ಕ್ಲಬ್ ಎಡಿಟ್ ಮಾಡಿರುವ ಈ ವಿಡಿಯೋವನ್ನು ಫ್ರಾಸಿಸ್ಕೋ ಝಲಾಸರ್ ಎಂಬವರು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಈ ವಿಡಿಯೋದಲ್ಲಿ ಬೇರೆ ಬೇರೆ ಕುದುರೆಗಳಿದ್ದು, ಆದರೆ ಸೋಮಾರಿತನ ಬಂದರೆ ಎಲ್ಲವೂ ಒಂದೇ ರೀತಿಯಾಗಿ ನಟನೆ ಮಾಡುತ್ತಿವೆ. ಸವಾರಿ ಮಾಡಲೆಂದು ಯಾರಾದರೂ ತನ್ನ ಮೇಲೆ ಹತ್ತಿ ಕುಳಿತರೆ ನಟನೆ ಮಾಡಿ ಪ್ರವಾಸಿಗರಿಗೆ ಶಾಕ್ ಕೊಡುತ್ತವೆ. ಹೀಗೆ ನಟನೆ ಮಾಡಿದಾಗ ಸವಾರಿ ಮಾಡಲು ಬಂದವರು ಕುದುರೆ ಸತ್ತಿದೆ ಎಂದು ತಿಳಿದು ಮುಂದಕ್ಕೆ ಹೋಗುತ್ತಾರೆ. ಕುದುರೆಗೂ ಇದೇ ಬೇಕಾಗಿರುವುದು ಎಂದು ಝಲಾಸರ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಈ ವಿಡಿಯೋ ಪೋಸ್ಟ್ ಮಾಡಿದ 2 ವಾರದಲ್ಲಿ ಸರಿಸುಮಾರು ಎರಡೂವರೆ ಕೋಟಿ ಜನ ವೀಕ್ಷಿಸಿದ್ದಾರೆ. ಯೂಟ್ಯೂಬ್ ನಲ್ಲಿ ಕೂಡ ಈ ವಿಡಿಯೋ ಹರಿದಾಡುತ್ತಿದ್ದು, ಸಾವಿರಾರು ಮಂದಿ ಕಮೆಂಟ್ಸ್ ಮಾಡುತ್ತಿದ್ದಾರೆ.

    https://www.facebook.com/frasisco.zalar.9/videos/173767363758806/

     ನಾನು ಮಹಡಿಯಲ್ಲಿ ಮಲಗಿದ್ದಾಗ ಕೆಲವೊಮ್ಮೆ ತಾಯಿ ಕೆಳಗಿನಿಂದ ನನ್ನನ್ನು ಜೋರಾಗಿ ಕರೆದು ಪಾತ್ರೆ ತೊಳೆಯುವಂತೆ ಹೇಳಿದಾಗ ಇದೇ ರೀತಿ ನಿದ್ದೆ ಮಾಡಿದವರಂತೆ ನಟನೆ ಮಾಡುತ್ತೇವೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ತನ್ನ ನಾಲಗೆ ಹೊರಗೆ ಹಾಕಿ ಕಣ್ಣಾಲಿಗಳನ್ನು ಮೇಲೆ ಮಾಡಿರುವುದನ್ನು ನೋಡಿದರೆ ಕುದುರೆಯ ನಾಟಕ ನಂಬಲಸಾಧ್ಯ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ನನ್ನ ಇಡೀ ಜೀವನವನ್ನು ಕುದುರೆ ಬಿಂಬಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

  • ವೀಕೆಂಡ್ ಮಸ್ತಿಯಲ್ಲಿ ದಚ್ಚು- ಕುದುರೆ ಏರಿ ಸವಾರಿ ಮಾಡಿದ ಸುಯೋಧನ

    ವೀಕೆಂಡ್ ಮಸ್ತಿಯಲ್ಲಿ ದಚ್ಚು- ಕುದುರೆ ಏರಿ ಸವಾರಿ ಮಾಡಿದ ಸುಯೋಧನ

    ಮೈಸೂರು: ವೀಕೆಂಡ್‍ನಲ್ಲಿ ಸ್ನೇಹಿತರ ಜೊತೆ ಮಸ್ತಿ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮಗೆ ಇಷ್ಟವಾದ ಕುದುರೆ  ಏರಿ ಸವಾರಿ ಮಾಡಿದ್ದಾರೆ.

    ತಮ್ಮ ನಟನೆಯ ಕರುಕ್ಷೇತ್ರ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿರುವ ಸುಯೋಧನ ದರ್ಶನ್, ಮೈಸೂರಿನ ತಮ್ಮ ಫಾರ್ಮ್ ಹೌಸಿನಲ್ಲಿ ವೀಕೆಂಡ್ ಮಸ್ತಿ ಮಾಡುತ್ತಿದ್ದಾರೆ. ಗೆಳೆಯರ ಜೊತೆ ಕುದುರೆ ಏರಿ ರಸ್ತೆಯಲ್ಲಿ ಓಡಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಅಗಿದೆ.

    ವಿಡಿಯೋದಲ್ಲಿ ದಾಸ, ತಮಗೆ ಇಷ್ಟವಾದ ಬಿಳಿ ಕುದುರೆಯನ್ನು ರೈಡ್ ಮಾಡುತ್ತಿದ್ದಾರೆ. ಕುದುರೆಯ ಹಿಂದಕ್ಕೆ ಇನ್ನೊಂದು ಕಪ್ಪು ಬಣ್ಣದ ಕುದುರೆಯನ್ನು ಕಟ್ಟಿಕೊಂಡು ಸವಾರಿ ಮಾಡಿದ್ದಾರೆ. ದರ್ಶನ್ ಅವರ ಜೊತೆ ಅವರ ಇನ್ನಿಬ್ಬರು ಸ್ನೇಹಿತರು ಕೂಡ ಕುದುರೆ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ. ಇದನ್ನು ರಸ್ತೆಯಲ್ಲಿ ನಿಂತ ಅಭಿಮಾನಿಗಳು ತಮ್ಮ ಮೊಬೈಲ್ ಫೋನ್‍ನಲ್ಲಿ ಸೆರೆಹಿಡಿದ್ದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಮುಂಚೆಯಿಂದಲೂ ಪ್ರಾಣಿ ಪ್ರಿಯ ಆಗಿರುವ ದರ್ಶನ್ ಅವರಿಗೆ ಕುದುರೆ ಎಂದರೆ ಅಚ್ಚುಮೆಚ್ಚು. ಆ ಕಾರಣದಿಂದಲೇ ಅವರು ಮೈಸೂರಿನ ಟಿ ನರಸೀಪುರದ ಬಳಿ ಇರುವ ಅವರ ಫಾರ್ಮ್ ಹೌಸ್‍ನಲ್ಲಿ ಕುದುರೆಗಳು, ಹಸುಗಳು ಮತ್ತು ಕೋಳಿ ಸೇರಿದಂತೆ ವಿವಿಧ ರೀತಿಯ ಪಕ್ಷಿಗಳನ್ನು ಸಾಕಿದ್ದಾರೆ.

    ಇದರ ಜೊತೆ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಕಾಡಿನ ಪರಿಸರದ ಮೇಲೆ ಅತೀ ಹೆಚ್ಚು ಪ್ರೀತಿ ಹೊಂದಿದ್ದು, ಶೂಟಿಂಗ್‍ನಲ್ಲಿ ಬಿಡುವು ಸಿಕ್ಕ ಸಮಯದಲ್ಲಿ ಕಾಡಿನಲ್ಲಿ ಸಫಾರಿ ಹೋಗುವುದು, ಕಾಡಿನ ಫೋಟೋ ತೆಗೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ಈ ಹಿಂದೆ ತಾವು ಸೆರೆ ಹಿಡಿದಿದ್ದ ಪ್ರಕೃತಿಯ ಅದ್ಭುತ ದೃಶ್ಯಗಳ ಫೋಟೋಗಳನ್ನು ಹರಾಜು ಹಾಕಿದ್ದರು. ಮಾರ್ಚ್ 3 ರಂದು ನಡೆದ ಈ ಹರಾಜಿನಲ್ಲಿ 3.75 ಲಕ್ಷ ರೂ. ಸಂಗ್ರಹಣೆಯಾಗಿತ್ತು. ಇದರಲ್ಲಿ ಬಂದ ಹಣವನ್ನು ದರ್ಶನ್ ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ಹೇಳಿದ್ದರು.

