Tag: honour

  • ಸ್ವಾತಂತ್ರ‍್ಯ ಹೋರಾಟಗಾರರ ಮನೆಗಳಿಗೇ ತೆರಳಿ ಸನ್ಮಾನಿಸಲಿದ್ದಾರೆ ರಾಜ್ಯಪಾಲರು

    ಸ್ವಾತಂತ್ರ‍್ಯ ಹೋರಾಟಗಾರರ ಮನೆಗಳಿಗೇ ತೆರಳಿ ಸನ್ಮಾನಿಸಲಿದ್ದಾರೆ ರಾಜ್ಯಪಾಲರು

    ಬೆಂಗಳೂರು: ಭಾರತ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಗರದ ಇಬ್ಬರು ಸ್ವಾತಂತ್ರ‍್ಯ ಹೋರಾಟಗಾರರ ಮನೆಗಳಿಗೆ ತೆರಳಿ ಹಿರಿಯ ಚೇತನರನ್ನು ಸನ್ಮಾನಿಸಲಿದ್ದಾರೆ.

    ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಸಂಸ್ಮರಣಾ ದಿನವಾದ ಆಗಸ್ಟ್ 9 ರಂದು ಬೆಳಗ್ಗೆ 10:30 ಗಂಟೆಗೆ ನಗರದ ಮಲ್ಲೇಶ್ವರಂ ಬಡಾವಣೆಯಲ್ಲಿರುವ ವಿ. ನಾಗಭೂಷಣ ರಾವ್ ಅವರ ಮನೆಗೆ ತೆರಳಿ ರಾಜ್ಯಪಾಲರು ಸನ್ಮಾನಿಸಿ ಗೌರವ ಅರ್ಪಿಸಲಿದ್ದಾರೆ. ಇದನ್ನೂ ಓದಿ: ಹಿಂದಿಯನ್ನು ಕಿತ್ತೊಗೆದು, ಕನ್ನಡಿಗರ ಸ್ವಾಭಿಮಾನ ಉಳಿಸಿ : ಅಮಿತ್ ಶಾ ವಿರುದ್ಧ ಸಿದ್ದು ಕಿಡಿ

    ಅದೇ ದಿನ ಬೆಳಗ್ಗೆ 11-00 ಗಂಟೆಗೆ ಹಲಸೂರು ಬಡಾವಣೆಯಲ್ಲಿರುವ ಆರ್. ನಾರಾಯಣಪ್ಪ ಅವರ ಮನೆಗೆ ತೆರಳಿ ಸನ್ಮಾನಿಸಲಿದ್ದಾರೆ. ಇದನ್ನೂ ಓದಿ: ತ್ಯಾಗ, ಬಲಿದಾನಗಳ ಸ್ಮರಣೆಯೇ ಅಮೃತ ಮಹೋತ್ಸವ: ಅಶ್ವಥ್‍ನಾರಾಯಣ

    ಸ್ವಾತಂತ್ರ‍್ಯಕ್ಕೆ ಶ್ರಮಿಸಿದ ಇನ್ನುಳಿದ ಸ್ವಾತಂತ್ರ‍್ಯ ಹೋರಾಟಗಾರರನ್ನು ಅವರ ಮನೆಗಳಿಗೇ ತೆರಳಿ ಜಿಲ್ಲಾಡಳಿತದ ಮೂಲಕ ಅವರ ಮನೆಗಳಲ್ಲೇ ಸನ್ಮಾನಿಸಲು ಕ್ರಮ ವಹಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ರಾಜ್ಯಪಾಲರು ಸೂಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಕ್ ಕತ್ತರಿಸಿ ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ ಕೋರಿದ ಯಲವಿಗಿ ಜನತೆ

    ಕೇಕ್ ಕತ್ತರಿಸಿ ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ ಕೋರಿದ ಯಲವಿಗಿ ಜನತೆ

    ಹಾವೇರಿ: ಸುಮಾರು ಇಪ್ಪತ್ತು ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮಕ್ಕೆ ಆಗಮಿಸಿದ ವೀರಯೋಧ ನಾಗರಾಜ ನಾಗಪ್ಪನವರ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

    ನಾಗರಾಜ ನಾಗಪ್ಪನವರ್ ಅವರು ತಮ್ಮ 18 ವರ್ಷದ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ್ದು,ಬಳಿಕ ಮತ್ತೆ ಎರಡು ವರ್ಷ ಹೆಚ್ಚಿನ ಸೇವೆಯನ್ನು ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ಯಲವಿಗಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕೇಕ್ ಕತ್ತರಿಸಿ ನಿವೃತ್ತ ಯೋಧನಿಗೆ ವಿಶೇಷ ಗೌರವ ಸಲ್ಲಿಸಿದರು.

    ಇದೇ ವೇಳೆ ಮಾತನಾಡಿದ ವೀರಯೋಧ ನಾಗರಾಜ್, ದೇಶ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ. ಹೆತ್ತ ತಾಯಿಯ ಹಾಗೂ ಭೂಮಿತಾಯಿಯ ಋಣ ತೀರಿಸಲು ಸಿಕ್ಕಿರುವ ಅವಕಾಶವಾಗಿದ್ದು, ನಿಜಕ್ಕೂ ನನಗೆ ನನ್ನ ದೇಶ ಸೇವೆ ಖುಷಿ ತಂದಿದೆ ಎಂದರು.

