Tag: Horse Ride

  • ಸರಿಯಾದ ಸಮಯಕ್ಕೆ ಬಾರದ ಬಸ್; ನಿತ್ಯ ಕುದುರೆ ಏರಿ ಶಾಲೆಗೆ ಹೋಗ್ತಿದ್ದಾನೆ ಬಾಲಕ

    ಸರಿಯಾದ ಸಮಯಕ್ಕೆ ಬಾರದ ಬಸ್; ನಿತ್ಯ ಕುದುರೆ ಏರಿ ಶಾಲೆಗೆ ಹೋಗ್ತಿದ್ದಾನೆ ಬಾಲಕ

    ಚಿಕ್ಕೋಡಿ: ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಬಾಲಕನೊಬ್ಬ ಕುದುರೆ ಏರಿ ನಿತ್ಯ ಶಾಲೆಗೆ ತೆರಳುವ ಮೂಲಕ ಎಲ್ಲರ ಗಮನ ಸೆಳೆದಿರುವ ಘಟನೆ ಸೊಲ್ಹಾಪುರ (Solapura) ನಡೆದಿದೆ.

    ಮಹಾರಾಷ್ಟ್ರದ (Maharashtra) ಸೊಲ್ಹಾಪುರ ಜಿಲ್ಲೆ ಬಾರ್ಶಿ ತಾಲೂಕಿನ ವ್ಯರಾಗ್ ಪಟ್ಟಣದ ಹೊರವಲಯದ ಗ್ರಾಮೀಣ ಭಾಗದ 9 ವರ್ಷದ ಆದರ್ಶ ಸಾಳುಂಕ ಎಂಬ ಬಾಲಕ ಸರಿಯಾದ ಸಮಯಕ್ಕೆ ಬಾರದ ಬಸ್‌ಗೆ ಗೋಲಿ ಮಾರೋ ಎಂದು ಕುದುರೆ ಸವಾರಿ ಮಾಡಿಕೊಂಡು ಶಾಲೆಗೆ ಹೋಗುತ್ತಿದ್ದಾನೆ. ಇದನ್ನೂ ಓದಿ: ಅಕ್ರಮ ಮುಸ್ಲಿಂ ವಲಸಿಗರು ಭಯೋತ್ಪಾದನೆ, ಜನೋತ್ಪಾದನೆಯಲ್ಲಿ ತೊಡಗಿದ್ದಾರೆ: ಪ್ರತಾಪ್‌ ಸಿಂಹ


    ಬಾಲಕನ ಅಜ್ಜನ ಬಳಿ ಇರುವ 7 ಕುದುರೆಗಳ ಪೈಕಿ 1 ಕುದುರೆಯನ್ನು ಓಡಿಸಿಕೊಂಡು ಹೋಗಿ ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದ್ದಾನೆ.

  • ಮೂಕಪ್ರಾಣಿಗಳೊಂದಿಗೆ ನಮ್ಮ ಮನದಾಳವನ್ನು ಹಂಚಿಕೊಳ್ಳುವುದು ಅದ್ಭುತ- ಕಂಗನಾ ರಣಾವತ್

    ಮೂಕಪ್ರಾಣಿಗಳೊಂದಿಗೆ ನಮ್ಮ ಮನದಾಳವನ್ನು ಹಂಚಿಕೊಳ್ಳುವುದು ಅದ್ಭುತ- ಕಂಗನಾ ರಣಾವತ್

    ಮುಂಬೈ: ಸದಾ ಸುದ್ದಿಯಲ್ಲಿರುವ ಬಾಲಿವುಡ್ ಚೆಲುವೆ ಕಂಗನಾ ರಣಾವತ್ ಇದೀಗ ಕುದುರೆ ಸವಾರಿ ಮಾಡುವ ವೀಡಿಯೋ ವೈರಲ್ ಆಗಿದೆ.

    ಕಂಗನಾ ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ತುತ್ತಾಗಿ ದೀರ್ಘಾವಧಿಯ ವಿಶ್ರಾಂತಿಯಲ್ಲಿದ್ದರು. ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿರುವ ಅವರು ಮನಾಲಿಯಿಂದ ಮುಂಬೈಗೆ ಬಂದಿಳಿದಿದ್ದು, ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋಟಿ ಸುಖಕ್ಕಿಂತ ಅಮ್ಮನ ಮಡಿಲೇ ಮೇಲು: ಕಂಗನಾ

     

    View this post on Instagram

     

    A post shared by Kangana Ranaut (@kanganaranaut)

    ಇದೀಗ ಕಂಗನಾ ಭರ್ಜರಿಯಾಗಿ ಕುದುರೆ ಸವಾರಿ ಮಾಡುವ ಮೂಲಕ ಹೊಸ ಚೈತನ್ಯವನ್ನು ಕಂಡುಕೊಂಡಿದ್ದಾರೆ. ಮುಂಬೈನಲ್ಲಿ ಮಳೆ ಸುರಿಯುವುದಕ್ಕೆ ಶನಿವಾರ ಕೊಂಚ ವಿರಾಮ ಸಿಕ್ಕಿತ್ತು. ಇದೇ ವೇಳೆ ಕುದುರೆ ಸವಾರಿ ನಡೆಸಿದ ಕಂಗನಾ, ಇನ್‍ಸ್ಟಾಗ್ರಾಮ್ ಹಾಗೂ ಕೂನಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.