  • ವಿವಾಹ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ವಧು – ವಿಡಿಯೋ ವೈರಲ್

    ವಿವಾಹ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ವಧು – ವಿಡಿಯೋ ವೈರಲ್

    ಭೋಪಾಲ್: ಸಾಮಾನ್ಯವಾಗಿ ಮದುವೆ ಮೆರವಣಿಗೆಯಲ್ಲಿ ವರ ಕುದುರೆ ಏರಿ ಬರುತ್ತಾನೆ. ಆದರೆ ಇಲ್ಲೊಬ್ಬ 22 ವರ್ಷದ ವಧು ತನ್ನ ವಿವಾಹ ಮರೆವಣಿಗೆಯಲ್ಲಿ ಸ್ವತಃ ತಾನೇ ಕುದುರೆ ಸವಾರಿ ಮಾಡಿಕೊಂಡು ಬಂದಿದ್ದಾಳೆ.

    ಭೋಪಾಲ್‍ನ ಜಹಾಂಗೀರಾಬಾರ್‍ನ ಬಾಪು ಕಾಲೋನಿ ಈ ಮದುವೆ ಮೆರವಣಿಗೆ ನಡೆದಿದ್ದು, 22ರ ಮನಾಲಿ ಮೆಹ್ರೊಲಿಯಾ ತನ್ನ ಮದುವೆ ಸಮಾರಂಭದ ಮೆರವಣಿಗೆಯಲ್ಲಿ ‘ಬಸಂತಿ’ ಕುದುರೆಯ ಮೇಲೆ ಕುಳಿತು ಸವಾರಿ ಮಾಡಿದ್ದಾಳೆ.

    ವಧು ಮನಾಲಿ ಪೋಷಕರಿಗೆ ಒಬ್ಬಳೆ ಮಗಳಿದ್ದು, ಮೂವರು ಗಂಡು ಮಕ್ಕಳಿದ್ದಾರೆ. ಮನಾಲಿ ತನ್ನ ಮದುವೆಯಲ್ಲಿ ವರನಂತೆ ಕುದುರೆ ಸವಾರಿ ಮಾಡಬೇಕೆಂದು ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು. ಅದರಂತೆಯೇ ಮನಾಲಿ ಆಸೆಯಂತೆ ವಿವಾಹ ಸಮಾರಂಭದಲ್ಲಿ ಆಕೆಯೇ ಕುದುರೆ ಸವಾರಿ ಮಾಡಿದ್ದಾಳೆ.

    ವಧು ಮನಾಲಿ ವರ ಕುನಾಲ್ ಜೊತೆ ವಿವಾಹವಾಗಿದ್ದಾರೆ. ಈ ಮದುವೆ ಮೆರವಣಿಗೆ ಚಿಕ್ಲೊಡ್ ರಸ್ತೆಯ ಮೂಲಕ ಸಿಕಂದೇರಿಯಾ ಪ್ರದೇಶದವರೆಗೂ ಕುದುರೆ ಸವಾರಿ ಮಾಡಲಾಗಿದೆ.

    https://www.youtube.com/watch?v=bOQa5jM5bmQ

  • ಮೈಸೂರಿನಲ್ಲಿ ಮನಬಂದಂತೆ ಓಡಾಡಿದ ಕುದುರೆಗೆ ಅಜ್ಜಿ ಬಲಿ!

    ಮೈಸೂರಿನಲ್ಲಿ ಮನಬಂದಂತೆ ಓಡಾಡಿದ ಕುದುರೆಗೆ ಅಜ್ಜಿ ಬಲಿ!

    ಮೈಸೂರು: ಕುದುರೆಯೊಂದು ಮನಬಂದಂತೆ ಓಡಾಡಿ ವೃದ್ಧೆಯನ್ನು ಬಲಿ ಪಡೆದ ಘಟನೆ ನಗರದಲ್ಲಿ ನಡೆದಿದೆ.

