Tag: Home Construction

  • ವಕೀಲ, ಮಹಿಳೆ ಮಧ್ಯೆ ಬೀದಿ ಕಾಳಗ

    ವಕೀಲ, ಮಹಿಳೆ ಮಧ್ಯೆ ಬೀದಿ ಕಾಳಗ

    ಮಡಿಕೇರಿ: ಮಹಿಳೆ ಮತ್ತು ವಕೀಲ ಹೊಡೆದಾಡಿಕೊಂಡ ಘಟನೆ ಘಟನೆ ಕುಶಾಲನಗರದ (Kushalnagar) ಪಟೇಲ್ ಬಡಾವಣೆಯಲ್ಲಿ (Patel Badavane) ನಡೆದಿದೆ.

    ಮನೆ ನಿರ್ಮಾಣ (Home Construction) ಮಾಡುವಾಗ ಸ್ವಲ್ಪ ಜಾಗಬಿಟ್ಟು ನಿರ್ಮಿಸುವಂತೆ ಮಹಿಳೆಗೆ ವಕೀಲ (Lawyer) ಸಂತೋಷ್ ಕುಮಾರ್ ಸೂಚಿಸಿದ್ದರು. ಆದರೆ ಸ್ವಲ್ಪವೂ ಜಾಗ ಬಿಡದೇ ಮಹಿಳೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದಕ್ಕೆ ನಡೆದ ಜಗಳ ಬಡಿದಾಟದಲ್ಲಿ ಅಂತ್ಯಗೊಂಡಿದೆ. ಇದನ್ನೂ ಓದಿ: ಕಟ್ಟಡದ ಮೇಲಿನಿಂದ ಬಿದ್ದು ಮಗು ಸಾವು

    ಹಲವು ದಿನಗಳಿಂದ ಮನೆಯ ಜಾಗದ ವಿಷಯವಾಗಿ ಎರಡು ಕುಟುಂಬದ ನಡುವೆ ಜಗಳ ನಡೆಯುತ್ತಿತ್ತು. ಶನಿವಾರ ಜಗಳ ಮತ್ತಷ್ಟು ತಾರಕಕ್ಕೆ ಏರಿದೆ. ವಕೀಲ ಸಂತೋಷ್ ಮಹಿಳೆಗೆ ಕೆಟ್ಟದಾಗಿ ನಿಂದಿಸಿದ್ದಾನೆ. ಈ ವೇಳೆ ವಕೀಲನಿಗೆ ಮಹಿಳೆ ಸುಮಿತ್ರಾ ಕಪಾಳಮೋಕ್ಷ ಮಾಡಿದ್ದಾಳೆ. ಮಹಿಳೆ ಹೊಡೆಯುತ್ತಿದ್ದಂತೆ ವಕೀಲ ತೀವ್ರ ಹಲ್ಲೆ ನಡೆಸಿದ್ದಾನೆ.

    ಇಬ್ಬರ ಜಗಳ ಜೋರಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ತೆರಳಿ ಕಿತ್ತಾಟ ನಿಲ್ಲಿಸಿದ್ದಾರೆ. ಗಾಯಗೊಂಡಿರುವ ಸುಮಿತ್ರಾರನ್ನು ಮಡಿಕೇರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ವಕೀಲ ಮತ್ತು ಆತನ ಪತ್ನಿ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಇದನ್ನೂ ಓದಿ: ಕರ್ತವ್ಯನಿರತ ಬಸ್ ಕಂಡಕ್ಟರ್‌ಗೆ ಎದೆನೋವು- ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಸಿಗದೆ ನರಳಾಟ

  • ಸುವರ್ಣಸೌಧದಲ್ಲಿ ಶಾವಿಗೆ ಒಣಹಾಕಿದ್ದ ಮಹಿಳೆ ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗುವಂತೆ ಆದೇಶ

    ಸುವರ್ಣಸೌಧದಲ್ಲಿ ಶಾವಿಗೆ ಒಣಹಾಕಿದ್ದ ಮಹಿಳೆ ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗುವಂತೆ ಆದೇಶ

    ಬೆಳಗಾವಿ: ಸುವರ್ಣಸೌಧ ಮುಂಭಾಗದಲ್ಲಿ ಶಾವಿಗೆ ಒಣಹಾಕಿದ್ದ ಮಹಿಳೆಯನ್ನು ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗಲು ನಿರ್ದೇಶನ ನೀಡಲಾಗಿದೆ ಎಂದು ನಗರದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾವಿಗೆ ಒಣಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ವಹಣೆ ಒದಗಿಸಿಕೊಂಡಿದ್ದ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿತ್ತು. ಗುತ್ತಿಗೆದಾರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮಲ್ಲಮ್ಮ ಸುವರ್ಣಸೌಧದಲ್ಲಿ ಶಾವಿಗೆ ಒಣಹಾಕಿದ್ದರು. ಆದರೆ ಶಾವಿಗೆ ಒಣಹಾಕಿದ್ದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿರಲಿಲ್ಲ, ಬೇರೆ ಸ್ಥಳಕ್ಕೆ ಕೆಲಸ ಮಾಡಲು ನಿಯೋಜಿಸಲಾಗಿತ್ತಷ್ಟೇ ಎಂದರು.

    ಇದಲ್ಲದೇ ನಾನು ಕೂಡ ಸುವರ್ಣಸೌಧಕ್ಕೆ ಭೇಟಿ ನೀಡಿ ಸಂಬಳ ಕಟ್ ಮಾಡಬಾರದು. ಯಾರನ್ನು ಕೆಲಸದಿಂದ ತೆಗೆದುಹಾಕಬಾರದು ಅಂತಾ ಹೇಳಿದ್ದೆ. ಇನ್ನೂ ಬೇರೆ ಸ್ಥಳಕ್ಕೆ ಕೆಲಸ ಮಾಡಲು ಮಲ್ಲಮ್ಮಗೆ ತಿಳಿಸಲಾಗಿತ್ತು. ಆದರೆ ಬೇರೆ ಸ್ಥಳದಲ್ಲಿ ಕೆಲಸ ಮಾಡೋದಕ್ಕೆ ಮಹಿಳೆಗೆ ದೂರ ಆಗುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತೆ ಅಂತಾ ಕೆಲ ಮಾಧ್ಯಮದವರು ಗಮನಕ್ಕೆ ತಂದರು. ಹೀಗಾಗಿ ತಕ್ಷಣದಿಂದಲೇ ಸುವರ್ಣ ಸೌಧದಲ್ಲಿ ಕೆಲಸ ಮಾಡಲು ನಿರ್ದೇಶನ ನೀಡಲಾಗಿದೆ. ಇಂದು ಅಥವಾ ನಾಳೆ ಕೆಲಸಕ್ಕೆ ಹಾಜರಾಗಬಹುದು. ಅವರಿಗೆ ಯಾವುದೇ ಸಂಬಳ ಕಟ್ ಮಾಡುವುದಿಲ್ಲ ಎಂದರು.

    ಮನೆ ನಿರ್ಮಾಣ ವಿಚಾರವಾಗಿ ಮಾತನಾಡಿ, ಮೂಲತಃ ಖಾನಾಪೂರದ ತಾಲೂಕಿನ ಮಲ್ಲಮ್ಮಳಿಗೆ ಪತಿ ಮರಣ ಹೊಂದಿದ್ದಾರೆ. ಹೀಗಾಗಿ ಸದ್ಯ ತಮ್ಮ ಸಂಬಂಧಿಕರ ಮನೆಯಾಗಿರುವ ಕೊಂಡಸಕೊಪ್ಪ ಗ್ರಾಮದಲ್ಲಿ ಇದ್ದಾರೆ. ಮಲ್ಲಮ್ಮಗೆ ಮನೆ ಕೊಡೊದಕ್ಕೆ ಬೇಡಿಕೆ ಬಂದಿದೆ. ಈ ಬಗ್ಗೆ ಜಿಪಂ ಸಿಇಓ ಜೊತೆಗೆ ಚರ್ಚೆ ಮಾಡಿದ್ದೇನೆ. ಬಸ್ತವಾಡ ಗ್ರಾಮದಲ್ಲಿ ಜಾಗ ಇದೆ. ಅವರು ಒಪ್ಪಿದರೆ ಜಾಗ ಕೊಡುತ್ತೇವೆ. ಬಸವ ವಸತಿ ಇಲ್ಲವೇ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಕೊಡುತ್ತೇವೆ ಎಂದರು.

  • ಸರ್ಕಾರಕ್ಕೆ ಹಣ ನೀಡಲ್ಲ, ನಕ್ಷೆಯಂತೆ ಕೊಡಗು ಸಂತ್ರಸ್ತರಿಗೆ ಮನೆ : ಸುಧಾಮೂರ್ತಿ

    ಸರ್ಕಾರಕ್ಕೆ ಹಣ ನೀಡಲ್ಲ, ನಕ್ಷೆಯಂತೆ ಕೊಡಗು ಸಂತ್ರಸ್ತರಿಗೆ ಮನೆ : ಸುಧಾಮೂರ್ತಿ

    ಮಂಡ್ಯ: ಸರ್ಕಾರ ನೀಡಿದ ನಕ್ಷೆಯಂತೆ ಕೊಡಗು ಸಂತ್ರಸ್ತರಿಗೆ ನಮ್ಮ ತಂಡ ಮನೆ ಕಟ್ಟಿಕೊಡಲಿದೆ. ಅದಕ್ಕಾಗಿ ನಮ್ಮ ಸಂಸ್ಥೆ ಈಗಾಗಲೇ 25 ಕೋಟಿ ರೂ. ತೆಗೆದಿರಿಸಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೇಳಿದ್ದಾರೆ.

    ಮಂಡ್ಯದ ಮೇಲುಕೋಟೆಯಲ್ಲಿ ಮಾತನಾಡಿದ ಅವರು, ದಸರಾ ಉದ್ಘಾಟನೆ ವೇಳೆ ಕೊಡಗು ಸಂತ್ರಸ್ತರಿಗೆ ನೆರವು ನೀಡಿ ಎಂದು ಸರ್ಕಾರ ನಮ್ಮನ್ನ ಕೇಳಿರಲಿಲ್ಲ. ಮನುಷ್ಯನ ದೇಹದಲ್ಲಿ ಒಂದು ಭಾಗಕ್ಕೆ ನೋವಾದರೆ ಇನ್ನೊಂದು ಭಾಗಕ್ಕೆ ನೋವಾದ ಹಾಗೆಯೇ. ಕೊಡಗು ನಮ್ಮ ಕರ್ನಾಟಕದ ಒಂದು ಭಾಗ. ಕೊಡಗಿಗೆ ಕಷ್ಟ ಬಂದಾಗ ನಮ್ಮ ಸಂಸ್ಥೆಯೇ ಸಹಾಯ ಮಾಡುವ ನೀಡುವ ತೀರ್ಮಾನ ಮಾಡಿತ್ತು ಎಂದರು.

    ಇದೇ ವೇಳೆ ಕೊಡುಗೆ ಪ್ರವಾಹಕ್ಕೆ ನೆರವು ನೀಡಿ ಎಂದು ಯಾವ ಮಂತ್ರಿಯಾಗಲೀ ಕೇಳಿರಲಿಲ್ಲ. ಕನ್ನಡಿಗರಿಗಾಗಿ ಏನಾದರು ಮಾಡಬೇಕೆಂದು 25 ಕೋಟಿ ರೂ. ನೀಡುವ ತೀರ್ಮಾನ ನಮ್ಮ ಸಂಸ್ಥೆ ಮಾಡಿತ್ತು. ನಮ್ಮ ಸಂಸ್ಥೆಯ ಮೂಲಕ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಯೋಚನೆ ಮಾಡಿದ್ದೇವು. ಬಳಿಕ ಈ ಬಗ್ಗೆ ಸರ್ಕಾರಕ್ಕೆ ಸಂತ್ರಸ್ತರಿಗೆ ಮನೆಕಟ್ಟಿಕೊಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾಗಿ ಹೇಳಿದರು.

    ಈ ಹಿಂದೆಯೂ ಕೂಡ ಉತ್ತರ ಕರ್ನಾಟಕದ ಪ್ರವಾಹ ಹಾಗೂ ಆಂಧ್ರಪ್ರದೇಶದ ಪ್ರವಾಹದ ವೇಳೆ ನಮ್ಮ ಸಂಸ್ಥೆಯಿಂದ ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ ಆ ವೇಳೆ ನಾವು ಕೆಲ ಸಮಸ್ಯೆಗಳನ್ನು ಎದುರಿಸಿದ್ದೇವೆ. ಅದ್ದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

    ಸರ್ಕಾರ ಮನೆ ನಿರ್ಮಾಣಕ್ಕೆ ಸರಿಯಾದ ಜಾಗ ತೋರಿಸಬೇಕು, ವಿದ್ಯುತ್ ಹಾಗೂ ಲೇಬರ್ ಕ್ಯಾಂಪಿಗೆ ಜಾಗ ನೀಡಬೇಕೆಂದು ಮನವಿ ಮಾಡಿದ್ದೇವೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಸರ್ಕಾರವೇ ನೀಡಿದ ನಕ್ಷೆಯಂತೆ ನಮ್ಮ ತಂಡ ಮನೆಗಳನ್ನ ಕಟ್ಟಿಕೊಡಲಿದೆ. ನಾವು ಸರ್ಕಾರಕ್ಕೆ ಹಣ ನೀಡುವುದಿಲ್ಲ. ನಾವೇ ಮನೆ ಕಟ್ಟಿಸಿಕೊಡುತ್ತೇವೆ. ಸರ್ಕಾರ ಜಾಗ ತೋರಿಸಿದ ಮರುದಿನವೇ ನಮ್ಮ ತಂಡ ಕೆಲಸ ಶುರುಮಾಡಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv