Tag: hiv

  • ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮೂವರ ಬಂಧನ

    ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮೂವರ ಬಂಧನ

    ದಾವಣಗೆರೆ: ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆ ತಳ್ಳುತ್ತಿದ್ದ ಜಾಲವನ್ನು ದಾವಣಗೆರೆಯ ಡಿಸಿಬಿ ಪೆÇಲೀಸರು ಪತ್ತೆ ಹಚ್ಚಿದ್ದು, ಓರ್ವ ಬಾಲಕಿಯನ್ನು ರಕ್ಷಿಸಿ, ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.

    ದಾವಣಗೆರೆ ಜಿಲ್ಲೆ ಮೂಲದ ಗೀತಕ್ಕ (33), ಅನಿತಾ ಅಲಿಯಾಸ್ ಕಾವ್ಯಾ (34) ಹಾಗೂ ರೂಪಾ (28) ಬಂಧಿತ ಮಹಿಳೆಯರು. ಪ್ರಮುಖ ಆರೋಪಿ ಶಿವು ಹಾಗೂ ಆತನ ಇಬ್ಬರು ಸಹಚರರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಬಂಧಿತ ಮಹಿಳೆಯರು ದಾವಣಗೆರೆ, ಗದಗ ಸೇರಿದಂತೆ ಬಹುತೇಕ ಕಡೆ ವೇಶ್ಯಾವಾಟಿಕೆ ನಡೆಸುತ್ತಿದ್ದು, ಅಪ್ರಾಪ್ತ ಬಾಲಕಿಯರಿಗೆ ಹಣದ ಆಸೆ ತೋರಿಸಿ ವೇಶ್ಯಾವಾಟಿಕೆ ತಳ್ಳುತ್ತಿದ್ದರು. ಬಸ್ ಹಾಗೂ ರೈಲ್ವೇ ನಿಲ್ದಾಣದಲ್ಲಿ ಬಾಲಕಿಯರನ್ನು ಅಪಹರಿಸಿ, ಬಳಿಕ ಅವರನ್ನು ಬೇರೆ ಬೇರೆ ಜಾಗಗಳಿಗೆ ಸಾಗಿಸುತ್ತಿದ್ದರು.

    ಜಾಲ ಪತ್ತೆಯಾಗಿದ್ದು ಹೇಗೆ:
    ಬಂಧಿತ ಮೂವರು ಮಹಿಳೆಯರು ದಾವಣಗೆರೆಯ ಮನೆಯೊಂದರಲ್ಲಿ ವಾಸವಾಗಿದ್ದರು. ಜೊತೆಗೆ 16 ವರ್ಷದ ಬಾಲಕಿಯನ್ನು ಇರಿಸಿಕೊಂಡಿದ್ದರು. ಇತ್ತೀಚೆಗೆ ಮೈತ್ರಿ ಉಜ್ವಲ ಸಂಸ್ಥೆ ಸದಸ್ಯರು ಬಾಲಕಿಯ ಕುರಿತಾಗಿ ಅನುಮಾನ ವ್ಯಕ್ತಪಡಿಸಿ, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಆಗ ಬಾಲಕಿಗೆ ಹೆಚ್‍ಐವಿ ಇರುವುದು ಖಚಿತವಾಗಿದ್ದು, ಆಕೆಯನ್ನು ವಿಚಾರಿಸಿದಾಗ, ಮೂವರು ಮಹಿಳೆಯರು ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿ ಕರೆದುಕೊಂಡು ಬಂದು ಮನೆಯಲ್ಲಿ ವೇಶ್ಯಾವಾಟಿಕೆ ಮಾಡಿಸುತ್ತಿದ್ದಾರೆ ಎನ್ನುವ ಸತ್ಯ ಬಯಲಾಗಿದೆ.

    ತಕ್ಷಣವೇ ಮೈತ್ರಿ ಉಜ್ವಲ ಸಂಸ್ಥೆಯು ಪೊಲೀಸರಿಗೆ ಮಾಹಿತಿ ನೀಡಿದ್ದು, ಮನೆಯ ಮೇಲೆ ದಾಳಿ ಮಾಡಿದಾಗ ಮೂವರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಆದರೆ ಪೊಲೀಸ್ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಪ್ರಮುಖ ಆರೋಪಿ ಶಿವು ಹಾಗೂ ಆತನ ಇಬ್ಬರು ಸಹಚರರು ಪರಾರಿಯಾಗಿದ್ದಾರೆ. ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್‍ಪಿ ಆರ್ ಚೇತನ್ ಹೇಳಿದರು.

    ಬಂಧಿತ ಮಹಿಳೆಯರು ಈ ಹಿಂದೆಯೂ ಬಾಲಕಿಯರನ್ನು ಅಪಹರಿಸಿದ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆದರೆ ಈಗ ಜಾಮೀನು ಮೇಲೆ ಹೊರ ಬಂದು ಅದೇ ದಂಧೆ ಶುರು ಮಾಡಿದ್ದಾರೆ.

  • ಹೆಚ್‍ಐವಿ ಯಿಂದ ಬಳಲುತ್ತಿರೋ ದಂಪತಿಯ 6 ವರ್ಷದ ಮಗನಿಗೆ ಬೇಕಿದೆ ಸಹಾಯ

    ಹೆಚ್‍ಐವಿ ಯಿಂದ ಬಳಲುತ್ತಿರೋ ದಂಪತಿಯ 6 ವರ್ಷದ ಮಗನಿಗೆ ಬೇಕಿದೆ ಸಹಾಯ

    ಬಾಗಲಕೋಟೆ: ಪೋಷಕರಿಂದ ಬಳವಳಿಯಾಗಿ ಬಂದ ಆ ಕಾಯಿಲೆ ಇಡೀ ಕುಟಂಬವನ್ನೇ ಸಾವಿನಂಚಿಗೆ ತಂದು ನಿಲ್ಲಿಸಿದೆ. ದುಡಿಯಲು ಮೈಯಲ್ಲಿ ಶಕ್ತಿಯಿಲ್ಲ, ಕುಳಿತು ತಿನ್ನಲು ಸ್ಥಿತಿವಂತರಲ್ಲ, ಬೆಂಬಿಡದೇ ಕಾಡ್ತಿರೋ ಬಡತನದ ಮಧ್ಯೆ ಮಹಾಮಾರಿ ಖಾಯಿಲೆಯ ಕಾಟ. ಈ ಕುಟುಂಬವು ಸಹಾಯ ಕೇಳಿಕೊಂಡು ಇದೀಗ ಬೆಳಕು ಕಾರ್ಯಕ್ರಮಕ್ಕೆ ಬಂದಿದೆ.

    ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿ ಪಟ್ಟಣದ ನಿವಾಸಿಗಳಾದ ದಂಪತಿಯ ಹೆಸರು ಈರಪ್ಪ ಸೈದಾಪುರ ಮತ್ತು ಪತ್ನಿ ಕವಿತಾ ಸೈದಾಪುರ. ಇವರ 9 ವರ್ಷದ ದಾಂಪತ್ಯಕ್ಕೆ ಸಾಕ್ಷಿಯಂತೆ ಇಬ್ಬರೂ ಮಕ್ಕಳಿದ್ದಾರೆ. 6 ವರ್ಷದ ಮಗಳು ಭಾಗ್ಯಶ್ರೀ ಹಾಗೂ 3 ವರ್ಷದ ಮಗ ವಿಶಾಲ್. ದುರಂತ ಅಂದರೆ ಅಪ್ಪ-ಅಮ್ಮ ಇಬ್ಬರಿಗೂ ಎಚ್‍ಐವಿ ಕಾಯಿಲೆ ಇದ್ದು, ಇವರ ಜೊತೆಗೆ 3 ವರ್ಷದ ಪುಟಾಣಿಗೂ ಸೊಂಕು ತಗುಲಿದೆ. ಅದೃಷ್ಟವಶಾತ್ ಮಗಳು ಭಾಗ್ಯಶ್ರೀಗೆ ಯಾವುದೇ ರೀತಿಯ ಸೊಂಕು ತಗುಲಿಲ್ಲ. ಕೊನೆ ದಿನಗಳನ್ನು ಎಣಿಸುತ್ತಿರುವ ಈ ದಂಪತಿ ಕಾಯಿಲೆಯ ಚಿಕಿತ್ಸೆಗಾಗಿ ಹಲವೆಡೆ ಸುತ್ತಾಡಿ 5 ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದಾರೆ.

    ಬೆಂಬಿಡದೇ ಕಾಡ್ತಿರೋ ಎಚ್‍ಐವಿ ಸೊಂಕಿನಿಂದಾಗಿ ನನ್ನ ಪತಿಗೆ ಕೆಲಸ ಮಾಡಲು ಆಗುತ್ತಿಲ್ಲ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿದೆ. ಇತ್ತ ನಾನು ಕೂಡ ಅದೇ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದೇನೆ. ಜೊತೆಗೆ ಸೊಂಕಿನಿಂದ ನನ್ನ ಮಗ ಪುಟಾಣಿ ವಿಶಾಲ್‍ನ ಮಾತನ್ನೂ ಕಸಿದುಕೊಂಡು ಮೂಕನನ್ನಾಗಿಸಿದೆ. ಮತ್ತೊಂದು ಕಡೆ ಸಾಲ ಕೊಟ್ಟವರ ಕಾಟ. ಚಿಕಿತ್ಸೆಗೆ ದುಡ್ಡಿಲ್ಲ, ಮಕ್ಕಳನ್ನ ಸಾಕಲು ಶಕ್ತಿ ಇಲ್ಲ, ಮಾಡಿದ ಸಾಲ ತೀರಿಸಲು ದಾರಿ ಕಾಣುತ್ತಿಲ್ಲ. ಆರೋಗ್ಯವಾಗಿರುವ ನನ್ನ ಮಗಳನ್ನು ಯಾರಾದರೂ ದತ್ತು ಪಡೆಯಿರಿ, ಇಲ್ಲವೇ ಬಾಲಮಂದಿರಕ್ಕೆ ಸೇರಿಸಿ ಎಂದು ತಾಯಿ ಕವಿತಾ ಅಂಗಲಾಚಿಕೊಂಡು ನೋವಿನಲ್ಲಿ ಹೇಳಿದ್ದಾರೆ.

    ಬದುಕಬೇಕೆಂಬ ಕನಸಿದ್ದರೂ ಸಾವಿನ ಆಟವಾಡುವ ಕಾಯಿಲೆ ಈ ಕುಟುಂಬವನ್ನು ಬೆಂಬಿಡುತ್ತಿಲ್ಲ. ಏನೇ ಆಗಲಿ ಎನೂ ಅರಿಯದ ಈ ಪುಟಾಣಿಗಳ ಬದುಕಿನಲ್ಲಿ ಬೆಳಕು ಹಚ್ಚುವವರು ಬೇಕಾಗಿದೆ.

    https://www.youtube.com/watch?v=FvXddLSAMKw

  • ಗರ್ಭಿಣಿಗೆ ಎಚ್‍ಐವಿ ಪಾಸಿಟಿವ್ ಇದೆಯೆಂದು ಹೇಳಿ ಇರದ ಕಾಯಿಲೆಗೆ ಔಷಧಿಯನ್ನೂ ಕೊಟ್ರು

    ಗರ್ಭಿಣಿಗೆ ಎಚ್‍ಐವಿ ಪಾಸಿಟಿವ್ ಇದೆಯೆಂದು ಹೇಳಿ ಇರದ ಕಾಯಿಲೆಗೆ ಔಷಧಿಯನ್ನೂ ಕೊಟ್ರು

    ತುಮಕೂರು: ಗರ್ಭಿಣಿಗೆ ಎಚ್‍ಐವಿ ಪಾಸಿಟಿವ್ ಇದೆ ಅಂತಾ ಹೇಳಿ ಇರದ ಕಾಯಿಲೆಗೆ ಔಷಧಿಯನ್ನೂ ನೀಡಿ ಆಕೆಯನ್ನು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿರುವ ಹೃದಯವಿದ್ರಾವಕ ಘಟನೆಯೊಂದು ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    2015ರ ಡಿಸೆಂಬರ್ ತಿಂಗಳಿನಲ್ಲಿ ಗರ್ಭಿಣಯೊಬ್ಬರು ಆರೋಗ್ಯ ತಪಾಸಣೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಆಕೆ ಗರ್ಭಿಣಿಯಾದ ಕಾರಣದಿಂದ ವೈದ್ಯರು ಎಚ್‍ಐವಿ ಪರೀಕ್ಷೆಯನ್ನು ಮಾಡಿದ್ದರು. ಬಳಿಕ ರಿಸಲ್ಟ್ ಪಾಸಿಟೀವ್ ಬಂದಿದೆ. ನಿಮಗೆ ಏಡ್ಸ್ ಕಾಯಿಲೆ ಬಂದಿದೆ. ಹಾಗಾಗಿ ಸೂಕ್ತ ಔಷಧಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

    ಅದರಂತೆ ಮಹಿಳೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕಳೆದ 2 ವರ್ಷಗಳಿಂದ ನಿರಂತರವಾಗಿ ಔಷಧಿಯನ್ನೂ ತೆಗೆದುಕೊಂಡಿದ್ದಾರೆ. ಆದರೆ ಏಡ್ಸ್ ಎಂಬ ಭಯಾನಕ ಕಾಯಿಲೆಗೆ ತುತ್ತಾದೆನಲ್ಲಾ ಎಂಬ ಕೊರಗಿನಲ್ಲಿ ತನ್ನ ಚೊಚ್ಚಲ ಮಗುವನ್ನು ಕಳೆದುಕೊಂಡಿದ್ದಾರೆ.

    ಇದೀಗ 2 ನೇ ಮಗುವಿಗೆ ಆಕೆ ಗರ್ಭಿಣಿಯಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಎಚ್‍ಐವಿ ಪರೀಕ್ಷೆ ಮಾಡಿಸಿದ್ದಾರೆ. ಆಶ್ಚರ್ಯ ಎಂಬಂತೆ ಆಕೆಗೆ ಎಚ್‍ಐವಿ ನೆಗೆಟೀವ್ ರಿಸಲ್ಟ್ ಬಂದಿದೆ. ಅಂದರೆ ಆಕೆಗೆ ಏಡ್ಸ್ ಕಾಯಿಲೆ ಇಲ್ಲ ಅಂತಾ ವೈದ್ಯರು ದೃಢಪಡಿಸಿದ್ದಾರೆ.

    ಇದರಿಂದ ವಿಚಲಿತರಾದ ಮಹಿಳೆ ಮೂರ್ನಾಲ್ಕು ಖಾಸಗಿ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಯಲ್ಲೂ ಮತ್ತೊಮ್ಮೆ ಪರೀಕ್ಷೆ ಮಾಡಿಸಿದ್ದಾರೆ. ಎಲ್ಲಾ ಕಡೆಯೂ ಆಕೆಗೆ ಏಡ್ಸ್ ಕಾಯಿಲೆ ಇಲ್ಲಾ ಎಂಬ ರಿಸಲ್ಟ್ ಬಂದಿದೆ. ಆಗಲೇ ಆಕೆಗೂ ಗೊತ್ತಾಗಿರೋದು ತನಗೆ ಎಚ್‍ಐವಿ ಇಲ್ಲ ಎಂಬ ಸತ್ಯ. ಆದರೆ ಶಿರಾದ ಸರ್ಕಾರಿ ಆಸ್ಪತ್ರೆ ವೈದ್ಯರು ನೀಡಿದ ತಪ್ಪು ಫಲಿತಾಂಶ ಈ ಮಹಿಳೆಯ ಜೀವನದ ಖುಷಿಯ ಕ್ಷಣಗಳನ್ನು ಬಲಿತೆಗೆದುಕೊಂಡಿದೆ.

  • ಹೆಚ್‍ಐವಿ ಬಾಧಿತ ಮಕ್ಕಳ ಪಾಲಿನ ಬೆಳಕು ಬೆಳಗಾವಿ ಮಹೇಶ್!

    ಹೆಚ್‍ಐವಿ ಬಾಧಿತ ಮಕ್ಕಳ ಪಾಲಿನ ಬೆಳಕು ಬೆಳಗಾವಿ ಮಹೇಶ್!

    ಬೆಳಗಾವಿ: ಹೆಚ್‍ಐವಿ ಎನ್ನುವ ಪದ ಕೇಳಿದರೆ ಸಾಕು ಜನ ದೂರ ಸರಿಯುತ್ತಾರೆ. ಇನ್ನು ಹೆಚ್‍ಐವಿ ಬಾಧಿತ ಮಕ್ಕಳು ಕಥೆ ಏನಾಗ್ಬೇಡಾ? ಆದರೆ, ಬೆಳಗಾವಿಯ ಪಬ್ಲಿಕ್ ಹೀರೋ ಒಬ್ಬರು ಇಂಥ ಮಕ್ಕಳ ಭವಿಷ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

    ಕಣಬರ್ಗಿ ನಿವಾಸಿ ಮಹೇಶ್ ಜಾಧವ್ ವೃತ್ತಿಯಲ್ಲಿ ಡಿಪ್ಲೊಮಾ ಎಂಜಿನಿಯರ್. ಆದರೆ ಇವರು ಸಮಾಜ ಸೇವೆ ಮಾತ್ರ ವಿಭಿನ್ನ. ಎಚ್‍ಐವಿ ಪೀಡಿತ ಅನಾಥ ಮಕ್ಕಳ ವಸತಿ ನಿಲಯಕ್ಕಾಗಿ ತಮ್ಮ ಸ್ವಂತ ಮನೆಯನ್ನು ಬಿಟ್ಟುಕೊಟ್ಟು ಮಕ್ಕಳ ಶಾಲಾ ಶಿಕ್ಷಣ, ಆರೈಕೆ ಸಹಿತ ಉನ್ನತ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ.

    ಪ್ರೇರಣೆ ಏನು?
    ಗೆಳೆಯನ ಹುಟ್ಟುಹಬ್ಬದ ನಿಮಿತ್ತವಾಗಿ ಬೆಳಗಾವಿ ಜಿಲಾಸ್ಪತ್ರೆಗೆ ಹಣ್ಣು ವಿತರಿಸಲು ಹೋದಾಗ ಅಪಘಾತವಾದ ಪಾಸಿಟವ್ ಮಗುವೊಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿತ್ತು. ವೈದ್ಯರು ನೋಡದೇ ನಿರಾಕರಿಸಿದಾಗ ಮಹೇಶ್ ಅವರು ಮನನೊಂದು ಇಂಥ ಮಕ್ಕಳ ಬೆಂಬಲಕ್ಕೆ ನಿಂತು ಇಂದಿಗೆ ದೊಡ್ಡದಾದ ಸಂಸ್ಥೆ ಕಟ್ಟಿ 2,200 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಅದಲ್ಲದೆ ಸಂಸ್ಥೆಯಲ್ಲಿ 76 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಅದರಲ್ಲಿ 16 ಜನ ಅನಾಥ ಮಹಿಳೆಯರು ಸೊಂಕಿನಿಂದ ಬಳಲುತ್ತಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ.

    ಸಮಾಜದಲ್ಲಿ ತಿರಸ್ಕೃತಗೊಂಡ ಇಂಥ ಮಕ್ಕಳಿಗೆ ಸೂರು ಕಲ್ಪಿಸಿ ದಿನನಿತ್ಯ ಅವರ ಆರೋಗ್ಯ ಜೊತೆಗೆ ವಿದ್ಯಾಭ್ಯಾಸವನ್ನು ಕಲ್ಪಸುವುದು ದೊಡ್ಡ ಕೆಲಸ. ಚಿಕ್ಕ ವಯಸ್ಸಿನಲ್ಲಿಯೇ ಮಹೇಶ ಇಂಥ ದೊಡ್ಡ ಕೆಲಸಕ್ಕಾಗಿ ಕೈ ಹಾಕಿದ್ದನ್ನು ಕಂಡ ಪಾಲಕರು ತಮ್ಮ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮನೆಯನ್ನು ಮಹೇಶ ಸಂಸ್ಥೆಗೆ ನೀಡಿ ತಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

    2008 ರಲ್ಲಿ ಕೇವಲ 6 ಮಕ್ಕಳನ್ನು ಪಡೆದುಕೊಂಡು ಮಹೇಶ್ ಅವರು ಈ ಸಮಾಜ ಸೇವೆಯನ್ನು ಆರಂಭಿಸಿದರು. ತಮ್ಮ ಸಂತ ಮನೆಯನ್ನು ಕೆಡವಿ ಅಲ್ಲಿ ಈಗ ದೊಡ್ಡದಾದ ವಸತಿ ಶಾಲೆಯನ್ನು ಕಟ್ಟುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಕಂಡು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಮಕ್ಕಳ ಪೋಷಣೆಗಾಗಿ ಆಯಾಗಳು, ಅಂಗನವಾಡಿ, ಆಸ್ಪತ್ರೆಗೆ, ಶಾಲೆಗೆ ಕಳುಹಿಸಲು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿ ಎಲ್ಲರನ್ನು ಒಂದೇ ಕುಟುಂಬದಂತೆ ಸಾಕುತ್ತಿರುವ ಮಹೇಶ್ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯಧನ ಪಡೆಯದೇ ಈ ಸೇವೆ ಮಾಡುತ್ತಿರುವುದು ವಿಶೇಷ.