    ಪಾರ್ವತಮ್ಮ ಕುದುರೆ ದಾಳಿಗೆ ಬಲಿಯಾದ ಅಜ್ಜಿ. ಮೈಸೂರಿನ ಗಾಯತ್ರಿಪುರಂನ ಮೊದಲನೇ ಹಂತದ ಆಚಾರಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

    ತರಕಾರಿ ಮಾರುವ ಕೆಲಸ ಮಾಡುತ್ತಿದ್ದ ಪಾರ್ವತಮ್ಮ ಮೇಲೆ ಕುದುರೆ ದಾಳಿ ಮಾಡಿದೆ. ದಾಳಿಗೊಳಗಾದ ಪಾರ್ವತಮ್ಮ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕುದುರೆ ಸಾರ್ವಜನಿಕರ ನಿಯಂತ್ರಣಕ್ಕೆ ಸಿಗದೇ ಎಲ್ಲೆಂದರಲ್ಲಿ ಓಡಾಡುತ್ತಿದೆ. ಈ ಘಟನೆ ತಿಳಿದ ನಜರ್ ಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ವಾನಗಳ ನಂತ್ರ ಅಂಬಿಯನ್ನು ನೆನೆದು ಭಾವುಕವಾಗಿದೆ `ಜಾಕಿ’

    ಶ್ವಾನಗಳ ನಂತ್ರ ಅಂಬಿಯನ್ನು ನೆನೆದು ಭಾವುಕವಾಗಿದೆ `ಜಾಕಿ’

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಶನಿವಾರ ತಮ್ಮ ಪ್ರೀತಿ ಪಾತ್ರರನ್ನು ಅಗಲಿದ್ದಾರೆ. ಈಗಾಗಲೇ ಅಂಬಿಯ ಶ್ವಾನಗಳಾದ ಕನ್ವರ್ ಲಾಲ್ ಹಾಗೂ ಬುಲ್ ಬುಲ್ ಅಂಬಿಯನ್ನು ನೆನೆದು ಭಾವುಕರಾಗಿದ್ದು, ಇದೀಗ ಪ್ರೀತಿಯ ಕುದುರೆ ಜಾಕಿ ಕೂಡ ಅಂಬಿಯನ್ನು ನೆನೆದು ಭಾವುಕವಾಗಿದೆ.

    ಅಂಬಿಗೆ ಕೊನೆಯ ರೇಸ್ ನೋಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಅಂಬಿ ಸಾವಿಗೂ ಮುನ್ನಾ ದಿನ ರೇಸ್ ನೋಡುವುದಕ್ಕೆ ಹೋಗಿದ್ದರು. ಮಳೆ ಇದ್ದಿದರಿಂದ ರೇಸ್ ಕ್ಯಾನ್ಸಲ್ ಆಗಿತ್ತು. ಆಗ ಅಂಬಿ ಬೇಸರ ಮಾಡಿಕೊಂಡು ಮನೆಗೆ ಹೋಗಿದ್ದರು. ಸಾವಿಗೂ ಮುನ್ನಾ ದಿನ ಅಂಬಿ ಪ್ರೀತಿಯ ಅಶ್ವದ ಬಗ್ಗೆಯೆಲ್ಲ ಮಾತನಾಡಿದ್ದರು.

    ಅಂಬಿ “ಬಡ್ಡೇತದೆ” ಗೂ ವಯಸ್ಸಾಗಿದೆ. ಆದರೆ ಅಂಬಿಯದ್ದೇ ಚಾರ್ಮ್ ಇದೆ. ಅಂಬಿ, ಜಾಕಿ ಬಿಟ್ಟು ಬೇರೆ ಯಾರು ಹತ್ತಿರ ಬಂದ್ರೂ ಗುರ್ ಎನ್ನುತ್ತಿತ್ತು. ಜಾಕಿ ವಾರೆನ್ ಸಿಂಗ್ ಸ್ಪೀಡ್ ಹಾಕ್ ಅಂತಾ ಅಂಬಿ ಕುದುರೆಗೆ ಹೆಸರು ಇಟ್ಟಿದ್ದರು. ಆದರೆ ಅಂಬಿ ಮಾತ್ರ ಬಡ್ಡೇತದೆ ಅಂತಾ ಕುದುರೆಯ ಮೈದಡವಿ ಮಾತಾನಾಡಿಸುತ್ತಿದ್ದರು.

    ಇಡೀ ರೇಸ್ ಕೋರ್ಸ್ ನಲ್ಲಿ ಅಂಬಿ ಕುದುರೆದ್ದೇ ಹವಾ. ಮೂಗಿನಲ್ಲಿ ಸಿಟ್ಟು, ಫೋಟೋ ಫೋಸ್ ಗೀಸು ಅಂತಾ ಹತ್ತಿರ ಬಂದರೆ ಗುರ್ ಎನ್ನುತ್ತದೆ. ಅಂಬಿ ಕಂಡರೆ ಮಾತ್ರ ತುಂಬಾ ಪ್ರೀತಿಯಿತ್ತು. ಅಂಬಿ ಕುದುರೆಗೆ ಏಳು ವರ್ಷ. ಆದರೂ ತುಂಬಾ ಚೆನ್ನಾಗಿ ರೇಸ್ ಮಾಡುತ್ತಿತ್ತು.

    ಸಾಮಾನ್ಯವಾಗಿ ಮೂರು ವರ್ಷ ನಾಲ್ಕು ವರ್ಷಕ್ಕೆ ಕುದುರೆಗಳು ಬಹಳ ಸ್ಪೀಡಾಗಿ ಓಡುತ್ತೆ. ಆಮೇಲೆ ಐದು ವರ್ಷ ಆಗುತ್ತಿದ್ದಂತೆ ಸ್ಪೀಡ್ ಕಡಿಮೆಯಾಗುತ್ತೆ. ಆದರೆ ಅಂಬಿ ಕುದುರೆ ಮಾತ್ರ ವಯಸ್ಸಾದ್ರೂ ಚೆನ್ನಾಗಿ ರೇಸ್‍ನಲ್ಲಿ ಓಡುತ್ತಿತ್ತು. ಗಂಟೆಗೆ 60 ಕಿ.ಮಿ ಓಡುತ್ತಿತ್ತು. ಅಂಬಿ ಹಾಗೂ ಜಾಕಿ ಬಿಟ್ಟು ಯಾರೂ ಹತ್ತಿರ ಸುಳಿಯೋ ಹಾಗಿಲ್ಲ.

    ಅಂಬಿಗೆ ಡರ್ಬಿನಲ್ಲಿ ದುಡ್ಡು, ನೇಮು, ಫೇಮು ತಂದುಕೊಟ್ಟಿದ್ದೆ ಈ ಬಡ್ಡೇತದೆ ಕುದುರೆ. ವಾರೇನ್ ಸಿಂಗ್ ಬಳಿ ಬಿಳಿ ಕುದುರೆ ಕಂಡರೆ ಅಂಬಿಗೆ ತುಂಬಾ ಇಷ್ಟ. ಅಂಬಿ ಕೊನೆಯದಾಗಿ ಈ ಬಿಳಿ ಕುದುರೆ “ಗ್ಲೋಬಲ್ ರೂಲರ್ ” ರೇಸ್ ನೋಡುವುದಕ್ಕೆ ಬಂದಿದ್ದರು. ಆದರೆ ಅಂದು ಮಳೆ ಇದ್ದಿದ್ದರಿಂದ ರೇಸ್ ಕ್ಯಾನ್ಸಲ್ ಆಗಿತ್ತು.

