Tag: Home minister

  • ಡಿಸಿಎಂ ಆಗಿದ್ರೂ ಪರಮೇಶ್ವರ್, ಎಚ್‍ಡಿಕೆ ಕೈಗೊಂಬೆ- ದೋಸ್ತಿ ಸರ್ಕಾರದಲ್ಲಿ `ಕೈ’ ಹಿತ ಕಾಯಲು ಅಸಮರ್ಥ

    ಡಿಸಿಎಂ ಆಗಿದ್ರೂ ಪರಮೇಶ್ವರ್, ಎಚ್‍ಡಿಕೆ ಕೈಗೊಂಬೆ- ದೋಸ್ತಿ ಸರ್ಕಾರದಲ್ಲಿ `ಕೈ’ ಹಿತ ಕಾಯಲು ಅಸಮರ್ಥ

    ಬೆಂಗಳೂರು: ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ಬಳಿ ಇರುವ ಗೃಹ ಇಲಾಖೆಯನ್ನು ಕಾಂಗ್ರೆಸ್ ಹೈಕಮಾಂಡ್ ಕಿತ್ತುಕೊಂಡಿದೆ.

    8 ವರ್ಷ ಪಕ್ಷ ಮುನ್ನಡೆಸಿದ್ದೇನೆ, ನನ್ನ ನೇತೃತ್ವದಲ್ಲಿ 2 ಬಾರಿ ಪಕ್ಷ ಅಧಿಕಾರಕ್ಕೆ ಬಂದಿದೆ. ದೆಹಲಿಯಲ್ಲಿ ತಮ್ಮೆಲ್ಲಾ ಪ್ರಭಾವ ಬಳಸಿ `ಗೃಹ’ ಉಳಿಸಿಕೊಳ್ಳಲು ಪರಮೇಶ್ವರ್ ಕಸರತ್ತು ನಡೆಸಿದ್ದರು. ಆದ್ರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ `ಗೃಹ’ಖಾತೆಯಲ್ಲೇ ಪರಮೇಶ್ವರ್ ಉಳಿಸಿಕೊಂಡರೇ ಆ ಗುರಿ ಮುಟ್ಟೋದು ಅಸಾಧ್ಯ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿ. ಪರಮೇಶ್ವರ್ ಅವರಿಗೆ ಗೃಹ ಖಾತೆ ಕೈ ತಪ್ಪಿದೆ. ಈ ಮೂಲಕ ಪರಮೇಶ್ವರ್ ನೆಪಮಾತ್ರಕ್ಕಷ್ಟೇ ಗೃಹ ಮಂತ್ರಿ, `ಅಣ್ತಮ್ಮ’ ಆಡಿದ್ದೇ ಆಟ ಎನ್ನುವಂತಾಗಿತ್ತು.

    ಇನ್ಸ್ ಪೆಕ್ಟರ್ ವರ್ಗಾವಣೆಗೂ ಕುಮಾರಸ್ವಾಮಿ, ರೇವಣ್ಣ ಮಾತೇ ಫೈನಲ್ ಆಗಿತ್ತು. ಪರಮೇಶ್ವರ್, ಕುಮಾರಸ್ವಾಮಿ, ರೇವಣ್ಣ ಕೈಗೊಂಬೆ ಆಗಿದ್ರಿಂದ ಕಾಂಗ್ರೆಸ್‍ಗೆ ಹಾನಿ ಜಾಸ್ತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಭಾವಿ ಖಾತೆಗೆ ಸಮರ್ಥರನ್ನೇ ನೇಮಕ ಮಾಡಬೇಕೆಂಬ ಒತ್ತಡ ಹೇರಲಾಗಿತ್ತು. ಹೀಗಾಗಿ ಪರಮೇಶ್ವರ್‍ಗೆ `ಗೃಹ’ ಬಿಟ್ಟುಕೊಡುವಂತೆ ಹುಕುಂ, ಎಂ.ಬಿ ಪಾಟೀಲ್‍ಗೆ ಕಾಂಗ್ರೆಸ್ ಲಗಾಮು ಹಾಕಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಪರಮೇಶ್ವರ್ ಗೆ `ಗೃಹ’ಭಂಗವಾಗಿದ್ದು ಹೇಗೆ..?
    ಆರೋಪ 1 – ಉಪಮುಖ್ಯಮಂತ್ರಿಯಾದ್ರೂ ಪರಮೇಶ್ವರ್ ಕುಮಾರಸ್ವಾಮಿ ಕೈಗೊಂಬೆ..!
    ಆರೋಪ 2– ಡಿಸಿಎಂ ಹುದ್ದೆ ಸಿಕ್ಕರೂ ಸಮ್ಮಿಶ್ರ ಸರ್ಕಾರದಲ್ಲಿ `ಕೈ’ ಹಿತ ಕಾಯಲು ಅಸಮರ್ಥ
    ಆರೋಪ 3– ಗೃಹ ಇಲಾಖೆ ಇದ್ರೂ ಸ್ವತಂತ್ರ ನಿರ್ಧಾರ ಕೈಗೊಳ್ಳದ ಪರಮೇಶ್ವರ್
    ಆರೋಪ 4– ಸಣ್ಣದೊಂದು ನಿರ್ಧಾರಕ್ಕೂ ಕುಮಾರಸ್ವಾಮಿಯನ್ನೇ ಕೇಳ್ತಿದ್ದ ಡಿಸಿಎಂ..!


    ಆರೋಪ 5– ಪರಮೇಶ್ವರ್ ಗೃಹಸಚಿವರಾದ್ರೂ ಪೊಲೀಸ್ ಇಲಾಖೆಯಲ್ಲಿ ರೇವಣ್ಣದ್ದೇ ಆಟ..!
    ಆರೋಪ 6– ಕಾಂಗ್ರೆಸ್ ಕಾರ್ಯಕರ್ತರ ಬೇಡಿಕೆಗಳಿಗೂ ಪರಮೇಶ್ವರ್ ಅಸಡ್ಡೆ
    ಆರೋಪ 7– ಪರಿಸ್ಥಿತಿ ಹೀಗೆ ಮುಂದುವರೆದ್ರೆ ಸರ್ಕಾರದಲ್ಲಿ `ಕೈ’ ಹಿಡಿತ ತಪ್ಪುತ್ತೆ

    ಈ ಎಲ್ಲಾ ಆರೋಪಗಳಿಂದಾಗಿ ಪರಮೇಶ್ವರ್ ಅವರಿಗೆ ಗೃಹ ಇಲಾಖೆ ತಪ್ಪಿದೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಧ್ಯವಾಗದಿದ್ದರೆ, ಭಾರತದ ಸಹಾಯ ಕೇಳಿ: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್

    ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಧ್ಯವಾಗದಿದ್ದರೆ, ಭಾರತದ ಸಹಾಯ ಕೇಳಿ: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್

    ಜೈಪುರ: ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಧ್ಯವಾಗದೇ ಇದ್ದರೆ, ಭಾರತದ ಸಹಾಯ ಕೇಳಿ ಎಂದು ಪಾಕಿಸ್ತಾನಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

    ಚುನಾವಣಾ ನಿಮಿತ್ತ ರಾಜಸ್ಥಾನದ ರಾಜಧಾನಿಯಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೂಲಕ ಪಾಕಿಸ್ತಾನ ಪ್ರಧಾನಿ ಇರ್ಮಾನ್ ಖಾನ್ ಅವರಿಗೆ ಹೇಳುವುದೇನೆಂದರೆ, ಅಫ್ಘಾನಿಸ್ತಾನದಲ್ಲಿ ಅಡಗಿರುವ ಉಗ್ರರನ್ನು ಸದೆಬಡಿಯಲು ಅಮೆರಿಕದ ಸಹಾಯವನ್ನು ಪಡೆದು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಆದರೂ ಭಯೋತ್ಪಾದನೆಯನ್ನು ನಿಗ್ರಹಿಸಲು ಕಷ್ಟವೆನಿಸಿದರೆ, ಭಾರತದ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾಲ್ಕು ವರ್ಷಗಳಲ್ಲಿ ಯಾವುದೇ ಭಯೋತ್ಪಾದನಾ ದಾಳಿಯೇ ನಡೆದಿಲ್ಲವೆಂದು ಹೇಳಲ್ಲ. ಆದರೆ ಭಾರತದಲ್ಲಿ ಯಾವುದೇ ರೀತಿಯ ದೊಡ್ಡ ಭಯೋತ್ಪಾದನಾ ದಾಳಿಗಳು ನಡೆದಿಲ್ಲ. ಪ್ರವಾಸೋದ್ಯಮದಲ್ಲಿ ಸ್ವರ್ಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಪರಿಸ್ಥಿತಿ ಸುಧಾರಿಸುತ್ತಿದೆ. ಕೇಂದ್ರ ಸರ್ಕಾರ ಆ ರಾಜ್ಯವನ್ನು ರಾಜಕೀಯ ಪ್ರಕ್ರಿಯೆಗೆ ತರುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಪ್ರಾಯೋಜಕತ್ವವನ್ನು ನೀಡುತ್ತಿದೆ ಎನ್ನುವ ಸಂಶಯವೇ ಇಲ್ಲವೆಂದು ಕಿಡಿಕಾರಿದ್ದಾರೆ.

    ದೇಶದಲ್ಲಿ ಶೇ.50 ರಿಂದ ಶೇ.60 ರಷ್ಟು ನಕ್ಸಲ್ ದಾಳಿಗಳು ಕಡಿಮೆಯಾಗಿದೆ. 90 ಜಿಲ್ಲೆಗಳಲ್ಲಿ ನಡೆಯುತ್ತಿದ್ದ ನಕ್ಸಲ್ ಚಟುವಟಿಕೆ ಈಗ 8 ರಿಂದ 9 ಜಿಲ್ಲೆಗಳಲ್ಲಿ ಮಾತ್ರ ಉಳಿದಿದೆ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ನಕ್ಸಲರ ಸಮಸ್ಯೆಯು ಕೂಡ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದ ಮಹಾಪುರುಷರನ್ನ ಸ್ಮರಿಸೋದು ಅಪರಾಧವೇ – ಟೀಕೆಗಳಿಗೆ ಮೋದಿ ಟಾಂಗ್

    ದೇಶದ ಮಹಾಪುರುಷರನ್ನ ಸ್ಮರಿಸೋದು ಅಪರಾಧವೇ – ಟೀಕೆಗಳಿಗೆ ಮೋದಿ ಟಾಂಗ್

    ಕೇವಾಡಿಯಾ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಚಿಂತನೆಗಳು ಈಗಲೂ ಪ್ರಸ್ತುತವಾಗಿದ್ದು, 500ಕ್ಕೂ ಪ್ರತ್ಯೇಕ ಸಂಸ್ಥಾನಗಳನ್ನು ಒಂದಾಗಿಸುವ ಪಟೇಲರ ಚಿಂತನೆ ಇಂದು ಭಾರತವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದಾಗಿಸಿದೆ ಎಂದು ಪ್ರಧಾನಿ ನರೇದ್ರ ಮೋದಿ ಹೇಳಿದ್ದಾರೆ.

    ನರ್ಮದಾ ಜಿಲ್ಲೆಯಲ್ಲಿರುವ ಕೇವಾಡಿಯಾ ಬಳಿ `ಏಕತಾ ಪ್ರತಿಮೆ’ ಅನಾವರಣ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಅದ್ಭುತ ಶಿಲ್ಪಿಗಳು ಪಟೇಲರ ಅದ್ಭುತ ವಿಗ್ರಹವನ್ನು ಪೂರ್ಣಗೊಳಿಸಿದ್ದಾರೆ. ಈ ಮೂರ್ತಿ ಅದಿವಾಸಿಗಳ ಯೋಗದಾನವಾಗಿದ್ದು, ಇದು ನಿರ್ಮಾಣವಾಗಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರ ಕಾರ್ಯ ಇತಿಹಾಸದ ಪುಟ ಸೇರಲಿದೆ. ಇದು ಭಾರತದ ಇತಿಹಾಸಲ್ಲಿ ಅರ್ಥಪೂರ್ಣ ದಿನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಟೇಲರ ಪ್ರತಿಮೆ ಅನಾವರಣ ಮಾಡಿದ್ದು ನನ್ನ ಜೀವನದ ಮಹತ್ವದ ಕ್ಷಣವಾಗಿದ್ದು, ಇದು ನಿಮ್ಮ ಆರ್ಶೀವಾದದಿಂದ ಆಗಿದೆ. ಈ ಪತ್ರಿಮೆ ಶ್ರಮ ವಹಿಸಿದ ಪ್ರತಿಯೊಬ್ಬರಿಗೂ ಇದರ ಗೌರವವನ್ನು ಸಲ್ಲಿಸುತ್ತೇನೆ. ಪಟೇಲರ ದೂರದೃಷ್ಟಿ ಮತ್ತು ಕಠಿಣ ನಿಲುವುಗಳೇ ಭಾರತದ ಏಕೀಕರಣಕ್ಕೆ ಕಾರಣ. ಒಂದೊಮ್ಮೆ ಅವರ ಆ ನಿಲುವು ತೆಗೆದುಕೊಳ್ಳದಿದ್ದರೆ ಹೈದರಾಬಾದ್ ಚಾರ್ ಮಿನಾರ್ ಹಾಗೂ ಸೋಮನಾಥ ದೇವಾಲಯವನ್ನು ನೋಡಲು ವೀಸಾ ತೆಗೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಹೇಳಿದರು. ಇದನ್ನು ಓದಿ: ಏಕತಾ ಪ್ರತಿಮೆಯ ವಿಶೇಷತೆ ಏನು? ಎಷ್ಟು ಬಲಶಾಲಿಯಾಗಿದೆ? ಖರ್ಚು ಎಷ್ಟಾಗಿದೆ? – ಇಲ್ಲಿದೆ ಪೂರ್ಣ ವಿವರ

    ಇದೇ ವೇಳೆ ದೇಶಕ್ಕೆ ಸೇವೆ ಸಲ್ಲಿಸಿದ ಮಹಾನ್ ನಾಯಕರನ್ನು ನೆನೆದರೆ ಕೆಲವರು ತಮ್ಮ ರಾಜಕೀಯ ದೃಷ್ಟಿಯಿಂದ ಇದನ್ನು ಕ್ರೈಂ ಎಂದು ಟೀಕೆ ಮಾಡಿದ್ದಾರೆ. ಇದನ್ನು ನೋಡಿದರೆ ನನಗೆ ಅಚ್ಚರಿಯಾಗುತ್ತಿದೆ. ಒಬ್ಬ ಮಹಾನ್ ದೇಶ ಪ್ರೇಮಿಯನ್ನು ನೆನೆಯುವುದು ಅಪರಾಧವಾಗುತ್ತದಯೇ ಎಂದು ಪ್ರಶ್ನೆ ಮಾಡಿ ಪಟೇಲರ ಸ್ಮಾರಕ ನಿರ್ಮಾಣ ಕುರಿತು ಕೇಳಿ ಬಂದ ಟೀಕೆಗಳಿಗೆ ತಿರುಗೇಟು ನೀಡಿದರು.

    ನಾನು ಸಿಎಂ ಆಗಿದ್ದ ವೇಳೆ ಏಕತಾ ಪ್ರತಿಮೆ ನಿರ್ಮಾಣದ ಕನಸು ಕಂಡಿದ್ದೆ, ಇದಕ್ಕೆ ಲಕ್ಷಾಂತರ ರೈತರು ಕಬ್ಬಿಣವನ್ನು ನೀಡುವ ಮೂಲಕ ಬೆಂಬಲ ನೀಡಿದರು. ಇಂತಹ ದಿನಗಳನ್ನು ದೇಶದ ಚರಿತ್ರೆಯಿಂದ ತೆಗೆದು ಹಾಕುವುದು ಕಷ್ಟಸಾಧ್ಯವಾಗುತ್ತದೆ. ಭಾರತೀಯರಿಗೆ ಇದು ಪ್ರೇರಣೆಯ ಸಂಕೇತವಾಗಿ ನಿಲ್ಲಲಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಗುಜರಾತ್ ಸಿಎಂ ವಿಜಯ್ ರೂಪಾಣಿ, ಮಧ್ಯಪ್ರದೇಶ ರಾಜ್ಯಪಾಲರದ ಆನಂದಿಬೆನ್ ಪಟೇಲ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಸುಮಾರು 20ಕ್ಕೂ ಹೆಚ್ಚು ಡ್ರೋನ್ ಮೂಲಕ ಸೆರೆಹಿಡಿಯುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಪ್ರತಿಮೆಯ ಅನಾವರಣ ಬೆನ್ನಲ್ಲೇ ಐಎಎಫ್ ಪ್ಲೇನ್ ಗಳು ಪ್ರತಿಮೆ ಬಳಿ ತ್ರಿವರ್ಣ ಧ್ವಜವನ್ನು ಗಾಳಿಯಲ್ಲೇ ಸೃಷ್ಟಿಸಿದ್ದವು. ಇದಾದ ಬಳಿಕ 29 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ಕಲಾವಿದರು ನೃತ್ಯ, ಸಂಗೀತ ಕಲಾ ಪ್ರದರ್ಶನ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜೀವ್ ಗಾಂಧಿ ಶೈಲಿಯಲ್ಲೇ ಮೋದಿ ಹತ್ಯೆಗೆ ಸಂಚು – ಪ್ರಧಾನಿ ಬಳಿ ಬರಲು ಮಂತ್ರಿಗಳಿಗೂ ಅವಕಾಶವಿಲ್ಲ!

    ರಾಜೀವ್ ಗಾಂಧಿ ಶೈಲಿಯಲ್ಲೇ ಮೋದಿ ಹತ್ಯೆಗೆ ಸಂಚು – ಪ್ರಧಾನಿ ಬಳಿ ಬರಲು ಮಂತ್ರಿಗಳಿಗೂ ಅವಕಾಶವಿಲ್ಲ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಗುಪ್ತಚರ ವರದಿಯ ಬಳಿಕ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗೆ ಕೈಗೊಳ್ಳಲಾಗಿದ್ದು, ಮಂತ್ರಿಗಳು ಮತ್ತು ಅಧಿಕಾರಿಗಳು ಸಹ ರಕ್ಷಣಾ ಸಿಬ್ಬಂದಿ ಪರಿಶೀಲನೆ ಬಳಿಕಷ್ಟೇ ಪ್ರಧಾನಿಗಳ ಬಳಿ ತೆರಳಬಹುದಾಗಿದೆ ಎಂದು ಗೃಹ ಸಚಿವಾಲಯ ಸೂಚನೆ ನೀಡಿದೆ.

    ಮೋದಿ ಅವರ ಭದ್ರತೆಯ ಕುರಿತು ರಾಜ್ಯ ಸರ್ಕಾರಗಳಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಕಳುಹಿಸಿದೆ. ಮೋದಿಯವರು 2019ರ ಸಾರ್ವತ್ರಿಕ ಚುನಾವಣೆಗೆ  “ಅತ್ಯಮೂಲ್ಯ ಗುರಿಯಾಗಿದ್ದು”, ಹತ್ಯೆ ಸಂಚು ರೂಪಿಸುವ ಕುರಿತ ಎಚ್ಚರಿಕೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಮೋದಿ ಅವರ ರೋಡ್ ಶೋಗಳ ಕಡಿತಗೊಳಿಸುವ ಸಲಹೆಯನ್ನು ನೀಡಿದ್ದು, ಬದಲಾಗಿ ಸಾರ್ವಜನಿಕ ಸಮಾವೇಶಗಳನ್ನು ನಡೆಸುವಂತೆ ಎಸ್‍ಪಿಜಿ (ವಿಶೇಷ ರಕ್ಷಣಾ ಪಡೆ) ಸಲಹೆ ನೀಡಿದೆ.

    ಜೂನ್ 7 ರಂದು ಪುಣೆ ಪೊಲೀಸರು ಮೋದಿ ಹತ್ಯೆ ಸಂಚು ರೂಪಿಸಿರುವ ಕುರಿತು ಮಾಹಿತಿ ಬಹಿರಂಗ ಪಡಿಸಿದ ಬಳಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ರೀತಿಯಲ್ಲಿ ಮೋದಿಯವರನ್ನು ಹತ್ಯೆ ಮಾಡಲಾಗುವುದು ಎಂದು ಪುಣೆ ಪೊಲೀಸರು ಬಹಿರಂಗಗೊಳಿಸಿದ್ದ ಪತ್ರದಲ್ಲಿ ಬರೆಯಲಾಗಿತ್ತು ಎಂದು ಪೊಲೀಸರು ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

    ಈ ಬೆಳವಣಿಗೆ ನಂತರ ಗೃಹ ಸಚಿವ ರಾಜ್‍ನಾಥ್ ಸಿಂಗ್‍ರವರು ಪ್ರಧಾನಿ ಮಂತ್ರಿಯ ಹತ್ಯೆ ಸಂಚು ರೂಪಿಸಿರುವ ಹಿನ್ನೆಲೆ ಭದ್ರತೆಯನ್ನು ಪರಿಶೀಲಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಗುಪ್ತಚರ ಇಲಾಖೆ ನಿದೇರ್ಶಕ ರಾಜೀವ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅಲ್ಲದೇ ಪ್ರಧಾನ ಮಂತ್ರಿಯ ಭದ್ರತಾ ವ್ಯವಸ್ಥೆ ಬಲಪಡಿಸಲು, ಇತರೆ ಏಜೆನ್ಸಿಗಳೊಂದಿಗೆ ಸಮಾಲೋಚಿಸಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.

    ದೇಶದಲ್ಲಿ ಛತ್ತಿಸ್‍ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಮಾವೋವಾದಿಗಳ ಪ್ರಭಾವ ಹೆಚ್ಚಾಗಿದ್ದು, ಗೃಹಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ಪ್ರಧಾನಿ ತಮ್ಮ ರಾಜ್ಯಗಳಿಗೆ ಭೇಟಿ ನೀಡಿದಾಗ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕೆಂದು ಎಂದು ಹೊಸ ಮಾರ್ಗಸೂಚಿಗಳಲ್ಲಿ ಸೂಚಿಸಿದ್ದಾರೆ ಎನ್ನಲಾಗಿದೆ.

  • ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿಗೆ ಸಂಕಷ್ಟ!

    ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿಗೆ ಸಂಕಷ್ಟ!

    ಬೆಂಗಳೂರು: ಬಿಟಿಎಂ ಲೇಔಟ್ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿಗೆ ಸಂಕಷ್ಟ ಎದುರಾಗಿದೆ. ರಾಮಲಿಂಗಾರೆಡ್ಡಿ ವಿರುದ್ಧ ಸಹಿ ಹಾಕದ ನಾಮಪತ್ರ ಸಲ್ಲಿಸಿದ ಆರೋಪವೊಂದು ಕೇಳಿಬಂದಿದೆ.

    ನಾಮಪತ್ರದಲ್ಲಿ ಸಲ್ಲಿಸಿರುವ ಮಾಹಿತಿಯನ್ನ ಪ್ರಮಾಣೀಕರಿಸಿದ ಮೇಲೆ ಸಹಿ ಮಾಡಬೇಕು. ಆದರೆ ರಾಮಲಿಂಗಾರೆಡ್ಡಿ ನಾಮಪತ್ರದಲ್ಲಿ ಸಹಿ ಮಾಡಿಲ್ಲ. ಅಲ್ಲದೇ ಸಹಿ ಮಾಡದ ನಾಮಪತ್ರವನ್ನ ಬಿಟಿಎಂ ಲೇಔಟ್ ಆರ್ ಓ ರಂಗಪ್ಪ ಅವರು ಚುನಾವಣಾ ಆಯೋಗಕ್ಕೂ ಕಳಿಸಿದ್ದಾರೆ.

    ಈ ಕುರಿತು ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನಾಮಪತ್ರವನ್ನ ತಿರಸ್ಕಾರ ಮಾಡಬೇಕು ಎಂದು ದೂರು ಸಲ್ಲಿಸಿದ್ದಾರೆ. ಇತ್ತ ಆಯೋಗ ಕೂಡ ತಮ್ಮ ವೆಬ್ ಸೈಟ್ ನಲ್ಲೂ ಸಹಿ ಮಾಡದ ನಾಮಪತ್ರವನ್ನೇ ಅಪ್ಲೋಡ್ ಮಾಡಿದೆ ಎಂದು ಹೇಳಲಾಗುತ್ತಿದೆ.

    ಈ ಕುರಿತು ರಾಮಲಿಂಗಾರೆಡ್ಡಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಬ್ಬರು ಮೂರು ನಾಮಪತ್ರ ಸಲ್ಲಿಸಬಹುದು. ಎರಡು ನಾಮಪತ್ರದಲ್ಲಿ ಸರಿಯಿದೆ. ಆದ್ರೆ ಒಂದರಲ್ಲಿ ಏನೋ ಮಿಸ್ಟೇಕ್ ಆಗಿರಬಹುದು. ಇದನ್ನೇ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಪ್ಲೋಡ್ ಮಾಡುವವರು ಇದನ್ನು ಪರಿಗಣಿಸಬೇಕಿತ್ತು ಅಂತ ಸ್ಪಷ್ಟನೆ ನೀಡಿದ್ದಾರೆ.

  • ಭದ್ರತೆ ಕೋರಿ ಸಚಿವ ಪ್ರಮೋದ್ ಮಧ್ವರಾಜ್ ಗೃಹ ಇಲಾಖೆಗೆ ಪತ್ರ

    ಭದ್ರತೆ ಕೋರಿ ಸಚಿವ ಪ್ರಮೋದ್ ಮಧ್ವರಾಜ್ ಗೃಹ ಇಲಾಖೆಗೆ ಪತ್ರ

    ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಹೆಚ್ಚುವರಿ ಭದ್ರತೆ ಕೋರಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಹಾಗಾದ್ರೆ ಸಚಿವ ಪ್ರಮೋದ್ ಮಧ್ವರಾಜ್ ಗೆ ಬೆದರಿಕೆ ಇದ್ಯಾ ಎಂಬ ಪ್ರಶ್ನೆ ಎದ್ದಿದೆ.

    ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರಾದ್ಯಂತ ಪ್ರಚಾರ ಸಭೆಗಳು ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚುವರಿ ಭದ್ರತೆ ನೀಡಬೇಕೆಂದು ಕೋರಿದ್ದೇನೆ. ಗೃಹ ಇಲಾಖೆಯಲ್ಲಿ ಏನು ಬೆಳವಣಿಗೆಯಾಗಿದೆಯೆಂದು ಗೊತ್ತಿಲ್ಲ ಅಂತ ಹೇಳಿದ್ರು.

    ಸಂಭವನೀಯ ಅನಾಹುತ ತಪ್ಪಿಸಲು ಹೆಚ್ಚುವರಿ ಭದ್ರತೆ ಕೋರಿ ಪತ್ರ ಬರೆದಿದ್ದೇನೆ. ಅವಘಡ ಆಗದಿರಲಿ ಎಂದು ಮುನ್ನಚ್ಚರಿಕಾ ದೃಷ್ಟಿಯಿಂದ ಪತ್ರ ಬರೆಯಲಾಗಿದೆ ಅಂದ್ರು.

    ಗೃಹ ಇಲಾಖೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭದ್ರತೆ ಕೊಡೋದು ಬಿಡೋದು ಸರ್ಕಾರಕ್ಕೆ ಬಿಟ್ಟದ್ದು. ಯಾವ ಕಾರಣಕ್ಕೆ ಭದ್ರತೆ ಬೇಕು ಅಂತ ಸಚಿವರು ಪತ್ರದಲ್ಲಿ ಯಾವುದೇ ಕಾರಣ ಕೊಟ್ಟಿಲ್ಲ. ಮುನ್ನಚ್ಚೆರಿಕೆಗೆ ಎಂದಷ್ಟೇ ಬರೆದಿದ್ದಾರೆ. ಸಚಿವರಿಗೇನಾದ್ರು ಬೆದರಿಕೆ ಇದ್ಯಾ, ಅಥವಾ ನೂರಾರು ಕೋಟಿ ರೂಪಾಯಿ ಒಡೆಯನಿಗೆ ಏನಾದ್ರು ಆಪತ್ತು ಎದುರಾಗಿದ್ಯಾ ಅನ್ನುವ ಪ್ರಶ್ನೆಗಳನ್ನು ಉಡುಪಿ ಜನತೆ ಕೇಳುತ್ತಿದ್ದಾರೆ. ಬಗ್ಗೆ ಸಚಿವರು ಉತ್ತರ ಕೊಡದೆ ನಕ್ಕು, ಸುಮ್ಮನಾಗಿದ್ದಾರೆ.

  • ಮೋದಿ ದೇಶದ ಪ್ರಧಾನಿ, ಬಂದ್ ನಡೆಸಲು ಅವಕಾಶ ನೀಡಲ್ಲ: ರಾಮಲಿಂಗಾ ರೆಡ್ಡಿ

    ಮೋದಿ ದೇಶದ ಪ್ರಧಾನಿ, ಬಂದ್ ನಡೆಸಲು ಅವಕಾಶ ನೀಡಲ್ಲ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಭಾನುವಾರ ನಗರದಲ್ಲಿ ಎಲ್ಲೂ ಪ್ರತಿಭಟನೆಗೆ ಅವಕಾಶವಿಲ್ಲ. ಬಂದ್ ಮಾಡುವವರು ಫ್ರೀಡಂ ಪಾರ್ಕ್‍ನಲ್ಲಿ ಮಾತ್ರ ಪ್ರತಿಭಟನೆ ಮಾಡಲಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಪ್ರಧಾನಿ ಅಲ್ಲ. ಅವರು ದೇಶದ ಪ್ರಧಾನಿ. ಪ್ರಧಾನಿಗಳು ಬಂದಾಗ ಗೌರವ ಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ. ಹೀಗಾಗಿ ಪ್ರತಿಭಟನೆ ಮಾಡುವವರಿಗೆ ಫ್ರೀಡಂ ಪಾರ್ಕ್ ಪ್ರತಿಭಟಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

    ಭಾನುವಾರ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

    ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆ ಹರಿಸಿಕೊಡಬೇಕು. ಮಹದಾಯಿ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಬಗೆ ಹರಿಸುವ ಭರವಸೆಯನ್ನು ನೀಡದೇ ಇದ್ದರೆ ಫೆ.4 ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದ್ದರು.

    ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಫೆ. 4ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ 3ನೇ ತಾರೀಖಿನ ಒಳಗಡೆ ಮಹದಾಯಿ ನೀರಿನ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ ಎಂದು ಪ್ರಧಾನಿಯಿಂದ ಭರವಸೆ ಕೊಡಿಸಿ. ಇಲ್ಲದೇ ಇದ್ದರೆ 4ರಂದು ಬೆಂಗಳೂರು ಬಂದ್ ಮಾಡಬೇಕಾಗುತ್ತದೆ. ನಮಗೆ ಸ್ಪಷ್ಟವಾದ ಭರವಸೆ ಕೊಡಿಸಬೇಕು. ಶನಿವಾರ ಮಧ್ಯಾಹ್ನದ ತನಕ ಕಾಯುತ್ತೇವೆ. ಮಧ್ಯಾಹ್ನದ ಒಳಗಡೆ ಭರವಸೆ ಸಿಗದೇ ಹೋದರೆ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಬಿಜೆಪಿಗೆ ಡೆಡ್‍ಲೈನ್ ನೀಡಿದ್ದರು.

     

  • ಬಲಪಂಥೀಯರು, ಪಿಎಫ್‍ಐನವರ ಓವರ್ ಆ್ಯಕ್ಟಿಂಗೇ ಕೋಮು ವೈಷಮ್ಯಕ್ಕೆ ಕಾರಣ : ರಾಮಲಿಂಗಾರೆಡ್ಡಿ

    ಬಲಪಂಥೀಯರು, ಪಿಎಫ್‍ಐನವರ ಓವರ್ ಆ್ಯಕ್ಟಿಂಗೇ ಕೋಮು ವೈಷಮ್ಯಕ್ಕೆ ಕಾರಣ : ರಾಮಲಿಂಗಾರೆಡ್ಡಿ

    ಮಂಗಳೂರು: ಸಂಘಟನೆಗಳ, ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಕರಾವಳಿಯಲ್ಲಿ ಕೋಮು ವೈಷಮ್ಯದ ಗಲಾಟೆ ಆಗುತ್ತಿದೆ. ಇದಕ್ಕೆಲ್ಲ ಬಲಪಂಥೀಯರು, ಪಿಎಫ್‍ಐನವರ ಓವರ್ ಆ್ಯಕ್ಟಿಂಗ್ ಕಾರಣ ಅಂತ ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

    ಮಂಗಳೂರಿನ ಶಕ್ತಿನಗರದಲ್ಲಿ ಪೊಲೀಸ್ ವಸತಿಗೃಹಕ್ಕೆ ಶಿಲಾನ್ಯಾಸಗೈದು ಮಾತನಾಡಿದ ಅವರು, ಇವರೆಲ್ಲ ಸ್ವಲ್ವ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತೆ. ಜನರಿಗೆ ಈ ಗಲಾಟೆ ಯಾವುದೂ ಬೇಕಾಗಿಲ್ಲ ಅಂತ ಅವರು ಹೆಳಿದ್ರು.

    ಇನ್ನು ಸಂಘಟನೆಗಳ ನಿಷೇಧ ತಕ್ಷಣಕ್ಕೆ ಯಾವುದೇ ಪ್ರಸ್ತಾಪ ಇಲ್ಲ. ನಿಷೇಧ ಮಾಡಿದ್ರೆ ಎರಡೂ ಕಡೆಯ ಸಂಘಟನೆಗಳನ್ನು ನಿಷೇಧ ಮಾಡಬೇಕು. ಮುಖ್ಯಮಂತ್ರಿ ಪ್ರವಾಸದಲ್ಲಿದ್ದಾರೆ, ಆ ನಂತ್ರ ಈ ಬಗ್ಗೆ ನೋಡ್ತೀವಿ ಅಂದ್ರು.

    ಮೂಡಿಗೆರೆಯಲ್ಲಿ ಧನ್ಯಶ್ರೀ ಪ್ರಾಣ ಹೋಗಿದ್ದಕ್ಕೆ ಬೆಲೆ ಇಲ್ಲವೇ? ಇವರು ಯಾಕೆ ಅಲ್ಲಿ ಹೋಗಿ ಖಂಡಿಸುತ್ತಿಲ್ಲ? ದ್ವಂದ್ವ ನೀತಿ ಯಾಕೆ? ಆ ಗಲಾಟೆಯಲ್ಲಿರೋದು ಎಲ್ಲರು ಯುವಮೋರ್ಚಾದವರು. ಪೊಲೀಸರು ಎಲ್ಲ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಥರದ ಸಂಘಟನೆಗಳಿಗೆ ಜನವೇ ಉತ್ತರ ನೀಡಲಿದ್ದಾರೆ ಅಂತ ಅವರು ತಿಳಿಸಿದ್ರು.

  • ರವಿಬೆಳಗೆರೆ ಬಂಧನಕ್ಕೂ, ಗೌರಿ ಹತ್ಯೆಗೂ ಯಾವುದೇ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ

    ರವಿಬೆಳಗೆರೆ ಬಂಧನಕ್ಕೂ, ಗೌರಿ ಹತ್ಯೆಗೂ ಯಾವುದೇ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ

    ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ, ಆದರೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ರವಿಬೆಳಗೆರೆ ಅವರ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

    ಪತ್ರಕರ್ತ ರವಿಬೆಳೆಗೆರೆ ಬಂಧನ ಹಿನ್ನೆಲೆ ವಿಕಾಸಸೌಧದಲ್ಲಿ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದರು, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಸುವ ವೇಳೆ ತಾಹೀರ್ ನನ್ನು ಪೊಲೀಸರು ಬಂಧಿಸಿದಾಗ ಸುಪಾರಿ ಕಿಲ್ಲರ್ ಶಶಿಧರ್ ಮುಂಡೇವಾಡಗೆ ಗನ್ ಮಾರಾಟ ಮಾಡಿದ್ದ ಎಂಬ ಮಾಹಿತಿ ಸಿಕ್ಕಿದೆ. ತಾಹೀರ್ ವೆಪನ್ ಸೆಲ್ಲರ್ ಮಾತ್ರ. ಆದರೆ ಬೆಳಗೆರೆ ಬಂಧನಕ್ಕೂ ಗೌರಿ ಹತ್ಯೆ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದರು.

    ಬೆಳಗೆರೆ ಅವರ ಬಂಧನ ವಿಚಾರ ಎಲ್ಲವೂ ಪೊಲೀಸ್ ಪ್ರಕ್ರಿಯೆ, ಮಾಹಿತಿ ಇದ್ದ ಕಾರಣದಿಂದಲೇ ಈ ಪ್ರಕ್ರಿಯೆ ನಡೆದಿದೆ. ಮಾಹಿತಿ ಇಲ್ಲದೇ ಏನೂ ಮಾಡಲು ಆಗುವುದಿಲ್ಲ. ಅಲ್ಲದೇ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಲ್ಯಾಬ್ ರಿಪೋರ್ಟ್ ಬರುವವರೆಗೆ ಕಾಯಬೇಕು. ಕಳೆದ ಭಾನುವಾರ ತಾಹೀರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು, ಯಾರು ಯಾರಿಗೆ ಗನ್ ಮಾರಾಟ ಮಾಡಲಾಗಿದೆ ಎಂಬುವುದರ ಬಗ್ಗೆ ಪೊಲೀಸರು ತನಿಖೆ ಮಾಡಿದಾಗ ಶಶಿಧರ್ ಮುಂಡೆವಾಡಿಗೆ ಗನ್ ಮಾರಾಟ ಮಾಡಿರುವ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಆಧಾರಿಸಿ ಶಶಿಧರ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಿಸಿಬಿಗೆ ಕೆಲವು ಮಾಹಿತಿ ಸಿಕ್ಕಿದೆ. ಅದರಂತೆ ಇಂದಿನ ಬಂಧನ ಪ್ರಕ್ರಿಯೆ ನಡೆದಿದೆ ಎಂದು ವಿವರಿಸಿದರು.  ( ಇದನ್ನೂ ಓದಿ: ಯಾಕ್ ನೀವ್ ರಿಸ್ಕ್ ತೆಗೆದುಕೊಳ್ತೀರಿ: ಪೊಲೀಸರಿಗೆ ರವಿ ಬೆಳಗೆರೆ ಬುದ್ಧಿವಾದ )

    ಅಲ್ಲದೇ ಶಶಿಧರ್ ಮುಂಡೇವಾಡಿ ಬಳಸಿದ್ದ ಗನ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ಆ ಗನ್ ಎಲ್ಲೆಲ್ಲಿ ಬಳಕೆಯಾಗಿದೆ ಎನ್ನುವ ಮಾಹಿತಿ ಲಭಿಸಲಿದೆ. ಬೆಳಗೆರೆ ಬಂಧನದ ಹಾಗೂ ತನಿಖೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರು ಅಥವಾ ಸಿಸಿಬಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ ಎಂದು ಹೇಳಿದರು.

    ( ಇದನ್ನೂ ಓದಿ: ರವಿ ಬೆಳಗೆರೆ ಅಫಿಡವಿಟ್ಟಿನಲ್ಲಿ ಏನಿದೆ? )

    ( ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಬಳಿಕ ಅಂದು ರವಿ ಬೆಳಗೆರೆ ಹೇಳಿದ್ದು ಹೀಗೆ )

  • ಟ್ರೋಲ್ ಆಗ್ತಿದೆ ಗೃಹಸಚಿವರು, ಶಾಸಕರು, ಮೋಹನ್ ಆಳ್ವ ಮಾತುಕತೆಯ ಫೋಟೋ

    ಟ್ರೋಲ್ ಆಗ್ತಿದೆ ಗೃಹಸಚಿವರು, ಶಾಸಕರು, ಮೋಹನ್ ಆಳ್ವ ಮಾತುಕತೆಯ ಫೋಟೋ

    ಮಂಗಳೂರು: ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್‍ನ ವಿದ್ಯಾರ್ಥಿನಿ ಕಾವ್ಯ ಪೂಜಾರಿ ನಿಗೂಢ ಸಾವಿನ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವು ಸಿಗುತ್ತಿದೆ. ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಗೃಹ ಸಚಿವರು ಮತ್ತು ಸ್ಥಳೀಯ ಶಾಸಕರು ಆಳ್ವಾಸ್ ಸಂಸ್ಥೆಯ ಮಾಲೀಕರೊಂದಿಗೆ ಕಾಣಿಸಿಕೊಂಡಿದ್ದಾರೆ.

    ಗೃಹ ಸಚಿವ ರಾಮಲಿಂಗ ರೆಡ್ಡಿ ಹಾಗೂ ಮೂಡಬಿದಿರೆಯ ಶಾಸಕ ಅಭಯ್‍ಚಂದ್ರ ಜೈನ್ ಅವರು ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಜೊತೆ ಸೇರಿ ಮೀಟಿಂಗ್ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ. ಈ ಫೋಟೋ ವಿವಾದವನ್ನು ಎಬ್ಬಿಸಿರುವುದಲ್ಲದೆ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಾ ಎಂಬ ಅನುಮಾನವನ್ನೂ ಸೃಷ್ಟಿಸಿದೆ.

    ಕಳೆದ ಬುಧವಾರ ಮಂಗಳೂರು ಭೇಟಿಯಲ್ಲಿದ್ದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅಗ್ನಿಶಾಮಕ ಠಾಣೆಯ ಉದ್ಘಾಟನೆಗಾಗಿ ಮೂಡಬಿದಿರೆಗೆ ಹೋಗಿದ್ದರು. ಈ ವೇಳೆ ಸ್ಥಳೀಯ ಶಾಸಕ ಅಭಯಚಂದ್ರ ಜೈನ್ ಹಾಗೂ ಮೋಹನ್ ಆಳ್ವ ಗೃಹ ಸಚಿವರನ್ನು ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಅವರು ಏನು ಮಾತನಾಡಿದರು ಎಂದು ಯಾರಿಗೂ ಗೊತ್ತಿಲ್ಲ. ಆದರೆ ಕಾವ್ಯ ಸಾವಿನ ಪ್ರಕರಣವನ್ನು ಮುಚ್ಚಿ ಹಾಕುವ ಮಾತುಕತೆ ನಡೆದಿದೆ ಅಂತ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅವರು ಮಾತುಕತೆ ನಡೆಸುತ್ತಿರೋ ಫೋಟೋಗಳಿಗೆ ತಮಗೆ ತೋಚಿದ ಹಾಗೆ ಬರಹವನ್ನು ಬರೆದು ನೆಟ್ಟಿಗರು ಫುಲ್ ಟ್ರೋಲ್ ಮಾಡುತ್ತಿದ್ದಾರೆ.

    ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವಿನ ಪ್ರಕರಣ ದೊಡ್ಡ ಸದ್ದು ಮಾಡಿದೆ. ಈ ಸಾವಿನ ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಸತ್ಯಾಂಶ ಕೂಡ ಹೊರಬಂದಿಲ್ಲ. ಕುಟುಂಬ ಮತ್ತು ಸಾರ್ವಜನಿಕರ ಸಂಶಯಗಳಿಗೆ ಉತ್ತರನೂ ಸಿಗುತ್ತಿಲ್ಲ. ಅಷ್ಟೇ ಅಲ್ಲದೇ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಾಲೀಕ ಮೋಹನ್ ಆಳ್ವರೇ ಹಲವರ ಕಣ್ಣಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಈ ನಡುವೆಯೇ ಮೋಹನ್ ಆಳ್ವರನ್ನು ಗೃಹ ಸಚಿವ ರೆಡ್ಡಿ ಅವರು ಭೇಟಿಯಾಗಿ ಮಾತುಕತೆ ನಡೆಸಿರೋದು ಕಾವ್ಯ ಪರ ಹೋರಾಡುತ್ತಿರುವವರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೋರಾಟಗಾರ ದಿನಕರ್ ಶೆಟ್ಟಿ ತಿಳಿಸಿದ್ದಾರೆ.

    ಬುಧವಾರ ಗೃಹ ಸಚಿವರು ಮೋಹನ್ ಆಳ್ವ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ನಾವು ಅವರನ್ನು ಭೇಟಿ ಮಾಡಲು ಹೋಗಿದ್ದಾಗ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕೆಂದು ನಾವು ಕೇಳಿಕೊಂಡಿದ್ದೇವು. ಆದರೆ ಅವರು ಕಾಟಾಚಾರಕ್ಕಷ್ಟೇ ಒಂದೆರಡು ನಿಮಿಷ ಮಾತನಾಡಿಸಿ ಸಮಯದ ಅಭಾವವಿದೆ ಅಂತ ಹೇಳಿ ಕಳುಹಿಸಿಬಿಟ್ರು ಎಂದು ಕಾವ್ಯಳ ತಾಯಿ ಬೇಬಿ ಪೂಜಾರಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಕಾವ್ಯ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸದಿದ್ದರೆ ಶನಿವಾರ ಮಂಗಳೂರಿನಲ್ಲಿ ಅರೆಬೆತ್ತಲೆ ಹೋರಾಟ ಮಾಡುತ್ತೇವೆ ಎಂದು ಆಳ್ವಾಸ್ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.