    ತಲೈವಿ ಚಿತ್ರಕ್ಕಾಗಿ ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದೆ. ಬಹಳ ದಿನಗಳ ನಂತರ ಕುದುರೆ ಸವಾರಿ ಮಾಡಿದೆ. ಮೂಕಪ್ರಾಣಿಗಳೊಂದಿಗೆ ನಮ್ಮ ಮನದಾಳವನ್ನು ಹಂಚಿಕೊಳ್ಳುವುದಕ್ಕೆ ಇದೊಂದು ಅದ್ಭುತ ಉದಾಹರಣೆ. ಕುದುರೆ ಸವಾರಿಯಿಂದ ನನಗೆ ತುಂಬಾ ಖುಷಿಯಾಯಿತು ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    ಕಂಗನಾ ರಣಾವತ್ ಅಮ್ಮನ ಮಡಿಲಲ್ಲಿ ಹಾಯಾಗಿ ಕಾಲ ಕಳೆಯುತ್ತಿರುವ ಸಂತೋಷದ ಕ್ಷಣಗಳನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವುದಿನಗಳ ಹಿಂದೆ ಹಂಚಿಕೊಂಡಿದ್ದರು. ಇಡೀ ಜಗತ್ತಿನ ಖುಷಿ ಒಂದ್ಕಡೆಯಾದ್ರೆ, ಅಮ್ಮನ ಮಮತೆಯ ಮಡಿಲು ಇನ್ನೊಂದು ಕಡೆ ಎಂದು ಕ್ಯಾಪ್ಶನ್ ಕೊಟ್ಟು ಅಮ್ಮ ಕೈಯಿಂದ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಕೊರೊನಾ ಸೋಂಕಿನಿಂದ ವಾಸಿಯಾದ ಕಂಗನಾ ಮುಂಬೈ ಬಿಟ್ಟು ತಮ್ಮ ತವರೂರಲ್ಲಿ ಕೆಲವು ದಿನಗಳನ್ನು ಕಳೆದಿದ್ದರು. ಹಿಮಾಚಲದಲ್ಲಿ ತಮ್ಮ ಕುಟುಂಬದ ಜೊತೆಗೆ ಕಾಲಕಳೆಯುತ್ತಿದ್ದವರು ಮತ್ತೆ ಮುಂಬೈಗೆ ಮರಳಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    ಸಣ್ಣ ಪುಟ್ಟ ವಿಚಾರಗಳಿಗೆ ತಗಾದೆ ಎತ್ತುವ ಮೂಲಕವಾಗಿ ಸದಾ ಸುದ್ದಿಯಲ್ಲಿರುವ ಕಂಗನಾ ಅವರ ಈ ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಂಗನಾ ಟ್ವಿಟ್ಟರ್ ಖಾತೆ ನಿಷ್ಕ್ರಿಯಗೊಂಡ ಮೇಲೆ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

  • ಕುದುರೆ ಸವಾರಿ ಮಾಡಿಕೊಂಡೇ ಜನರ ಸಮಸ್ಯೆ ಆಲಿಸಿದ ಮೈಸೂರು ಮೇಯರ್

    ಕುದುರೆ ಸವಾರಿ ಮಾಡಿಕೊಂಡೇ ಜನರ ಸಮಸ್ಯೆ ಆಲಿಸಿದ ಮೈಸೂರು ಮೇಯರ್

    ಮೈಸೂರು: ನಗರದಲ್ಲಿ ಇಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಎಂ.ಜೆ ರವಿಕುಮಾರ್ ಕುದುರೆ ಸವಾರಿ ಮಾಡುತ್ತಾ ನಗರದ ಸಮಸ್ಯೆ ಆಲಿಸಿದರು.

    ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಮೇಯರ್ ಕುದುರೆ ಓಡಿಸುವ ತರಬೇತಿ ಪಡೆಯುತ್ತಿದ್ದಾರೆ. ಜಂಬೂಸವಾರಿ ಮೆರವಣಿಗೆಯಲ್ಲಿ ಮೇಯರ್ ಹಾಗೂ ಜಿ.ಪಂ ಅಧ್ಯಕ್ಷರು ಭಾಗವಹಿಸುವುದು ಸಂಪ್ರದಾಯವಾಗಿದೆ. ಇದಕ್ಕಾಗಿ ಮೇಯರ್ ಕುದುರೆ ಸವಾರಿ ತಾಲೀಮು ನಡೆಸುತ್ತಿದ್ದಾರೆ. ಹೀಗೆ ಕುದುರೆ ಸವಾರಿ ಮಾಡುತ್ತಾ ನಗರ ಪ್ರದಕ್ಷಿಣೆ ಕೂಡ ಮಾಡಿದರು.

    ಮೈಸೂರಿನ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಪರಿಶೀಲನೆ ನಡೆಸಿ ಫುಟ್‍ಪಾತ್ ತೆರವುಗೊಳಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದರು. ಕುದುರೆ ಮೇಲೆ ಕುಳಿತು ವಾಕಿ ಟಾಕಿಯಲ್ಲಿ ಅಧಿಕಾರಿಗಳಿಗೂ ಖಡಕ್ ಎಚ್ಚರಿಕೆ ನೀಡಿದರು. ಕಾರಿನಲ್ಲಿ ಓಡಾಡುತ್ತಾ ನಗರ ಪ್ರದಕ್ಷಿಣೆ ಮಾಡುತ್ತಿದ್ದ ಮೇಯರ್ ಹೀಗೆ ಕುದುರೆಯಲ್ಲಿ ಓಡಾಡುತ್ತಾ ಜನರ ಸಮಸ್ಯೆ ಆಲಿಸಿದ್ದನ್ನು ಜನರು ಕುತೂಹಲದಿಂದ ನೋಡುತ್ತಿದ್ದರು.