    ಥತ್ ನಿನ್ನ ರೇಸ್ ನೋಡಬೇಕು ಅನ್ನೊಂಡ್ನಲ್ಲೋ ಮಳೆ ಬಂದು ಹಾಳಾಗೋಯ್ತು ಅಂತಾ ಅಂಬಿ ಬಿಳಿ ಕುದುರೆ ಮೈಸವರಿ ಮಳೆಗೊಂದಿಷ್ಟು ಬೈದು, ಹೋಗಿದ್ದರು. ಬಿಳಿ ಕುದುರೆ ಫುಲ್ ಕೂಲ್ ಆಗಿದ್ದರೆ, ಅಂಬಿ ಕುದುರೆ ರೆಬೆಲ್ ಆಗಿತ್ತು. ಈ ಎರಡು ಕುದುರೆಯೂ ಅಂಬಿಗೆ ತುಂಬಾ ಇಷ್ಟವಿತ್ತು. ಅಂಬಿ ಕುದುರೆ ಒಟ್ಟು 6 ಕಪ್‍ಗಳನ್ನು ಗೆದ್ದಿತ್ತು. ಒಟ್ಟಿನಲ್ಲಿ ಇದೀಗ ಇವುಗಳ ಮೂಕ ರೋಧನೆ ಕೂಡ ಅಂಬಿ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಅಸಾಧ್ಯವಾಗಿರುವುದನ್ನು ಗಮನಿಸಿಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿಧನದ ಹಿಂದಿನ ದಿನ ತಾನು ಪ್ರೀತಿಸ್ತಿದ್ದ ಸ್ಥಳಕ್ಕೋಗಿ ಬಹಳ ಸಮಯ ಕಳೆದಿದ್ರು ಅಂಬಿ!

    ನಿಧನದ ಹಿಂದಿನ ದಿನ ತಾನು ಪ್ರೀತಿಸ್ತಿದ್ದ ಸ್ಥಳಕ್ಕೋಗಿ ಬಹಳ ಸಮಯ ಕಳೆದಿದ್ರು ಅಂಬಿ!

    ಬೆಂಗಳೂರು: ಬದುಕಿನ ಕೊನೆಯ ಕ್ಷಣದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾನು ಪ್ರೀತಿಸುತ್ತಿದ್ದ ಸ್ಥಳಕ್ಕೆ ಹೋಗಿ ಬಹಳ ಹೊತ್ತು ಕಳೆದಿದ್ದರು. ಅಲ್ಲಿ ಅವರು ಪ್ರೀತಿಸುತ್ತಿದ್ದ ಜೀವವನ್ನು ಮುದ್ದಿಸಿ ತಮ್ಮ ಕೊನೆಯ ಕ್ಷಣಗಳನ್ನು ಕಳೆದರು.

    ಏನ್ಲಾ ಬಡ್ಡೇತದೆ, ಹೆಂಗಿದ್ದೀಯಾ? ನೀನೆ ರೇಸ್ ನಲ್ಲಿ ಫಸ್ಟ್ ಬರಬೇಕು. ಹೀಗಂತ ಅಂಬಿ ಮುದ್ದು ಕುದುರೆಯನ್ನು ಮೈದಡವಿ ನೇವರಿಸಿಬಿಟ್ಟರು ಅಂದ್ರೆ ಮುಗೀತು. ಅಂಬಿಯ ಪ್ರೀತಿಯ “ಸ್ಪೀಡ್ ಹಾಕ್” ಕೆನತ ಶುರು. ಅಂಬಿಯ ಸೂಟು-ಬೂಟು ಶಿಳ್ಳೆಯ ಸದ್ದಿನೊಂದಿಗೆ ಬೆಂಗಳೂರಿನ ಟರ್ಪ್ ಕ್ಲಬ್ ನಲ್ಲಿರುವ ಅಂಬಿ ಮಾಲೀಕತ್ವದ ಈ ಕುದುರೆ ಅದೆಷ್ಟೋ ಪದಕಗಳನ್ನು ಕೊರಳಿಗೆ ಹಾಕಿಕೊಂಡಿದೆ.

    ಸಾವಿನ ಹಿಂದಿನ ಶುಕ್ರವಾರ ಇಳಿ ಸಂಜೆ ವೇಳೆ ನೇರವಾಗಿ ಅಂಬಿ ಟರ್ಪ್‍ಕ್ಲಬ್‍ಗೆ ಬಂದಿದ್ದರು. ಸ್ಪೀಡ್ ಹಾಕ್‍ನ್ನು ಮನಸಾರೆ ಮುದ್ದಿಸಿದ್ದರು. ಕುದುರೆ ರೇಸ್‍ನ ಹುಚ್ಚನ್ನು ಹತ್ತಿಸಿಕೊಂಡಿದ್ದ ಅಂಬಿ ಸಾವಿನ ಮುನ್ನ ದಿನವೂ ರೇಸ್‍ನ ಜಾಗದಲ್ಲೆಲ್ಲ ಸುಮ್ಮನೆ ಕೂತು ನಂತರ ಅಲ್ಲಿಂದ ಎದ್ದು ಬಂದಿದ್ದಾರೆ.

    ಡರ್ಬಿ ರೇಸ್ ಆದಾಗೆಲ್ಲ ಸೂಟು-ಬೂಟು ಧರಿಸಿ ಸ್ಟೈಲಾಗಿ ಸಿಗರೇಟು ಸೇದುತ್ತಾ ಶಿಳ್ಳೆ ಹೊಡೆಯುವ ಅಂಬಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು. ಟರ್ಫ್ ಕ್ಲಬ್‍ನ್ನು ಬಹುವಾಗಿ ಪ್ರೀತಿಸಿದ್ದ ಅಂಬಿ ಇಲ್ಲದೇ ಈಗ ಅಂಬಿ ಅಶ್ವ ಮೌನವಾಗಿದೆ. ಟರ್ಪ್ ಕ್ಲಬ್‍ನಲ್ಲಿ ಅಂಬಿಯ ಆಳೆತ್ತರದ ಭಾವಚಿತ್ರ ಅಲ್ಲಿನ ಸಿಬ್ಬಂದಿಯ ಪ್ರೀತಿಯನ್ನು ತೋರುತ್ತಿದೆ.

    ಶೂಟಿಂಗ್, ಮೀಟಿಂಗ್, ಸದನ ಸಭೆಗಳ ನಡುವೆಯೂ ಅಂಬಿ ರೇಸ್‍ಗಳನ್ನು ವೀಕ್ಷಿಸಲು ಬರುತ್ತಿದ್ದರು. ಸಾವಿಗೂ ಮುನ್ನಾ ದಿನ ಬಂದ ಅಂಬಿ ಈಗಿಲ್ಲ ಅನ್ನೋ ಸತ್ಯವನ್ನು ಅರಗಿಸಿಕೊಳ್ಳೋಕೆ ಇಲ್ಲಿನ ಸಿಬ್ಬಂದಿಗೂ ಆಗುತ್ತಿಲ್ಲ. ಸ್ಪೀಡ್ ಹಾಕ್‍ನ ಕೆನತದ ಓಟಕ್ಕೆ ಮಗುವಾಗುತ್ತಿದ್ದ ಅಂಬಿಯನ್ನು ಕಳೆದುಕೊಂಡು ಅಂಬಿ ಕುದುರೆ ಅನಾಥವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಪ್ಪನ ಹಾದಿಯಲ್ಲಿ ಮಗ ವಿನೀಶ್ ದರ್ಶನ್

    ಅಪ್ಪನ ಹಾದಿಯಲ್ಲಿ ಮಗ ವಿನೀಶ್ ದರ್ಶನ್

    ಬೆಂಗಳೂರು: ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ಅವರ ತಂದೆಯನ್ನೇ ಹಿಂಬಾಲಿಸುತ್ತಾರೆ. ಅದೇ ರೀತಿ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ವಿನೀಶ್ ಕೂಡ ಅಪ್ಪನ ಹಾದಿಯಲ್ಲೇ ಹೋಗುತ್ತಿದ್ದಾರೆ.

    ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಈಗಾಗಲೇ ಅವರು ಅನೇಕ ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅವರಿಗೆ ಕುದುರೆ ಅಂದರೆ ಅಚ್ಚುಮೆಚ್ಚು, ಅವರು ಸಾಕಿರುವ ಕುದುರೆ ಮೇಲೆ ಅನೇಕ ಬಾರಿ ಸವಾರಿಯನ್ನು ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸಿನಿಮಾದಲ್ಲು ಅವರ ಕುದುರೆಯಲ್ಲೇ ಸವಾರಿ ಮಾಡಿದ್ದಾರೆ.

    ದರ್ಶನ್ ಅವರ ಮಗ ವಿನೀಶ್ ಗೂ ಕೂಡ ಪ್ರಾಣಿಗಳ ಮೇಲೆ ತುಂಬಾ ಪ್ರೀತಿ. ಅವರು ಕೂಡ ಒಂದು ಕುದುರೆಯನ್ನು ಸಾಕುತ್ತಿದ್ದಾರೆ. ಈಗ ಅವರು ಸಾಕುತ್ತಿರುವ ಕುದುರೆ ಮೇಲೆ ವಿನೀಶ್ ಸವಾರಿ ಮಾಡಿದ್ದಾರೆ. ವಿನೀಶ್ ಸವಾರಿ ಮಾಡುತ್ತಿದ್ದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

    ಇತ್ತೀಚೆಗೆ ನಟ ದರ್ಶನ್ ನಟಿಸುತ್ತಿರುವ ಬಹು ನಿರೀಕ್ಷಿತ `ಯಜಮಾನ’ ಚಿತ್ರದ ಶೂಟಿಂಗ್ ಸೆಟ್‍ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಯಜಮಾನ ಚಿತ್ರದಲ್ಲಿ ಜೂನಿಯರ್ ದರ್ಶನ್, ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸುತ್ತಿದ್ದಾರೆ. ಈ ಹಾಡಿನಲ್ಲಿ ಅಪ್ಪ ಮಗ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ. ಮಗನ ನಟನೆಯನ್ನು ನೋಡಲು ತಾಯಿ ವಿಜಯಲಕ್ಷ್ಮಿ ಚಿತ್ರೀಕರಣ ಸೆಟ್ ಗೆ ಭೇಟಿ ಕೊಟ್ಟಿದ್ದರು.

    `ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕ ದರ್ಶನ್ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಮೈಸೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕುದುರೆ ರೇಸ್ ವೇಳೆ ಕಾರಿಗೆ ಡಿಕ್ಕಿ ಹೊಡೆದ ಬೈಕ್!

    ಕುದುರೆ ರೇಸ್ ವೇಳೆ ಕಾರಿಗೆ ಡಿಕ್ಕಿ ಹೊಡೆದ ಬೈಕ್!

    ಧಾರವಾಡ: ಕುದುರೆ ರೇಸ್ ನಡೆಯುತ್ತಿದ್ದ ವೇಳೆ ಬೈಕೊಂದು ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಹೊರವಲಯದ ನಗರ ಸೌದತ್ತಿ ರಸ್ತೆಯಲ್ಲಿ ನಡೆದಿದೆ.

    ಸೋಮವಾರ ಸಂಜೆ ವೇಳೆ ರಾಜ್ಯ ಹೆದ್ದಾರಿಯಲ್ಲಿ ಪೊಲೀಸರ ಯಾವುದೇ ಅನುಮತಿ ಇಲ್ಲದೇ ಕುದುರೆ ಗಾಡಿ ರೇಸ್ ನಡೆಸಲಾಗಿತ್ತು. ರೇಸ್ ನಲ್ಲಿ ಸುಮಾರು 15 ಕ್ಕೂ ಹೆಚ್ಚು ಕುದುರೆ ಗಾಡಿ ಭಾಗವಹಿಸಿದ್ದವು. ಕುದುರೆ ಗಾಡಿಗಳ ಓಟದ ನಡುವೆ ಬೈಕ್ ಗಳ ರೇಸ್ ನಡೆದಿದೆ. ಈ ವೇಳೆ ಬೈಕೊಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಮೇಲಿದ್ದ ಯುವಕ ಸ್ವಲ್ಪದರಲ್ಲಿ ಬಚಾವ್ ಆಗಿದ್ದರಿಂದ ಯಾವುದೇ ಅಪಾಯಗಳು ಸಂಭವಿಸಿಲ್ಲ.

    ಬೈಕ್ ಸತೀಶ ಹೆಗಡೆ ಎಂಬವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಈ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/zZPzISoy0Qw