Tag: Home Theft

  • ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಮೆಕ್ಯಾನಿಕ್ ಅರೆಸ್ಟ್

    ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಮೆಕ್ಯಾನಿಕ್ ಅರೆಸ್ಟ್

    ಬೆಂಗಳೂರು: ಓದಿದ್ದು 7ನೇ ತರಗತಿ ಆದರೆ ಮನೆ ದೋಚುವುದರಲ್ಲಿ ನಂಬರ್ 1 ಕಳ್ಳನಾಗಿದ್ದ ಗ್ಯಾರೇಜ್ ಮೆಕ್ಯಾನಿಕ್‍ನೊಬ್ಬನನ್ನು ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ.

    ಮುರುಳಿ ಬಂಧಿತ ಆರೋಪಿ. ಆರೋಪಿಯು ವರ್ಷಕ್ಕೆ ಒಂದೇ ಕಳ್ಳತನ, ಮಾಡುತ್ತಿದ್ದನು. ಉಳಿದ ಸಮಯ ಗ್ಯಾರೇಜ್‍ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ವರ್ಷಕ್ಕೆ ಒಂದರಂತೆ 13 ವರ್ಷದಲ್ಲಿ ಈತ 13 ಕಳ್ಳತನಗಳನ್ನು ಮಾಡಿದ್ದಾನೆ. 2009ರಲ್ಲಿ ಕಳ್ಳತನ ಶುರು ಮಾಡಿದ್ದವನು ಕೊನೆಗೆ 2022ರಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನು ತುಂಬಾ ಅಚ್ಚುಕಟ್ಟಾಗಿ ಯೋಜನೆ ಹಾಕಿಕೊಂಡು ಕಳ್ಳತನ ಮಾಡುತ್ತಿದ್ದನು. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್‌

    ಪ್ರತಿನಿತ್ಯ ಯಾರೂ ಶಾಲೆಗೆ ಮಕ್ಕಳನ್ನು ಬಿಡಲು ಹೋಗುತ್ತಾರೆ ಅವರ ಮನೆಗಳನ್ನೇ ಈತ ಗುರಿಯಾಗಿಸಿಕೊಳ್ಳುತ್ತಿದ್ದನು. ಶಾಲೆಗೆ ಹೋಗುವಾಗ ಮೊದಲು ಅವರನ್ನು ಹಿಂಬಾಲಿಸುತ್ತಿದ್ದನು. ಪೋಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದಕ್ಕೆ ಎಷ್ಟು ಸಮಯ ಹಿಡಿಯುತ್ತೆ ನೋಡಿಕೊಂಡು ಉಪಾಯ ಮಾಡುತ್ತಿದ್ದನು. 1 ಮನೆ ಕಳ್ಳತನ ಮಾಡಲು ಸುಮಾರು 1 ತಿಂಗಳು ಉಪಾಯ ಮಾಡುತ್ತಿದ್ದನು. ಇದನ್ನೂ ಓದಿ:  ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

    ನಂತರ ಆ ಮನೆಯ ಡೋರ್ ಕೀ ಮಾದರಿಯ ನಾಲ್ಕೈದು ನಕಲಿ ಕೀ ತಯಾರು ಮಾಡಿಸುತ್ತಿದ್ದನು. ನಂತರ ಪೊಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದರ ಒಳಗೆ ಮನೆ ದೋಚುತ್ತಿದ್ದನು. ಮುರುಳಿ ಒಂದು ಬಾರಿ ಕಳ್ಳತನ ಮಾಡಿದರೆ ಮತ್ತೆ ವರ್ಷವಿಡಿ ಕಳ್ಳತನದ ಸಹವಾಸಕ್ಕೆ ಹೋಗುತ್ತಿರಲಿಲ್ಲ.

    ಇಂತಹ ಚಾಲಾಕಿ ಕಳ್ಳನಿಂದ 3 ಠಾಣೆಯ ಪೊಲೀಸರು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಖಾಕಿ ಸಿನಿಮಾದ ರೀತಿಯಲ್ಲಿ ಫಿಂಗರ್ ಪ್ರಿಂಟ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 2009ರಲ್ಲಿ ಒಂದು ಮನೆ ಕಳ್ಳತನದ ಕೇಸ್ ಆಗಿತ್ತು. ಈ ವೇಳೆ ಪೊಲೀಸರು ವಿಚಾರಣೆಗಾಗಿ ಆ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳನ ಫಿಂಗರ್ ಪ್ರಿಂಟ್ ಶೇಖರಿಸಿದ್ದರು. ಜನವರಿ ತಿಂಗಳಿನ ಕೊನೆಯ ವಾರದ ಹಿಂದೆ ಆರ್ ಟಿ ನಗರ ಪೊಲೀಸರಿಗೆ ಸಿಕ್ಕಿ ಬಿದ್ದಾಗ ಈತನ ಫಿಂಗರ್ ಪ್ರಿಂಟ್ ಕಳ್ಳತನ ಕೇಸ್‍ನಲ್ಲಿ ಮ್ಯಾಚ್ ಆಗಿದೆ.

    ಆರೋಪಿಯನ್ನು ಪೊಲೀಸರು ಹೆಬ್ಬಾಳ ಕೇಸ್ ಬಗ್ಗೆ ವಿಚಾರಣೆ ಮಾಡುವಾಗ ಒಟ್ಟು 13 ಕಳ್ಳತನಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆರ್ ಟಿ ನಗರ, ಡಿಜೆಹಳ್ಳಿ, ಅಮೃತಹಳ್ಳಿ, ಹೆಬ್ಬಾಳ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಸದ್ಯ ಎಲ್ಲಾ ಪ್ರಕರಣಗಳಿಂದ ಒಟ್ಟು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸದ್ಯ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಅವನನ್ನು ಪಡೆದಿದ್ದು, ಮತ್ತಷ್ಟು ವಿಚಾರಣೆಗೆ ತಯಾರಾಗಿದ್ದಾರೆ.

  • ಖತರ್ನಾಕ್ ಕಳ್ಳರು ಅರೆಸ್ಟ್ – 96 ಗ್ರಾಂ ಚಿನ್ನಾಭರಣ, 128 ಗ್ರಾಂ ಬೆಳ್ಳಿ ವಶ

    ಖತರ್ನಾಕ್ ಕಳ್ಳರು ಅರೆಸ್ಟ್ – 96 ಗ್ರಾಂ ಚಿನ್ನಾಭರಣ, 128 ಗ್ರಾಂ ಬೆಳ್ಳಿ ವಶ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ಮನೆಯ ಬೀಗ ಮುರಿದು ಕಳವು ಮಾಡಿದ್ದ ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಸತೀಶ್ (32), ಕಿರಣ್ (23) ಚಂದ್ರಶೇಖರ್.ಕೆ (23) ಎಂದು ಗುರುತಿಸಲಾಗಿದೆ. ಬಂಧಿತರಿಂದ 3,64,800 ರೂ. ಮೌಲ್ಯದ 96 ಗ್ರಾಂ ಚಿನ್ನಾಭರಣ, 128 ಗ್ರಾಂ ತೂಕದ ಬೆಳ್ಳಿ, 1 ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಸ್ಪ್ಲೆಂಡರ್ ಬೈಕ್ ಹಾಗೂ ಮನೆ ಬೀಗ ಒಡೆಯಲು ಬಳಸಿದ್ದ 2 ಕಬ್ಬಿಣದ ರಾಡ್‍ನ್ನು ವಶಪಡಿಸಿಕೊಳ್ಳಲಾಗಿದೆ.

    ಆರೋಪಿಗಳು ಮೂರು ತಿಂಗಳ ಹಿಂದೆ ಬಿಳಿಗೇರಿ ಗ್ರಾಮದಲ್ಲಿ ಕೆಲಸದ ಸಲುವಾಗಿ ಮನೆಗೆ ಬೀಗ ಹಾಕಿ ತೆರಳಿದ್ದವರ ಮನೆಯ ಬೀಗ ಮುರಿದು ಚಿನ್ನಾಭರಣ ದೋಚಿದ್ದರು. ಈ ಸಂಬಂಧ 2 ಪ್ರಕರಣಗಳು ದಾಖಲಾಗಿದ್ದವು. ಸದರಿ ಪ್ರಕರಣವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಸೋಮವಾರಪೇಟೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು.

    ಈ ವಿಶೇಷ ತಂಡ ಸೋಮವಾರಪೇಟೆ ಪೊಲೀಸ್ ಅಧೀಕ್ಷಕರು ಹಾಗೂ ಉಪಾಧೀಕ್ಷಕರ ಸೂಚನೆ ಮೆರೆಗೆ ಕಾರ್ಯಪ್ರವೃತ್ತರಾಗಿ ಮೊಬೈಲ್ ಟ್ರ್ಯಾಕ್ ಮಾಡುವ ಮೂಲಕ ಆರೋಪಿಗಳನ್ನು ಬಿಳಿಗೇರಿ ಹಾಗೂ ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ.

  • ಮಹಿಳೆಯರು ಸೀರಿಯಲ್ ನೋಡೋ ಟೈಂನಲ್ಲೇ ಕಳ್ಳತನ ಮಾಡ್ತಿದ್ದ ಕಳ್ಳ ಅಂದರ್

    ಮಹಿಳೆಯರು ಸೀರಿಯಲ್ ನೋಡೋ ಟೈಂನಲ್ಲೇ ಕಳ್ಳತನ ಮಾಡ್ತಿದ್ದ ಕಳ್ಳ ಅಂದರ್

    ಬೆಂಗಳೂರು: ಮಹಿಳೆಯರು ಬೆಳಗ್ಗೆ ಮರುಪ್ರಸಾರವಾಗುವ ಸೀರಿಯಲ್ ಗಳು ನೋಡುತ್ತಿರುವಾಗ ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚುತ್ತಿದ್ದ ಚಾಲಕಿ ಕಳ್ಳನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಉದಯ್ ನೀರ್ ಮಜ್ಜಿಗೆ ಅಲಿಯಾಸ್ ಉದಯ್ ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಸುಮಾರು ಅರ್ಧ ಕೆ.ಜಿ. ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಉದಯ್ ಆರಂಭದಿಂದಲೂ ಮನೆ ಕಳ್ಳತನ, ದರೋಡೆ, ರಾಬರಿ ಮಾಡಿ 8 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಂಟು ವರ್ಷ ಇದ್ದು, ಸನ್ನಡತೆಯ ಆಧಾರದ ಮೇಲೆ ಮೂರು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಮನೆಗೆ ಆಗಮಿಸಿದ್ದ.

    ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಉದಯ್ ಜೈಲಿಂದ ಬಂದ ಬಳಿಕವೂ ಕಳ್ಳತನ ಮಾಡುವುದನ್ನು ಮುಂದುವರಿಸಿದ್ದ. ಕಳೆದ ಎರಡುವರೆ ತಿಂಗಳಲ್ಲಿ ನಗರದ ಬಹುತೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಉದಯ್ ಕೈಚಳಕ ತೋರಿಸಿದ್ದ. ಸಿಸಿಟಿವಿ ದೃಶ್ಯ ಆಧರಿಸಿ ನಗರದ ಬಹುತೇಕ ಪೊಲೀಸ್ ಠಾಣಾ ಪೊಲೀಸರು ಆರೋಪಿ ಉದಯ್ ನನ್ನು ಬಂಧಿಸಲು ಮುಂದಾಗಿದ್ದರು. ಆದರೆ ಪೊಲೀಸರ ಕೈಗೆ ಸಿಕ್ಕಿ ಬಿಳಬಾರದು ಎಂದು ಮೊಬೈಲ್ ಫೋನ್ ಕೂಡ ಬಳಸುತ್ತಿರಲಿಲ್ಲ.

    ಉದಯ್ ಸಹಚರನೊಬ್ಬನ ಹಿಂದೆ ಬಿದಿದ್ದ ಪೊಲೀಸರು ಕಳ್ಳರ ಪ್ಲಾನ್ ಬಗ್ಗೆ ಮಾಹಿತಿ ಪಡೆದಿದ್ದರು. ಆರೋಪಿ ರಾತ್ರಿ ಸಮಯದಲ್ಲಿ ಕಳ್ಳತನ ಮಾಡುವ ಬಗ್ಗೆ ಸ್ಕೆಚ್ ರೂಪಿಸುತ್ತಿದ್ದ. ಬೆಳಗ್ಗಿನ ಸಮಯ 10 ಗಂಟೆಯಿಂದ 12 ಗಂಟೆ ಸಮಯದಲ್ಲಿ ಆರೋಪಿ ಕಳ್ಳತನ ಮಾಡುತ್ತಿದ್ದ. ಕಾರಣ 10 ರಿಂದ 12 ಗಂಟೆ ಸಮಯದಲ್ಲಿ ಧಾರವಾಹಿಗಳು ಮರುಪ್ರಸಾರವಾಗುವ ಸಮಯ. ರಾತ್ರಿ ಸಮಯದಲ್ಲಿ ವಿವಿಧ ಕಾರಣಗಳಿಂದ ಧಾರಾವಾಹಿ ನೋಡಲು ಆಗದೇ ಇರುವ ಮಹಿಳೆಯರು ಧಾರಾವಾಹಿ ನೋಡುವಲ್ಲಿ ಮಗ್ನರಾಗಿತ್ತಾರೆ. ಆ ಸಮಯವನ್ನೇ ಉಪಯೋಗ ಮಾಡಿಕೊಳ್ಳುತ್ತಿದ್ದ ಆರೋಪಿ ಮನೆಯ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ.

    ಕೇವಲ ಮೂರು ತಿಂಗಳ ಅವಧಿಯಲ್ಲಿ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಐದು ಕಡೆ ಸೇರಿದಂತೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಉದಯ್ ಕೈಚಳಕ ತೋರಿಸಿದ್ದ. ಜಾಲಹಳ್ಳಿ ಪೊಲೀಸರು ಅಂತಿಮವಾಗಿ ಆರೋಪಿಯ ಸಹಚರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉದಯ್ ಸಹಚರರಿಗೆ ತಮಿಳುನಾಡಿನ ಸೆಲಂನಿಂದ ಲ್ಯಾಂಡ್ ಲೈನ್‍ನಲ್ಲಿ ಕರೆ ಮಾಡಿದ್ದ ಮಾಹಿತಿ ಲಭಿಸಿತ್ತು. ನಂಬರ್ ಜಾಡಿ ಹಿಡಿದು ಹೋರಾಟ ಪೊಲೀಸರು ತಮಿಳುನಾಡಿನ ಸೇಲಂ ಲಾಡ್ಜ್ ನಲ್ಲಿ ಒಂದರಲ್ಲಿ ಆರೋಪಿಯನ್ನು ಬಂಧಿಸಿದ್ದರು. ಸದ್ಯ ಆರೋಪಿ ಜಾಲಹಳ್ಳಿ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಮನೆ ಕಳ್ಳನ ಬಂಧನ- ಬೆಳ್ಳಿ, ಬಂಗಾರ ಜಪ್ತಿ

    ಮನೆ ಕಳ್ಳನ ಬಂಧನ- ಬೆಳ್ಳಿ, ಬಂಗಾರ ಜಪ್ತಿ

    ಹುಬ್ಬಳ್ಳಿ: ಧಾರವಾಡ-ಹುಬ್ಬಳ್ಳಿ ಅವಳಿ ನಗರದ ವಿವಿಧೆಡೆ ಮನೆಗಳ ಕಳ್ಳತನ ಮಾಡಿದ ಕಳ್ಳನನ್ನು ಬಂಧಿಸುವಲ್ಲಿ ಎಂಪಿಎಂಸಿ ಪೊಲೀಸರು ಯಶ್ವಸಿಯಾಗಿದ್ದಾರೆ.

    ಕೃಷ್ಣ್ ಲಚ್ಚಪ್ಪ ಲಮಾಣಿ ಬಂಧಿತ ಆರೋಪಿ. ಬಂಧಿತ ಮನೆಗಳ್ಳನಿಂದ 75 ಸಾವಿರ ರೂ. ಮೌಲ್ಯದ ಬೆಳ್ಳಿ ಬಂಗಾರವನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿಯ ನವನಗರದ ಪಂಚಾಕ್ಷರಿ ನಗರ ಹಾಗೂ ಶಿವಾನಂದನಗರದಲ್ಲಿ ಆದ ಮನೆಗಳ್ಳತನ ಮಾಡಿದ ಆರೋಪಿಯಿಂದ 75 ಸಾವಿರ ಮೌಲ್ಯದ ಬೆಳ್ಳಿ ಬಂಗಾರದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಕಳೆದ ಹಲವಾರು ತಿಂಗಳುಗಳಿಂದ ಮನೆಗಳ್ಳತನ ಮಾಡಿ ಪೊಲೀಸರಿಗೆ ಕೈಗೆ ಸಿಗದೇ ಪರಾರಿಯಾಗುತ್ತಿದ್ದ ಆರೋಪಿಯನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಹೀಗಾಗಿ ಎಂಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನ ಹಾಗೂ ಠಾಣೆಯ ಸಿಬ್ಬಂದಿ ಕಾರ್ಯವೈಖರಿ ಮೆಚ್ಚಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.

  • ಅಂತರ್‌ರಾಜ್ಯ ಕಳ್ಳರ ಬಂಧನ – ಲಕ್ಷಾಂತರ ಮೌಲ್ಯದ ಬಂಗಾರ ವಶ

    ಅಂತರ್‌ರಾಜ್ಯ ಕಳ್ಳರ ಬಂಧನ – ಲಕ್ಷಾಂತರ ಮೌಲ್ಯದ ಬಂಗಾರ ವಶ

    ಕಾರವಾರ: ಕುಮಟ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕಣರದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.

    ಗೋಪಿ ಹಾಗೂ ಡೇವಿಡ್ ಫ್ರಾನ್ಸಿಸ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಲ್ಲಿ ಗೋಪಿ ಬೆಂಗಳೂರಿನ ಭುವನೇಶ್ವರ ನಗರದ ಮಾಗಡಿ ನಿವಾಸಿ ಎಂದು ತಿಳಿದು ಬಂದಿದ್ದು, ಇನ್ನೊಬ್ಬ ಆರೋಪಿ ಡೇವಿಡ್ ಫ್ರಾನ್ಸಿಸ್ ತಮಿಳುನಾಡು ಮೂಲದವನಾಗಿದ್ದಾನೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಗಜಾನನ ಗೌರಯ್ಯ ಅವರ ಕುಟುಂಬಸ್ಥರು ಜನವರಿ 01 ರಂದು ಸೌದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಮನೆಯಲ್ಲಿದ್ದ ಸುಮಾರು ಮೂರು ತೊಲೆ ಬಂಗಾರ ಹಾಗೂ ಒಂದಿಷ್ಟು ಹಣವನ್ನು ಕದ್ದು ಪರಾರಿಯಾಗಿದ್ದರು.

    ಈ ಬಗ್ಗೆ ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಕಾರ್ಯಾಚರಣೆಗೆ ಇಳಿದ ಕುಮಟ ಸಿಪಿಐ ಪರಮೇಶ್ವರ ಗುನಗಾ, ಪಿಎಸ್‍ಐ ಆನಂದ ಮೂರ್ತಿ ಅವರ ನೇತೃತ್ವದ ಪೊಲೀಸರ ತಂಡ ಪ್ರಕರಣ ನಡೆದ ಒಂದೇ ವಾರದಲ್ಲಿ ಕಳ್ಳತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ಕಳ್ಳತನ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು, ಈ ಹಿಂದೆ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನುವುದು  ತನಿಖೆ ವೇಳೆ ತಿಳಿದು ಬಂದಿದೆ.

    ಕುಮಟದಲ್ಲಿ ಕಳ್ಳತನ ಮಾಡುವ ಮುನ್ನ ಗೋವಾದಿಂದ ಬಂದಿರುವುದಾಗಿ ಹೇಳಲಾಗಿದ್ದು, ಕುಮಟಗೆ ಹೊರಡುವ ವೇಳೆ ಅಂಕೋಲಾದ ಕೇಬಲ್ ಆಫೀಸಿನ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು ಎಂದು ಪೊಲೀಸ್ ತನಿಖೆ ವೇಳೆ ಬಾಯಿ ಬಿಟ್ಟಿದ್ದಾರೆ. ಹೆಚ್ಚಿನ ತನಿಖೆ ಇನ್ನೂ ಪ್ರಗತಿಯಲ್ಲಿದೆ.