    ಮುಖ್ಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ನಿವೃತ್ತಿ ನಂತರವೂ ಕಾರ್ಯನಿರ್ವಹಿಸಿದ್ದೇನೆ. ನಮ್ಮ ಊರಿನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಎಲ್ಲೆಡೆಯೂ ಯೋಧರಿಗೆ ಗೌರವ ಸಲ್ಲಿಸುತ್ತಾರೆ. ಇದರಿಂದ ಯೋಧನ ಸೇವೆಗೆ ಸಿಕ್ಕ ಒಂದು ಗೌರವವಾಗಿದೆ ಎಂದು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದರು.

  • ಅದ್ಧೂರಿಯಾಗಿ ಜರುಗಿತು ಸಗರನಾಡು ಉತ್ಸವ – ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಿಗೆ ಸನ್ಮಾನ

    ಅದ್ಧೂರಿಯಾಗಿ ಜರುಗಿತು ಸಗರನಾಡು ಉತ್ಸವ – ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಿಗೆ ಸನ್ಮಾನ

    ಯಾದಗಿರಿ: ಜಿಲ್ಲೆಯ ಶಹಾಪುರನಲ್ಲಿ ಸಗರನಾಡು ಉತ್ಸವ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಿತು.

    ಚರಬಸವೇಶ್ವರ ಸಂಗೀತ ಸೇವಾ ಸಮಿತಿ ವತಿಯಿಂದ ಶಹಾಪುರದ ಚರಬಸವೇಶ್ವರ ಮಂದಿರದ ಆವರಣದಲ್ಲಿ 22ನೇ ವರ್ಷದ ಸಗರನಾಡು ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗದಗನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪಂಚಾಕ್ಷರಿ ಕಲ್ಯಯ್ಯ ಅಜ್ಜನವರು ಕಾರ್ಯಕ್ರಮ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಕಲ್ಯಯ್ಯ ಅಜ್ಜನವರಿಗೆ ತುಲಾಬಾರ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಕಲ್ಲಯ್ಯ ಅಜ್ಜನವರು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು.

    ಈ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಿದವು. ಹಿರಿಯ ಕಲಾವಿದ ವೈಜ್ಯನಾಥ ಬಿರಾದರ, ಜ್ಯೂನಿಯರ್ ಸಾಧು ಕೋಕಿಲ, ಶಕ್ತಿಕುಮಾರ್, ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ದಸ್ತೆ ಕಾಮಿಡಿ ಝಲಕ್ ನೋಡುಗರಿಗೆ ಸಖತ್ ಮನರಂಜಿಸಿತು. ಬಸವರಾಜ್ ವರವಿ ನೃತ್ಯ ಕಾರ್ಯಕ್ರಮ ನೋಡುಗರಿಗೆ ಖುಷಿ ನೀಡಿತು.

    ಈ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ವಿವಿಧ ಕ್ಷೇತ್ರದ ಸೇವೆಗೈದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಒಟ್ಟಿನಲ್ಲಿ ಸಗರನಾಡು ಉತ್ಸವ ಸಗರನಾಡಿನಲ್ಲಿ ಅದ್ಧೂರಿಯಾಗಿ ಜರುಗಿತು.

  • ಸನ್ಮಾನ ಮಾಡಿ ಯೋಧರಿಗೆ ಯುವಕರಿಂದ ಬೀಳ್ಕೊಡುಗೆ

    ಸನ್ಮಾನ ಮಾಡಿ ಯೋಧರಿಗೆ ಯುವಕರಿಂದ ಬೀಳ್ಕೊಡುಗೆ

    ಬಾಗಲಕೋಟೆ: ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಇಂದು ಭಾರತೀಯ ಸೇನೆಯ ಯೋಧರು ತಮ್ಮ ತಮ್ಮ ಸ್ಥಳಕ್ಕೆ ಹಿಂತಿರುಗುತ್ತಿದ್ದಾರೆ. ಈ ವೇಳೆ ತೆರಳುತ್ತಿದ್ದ ಯೋಧರಿಗೆ ಜಮಖಂಡಿ ಯೋಧರು ಸನ್ಮಾನ ಮಾಡುವ ಮೂಲಕ ಬೀಳ್ಕೊಟ್ಟಿದ್ದಾರೆ.

    ಜಮಖಂಡಿ ಕನಕದಾಸ ಭವನದಲ್ಲಿ ಯುವಕರು ಮೇಜರ್ ವಿವೇಕ್ ಸೇರಿದಂತೆ ಎಲ್ಲ ಯೋಧರಿಗೆ ಸನ್ಮಾನ ಮಾಡಿದ್ದಾರೆ. ಅಲ್ಲದೆ ರಕ್ಷಣಾ ಕಾರ್ಯದ ಮೂಲಕ ಜನ ಜಾನುವಾರುಗಳ ಜೀವ ಉಳಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಯುವಕರು ‘ಹೌ ಇಸ್ ದ ಜೋಷ್’, ‘ಭಾರತ ಮಾತಾಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ. ಸದ್ಯ 50 ಜನ ಯೋಧರ ತಂಡ ಬೆಂಗಳೂರಿಗೆ ಆಗಮಿಸಲಿದೆ.

