Tag: Home minister

  • ಏರ್ ಸ್ಟ್ರೈಕ್ ಸಾಕ್ಷಿಯನ್ನ ಯಾರೂ ಕೇಳಿಲ್ಲ: ಎಂ.ಬಿ.ಪಾಟೀಲ್

    ಏರ್ ಸ್ಟ್ರೈಕ್ ಸಾಕ್ಷಿಯನ್ನ ಯಾರೂ ಕೇಳಿಲ್ಲ: ಎಂ.ಬಿ.ಪಾಟೀಲ್

    ಹುಬ್ಬಳ್ಳಿ: ಏರ್ ಸ್ಟ್ರೈಕ್ ಕುರಿತಂತೆ ಸಾಕ್ಷಿ ಬಿಡುಗಡೆ ಮಾಡುವಂತೆ ಯಾರೂ ಕೇಳಿಲ್ಲ ಹಾಗೂ ಒತ್ತಾಯ ಮಾಡಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಅವರು, ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.

    ನಗರದಲ್ಲಿ ಮಾತನಾಡಿದ ಗೃಹ ಸಚಿವರು, ಯೋಧರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಆದರೆ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸೇನೆಯ ಬಗ್ಗೆ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತು. ಅವರು ಮಾತನಾಡಿದ ವಿಡಿಯೋ ನನ್ನ ಬಳಿಯೇ ಇದೆ. ಈಗ ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ. ಸೇನೆಯ ವಿಷಯದಲ್ಲಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಮಾಡಬಾರದಿತ್ತು ಎಂದು ಗುಡುಗಿದರು.

    ಭಾರತೀಯ ವಾಯುಪಡೆ ಉಗ್ರರ ನೆಲೆಯ ಮೇಲೆ ನಡೆಸಿದ ಏರ್ ಸ್ಟ್ರೈಕ್ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಸೇನೆ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದ್ದಲ್ಲ. ಅದು ನಮ್ಮ ದೇಶದ ಸೇನೆ. ನಮ್ಮ ಯೋಧರ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕೇ ಹೊರತು ರಾಜಕೀಯ ಬೆರಸಬಾರದು ಎಂದು ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು.

    ಶಾಸಕ ಹಿಟ್ನಾಳ್ ಹೇಳಿದ್ದೇನು?:
    ಕೊಪ್ಪಳದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು, ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಯ ಮೇಲೆ 12 ನಿಮಿಷ ದಾಳಿ ಮಾಡಿವೆ. ಈ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೇಳುತ್ತಿದೆ. ಹಾಗಾದರೆ ಶವಗಳು ಎಲ್ಲಿವೆ? ಉಗ್ರ ಮೃತ ದೇಹವನ್ನು ಯಾರೂ ತೋರಿಸಿಲ್ಲ ಎಂದು ವೈಮಾನಿಕ ದಾಳಿಗೆ ಸಾಕ್ಷಿ ಕೇಳಿದ್ದರು.

    https://youtu.be/oseIZ5XYm4o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಬ್ಬರ ಹಿಂದೆ ಒಬ್ಬರಂತೆ ಐವರು ತರಬೇತಿ ಪಿಎಸ್‍ಐಗಳು ಕುಸಿದು ಬಿದ್ರು

    ಒಬ್ಬರ ಹಿಂದೆ ಒಬ್ಬರಂತೆ ಐವರು ತರಬೇತಿ ಪಿಎಸ್‍ಐಗಳು ಕುಸಿದು ಬಿದ್ರು

    ಕಲಬುರಗಿ: ನಿರ್ಗಮನ ಪಥ ಸಂಚಲನದಲ್ಲಿ ಐದು ಜನ ತರಬೇತಿ ಪಿಎಸ್‍ಐ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ಕಲಬುರಗಿಯ ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ನಡೆದಿದೆ.

    ನಾಗನಹಳ್ಳಿಯಲ್ಲಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮನ ನಡೆಯುತ್ತಿತ್ತು. ಈ ವೇಳೆ ಗೃಹ ಸಚಿವ ಎಂಬಿ ಪಾಟೀಲ್ ಭಾಷಣದ ಮಧ್ಯೆಯೇ ಒಬ್ಬರ ಹಿಂದೆ ಒಬ್ಬರು ಐವರು ತರಬೇತಿ ಪಿಎಸ್‍ಐ ಕುಸಿದು ಬಿದ್ದಿದ್ದಾರೆ.

    ಸಚಿವರಿಗಾಗಿ ಸುಮಾರು ಬೆಳಗ್ಗೆ 7 ಗಂಟೆಯಿಂದ ಬಿಸಿಲಿನಲ್ಲಿ ತರಬೇತಿ ಪಿಎಸ್‍ಐಗಳು ಕಾದು ನಿಂತಿದ್ದರು. ಆದರೆ ಬೆಳಗ್ಗೆ 8 ಗಂಟೆಗೆ ಬರಬೇಕಾದ ಗೃಹ ಸಚಿವರು ಒಂದೂವರೆ ಗಂಟೆ ತಡವಾಗಿ ಸುಮಾರು 9.30ಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಲಿನಲ್ಲೇ ನಿಂತಿದ್ದರಿಂದ ಸುಸ್ತಾಗಿ ಬಿದ್ದಿದ್ದಾರೆ. ಸುಮಾರು 267 ಪಿಎಸ್‍ಐಗಳು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ನೀರು, ಆಹಾರವಿಲ್ಲದೇ ಕಾಯುತ್ತಿದ್ದರು.

    ಇತ್ತ ತರಬೇತಿ ಪಿಎಸ್‍ಐಗಳು ಕುಸಿದು ಬೀಳುತ್ತಿದ್ದರೂ ಕೂಡ ಗೃಹ ಸಚಿವರು ಭಾಷಣವನ್ನು ಮುಂದುವರಿಸಿದ್ದರು. ಇದರಿಂದ ಅಲ್ಲಿದ್ದ ಜನರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಿಕ್ಷಣಾರ್ಥಿ ಅಸ್ವಸ್ಥಗೊಂಡರು ಭಾಷಣ ಮಾಡುವ ಮೂಲಕ ಸಚಿವ ಎಂ.ಬಿ. ಪಾಟೀಲ್ ಮಾನವಿಯತೆ ಮರೆತರಾ ಎಂಬ ಪ್ರಶ್ನೆ ಮೂಡಿದೆ.

    https://www.youtube.com/watch?v=YjwbHzPIZuE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆ, ತೋಟಕ್ಕೆ ದಯವಿಟ್ಟು ರಕ್ಷಣೆ ಕೊಡಿ- ಶಾಸಕರಿಂದ ಗೃಹ ಸಚಿವರಿಗೆ ಪತ್ರ

    ಮನೆ, ತೋಟಕ್ಕೆ ದಯವಿಟ್ಟು ರಕ್ಷಣೆ ಕೊಡಿ- ಶಾಸಕರಿಂದ ಗೃಹ ಸಚಿವರಿಗೆ ಪತ್ರ

    ಚಿಕ್ಕಮಗಳೂರು: ನನಗೆ ಜೀವ ಬೆದರಿಕೆ ಇದೆ. ದಯವಿಟ್ಟು ನನ್ನ ಮನೆ ಹಾಗೂ ತೋಟಕ್ಕೆ ರಕ್ಷಣೆ ಕೊಡಿ ಎಂದು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

    ಮೂಡಿಗೆರೆ ತಾಲೂಕಿನ ಕಲ್ಮನೆ ಗ್ರಾಮದ 27 ಎಕರೆ ಜಮೀನಿನಲ್ಲಿ 5 ಎಕರೆ ಜಮೀನು ನನಗೆ ಸೇರಬೇಕೆಂದು ಶಾಸಕ ಕುಮಾರಸ್ವಾಮಿ ಹಾಗೂ ಲೋಕೇಶ್ ಮಧ್ಯೆ ವಾರ್ ನಡೆಯುತ್ತಿದ್ದು, ಈ ಸಂಬಂಧ ಶಾಸಕರು ಪತ್ರ ಬರೆದಿದ್ದಾರೆ.

    ಏನಿದು ವಾರ್..?
    ಜಮೀನು ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ತೀರ್ಪು ನನ್ನಂತೆ ಬಂದಿದೆ. ಈ ಮಧ್ಯೆ ಲೋಕೇಶ್ ಅಪೀಲ್ ಹೋಗಿದ್ದು ವಿಚಾರಣೆ ನಡೆಯುತ್ತಿದೆ. ಆದ್ರೆ, ನನ್ನ ಏಳಿಗೆಯನ್ನ ಸಹಿಸಲಾಗದೆ ಈ ಹಿಂದೆ ಕೂಡ ನನ್ನ ಮೇಲೆ ಹಲ್ಲೆ ಮಾಡಿದ್ದ ರವಿ ಹಾಗೂ ಲಕ್ಷ್ಮಣರಿಂದ ಯಾವ ಸಮಯದಲ್ಲಾದ್ರೂ ಬೆದರಿಕೆ ಬರಬಹುದು. ಹೀಗಾಗಿ ನನ್ನ ಮನೆ ಹಾಗೂ ತೋಟಕ್ಕೆ ರಕ್ಷಣೆ ಕೋರಿ ಹೋಂ ಮಿನಿಸ್ಟರ್‍ಗೆ ಪತ್ರ ಬರೆದಿರುವುದಾಗಿ ಶಾಸಕರು ತಿಳಿಸಿದ್ದಾರೆ. ಇದನ್ನೂ ಓದಿ: ಅರಣ್ಯ ಅಧಿಕಾರಿಗಳ ಜೊತೆ ಗೂಂಡಾವರ್ತನೆ ತೋರಿದ ಮೂಡಿಗೆರೆ ಶಾಸಕ!


    ಈ ಜಾಗ ನನ್ನದು, ನಿಮ್ಮದಲ್ಲ ಎಂದು ಶಾಸಕರು ತಮ್ಮ ಬೆಂಬಲಿಗರನ್ನ ಕಳುಹಿಸಿ ನಮ್ಮ ಮನೆಯನ್ನ ಕಿತ್ತಾಕಿ, ನಮ್ಮನ್ನ ಜಮೀನಿನಿಂದ ಹೊರಹಾಕಿದ್ರು. ಅವರ ಬೆಂಬಲಿಗರು ಮಾಡುವ ದಬ್ಬಾಳಿಕೆಯ ಒಂದು ಫೋಟೋ ಕೂಡ ತೆಗೆಯಲು ಬಿಡಲಿಲ್ಲ. ನಾನು ಬಾಳೂರು ಠಾಣೆಗೆ ದೂರು ನೀಡಿದ್ದೇನೆ. ಆದ್ರೆ ಇಲ್ಲಿವರೆಗೂ ಯಾರೂ ಕ್ರಮ ಕೈಗೊಂಡಿಲ್ಲ. ನನ್ನ ಪರ ಬರುವವರ ವಿರುದ್ಧವೂ ಕೇಸ್ ಹಾಕಿಸುತ್ತಾರೆ. ಅವರು ನಮ್ಮ ಮನೆಯನ್ನ ಧ್ವಂಸ ಮಾಡಿದ್ದು ಇಂದಿಗೂ ಎಲ್ಲವೂ ಹಾಗೇ ಇದೆ. ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಶಾಸಕರೇ ಈ ರೀತಿ ದೌರ್ಜನ್ಯ ಮಾಡೋದು ಎಷ್ಟು ಸರಿ. ಆದ್ರೆ ಓರ್ವ ಶಾಸಕ ಹೀಗೆ ಮತದಾರರಿಂದಲೇ ನಂಗೇ ಜೀವ ಬೆದರಿಕೆ ಇದೆ ಎಂದು ಗೃಹ ಸಚಿವರಿಗೆ ಪತ್ರ ಬರೆದಿರೋದು ಜನಸಾಮಾನ್ಯರೆದುರು ನಗೆಪಾಟಲಿಗೀಡಾಗಿರೋದ್ರಲ್ಲಿ ಅನುಮಾನವಿಲ್ಲ ಎಂದು ಲೋಕೇಶ್ ಹೇಳಿದ್ದಾರೆ.

    ಒಟ್ಟಾರೆ, ಇತ್ತೀಚೆಗಷ್ಟೇ ಫುಲ್ ವೈಲೆಂಟಾಗಿ ಅಬ್ಬರಿಸಿದ್ದ ಶಾಸಕರು ಇದೀಗ ಸೈಲೆಂಟಾಗಿ ಗೃಹ ಸಚಿವರಿಂದ ರಕ್ಷಣೆ ಕೋರಿದ್ದಾರೆ. ಆದ್ರೆ ಅಂದು ಅವರಿಂದಲೇ ಗೆದ್ದ ಶಾಸಕರು ಇಂದು ಅವರಿಂದಲೇ ಭಯ ಎಂದು ಸರ್ಕಾರದ ರಕ್ಷಣೆ ಕೋರಿರೋದು ಮಾತ್ರ ವಿಪರ್ಯಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ರಾಜ್‍ನಾಥ್ ಸಿಂಗ್

    ಯೋಧರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ರಾಜ್‍ನಾಥ್ ಸಿಂಗ್

    – ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

    ಶ್ರೀನಗರ: ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಪಾರ್ಥಿಕ ಶರೀರಕ್ಕೆ ಕೇಂದ್ರ ಗೃಹ ಸಚಿವರಾದ ರಾಜ್‍ನಾಥ್ ಸಿಂಗ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅಂತಿಮ ನಮನ ಸಲ್ಲಿಸಲು ಸಚಿವರು ಜಮ್ಮ ಕಾಶ್ಮೀರದ ಬದ್ಗಾಮ್‍ಗೆ ಆಗಮಿಸಿದ್ದರು. ರಾಜ್‍ನಾಥ್ ಸಿಂಗ್ ಅವರಿಗೆ ಜಮ್ಮು ಕಾಶ್ಮೀರದ ಪೊಲೀಸ್ ಅಧಿಕಾರಿ ದಿಲ್‍ಬಾಗ್ ಸಿಂಗ್ ಸಾಥ್ ನೀಡಿದರು. ಈ ವೇಳೆ ಸ್ವತಃ ರಾಜ್‍ನಾಥ್ ಸಿಂಗ್ ಹಾಗೂ ದಿಲ್‍ಬಾಗ್ ಸಿಂಗ್ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದರು.

    ಕೆಲ ಕಾಲ ಮೌನಾಚರಣೆ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಅಂತಿಮ ನಮನವನ್ನು ಸಲ್ಲಿಸಿದರು. ಸೇನಾ ಗೌರವ ನೀಡಿದ ಬಳಿಕ ಯೋಧರ ಪಾರ್ಥಿವ ಶರೀರವನ್ನು ದೆಹಲಿಯ ಪಾಲಂ ವಾಯುನೆಲೆಗೆ ಕೊಂಡ್ಯೊಲಾಯಿತು. ಆ ಬಳಿಕ ಯೋಧರ ಸ್ವಗ್ರಾಮಗಳಿಗೆ ಮೃತ ಶರೀರವನ್ನು ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ.

    ಈ ದಾಳಿಯ ಪ್ರತೀಕಾರ ತೀರಿಸಿಯೇ ತೀರಿಸುತ್ತೇವೆ ಎಂದು ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ ರಾಜ್‍ನಾಥ್ ಸಿಂಗ್ ಅವರು, ವೀರ ಭೂಮಿಯಲ್ಲಿ ಹುಟ್ಟಿದ, ವೀರ ಯೋಧರ ಕಾಣಿಕೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸುಮಲತಾ ಸಹೋದರಿಯಿದ್ದಂತೆ, ನಾನು ಅವರ ಮನೆಯ ಸದಸ್ಯ: ಎಂ.ಬಿ ಪಾಟೀಲ್

    ಸುಮಲತಾ ಸಹೋದರಿಯಿದ್ದಂತೆ, ನಾನು ಅವರ ಮನೆಯ ಸದಸ್ಯ: ಎಂ.ಬಿ ಪಾಟೀಲ್

    – ರಾಜಕೀಯಕ್ಕೆ ಬಂದ್ರೆ ಖಂಡಿತ ಬೆಂಬಲ

    ಧಾರವಾಡ: ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಬಳಿಕ ಇದೀಗ ಅವರ ಕುಟುಂಬದಿಂದ ಸುಮಲತಾ ಅವರು ರಾಜಕೀಯಕ್ಕೆ ಬರಬೇಕು. ಅಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಕೂಡ ಸುಮಲತಾ ಅವರಿಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಹಾಗೂ ನಾನು ಆತ್ಮೀಯ ಹಾಗೂ ಬಹಳ ವರ್ಷದಿಂದ ಸ್ನೇಹಿತರಾಗಿದ್ದೆವು. ಅವರ ಧರ್ಮ ಪತ್ನಿ ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಿದ್ದಾರೆ. ಯಾಕಂದ್ರೆ ಮಂಡ್ಯದಲ್ಲಿ ಅವರ ಅಭಿಮಾನಿಗಳು ಬಹಳಷ್ಟು ಮಂದಿ ಇದ್ದಾರೆ ಎಂದರು.

    ಸುಮಲತಾ ಅವರು ನಮ್ಮ ಸಹೋದರಿ ಇದ್ದಂತೆ. ಅವರಿಗೂ ಅಭಿಮಾನಿಗಳು ಬಹಳಷ್ಟು ಇದ್ದಾರೆ. ಅಂಬರೀಶ್ ಅವರ ನಿಧನದ ಬಳಿಕ ಅವರ ಕುಟುಂಬದವರು ರಾಜಕೀಯಕ್ಕೆ ಬರಬೇಕೆಂಬ ಒತ್ತಾಯ ಕೇಳಿಬರುತ್ತದೆ. ಆದ್ರೆ ಸುಮಲತಾ ಅವರು ಇನ್ನೂ ಕೂಡ ತಮ್ಮ ನಿಲುವನ್ನು ವ್ಯಕ್ತಪಡಿಸಿಲ್ಲ. ಒಂದು ವೇಳೆ ಸುಮಲತಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಂದರೆ ನಮ್ಮ ಪಕ್ಷ ಖಂಡಿತವಾಗಿ ಬೆಂಬಲ ಸೂಚಿಸುತ್ತದೆ. ವೈಯಕ್ತಿಕವಾಗಿ ಹೇಳಬೇಕಂದ್ರೆ ನಾನು ಅಂಬರೀಶ್ ಕುಟುಂಬದ ಓರ್ವ ಸದಸ್ಯನಾಗಿದ್ದೇನೆ ಎಂದು ಹೇಳಿದ್ರು.

    ಇತ್ತ ಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರು ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ ಎಂಬ ಹೇಳಿಕೆ ನೀಡಿದ್ದು, ಆ ಬಳಿಕ ಮಂಡ್ಯ ಮನೆ ಮಗಳ ವಾದ ವಿವಾದ ಹುಟ್ಟಿಕೊಂಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮನೆಮಗಳು ಯಾರು ಎನ್ನುವುದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಮಂಡ್ಯದ ನಿಜವಾದ ಮನೆ ಮಗಳು ಲಕ್ಷ್ಮಿ ಅಶ್ವಿನ್ ಗೌಡ ಅಥವಾ ಸುಮಲತಾ ಎಂಬ ಚರ್ಚೆ ಎದ್ದಿದೆ. ಕಾಂಗ್ರೆಸ್‍ನಿಂದ ಸುಮಲತಾರನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಜೆಡಿಎಸ್‍ನಿಂದ ಲಕ್ಷ್ಮಿ ಅಶ್ವಿನ್ ಗೌಡ ಹೆಸರು ಚಾಲ್ತಿಗೆ ಬಂದಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಉಡುಪಿ, ಮಂಗ್ಳೂರವರು ಪೊಲೀಸ್ ಇಲಾಖೆಗೆ ಸೇರೋದಿಲ್ಲ- ಸಚಿವ ಎಂ.ಬಿ ಪಾಟೀಲ್

    ಉಡುಪಿ, ಮಂಗ್ಳೂರವರು ಪೊಲೀಸ್ ಇಲಾಖೆಗೆ ಸೇರೋದಿಲ್ಲ- ಸಚಿವ ಎಂ.ಬಿ ಪಾಟೀಲ್

    ಧಾರವಾಡ: ಉಡುಪಿ ಹಾಗೂ ಮಂಗಳೂರಿನವರು ಪೊಲೀಸ್ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ನೌಕರಿಗೆ ಸೇರೋದಿಲ್ಲ. ಬದಲಾಗಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಾರೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ನಡೆದ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಉಡುಪಿ ಮತ್ತು ಮಂಗಳೂರು ಭಾಗದವರು ಪೊಲೀಸ್ ಪೇದೆ ಅಥವಾ ಪಿಎಸ್‍ಐ ಕೋರ್ಸ್ ಗೆ ಸೇರೋದಿಲ್ಲ. ಯಾಕಂದ್ರೆ ಪೊಲೀಸ್ ಇಲಾಖೆ ಎಂಬುದು ಅತ್ಯಂತ ಕಠಿಣವಾದ ಕೆಲಸ ಅಂತ ಅವರಿಗೆ ಗೊತ್ತಿದೆ. ಹೀಗಾಗಿ ಅವರು ವ್ಯಾಪಾರ ಮಾಡಿಕೊಂಡು ಅಥವಾ ಬೇರೆ ದೇಶಕ್ಕೆ ಅಂದ್ರೆ ಗಲ್ಫ್ ರಾಷ್ಟ್ರಗಳಿಗೆ ತೆರಳಿ ಉದ್ಯೋಗ ಮಾಡುತ್ತಾರೆ ಎಂದು ಅವರು ತಿಳಿಸಿದ್ರು.

    ನಾವು ಬೇರೆ ಇತರ ಯಾವುದೇ ಇಲಾಖೆಗೆ ಹೋಲಿಕೆ ಮಾಡಿದಾಗ ಅಲ್ಲಿ ಉದ್ಯೋಗಿಗಳು ನಿರ್ಧಿಷ್ಟ ಅವಧಿಗೆ ಕೆಲಸ ಮಾಡುತ್ತಾರೆ. ಅವರಿಗೆಲ್ಲ ರಜೆಗಳು ಸಿಗುತ್ತವೆ. ನಾವು ದೀಪಾವಳಿ ಆಚರಿಸಿದ್ರೆ, ಮುಸ್ಲಿಮರು ರಂಜಾನ್ ಆಚರಿಸುತ್ತಾರೆ. ನಾವು ನಮ್ಮ ಹಬ್ಬಗಳನ್ನು ಆಚರಣೆ ಮಾಡುತ್ತಿರುತ್ತೇವೆ. ಆದ್ರೆ ಈ ಹಬ್ಬಗಳ ದಿನದಂದು ಪೊಲೀಸ್ ಇಲಾಖೆಯವರು ವಿಶೇಷವಾಗಿ ಬಹಳ ಜಾಗ್ರತೆಯಿಂದ ಕೆಲಸ ನಿರ್ವಹಿಸಬೇಕಾಗುತ್ತದೆ. ಪಾಪ ಪೊಲೀಸರಿಗೆ ಹಬ್ಬ ಇಲ್ಲ ಅಂದ್ರು.

