Tag: History

  • ರಾಮಚಂದ್ರ ಗುಹಾಗೆ ರಾಜ್ಯ ಸರ್ಕಾರದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

    ರಾಮಚಂದ್ರ ಗುಹಾಗೆ ರಾಜ್ಯ ಸರ್ಕಾರದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

    ಬೆಂಗಳೂರು: ಇತಿಹಾಸಕಾರ, ಅಂಕಣಕಾರ ಡಾ. ರಾಮಚಂದ್ರ ಗುಹಾ (Ramachandra Guha) ಅವರಿಗೆ ಕರ್ನಾಟಕ ಸರ್ಕಾರದ (Karnataka Government) 2025ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ (Mahatma Gandhi Seva Award 2024) ಲಭಿಸಿದೆ.

    ಗಾಂಧೀಜಿಯವರ (Mahatma Gandhi) ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡುವ ಈ ಪ್ರಶಸ್ತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರತಿ ವರ್ಷ ನೀಡಲಾಗುತ್ತದೆ.

    ಗಾಂಧೀಜಿಯವರ ತತ್ವ, ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜನಮನಗಳಲ್ಲಿ ಬಿತ್ತುವಲ್ಲಿ ಮಹತ್ವದ ಪಾತ್ರವಹಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಡಾ. ರಾಮಚಂದ್ರ ಗುಹಾ ಅವರನ್ನು ಪ್ರಶಸ್ತಿ ಆಯ್ಕೆ ಮಾಡಿದೆ. ಇದನ್ನೂ ಓದಿ:  ಇದನ್ನೂ ಓದಿ: ಕಾಂತಾರದ ನಂತರದ What Next? – ಪ್ರಶ್ನೆಗೆ ಉತ್ತರ ನೀಡಿದ ರಿಷಭ್‌ ಶೆಟ್ಟಿ

     
    ರಾಮಚಂದ್ರ ಗುಹಾ ಪ್ರಮುಖ ಕೃತಿಗಳು:
    India After Gandhi (ಸ್ವಾತಂತ್ರ್ಯಾನಂತರ ಭಾರತದ ಇತಿಹಾಸ)
    A Corner of a Foreign Field (ಭಾರತೀಯ ಕ್ರಿಕೆಟ್‌ನ ಸಾಮಾಜಿಕ ಇತಿಹಾಸ)
    Gandhi Before India (ಮಹಾತ್ಮ ಗಾಂಧೀಜಿಯವರ ಜೀವನಚರಿತ್ರೆಯ ಮೊದಲ ಭಾಗ)
    Gandhi: The Years That Changed the World (ಜೀವನಚರಿತ್ರೆಯ ಎರಡನೇ ಭಾಗ)
    The Unquiet Woods (ತಳಸ್ಥರದ ಪರಿಸರ ಚಳವಳಿಗಳ ಅಧ್ಯಯನ)

  • ಮಹಾರಾಷ್ಟ್ರದ ರಾಜ್ಯ ಹಬ್ಬವಾದ ʻಗಣೇಶೋತ್ಸವʼ – ಏನಿದರ ಹಿನ್ನೆಲೆ?

    ಮಹಾರಾಷ್ಟ್ರದ ರಾಜ್ಯ ಹಬ್ಬವಾದ ʻಗಣೇಶೋತ್ಸವʼ – ಏನಿದರ ಹಿನ್ನೆಲೆ?

    ಭಾರತೀಯ ಪರಂಪರೆಯ ಪ್ರಕಾರ ಆಷಾಢ ಕಳೆದರೆ ಸಾಕು ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಒಂದಾದ ಮೇಲೊಂದರಂತೆ ಹಬ್ಬಗಳು ಪ್ರತಿ ಮನೆಮನೆಯಲ್ಲೂ ವಿಜೃಂಭಿಸಲು ಪ್ರಾರಂಭಿಸುತ್ತವೆ. ಇದೇ ರೀತಿ ನಮ್ಮೆಲ್ಲರಲ್ಲೂ ಸಂತೋಷ, ಸಡಗರವನ್ನು ತನ್ನ ಜೊತೆಗೆ ಕರೆತರುವ ಗಣೇಶೋತ್ಸವ ಇನ್ನೇನು ಬರಲಿದೆ. ಇಡೀ ಭಾರತದಲ್ಲಿಯೇ ಗಣೇಶೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸುವ ಏಕೈಕ ರಾಜ್ಯವೆಂದರೆ ಅದು ಮಹಾರಾಷ್ಟ್ರ. ಅಂತೆಯೇ ಗಣೇಶೋತ್ಸವ ಪ್ರಾರಂಭವಾಗಿದ್ದು ಮಹಾರಾಷ್ಟ್ರದಲ್ಲಿ.

    ಹೌದು, ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ಈ ಗಣೇಶೋತ್ಸವ ಇದೀಗ ಮಹಾರಾಷ್ಟ್ರದ ರಾಜ್ಯ ಹಬ್ಬವಾಗಿ ಘೋಷಣೆಯಾಗಿದೆ. ಶತಮಾನಗಳಷ್ಟು ಹಳೆಯದಾದ ಈ ಗಣೇಶೋತ್ಸವ ಇದೀಗ ಒಂದು ರಾಜ್ಯದ ಹಬ್ಬವಾಗಿ ಮಾರ್ಪಾಡಾಗಿದೆ. ಜು.10ರಂದು ಮಹಾರಾಷ್ಟ್ರ ಸರ್ಕಾರ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವುದರ ಜೊತೆಗೆ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಈ ನಿರ್ಧಾರವನ್ನ ಕೈಗೊಂಡಿದೆ. ವಿಧಾನಸಭೆಯಲ್ಲಿ ರಾಜ್ಯದ ಸಂಸ್ಕೃತಿ ಸಚಿವ ಆಶಿಷ್ ಶೆಲಾರ್ ಅವರು ಈ ಕುರಿತು ಘೋಷಣೆ ಮಾಡಿ, ಗಣೇಶೋತ್ಸವ ಕೇವಲ ಆಚರಣೆಯಲ್ಲ, ಇದು ಮಹಾರಾಷ್ಟ್ರದ ಸಂಸ್ಕೃತಿ ಮತ್ತು ಗುರುತಿನ ಸಂಕೇತ ಎಂದು ತಿಳಿಸಿದರು. ನಮ್ಮ ಸಂಸ್ಕೃತಿಯ ರಕ್ಷಣೆ ಹಾಗೂ ಆಚರಣೆಗೆ ಸರ್ಕಾರ ಸದಾಕಾಲ ಬದ್ಧವಾಗಿರುತ್ತದೆ ಮತ್ತು ಗಣೇಶೋತ್ಸವದ ಸಂದರ್ಭದಲ್ಲಿ ಅಗತ್ಯ ಮೂಲ ಸೌಕರ್ಯ ಮತ್ತು ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದ ದೊಡ್ಡ ನಗರಗಳಾದ ಪುಣೆ, ಮುಂಬೈ ಸೇರಿದಂತೆ ಇತರ ನಗರಗಳಲ್ಲಿ ಅದ್ದೂರಿ ಆಚರಣೆಗಳಿಗೆ ಆರ್ಥಿಕ ನೆರವನ್ನು ಸರ್ಕಾರ ನೀಡುತ್ತದೆ ಎಂದು ತಿಳಿಸಿದ್ದಾರೆ.

    ಗಣೇಶೋತ್ಸವದ ಇತಿಹಾಸ:
    1893ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಒಂದು ಅದ್ದೂರಿ ಉತ್ಸವವಾಗಿ ಪರಿವರ್ತನೆ ಮಾಡಿದರು. ಅದಕ್ಕೂ ಮುನ್ನ ಈ ಗಣೇಶೋತ್ಸವ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಮಾತ್ರ ಸೀಮಿತವಾಗಿತ್ತು. ಹೆಚ್ಚಾಗಿ ಮೇಲ್ಜಾತಿಯವರು, ಬ್ರಾಹ್ಮಣರು ಆಚರಿಸುತ್ತಿದ್ದರು. 1857ರ ಭಾರತೀಯ ಪ್ರಥಮ ಸ್ವತಂತ್ರ ಸಂಗ್ರಾಮದ ನಂತರ ಭಾರತೀಯ ಸೈನಿಕರು ಬ್ರಿಟಿಷರನ್ನು ಭಾರತದಿಂದ ಹೊರಗೋಡಿಸುವಲ್ಲಿ ವಿಫಲರಾದರು. ಹೀಗಾಗಿ ರಾಷ್ಟ್ರೀಯವಾದಿಗಳು ಈ ವಸಾಹತುಶಾಹಿಯನ್ನ ಸಂಪೂರ್ಣವಾಗಿ ಹೊರಗೆ ಕಳಿಸುವ ಬದಲು ಬ್ರಿಟಿಷರಿಂದ ರಿಯಾಯಿತಿಯನ್ನು ಪಡೆಯುವ ಬಗ್ಗೆ ಯೋಚಿಸಿದರು. ಈ ರಾಷ್ಟ್ರೀಯವಾದಿಗಳ ಪೈಕಿ ಒಬ್ಬರಾದ ಪತ್ರಕರ್ತ, ಶಿಕ್ಷಕ ಮತ್ತು ರಾಜಕೀಯ ಸಾಮಾಜಿಕ ಕಾರ್ಯಕರ್ತರಾಗಿದ್ದ ಬಾಲಗಂಗಾಧರ ತಿಲಕ್ ಅವರು 1881 ರಲ್ಲಿ ಅಗರ್ಕರ್ ಅವರೊಂದಿಗೆ ಸೇರಿ ಮರಾಠಿಯಲ್ಲಿ ಕೇಸರಿ ಹಾಗೂ ಇಂಗ್ಲಿಷ್ನಲ್ಲಿ ಮಹರಟ್ಟಾ ಎಂಬ ಪತ್ರಿಕೆಗಳನ್ನು ಪ್ರಾರಂಭಿಸಿದರು. ಈ ಪತ್ರಿಕೆಯ ಮೂಲಕ ಬ್ರಿಟಿಷರ ಆಳ್ವಿಕೆಯ ವಿರುದ್ಧ ರಾಷ್ಟ್ರೀಯತಾ ವಾದವನ್ನು ಬಿತ್ತಲು ಪ್ರಾರಂಭಿಸಿದರು. ಈ ಮೂಲಕ ತಿಲಕರು ವಸಾಹತುಶಾಹಿ ವಿರೋಧಿ ಚಳುವಳಿಯಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದು ನಿಂತರು. ಹೀಗೆ ಮುಂದುವರೆದು 1893 ರಲ್ಲಿ ವಿಘ್ನ ನಿವಾರಣೆ ಮಾಡುವ ಗಣಪತಿಯನ್ನು ಪೂಜಿಸುವ ಹೊಸ ಸಂಪ್ರದಾಯವನ್ನು ತಿಲಕರು ಪ್ರಾರಂಭಿಸಿದರು. ಈ ಗಣೇಶೋತ್ಸವದ ಮೂಲಕ ದೇಶಭಕ್ತಿ ಗೀತೆಗಳು ಹಾಡುವುದು, ರಾಷ್ಟ್ರೀಯತಾವಾದದ ವಿಚಾರಗಳನ್ನ ಪ್ರಚಾರ ಮಾಡಿದರು. ಹೀಗೆ ಮುಂದೆ ಗಣೇಶ ಹಬ್ಬವನ್ನು ಸಾರ್ವಜನಿಕ ವಲಯಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಬಳಿಕ ಮಹಾರಾಷ್ಟ್ರದಾದ್ಯಂತ ಗಣೇಶೋತ್ಸವದ ಸಂಘಟನೆಗಳು ಸ್ಥಾಪನೆಯಾದವು. ಯುವಕರು ಗುಂಪುಗಳನ್ನು ಕಟ್ಟಿಕೊಳ್ಳಲು ಆರಂಭಿಸಿದರು. ಬಳಿಕ ರಾಷ್ಟ್ರೀಯತಾವಾದ ಪ್ರತಿರೋಧವನ್ನು ಹೆಚ್ಚಿಸಲು ತಿಲಕರು 1896ರಲ್ಲಿ ಶಿವಾಜಿ ಉತ್ಸವವನ್ನು ಪ್ರಾರಂಭಿಸಿದರು.

    ಮುಂದುವರೆದು ಗಣೇಶ್ೋತ್ಸವ ಸಾರ್ವಜನಿಕ ಸಂಕೇತವಾಗಿ ಮಾರ್ಪಾಡಾಯಿತು. ಗಣೇಶನ ದೊಡ್ಡ ದೊಡ್ಡ ವಿಗ್ರಹಗಳನ್ನ ತಂದು ಸಾರ್ವಜನಿಕ ಮೆರವಣಿಗೆ, ಭಜನೆ, ಭಾಷಣ, ಸಾಮಾಜಿಕ ಚಟುವಟಿಕೆಗಳೊಂದಿಗೆ ಈ ಗಣೇಶೋತ್ಸವವನ್ನು ಆಯೋಜಿಸಲು ಪ್ರಾರಂಭಿಸಿದರು. ಇದೊಂದು ಸಾಮಾಜಿಕ ಏಕತೆಯ ವೇದಿಕೆಯಾಗಿ ಪರಿವರ್ತನೆಗೊಂಡಿತು. ಹೀಗೆ ಈ ಗಣೇಶೋತ್ಸವ ಮುಂಬೈ, ನಾಗಪುರ, ಕೊಲ್ಲಾಪುರ ದಂತಹ ಬೇರೆ ಬೇರೆ ನಗರಗಳಲ್ಲಿ ಹರಡಿಕೊಂಡಿತು. ಇದೇ ರೀತಿ ಪ್ರಾರಂಭವಾದ ಗಣೇಶ ಹಬ್ಬ ಇಡೀ ದೇಶಾದ್ಯಂತ ಆಚರಣೆಗೆ ಬಂದಿತು.

    ಗಣೇಶೋತ್ಸವದ ಆಚರಣೆ ಹೇಗೆ?
    ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಆಚರಿಸುವ ಹಬ್ಬವನ್ನು ಗಣೇಶ ಹಬ್ಬ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಈ ಗಣೇಶ ಹಬ್ಬವನ್ನು ಒಂದು ದಿನದಿಂದ ಐದು, ಏಳು, ಹನ್ನೊಂದು, 21 ಹೀಗೆ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ಕೆಲವೆಡೆ ಎರಡು ದಿನ, ಮೂರು ದಿನ, ಹತ್ತು ದಿನ ಎಂದು ಆಚರಿಸುವ ಸಂಪ್ರದಾಯವು ಇದೆ. ಈ ಹಬ್ಬವನ್ನ ವಿನಾಯಕ ಚತುರ್ಥಿ ಎಂತಲೂ ಕರೆಯುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ಗಣೇಶ ವಿಗ್ರಹವನ್ನ ತಂದು ಪೂಜೆ ಮಾಡಿ ವಿಘ್ನಗಳನ್ನು ನಿವಾರಣೆ ಮಾಡುವಂತೆ ಪ್ರಾರ್ಥಿಸುತ್ತಾರೆ. ಇನ್ನು ಸಾರ್ವಜನಿಕ ವಲಯದಲ್ಲಿ ದೊಡ್ಡ ವಿಗ್ರಹಗಳನ್ನು ತಂದು ಮೆರವಣಿಗೆ ಮಾಡಿ ಇನ್ನಿತರ ಚಟುವಟಿಕೆಗಳು, ನೈವೇದ್ಯ, ಪ್ರಸಾದವನ್ನು ವಿತರಿಸುವ ಮೂಲಕ ಆಚರಿಸುತ್ತಾರೆ.

    ಏನಿದು ಗಣಪತಿ ಬಪ್ಪಾ ಮೋರ್ಯ?
    ಗಣೇಶನಿಗಾಗಿ ಹೇಳುವ ಮಂತ್ರವೆಂದರೆ ಇದು. ಗಣೇಶನ ಇನ್ನೊಂದು ಹೆಸರೇ ಗಣಪತಿ. ಗಣಪತಿ ಎಂದರೆ ಗಣಗಳ ಪ್ರಭು ಎಂದರ್ಥ. ಬಪ್ಪಾ ಎಂದರೆ ತಂದೆ. ಮೋರ್ಯ ಎಂದರೆ 14 ರಿಂದ 15ನೇ ಶತಮಾನದ ಸಂತ ಮತ್ತು ಪುಣೆ ಬಳಿಯ ಚಿಂಚ್ ವಾಡ್ ನ ಗಣೇಶನ ಭಕ್ತ ಮೋರ್ಯ ಗೋಸವಿಯನ್ನು ಉಲ್ಲೇಖಿಸುತ್ತದೆ.

    ಇದೇ ರೀತಿ ಕೆಲವು ರಾಜ್ಯಗಳು ತಮ್ಮ ರಾಜ್ಯ ಉತ್ಸವಗಳನ್ನು ಹೊಂದಿವೆ:
    ಅರುಣಾಚಲ ಪ್ರದೇಶ: ಹಾರ್ನ್‌ಬಿಲ್ ಸಂರಕ್ಷಣೆ ಹಾಗೂ ಅದರ ಬುದ್ಧಿವಂತಿಕೆಯನ್ನು ತೋರಿಸುವ ದೃಷ್ಟಿಯಿಂದ ಪಕ್ಕೆ ಪಾಗಾ (ಹಾರ್ನ್‌ಬಿಲ್) ಉತ್ಸವವನ್ನು 2019ರ ಜನವರಿಯಲ್ಲಿ ರಾಜ್ಯ ಉತ್ಸವವೆಂದು ಘೋಷಿಸಿತು.

    ಮಣಿಪುರ: ತಮ್ಮ ರಾಜ್ಯದ ಹೂವನ್ನು ಗೌರವಿಸುವ ದೃಷ್ಟಿಯಿಂದ ನಾಲ್ಕು ದಿನಗಳ ಹಬ್ಬವಾದ ಶಿರುಯಿ ಲಿಲಿ ಉತ್ಸವವನ್ನು 2017ರಲ್ಲಿ ರಾಜ್ಯ ಉತ್ಸವವೆಂದು ಘೋಷಿಸಿದೆ.

    ತ್ರಿಪುರ: 2015ರ ಜನವರಿಯಲ್ಲಿ ತ್ರಿಪುರ ರಾಜ್ಯವು ಮೈತೆಯಿ ಉಮಂಗ್ ಲೈ ಹರೋಬಾ ಉತ್ಸವವನ್ನು ಅಧಿಕೃತ ರಾಜ್ಯ ಉತ್ಸವವೆಂದು ಘೋಷಿಸಿತು. ಈ ಮೂಲಕ ಸಾಂಪ್ರದಾಯಿಕ ಆಚರಣೆಗಳು, ನೃತ್ಯಗಳು ಮತ್ತು ಸಂಗೀತದೊಂದಿಗೆ ಜೀವಂತ ಆತ್ಮಗಳನ್ನು ಆಚರಿಸುತ್ತಾರೆ.

    ಜಾರ್ಖಂಡ್: 2025ರ ಆರಂಭದಲ್ಲಿ ಸಿರಸಿತಾದಲ್ಲಿರುವ ಓರಾನ್ ತೀರ್ಥಯಾತ್ರೆಯನ್ನು ರಾಜ್ಯ ಉತ್ಸವ ಎಂದು ಘೋಷಿಸಿದೆ.

    ಕರ್ನಾಟಕ: ಮೈಸೂರು ದಸರಾವನ್ನು ಅಧಿಕೃತವಾಗಿ ರಾಜ್ಯೋತ್ಸವವೆಂದು ಘೋಷಿಸಲಾಗಿದೆ. ನವರಾತ್ರಿಯ ಸಮಯದಲ್ಲಿ 10 ದಿನಗಳ ಭವ್ಯ ಸಾಂಸ್ಕೃತಿಕ ಉತ್ಸವ, ವಿಜಯದಶಮಿಯಂದು ಅಂತ್ಯಗೊಳ್ಳುತ್ತದೆ, ಇದರಲ್ಲಿ ಆನೆಗಳೊಂದಿಗೆ ಅಂಬಾರಿಯು ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಸಾಗುತ್ತದೆ.

    ಆಂಧ್ರಪ್ರದೇಶ: ಅಹೋಬಿಲಂ ಪರುವೇತ ಉತ್ಸವವನ್ನು 2024ರ ಮಾರ್ಚ್ ನಲ್ಲಿ ರಾಜ್ಯ ಉತ್ಸವವೆಂದು ಘೋಷಿಸಲಾಯಿತು. ಶತಮಾನಗಳಷ್ಟು ಹಳೆಯದಾದ ಈ ಅಣಕು ಬೇಟೆ ಉತ್ಸವವು ನರಸಿಂಹ ಸ್ವಾಮಿಯನ್ನು ಕೇಂದ್ರೀಕರಿಸಿದ್ದು, ಅರಸವಳ್ಳಿ ದೇವಸ್ಥಾನದಲ್ಲಿ ರಥ ಸಪ್ತಮಿ ಕೂಡ ರಾಜ್ಯ ಉತ್ಸವವಾಗಿದೆ.

    ತೆಲಂಗಾಣ: 2024ರ ನವೆಂಬರ್ ನಲ್ಲಿ ಸದರ್ ಸಮ್ಮೇಳನ (ಎಮ್ಮೆ ಮೆರವಣಿಗೆ) ವನ್ನು ರಾಜ್ಯ ಉತ್ಸವವೆಂದು ಘೋಷಿಸಲಾಯಿತು.

    ಉತ್ತರಾಖಂಡ್: 2022ರ ಜುಲೈನಲ್ಲಿ ಮಾ ವಾರಾಹಿ ಬಗ್ವಾಲ್ ಮೇಳವನ್ನು ರಾಜ್ಯ ಸರ್ಕಾರದ ಉತ್ಸವವೆಂದು ಘೋಷಿಸಲಾಯಿತು. ರಕ್ಷಾ ಬಂಧನದ ಸಮಯದಲ್ಲಿ ಚಂಪಾವತ್‌ನಲ್ಲಿ ನಡೆಯುವ ಇದು ಮಾ ವಾರಾಹಿ ದೇವಸ್ಥಾನದಲ್ಲಿ ವಿಶಿಷ್ಟ ಆಚರಣೆಗಳನ್ನು ಒಳಗೊಂಡಿರುತ್ತದೆ.

  • ಮಾನವ ಇತಿಹಾಸದಲ್ಲಿ ನಡೆದ ಡೆಡ್ಲಿ ವಾರ್‌ಗಳ ಬಗ್ಗೆ ನಿಮಗೆ ಗೊತ್ತಾ?

    ಮಾನವ ಇತಿಹಾಸದಲ್ಲಿ ನಡೆದ ಡೆಡ್ಲಿ ವಾರ್‌ಗಳ ಬಗ್ಗೆ ನಿಮಗೆ ಗೊತ್ತಾ?

    ಪ್ರಪಂಚದ ಇತಿಹಾಸದುದ್ದಕ್ಕೂ, ಲೆಕ್ಕವಿಲ್ಲದಷ್ಟು ಯುದ್ಧಗಳು (War) ನಡೆದಿವೆ. ಈ ಯುದ್ಧಗಳ ಪೈಕಿ ಬೆರಳೆಣಿಕೆಯಷ್ಟು ಯುದ್ಧಗಳ ಬಗ್ಗೆ ಮಾತ್ರ ಪಾಠ ಪುಸ್ತಗಳಲ್ಲಿ ಉಲ್ಲೇಖವಾಗಿದೆ. ಆದರೇ ಮಾನವ ಇತಿಹಾಸದಲ್ಲಿ ಹಲವಾರು ಡೆಡ್ಲಿವಾರ್‌ಗಳು ನಡೆದಿದ್ದು, ಕೆಲವೇ ಕೆಲವು ಯುದ್ಧಗಳು ಮಾತ್ರ ಇತಿಹಾಸ ಪಾಠ ಪುಸ್ತಕವನ್ನು ಸೇರಿದೆ. ಯುದ್ಧವು ರಾಷ್ಟ್ರದ ಅಭಿವೃದ್ಧಿಯನ್ನು ಕುಂಠಿತಗೊಳಿಸುವುದಲ್ಲದೇ ಸಾಮಾಜಿಕ ಒಗ್ಗಟ್ಟನ್ನು ಬೇರು ಸಮೇತ ಕಿತ್ತುಹಾಕುತ್ತದೆ. ಮಾನವ ಜನಾಂಗಕ್ಕೆ ಅರಿಯದ ಕೆಲವು ಡೆಡ್ಲಿ ವಾರ್‌ಗಳ ಕುರಿತು ಹಲವು ಅಂಶಗಳನ್ನು ಈ ಮೂಲಕ ತಿಳಿದುಕೊಳ್ಳೋಣ.

    1) ಎರಡನೇ ಕಾಂಗೋ ಯುದ್ಧ (2nd Congo War) :
    ಎರಡನೇ ಕಾಂಗೋ ಯುದ್ಧ (998-2003) ಆಫ್ರಿಕನ್ ಇತಿಹಾಸದಲ್ಲಿ ನಡೆದ ಅತ್ಯಂತ ಮಾರಕ ಯುದ್ಧಗಳಲ್ಲಿ ಒಂದಾಗಿದೆ. 1998ರಲ್ಲಿ, ಕಿಗಾಲಿ ಮತ್ತು ಕಿನ್ಶಾಸಾ ನಡುವಿನ ಸಂಬಂಧಗಳು ಹದಗೆಟ್ಟ ನಂತರ ಎರಡನೇ ಕಾಂಗೋ ಯುದ್ಧವು ಪ್ರಾರಂಭವಾಯಿತು. ಈ ಯುದ್ಧವು 5 ವರ್ಷಗಳ ಅವಧಿಯಲ್ಲಿ ನಡೆದಿದ್ದು, ಸುಮಾರು 5.4 ಮಿಲಿಯನ್ ಜನರು ಇದರಲ್ಲಿ ಅಸುನೀಗಿದರು. ಅಲ್ಲದೇ ಈ ಸಮಯದಲ್ಲಿ ಕ್ಷಾಮ ಮತ್ತು ರೋಗಗಳು ಜನರನ್ನು ಭಾದಿಸಿದ್ದರಿಂದ ಹಲವರು ಮೃತಪಟ್ಟರು. ಎರಡನೇ ವಿಶ್ವಯುದ್ಧದ ಬಳಿಕ ನಡೆದ ಅತ್ಯಂತ ಮಾರಕ ಯುದ್ಧ ಇದಾಗಿದೆ.

    2) ಮೂವತ್ತು ವರ್ಷಗಳ ಯುದ್ಧ (Thirty Years War):
    ಮೂವತ್ತು ವರ್ಷಗಳ ಯುದ್ಧ 17ನೇ ಶತಮಾನದ ಧಾರ್ಮಿಕ ಯುದ್ಧವಾಗಿದ್ದು, ಹೆಸರೇ ಸೂಚಿಸುವಂತೆ ಈ ಯುದ್ಧ ಮೂವತ್ತು ವರ್ಷಗಳವರೆಗೆ ನಡೆಯಿತು. 1618ರಿಂದ 1648ರ ನಡುವಿನ ದೀರ್ಘ ಯುದ್ಧ ಇದಾಗಿದೆ. ಮಧ್ಯ ಯುರೋಪಿನಲ್ಲಿನ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ರಾಜ್ಯಗಳ ನಡುವೆ ಯುದ್ಧ ನಡೆದಿದ್ದು, ಈ ಯುದ್ಧವು 8 ಮಿಲಿಯನ್ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿಗಳ ಸಾವಿಗೆ ಕಾರಣವಾಗಿದೆ.

    3) ಚೀನೀ ಅಂತರ್ಯುದ್ಧ (Chinese Civil War):
    ಈ ಯುದ್ಧವು 1927ರ ಆಗಸ್ಟ್‌ನಲ್ಲಿ ನಡೆದಿದ್ದು, ಕುಮಿಂಟಾಂಗ್ ಮತ್ತು ಚೀನಾದ ಕ್ಯಮುನಿಸ್ಟ್ ಪಕ್ಷದ ನಡುವೆ ನಡೆಯಿತು. ಈ ಎರಡೂ ಪಕ್ಷಗಳು ನಡೆಸಿದ ಹತ್ಯಾಕಾಂಡಗಳು ಮತ್ತು ಸಾಮೂಹಿಕ ದೌರ್ಜನ್ಯಗಳು 1950ರ ವೇಳೆಗೆ 8 ಮಿಲಿಯನ್‌ಗಿಂತಲೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿತು.

    4) ರಷ್ಯಾದ ಅಂತರ್ಯುದ್ಧ (Russian Civil War):
    ರಷ್ಯಾದ ಅಂತರ್ಯುದ್ಧದಲ್ಲಿ 9 ದಶಲಕ್ಷಕ್ಕೂ ಹೆಚ್ಚು ಜನರು ಅಸುನೀಗಿದರು. ಈ ಯುದ್ಧವು 1917ರಿಂದ 1922ರ ಅವಧಿಯಲ್ಲಿ ನಡೆದಿದ್ದು, ಬೊಲ್ಶೆವಿಕ್‌ಗಳ ವಿರುದ್ಧವಾಗಿ ಇನ್ನೊಂದು ಬಣ ರಚನೆಯಾಯಿತು. ಈ ಗುಂಪಿನಲ್ಲಿ ರಾಜಪ್ರಭುತ್ವವಾದಿಗಳು, ಮಿಲಿಟರಿವಾದಿಗಳು ಮತ್ತು ಅಲ್ಪಾವಧಿಗೆ ವಿದೇಶಿ ರಾಷ್ಟ್ರಗಳು ಕೈಗೂಡಿಸಿದ್ದವು. ಬೊಲ್ಶೆವಿಕ್ ಜನರನ್ನು ರೆಡ್ಸ್ ಎಂದು ಕರೆದರೆ ವಿರೋಧ ಗುಂಪನ್ನು ವೈಟ್ಸ್ ಎಂದು ಕರೆಯಲಾಗುತ್ತಿತ್ತು.

    5) ತೈಪಿಂಗ್ ದಂಗೆ (Taiping Rebellion War):
    ತೈಪಿಂಗ್ ದಂಗೆಯು ಚೀನಾದಲ್ಲಿ ನಡೆದ ಅತ್ಯಂತ ಪ್ರಮುಖ ದಂಗೆಯಾಗಿದೆ. ಈ ದಂಗೆಯು 1850ರಿಂದ 1864ರ ಅವಧಿಯಲ್ಲಿ ನಡೆದಿದೆ. ಕ್ವಿಂಗ್ ರಾಜವಂಶ ಮತ್ತು ತೈಪಿಂಗ್ ಹೆವೆನ್ಲಿ ಕಿಂಗ್‌ಡಮ್ ನಡುವೆ ಈ ಯುದ್ಧ ನಡೆದಿದ್ದು, 17 ಪ್ರಾಂತ್ಯಗಳು ಈ ದಂಗೆಯಿಂದ ಧ್ವಂಸಗೊಂಡವು. ಈ ದಂಗೆಯಿಂದ ಸುಮಾರು 20-30 ಮಿಲಿಯನ್ ಜನರು ನಿಧನರಾಗಿದ್ದಾರೆ.

    6) ಎರಡನೇ ಮಹಾಯುದ್ಧ (2nd World War):
    1939ರಿಂದ 1945ರವರೆಗೆ ಎರಡನೇ ವಿಶ್ವಯುದ್ಧ ನಡೆದಿದ್ದು, ಸುಮಾರು 70 ಮಿಲಿಯನ್ ಜನರು ಈ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದ ಏಕೈಕ ಯುದ್ಧ ಇದಾಗಿದ್ದು, ಹಿಟ್ಲರ್‌ನ ಹತ್ಯೆಯ ಬಳಿಕ ಎರಡನೇ ವಿಶ್ವಯುದ್ಧವು ವಿಶ್ವದ ರಾಜಕೀಯವನ್ನು ಶಾಶ್ವತವಾಗಿ ಬದಲಾಯಿಸಿತು.

    7) ಮಂಗೋಲ್ ವಿಜಯಗಳು (Mangol Conquests):
    ಮಂಗೋಲ್ ವಿಜಯಗಳು ಯುರೋಪಿನಲ್ಲಿ ನಡೆದಿದೆ. 13ನೇ ಶತಮಾನದ ಆರಂಭದಲ್ಲಿ ಮಂಗೋಲರು ಭೂಮಿಯ ಸುಮಾರು 20%ನಷ್ಟು ಜಾಗವನ್ನು ವಶಪಡಿಸಿಕೊಂಡರು. ಅವರ ಸಾಮ್ರಾಜ್ಯವು ಏಷ್ಯಾ ಮತ್ತು ಪೂರ್ವ ಯುರೋಪಿನಲ್ಲಿ ಹರಡಿತಲ್ಲದೇ, ಈ ಸಮಯದಲ್ಲಿ ನಡೆದ ಯುದ್ಧಗಳಲ್ಲಿ ಸುಮಾರು 60ರಿಂದ 70 ಮಿಲಿಯನ್ ಜನರು ಮೃತಪಟ್ಟರು. ಮಂಗೋಲಿಯನ್ ಸೇನೆಯ ಇತಿಹಾಸದ ದಂತಕಥೆಯ ಪ್ರಕಾರ, ಮಂಗೋಲಿಯನ್‌ಗಳಿಂದ ಕೊಲ್ಲಲ್ಪಡುವುದನ್ನು ತಪ್ಪಿಸುವ ಸಲುವಾಗಿ ಸುಮಾರು 1,00,000 ಚೀನೀ ಜನರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡರೆಂದು ತಿಳಿದುಬಂದಿದೆ.

    8) ಮೊದಲನೇ ಮಹಾಯುದ್ಧ (First World War):
    ಇತಿಹಾಸದಲ್ಲಿ ನಡೆದ ಎರಡು ಜಾಗತಿಕ ಯುದ್ಧಗಳಲ್ಲಿ ಇದು ಮೊದಲನೇ ಯುದ್ಧ. ಮೊದಲನೇ ಮಹಾಯುದ್ಧವು 1914ರಿಂದ 1918ರವರೆಗೆ ನಡೆಯಿತು. ಈ ಯುದ್ಧದಲ್ಲಿ 17 ಮಿಲಿಯನ್ ಜನರು ಸಾವನ್ನಪ್ಪಿದ್ದು, ಜರ್ಮನಿ, ಇಟಲಿ, ಆಸ್ಟಿçಯಾ ಮತ್ತು ಹಂಗೇರಿಯ ಮೇಲೆ ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ವಿಜಯ ಸಾಧಿಸಲು ಕಾರಣವಾಯಿತು. ಮೊದಲನೇ ಮಹಾಯುದ್ಧದ ಬಳಿಕ ಲೀಗ್ ಆಫ್ ನೇಷನ್ಸ್ ರಚಿಸಲಾಯಿತು. ಆದರೆ ವಿಶ್ವಶಾಂತಿಯನ್ನು ಕಾಪಡಿಕೊಳ್ಳುವಲ್ಲಿ ಇದು ವಿಫಲವಾದ್ದರಿಂದ ಎರಡನೇ ಮಹಾಯುದ್ಧಕ್ಕೆ ಕಾರಣವಾಯಿತು.

    ಇಂತಹ ರಕ್ತಸಿಕ್ತ ಯುದ್ಧಗಳು ಇನ್ನೂ ಅನೇಕ ಕಡೆಗಳಲ್ಲಿ ನಡೆದಿದ್ದು, ಇತಿಹಾಸ ಪಠ್ಯ ಪುಸ್ತಕಗಳಲ್ಲಿ ಇದರ ಉಲ್ಲೇಖವಿಲ್ಲ. ಈ ಯುದ್ಧಗಳಿಂದ ಅನೇಕ ಸಾವು ನೋವುಗಳು ಸಂಭವಿಸಿದ್ದು ಒಂದು ಕಡೆಯಾದರೇ ಇನ್ನೊಂದೆಡೆ ಅನೇಕ ರಾಜರು ಹಾಗೂ ರಾಜವಂಶಗಳು ಯುದ್ಧಗಳಲ್ಲಿ ಗೆದ್ದು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಚರಿತ್ರೆ ಸೃಷ್ಟಿಸಿ ಇತಿಹಾಸದ ಪುಟವನ್ನು ಸೇರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

    2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

    – ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿದ್ದುದು ನೆಹರು ಅವರ ವಾಕಿಗ್ ಸ್ಟಿಕ್ ಹೆಸರಲ್ಲಿ

    ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆ ವಿವಾದದೊಂದಿಗೆ ಇದೀಗ ಪ್ರತಿಪಕ್ಷಗಳು ‘ಸೆಂಗೋಲ್’ (Sengol) ವಿವಾದವನ್ನೂ ಎಳೆದುತಂದಿದೆ. 7 ದಶಕಗಳ ಕಾಲ ಈ ಚಿನ್ನದ ಸೆಂಗೋಲ್ ಅನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ (Allahabad Museum) ಇಡಲಾಗಿದ್ದು, ಇದೀಗ ಸಂಸತ್ ಭವನ (New Parliament Building) ಉದ್ಘಾಟನೆ ವೇಳೆ ಸ್ಪೀಕರ್ ಆಸನದ ಬಳಿ ಇರಿಸಲಾಗುತ್ತಿದೆ.

    ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ (Jawaharlal Nehru) ಅವರಿಗೆ ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ಮಾಡುವ ಸಂಕೇತವಾಗಿ ಸೆಂಗೋಲ್ ಅನ್ನು ನೀಡಲಾಗಿತ್ತು ಎಂಬ ಮಾತು ಕೇಳಿಬಂದರೂ ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಆದರೆ ಇವೆಲ್ಲದಕ್ಕೂ ಬಿಜೆಪಿ ನಾಯಕರು ಉತ್ತರ ನೀಡಿದ್ದಾರೆ. ಇದನ್ನು ಹುಡುಕಲು 2 ವರ್ಷವೇ ಬೇಕಾಯಿತು ಎಂಬ ಸಂಗತಿ ಅತ್ಯಂತ ಕುತೂಹಲ ಮೂಡಿಸಿದೆ.

    ಸೆಂಗೋಲ್ ಬೆಳಕಿಗೆ ಬಂದಿದ್ದು ಯಾವಾಗ?
    2021ರಲ್ಲಿ ಅಂಕಣಕಾರ ಎಸ್ ಗುರುಮೂರ್ತಿ ಅವರು ‘ತುಘಲಕ್’ ಪತ್ರಿಕೆಯಲ್ಲಿ ಬರೆದ ಲೇಖನವೊಂದರಿಂದ ಸೆಂಗೋಲ್ ಹುಡುಕಾಟ ಆರಂಭವಾಯಿತು. ಬಳಿಕ ಸತತ 2 ವರ್ಷಗಳ ಕಾಲ ಕೇಂದ್ರ ಸರ್ಕಾರ ಸೆಂಗೋಲ್ ಹುಡುಕಾಟ ನಡೆಸಿತು. 1947ರ ಆಗಸ್ಟ್ 14ರ ರಾತ್ರಿ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ‍್ಯ ಸಿಕ್ಕಿದಾಗ ಅಧಿಕಾರ ಹಸ್ತಾಂತರದ ಸಂಕೇತವಾಗಿ ಸೆಂಗೋಲ್ ಅನ್ನು ಹಸ್ತಾಂತರಿಸುವ ಸಮಾರಂಭ ನಡೆದಿತ್ತು ಎಂಬುದನ್ನು ಸರ್ಕಾರ ಖಚಿತಪಡಿಸಿಕೊಂಡಿತು. ಇದೀಗ 77 ವರ್ಷ ಹಳೆಯ ಸೆಂಗೋಲ್ ಅನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಮಾಡಲು ಸರ್ಕಾರ ನಿರ್ಧಾರಿಸಿದೆ.

    ಗುರುಮೂರ್ತಿ ಬರೆದ ಲೇಖನದಲ್ಲೇನಿತ್ತು?
    ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ತಮಿಳುನಾಡಿನ ಸ್ವಾಮೀಜಿಯೊಬ್ಬರು ದೇಶದ ಸ್ವಾತಂತ್ರ‍್ಯ ಹಾಗೂ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಸೆಂಗೋಲ್ ಅನ್ನು ಹಸ್ತಾಂತರ ಮಾಡಿದ್ದರು ಎಂದು ಗುರುಮೂರ್ತಿ ಲೇಖನ ಬರೆದಿದ್ದರು. ಈ ಲೇಖನ ಪ್ರಕಟವಾದ ಕೆಲ ದಿನಗಳ ಬಳಿಕ ಖ್ಯಾತ ನೃತ್ಯಗಾರ್ತಿ ಡಾ.ಪದ್ಮಾ ಸುಬ್ರಮಣ್ಯಂ ಅವರು ಅದರ ಇಂಗ್ಲಿಷ್ ಪ್ರತಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದ್ದರು. ಅದರೊಂದಿಗೆ ಪತ್ರವನ್ನೂ ಕಳುಹಿಸಿ, ಈ ಪವಿತ್ರ ಹಾಗೂ ಐತಿಹಾಸಿಕ ಸಂಗೋಲ್ ಹಸ್ತಾಂತರ ಸಮಾರಂಭದ ಇತಿಹಾಸವನ್ನು ಜನರಿಂದ ಮರೆಮಾಚಲಾಗಿದೆ. ಈ ವಿಚಾರವನ್ನು ಮೋದಿ ಸರ್ಕಾರ 2021ರ ಸ್ವಾತಂತ್ರ್ಯೋತ್ಸವದಂದು ಬಹಿರಂಗಪಡಿಸಬೇಕು ಎಂದು ಕೋರಿಕೊಂಡಿದ್ದರು.

    2 ವರ್ಷ ಸೆಂಗೋಲ್‌ಗಾಗಿ ಹುಡುಕಾಟ:
    ಪದ್ಮಾ ಸುಬ್ರಮಣ್ಯಂ ಅವರ ಪತ್ರವನ್ನು ಗಮನಿಸಿದ ಪ್ರಧಾನಿ ಕಾರ್ಯಾಲಯ ಹಾಗೂ ಸಂಸ್ಕೃತಿ ಸಚಿವಾಲಯ ಹಳೆಯ ದಾಖಲೆಗಳ ಹುಡುಕಾಟ ನಡೆಸಿತು. ಸೆಂಗೋಲ್‌ನ ಅಸ್ಥಿತ್ವ ನಿಜವೇ ಅಥವಾ ಹುಸಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಹಳೆಯ ಪತ್ರಿಕಾ ಲೇಖನ, ಪುಸ್ತಕಗಳು ಹಾಗೂ ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿದರು. ಇದನ್ನೂ ಓದಿ: ಹೊಸ ಸಂಸತ್‌ನಲ್ಲಿ `ಸೆಂಗೋಲ್’ ಸಮರ – ಅಧಿಕಾರ ಹಸ್ತಾಂತರದ ರಾಜದಂಡಕ್ಕೆ ಸಾಕ್ಷ್ಯವೇ ಇಲ್ಲ ಅಂತಿದೆ ಕಾಂಗ್ರೆಸ್

    ಕೊನೆಗೆ ನೆಹರು ಅವರಿಗೆ ತಮ್ಮ ನಿವಾಸದಲ್ಲಿಯೇ ಸೆಂಗೋಲ್ ಅನ್ನು ಹಸ್ತಾಂತರ ಮಾಡಲಾಗಿತ್ತು ಎಂಬುದು ತಿಳಿದುಬಂತು. ಇದನ್ನು ಖಚಿತಪಡಿಸಿಕೊಳ್ಳಲು ಸಮಾರಂಭದ ಫೋಟೋಗಾಗಿ ಹುಡುಕಾಟ ನಡೆಸಲಾಯಿತು. ನೆಹರು ಅವರ ಖಾಸಗಿ ದಾಖಲೆಗಳನ್ನೂ ಪರಿಶೀಲಿಸಲು ಮನವಿ ಮಾಡಲಾಯಿತು. ಈ ವೇಳೆ 1947ರ ಆಗಸ್ಟ್ 25 ರಂದು ‘ಟೈಮ್’ ನಿಯತಕಾಲಿಕೆಯಲ್ಲಿ ಸೆಂಗೋಲ್ ಸಮಾರಂಭದ ಕುರಿತು ವಿವರವಾಗಿ ಬರೆಯಲಾಗಿದ್ದ ವರದಿ ಲಭಿಸಿತು.

    ನೆಹರು ವಾಕಿಂಗ್ ಸ್ಟಿಕ್ ಹೆಸರಲ್ಲಿ ಪ್ರದರ್ಶನ:
    ಸೆಂಗೋಲ್ ಸಿಕ್ಕಿದ್ದು ನಿಜ ಆದರೆ ಅದು ಎಲ್ಲಿದೆ ಎನ್ನುವುದು ಪತ್ತೆಯಾಗಲಿಲ್ಲ. ಸರ್ಕಾರ ಹಲವು ಮ್ಯೂಸಿಯಂಗಳಲ್ಲಿ ಸೆಂಗೋಲ್ ಹುಡುಕಾಟ ಆರಂಭಿಸಿತು. ಕೊನೆಗೆ ಈ ಸೆಂಗೋಲ್ 70 ವರ್ಷಗಳಿಂದ ಅಲಹಾಬಾದ್‌ನ ಮ್ಯೂಸಿಯಂನಲ್ಲಿ ಇರುವುದು ತಿಳಿದುಬಂತು. ಆದರೆ ಅದಕ್ಕೆ ನೆಹರು ಅವರು ಬಳಸುತ್ತಿದ್ದ ಚಿನ್ನದ ವಾಕಿಂಗ್ ಸ್ಟಿಕ್ ಎಂಬ ಅಡಿಬರಹದೊಂದಿಗೆ ಪ್ರದರ್ಶನಕ್ಕೆ ಇಡಲಾಗಿತ್ತು.

    ಇದೀಗ ಮರೆಮಾಚಲಾಗಿದ್ದ ಇತಿಹಾಸವನ್ನು ಬಯಲಿಗೆ ತಂದು ಸರ್ಕಾರ ಸೆಂಗೋಲ್ ಅನ್ನು ಮ್ಯೂಸಿಯಂನಿಂದ ತರಿಸಿ ಹೊಸದಾಗಿ ನಿರ್ಮಾಣವಾಗಿರುವ ಸಂಸತ್ ಭವನದಲ್ಲಿ ಪ್ರತಿಷ್ಟಾಪಿಸಲು ನಿರ್ಧರಿಸಿದೆ. ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ವಿಶೇಷ ನಾಣ್ಯ ಬಿಡುಗಡೆ

  • ಮದುವೆಗೆ ಮುಸ್ಲಿಂ ವಧು ಹಾಜರ್ – ಮಹಲ್ ಸಮಿತಿಯ ಕ್ಷಮೆಗೆ ಆಗ್ರಹ

    ಮದುವೆಗೆ ಮುಸ್ಲಿಂ ವಧು ಹಾಜರ್ – ಮಹಲ್ ಸಮಿತಿಯ ಕ್ಷಮೆಗೆ ಆಗ್ರಹ

    ತಿರುವನಂತಪುರಂ: ಮುಸ್ಲಿಂ ಸಂಪ್ರದಾಯದ ಪ್ರಕಾರ ಯಾವುದೇ ವಧು ತನ್ನ ಮದುವೆಗೆ ಹಾಜರಾಗಬಾರದು. ಆದರೆ ವಧುವೊಬ್ಬಳು ತನ್ನ ಮದುವೆಗೆ ತಾನೇ ಹಾಜರಾಗುವ ಮೂಲಕ ಇತಿಹಾಸವನ್ನು ಸೃಷ್ಟಿ ಮಾಡಿದ್ದಳು. ಆದರೆ ಇದನ್ನು ವಿರೋಧಿಸಿ ಮಹಲ್ ಸಮಿತಿಗೆ ಕ್ಷಮೆಯಾಚಿಸುವಂತೆ ಕೆಲವು ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.

    ಇಸ್ಲಾಮಿಕ್ ವಿವಾಹದ ನಿರ್ಣಾಯಕ ಹಂತವಾದ ನಿಕಾಹ್ ಕಾರ್ಯಕ್ರಮದಲ್ಲಿ ವಧು ಬಂದಿದ್ದಳು. ಈ ಫೋಟೋ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫುಲ್ ವೈರಲ್ ಆಗಿದೆ. ವಧು ಬಹಿಜಾ ದಲೀಲಾ ತಮ್ಮ ವಿವಾಹದಲ್ಲಿ ಉಪಸ್ಥಿತಿ ಇರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಪರ-ವಿರೋಧ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಜನನಾಂಗಕ್ಕೂ ಟ್ಯಾಟೂ – ಜೀವವೇ ಹೋದಂಗೆ ಆಯ್ತು ಅಂದ ನಟಿ

    ವಧುವಿನ ಸಹೋದರ ಫಾಸಿಲ್ ಷಹಜಹಾನ್ ಈ ಕುರಿತು ಮಾಹಿತಿ ನೀಡಿದ್ದು, ವಧು ಸ್ಥಳದಲ್ಲಿ ಕುಳಿತುಕೊಳ್ಳಬಹುದೇ ಎಂದು ನಾವು ಮದುವೆ ನಡೆದ ಮಹ ಬಳಿ ಕೇಳಿದ್ದೆವು. ಮಹಲ್ ಕಮಿಟಿಯಲ್ಲಿ ಇವರೆಲ್ಲ ನಮಗೆ ಬಹಳ ವರ್ಷಗಳಿಂದ ಗೊತ್ತು ಎಂದು ಹೇಳಿ ಮಹಲ್ ಕಾರ್ಯದರ್ಶಿ ನಮಗೆ ಅನುಮತಿ ನೀಡಿದರು. ಮದುವೆಯಲ್ಲಿ 400 ಜನರು ಭಾಗವಹಿಸಿದ್ದರು. ಎಲ್ಲರಿಗೂ ಮದುವೆ ಸಂತೋಷವಾಯಿತು. ಆ ಸಮಯದಲ್ಲಿ ಯಾವುದೇ ವಿವಾದ ಅಥವಾ ಪ್ರಶ್ನೆ ಇರಲಿಲ್ಲ. ನಂತರ ಕೆಲವರು ಫೇಸ್‍ಬುಕ್‍ನಲ್ಲಿ ಮದುವೆಯ ಬಗ್ಗೆ ಮೆಚ್ಚುಗೆಯಿಂದ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವೀಡಿಯೋಗಳನ್ನು ಸಹ ಮಾಡಿದರು. ಇದಾದ ಬಳಿಕ ಈ ಕುರಿತು ಚರ್ಚೆ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

    ಕೆಲವರು ಈ ಮದುವೆಗೆ ಅನುಮತಿ ನೀಡಿದ ಮಹಲ್ ಸಮಿತಿಯನ್ನು ಪ್ರಶ್ನಿಸಿದ್ದಾರೆ. ವಧು ಹಾಜರಾಗಿದ್ದು ತಪ್ಪು. ಮಹಲ್ ಸಮಿತಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

    ನಡೆದಿದ್ದೇನು?
    ಕೇರಳದ ಪರಕಡವು ಮೂಲದ ಕೆ.ಎಸ್.ಉಮ್ಮರ್ ಎಲ್ಲ ತಂದೆಯಂತೆ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂಬ ಕನಸನ್ನು ಕಂಡಿದ್ದರು. ಆದರೆ ಅವರಿಗೆ ಮಗಳ ಮದುವೆಯಂದು ಆಕೆಯೇ ಹಾಜರು ಇಲ್ಲದಿದ್ದರೆ ಹೇಗೆ ಎಂದು ಭಾವಿಸಿ ಮಗಳನ್ನು ಕಲ್ಯಾಣ ಮಂಟಪಕ್ಕೆ ಕರೆ ತಂದಿದ್ದರು.

    ತಮ್ಮ ಸಂಪ್ರದಾಯದಲ್ಲಿ ಮದುಮಗಳು ತನ್ನ ಮದುವೆಗೆ ಹೋಗುವ ಅವಕಾಶ ಇಲ್ಲ ಎನ್ನುವುದು ಅವರನ್ನು ಬೇಸರಕ್ಕೆ ತಳ್ಳಿತ್ತು. ಆದರೂ ಅವರು ಗಟ್ಟಿ ಮನಸ್ಸು ಮಾಡಿ, ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅವರ ಮಗಳು ಬಹಾಜಾ ಕೂಡ ಈ ಮದುವೆಯನ್ನು ತುಂಬಾ ಖುಷಿಯಿಂದ ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಮಸೀದಿ ಪ್ರವೇಶಿಸಿ ತನ್ನ ಮದುವೆಗೆ ಸಾಕ್ಷಿಯಾದ ವಧು – ಕೇರಳದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ

    ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಉಮ್ಮರ್, ಇಸ್ಲಾಂನಲ್ಲಿ ಯಾವುದೇ ಸ್ಥಾನವಿಲ್ಲದ ಕೆಟ್ಟ ಆಚರಣೆಗಳನ್ನು ನಾವು ತಿರಸ್ಕರಿಸುವ ಕಾಲ ಬಂದಿದೆ. ನನ್ನ ಮಗಳು ಸೇರಿದಂತೆ ವಧುಗಳಿಗೆ ಅವರ ಮದುವೆಗೆ ಭಾಗಿಯಾಗುವುದು ಅವರ ಹಕ್ಕು. ಅದಕ್ಕೆ ನಾವೇ ಮೊದಲು ಈ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ಈ ನಿರ್ಧಾರಕ್ಕೆ ವರನ ಮನೆಯವರೂ ಒಪ್ಪಿಕೊಂಡರು. ಈ ಹಿನ್ನೆಲೆಯಲ್ಲಿ ನಾವು ಮಹಲ್ ಸಮಿತಿಯನ್ನು ಸಂಪರ್ಕಿಸಿದೆವು. ಅವರ ಜೊತೆ ಚರ್ಚಿಸಿದ ಬಳಿಕ ನಮ್ಮ ಈ ವಿಭಿನ್ನ ಯೋಚನೆಗೆ ಅವರೂ ಅಭಿನಂದಿಸಿದರು. ಎಲ್ಲರ ಸಹಕಾರದಿಂದ ಸಂಪ್ರದಾಯ ಮೀರಿ ಮದುವೆ ಮಾಡಲು ಅನುಕೂಲವಾಯಿತು ಎಂದು ಬರೆದುಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಡಿ, ಮೈಲಿಗೆ ಹೆಸರಲ್ಲಿ ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಮಾಡಿದೆ: ನಟ ಚೇತನ್‌

    ಮಡಿ, ಮೈಲಿಗೆ ಹೆಸರಲ್ಲಿ ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಮಾಡಿದೆ: ನಟ ಚೇತನ್‌

    ಮಡಿಕೇರಿ: ಕಳೆದ 3,500 ವರ್ಷಗಳಿಂದಲೂ ಮಡಿ ಮೈಲಿಗೆ ಹೆಸರಿನಲ್ಲಿ ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಮಾಡಿದೆ, ಕೆಳಸ್ತರಲ್ಲಿಟ್ಟಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕಿಡಿ ಕಾರಿದ್ದಾರೆ.

    ಮಡಿಕೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಮಾಡಿದೆ. ನಮಗೆ, ಬುದ್ಧ, ಬಸವ, ಅಂಬೇಡ್ಕರರು ಹೇಳಿದಂತೆ ಸಮಾನತೆ ಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೊಟ್ಟ ಬೊಕ್ಕೆ ಬಿಸಾಕಿ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದು ಏಕೆ?

    ಆರ್ಯನ್ನರ ಡಿಎನ್‌ಎ ನೋಡಿದರೆ ಸಾಕು ವಲಸೆ ಬಂದವರೆಂದು ತಿಳಿಯುತ್ತದೆ. ಅವರು ಇರಾನ್‌, ಪರ್ಷಿಯನ್‌ ಹಾಗೂ ಮಧ್ಯ ಏಷ್ಯಾದಿಂದ ಬಂದವರು. ಆರ್ಯನ್‌, ಬ್ರಾಹ್ಮಣ್ಯ, ಸಂಸ್ಕೃತ ವೇದ ಇವೆಲ್ಲವೂ ಪರದೇಶದ್ದು. ಭಾರತದಲ್ಲಿ ಹುಟ್ಟಿದ್ದು ಬೌದ್ಧ ಧರ್ಮ,  ಬಸವ, ಅಂಬೇಡ್ಕರ್‌, ಸಿಖ್‌, ಪೆರಿಯಾರ್‌ ಧರ್ಮಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: RSS ಬಗ್ಗೆ ಸಿದ್ದರಾಮಯ್ಯಗೆ 1 ಪರ್ಸೆಂಟ್ ಅಷ್ಟೂ ಗೊತ್ತಿಲ್ಲ: ಎಸ್.ಟಿ.ಸೋಮಶೇಖರ್ ತಿರುಗೇಟು

    ಹಿಂದಿನಿಂದಲೂ ಬ್ರಾಹ್ಮಣ್ಯೀಕರಣದಿಂದ ದೇಶದ ಮೂಲ ನಿವಾಸಿಗಳಿಗೆ ಅನ್ಯಾಯವಾಗಿದೆ. ಮೇಲು, ಕೀಳು ಎಂಬ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿ ಮೂಲ ನಿವಾಸಿಗಳ ಶೋಷಣೆ ಮಾಡುತ್ತಿದೆ. ಅದನ್ನು ಸರಿಪಡಿಸಬೇಕಾದ ಅಗತ್ಯವಿದೆ. ಮೂಲ ನಿವಾಸಿಗಳು ಅಂದರೆ ಎಸ್ಸಿ, ಎಸ್ಟಿ, ಓಬಿಸಿ ಅಲ್ಪಸಂಖ್ಯಾತರು. ಈ ದೇಶದ ಬಹುಜನರಿಗೆ ನ್ಯಾಯ ದೊರಕಬೇಕಾಗಿದೆ. ಮೇಲ್ವರ್ಗದ ಗಂಡಸರೇ ನಮ್ಮನ್ನು ಅಳುತ್ತಿದ್ದಾರೆ. ಅವರಿಂದ ಬ್ರಾಹ್ಮಣ್ಯದ ಅಂಶಗಳು ಹೇರಲ್ಪಟ್ಟು ಶೋಷಣೆ ನಡೆಯುತ್ತಿದೆ. ಇದನ್ನು ತಪ್ಪಿಸಬೇಕಾದರೆ ದೇಶದಲ್ಲಿ ದೊಡ್ಡ ಸಂಘಟನೆ ಆಗಬೇಕಾಗಿದೆ ಎಂದು ಕರೆ ನೀಡಿದರು.

    Siddaramaiah

    ಆರ್ಯನ್ನರು ಪಶ್ಚಿಮ ಏಷ್ಯಾದಿಂದ ಬಂದಿರುವವರು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ ಸತ್ಯವಿದೆ. ಆರ್ಯರು 3,500 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದವರು. ಸೌರಾಷ್ಟ್ರೀಕರಣದಿಂದ ಪ್ರಭಾವಿತರಾಗಿ ಬಂದಿದ್ದಾರೆ. ಅದಕ್ಕೆ ದಾಖಲೆ, ಅಂಕಿ-ಅಂಶ, ಇತಿಹಾಸವಿದೆ. ಅದನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ. ಆ ಸತ್ಯ ಇತಿಹಾಸ ನಮಗೆ ಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ತಾಕತ್ತಿದ್ದರೆ SDPIನ್ನು ನಿಷೇಧ ಮಾಡಲಿ: ದಿನೇಶ್ ಗುಂಡೂರಾವ್

    ನಮಗೆ ರಾಜಕಾರಣಕ್ಕಾಗಿ ಹೇಳುವ ಸುಳ್ಳು ಇತಿಹಾಸ ನಮಗೆ ಬೇಕಾಗಿಲ್ಲ. ಹಾಗೆಂದ ಮಾತ್ರಕ್ಕೆ ಅವರನ್ನು ಇಲ್ಲಿಂದ ಓಡಿಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಅವರೆಲ್ಲರೂ ಈ ದೇಶದ ನಾಗರಿಕರೇ, ಅವರೆಲ್ಲರೂ ಇಲ್ಲೇ ಬದುಕಬೇಕಾಗಿದೆ.

  • ಇತಿಹಾಸ ಸೃಷ್ಟಿಸಿದ ಕನ್ನಡ ಬಿಗ್‍ಬಾಸ್

    ಇತಿಹಾಸ ಸೃಷ್ಟಿಸಿದ ಕನ್ನಡ ಬಿಗ್‍ಬಾಸ್

    ಬೆಂಗಳೂರು: ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಕನ್ನಡ ಬಿಗ್‍ಬಾಸ್ ಸೀಸನ್ 8 ಇತಿಹಾಸ ನಿರ್ಮಿಸಿದೆ.

    ಹೌದು. ಭಾರತದಲ್ಲಿ ಬಿಗ್‍ಬಾಸ್ ಶೋ ಎಂದು ಕರೆಯಿಸಿಕೊಳ್ಳುತ್ತಿರುವ ಶೋ ಮೊದಲು ಆರಂಭಗೊಂಡಿದ್ದು ನೆದರ್‌ಲ್ಯಾಂಡ್ಸ್ ನಲ್ಲಿ. ‘ಬಿಗ್‍ಬ್ರದರ್’ ಹೆಸರಿನಲ್ಲಿ 1999ರಲ್ಲಿ ಆರಂಭಗೊಂಡಿದ್ದ ಈ ಶೋ ಭಾರತಕ್ಕೆ 2006ರಲ್ಲಿ ಬಂದಿತ್ತು.

    1999ರಿಂದ ಇಲ್ಲಿಯವರೆಗೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಈ ರೀತಿಯ ಶೋಗಳು ನಡೆದಿದೆ. ಭಾರತದಲ್ಲಿ ಹಿಂದಿ, ಕನ್ನಡ, ಬಂಗಾಳ, ತಮಿಳು, ತೆಲುಗು, ಮರಾಠಿ, ಮಲೆಯಾಳಂ ಭಾಷೆಯಲ್ಲಿ ಶೋ ನಡೆದಿದೆ.

    ಬಿಗ್ ಬಾಸ್ ಶೋದ ಮುಖ್ಯ ವಿಶೇಷ ಏನೆಂದರೆ ಒಮ್ಮೆ ಸ್ಪರ್ಧಿಗಳು ಬಿಗ್‍ಬಾಸ್ ಮನೆ ತೊರೆದರೆ ಮತ್ತೆ ಮನೆಯನ್ನು ಪ್ರವೇಶಿಸುವಂತಿಲ್ಲ. ಹೊರಗಿನ ಪ್ರಪಂಚದ ಅರಿವು ಇಲ್ಲದೇ ದೊಡ್ಮನೆಯಲ್ಲೇ ಆಟ ಆಡಬೇಕು. ಆದರೆ ಕೋವಿಡ್‍ನಿಂದಾಗಿ ಅರ್ಧದಲ್ಲಿ ಸ್ಥಗಿತಗೊಂಡಿದ್ದ ಬಿಗ್ ಬಾಸ್ 42 ದಿನಗಳ ಬಳಿಕ ಮತ್ತೆ ಆರಂಭಗೊಂಡಿದೆ. ಈ ಮೂಲಕ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡು ಮತ್ತೆ ಆರಂಭಗೊಂಡ ವಿಶ್ವದ ಮೊದಲ ಬಿಗ್ ಬಾಸ್ ಶೋ ಎಂಬ ಪಟ್ಟ ಕನ್ನಡ ಬಿಗ್ ಬಾಸ್‍ಗೆ ಬಂದಿದೆ.

    ಈ ವಿಚಾರವನ್ನು ಆರಂಭದಲ್ಲಿ ಪ್ರಸ್ತಾಪ ಮಾಡಿದ ಸುದೀಪ್, ವಿಶ್ವದ ಹಲವೆಡೆ ಬಿಗ್ ಬಾಸ್ ಶೋ ನಡೆದಿದೆ. ಆದರೆ ಅರ್ಧದಲ್ಲೇ ಸ್ಥಗಿತಗೊಂಡು ಮತ್ತೆ ಶೋ ಆರಂಭವಾಗಿದ್ದು ವಿಶ್ವದಲ್ಲೇ ಇದೇ ಮೊದಲು. ಈ ಮೂಲಕ 8ನೇ ಬಿಗ್ ಬಾಸ್ ಶೋ ಇತಿಹಾಸ ನಿರ್ಮಿಸಿದೆ. ಇನ್ನು ಮುಂದೆ ಈ ರೀತಿ ಆಗುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿ ಸ್ಪರ್ಧಿಗಳಿಗೆ ಶುಭ ಹಾರೈಸಿದ್ದರು. ಇದನ್ನೂ ಓದಿ: ದೊಡ್ಮನೆಯಿಂದ ಹೊರ ಹೋದ ಅರವಿಂದ್‍ಗೆ ಬಂದ ಪ್ರಪೋಸಲ್ಸ್ ಎಷ್ಟು ಗೊತ್ತಾ?

    ಕನ್ನಡದ ಮೊದಲ ಬಿಗ್‍ಬಾಸ್ ಶೋ 2013ರಲ್ಲಿ ಆರಂಭಗೊಂಡಿತ್ತು. ಪುಣೆಯ ಲೋನಾವಾಲದಲ್ಲಿ ಮೊದಲ ಎರಡು ಶೋ ನಡೆದಿದ್ದರೆ ನಂತರದ ಶೋಗಳು ಬೆಂಗಳೂರಿನ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಈಗಾಗಲೇ 12 ಸ್ಪರ್ಧಿಗಳು ಮನೆಯನ್ನು ಮತ್ತೆ ಪ್ರವೇಶಿಸಿದ್ದು, ಮೊದಲ ದಿನದಿಂದಲೇ ಸ್ಪರ್ಧೆ ಆರಂಭವಾಗಿದೆ.

  • ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಮರೆಯಲಾಗದ ದಿನ – ಇತಿಹಾಸ ಸೃಷ್ಟಿಸಿದ್ದ ಗೇಲ್

    ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಮರೆಯಲಾಗದ ದಿನ – ಇತಿಹಾಸ ಸೃಷ್ಟಿಸಿದ್ದ ಗೇಲ್

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಇಂದು ಮರೆಯಲಾಗದ ದಿನ ಏಕೆಂದರೆ 7 ವರ್ಷದ ಹಿಂದೆ ಇದೇ ಏಪ್ರಿಲ್ 23ರಂದು ಕ್ರಿಸ್ ಗೇಲ್ ಅವರು ಇತಿಹಾಸವನ್ನು ಸೃಷ್ಟಿ ಮಾಡಿದ್ದರು.

    2013ರ ಐಪಿಎಲ್ 6ರ ಅವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿ ಆಡುತ್ತಿದ್ದ ವೆಸ್ಟ್ ಇಂಡೀಸ್‍ನ ದೈತ್ಯ ಆಟಗಾರ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ವೈಯಕ್ತಿಯ ಅತೀ ಹೆಚ್ಚು ರನ್ ಸಿಡಿಸಿದ್ದರು. 2013ರ ಐಪಿಲ್ 6ನೇ ಅವೃತ್ತಿಯ 31ನೇ ಪಂದ್ಯದಲ್ಲಿ ಪುಣೆ ಬೌಲರ್ಸ್‍ಗಳು ಕಾಡಿದ್ದ ಗೇಲ್, ಅಂದು ಕೇವಲ 66 ಎಸೆತಗಳಲ್ಲಿ 175 ರನ್ (17 ಸಿಕ್ಸ್ 13 ಬೌಂಡರಿ) ಸಿಡಿಸಿ ಹೊಸ ದಾಖಲೆ ಬರೆದಿದ್ದರು.

    ಪುಣೆ ಬೌಲರ್ ಗಳ ಮೇಲೆ ಸವಾರಿ ಮಾಡಿದ್ದ ಗೇಲ್, ಚಿನ್ನಸ್ವಾಮಿ ಕ್ರೀಡಾಂಗಣದ ಮೂಲೆ ಮೂಲೆಗೆ ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 30 ಎಸೆತದಲ್ಲಿ ವೇಗದ ಸೆಂಚೂರಿ ಸಿಡಿಸಿದ್ದರು. ಜೊತೆಗೆ ಒಂದು ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 17 ಸಿಕ್ಸರ್ ಸಿಡಿಸಿದ ದಾಖಲೆಯನ್ನು ಮಾಡಿದ್ದರು ಹಾಗೂ 175 ರನ್ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ವೈಯಕ್ತಿಕ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೂ ಮುಂಚೆ ಬ್ರೆಂಡನ್ ಮೆಕಲಮ್ ಅವರು 158 ರನ್ ಸಿಡಿಸಿದ್ದು ವೈಯಕ್ತಿಕ ಅತೀ ಹೆಚ್ಚು ರನ್ ಆಗಿತ್ತು.

    ಅಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಪುಣೆ ತಂಡ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಅಹ್ವಾನ ಮಾಡಿತ್ತು. ಅಂತೆಯೇ ಕ್ರಿಸ್ ಗೇಲ್ ಮತ್ತು ದಿಲ್ಶನ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದರು. ಆದರೆ ಒಂದು ಓವರ್ ಮುಗಿದ ನಂತರ ಮಳೆ ಬಂದು ಪಂದ್ಯ ಅರ್ಧ ಗಂಟೆ ನಿಂತು ಹೋಗಿತ್ತು. ನಂತರ ಬ್ಯಾಟಿಂಗ್ ಇಳಿದ ಗೇಲ್ ಪುಣೆ ಬೌಲರ್ಸ್ ಗಳನ್ನು ಅಕ್ರಮಣಕಾರಿಯಾಗಿ ದಂಡಿಸಿದ್ದರು. ಗೇಲ್ ಅವರ 175 ರನ್, ದಿಲ್ಶನ್ ಅವರ 33 ರನ್ ಹಾಗೂ ಎಬಿಡಿ ವಿಲಿಯರ್ಸ್ ಸ್ಫೋಟಕ 8 ಬಾಲಿಗೆ 31 ರನ್‍ಗಳ ನೆರವಿನಿಂದ ಆರ್‍ಸಿಬಿ ಒಟ್ಟು 263 ರನ್ ಗಳಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳಿಸಿದ ತಂಡವಾಗಿ ದಾಖಲೆ ಬರೆದಿತ್ತು.

    ನಂತರ ಬ್ಯಾಟಿಂಗ್‍ಗೆ ಬಂದ ಪುಣೆ ವಾರಿಯರ್ಸ್ ತಂಡ ಬೆಂಗಳೂರು ತಂಡದ ಬಿಗು ಬೌಲಿಂಗ್ ದಾಳಿಗೆ ನಲುಗಿ ಹೋಗಿತ್ತು. ರವಿ ರಮ್‍ಪಾಲ್ ಮತ್ತು ಜೈದೇವ್ ಉನಾದ್ಕತ್ ಅವರ ಮಾರಕ ದಾಳಿಗೆ ತತ್ತರಿಸಿದ ಪುಣೆ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 133 ರನ್ ಗಳಿಸಿತ್ತು. ಈ ಮೂಲಕ ಬೆಂಗಳೂರು ತಂಡ 130 ರನ್‍ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಪುಣೆ ಪರ ಸ್ಟೀವ್ ಸ್ಮಿತ್ ಅವರು 42 ರನ್ ಹೊಡೆದಿದದ್ದರು.

    ಆಲ್‍ರೌಂಡರ್ ಆಟ ಪ್ರದರ್ಶಸಿದ್ದ ಗೇಲ್
    ಅಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರದಿದ್ದ ಜನರಿಗೆ ಗೇಲ್ ಉತ್ತಮ ಮನರಂಜನೆ ನೀಡಿದ್ದರು. ಬ್ಯಾಟಿಂಗ್ ನಲ್ಲಿ ಸಿಕ್ಸ್ ಮೇಲೆ ಸಿಕ್ಸ್ ಭಾರಿಸಿ ಅಭಿಮಾನಿಗಳು ಹುಚ್ಚೆಂದು ಕುಣಿಯುವಂತೆ ಮಾಡಿದ್ದ ಗೇಲ್, ನಂತರ ಬೌಲಿಂಗ್‍ನಲ್ಲೂ ಕಮಾಲ್ ಮಾಡಿದ್ದರು. ಪಂದ್ಯದ ಕೊನೆಯ ಓವರ್ ಅನ್ನು ಬೌಲ್ ಮಾಡಿದ್ದ ಗೇಲ್ 5 ರನ್ ನೀಡಿ ಎರಡು ವಿಕೆಟ್‍ಗಳನ್ನು ಪಡೆದಿದ್ದರು. ಆ ಓವರ್ ನಲ್ಲಿ ವಿಕೆಟ್ ಪಡೆದು ಗೇಲ್ ಸಂಭ್ರಮಿಸಿದ್ದ ರೀತಿ ಮತ್ತು ಆಂಪೈರ್ ಗೆ ಔಟ್ ಎಂದು ಮನವಿ ಮಾಡಿದ್ದ ಶೈಲಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು.

  • ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಬಿಜೆಪಿಯಿಂದ ದೇಶದ್ರೋಹಿ ಪಟ್ಟ: ರಮೇಶ್ ಕುಮಾರ್

    ಬ್ರಿಟಿಷರ ವಿರುದ್ಧ ಹೋರಾಡಿದವರಿಗೆ ಬಿಜೆಪಿಯಿಂದ ದೇಶದ್ರೋಹಿ ಪಟ್ಟ: ರಮೇಶ್ ಕುಮಾರ್

    ಕೋಲಾರ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರಿಗೆ ಬಿಜೆಪಿ ದೇಶದ್ರೋಹ ಪಟ್ಟ ಕಟ್ಟಿದೆ. ಅದು ಬಿಜೆಪಿಯ ನಂಬಿಕೆ ಮತ್ತು ಸಿದ್ದಾಂತ. ಅವರ ಕೈಯಲ್ಲಿ ಅಧಿಕಾರಿವಿದೆ ಹಾಗಾಗಿ ಅವರು ಇದೆಲ್ಲಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಆರ್. ರಮೇಶ್ ಕುಮಾರ್ ಆರೋಪಿಸಿದ್ದಾರೆ.

    ಕೋಲಾರದ ಶ್ರೀನಿವಾಸಪುರದ ಗೌನಿಪಲ್ಲಿಯಲ್ಲಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರು ಯಾರ ಪರ ಇದ್ದವರು, ಅಂತಹವರ ವಿರುದ್ಧ ಹೋರಾಟ ಮಾಡಿದವರಿಗೆ ದೇಶ ದ್ರೋಹದ ಪಟ್ಟಿ ಕಟ್ಟಿದವರು ಬಿಜೆಪಿಯವರು ಎಂದು ವಾಗ್ದಾಳಿ ಮಾಡಿದರು.

    ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಪ್ರಾಣ ಕಳೆದುಕೊಂಡವರು ಟಿಪ್ಪು ಸುಲ್ತಾನ್. ಬಿಜೆಪಿ ಅವರು ಇತಿಹಾಸ ತಿರುಚಲು ಹೊರಟಿದ್ದಾರೆ. ಅವರ ಕೈಯಲ್ಲಿ ಅಧಿಕಾರವಿದೆ ಅವರು ಮಾತನಾಡುತ್ತಾ ಇದ್ದರೆ. ವೈಯಕ್ತಿಕ ಆರೋಪಗಳು ಮಾಡುವುದು ಸರಿಯಲ್ಲ, ನಮಗೆ ಈ ವಿಚಾರವಾಗಿ ಸಹಮತ ಇಲ್ಲ. ಆದರೆ ಕೆಲವರು ಅವರೇನೇ ಮಾಡಿದರು ಸರಿ ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಬಿಜೆಪಿ ಸರ್ಕಾರ ನೂರು ದಿನ ಪೂರೈಸಿರುವುದು ಸಮಾಧಾನ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ಸಮಾಧಾನ ಅವರಿಗೂ ಇಲ್ಲ, ನಮಗೂ ಇಲ್ಲ. ಇದೇ ವೇಳೆ ಸಿಎಂ ಯಡಿಯೂರಪ್ಪ ಆಡಿಯೋ ವಿಚಾರವಾಗಿ ಮಾತನಾಡಲು ನಿರಾಕರಿಸಿದ ಅವರು, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಅವರ ಅಜೆಂಡಾ ಜಾತ್ಯತೀತವಾಗಿದ್ದು ಅದನ್ನು ಸ್ವಾಗತಿಸುತ್ತೇನೆ. ಪವನ್ ಕಲ್ಯಾಣ್ ಒಳ್ಳೆಯ ಆದರ್ಶಗಳನ್ನು ಹೊಂದಿರುವ ವ್ಯಕ್ತಿ, ವಯಸ್ಸಿನಲ್ಲಿ ದೊಡ್ಡವನಾದ ಕಾರಣ ಆಶೀರ್ವಾದ ಮಾಡಿದ್ದೇನೆ ಎಂದು ತಿಳಿಸಿದರು.

  • ಟಿಪ್ಪು, ಹೈದರಾಲಿ ಹೆಸರಿಲ್ಲದೇ ಮೈಸೂರು ಇತಿಹಾಸವೇ ಮುಗಿಯಲ್ಲ: ಸಿದ್ದರಾಮಯ್ಯ

    ಟಿಪ್ಪು, ಹೈದರಾಲಿ ಹೆಸರಿಲ್ಲದೇ ಮೈಸೂರು ಇತಿಹಾಸವೇ ಮುಗಿಯಲ್ಲ: ಸಿದ್ದರಾಮಯ್ಯ

    ಮಂಡ್ಯ: ಟಿಪ್ಪು, ಹೈದರಾಲಿ ಹೆಸರಿಲ್ಲದೇ ಮೈಸೂರು ಇತಿಹಾಸವೇ ಮುಗಿಯುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಇಂದು ಇಂದಿರಾಗಾಂಧಿ ಅವರ ಪುಣ್ಯ ತಿಥಿ ಅಂಗವಾಗಿ ಮಂಡ್ಯದ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕೆ ಅಂತ ಮಹಾನ್ ನಾಯಕನ ಅಧ್ಯಯ ಬಿಜೆಪಿ ತೆಗೆಯಲು ಹೊರಟಿದೆ. ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಮಾಡಿದರು. ಆಗ ಟಿಪ್ಪು ಮತಾಂಧ ಎಂದು ಅವರಿಗೆ ಗೊತ್ತಾಗ್ಲಿಲ್ವಾ. ಶೆಟ್ಟರ್, ಅಶೋಕ್ ಮತ್ತು ಪಿ.ಸಿ.ಮೋಹನ್ ಟಿಪ್ಪು ಜಯಂತಿ ಆಚರಣೆ ಮಾಡಿಲ್ಲವೇ ಎಂದು ಪ್ರಶ್ನಿಸಿದರು.

    ಈ ದೇಶದ ರಾಷ್ಟಪತಿ ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದಿದ್ದಾರೆ. ಬಿಜೆಪಿಗೆ ಅಧಿಕಾರ ಇಲ್ಲದಿದ್ದಾಗ ಟಿಪ್ಪು ಹೀರೋ. ಈಗ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಟಿಪ್ಪು ಸ್ವಾತಂತ್ರ್ಯ ಹೋರಾಟ ಮಾಡಿಲ್ವಾ? ಮಕ್ಕಳನ್ನು ಬ್ರಿಟಿಷರಿಗೆ ಅಡಮಾನ ಇಡಲಿಲ್ವಾ ಇವೆಲ್ಲಾ ಸುಳ್ಳೇ? ಅಂಗೈ ಉಣ್ಣಿಗೆ ಕನ್ನಡಿ ಏಕೆ ಇದಕ್ಕೆ ಕಮಿಟಿ ರಚನೆ ಏಕೆ ಬೇಕು ಎಂದು ಬಿಜೆಪಿ ನಾಯಕರ ಮೇಲೆ ಸಿದ್ದು ಅಸಮಾಧಾನ ಹೊರಹಾಕಿದರು.

    ನೆರೆ ಪರಿಹಾರ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಜಮಖಂಡಿ ಭಾಗದಲ್ಲಿ 24 ಹಳ್ಳಿಗಳು ಮುಳುಗಿವೆ. ಆ ಜನರನ್ನು ಕೇಳಿದಾಗ ಯಡಿಯೂರಪ್ಪ ಅವರು ಸುಳ್ಳು ಹೇಳ್ತಿದ್ದಾರೆ ಎಂದು ಆ ಜನರೇ ಹೇಳುತ್ತಿದ್ದಾರೆ. ಇವತ್ತಿಗೆ ನೆರೆ ಬಂದು ಮೂರು ತಿಂಗಳಾಗಿದೆ. ಯಡಿಯೂರಪ್ಪ ಒಬ್ಬರಿಗೆ ಬೆಳೆ ಪರಿಹಾರ ಕೊಟ್ಟಿದ್ದೀವಿ, ಅಂಗಡಿಗಳಿಗೆ ಪರಿಹಾರ ಕೊಟ್ಟಿದ್ದೀವಿ ಅಂತ ತೋರಿಸಲಿ ಎಂದು ಯಡಿಯೂರಪ್ಪನವರಿಗೆ ಸವಾಲ್ ಎಸೆದರು.

    ಕೆಪಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿ ಅವರ ಸ್ಮರಣೆ ಮಾಡಲು ಆಗಲಿಲ್ಲ. ಆದ್ದರಿಂದ ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಸ್ಮರಣೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಂದಿರಾ ಗಾಂಧಿ ಅವರು ದೇಶ ಕಂಡ ಮಹಾನ್ ನಾಯಕಿ ಅವರು ‘ಬಡವರ ಇಂದ್ರಮ್ಮ’. ಕ್ರಾಂತಿಕಾರಕ ನೀತಿಗಳನ್ನು ದೇಶದಲ್ಲಿ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದಿರಾ ಗಾಂಧಿ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದಿದೆ. ಅವರನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆ ಎಂದು ಕರೆಯುತ್ತಿದ್ದರು ಎಂದು ಹೇಳಿ ಇಂದಿರಾ ಗಾಂಧಿಯನ್ನು ಹಾಡಿಹೊಗಳಿದರು.