    ಮಂಗಳವಾರ ಚಿಕ್ಕಮಗಳೂರಿನ ಮೂಡಿಗೆರೆ ಗ್ರಾಮಸ್ಥರು ಜೀವ ಉಳಿಸಿದ ವೀರ ಯೋಧರಿಗೆ ಗ್ರಾಮಸ್ಥರು ರಾಖಿ ಕಟ್ಟುವ ಮೂಲಕ ಬೀಳ್ಕೊಡುಗೆ ಕೊಟ್ಟಿದ್ದರು. ಗ್ರಾಮಸ್ಥರು ನಿಮ್ಮಿಂದ ನಮ್ಮ ಜೀವ ಉಳಿದಿದೆ ಎಂದು ಕಣ್ಣೀರಿಟ್ಟು ಪ್ರತಿಯೊಬ್ಬ ಸೈನಿಕರಿಗೂ ರಾಖಿ ಕಟ್ಟಿದ್ದರು. ಈ ವೇಳೆ ಸೈನಿಕರು ತಂದಿದ್ದ ಹಣ್ಣು, ಬಿಸ್ಕೆಟ್‍ಗಳನ್ನು ಸಂತ್ರಸ್ತರಿಗೆ ಹಂಚಿದ್ದರು.

    ಯೋಧರ ರಕ್ಷಣಾ ಕಾರ್ಯಾಚರಣೆ ನೋಡಿ ನೂರಾರು ಜನರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದರು. ಅಲ್ಲದೆ ಇಂಡಿಯನ್ ಆರ್ಮಿ ಸದಾ ನಿಮ್ಮ ಜೊತೆ ಇರುತ್ತದೆ. ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ ಎಂದು ಭಾರತೀಯ ಸೇನೆ ತಿಳಿಸಿದೆ. ಗ್ರಾಮಸ್ಥರು ಕಣ್ಣೀರು ಹಾಕುತ್ತಲೇ ಯೋಧರಿಗೆ ಬೀಳ್ಕೊಡುಗೆ ಕೊಟ್ಟಿದ್ದಾರೆ.

  • ಗ್ರಾಮಸ್ಥರಿಂದ ವೀರ ಯೋಧರಿಗೆ ಆರತಿ ಬೆಳಗಿ ಗೌರವ ನಮನ

    ಗ್ರಾಮಸ್ಥರಿಂದ ವೀರ ಯೋಧರಿಗೆ ಆರತಿ ಬೆಳಗಿ ಗೌರವ ನಮನ

    ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಸೈನಿಕರ ಪರ ಮೊಳಗುವ ಜಯ ಘೋಷಗಳು, ದೇಶದ ಪರ ಮೆರೆಯುವ ಅಭಿಮಾನ ಸಹಜವಾಗಿ ನೋಡುತ್ತೇವೆ. ಆದರೆ ಇಲ್ಲಿ ಜನರು ಯೋಧರಿಗೆ ಆರತಿ ಬೆಳಗಿ ಗೌರವ ಸಲ್ಲಿಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ ಹೋಬಳಿ ಬಚ್ಚಹಳ್ಳಿ ಗ್ರಾಮಸ್ಥರು ಕಾರ್ಗಿಲ್ ಯುದ್ಧ ಸೇರಿದಂತೆ ದೇಶದ ಪರ ಹೋರಾಡಿದ ವೀರ ಯೋಧರನ್ನು ತಮ್ಮೂರಿಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅಲ್ಲದೆ ಸೈನಿಕರಿಗೆ ಹಾರ ಹಾಕಿ, ಮನೆ-ಮನೆಗೂ ಆರತಿ ಬೆಳಗಿ, ಹಣೆಗೆ ತಿಲಕ ಇಟ್ಟು, ತೆಂಗಿನಕಾಯಿಯಿಂದ ದೃಷ್ಟಿ ತೆಗೆದು ಚೂರುಗಾಯಿ ಹಾಕಿ ಗೌರವ ನಮನಗಳನ್ನು ಸಲ್ಲಿಸಿದ್ದರು. ಸೈನಿಕರ ದೇಶ ಸೇವೆ ಅನನ್ಯವಾಗಿದ್ದು, ಈ ರೀತಿಯ ಗೌರವಗಳು ಹಳ್ಳಿಹಳ್ಳಿಯಲ್ಲೂ ನಡೆದು ದೇಶಕಾಯಕದ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಆಗಬೇಕೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಚಿಕ್ಕನಂಚರ್ಲು ಗ್ರಾಮಸ್ಥರು ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ್ದನ್ನೇ ಮಾದರಿಯಾಗಿ ತೆಗೆದುಕೊಂಡ ಬಚ್ಚಹಳ್ಳಿ ಗ್ರಾಮಸ್ಥರು ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿ, ನಮಗೆ ನೀವಿದ್ದೀರಾ, ನಿಮಗೆ ನಾವೀದ್ದೀವಿ ಎಂದು ಸೈನಿಕರಿಗೆ ಗೌರವ ಸಲ್ಲಿಸಿದರು. ಗ್ರಾಮಸ್ಥರ ಆಪ್ಯಾಯಮಾನಕ್ಕೆ ಸೈನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಕೊಡಗಿನ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೂ ದೇಶ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಕೆಂದು ಯೋಧರು ಅಭಿಪ್ರಾಯ ವ್ಯಕ್ತಪಡಿಸಿದರು.

    ಸೇನೆಯಲ್ಲಿ ತಾವು ಸೇವೆ ಸಲ್ಲಿಸದಿದ್ದರೂ ಸೇವೆ ಮಾಡಿದವರಿಗೆ ಪುಟ್ಟ ಸನ್ಮಾನ ಮಾಡುವ ಮೂಲಕ ಬಚ್ಚಹಳ್ಳಿ ಗ್ರಾಮಸ್ಥರು ಧನ್ಯತಾಭಾವ ಮೆರೆದರು.

  • SSLC ಪರೀಕ್ಷೆಯಲ್ಲಿ 625 ಅಂಕ ಪಡೆದ ಸೃಜನಾಗೆ ಸನ್ಮಾನ

    SSLC ಪರೀಕ್ಷೆಯಲ್ಲಿ 625 ಅಂಕ ಪಡೆದ ಸೃಜನಾಗೆ ಸನ್ಮಾನ

    ಬೆಂಗಳೂರು: 2018 ಹಾಗೂ 2019 ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ್‍ಯಾಂಕ್  ಪಡೆಯುವ ಮೂಲಕ ಅತ್ಯುನ್ನತ ಸಾಧನೆ ಮಾಡಿರುವ ಸೃಜನಾ.ಡಿಗೆ ಸನ್ಮಾನ ಮಾಡಲಾಯಿತು.

    ಗುರುವಾರ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಶಿಕ್ಷಣಾಡಳಿತ ವತಿಯಿಂದ ಆನೇಕಲ್ ಬಿಇಓ ಕಚೇರಿಯಲ್ಲಿ ಈ ಸನ್ಮಾನ ಮಾಡಲಾಯಿರು. ತಾಲೂಕು ಶಿಕ್ಷಣಾಧಿಕಾರಿ ರಮೇಶ್, ತಾಲೂಕು ದಂಡಾಧಿಕಾರಿ ಮಹದೇವಯ್ಯ ಹಾಗು ತಾಲೂಕು ಪಂಚಾಯತ್ ಇಓ ಅವರ ನೇತೃತ್ವದಲ್ಲಿ ಸೃಜನಾ ಹಾಗು ಅವರ ಕುಟುಂಬಕ್ಕೆ ಸನ್ಮಾನ ಮಾಡಿದರು.

    ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಭಾಗಿಯಾಗಿ ಆನೇಕಲ್ ತಾಲೂಕಿಗೆ ತನ್ನ ಪರಿಶ್ರಮದಿಂದ ದೊಡ್ಡ ಹೆಸರು ತಂದು ಕೊಟ್ಟ ಸೃಜನಾಗೆ ಸಿಹಿ ತಿನ್ನಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ತಾಲೂಕು ಶಿಕ್ಷಣಾಧಿಕಾರಿ ರಮೇಶ್, ಸೃಜನಾಳ ಈ ಸಾಧನೆ ಆಕೆಯ ಪರಿಶ್ರಮ ತಂದೆ-ತಾಯಿಯ ಪ್ರೋತ್ಸಾಹ ಹಾಗೂ ಶಾಲೆಯ ಶಿಕ್ಷಕರ ಒಂದು ದೊಡ್ಡ ಮಾರ್ಗದರ್ಶನ ಈ ಅತ್ಯುನ್ನತ ಸಾಧನೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಆಕೆಯ ಮೇಲೆ ಸಾಕಷ್ಟು ನಿರೀಕ್ಷೆ ಹಾಗೂ ಜವಾಬ್ದಾರಿ ಇದೆ. ಆಕೆ ಡಾಕ್ಟರ್ ಆಗುವಂತಹ ಕನಸು ಹೊಂದಿದ್ದು, ಅವಳ ಕನಸು ನೆರವೇರಲಿ ಆಶೀರ್ವದಿಸಿದರು.

  • ಕೋಳಿಮರಿಯನ್ನು ರಕ್ಷಿಸಲು ಕೂಡಿಟ್ಟಿದ್ದ ಹಣವನ್ನು ಆಸ್ಪತ್ರೆಗೆ ತಂದ ಬಾಲಕನಿಗೆ ಪ್ರಶಸ್ತಿ

    ಕೋಳಿಮರಿಯನ್ನು ರಕ್ಷಿಸಲು ಕೂಡಿಟ್ಟಿದ್ದ ಹಣವನ್ನು ಆಸ್ಪತ್ರೆಗೆ ತಂದ ಬಾಲಕನಿಗೆ ಪ್ರಶಸ್ತಿ

    ಐಜ್ವಾಲ್: ಆಟವಾಡುವಾಗ ಕೋಳಿ ಮರಿ ಮೇಲೆ ಸೈಕಲ್ ಹರಿಸಿ ಬಳಿಕ ತನ್ನೊಂದಿಗೆ ಇದ್ದ ಹಣವನ್ನು ಆಸ್ಪತ್ರೆಗೆ ತೆಗೆದುಕೊಂಡು ಅದನ್ನು ರಕ್ಷಿಸಲು ಪ್ರಯತ್ನಪಟ್ಟ ಬಾಲಕನಿಗೆ ಶಾಲೆ ಮೆಚ್ಚುಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

    6 ವರ್ಷದ ಡೆರೆಕ್ ಸಿ ಲಾಲ್ಚಾನ್ಹಿಮಾ ಬಾಲಕನ ಕಾರ್ಯ ನೋಡಿ ಶಾಲಾ ಸಿಬ್ಬಂದಿ ಆತನಿಗೆ ಸನ್ಮಾನ ಮಾಡಿದ್ದಾರೆ. ಶಾಲಾ ಸಿಬ್ಬಂದಿ ಅವರು ಡೆರೆಕ್‍ಗೆ ಶಾಲು ಹೊದಿಸಿದ್ದಾರೆ. ಮಿಜೋರಾಂನಲ್ಲಿ ಈ ಹಿಂದೆ ಈ ರೀತಿಯ ಶಾಲುಗಳನ್ನು ಯೋಧರಿಗೆ ಅಥವಾ ಮುಖ್ಯ ಅತಿಥಿಗಳಿಗೆ ಹಾಕಿ ಸನ್ಮಾನಿಸುತ್ತಿದ್ದರು. ಈಗ ಬಾಲಕನ ಶೌರ್ಯವನ್ನು ಮೆಚ್ಚಿದ ಶಾಲಾ ಸಿಬ್ಬಂದಿ ಈ ಶಾಲನ್ನು ಬಾಲಕನಿಗೆ ಹಾಕಿ ಸನ್ಮಾನಿಸಿದ್ದಾರೆ.

    ಬಾಲಕನಿಗೆ ಶಾಲು ಹೊದಿಸಿ ಕೈಯಲ್ಲಿ ಪ್ರಶಸ್ತಿ ಹಿಡಿದುಕೊಂಡು ನಿಂತಿರುವ ಫೋಟೋವನ್ನು ಸಂಗಾ ಎನ್ನುವವರು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಬಾಲಕ ಕೋಳಿ ಮರಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಫೋಟೋವನ್ನು ಕೂಡ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು.  ಇದನ್ನೂ ಓದಿ: ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ನಡೆದಿದ್ದೇನು?
    ಆಟವಾಡುವ ವೇಳೆ ಬಾಲಕ ತುಳಿಯುತ್ತಿದ್ದ ಸೈಕಲ್ ಕೋಳಿ ಮರಿ ಮೇಲೆ ಹರಿದಿದ್ದು, ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿತ್ತು. ಕೂಡಲೇ ತನ್ನಿಂದಲೇ ಕೋಳಿ ಮರಿ ಸಾವನ್ನಪ್ಪಿದೆ ಎಂದು ತಿಳಿಸಿದ ಬಾಲಕ ತಾನು ಕೂಡಿಟ್ಟಿದ್ದ ಹಣದೊಂದಿಗೆ ಕೋಳಿ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತೆರಳಿದ್ದನು. ಆಸ್ಪತ್ರೆಗೆ ತೆರಳಿದ ಬಾಲಕ ವೈದ್ಯರಿಗೆ ತಾನು ತಂದಿದ್ದ ಹಣವನ್ನು ನೀಡಿ ಕೋಳಿ ಮರಿಗೆ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾನೆ. ಬಾಲಕನ ಈ ಫೋಟೋದೊಂದಿಗೆ ಆತನ ವಿವರಗಳನ್ನು `ಸಂಗಾ’ ಹೆಸರಿನ ವ್ಯಕ್ತಿಯೊಬ್ಬರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಫೋಟೋ ವೈರಲ್ ಆಗಿತ್ತು.

  • ಮೋದಿ ಅವಧಿಯಲ್ಲಿ ಆದಾಯ ಹೆಚ್ಚಾಗಿದೆಯೆಂದು ಹೇಳಿದ್ರೆ ಸನ್ಮಾನ- ಪ್ರಮೋದ್

    ಮೋದಿ ಅವಧಿಯಲ್ಲಿ ಆದಾಯ ಹೆಚ್ಚಾಗಿದೆಯೆಂದು ಹೇಳಿದ್ರೆ ಸನ್ಮಾನ- ಪ್ರಮೋದ್

    ಚಿಕ್ಕಮಗಳೂರು: ಕಳೆದ ಐದು ವರ್ಷದ ಅವಧಿಯಲ್ಲಿ ನನ್ನ ಆದಾಯ ಹೆಚ್ಚಾಗಿದೆ ಎಂದು ಯಾರಾದರೂ ಒಬ್ಬರು ಹೇಳಿದ್ರು ಸಾಕು. ನಾನು ಅವರಿಗೆ ಸನ್ಮಾನ ಮಾಡುತ್ತೇನೆಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರೋಕ್ಷವಾಗಿ ಮೋದಿಗಿಂತ ಮನಮೋಹನ್ ಸಿಂಗ್ ಗ್ರೇಟ್ ಎಂದು ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಮೋದಿ ಅಧಿಕಾರದ ಅವಧಿಯಲ್ಲಿ ನನ್ನ ಆದಾಯ ಹೆಚ್ಚಾಗಿದೆ. ಹೀಗಂತ ಒಬ್ಬೇ ಒಬ್ಬರು ಬಂದು ನನ್ನ ಬಳಿ ಹೇಳಲಿ. ನಾನು ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ಸಭೆಗಳಿಗೆ ಹೋಗಿ ಕೇಳುತ್ತಿದ್ದೇನೆ. ಆದರೆ ಇಲ್ಲಿವರೆಗೂ ಯಾರೊಬ್ಬರು ನನ್ನ ಸನ್ಮಾನ ಸ್ವೀಕರಿಸಲು ಮುಂದೆ ಬಂದಿಲ್ಲ ಎಂದು ಹೇಳಿದ್ರು.

    ನೋಟ್ ಬ್ಯಾನ್ ಹಾಗೂ ಜಿಎಸ್‍ಟಿಯಿಂದ ಆರ್ಥಿಕತೆ ಸಂಪೂರ್ಣ ಕುಸಿದಿದೆ. ನಾನು ಸಭೆಗಳಿಗೆ ಹೋಗಿ ಕೇಳುತ್ತಿದ್ದೇನೆ. ಮನಮೋಹನ್ ಸಿಂಗ್ ಕಾಲದಲ್ಲಿ ಇದ್ದ ನಿಮ್ಮ ಆರ್ಥಿಕ ಸ್ಥಿತಿಗೂ ಮೋದಿ ಕಾಲದ ನಿಮ್ಮ ಆರ್ಥಿಕ ಸ್ಥಿತಿಗೂ ಏನಾದರೂ ವ್ಯತ್ಯಾಸವಿದ್ಯಾ, ಆರ್ಥಿಕ ಸ್ಥಿತಿ ಹೆಚ್ಚಾಗಿದ್ಯಾ, ಕಡಿಮೆಯಾಗಿದ್ಯಾ ಅಥವಾ ಯಥಾ ಸ್ಥಿತಿ ಇದ್ಯಾ ಎಂದು ಪ್ರಶ್ನಿಸುತ್ತಿದ್ದೇನೆ ಅಂದ್ರು.

    ನಾನು ಆ ರೀತಿ ಕೇಳುವಾಗ ಎಲ್ಲಾ ಕಡೆ ಜನರು ಆರ್ಥಿಕವಾಗಿ ನಾವು ಸೋತಿದ್ದೇವೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ, ಯಾರಾದರೂ ನನ್ನ ಆದಾಯ ಹೆಚ್ಚಾಗಿದೆ ಎಂದು ಬಂದರೆ ನಾನು ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.

  • ರಸ್ತೆ ಸರಿಯಿಲ್ಲದ್ದಕ್ಕೆ ಮಂಚದಲ್ಲೇ ಮಹಿಳೆಯನ್ನು ಹೊತ್ತೊಯ್ದ ಐವರು ಪೊಲೀಸರಿಗೆ ಸನ್ಮಾನ

    ರಸ್ತೆ ಸರಿಯಿಲ್ಲದ್ದಕ್ಕೆ ಮಂಚದಲ್ಲೇ ಮಹಿಳೆಯನ್ನು ಹೊತ್ತೊಯ್ದ ಐವರು ಪೊಲೀಸರಿಗೆ ಸನ್ಮಾನ

    ಲಕ್ನೋ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಮಂಚದಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಉತ್ತರ ಪ್ರದೇಶದ ಐವರು ಪೊಲೀಸರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಗಿದೆ.

    ಬಾಂದ ಜಿಲ್ಲೆಯಲ್ಲಿ ಸೋಮವಾರ ಯಶೋಧ(48) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು 500 ಮೀಟರ್ ಅಂದರೆ ಅರ್ಧ ಕಿ.ಮೀವರೆಗೂ ಮಂಚದಲ್ಲೇ ಹೊತ್ತುಕೊಂಡು ಸಾಗಿದ್ದಾರೆ. ಪೊಲೀಸರು ಯಶೋಧ ಅವರನ್ನು ಮಂಚದಲ್ಲಿ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಯಶೋಧ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಐವರು ಪೊಲೀಸರು 500 ಮೀ. ಯಶೋಧ ಅವರನ್ನು ಮಂಚದಲ್ಲಿ ಹೊತ್ತುಕೊಂಡು ನಂತರ ಪಿಆರ್‌ವಿ(ಪೊಲೀಸ್ ರೆಸ್ಪಾನ್ಸ್ ವೆಹಿಕಲ್) ವಾಹನದ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐವರು ಪೊಲೀಸರಲ್ಲಿ ಇಬ್ಬರು ನರೈನಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಉಳಿದ ಮೂವರು ಪೊಲೀಸರು ಡಯಲ್ 100ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

    ಭಾನುವಾರ ಯಶೋಧ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವಿಷಯ ನಮಗೆ ತಿಳಿಯಿತು. ಆಗ ನಾವು ಸಂತೋಷ್ ಕುಮಾರ್ ಹಾಗೂ ರೋಹಿತ್ ಯಾದವ್‍ನನ್ನು ಬಲ್ದು ಗ್ರಾಮಕ್ಕೆ ಮಾಹಿತಿ ಸಂಗ್ರಹಿಸಲು ಕಳುಹಿಸಿದ್ದೇವು. ಇದೇ ವೇಳೆ ಪಿಆರ್‌ವಿ ವಾಹನ ಕೂಡ ಘಟನೆಯ ಸ್ಥಳಕ್ಕೆ ತಲುಪಿದ್ದು, ಮೂವರು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರು. ಆ ಗ್ರಾಮಕ್ಕೆ ತಲುಪಿದಾಗ ಮಹಿಳೆಯ ಮನೆಗೆ ವಾಹನದಲ್ಲಿ ಹೋಗಲು ಸಾಧ್ಯವಿಲ್ಲ ಎನ್ನುವುದು ತಿಳಿಯಿತು. ಹೀಗಾಗಿ ಮಹಿಳೆಯನ್ನು ಮಂಚದಲ್ಲಿ ಪಿಆರ್‌ವಿ ವಾಹನವರೆಗೂ ತನ್ನ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಎಸ್‍ಎಚ್‍ಒ ಅಧಿಕಾರಿ ಪ್ರಕಾಶ್ ಸರೋಜ್ ತಿಳಿಸಿದ್ದಾರೆ.

    ಈ ಘಟನೆ ಬಗ್ಗೆ ತನಿಖೆ ಮಾಡಿದಾಗ ಹಣದ ವಿಚಾರವಾಗಿ ಯಶೋಧ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿಯಿತು. ಆದರೆ ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿಲ್ಲ. ನಾವು ಮಹಿಳೆಯ ಮನೆ ತಲುಪುವವರೆಗೂ ಅಲ್ಲಿದ್ದ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದರು. ಮಹಿಳೆಯ ಮನೆಯ ಜಾಗ ಹುಡುಕಲು ತುಂಬಾ ಕಷ್ಟವಾಯಿತು. ಮಹಿಳೆಯ ಮನೆಗೆ ಯಾವುದೇ ವಾಹನದಲ್ಲಿ ಹೋಗಲು ಸಾಧ್ಯವಿರಲಿಲ್ಲ. ಹಾಗಾಗಿ ಪಿಆರ್‌ವಿ ವಾಹನವನ್ನು ಮುಖ್ಯರಸ್ತೆಯಲ್ಲೇ ಪಾರ್ಕ್ ಮಾಡಿದ್ದೇವು. ಮುಖ್ಯರಸ್ತೆಯಿಂದ ಮಹಿಳೆಯ ಮನೆಗೆ ಅರ್ಧ ಕಿ.ಮೀ ದೂರವಿತ್ತು. ಹಾಗಾಗಿ ಮಹಿಳೆಯನ್ನು ಮಂಚದ ಮೇಲೆ ಮಲಗಿಸಿ ಹೊತ್ತುಕೊಂಡು ಹೋಗಲು ನಿರ್ಧರಿಸಿದ್ದೇವು ಎಂದು ಪ್ರಕಾಶ್ ಸರೋಜ್ ಹೇಳಿದ್ದಾರೆ.

    ಈ ಪ್ರಕರಣದಲ್ಲಿ ಪೊಲೀಸರ ಕರ್ತವ್ಯನಿಷ್ಠೆಯನ್ನು ತೋರಿಸುತ್ತದೆ. ಮಹಿಳೆಗೆ ಚಿಕಿತ್ಸೆಯ ಅವಶ್ಯಕತೆಯಿತ್ತು. ಪೊಲೀಸರ ಸಮಯಪ್ರಜ್ಞೆದಿಂದ ಮಹಿಳೆಗೆ ಚಿಕಿತ್ಸೆ ದೊರೆಯಿತು ಹಾಗೂ ಅವರ ಪ್ರಾಣ ಉಳಿಯಿತು. ನಾನು ಐವರು ಪೊಲೀಸರನ್ನು ಅವರ ಈ ಒಳ್ಳೆಯ ಕೆಲಸಕ್ಕಾಗಿ ಸನ್ಮಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸನ್ಮಾನ ಹೊರತಾಗಿ ಅವರಿಗೆ ನಗದು ನೀಡುತ್ತೇವೆ ಎಂದು ಬಾಂದ ಜಿಲ್ಲೆಯ ಎಸ್‍ಪಿ ತಿಳಿಸಿದ್ದಾರೆ.

    https://twitter.com/PoliceSewakHai/status/1069318818542034952

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ರಕ್ತದ ಕಣ ಕಣದಲ್ಲಿ ಅಭಿಮಾನಿಗಳ ಬೆವರಿನ ಕಣವಿದೆ, ಅದಕ್ಕಾಗಿ ನನಗೆ ಒಳ್ಳೆತನ ಬಂದಿದೆ – ಅಂಬರೀಶ್

    ನನ್ನ ರಕ್ತದ ಕಣ ಕಣದಲ್ಲಿ ಅಭಿಮಾನಿಗಳ ಬೆವರಿನ ಕಣವಿದೆ, ಅದಕ್ಕಾಗಿ ನನಗೆ ಒಳ್ಳೆತನ ಬಂದಿದೆ – ಅಂಬರೀಶ್

    ಗದಗ: ರೆಬೆಲ್ ಸ್ಟಾರ್ ಅಂಬಿಗೆ 60ನೇ ವಸಂತದ ಸಂದರ್ಭದಲ್ಲಿ ಗದಗ ನಗರಕ್ಕೆ ಆಗಮಿಸಿದ್ದರು. ದಿಗ್ಗಜನಿಗೆ ಅದ್ಭುತ ಸ್ವಾಗತ ಕೋರಿ ಗಂಡ-ಬೇರುಂಡ ಲಾಂಚನವಿರುವ ಚಿನ್ನದ ಸರವನ್ನು ಹಾಕಿ `ಕಲಾಭೂಷಣ’ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

    2012ರ ಸೆಪ್ಟೆಂಬರ್ 20ರಂದು ಬಜಾರ್ ಭೀಮನಿಗೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ ಹಾಗೂ ಅಂಬಿ ಅಭಿಮಾನಿ ಬಳಗದಿಂದ ಅದ್ಭುತ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ `ಅಂಬಿ-ಅಭಿನಂದನೆ-ಅಭಿವಂದನೆ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

    ಈ ಕನ್ವರ್ ಲಾಲ್‍ನ ಕಾರ್ಯಕ್ರಮ ಕಣ್ಣು ತುಂಬಿಕೊಳ್ಳಲು ಚಲನಚಿತ್ರದ ಗಣ್ಯಾತಿ ಗಣ್ಯರನ್ನು ಕರೆತರಲಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ಅಂಬರೀಶ್, ಸಂಕಷ್ಟಗಳ ಮಧ್ಯೆಯೂ ಉತ್ತರ ಕರ್ನಾಟಕದ ಜನತೆ ಈ ನಟನಿಗೆ ತೋರಿದ ಪ್ರೀತಿ, ಗೌರವವನ್ನು ಎಷ್ಟು ಹಣ ಕೊಟ್ಟರೂ ಈ ವಿಶ್ವಾಸ ಗಳಿಸಲಾಗುವುದಿಲ್ಲ. ನನ್ನ ರಕ್ತದ ಕಣ ಕಣದಲ್ಲಿ ಅಭಿಮಾನಿಗಳ ಬೆವರಿನ ಕಣವಿದೆ. ಅದಕ್ಕಾಗಿ ನನಗೆ ಒಳ್ಳೆತನ ಬಂದಿದೆ ಎಂದರು.

    ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಇವರನ್ನು ಮೆರವಣಿಗೆ ಮಾಡಲಾಗಿತ್ತು. ಅಭಿಮಾನಿಗಳು ನೀಡುವ ಪ್ರೀತಿಯ ಮುಂದೆ ಯಾವ ಪ್ರಶಸ್ತಿ ದೊಡ್ಡದಲ್ಲ. ನನಗೆ ಅಧಿಕಾರದ, ಹಣದ ದಾಹವಿಲ್ಲ. ಇನ್ನು 60 ಆಗದಂತೆ ಕಾಣುವ ಈ ದೇಹ, 15 ಜನ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ, ಪ್ರಧಾನಿಗಳ ಜೊತೆ ಕುಳಿತವನು ಸಾಕಷ್ಟು ಅನುಭವವಿದೆ ಎಂದು ಅಂಬರೀಶ್ ನಮ್ರವಾಗಿ ನುಡಿದರು. ನಾನು ಪಿಯುಸಿ ಫೇಲಾಗಿದ್ದೇನೆ. ಆದರೆ ನನಗೆ ವಿದ್ಯೆ, ಛಲವಿದೆ ಎಂಬ ಅಂಬಿ ಹೇಳಿಕೆ ನೆರೆದವರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ಮೂಡಿಸಿತು.

    ಅಂದಿನ ಆ ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್. ನಾರಾಯಣ ಕುಚಿಕು ಗೆಳೆಯನಿಗೆ ಜೈಕಾರ ಕೂಗಿದರು. 40 ವರ್ಷ ಚಿತ್ರರಂಗದಲ್ಲಿ ಸೇವೆ ಮಾಡಿರುವ ಅಂಬರೀಶ್ ಅವರನ್ನು ಯಾವ ವಿಶ್ವವಿದ್ಯಾಲಯ ಕೂಡ ಗುರುತಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು.

    ನಂತರ ಮಾತನಾಡಿದ ಚಿತ್ರನಟಿ ಸುಮಲತಾ, ಉತ್ತರ ಕರ್ನಾಟಕದ ಜನತೆ ತೋರಿದ ಪ್ರೀತಿ ಅನನ್ಯ. ಇದರ ಮುಂದೆ ಅಂಬರೀಶ್ ಅವರಿಗೆ ಸರ್ಕಾರದ ಯಾವ ಪ್ರಶಸ್ತಿ ದೊಡ್ಡದಲ್ಲ. ಅಂತಹದ್ದರ ಬಗ್ಗೆ ಬೇಸರ ಮಾಡಿಕೊಂಡವರು ಅಂಬರೀಶ್ ಅಲ್ಲ ಎಂದರು.

    1983 ರಿಂದ ಗದಗನಲ್ಲಿ ಅನಿಲ್ ಗರಗ ಎಂಬವರು ಅಂಬರೀಶ್ ಅಭಿಮಾನಿ ಬಳಗ ಕಟ್ಟಿಕೊಂಡಿದ್ದಾರೆ. ಅಂಬರೀಶ್ ಅವರ ಅಗಲಿಕೆಯಿಂದ ಆ ಅಭಿಮಾನಿ ಬಳಗ ಕಣ್ಣಿರಿಟ್ಟಿತು. 2012ರ ವೇಳೆ ಕಲಿಯುಗದ ಕರ್ಣ, ಇಂದ್ರಜಿತ್ ಕಾರ್ಯಕ್ರಮಕ್ಕೆ ಸಹಸ್ರಾರು ಅಭಿಮಾನಿಗಳು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv