Tag: Home Delivery

  • G20 ಸಭೆ ದೆಹಲಿಯಲ್ಲಿ ಹೈ ಅಲರ್ಟ್ – ಆನ್‌ಲೈನ್ ಫುಡ್, ಅಮೆಜಾನ್, ಪ್ಲಿಪ್‌ಕಾರ್ಟ್ ಹೋಂ ಡೆಲಿವರಿ ಬಂದ್

    G20 ಸಭೆ ದೆಹಲಿಯಲ್ಲಿ ಹೈ ಅಲರ್ಟ್ – ಆನ್‌ಲೈನ್ ಫುಡ್, ಅಮೆಜಾನ್, ಪ್ಲಿಪ್‌ಕಾರ್ಟ್ ಹೋಂ ಡೆಲಿವರಿ ಬಂದ್

    ನವದೆಹಲಿ: ಸೆಪ್ಟೆಂಬರ್ 8-10 ರಂದು ದೆಹಲಿಯಲ್ಲಿ (Delhi) ವಾಣಿಜ್ಯ ಸೇವೆಗಳನ್ನು ನಿಲ್ಲಿಸಿರುವುದರಿಂದ ಕ್ಲೌಡ್ ಕಿಚನ್‌ಗಳು, ಹೋಟೆಲ್‌ಗಳು ಬಂದ್ ಇರಲಿದ್ದು ಆನ್‌ಲೈನ್ ಫುಡ್ ಡೆಲಿವರಿ (Food Delivery) ಇರುವುದಿಲ್ಲ. ಇದರ ಜೊತೆಗೆ ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಹೋಂ ಡೆಲಿವರಿ (Home Delivery) ಸರ್ವಿಸ್‌ಗಳನ್ನೂ ಅನುಮತಿಸಲಾಗುವುದಿಲ್ಲ ಎಂದು ವಿಶೇಷ ಪೊಲೀಸ್ ಆಯುಕ್ತ ಎಸ್‌ಎಸ್ ಯಾದವ್ ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಗರದಲ್ಲಿ 3 ದಿನ ಲಾಕ್‌ಡೌನ್ ಊಹಾಪೋಹವನ್ನು ತಳ್ಳಿಹಾಕಿದ್ದಾರೆ. ಜಿ20 ಶೃಂಗಸಭೆಯ ಸಮಯದಲ್ಲಿ ಯಾವುದೇ ಲಾಕ್‌ಡೌನ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ 7ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 10 ರ ಮಧ್ಯರಾತ್ರಿಯವರೆಗೆ ದೆಹಲಿಗೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.

    ದೆಹಲಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 10 ರವರೆಗೆ ಸಾರ್ವಜನಿಕ ರಜೆಯನ್ನು ಘೋಷಿಸಿದೆ. ನಗರದಲ್ಲಿನ ಅಂಗಡಿಗಳು, ವ್ಯಾಪಾರಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಸೆಪ್ಟೆಂಬರ್ 8, 9 ಮತ್ತು 10 ರಂದು ತಮ್ಮ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ವೇತನ ಸಹಿತ ರಜೆಯನ್ನು ನೀಡುವಂತೆ ಸರ್ಕಾರ ನಿರ್ದೇಶಿಸಿದೆ. ಇದನ್ನೂ ಓದಿ: ಜಿ20 ಸಭೆ – ಭದ್ರತೆಗಾಗಿ ದೆಹಲಿಯಲ್ಲಿ ಹಲವು ಮೆಟ್ರೋ ನಿಲ್ದಾಣಗಳು ಬಂದ್

    ಶೃಂಗಸಭೆಯ ಸಮಯದಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿರುತ್ತದೆ. ದೆಹಲಿಯು ವಿಶ್ವ ನಾಯಕರಿಗೆ ಆತಿಥ್ಯ ವಹಿಸಿರುವುದರಿಂದ ನಗರದಾದ್ಯಂತ ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: G 20ಯಲ್ಲಿ ಚೀನಾ ಅಧ್ಯಕ್ಷ ಭಾಗವಹಿಸದಿರುವುದು ಬೇಸರ ತಂದಿದೆ: ಜೋ ಬೈಡೆನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ಯ ಹೋಂ ಡೆಲಿವರಿಗೆ ದೆಹಲಿಯಲ್ಲಿ ಅವಕಾಶ- ಷರತ್ತು ಅನ್ವಯ

    ಮದ್ಯ ಹೋಂ ಡೆಲಿವರಿಗೆ ದೆಹಲಿಯಲ್ಲಿ ಅವಕಾಶ- ಷರತ್ತು ಅನ್ವಯ

    ನವದೆಹಲಿ: ನಗರದಲ್ಲಿ ಕೋವಿಡ್-10 ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಭಾರತೀಯ ಮದ್ಯ ಮತ್ತು ವಿದೇಶಿ ಮದ್ಯಗಳನ್ನು ಹೋಂ ಡೆಲಿವರಿ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ.

    ದೆಹಲಿಯ ಹೊಸ ಅಬಕಾರಿ ನಿಯಮಗಳ ಅನುಗುಣವಾಗಿ ಆನ್‍ಲೈನ್ ಹಾಗೂ ಪೋರ್ಟಲ್‍ಗಳ ಮೂಲಕ ಮದ್ಯವನ್ನು ಆರ್ಡರ್ ಮಾಡಿ ಹೋಂ ಡೆಲಿವರಿ ಪಡೆಯಬಹುದು ಎಂದು ತಿಳಿಸಲಾಗಿದೆ. ಈ ಹಿಂದೆ ಕೂಡ ಮದ್ಯವನ್ನು ಹೋಂ ಡೆಲಿವರಿ ನೀಡಲಾಗುತ್ತಿತ್ತು. ಆದರೆ ಎಲ್-13 ಪರವಾನಗಿ ಹೊಂದಿದವವರಿಗೆ ಮಾತ್ರ ಹೋಂ ಡೆಲಿವರಿ ಮಾಡಲಾಗುತ್ತಿತ್ತು.

    ಅದರಂತೆ ಈ ಬಾರಿ ಹೊಸ ಅಬಕಾರಿ ನಿಯಮಗಳ ಪ್ರಕಾರ ಎಲ್-14 ಪರವನಾಗಿ ಹೊಂದಿರುವವರಿಗೆ ಮಾತ್ರ ದೆಹಲಿಯಲ್ಲಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅವಕಾಶ ನೀಡಲಾಗಿದೆ. ಇದನ್ನು ಓದಿ: ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

    ಕಳೆದ ವರ್ಷ ಮೊದಲ ಬಾರಿ ಲಾಕ್‍ಡೌನ್ ಘೋಷಿಸಿದ ಬಳಿಕ ಅಂಗಡಿಗಳಲ್ಲಿ ಮದ್ಯಕೊಳ್ಳಲು ಜನ ಮುಗಿಬಿದ್ದಿದ್ದರು. ಈ ವೇಳೆ ಕೊರೊನಾ ಸೋಂಕಿನ ಹರಡುವಿಕೆ ಭೀತಿಯಿಂದ ಸುಪ್ರೀಂ ಕೋರ್ಟ್ ಮದ್ಯವನ್ನು ಹೋಂ ಡೆಲಿವರಿ ಮಾಡಲು ಸಲಹೆ ನೀಡಿತ್ತು.

  • ಮನೆ ಬಾಗಿಲಿಗೆ ಕೋಲ್ಡ್ ಬಿಯರ್ ತಂದ ಮದ್ಯದ ಕಂಪನಿ ನಿರ್ದೇಶಕ

    ಮನೆ ಬಾಗಿಲಿಗೆ ಕೋಲ್ಡ್ ಬಿಯರ್ ತಂದ ಮದ್ಯದ ಕಂಪನಿ ನಿರ್ದೇಶಕ

    – ಚಿಲ್ಡ್ ಬಿಯರ್ ನೀಡಿ ಎಣ್ಣೆ ಪ್ರಿಯರ ದಾಹ ತಣಿಸಿದ
    – ಮದ್ಯ ಪ್ರಿಯರ ಸಂತಸಕ್ಕೆ ಪಾರವೇ ಇಲ್ಲ

    ಲಂಡನ್: ಬ್ರಿಟನ್‍ನಲ್ಲಿ ಪಬ್‍ಗಳು ಬಂದ್ ಆಗಿವೆ. ಆದರೆ ಪೂರ್ವ ಲಂಡನ್‍ನ ವ್ಯಕ್ತಿಯೊಬ್ಬ ಬಿಯರ್ ಮಾರಲು ಉಪಾಯ ಹುಡುಕಿದ್ದು, ಕೆಗ್ಸ್ ಗಳನ್ನು ವ್ಯಾನ್‍ನಲ್ಲಿ ಪ್ಯಾಕ್ ಮಾಡಿಕೊಂಡು ಮನೆ ಮನೆಗೆ ಹಂಚುತ್ತಿದ್ದಾನೆ.

    ವ್ಯಾನ್ ಮೇಲೆ ‘ಟ್ಯಾಕ್ಟಿಕಲ್ ಬಿಯರ್ ರಿಸ್ಪಾನ್ಸ್ ಯುನಿಟ್’ ಎಂದು ಬರೆದುಕೊಂಡು ಫಾರೆಸ್ಟ್ ರೋಡ್ ಬ್ರೇವಿಂಗ್ ಕಂಪನಿಯ ನಿರ್ದೇಶಕ ಪೀಟರ್ ಬ್ರಾವ್ನ್ ಸ್ವತಃ ಬಿಯರ್ ಡೆಲಿವರಿ ಮಾಡಿ ಗ್ರಾಹಕರ ಎಣ್ಣೆ ದಾಹ ತಣಿಸುತ್ತಿದ್ದಾರೆ. ಬಾಕ್ಸ್, ಕ್ಯಾನ್ ಹಾಗೂ ಬಾಟಲಿಗಳ ಬದಲಿಗೆ ಬ್ರಾವ್ನ್ ಅವರು ವ್ಯಾನ್‍ನ ಟ್ಯಾಂಕ್‍ನಲ್ಲಿ ಬಿಯರ್ ತುಂಬಿಕೊಂಡು ನಲ್ಲಿ ಮೂಲಕ ಪಿಂಟ್ ಗ್ಲಾಸ್‍ಗಳಿಗೆ ತುಂಬಿ ಗ್ರಾಹಕರಿಗೆ ಕೋಲ್ಡ್ ಬಿಯರ್ ನೀಡುತ್ತಿದ್ದಾರೆ.

    ಶುಕ್ರವಾರ ಹಾಗೂ ಶನಿವಾರ ಮಾರಾಟ ಮಾಡುವಷ್ಟು ಬಿಯರ್‍ಗೆ ಇದು ಹೊಂದುವುದಿಲ್ಲ. ಆದರೆ ಆರು ವಾರಗಳ ನಂತರ ಮೊದಲ ಬಾರಿಗೆ ಗಾಜಿನ ಗ್ಲಾಸ್‍ನಲ್ಲಿ ತಣ್ಣನೆ ಬಿಯರ್ ನೋಡಿದಾಗ ಗ್ರಾಹಕರ ಮೊಗದಲ್ಲಿ ಅಘಾದ ಸಂತೋಷ ಕಾಣುತ್ತಿದೆ. ಹೀಗಾಗಿ ಗ್ರಾಹಕರಿಗೆ ಕೋಲ್ಡ್ ಬಿಯರ್ ನೀಡುವ ಮೂಲಕ ಸಂತೋಷ ಪಡಿಸುತ್ತಿದ್ದೇನೆ. ಅವರ ಮೊಗದಲ್ಲಿ ಹಿಂದೆಂದೂ ಕಾಣದ ಸಂತಸ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

    ಕೊರೊನಾ ಮಹಾಮಾರಿಯಿಂದಾಗಿ ಬ್ರಿಟನ್‍ನಲ್ಲಿ ಕಳೆದ ಎರಡು ತಿಂಗಳಿಂದ ಪಬ್ ಹಾಗೂ ಬಾರ್‍ಗಳು ಬಂದ್ ಆಗಿವೆ. ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದ್ದು, ಈ ಹಿನ್ನೆಲೆ ಪಬ್, ಬಾರ್ ಗಳು ಮುಚ್ಚಿವೆ. ಹೀಗಾಗಿ ಎಣ್ಣೆ ಪ್ರಿಯರು ಪರದಾಡುವಂತಾಗಿದೆ. ಆಹಾರ ಹಾಗೂ ಎಣ್ಣೆ ಮಾರಾಟಗಾರರು ಹೋಮ್ ಡೆಲಿವರಿ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಮೂಲಕ ಎಣ್ಣೆ ಪ್ರಿಯರನ್ನು ತಣಿಸುತ್ತಿದ್ದಾರೆ. ಆದರೆ ಪೀಟರ್ ಬ್ರಾವ್ನ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿಲ್ಡ್ ಬಿಯರ್ ಡೆಲಿವರಿ ಮಾಡುತ್ತಿದ್ದಾರೆ. ಇದನ್ನು ಕಂಡ ಮದ್ಯ ಪ್ರಿಯರು ಮುಖ ಅರಳಿಸಿಕೊಂಡು ಕುಡಿದು ಸಂತಸ ಪಡುತ್ತಿದ್ದಾರೆ.

  • ಮದ್ಯ ಹೋಂ ಡೆಲಿವರಿಗೆ ಸುಪ್ರೀಂ ಸಲಹೆ

    ಮದ್ಯ ಹೋಂ ಡೆಲಿವರಿಗೆ ಸುಪ್ರೀಂ ಸಲಹೆ

    – ಮದ್ಯ ಮಾರಾಟಕ್ಕೆ ತಡೆ ನೀಡಲು ಸಾಧ್ಯವೇ ಇಲ್ಲ: ಸುಪ್ರೀಂಕೋರ್ಟ್

    ನವದೆಹಲಿ: ದೇಶಾದ್ಯಂತದ ಮದ್ಯದಂಗಡಿಗಳಲ್ಲಿ ಜನಸಂದಣಿ ಕಡಿಮೆಗೊಳಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಮಯವನ್ನು ಜಾರಿಗೊಳಿಸಲು ಹೋಮ್ ಡೆಲಿವರಿಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

    ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಕೆಲ ರಾಜ್ಯಗಳು ಸುಪ್ರೀಂ ಕೋರ್ಟಿಗೆ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಸಲ್ಲಿಸಿದ್ದವು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್.ಗವಾಯಿ ಅವರ ನೇತೃತ್ವದ ನ್ಯಾಯ ಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣವನ್ನು ಆಲಿಸಿದೆ. ಇದನ್ನೂ ಓದಿ: ಮದ್ಯ ಡೆಲಿವರಿಗೆ ಝೊಮ್ಯಾಟೊ ಪ್ಲ್ಯಾನ್

    “ಮದ್ಯದಂಗಡಿ ಬಂದ್ ಮಾಡುವ ಕುರಿತು ನಾವು ಯಾವುದೇ ಆದೇಶ ನೀಡುವುದಿಲ್ಲ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ರಾಜ್ಯ ಸರ್ಕಾರಗಳು ಮದ್ಯವನ್ನು ಹೋಮ್ ಡೆಲಿವರಿ ಮೂಲಕ ಗ್ರಾಹಕರಿಗೆ ತಲುಪಿಸಬಹುದು” ಎಂದು ನ್ಯಾಯ ಪೀಠವು ಅಭಿಪ್ರಾಯಪಟ್ಟಿದೆ.

    “ಮದ್ಯವನ್ನು ಹೋಮ್ ಡೆಲಿವರಿ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕೆಂದು ನೀವು ಬಯಸುತ್ತೀರಿ” ಎಂದು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅರ್ಜಿರಾರರ ಪರ ವಕೀಲ ದೀಪಕ್ ಸಾಯಿ ಅವರಿಗೆ ಪ್ರಶ್ನಿಸಿದರು.

    “ಮದ್ಯ ಮಾರಾಟದಿಂದಾಗಿ ಸಾಮಾನ್ಯ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಎಂದು ಬಯಸುತ್ತೇನೆ. ಗೃಹ ಸಚಿವಾಲಯವು ಮದ್ಯ ಮಾರಾಟದ ಬಗ್ಗೆ ರಾಜ್ಯಗಳಿಗೆ ಸ್ಪಷ್ಟೀಕರಣವನ್ನು ನೀಡಬೇಕು” ಎಂದು ವಕೀಲ ದೀಪಕ್ ಸಾಯಿ ವಾದಿಸಿದರು.

    ಆದರೆ ಅರ್ಜಿಯನ್ನು ವಜಾಗೊಳಿಸಿದ ನ್ಯಾಯ ಪೀಠವು  ಮದ್ಯ ಮಾರಾಟಕ್ಕೆ ತಡೆ ನೀಡಲು ಸಾಧ್ಯವೇ ಇಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ಮದ್ಯದಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಜನಸಂದಣಿ ಕಡಿಮೆಗೊಳಿಸಲು ಹೋಮ್ ಡೆಲಿವರಿ ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದೆ.

    ಆಹಾರ ಪದಾರ್ಥ ಡೆಲಿವರಿ ಮಾಡುತ್ತಿದ್ದ ಝೊಮ್ಯಾಟೊ ಕಂಪನಿ ಲಾಕ್‍ಡೌನ್ ಹಿನ್ನೆಲೆ ದಿನಸಿ ಪದಾರ್ಥಗಳನ್ನೂ ಡೆಲಿವರಿ ಮಾಡುತ್ತಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮದ್ಯವನ್ನೂ ಡೆಲಿವರಿ ಮಾಡಲು ನಿರ್ಧರಿಸಿದೆ. ಹೀಗಾಗಿ ಮದ್ಯವನ್ನು ಹೋಮ್ ಡಿಲೆವರಿ ಮೂಲಕ ಗ್ರಾಹಕರಿಗೆ ತಲುಪಿಸುವ ಚಿಂತನೆ ನಡೆಸಿದೆ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಮದ್ಯವನ್ನು ಹೋಮ್ ಡಿಲೆವರಿ ಮೂಲಕ ಮಾರಬಹುದು ಎಂದು ಸಲಹೆ ನೀಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

  • ಮದ್ಯಪ್ರಿಯರಿಗೆ ಗುಡ್ ನ್ಯೂಸ್ – ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಎಣ್ಣೆ!

    ಮದ್ಯಪ್ರಿಯರಿಗೆ ಗುಡ್ ನ್ಯೂಸ್ – ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಎಣ್ಣೆ!

    ಬೆಂಗಳೂರು: ಇನ್ನು ಮುಂದೆ ಎಣ್ಣೆ ಹೊಡೆಯೋದಕ್ಕೆ ಬಾರ್ ಗೆ ಹೋಗಬೇಕಿಲ್ಲ. ಯಾಕೆಂದರೆ ಮೊಬೈಲ್ ಆನ್ ಮಾಡಿ ಯಾವ ಎಣ್ಣೆ ಬೇಕು, ಎಷ್ಟು ಬೇಕು ಅಂತ ಬುಕ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಎಣ್ಣೆಯ ಪೆಟ್ಟಿಗೆ ಮನೆ ಬಾಗಿಲಲ್ಲಿ ಇರುತ್ತದೆ.

    ಆನ್‍ಲೈನ್‍ನಲ್ಲೇ ಫುಡ್ ಆರ್ಡರ್ ಮಾಡಿ ಹೋಂ ಡೆಲಿವರಿ ಮಾಡುವ ಸ್ವಿಗ್ಗಿ, ಜೋಮೋಟೋ ರೀತಿಯಲ್ಲೇ ಕರ್ನಾಟಕದಲ್ಲಿ ಆನ್‍ಲೈನ್‍ನಲ್ಲೇ ಎಣ್ಣೆ ಆರ್ಡರ್ ಮತ್ತು ಹೋಂ ಡೆಲಿವರಿ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.

    `ಆನ್‍ಲೈನ್‍ನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಡಬೇಕು ಅನ್ನೋ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ನಾವು ಅಬಕಾರಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೊತೆಗೆ ಇನ್ನಷ್ಟೇ ಚರ್ಚೆ ಮಾಡಬೇಕಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಯೊಬ್ಬರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಆನ್‍ಲೈನ್ ಮದ್ಯ ಮಾರಾಟ ಅವಕಾಶ ಕೊಡಬೇಕು ಅನ್ನೋದಕ್ಕೆ ಕೊಡುತ್ತಿರುವ ಕಾರಣಗಳು ಹೀಗಿವೆ:
    ವರ್ಷದಿಂದ ವರ್ಷಕ್ಕೆ ಬೆಂಗಳೂರಲ್ಲಿ ಕುಡಿದು ವಾಹನ ಚಲಾಯಿಸುವ ಕೇಸ್‍ಗಳು ಹೆಚ್ಚಾಗುತ್ತಿವೆ. ಇದೇ ವರ್ಷದ ಸೆಪ್ಟೆಂಬರ್  ವರೆಗೆ ಬರೋಬ್ಬರಿ 33,234 ಕೇಸ್‍ಗಳು ದಾಖಲಾಗಿದ್ದು, ಅಪಘಾತದಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಿಕ್ಕರ್ ಹೋಂ ಡೆಲಿವರಿ ಆದರೆ ಆಗ ಡ್ರಂಕ್ ಅಂಡ್ ಡ್ರೈವ್ ಕೇಸ್‍ಗೆ ಬ್ರೇಕ್ ಬೀಳುತ್ತದೆ. ಅಪಘಾತಗಳು ಕೂಡ ಕಡಿಮೆಯಾಗುತ್ತವೆ ಅನ್ನೋ ವಾದವಿದೆ.

    ಆನ್‍ಲೈನ್ ಮಾರಾಟದಿಂದ ಮದ್ಯ ಮಾರಾಟ ಹೆಚ್ಚಳವಾಗಿ ಸರ್ಕಾರದ ಬೊಕ್ಕಸಕ್ಕೆ 1500 ರಿಂದ 2,000 ಕೋಟಿ ರೂಪಾಯಿವರೆಗೆ ಹೆಚ್ಚುವರಿ ಆದಾಯ ಬರುವ ಸಾಧ್ಯತೆನೂ ಇದೆ. ಡಿಸ್ಕೌಂಟ್ ರೇಟ್ ಮತ್ತು ಕ್ಯಾಶ್ ಬ್ಯಾಕ್ ಆಫರ್  ಗಳಿಂದ ಗ್ರಾಹಕರಿಗೂ ಕಡಿಮೆ ದುಡ್ಡಿಗೆ ಮದ್ಯ ಸಿಗಲಿದೆ ಎಂದು ಹೇಳಲಾಗುತ್ತಿದೆ.

    ಈಗಾಗಲೇ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಎರಡು ಸುತ್ತಿನ ಚರ್ಚೆಯನ್ನೂ ನಡೆಸಿದ್ದು, ಇನ್ನೊಂದು ಸುತ್ತಿನ ಸಮಾಲೋಚನೆ ಬಾಕಿ ಇದೆ. ಬಳಿಕ ಆ ಪ್ರಸ್ತಾಪನೆಯನ್ನು ಸಿಎಂ ಕುಮಾರಸ್ವಾಮಿ ಮುಂದೆ ಇಡಲಾಗುತ್ತದೆ. ಇದೇ ರೀತಿ ಲಿಕ್ಕರ್ ಹೋಂ ಡೆಲಿವರಿಗೆ ಮುಂದಾಗಿದ್ದ ಮಹಾರಾಷ್ಟ್ರ ಸರ್ಕಾರ ಕಡೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ನಮ್ಮ ರಾಜ್ಯದಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದಲ್ಲೇ ಫಸ್ಟ್.. ಮಹಾರಾಷ್ಟ್ರದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!

    ದೇಶದಲ್ಲೇ ಫಸ್ಟ್.. ಮಹಾರಾಷ್ಟ್ರದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!

    ಮುಂಬೈ: ಮದ್ಯಪ್ರಿಯರಿಗೆ ಮಹಾರಾಷ್ಟ್ರ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಸರ್ಕಾರ ಮದ್ಯವನ್ನ ಮನೆ ಬಾಗಿಲಿಗೇ ತಲುಪಿಸಲು ಹೊಸ ನೀತಿ ತರಲು ಮುಂದಾಗಿದೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾರಾಷ್ಟ್ರ ಅಬಕಾರಿ ಸಚಿವ ಚಂದ್ರಶೇಕರ್ ಬಾವಾಂಕುಲೆ, ಮದ್ಯ ಮಾರಾಟಗಾರರಿಗೆ ಇದು ಶಾಕ್ ಕೊಡುವ ಸಂಗತಿ. ಇಡೀ ದೇಶದಲ್ಲೇ ಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ಮದ್ಯವನ್ನ ಮನೆ ಬಾಗಿಲಿಗೆ ತಲುಪಿಸುವ ಹೊಸ ನೀತಿಯನ್ನ ಜಾರಿಗೊಳಿಸಲಿದೆ ಎಂದು ಹೇಳಿದ್ದಾರೆ.

    ಕುಡಿದ ಮತ್ತಿನಲ್ಲಿ ವಾಹನ ಚಾಲನೆಯಿಂದ ಆಗುವ ಅಪಘಾತಗಳು ಹೆಚ್ಚಾಗುತ್ತಿದ್ದು, ಇದರಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸಿದೆ. ಇದನ್ನ ತಡೆಯಲು ಸರ್ಕಾರವು ಸಾರ್ವಜನಿಕರು ಆನ್‍ಲೈನ್ ನಲ್ಲಿ ಹೇಗೆ ಹಣ್ಣು-ತರಕಾರಿಗಳನ್ನ ಖರೀದಿ ಮಾಡುತ್ತಾರೋ ಅದೇ ರೀತಿಯಾಗಿ ಇ- ಪೋರ್ಟಲ್ ಮೂಲಕ ಈ ಸೇವೆಯನ್ನ ಪಡೆಯಬಹುದು ಎಂದು ಬಾವಾಂಕುಲೆ ಹೇಳಿದ್ದಾರೆ. ಇದನ್ನು ಓದಿ:  ಖಾವಿ ಧರಿಸಿ ಮದ್ಯ ಕುಡಿಯಲು ಬಂದ ವ್ಯಕ್ತಿಗೆ ಬಾರಿನಲ್ಲೇ ಹಲ್ಲೆ

    ಆನ್‍ಲೈನ್ ನಲ್ಲಿ ಖರೀದಿ ಮಾಡುವ ವ್ಯಕ್ತಿಯ ವಯಸ್ಸನ್ನು ತಿಳಿದುಕೊಳ್ಳಲು, ಗ್ರಾಹಕರ ಆಧಾರ್ ನಂಬರ್ ಅನ್ನು ಪಡೆದುಕೊಳ್ಳಲಾಗುವುದು. ಅಕ್ರಮ ಮದ್ಯ ಸಾಗಾಣಿಕೆಯನ್ನ ತಡೆಯಲು ಸರ್ಕಾರವೂ ಎಲ್ಲಾ ಮದ್ಯ ಬಾಟಲಿಗಳ ಮೇಲೆ ಟ್ಯಾಗ್ ಗಳನ್ನ ಅಳವಡಿಸಲಾಗುತ್ತದೆ. ಈ ಟ್ಯಾಗ್‍ನ ಸಹಾಯದಿಂದ ಉತ್ಪದನೆಯ ದಿನಾಂಕ, ಸ್ಥಳ ಮತ್ತು ಮಾರಾಟದ ಮಾಹಿತಿಯನ್ನ ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ. ಇದನ್ನು ಓದಿ: ಕುಡುಕರ ಜೇಬಿಗೆ ಕತ್ತರಿ- ಸಿಎಲ್ ಬಾರ್ ಗಳಲ್ಲಿ ದುಪ್ಪಟ್ಟು ಹಣ ವಸೂಲಿ

    ಸರ್ಕಾರದ ಈ ನಡೆಯನ್ನ ಮೆಚ್ಚಿದ ಹೈಕೋರ್ಟ್ ವಕೀಲರಾದ ಶ್ರೀರಾರ್, “ಸರ್ಕಾರದ ಈ ಕಾನೂನಿಂದ ಅಪಘಾತ ತಡೆ, ಜನರ ಸಮಯವನ್ನ ಉಳಿಸಿದಲ್ಲದೇ ಸಾಕಷ್ಟು ಯುವ ಜನತೆಗೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ” ಎಂದು ಹೇಳಿದ್ದಾರೆ.

    ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ(ಎನ್‍ಸಿಆರ್‍ಬಿ) ಪ್ರಕಾರ 2015 ರಲ್ಲಿ ಒಟ್ಟು ದಾಖಲಾದ 4.64 ಲಕ್ಷ ಅಪಘಾತಗಳಲ್ಲಿ ಪೈಕಿ 1.5% ಅಪಘಾತಗಳಿಗೆ ಮದ್ಯಸೇವನೆಯೇ ಕಾರಣವಾಗಿದೆ. ಒಟ್ಟು 6,295 ಮಂದಿ ಗಾಯಗೊಂಡಿದ್ದರೆ 2,958 ಮಂದಿ ಮೃತಪಟ್ಟಿದ್ದರು. ಇದನ್ನು ಓದಿ: ಗೋವಾದಲ್ಲಿ ಸಾರ್ವಜನಿಕವಾಗಿ ಮದ್ಯಸೇವನೆ ಮಾಡಿದ್ರೆ 2,500 ರೂ. ದಂಡ: ಪರಿಕ್ಕರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv