Tag: Holi

  • ಹೋಳಿ ಸಂಭ್ರಮಕ್ಕೂ ತಟ್ಟಿದ ಕೊರೊನಾ ವೈರಸ್ ಭೀತಿ

    ಹೋಳಿ ಸಂಭ್ರಮಕ್ಕೂ ತಟ್ಟಿದ ಕೊರೊನಾ ವೈರಸ್ ಭೀತಿ

    ಬೆಂಗಳೂರು: ಇಡೀ ವಿಶ್ವದೆಲ್ಲೆಡೆ ಮಹಾಮಾರಿ ಕೊರೊನಾ ವೈರಸ್ ಭೀತಿ ಆತಂಕ ಸೃಷ್ಟಿಸಿದೆ. ಈ ಮಹಾಮಾರಿ ಭಾರತಕ್ಕೂ ವಕ್ಕರಿಸಿದ್ದು, ಎಲ್ಲಾ ಕಡೆ ಆತಂಕದ ಛಾಯೆ ಮೂಡಿಸಿದೆ. ಸಿಲಿಕಾನ್ ಸಿಟಿಯ ಮಂದಿ ಕೂಡ ಕೊರೊನಾ ಅಂದರೆ ಬೆಚ್ಚಿ ಬೀಳುವಂತೆ ಮಾಡಿದೆ. ಜೊತೆಗೆ ಹೋಳಿ ಹಬ್ಬದ ಸಂಭ್ರಮಕ್ಕೂ ಕೊರೊನಾ ಬ್ರೇಕ್ ಹಾಕಿದೆ.

    ಸದ್ಯ ಕೊರೊನಾ ಎಲ್ಲಾ ಕಡೆ ಕೇಳಿಬರುತ್ತಿರೋ ಭಯಾನಕ ಶಬ್ಧವಾಗಿದೆ. ಈ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಈಗ ಭಾರತಕ್ಕೂ ಕಾಳಿಟ್ಟಿದ್ದು, ದಿನೇ ದಿನೇ ವೈರಸ್ ಪೀಡಿತರ ಸಂಖ್ಯೆ ಹೆಚ್ಚಾಗ್ತಿದೆ.

    ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಡಿ, ಜನರ ಗುಂಪಿನಲ್ಲಿ ಯಾರಿಗಾದರೂ ಈ ವೈರಸ್ ಇದ್ದರೆ ಅದು ಹರಡತ್ತೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊಟ್ಟಿದೆ. ಈ ಕೊರೊನಾ ವೈರಸ್ ಭೀತಿ ಹೋಳಿ ಹಬ್ಬಕ್ಕೂ ತಟ್ಟಿದ್ದು, ಸಾರ್ವಜನಿಕರು ಅದ್ಧೂರಿಯಾಗಿ ಹೋಳಿಯನ್ನ ಆಚಾರಿಸುತ್ತಿಲ್ಲ. ಅದರಲ್ಲೂ ಹೋಳಿ ಹಬ್ಬಕ್ಕಾಗಿಯೇ ಕಾದಿರುತ್ತಿದ್ದ ಕಾಲೇಜಿನ ವಿದ್ಯಾರ್ಥಿಗಳು ಕೂಡ ಕೊರೊನಾ ಭೀತಿಯಿಂದ ಹೋಳಿ ಹಬ್ಬ ಮಾಡುತ್ತಿಲ್ಲ. ಹೋಳಿ ಹಬ್ಬಕ್ಕಿಂತ ಆರೋಗ್ಯವೇ ಮುಖ್ಯ. ಹೋಳಿಯನ್ನ ಬೇಕಾದ್ರೇ ಮುಂದಿನ ವರ್ಷ ಮಾಡಬಹುದು ಎಂದು ವಿದ್ಯಾರ್ಥಿಗಳು ಹೋಳಿಯಿಂದ ದೂರ ಇದ್ದಾರೆ.

    ಇತ್ತ ಸಿಲಿಕಾನ್ ಸಿಟಿಯ ಸ್ಟಾರ್ ಹೋಟಲ್‍ಗಳು ಹೋಳಿ ಹಬ್ಬವನ್ನ ಆಯೋಜನೆ ಮಾಡುತ್ತಿದ್ದವು. ಆದರೆ ಕೊರೊನಾ ವೈಸರ್ ನಿಂದಾಗಿ ಆ ಸಂಭ್ರಮಕ್ಕೂ ಬ್ರೇಕ್ ಬಿದ್ದಿದೆ. ಹೋಳಿ ಬಣ್ಣದ ವ್ಯಾಪಾರಿಗಳು ಮಾತ್ರ ಹಾಕಿದ ಬಂಡವಾಳವೇ ಸಿಗುತ್ತಿಲ್ಲ. ಈ ಭಾರಿ ತಂದಿದ್ದ ಹೋಳಿ ಬಣ್ಣಗಳು ಮಾರಾಟವಾಗುತ್ತಿಲ್ಲ. ಈ ಕೊರೊನಾ ವೈರಸ್ ಯಾಕಾದ್ರೂ ಬಂತೋ ಎನ್ನುತ್ತಿದ್ದಾರೆ.

    ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ಜನರಲ್ಲಿ ಭಯವನ್ನ ಹೆಚ್ಚು ಮಾಡ್ತಿದೆ. ಈಗಾಗಲೇ ಕರ್ನಾಟಕದಲ್ಲಿ 4 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲಿ ಮೂರು ಕೊರೊನಾ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

  • ದಲಿತ ಯುವಕನ ಮೇಲೆ ಗ್ರಾಂ.ಪಂ.ಅಧ್ಯಕ್ಷನಿಂದ ಹಲ್ಲೆ

    ದಲಿತ ಯುವಕನ ಮೇಲೆ ಗ್ರಾಂ.ಪಂ.ಅಧ್ಯಕ್ಷನಿಂದ ಹಲ್ಲೆ

    ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ದಲಿತ ಮತ್ತು ಸವರ್ಣಿಯರ ನಡುವೆ ಮಾರಾಮಾರಿ ನಡೆದ ಘಟನೆ ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾ.ಪಂ.ಅಧ್ಯಕ್ಷ ಅಂದಿಗಾಲಪ್ಪ ಹೊಳಿಯಾಚೆ ಮನೆ ಮುಂದೆ ಕಳೆದ ರಾತ್ರಿ ಕಾಮದಹನ ಮಾಡುವ ವೇಳೆ ಅದೇ ಗ್ರಾಮದ ದಲಿತ ಯುವಕನ್ನೊಬ್ಬ ಬಂದು ನೋಡಿದ್ದಾನೆ. ಇಷ್ಟಕ್ಕೇ ಕೋಪಿತನಾದ ಗ್ರಾ.ಪಂ.ಅಧ್ಯಕ್ಷ ಅಂದಿಗಾಲಪ್ಪ ಸೇರಿದಂತೆ ಅತನ ಕುಟುಂಬಸ್ಥರು, ನೀನ್ಯಾಕೆ ಇಲ್ಲಿಗೆ ಬಂದೆ ಎಂದು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಖಂಡಿಸಿ ದಲಿತರು ಪ್ರಶ್ನೆ ಮಾಡಲು ಹೋದಾಗಲು ದಲಿತರು ಮತ್ತು ಸವರ್ಣಿಯರ ನಡುವೆ ಮಾರಾಮಾರಿ ನಡೆದಿದೆ.

    ಕಲ್ಲು, ಬಡಿಗೆ, ಇಟ್ಟಿಗೆಗಳಿಂದ ತೂರಾಡಿಕೊಂಡಿದ್ದಾರೆ. ಇದರಿಂದ 9 ಜನರಿಗೆ ಗಾಯಗಳಾಗಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದಂತೆ ಕೊಪ್ಪಳ ಎಸ್‍ಪಿ ಸಂಗೀತಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಗೂಗಲ್ ಹೊಸ ಟ್ರಿಕ್, ಸ್ಮಾರ್ಟ್ ಫೋನ್‍ನಲ್ಲಿ ಆಡಬಹುದು ಬಣ್ಣದಾಟ

    ಗೂಗಲ್ ಹೊಸ ಟ್ರಿಕ್, ಸ್ಮಾರ್ಟ್ ಫೋನ್‍ನಲ್ಲಿ ಆಡಬಹುದು ಬಣ್ಣದಾಟ

    ಬೆಂಗಳೂರು: ಕೊರೊನಾ ವೈರಸ್ ಆತಂಕ ಹೆಚ್ಚಾಗಿದ್ದು, ಈ ಬಾರಿ ಹೋಳಿ ಆಡಬೇಕಾ ಅಥವಾ ಬೇಡ ಎಂಬ ಗೊಂದಲದಲ್ಲಿದ್ದಾರೆ. ಈ ಎಲ್ಲ ಗೊಂದಲಗಳಿಗೆ ಗೂಗಲ್ ಹೊಸ ಟ್ರಿಕ್ ನಿಮ್ಮ ಮುಂದೆ ಇಟ್ಟಿದ್ದು, ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ನೀವು ಬಣ್ಣದಾಟ ಆಡಬಹುದು.

    ಗೂಗಲ್ ಟ್ರಿಕ್ ಬಳಸಿ ನೀವು ಎಲ್ಲಿಯಾದ್ರೂ ನಿಮ್ಮ ಸ್ಮಾರ್ಟ್ ಫೋನ್ ಜೊತೆ ಹೋಳಿ ಆಡಬಹುದು. ಕೆಲವೇ ಕ್ಷಣಗಳಲ್ಲಿ ನಿಮ್ಮ ಮೊಬೈಲ್ ಸ್ಕ್ರೀನ್ ಕಲರ್ ಫುಲ್ ಆಗುತ್ತದೆ. ಮೊಬೈಲಿನಲ್ಲಿ ಈ ಕೆಳಗಿನಂತೆ ಮಾಡಿದ್ರೆ ನೀವು ಬಣ್ಣದಾಟದಲ್ಲಿ ಭಾಗಿಯಾಗಬಹುದು.

    1. ಮೊದಲು ಗೂಗಲ್ ಸರ್ಚ್ ಆ್ಯಪ್ ಓಪನ್ ಮಾಡಿ.
    2. ಹೋಲಿ (Holi) ಎಂದು ಟೈಪ್ ಮಾಡಿ.
    3. ಈಗ ಕೆಳಗೆ ಕಾಣಿಸುವ ಬಣ್ಣ ತುಂಬಿದ ಬೌಲ್ ಟ್ಯಾಪ್ ಮಾಡಿ
    4. ಹಾಗೆಯೇ ನಿಮ್ಮ ಸ್ಕ್ರೀನ್ ಟ್ಯಾಪ್ ಮಾಡುತ್ತಾ ಹೋಗಿ
    5. ಹೀಗೆ ಮಾಡುತ್ತಾ ಹೋದಂತೆ ನಿಮ್ಮ ಮೊಬೈಲ್ ಸ್ಕ್ರೀನ್ ಬಣ್ಣಮಯ ಆಗುತ್ತದೆ.

    ಮೊದಲಿನಂತೆ ನಿಮ್ಮ ಸ್ಕ್ರೀನ್ ಮಾಡಲು ಮೇಲ್ಭಾಗದಲ್ಲಿರುವ ‘ನೀರಿನಿ ಹನಿ’ ಮೇಲೆ ಟ್ಯಾಪ್ ಮಾಡಬೇಕು. ವಾಟರ್ ಡ್ರಾಪ್ ಮೇಲೆ ಟ್ಯಾಪ್ ಮಾಡುತ್ತಿದ್ದಂತೆ ನಿಮ್ಮ ಸ್ಕ್ರೀನ್ ಮೊದಲಿನಂತೆ ಆಗುತ್ತದೆ.

  • ರಂಗಿನ ಹಬ್ಬಕ್ಕೂ ಕೊರೊನಾ ಬ್ರೇಕ್ – ಬಣ್ಣದ ಹಬ್ಬದ ಬೆನ್ನಲ್ಲೇ ಸಿಎಂ ಸಂದೇಶ

    ರಂಗಿನ ಹಬ್ಬಕ್ಕೂ ಕೊರೊನಾ ಬ್ರೇಕ್ – ಬಣ್ಣದ ಹಬ್ಬದ ಬೆನ್ನಲ್ಲೇ ಸಿಎಂ ಸಂದೇಶ

    – ಧಾರವಾಡದಲ್ಲಿ ಹೋಳಿಗೆ ಗುಡಬೈ

    ಬೆಂಗಳೂರು: ಇಂದು ಬಣ್ಣಗಳ ಹಬ್ಬ ಹೋಳಿ. ಭಾರತೀಯರ ಪಾಲಿಗೆ ಅತ್ಯಂತ ವಿಶಿಷ್ಟವಾದ ದಿನ. ಆದರೆ ಕೊರೊನಾ ವೈರಸ್ ಹೋಳಿಯನ್ನೂ ಆವರಿಸಿಕೊಂಡಿದೆ. ಕೊರೊನಾ ವೈರಸ್ ಎಫೆಕ್ಟ್ ಹಿನ್ನೆಲೆಯಲ್ಲಿ ಹೋಳಿ ಹಬ್ಬದ ಆಚರಣೆಯ ಚಿತ್ರಣವೇ ಮಾಯವಾಗಿದೆ.

    ಪ್ರತಿ ವರ್ಷ ಚಿಕ್ಕಪೇಟೆ ಮುಖ್ಯ ರಸ್ತೆಗಳಲ್ಲಿ ಸಂಭ್ರಮದಿಂದ ಹೋಳಿ ಆಚರಣೆ ಇರುತ್ತಿತ್ತು. ಈ ಬಾರಿ ಹೋಳಿ ಆಚರಿಸಿದರೆ ಕೊರೊನಾ ವೈರೆಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಆಚರಣೆಗೆ ಫುಲ್ ಬ್ರೇಕ್ ಬಿದ್ದಿದೆ. ಅಷ್ಟೇ ಅಲ್ಲದೇ ಸಿಎಂ ಯಡಿಯೂರಪ್ಪ ಕೂಡ ಹೋಳಿ ಹಬ್ಬದ ದಿನವೇ ಜನರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

    “ನಾಡಿನ ಸಮಸ್ತ ಜನರಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬಣ್ಣದ ಓಕುಳಿಯ ರಂಗು ನಮ್ಮೆಲ್ಲರ ಬಾಳನ್ನು ಅರ್ಥಪೂರ್ಣವಾಗಿ ತುಂಬಲಿ. ಬಣ್ಣ ಮೈಮೇಲಿರುವುದಕ್ಕಿಂತ ಮುಖ್ಯವಾಗಿ ಬದುಕಿನಲ್ಲಿರಲಿ. ಸುರಕ್ಷಿತ ಆಚರಣೆಗೆ ಮಹತ್ವ ಕೊಡೋಣ. ಸಾಂಕ್ರಾಮಿಕ ರೋಗದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಸಮೂಹ ಆಚರಣೆಗಳಿಂದ ದೂರವಿರೋಣ” ಎಂದು ಸಿಎಂ ಟ್ವೀಟ್ ಮಾಡುವ ಮೂಲಕ ಸಂದೇಶ ರವಾನಿಸಿದ್ದಾರೆ.

    ಇತ್ತ ಚೀನಾದಿಂದ ಹೋಳಿ ಬಣ್ಣ ಆಮದು ಎಂಬ ವದಂತಿ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಹೋಳಿ ಸಂಭ್ರಮವ ಇಲ್ಲದಂತಾಗಿದೆ. ಕೊರೊನಾಗೆ ಬೆಚ್ಚಿ ಹೋಳಿಹಬ್ಬವನ್ನು ವಿದ್ಯಾರ್ಥಿನಿಯರು ಕೈ ಬಿಟ್ಟಿದ್ದಾರೆ. ಪ್ರತಿ ವರ್ಷ ಹೋಳಿಯಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಮಿಂದೇಳುತ್ತಿದ್ದರು. ಈ ಬಾರಿ ಕೊರೊನಾಗೆ ಹೆದರಿ ಹಬ್ಬ ಮಾಡದೆ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿದ್ದಾರೆ.

    ಇನ್ನೂ ಧಾರವಾಡ ಜಿಲ್ಲೆಯ ಕೆಲ ಗ್ರಾಮದವರು ಹೋಳಿ ಬಣ್ಣಕ್ಕೆ ಗುಡ್‍ಬೈ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಬಣ್ಣ ಆಡದಿರಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಧಾರವಾಡ ಜಿಲ್ಲೆಯ ಕವಲಗೇರಿ ಗ್ರಾಮ ಪಂಚಾಯಿತಿಯಿಂದಲೇ ಗ್ರಾಮದಲ್ಲಿ ಡಂಗುರ ಹೊಡೆಸಿ ಹೋಳಿ ಹಬ್ಬದ ದಿನ ಬಣ್ಣ ಆಡಬಾರದು ಎಂದು ಸಾರಿದ್ದಾರೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಬಣ್ಣ ಆಡುವುದನ್ನು ನಿಷೇಧಿಸಿದ ಬಗ್ಗೆ ಡಂಗುರ ಸಾರಿ ಹೇಳಲಾಗಿದೆ.

  • ಸನ್ನಿ ಲಿಯೋನ್‍ನ ಹೋಳಿ ಹಬ್ಬದ ಫೋಟೋ ವೈರಲ್

    ಸನ್ನಿ ಲಿಯೋನ್‍ನ ಹೋಳಿ ಹಬ್ಬದ ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಪತಿ ಹಾಗೂ ಮೂವರು ಮಕ್ಕಳ ಜೊತೆ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಈ ಫೋಟೋ ಅವರು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈಗ ಅದು ವೈರಲ್ ಆಗಿದೆ.

    ಗುರುವಾರ ಸನ್ನಿ ಲಿಯೋನ್ ತನ್ನ ಪತಿ ಡೇನಿಯಲ್ ವೆಬ್ಬರ್ ಹಾಗೂ ಮೂವರು ಮಕ್ಕಳಾದ ನಿಶಾ, ಆಶೇರ್ ಹಾಗೂ ನೋಹಾ ಜೊತೆ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಬಳಿಕ ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ವೆಬ್ಬರ್ ಗಳ ಕಡೆಯಿಂದ ಹೋಳಿ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    Happy Holi from the Weber’s!!

    A post shared by Sunny Leone (@sunnyleone) on

    ಸನ್ನಿ ಲಿಯೋನ್ ಪೋಸ್ಟ್ ಮಾಡಿದ ಈ ಫೋಟೋಗೆ 11 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ ಕೆಲವರು ನಿಮಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ಕಮೆಂಟ್ ಮಾಡಿ ಶುಭಾಶಯ ತಿಳಿಸಿದರೆ ಮತ್ತೆ ಕೆಲವರು ದೇವರು ನಿಮಗೆ ಚೆನ್ನಾಗಿ ಇಟ್ಟರಲಿ ಎಂದು ಕಮೆಂಟ್ ಮಾಡಿದ್ದಾರೆ.

    ಕಳೆದ ವರ್ಷ ಸರೊಗಸಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅಲ್ಲದೆ ಸನ್ನಿ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾ ಎಂಬ ಮಗುವನ್ನು ದತ್ತು ಪಡೆದುಕೊಂಡಿದ್ದರು.

     

    View this post on Instagram

     

    Happy holi !!!!

    A post shared by Daniel “Dirrty” Weber (@dirrty99) on

  • ಮತ್ತೆ ಹ್ಯಾರಿಸ್ ಬೆಂಬಲಿಗನಿಂದ ಗೂಂಡಾಗಿರಿ- ಹೋಳಿ ವಿಚಾರಕ್ಕೆ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

    ಮತ್ತೆ ಹ್ಯಾರಿಸ್ ಬೆಂಬಲಿಗನಿಂದ ಗೂಂಡಾಗಿರಿ- ಹೋಳಿ ವಿಚಾರಕ್ಕೆ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

    ಬೆಂಗಳೂರು: ಹೋಳಿ ಆಡೋ ವಿಚಾರದಲ್ಲಿ ಗಲಾಟೆ ನಡೆದು, ಬಿಜೆಪಿ ಕಾರ್ಯಕರ್ತನ ಮೇಲೆ ಹ್ಯಾರಿಸ್ ಬೆಂಬಲಿಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಘಟನೆ ವಿವೇಕ್ ನಗರ ಠಾಣೆಯ ರುದ್ರಪ್ಪ ಗಾರ್ಡನ್‍ನಲ್ಲಿ ನಡೆದಿದೆ.

    ನಗರದ ರುದ್ರಪ್ಪ ಗಾರ್ಡನ್‍ನಲ್ಲಿ ಭಾನುವಾರ ಹೋಳಿ ಆಚರಣೆ ಮಾಡ್ತಿದ್ರು. ಈ ವೇಳೆ ಕುಟ್ಟಿ ಮತ್ತು ಜೀವನ್ ಎಂಬವರ ನಡುವೆ ಹೋಳಿ ಹಾಕುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ಗಲಾಟೆಗೆ ಎಂಟ್ರಿಯಾದ ಮೂವೀಸ್, ಇಬ್ಬರ ಮೇಲೂ ಹಲ್ಲೆ ಮಾಡಿ ಅಲ್ಲಿಂದ ಕಳುಹಿಸಿದ್ದ. ಇದನ್ನು ಪ್ರಶ್ನೆ ಮಾಡಲು ಹೋದ ದಿಲೀಪ್ ಎಂಬವರ ಮೇಲೂ ಮೂವೀಸ್ ಹಲ್ಲೆ ಮಾಡಿದ್ದಾನೆ.

    ಮೂವೀಸ್ ಶಾಸಕ ಹ್ಯಾರಿಸ್ ಬಲಗೈ ಬಂಟ ಎನ್ನಲಾಗಿದ್ದು, ಎರಡು ಕಡೆಯವರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವೀಸ್ ಗಾಗಿ ಹುಡುಕಾಟ ನಡೆಸಿದ್ದಾರೆ.

  • ಒಂದೊಂದರಂತೆ 35 ಹುಂಜಗಳನ್ನು ಹೊತ್ತೊಯ್ದ ಪೊಲೀಸ್ರು-ಕಾರಣ ಕೇಳಿದ್ರೆ ಹೀಗೂ ಉಂಟಾ ಅಂತೀರಿ!

    ಒಂದೊಂದರಂತೆ 35 ಹುಂಜಗಳನ್ನು ಹೊತ್ತೊಯ್ದ ಪೊಲೀಸ್ರು-ಕಾರಣ ಕೇಳಿದ್ರೆ ಹೀಗೂ ಉಂಟಾ ಅಂತೀರಿ!

    ರಾಯ್‍ಪುರ: ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಸಾರ್ವಜನಿಕರನ್ನು ಸುಲಿಗೆ ಮಾಡಲು ನಿಂತಿರುವ ಪ್ರಕರಣವೊಂದು ಛತ್ತೀಸ್‍ಗಢದಲ್ಲಿ ಬೆಳಕಿಗೆ ಬಂದಿದೆ.

    ಜಗದಲ್‍ಪುರ ಜಿಲ್ಲೆಯ ಸಂಭಾಗ ವಿಭಾಗದ ಗ್ರಾಮವೊಂದರಲ್ಲಿ ಪೊಲೀಸರು ಬಡವರಿಂದ ಹಣ ಸುಲಿಗೆಗೆ ನಿಂತಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.

    ಹೋಳಿ ಹಬ್ಬದ ಮೊದಲು ಬಡ ರೈತರೊಬ್ಬರು 35 ಹುಂಜ ಮತ್ತು ಕೋಳಿಗಳನ್ನು ತಮ್ಮ ಸೈಕಲ್ ಮೇಲೆ ಹಾಕಿಕೊಂಡು ಮಾರಲು ಸಂಭಾಗ ಮಾರುಕಟ್ಟೆ ಬರುತ್ತಿದ್ದರು. ಮಾರ್ಗ ಮಧ್ಯೆ ಇಂದ್ರಾವತಿ ನದಿಯ ಸೇತುವೆ ಬಳಿ ಪೊಲೀಸ್ ಅಧಿಕಾರಿಯೊಬ್ಬರು ಅಡ್ಡಗಟ್ಟಿ ಎಲ್ಲ ಹುಂಜ ಮತ್ತು ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಸಾಂದರ್ಭಿಕ ಚಿತ್ರ

    ಹುಂಜಗಳನ್ನು ವಶಕ್ಕೆ ಪಡೆದಿದ್ದು ಯಾಕೆ?: ಪೊಲೀಸರು ತನ್ನ ಎಲ್ಲ ಕೋಳಿ ಮತ್ತು ಹುಂಜಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ರೈತ ಪ್ರಶ್ನೆ ಮಾಡಿದ್ದಾರೆ. ಕೋಳಿಗಳನ್ನು ಸೈಕಲ್ ನಲ್ಲಿ ತಲೆ ಕೆಳಗಾಗಿ ಕಟ್ಟಿಕೊಂಡು ಬಂದಿದ್ದರಿಂದ ವಶಕ್ಕೆ ಪಡೆಯಲಾಗಿದೆ ಅಂತಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ರೈತನನ್ನು ಸಹ ವಶಕ್ಕೆ ಪಡೆದ ಪೊಲೀಸ್ ಕೆಲಹೊತ್ತು ಠಾಣೆಯಲ್ಲಿ ಕೂರಿಸಿ, ಬರಿಗೈಯಲ್ಲಿ ಕಳುಹಿಸಿದ್ದಾರೆ.

    ಹಣ ಕೊಡಲಿಲ್ಲ: ಸದ್ಯ ಮಾರುಕಟ್ಟೆ ಕೋಳಿ ಮಾಂಸಕ್ಕೆ 300 ರಿಂದ 350 ರೂ.ವರೆಗೆ ಸಿಗುತ್ತದೆ. ಪೊಲೀಸರು ತನ್ನ 35 ಕೋಳಿಗಳನ್ನು ವಶ ಪಡೆದಿರುವುದರಿಂದ ಅಂದಾಜು 15 ಸಾವಿರ ರೂ. ನಷ್ಟವಾಗಿದೆ. ಠಾಣೆಗೆ ಕೋಳಿಗಳನ್ನು ತರುತ್ತಿದ್ದಂತೆ ಎಲ್ಲ ಪೊಲೀಸ್ ಸಿಬ್ಬಂದಿ ಒಂದು, ಎರಡು ಲೆಕ್ಕದಂತೆ ಮನೆಗೆ ತೆಗೆದುಕೊಂಡು ಹೋದ್ರು. ಆದ್ರೆ ಒಬ್ಬರೂ ಹಣ ನೀಡಲಿಲ್ಲ ಅಂತಾ ರೈತ ಹೇಳಿಕೊಂಡಿದ್ದಾರೆ.

    ಸ್ಥಳೀಯರ ಪ್ರಕಾರ, ಸಂಭಾಗನಲ್ಲಿ ಭಾನುವಾರದಂದು ನಡೆಯುವ ಸಂತೆಯಲ್ಲಿ ಇಂತಹ ಘಟನೆಗಳನ್ನು ಈ ಹಿಂದೆಯೂ ನಡೆದಿದೆ. ಪೊಲೀಸರು ಹಣ ನೀಡದೇ ಕೋಳಿಗಳನ್ನು ತೆಗೆದುಕೊಂಡು ಹೋಗಿ ಭರ್ಜರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಕೆಲವು ಬಾರಿ ಪೊಲೀಸರು ಜನರಿಂದ ಹಣ ಸಹ ವಸೂಲಿ ಮಾಡಿದ್ದಾರೆ ಅಂತಾ ಸಾರ್ವಜನಿಕರು ಆರೋಪಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಈ ತರಹದ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ಯಾವುದೇ ಪೊಲೀಸ್ ಅಧಿಕಾರಿ ಜನರಿಂದ ಹಣ ವಸೂಲಿ ಮಾಡಿದ್ದರೆ ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಿಸಬಹುದು. ಇದೂವರೆಗೂ ಅಂತಹ ದೂರುಗಳು ದಾಖಲಾಗಿಲ್ಲ, ಆದ್ರೂ ಈ ಬಗ್ಗೆ ತನಿಖೆ ನಡೆಸಲಾಗುವುದು ಅಂತಾ ಕೋತವಾಲಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಖಾದೀರ್ ಖಾನ್ ತಿಳಿಸಿದ್ದಾರೆ.

  • ಮಣಿಪಾಲದಲ್ಲಿ ಮಾಡರ್ನ್ ಹೋಳಿ- ಬ್ರಹ್ಮಾವರದಲ್ಲಿ ಸಾಂಪ್ರದಾಯಿಕ ಹೋಳಿ

    ಮಣಿಪಾಲದಲ್ಲಿ ಮಾಡರ್ನ್ ಹೋಳಿ- ಬ್ರಹ್ಮಾವರದಲ್ಲಿ ಸಾಂಪ್ರದಾಯಿಕ ಹೋಳಿ

    ಉಡುಪಿ: ಇಂದು ದೇಶಾದ್ಯಂತ ಹೋಳಿ ಹಬ್ಬದ ಆಚರಣೆ ನಡೆದಿದೆ. ಉಡುಪಿ ಜಿಲ್ಲೆ ಮಣಿಪಾಲ ವಿವಿಯ ವಿದ್ಯಾರ್ಥಿಗಳು ಎಂಐಟಿ ಕಾಲೇಜಿನ ಮೈದಾನದಲ್ಲಿ ಹೋಳಿ ಹಬ್ಬ ಆಚರಿಸಿದರು. ಇವತ್ತು ಕಾಲೇಜಿಗೆ ರಜೆ ನೀಡಲಾಗಿದ್ದು ಸಾವಿರಾರು ಮಂದಿ ಹೋಳಿ ಸೆಲೆಬ್ರೇಷನ್‍ನಲ್ಲಿ ಪಾಲ್ಗೊಂಡರು.

    ಮೂರು ದಿನಗಳ ಕಾಲ ಹೋಳಿ ಆಚರಣೆ ಮಣಿಪಾಲದಲ್ಲಿ ಇರುತ್ತದೆ. ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಯುವಕ ಯುವತಿಯರು ಸಂಭ್ರಮಿಸಿದರು. ಹಾಡಿಗೆ ಹೆಜ್ಜೆ ಹಾಕಿದ್ರು. ಉತ್ತರ ಭಾರತ ಮೂಲದವರೇ ಹೆಚ್ಚಾಗಿರುವ ಮಣಿಪಾಲದಲ್ಲಿ ಪ್ರತೀ ವರ್ಷ ಹೋಳಿ ಸೆಲೆಬ್ರೆಷನ್ ಜೋರಾಗಿಯೇ ಇರುತ್ತದೆ. ಈ ಬಾರಿ ವಿದೇಶದ ವಿದ್ಯಾರ್ಥಿಗಳೂ ಹೋಳಿಯಲ್ಲಿ ಪಾಲ್ಗೊಂಡು ಖುಷಿಪಟ್ಟರು.

    ಸಾಂಪ್ರದಾಯಿಕ ಹೋಳಿ: ಇದು ಮಾಡರ್ನ್ ಹೋಳಿಯಾದ್ರೆ ಉಡುಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆಯೂ ನಡೆಯುತ್ತದೆ. ಶತಮಾನದ ಹಿಂದೆ ಮಹಾರಾಷ್ಟ್ರದಿಂದ ಬಂದ ಮರಾಠಿಗರು ಇವರು. ಉಡುಪಿ ಜಿಲ್ಲೆಯ ಬ್ರಹ್ಮಾವರ, ಪರ್ಕಳ, ಸರಳೇಬೆಟ್ಟು-ಹಿರೇಬೆಟ್ಟು, ಕಂಚಿಬೈಲು ಮಣಿಪಾಲ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ.

    ಶಿವಾಜಿ ಮಹಾರಾಜನ ವಂಶದವರೆಂದು ಕರೆಸಿಕೊಳ್ಳುವ ನಾಯಕ್ ಜನ ಇವರು ಪ್ರತೀ ಕುಟುಂಬದಿಂದ ಒಬ್ಬ ಈ ಆಚರಣೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಮನೆ ಮನೆಗೆ ತೆರಳಿ ಗುಮ್ಟೆ ಮತ್ತು ತಾಳ ನುಡಿಸಿ, ಜನಪದ ಹಾಡುಗಳನ್ನು ಹಾಡಿ ಕುಣಿಯುತ್ತಾರೆ. ಕಲಾವಿದರು ದೇವಿ ತುಳಜಾ ಭವಾನಿಯ ಆರಾಧನೆಯ ಪದಗಳನ್ನು ಹಾಡುತ್ತಾರೆ.

    ಮನೆಯ ಯಜಮಾನರು ಅಕ್ಕಿ, ಕಾಯಿ, ವೀಳ್ಯ ಕೊಟ್ಟು ಬಂದವರನ್ನು ಸನ್ಮಾನಿಸುತ್ತಾರೆ. ಹೋಳಿ ಕುಣಿಯುವ ಕಲಾವಿದರು ಮಕ್ಕಳನ್ನ ಹಿಡಿದು ಕುಣಿದರೆ ಅವರ ರೋಗ ರುಜಿನಗಳೆಲ್ಲಾ ಕಳೆದು ಹೋಗುತ್ತದೆ ಎಂಬ ನಂಬಿಕೆ ಕೂಡ ಇದೆ.

  • 10ಕ್ಕೂ ಹೆಚ್ಚು ಬೈಕ್‍ಗಳಲ್ಲಿ ಬಂದು ಯುವಕನಿಗೆ 50 ಬಾರಿ ಇರಿದು, ರಾಡ್‍ನಿಂದ ಹೊಡೆದ್ರು

    10ಕ್ಕೂ ಹೆಚ್ಚು ಬೈಕ್‍ಗಳಲ್ಲಿ ಬಂದು ಯುವಕನಿಗೆ 50 ಬಾರಿ ಇರಿದು, ರಾಡ್‍ನಿಂದ ಹೊಡೆದ್ರು

    ನವದೆಹಲಿ: ಸುಮಾರು 20 ವರ್ಷ ಅಸಾಪಾಸಿನ ಯುವಕನಿಗೆ ಹಾಡಹಗಲೇ 50 ಬಾರಿ ಇರಿದು, ರಾಡ್‍ನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ದೆಹಲಿಯ ಖಾನ್‍ಪುರ್ ಪ್ರದೇಶದಲ್ಲಿ ನಡೆದಿದೆ.

    ಆಶಿಶ್ ಹಲ್ಲೆಗೊಳಗಾದ ಯುವಕ. ಗುರುವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಆಶಿಶ್ ಜಿಮ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಬೈಕ್‍ಗಳಲ್ಲಿ ಬಂದ ಸುಮಾರು 20 ಯುವಕರು ದುಗ್ಗಲ್ ಕಾಲೋನಿಯ ಬೀದಿಯಲ್ಲಿ ಆಶಿಶ್ ಮೇಲೆ ದಾಳಿ ನಡೆಸಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪರಿಚತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಕಪ್ಪು ಬಣ್ಣದ ಶರ್ಟ್ ಧರಿಸಿದ್ದ ಆಶಿಶ್‍ನನ್ನು ಇಬ್ಬರು ವ್ಯಕ್ತಿಗಳು ತಡೆದಿದ್ದಾರೆ. ಕೆಲವೇ ಕ್ಷಣಗಳಲ್ಲಿ 10ಕ್ಕೂ ಹೆಚ್ಚು ಬೈಕ್‍ಗಳು ಒಂದರ ಹಿಂದೆ ಒಂದು ಬಂದಿದ್ದು, ಆಶಿಶ್‍ನನ್ನು ಸುತ್ತುವರೆದಿದ್ದಾರೆ. ನಂತರ ಆಶಿಶ್‍ಗೆ ಸುಮಾರು 50 ಬಾರಿ ಇರಿದಿದ್ದು, ರಾಡ್‍ಗಳಿಂದ ಹೊಡೆದಿದ್ದಾರೆ. ಈ ವೇಳೆ ನೆರೆಹೊರೆಯವರು ಇದನ್ನ ತಡೆಯಲು ಮುಂದಾಗಲಿಲ್ಲ. ಆಶಿಶ್ ರಸ್ತೆ ಮೇಲೆ ಬಿದ್ದಿದ್ದು, ದುಷ್ಕರ್ಮಿಗಳು ಬೈಕ್‍ಗಳಲ್ಲಿ ಚಾಕು ಹಾಗೂ ರಾಡ್‍ಗಳನ್ನ ಹಿಡಿದು ಪರಾರಿಯಾಗೋದನ್ನ ವಿಡಿಯೋದಲ್ಲಿ ಕಾಣಬಹುದು.

    ದಾಳಿ ಮಾಡಿದ ತಂಡ ಸ್ಥಳದಿಂದ ಕಾಲ್ಕಿತ್ತ ನಂತರ ಸ್ಥಳೀಯರು ಆಶಿಶ್‍ನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸದ್ಯ ಆಶಿಶ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕನಿಷ್ಟ 50 ಇರಿತದ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಘಟನೆ ಬಗ್ಗೆ ವಿಷಯ ತಿಳಿಸಿದ 1 ಗಂಟೆ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

    ಆಶಿಶ್ ಮೇಲೆ ದಾಳಿ ನಡೆದಿದ್ದು ಯಾಕೆ ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ ಸ್ಥಳಿಯ ನಿವಾಸಿಗಳು ಹೇಳುವ ಪ್ರಕಾರ ಗುರುವಾರ ಬೆಳಗ್ಗೆ ನಡೆದ ಜಗಳದ ನಂತರ ಯುವಕರ ಗುಂಪು ಆಶಿಶ್ ಮೇಲೆ ದಾಳಿ ಮಾಡಿದೆ. ಬಾಲಕನೊಬ್ಬ ಹೋಳಿ ಪ್ರಯುಕ್ತ ನೀರಿನ ಬಲೂನ್‍ಗಳನ್ನ ಎಸೆದಿದ್ದಕ್ಕೆ ಯುವಕರು ಆತನಿಗೆ ಹೊಡೆಯುತ್ತಿದ್ದರು. ಈ ವೇಳೆ ಆಶಿಶ್ ಮಧ್ಯಪ್ರವೇಶಿಸಿ ಬಾಲಕನಿಗೆ ಹೊಡೆಯೋದನ್ನ ತಡೆದಿದ್ದ ಎಂದು ಹೇಳಲಾಗಿದೆ.

  • ವಿಜಯಪುರ- ರಾಯಚೂರಿನಲ್ಲಿ ಹೋಳಿ ಸಂಭ್ರಮ- ವಯಸ್ಸಿನ ಬೇಧವಿಲ್ಲದೆ ಬಣ್ಣಗಳಲ್ಲಿ ಮಿಂದು ಸಂಭ್ರಮಿಸಿದ ಜನ

    ವಿಜಯಪುರ- ರಾಯಚೂರಿನಲ್ಲಿ ಹೋಳಿ ಸಂಭ್ರಮ- ವಯಸ್ಸಿನ ಬೇಧವಿಲ್ಲದೆ ಬಣ್ಣಗಳಲ್ಲಿ ಮಿಂದು ಸಂಭ್ರಮಿಸಿದ ಜನ

    ವಿಜಯಪುರ/ರಾಯಚೂರು: ಎಲ್ಲೆಲ್ಲೂ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ವಿಜಯಪುರ ಮತ್ತು ರಾಯಚೂರಿನಲ್ಲಿ ಹೋಳಿ ಹಬ್ಬವನ್ನ ಜನರು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

    ರಾಯಚೂರಿನಲ್ಲಿ ಮಾರ್ವಾಡಿ ಸಮಾಜದವರು ತಮ್ಮ ಮನೆಯಲ್ಲಿ ಜನಿಸಿದ ಮೊದಲ ಗಂಡು ಮಗುವಿಗೆ ಬಣ್ಣ ಹಚ್ಚಿ ಸಂಪ್ರದಾಯ ಬದ್ಧವಾಗಿ ಹಬ್ಬವನ್ನ ಆಚರಿಸುತ್ತಿದ್ದಾರೆ. ಹೋಳಿ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ನರಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಈ ಬಾರಿ ಬಣ್ಣದ ಜೊತೆ ಮೊಟ್ಟೆ ಹೊಡೆಯುವುದನ್ನ ನಿರ್ಬಂಧಿಸಲಾಗಿದೆ.

    ವಿಜಯಪುರದಲ್ಲಿ ವಯಸ್ಸಿನ ಬೇಧವಿಲ್ಲದೆ ಚಿಕ್ಕಮಕ್ಕಳಿಂದ ಹಿಡಿದು ಮಹಿಳೆಯರು, ಪುರುಷರು ಹಾಗೂ ವಯೊವೃದ್ದರವರೆಗೆ ಬಣ್ಣಗಳಲ್ಲಿ ಮಿಂದೆಳುತ್ತಿದ್ದಾರೆ. ಪರೀಕ್ಷಾ ಭಯದ ನಡುವೆಯೂ ಪಿಯುಸಿ ವಿದ್ಯಾರ್ಥಿಗಳು ಓಕುಳಿ ಆಟದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ.

    ಸಂಪ್ರದಾಯಿಕ ಹೋಳಿ ಹಬ್ಬಕ್ಕೆ ಬಿಜೆಪಿ ಪಕ್ಷದ ಕಾರ್ಯಕತ್ರರು ಶಿವಾಜಿ ವೃತ್ತದಲ್ಲಿ ಬೃಹತ್ ರಾವಣನ ಪ್ರತಿಕೃತಿ ದಹಿಸುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಿದರು. ಕಾಮಣ್ಣನ ಮಕ್ಕಳು ಕಳ್ಳನ ಮಕ್ಕಳು ಎಂದು ಕೇಕೆ, ಸಿಳ್ಳೆ ಹಾಕುತ್ತಾ ಯುವಕರು ಸಂಭ್ರಮಿಸಿದರು. ಬೈಕಲ್ಲಿ ಗುಂಪು ಗುಂಪಾಗಿ ಜಾಲಿ ರೈಡ್ ಮಾಡುತ್ತಾ ಕೈಯಲ್ಲಿ ಹಲಗೆ ಬಾರಿಸುತ್ತಾ ಕೇಕೆ ಹಾಕಿದರು.

    ಸ್ಥಳೀಯ ಸಂಸ್ಥೆಯೊಂದು ರಂಗ್ ಹೋಲಿ ಕಾ ಸಾಥ್ ಎಂಬ ನಾಮಫಲಕದೊಂದಿಗೆ ಮಹಿಳೆಯರಿಗೆ, ಯುವಕರಿಗೆ ಬಣ್ಣದ ಹಬ್ಬ ಆಡಲು ಆಶ್ರಮ ರಸ್ತೆಯ ಸರ್ಕಸ್ ಗ್ರೌಂಡ್ ನಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ನೂರಾರು ಯುವಕ ಯುವತಿಯರು ಡಿಜೆ ಹಾಡಿನೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.