Tag: hindupur

  • ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ: ಹೆಂಡತಿ ಆಸ್ತಿಯೇ ಹೆಚ್ಚು

    ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ: ಹೆಂಡತಿ ಆಸ್ತಿಯೇ ಹೆಚ್ಚು

    ತೆಲುಗಿನ ಖ್ಯಾತ ನಟ ಬಾಲಯ್ಯ (Balayya) ನಿನ್ನೆ ನಾಮ ಪತ್ರ ಸಲ್ಲಿಸಿದ್ದಾರೆ.  ಟಿಡಿಪಿ ಅಭ್ಯರ್ಥಿಯಾಗಿ ಈ ಬಾರಿ ಅವರು ಸ್ಪರ್ಧಿಸಿದ್ದಾರೆ. ಕರ್ನಾಟಕದ ಗಡಿಯ ಹಿಂದೂಪುರ ವಿಧಾನಸಭಾ ಕ್ಷೇತ್ರದಲ್ಲಿ ಅವರು ಗೆಲುವನ್ನು ಅರಸಿ ಹೊರಟಿದ್ದಾರೆ.

    ಈಗಾಗಲೇ ಹಿಂದೂಪುರ (Hindupur) ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಬಾಲಯ್ಯ, ನಾಮಪತ್ರ ಸಲ್ಲಿಸಿದಾಗ ತಮ್ಮ ಆಸ್ತಿಯನ್ನೂ (Property) ಘೋಷಣೆ ಮಾಡಿದ್ದು, ತಮಗಿಂತಲೂ ಪತ್ನಿಯ ಆಸ್ತಿಯೇ ಹೆಚ್ಚಾಗಿರುವುದು ಕಂಡು ಬಂದಿದೆ. 9 ಕೋಟಿ ರೂಪಾಯಿ ಸಾಲವನ್ನು ತೋರಿಸಿದ್ದರೆ, 81 ಕೋಟಿ ರೂಪಾಯಿ ಆಸ್ತಿಯನ್ನು ಬಾಲಯ್ಯ ಹೊಂದಿದ್ದಾರೆ.

     

    ಬಾಲಯ್ಯ ಅವರ ಪತ್ನಿ ವಸುಂಧರಾ 140 ಕೋಟಿ ರೂಪಾಯಿಯ ಆಸ್ತಿ ಹೊಂದಿದ್ದು, ಬಾಲಯ್ಯ ಪುತ್ರ ಮೋಕ್ಷಜ್ಞ ಹೆಸರಿನಲ್ಲಿ 58 ಕೋಟಿ ರೂಪಾಯಿ ಆಸ್ತಿ ಇದೆ. ಒಟ್ಟಾರೆ ಬಾಲಯ್ಯ ಅವರ ಕುಟುಂಬದ ಆಸ್ತಿ 280.64 ಕೋಟಿ ರೂಪಾಯಿ ಘೋಷಣೆ ಆಗಿದೆ.

  • ಹಿಂದೂಪುರ ಕ್ಷೇತ್ರದ ಸಂಭವನೀಯ ಪಟ್ಟಿಯಲ್ಲಿ ಹೆಸರಿದೆ, ಟಿಕೆಟ್ ನೀಡುವ ವಿಶ್ವಾಸವಿದೆ: ಜೆ.ಶಾಂತಾ

    ಹಿಂದೂಪುರ ಕ್ಷೇತ್ರದ ಸಂಭವನೀಯ ಪಟ್ಟಿಯಲ್ಲಿ ಹೆಸರಿದೆ, ಟಿಕೆಟ್ ನೀಡುವ ವಿಶ್ವಾಸವಿದೆ: ಜೆ.ಶಾಂತಾ

    ಬಳ್ಳಾರಿ: ಬಿಜೆಪಿ (BJP) ಬಗ್ಗೆ ಮಾತನಾಡಲ್ಲ. ಇದೀಗ ನನ್ನ ಕುಟುಂಬ ವೈಎಸ್‌ಆರ್ (YSR) ಪಕ್ಷವಾಗಿದೆ. ಹಿಂದೂಪುರ (Hindupur) ಕ್ಷೇತ್ರದ ಸಂಭವನೀಯ ಪಟ್ಟಿಯಲ್ಲಿ ನನ್ನ ಹೆಸರಿದೆ. ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಶ್ರೀರಾಮುಲು ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ (J Shantha) ಹೇಳಿಕೆ ನೀಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ರಾಜಕೀಯ ಮಾಡಿದೆ. ಇದೀಗ ಆಂಧ್ರದ ಕಡೆ ರಾಜಕೀಯ ಮಾಡುತ್ತಿರುವೆ. ವೈಎಸ್‌ಆರ್ ಪಕ್ಷ ಸೇರುವ ಬಗ್ಗೆ ಶ್ರೀರಾಮುಲು ಜೊತೆಗೆ ಚರ್ಚೆ ಮಾಡಿಲ್ಲ. ಬಳ್ಳಾರಿ (Ballari) ತವರು ಮನೆ. ಆಂಧ್ರ ಗಂಡನ ಮನೆ. ತವರು ಮನೆ ರಾಜಕೀಯ ಮುಗೀತು. ಈಗ ಆಂಧ್ರದಲ್ಲಿ ರಾಜಕೀಯ ಮಾಡುತ್ತೇನೆ ಎಂದರು. ಇದನ್ನೂ ಓದಿ: 2030ರ ವೇಳೆಗೆ 5,000 ಕೋಟಿ ರೂ. ವಹಿವಾಟು ಗುರಿ – ಸಚಿವ ಎಂ.ಬಿ ಪಾಟೀಲ್‌

    ವೈಎಸ್‌ಆರ್ ಪಕ್ಷ ಮತ್ತು ಜಗನ್ ಕಾರ್ಯವೈಖರಿ ಮೆಚ್ಚಿ ವೈಎಸ್‌ಆರ್ ಪಕ್ಷ ಸೇರಿದ್ದೇನೆ. 2009 ಚುನಾವಣೆ ಗೆದ್ದು, 2018ರ ಉಪಚುನಾವಣೆಯಲ್ಲಿ ಸೋತೆ. ಆದರೆ 2019ರಲ್ಲಿ ಚುನಾವಣೆ ಟಿಕೆಟ್ ನೀಡಲಿಲ್ಲ. ಟಿಕೆಟ್ ಕೊಟ್ಟಾಗ ಕೆಲಸ ಮಾಡಿದೆ. ಇಲ್ಲದೇ ಇದ್ದಾಗ ಸುಮ್ಮನಾದೆ. ಆದರೆ 2019ರಲ್ಲಿ ನಾನು ಆಕಾಂಕ್ಷಿಯಾಗಿದ್ದೆ. ಹಿಂದೂಪುರ ಕ್ಷೇತ್ರದ ಸಂಭವನೀಯ ಪಟ್ಟಿಯಲ್ಲಿ ನನ್ನ ಹೆಸರಿದೆ. ಟಿಕೆಟ್ ನೀಡುವ ವಿಶ್ವಾಸವಿದೆ. ಜನಾರ್ದನ ರೆಡ್ಡಿ ಶ್ರೀರಾಮುಲು ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಲ್ಲ. ಅದು ಅವರ ವೈಯಕ್ತಿಕ. ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ಮಾಡಿದ ಕೆಲಸದಿಂದ ನನಗೆ ಆಂಧ್ರದಲ್ಲಿಯೂ ಯಶಸ್ಸು ಸಿಗಲಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ನಾಯಕತ್ವದಲ್ಲಿ ಕರ್ನಾಟಕ ಕಾಂಗ್ರೆಸ್‌ ಅಂತ್ಯವಾಗುತ್ತೆ: ಹೆಚ್‌ಡಿಡಿ ಭವಿಷ್ಯ

  • ಟೆಕ್ಕಿ ಪತಿ, ಬಾಮೈದರ ಕಿರುಕುಳ- ಮನನೊಂದ ಗರ್ಭಿಣಿ ಆತ್ಮಹತ್ಯೆಗೆ ಶರಣು

    ಟೆಕ್ಕಿ ಪತಿ, ಬಾಮೈದರ ಕಿರುಕುಳ- ಮನನೊಂದ ಗರ್ಭಿಣಿ ಆತ್ಮಹತ್ಯೆಗೆ ಶರಣು

    – ಎಂಬಿಬಿಎಸ್ ಓದುತ್ತಿದ್ದ ಪತ್ನಿ
    _ ಮದ್ವೆಯಾದ ಕೆಲವೇ ದಿನಗಳಲ್ಲಿ ಮನಸ್ತಾಪ

    ಹೈದರಾಬಾದ್: ಗಂಡ ಮತ್ತು ಆತನ ತಮ್ಮಂದಿರ ಕಿರುಕುಳಕ್ಕೊಳಗಾದ ಗರ್ಭಿಣಿ ಮದುವೆಯಾದ ಒಂದು ವರ್ಷದೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಅರ್ಷಿಯಾ ಎಂದು ಗುರುತಿಸಲಾಗಿದೆ. ಅನಂತಪುರ ಜಿಲ್ಲೆಯ ಹಿಂದೂಪುರ ಪಟ್ಟಣದ ಪತಿಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಮತ್ತು ಮೈದುನರಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮಡಕಾಸಿರಾ ಪಟ್ಟಣದ ಮೂಲದ ಅರ್ಷಿಯಾ ಎಂಬಿಬಿಎಸ್ ಓದುತ್ತಿದ್ದಳು. ಈಕೆ ಕೋರ್ಸ್ ಮುಗಿಸಲು ಇನ್ನೂ ಎರಡು ವರ್ಷಗಳು ಬಾಕಿ ಇರುವಾಗಲೇ ಪೋಷಕರು ವರನನ್ನು ಹುಡುಕಿದರು. 2019 ರ ನವೆಂಬರ್‍ನಲ್ಲಿ ಹಿಂದೂಪುರದ ಆರ್‍ಟಿಸಿ ಕಾಲೋನಿಯ ಸಾಫ್ಟ್‍ವೇರ್ ಉದ್ಯೋಗಿ ನೂರುಲ್ಲಾಗೆ ಮದುವೆ ಮಾಡಿಕೊಟ್ಟರು.

    ಅರ್ಷಿಯಾ ಕುಟುಂಬದವರು ಉತ್ತಮ ವರನೆಂದು ನಂಬಿ ಮಗಳನ್ನು ಮದುವೆ ಮಾಡಿ ಕಳುಹಿಸಿದರು. ಮಗಳು ಸಂತೋಷವಾಗಿರಲಿ ಎಂದು ಮದುವೆಯ ಸಮಯದಲ್ಲಿ 5 ಲಕ್ಷ ರೂ. ವರದಕ್ಷಿಣೆ ಮತ್ತು ಅರ್ಧ ಕಿಲೋ ಚಿನ್ನಾಭರಣಗಳನ್ನು ಸಹ ನೀಡಿದರು. ಆದರೆ ಮದುವೆಯಾದ ಒಂದು ತಿಂಗಳಲ್ಲಿ ಅವಳ ಪತಿ ಮತ್ತು ಅವನ ತಮ್ಮಂದಿರು ಸಣ್ಣ ವಿಷಯಗಳನ್ನು ಇಟ್ಟುಕೊಂಡು ಕಿರುಕುಳ ಮತ್ತು ಅನುಮಾನಿಸಲು ಪ್ರಾರಂಭಿಸಿದರು.

    ದಂಪತಿ ನಡುವೆ ಮನಸ್ತಾಪ:
    ಅರ್ಷಿಯಾ ಗರ್ಭಿಣಿಯಾದ ಮೇಲೆ ನೂರುಲ್ಲಾನ ಮತ್ತಷ್ಟು ಅನುಮಾನಿಸಲು ಪ್ರಾರಂಭಿಸಿದರು. ತವರು ಮನೆಯಿಂದ ವರದಕ್ಷಿಣೆ ಮತ್ತು ಕಾರನ್ನು ತರುವಂತೆ ಕಿರುಕುಳ ನೀಡಲು ಪ್ರಾರಂಭಿಸಿದನು. ನೂರುಲ್ಲಾ ನನ್ನ ಹೆಸರಿನಲ್ಲೇ ಆಸ್ತಿಗಳನ್ನು ಬರೆಯುಬೇಕು ಎಂದು ಅರ್ಷಿಯಾಗಳನ್ನು ಪೀಡಿಸುತ್ತಿದ್ದನು. ಹೀಗೆ ದಂಪತಿ ನಡುವೆ ಮನಸ್ತಾಪ ಇತ್ತು.

    ಅರ್ಷಿಯಾಗೆ ಜನ್ಮದಿನದಂದು ಶುಭಾಶಯ ಕೋರಲು ಈಕೆ ಪೋಷಕರು ಫೋನ್ ಕರೆಯನ್ನು ಮಾಡಿದ್ದರು. ಆದರೆ ಈಕೆ ಅವರೊಂದಿಗೆ ಸರಿಯಾಗಿ ಮಾತನಾಡಲಿಲ್ಲ ಮತ್ತು ನಂತರ ಕರೆ ಮಾಡುವುದಾಗಿ ಹೇಳಿದ್ದಳು. ಆದರೆ ಅರ್ಷಿಯಾ ಮತ್ತೆ ಮರಳಿ ಕರೆಯನ್ನು ಮಾಡಲೇ ಇಲ್ಲಾ.

    ಸಾವಿನ ಬಗ್ಗೆ ತಿಳಿದುದ್ದು ಹೇಗೆ:
    ಅರ್ಷಿಯಾ ಎಚ್ಚರಗೊಳ್ಳುತ್ತಿಲ್ಲ ಎಂದು ಹಿಂದೂಪುರದ ನಿಂಕಂಪಲ್ಲಿನಲ್ಲಿರುವ ಸಂಬಂಧಿಕರು ಆಕೆಯ ಪೋಷಕರಿಗೆ ತಿಳಿಸಿದರು. ಅನುಮಾನದಿಂದ ಈಕೆಯಪೋಷಕರು ಮತ್ತು ಸಹೋದರರು ಹಿಂದೂಪುರದಲ್ಲಿರುವ ಮಗಳ ಪತಿಯ ನಿವಾಸಕ್ಕೆ ಬಂದು ನೋಡಿದಾಗ ಅರ್ಷಿಯಾ ಹಾಸಿಗೆಯ ಮೇಲೆ ನಿರ್ಜೀವವಾಗಿ ಮಲಗಿದ್ದಳು. ಮಗಳ ಈ ಸ್ಥಿತಿಯನ್ನು ಕಂಡು ಪೋಷಕರು ಆಘಾತಗೊಂಡಿದ್ದಾರೆ.

    ಯುವತಿಯ ಕುಟುಂಬಸ್ಥರು ಏನಾಯಿತು ಎಂದು ನೂರುಲ್ಲಾನನ್ನು ಕೇಳಿದ್ದಾರೆ. ಆದರೆ ಈತ ಬೇಜವಾಬ್ದಾರಿತನದಿಂದ ನೇಣು ಹಾಕಿಕೊಂಡಿದ್ದಾಳೆ ಎಂದು ಹಾರಿಕೆಯ ಉತ್ತರವನ್ನು ಕೊಟ್ಟಿದ್ದಾನೆ. ಅವನ ಉತ್ತರಕ್ಕೆ ಅರ್ಷಿಯಾ ಕುಟುಂಬಸ್ಥರು ಕೋಪಗೊಂಡಿದ್ದಾರೆ. ಎರಡು ಕುಟುಂಬದ ಸದಸ್ಯರ ನಡುವೆ ಸಣ್ಣಪುಟ್ಟ ಜಗಳಗಳು ಆಗಿವೆ.

    ಮಾಹಿತಿ ಪಡೆದ ಕೂಡಲೇ ಒನ್ ಟೌನ್ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಮನೆಗೆ ಬೀಗ ಹಾಕಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಿಂದೂಪುರ ಆಸ್ಪತ್ರೆಗೆ ಕಳುಹಿಸಿದ್ದಾರೆ. ಡಿಎಸ್ಪಿ ವಂಶೀಧರ್ ಗೌಡ, ತಹಶೀಲ್ದಾರ್ ಶ್ರೀನಿವಾಸ್ ಮತ್ತು ಸಿಐ ಬಾಲಮದ್ದಿಲ್ಲೆತಿ ಅವರು ಮನೆ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

    ಮದುವೆಯಾದ ಕೆಲವು ದಿನಗಳ ನಂತರ ವರದಕ್ಷಿಣೆಗಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ನ್ಯಾಯ ಕೋಡಿಸಿ ಎಂದು ಅರ್ಷಿಯಾ ತಾಯಿ ಅಖ್ತಾರ್ ಜಾನ್ ಮತ್ತು ಸಹೋದರ ಇಮ್ರಾನ್ ಪೊಲೀಸರಿಗೆ ತಿಳಿಸಿದ್ದಾರೆ.