    ಅನೇಕ ಜನರು ಅವರವರ ಕುಟುಂಬದ ಕಾರ್ಯಕ್ರಮಗಳಲ್ಲಿರುತ್ತಾರೆ. ಪೊಲೀಸ್ ನವರಿಗೂ ಕುಟುಂಬ ಇರುತ್ತದೆ. ಹೆಂಡ್ತಿ-ಮಕ್ಕಳಿರುತ್ತಾರೆ. ಹೀಗಾಗಿ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ. ಆದ್ರೆ ಅದು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಹಬ್ಬದ ದಿನಗಳಲ್ಲಿಯೇ ಗಲಭೆಕೋರರು, ದುಷ್ಕರ್ಮಿಗಳು ತಮ್ಮ ಕೆಲಸ ಮಾಡುತ್ತಾರೆ. ಹೀಗಾಗಿ ಪೊಲೀಸರಿಗೆ ಹಬ್ಬಗಳೇ ಇಲ್ಲವಾಗಿ ಹೋಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಸಚಿವ ಶಾಮನೂರು ವಿರುದ್ಧ ಎಂ.ಬಿ ಪಾಟೀಲ್ ಕಿಡಿ

    ಮಾಜಿ ಸಚಿವ ಶಾಮನೂರು ವಿರುದ್ಧ ಎಂ.ಬಿ ಪಾಟೀಲ್ ಕಿಡಿ

    ಹುಬ್ಬಳ್ಳಿ: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರು ನನ್ನ ತಂದೆಗೆ ಸಮಾನ. ನಾನು ಯಾರಿಗೂ ಹೆದರುವ ಮಾತಿಲ್ಲ. ನನ್ನ ಮೈಯಲ್ಲಿ ಹರಿಯುವುದು ನನ್ನ ತಂದೆಯ ರಕ್ತ. ನನಗೆ ಯಾರದ್ದು ಅಂಜಿಕೆ ಇಲ್ಲ. ಈ ವಿವಾದವನ್ನು ಇಲ್ಲಿಗೆ ನಿಲ್ಲಿಸಿದ್ರೆ ಉತ್ತಮ. ನನಗೆ ಎಲ್ಲವೂ ಗೊತ್ತಿದೆ. ಅವರ ಬಗ್ಗೆ ಎಲ್ಲವನ್ನೂ ಮಾತನಾಡಬೇಕಾದಿತು. ಇಲ್ಲವಾದರೆ ನಾನು ಮುಂದುವರಿಯುವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಎಚ್ಚರಿಸಿದ್ದಾರೆ.

    ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ಲಿಂಗಾಯತ ಧರ್ಮ ಒಂದು ಮೇಲು ಕೀಳು ಎಂದು ವಿಭಿನ್ನವಾಗಿದೆ. ಲಿಂಗಾಯತ ಧರ್ಮದ ಮೇಲೆ ನನ್ನ ಅಧಿಕಾರದ ಪ್ರಭಾವ ಬೀರುವುದಿಲ್ಲ ಹೇಳಿದರು.

    ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡುವವರು ಇದ್ದಾರೆ. ಅವರು ಹೋರಾಟವನ್ನ ಮುಂದುವರಿಸುತ್ತಾರೆ. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರಿಗೆ ವೀರಶೈವ ರತ್ನ ಪ್ರಶಸ್ತಿ ಕೊಟ್ಟಿದ್ದಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೆನೆ. ಶಿವಶಂಕರಪ್ಪನವರು ನಮ್ಮ ತಂದೆಯ ಸಮನಾದವರು. ಅವರು ಸ್ವಾರ್ಥಿಗಳು, ಕೀಳು ಮಟ್ಟದ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ತಮ್ಮ ಕುಟುಂಬದ ಏಳಿಗೆ ಬಗ್ಗೆ ಯೋಚನೆ ಮಾಡುತ್ತಾರೆ. ಮತ್ತೊಬ್ಬರ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಾರೆ. ಅವರು ಸ್ವಾರ್ಥ ಜೀವನ ನಡೆಸಿದವರು. ಅವರು ಇಲ್ಲಿಯವರೆಗೆ ಯಾರಿಗೆ ಏನು ಮಾಡಿದ್ದಾರೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.

    ಲಂಚದ ಹಣದಿಂದ ಲಿಂಗಾಯತ ಸಮಾವೇಶ ನಡೆಸಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬೀದರ್ ಮತ್ತು ಬೆಳಗಾವಿಯಲ್ಲಿ ಲಿಂಗಾಯತ ಹೋರಾಟ ಪ್ರಾರಂಭವಾದಾಗ ನಾನು ಇರಲೇ ಇಲ್ಲ. ಶಿವಶಂಕರಪ್ಪ ಮೊದಲು ಏನಾಗಿದ್ದರು ಎಂಬುದು ಅರ್ಥ ಮಾಡಿಕೊಳ್ಳಬೇಕು. ಮೊದಲು ಕಿರಾಣಿ ಅಂಗಡಿ ಮತ್ತು ದಲ್ಲಾಳಿ ಮಾಡಿದವರು. ಬೇರೊಬ್ಬರ ಬಿ ಫಾರ್ಮ್ ಹರಿದು ಚುನಾವಣೆ ಗೆದ್ದವರಾಗಿದ್ದಾರೆ. ಮತ್ತೊಬ್ಬರನ್ನ ತುಳಿದು ಬಾಪೂಜಿ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಇವರು ಬೇರೆಯವರು ಸೋತ ಬಗ್ಗೆ ಮಾತನಾಡುತ್ತಾರೆ. ಅವರ ಮಗ ಸೋತಾಗ ಇವರ ವೀರಶೈವ ಹೋರಾಟ ಎಲ್ಲಿ ಹೋಗಿತ್ತು. ಅವರು ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದೆ. ಈ ಬಾರಿ ಮುಸ್ಲಿಂ ಸಮುದಾಯದ ಅತಿ ಹೆಚ್ಚು ಮತ ಕಾಂಗ್ರೆಸ್‍ಗೆ ಬಂದಿರುವುದರಿಂದ ಗೆದ್ದಿದ್ದಾರೆ. ಕೀಳು ಮಟ್ಟದ ರಾಜಕಾರಣ ಮಾಡಬಾರದು. ಇವರ ಜನ್ಮ ದಾಖಲೆಗಳನ್ನ ತೆಗೆದು ನೋಡಿದ್ರೆ ಹಿಂದೂ ಲಿಂಗಾಯತ ಅಂತಾ ಇದೆ. ನೀವು ಮಾತಾನಾಡಿದ್ರೆ ಪರವಾಗಿಲ್ಲ, ನಾನು ಮಾತಾನಾಡಿದರೆ ನಿಮ್ಮ ಮರ್ಯಾದೆ ಹೋಗುತ್ತದೆ ಅಂತ ವಾಗ್ದಾಳಿ ನಡೆಸಿದ್ರು.

    ಲಿಂಗಾಯತ ಧರ್ಮದ ಬಗ್ಗೆ ಹೋರಾಟದ ಹಾದಿ ಅಲ್ಲ. ನಮ್ಮ ಮುಂದೆ ಇರುವುದು ಕಾನೂನು ಹೋರಾಟ. ಎಲ್ಲಾ ನಿರ್ಣಯಗಳನ್ನ ನಮ್ಮ ಲಿಂಗಾಯತ ಜಾಗತಿಕ ಸಮಾವೇಶ ತೆಗೆದುಕೊಳ್ಳುತ್ತದೆ. ಕೆಲವೊಂದು ಶಕ್ತಿಗಳು ಇದನ್ನ ವಿರೋಧಿಸುತ್ತವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ನಮಗೆ ಬೆಂಬಲ ನೀಡುತ್ತದೆ. ಪ್ರಧಾನಮಂತ್ರಿಗಳು ಈ ಘಟಬಂಧನ್ ಮುರಿದು ಬೀಳಬೇಕು ಎಂದು ಕಾಯ್ತಾ ಇದ್ದಾರೆ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಚ್ಚನ ಮನೇಲಿ ಉಂಡವನೇ ಜಾಣ ಅನ್ನುವಂತೆ ಸರ್ಕಾರವಿದೆ- ಶಾಸಕ ಸಿಟಿ ರವಿ

    ಹುಚ್ಚನ ಮನೇಲಿ ಉಂಡವನೇ ಜಾಣ ಅನ್ನುವಂತೆ ಸರ್ಕಾರವಿದೆ- ಶಾಸಕ ಸಿಟಿ ರವಿ

    ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಈ ಸಮ್ಮಿಶ್ರ ಸರ್ಕಾರ ಹುಚ್ಚನ ಮನೆಯಲ್ಲಿ ಉಂಡವನೇ ಜಾಣ ಅನ್ನೋ ಗಾದೆ ಮಾತಿನಂತಿದೆ. ಒಬ್ಬ ಕಂಡಕ್ಟರ್ ಬಳಿ 100 ರೂ ಹಣ ಜಾಸ್ತಿ ಇತ್ತು ಅಂದ್ರೆ ಅವನನ್ನು ಕೆಲಸದಿಂದ ವಜಾ ಮಾಡುತ್ತಾರೆ. ಆದ್ರೆ ಇಲ್ಲಿ 25 ಲಕ್ಷ ರೂ. ವಿಧಾನಸೌಧಕ್ಕೆ ಬರುತ್ತದೆ ಅಂದರೆ ಮಂತ್ರಿ ಇನ್ನೇನು ಮಾಡುತ್ತಾರೆ ಅಂತ ಶಾಸಕ ಸಿಟಿ ರವಿ ಪ್ರಶ್ನಿಸಿದ್ದಾರೆ.

    ವಿಧಾನಸೌಧದಲ್ಲಿ ಹಣ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾರೋ ತಂದ ದುಡ್ಡನ್ನು ಸಚಿವರ ತಲೆಗೆ ಯಾಕೆ ಕಟ್ಟುತ್ತೀರಿ ಅನ್ನೋದು ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಯಾಗಿದೆ. ಅಲ್ಲದೇ ಇದೆಲ್ಲ ಮಾಮೂಲಿ ಅನ್ನೋ ಮನಸ್ಥಿತಿ ಅವರದ್ದಾಗಿದೆ. ಅವರ ದೃಷ್ಟಿಯಲ್ಲಿ 25 ಲಕ್ಷ ಚಿಲ್ಲರೆ ಹಣವಾಗಿದೆ. ಹೀಗಾಗಿ ಇದು ಯಾವ ಮಹಾ ದೊಡ್ಡದು. ಅದಕ್ಕಿಂತ ಜಾಸ್ತಿ ಡೀಲ್ ಮಾಡುವ ನಾವೇ ಆರಾಮಾಗಿದ್ದೇವೆ ಅನ್ನೋ ಮನಸ್ಥಿತಿಯ ಹೇಳಿಕೆಯೂ ಆಗಿರಬಹುದು ಅಂತ ಅವರು ಹೇಳಿದ್ರು.

    25 ಲಕ್ಷ ರೂ. ಪಿಎಗೆ ಯಾರು ಸುಮ್ಮನೆ ತಂದು ಕೊಡಲ್ಲ. ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ಸಚಿವರುಗಳೇ ಹೊರತು ಪಿಎ ಅಲ್ಲ. ಯಾರಾದರೂ ಬಂದು ಸುಮ್ಮನೆ ದುಡ್ಡು ಕೊಡ್ತೀನಿ ಅಂತ ಹೇಳಿದ್ರೆ, ಅದು 10-20, 200-500 ರೂ. ಅಲ್ಲ ಬದಲಾಗಿ 25 ಲಕ್ಷ ರೂ. ಆಗಿದೆ. ಸುಮ್ಮನೆ ಅವನು ಯಾಕೆ ತಗೋತಾನೆ ಅವನು ಅಂತ ಅವರು ಪ್ರಶ್ನಿಸಿದ ಅವರು, ಇದು ಬಹಳ ಗಂಭೀರವಾಗಿರುವ ವಿಷಯವಾಗಿದೆ. ಹೀಗಾಗಿ ಸಚಿವ ಪುಟ್ಟರಂಗಶೆಟ್ಟಿಯವರು ತಕ್ಷಣ ರಾಜೀನಾಮೆ ಕೊಡಬೇಕು. ಮತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ರು. ಇದನ್ನೂ ಓದಿ: ಯಾವುದೇ ತನಿಖೆಗೂ ಸಿದ್ಧ, ನನ್ನ ವಿರುದ್ಧ ಷಡ್ಯಂತ್ರ: ಪುಟ್ಟರಂಗಶೆಟ್ಟಿ

    ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಅನ್ನೋ ಗಾದೆ ಮಾತಿದೆ. ದೊಡ್ಡೋರು ಅನ್ನೋರು ಸ್ಟಾರ್ ಹೊಟೇಲಿನಲ್ಲಿ ಡೀಲಿಂಗ್ ಮಾಡಿಕೊಂಡಿರುತ್ತಾರೆ. ಅವರ ಕೆಳಗಡೆ ಇರೋರು ಎಲ್ಲರೂ ವಿಧಾಸೌಧವನ್ನೇ ಡೀಲಿಂಗ್ ಸೆಂಟರ್ ಮಾಡಿಕೊಂಡು ಬಿಟ್ಟಿದ್ದಾರೆ ಅಂತ ಸಿಟಿ ರವಿ ಆರೋಪಿಸಿದ್ರು.

    ಸಿದ್ದರಾಮಯ್ಯ ಸರ್ಕಾರದಲ್ಲಿ ಬರೀ ಬ್ರೋಕರ್ ಗಳೇ ತುಂಬಿಕೊಂಡಿದ್ದರು ಅಂತ ಕುಮಾರಸ್ವಾಮಿ ಅವರು ಈ ಹಿಂದೆ ಹೇಳಿದ್ದರು. ಈಗ ಅದರ ಮುಂದುವರಿಕೆ ಆಗುತ್ತಿದೆ. ಈಗ ಸಿಕ್ಕಿರೋದು ಒಂದು ಸ್ಯಾಂಪಲ್ ಅಷ್ಟೇ. ಇಲ್ಲಿ ನಡೀತಾ ಇರೋದೇ ಡೀಲಿಂಗ್. ಈ ಸರ್ಕಾರದ ವಿಚಾರ ಹೇಗಿದೆ ಅಂದ್ರೆ, ಯಾರಿಗೆ ಎಷ್ಟು ದಿನ ಇರುತ್ತೇವೆ ಅನ್ನೋದು ಗೊತ್ತಿಲ್ಲದೇ ಇರುವುದರಿಂದ ಅವರಿಗೆ ಸಮಗ್ರ ರಾಜ್ಯದ ಅಭಿವೃದ್ಧಿಯ ಚಿಂತನೆಯ ಯೋಚನೆಯನ್ನೂ ಕೂಡ ಮಾಡುತ್ತಿಲ್ಲ ಅಂತ ಕಿಡಿಕಾರಿದ್ರು.

    ಪುಟ್ಟರಂಗ ಶೆಟ್ಟಿಯವರು ಟೈಪಿಸ್ಟ್ ನನ್ನು ಕಳೆದೆರಡು ದಿನಗಳಿಂದ ಕೆಲಸದಿಂದ ತೆಗೆದುಹಾಕಿದ್ದೇನೆ ಅಂತ ಹೇಳುತ್ತಾರೆ. ಆದ್ರೆ ಕೆಲಸದಿಂದ ತೆಗೆದು ಹಾಕಿದ್ರೆ ಅವರು ಯಾಕೆ ಮತ್ತೆ ಕಚೇರಿಗೆ ಬಂದ್ರು ಹಾಗೂ ಅವರ ಬಳಿ ಯಾಕೆ 25 ಲಕ್ಷ ರೂ. ಬಂತು ಅನ್ನೋ ಪ್ರಶ್ನೆಗೆ ಉತ್ತರಿಸಿದ ಶಾಸಕರು, 3-4 ದಿನಗಳ ಹಿಂದಿನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಿ. ಯಾಕಂದ್ರೆ ಇದು ನೂರಕ್ಕೆ ನೂರು ಒಬ್ಬ ಮಂತ್ರಿಗೆ ಸಂಬಂಧಿಸಿದ ಹಣವಾಗಿದೆ. ಈವಾಗ ಇವರು ಹೇಳುತ್ತಿರೋದು ಎಲ್ಲಾ ಕಾಗಕ್ಕ ಗೂಬಕ್ಕನ ಕಥೆಯಾಗಿದೆ. ನ್ಯಾಯಾಧೀಶರ ನೇತೃತ್ವದ ತನಿಖೆ ನಡೆಸಲಿ. ಪೊಲೀಸರ ತನಿಖೆಗೆ ಮುಂಚೆ ಕ್ರಮ ತೆಗೆದುಕೊಳ್ಳಬೇಕು ಅಂತ ಅವರು ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಸಿಎಂ ಬಳಿಯ ಗೃಹ ಖಾತೆ ಪಡೆದು ಪರಂಗೆ ಚಮಕ್ ಕೊಟ್ರಾ ಎಂ.ಬಿ.ಪಾಟೀಲ್!

    ಡಿಸಿಎಂ ಬಳಿಯ ಗೃಹ ಖಾತೆ ಪಡೆದು ಪರಂಗೆ ಚಮಕ್ ಕೊಟ್ರಾ ಎಂ.ಬಿ.ಪಾಟೀಲ್!

    ಬೆಂಗಳೂರು: ಸಚಿವ ಸಂಪುಟ ಪುನಾರಚನೆಯ ಬಳಿಕ ಸಚಿವ ಎಂ.ಬಿ.ಪಾಟೀಲ್ ತಮ್ಮಿಷ್ಟದ ಗೃಹ ಖಾತೆಯನ್ನು ಪಡೆಯುವಲ್ಲಿ ಯಶಸ್ವಿಯಾದರು.

    ಇಂದು ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲ ದಿನವೇ ಡಿಸಿಎಂ ಜಿ.ಪರಮೇಶ್ವರ್ ಅವರಿಗೆ ಸಣ್ಣದೊಂದು ಚಮಕ್ ನೀಡಿದಂತೆ ಕಾಣಿಸಿತು. ಈ ಮೊದಲು ಗೃಹ ಸಚಿವರಾಗಿದ್ದ ಜಿ.ಪರಮೇಶ್ವರ್ ಝೀರೋ ಟ್ರಾಫಿಕ್ ಬಳಕೆ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಈ ಬಗ್ಗೆ ಸಾರ್ವಜನಿಕರು ಸಹ ಡಿಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ರೆ, ನಿಮಗೆ ಹೊಟ್ಟೆ ಕಿಚ್ಚು, ನನಗಿರುವ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದೇನೆ ಅಂತಾ ಹೇಳಿದ್ದರು.

    ಇಂದು ನೂತನ ಗೃಹ ಸಚಿವರಾದ ಎಂ.ಬಿ.ಪಾಟೀಲ್, ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ. ಸಿಗ್ನಲ್ ಫ್ರೀ ಕೊಟ್ಟರೆ ಸಾಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

    ಎಂ.ಬಿ.ಪಾಟೀಲರು ಝೀರೋ ಟ್ರಾಫಿಕ್ ಸೌಲಭ್ಯ ತಿರಸ್ಕರಿಸುತ್ತಿದ್ದಂತೆ ಖಾತೆ ಬಿಟ್ಟು ಕೊಡಲು ಸತಾಯಿಸಿದ್ದಕ್ಕೆ ಪರಮೇಶ್ವರ್ ಅವರಿಗೆ ತಿರುಗೇಟು ಕೊಟ್ಟರಾ ಎಂಬ ಸಣ್ಣದೊಂದು ಚರ್ಚೆ ಕಾಂಗ್ರೆಸ್ ಅಂಗಳದಲ್ಲಿ ಆರಂಭವಾಗಿದೆ.

    ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಎಂ.ಬಿ.ಪಾಟೀಲರ ನಿವಾಸಕ್ಕೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎಸ್ ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಸೀಮಂತ ಕುಮಾರ ಸಿಂಗ್, ಸೇರಿ ಇತರೆ ಅಧಿಕಾರಿಗಳ ತಂಡ, ಗೃಹ ಇಲಾಖೆ ಕಾರ್ಯದರ್ಶಿ ರಜನೀಶ ಗೋಯಲ್, ಸೇರಿ ಇಲಾಖೆಯ ಎಲ್ಲ ವಿಭಾಗದ ಮುಖ್ಯ ಅಧಿಕಾರಿಗಳು ಭೇಟಿಯಾಗಿ ಶುಭ ಹಾರೈಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರಮೇಶ್ವರ್‌ ಗೃಹ ಖಾತೆ ಬದಲಾಯಿಸಿದ್ದು ನಾನಲ್ಲ- ಸಿದ್ದರಾಮಯ್ಯ

    ಪರಮೇಶ್ವರ್‌ ಗೃಹ ಖಾತೆ ಬದಲಾಯಿಸಿದ್ದು ನಾನಲ್ಲ- ಸಿದ್ದರಾಮಯ್ಯ

    ಹುಬ್ಬಳ್ಳಿ: ಜಿ.ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ ಅಂತ ಒತ್ತಾಯ ಮಾಡಿದ್ದೇ ನಾನು. ಅವರ ಗೃಹ ಖಾತೆ ಬದಲಾಯಿಸಿದ್ದು ಮಾತ್ರ ನಾನಲ್ಲ. ಅದು ಹೈಕಮಾಂಡ್ ನಿರ್ಧಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾವು ಸಮನ್ವಯ ಸಮಿತಿಯಲ್ಲಿ ತೀರ್ಮಾನ ಮಾಡಿದಂತೆ ನಡೆದುಕೊಂಡಿದ್ದೇವೆ. ಬಸವರಾಜ್ ಹೊರಟ್ಟಿ ಅವರು ಕಾಂಗ್ರೆಸ್ ಮೇಲೆ ಯಾಕೆ ಅಸಮಾಧಾನ ಹೊರಹಾಕಿದ್ದರೋ ನನಗೆ ಗೊತ್ತಿಲ್ಲ. ಅವರು ನನ್ನನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು ಸಿಎಂ ಕುಮಾರಸ್ವಾಮಿ ಅವರಿಗೆ ನೇರವಾಗಿ ಕೇಳಲಿ. ನಾವು ಸಮನ್ವಯ ಸಮಿತಿಯಲ್ಲಿ ತೀರ್ಮಾನ ಮಾಡಿದಂತೆ ನಡೆದುಕೊಂಡಿದ್ದೇವೆ ಎಂದು ತಿರುಗೇಟು ನೀಡಿದರು.

    ಇದೇ ವೇಳೆ ಜಿ.ಪರಮೇಶ್ವರ್ ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್‍ನಲ್ಲಿ ತುಳಿಯಲಾಗುತ್ತಿದೆ ಎಂಬ ಎಚ್.ಡಿ. ರೇವಣ್ಣ ಹೇಳಿಕೆಗೆ ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿ, ರೇವಣ್ಣಾ ಹಾಗೆಂದನಾ..? ಒಂದು ವೇಳೆ ರೇವಣ್ಣ ನನ್ನ ಪ್ರಶ್ನಿಸಿದ್ರೆ ಉತ್ತರ ನಾನೇ ಕೊಡ್ತೀನಿ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv